Headlines

ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ! – Kannada News | Indian Woman offered job in Portugal Sold To Beer Shop Owner how she is escaped

ನವದೆಹಲಿ, ಆಗಸ್ಟ್ 8: ಕೆಲವೊಮ್ಮೆ ಹಣದ ಬಗ್ಗೆ ನಮಗಿರುವ ಅತಿಯಾದ ವ್ಯಾಮೋಹ, ದುರಾಸೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಹೆಚ್ಚಿನ ಸಂಬಳ ಸಿಗುತ್ತದೆ, ಇನ್ನೂ ಚೆನ್ನಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆ, ಕನಸುಗಳಿಂದ ಪೋರ್ಚುಗಲ್​ಗೆ ಹೋಗಿದ್ದ ಭಾರತೀಯ ಯುವತಿಗೆ ದೊಡ್ಡ ಆಘಾತ ಕಾದಿತ್ತು. ಪೋರ್ಚುಗಲ್​ಗೆ ಹೋಗುತ್ತಿದ್ದಂತೆ ಆಕೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಏಜೆನ್ಸಿ ಆಕೆಯನ್ನು ಅಲ್ಲಿನ ಬಿಯರ್ ಶಾಪ್ ಮಾಲೀಕರಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲದೆ, ವೀಸಾ ಮತ್ತು ಇತರೆ ದಾಖಲೆಗಳ ಕೆಲಸದ ಹೆಸರಿನಲ್ಲಿ ವಂಚಕರು ಆ ಯುವತಿಯಿಂದ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಹಣ ಕಿತ್ತುಕೊಂಡಿದೆ.

ಹೊಸ ಉದ್ಯೋಗಕ್ಕೆ ಸೇರುವ ಆಸೆಯಲ್ಲಿ ಆ ಯುವತಿ ಪೋರ್ಚುಗಲ್‌ಗೆ ತಲುಪಿದ ತಕ್ಷಣ, ಅಲ್ಲಿದ್ದ ಏಜೆಂಟ್‌ಗಳು ಆಕೆಯ ಪಾಸ್‌ಪೋರ್ಟ್‌ ಅನ್ನು ಕಸಿದುಕೊಂಡು, ಕೊಠಡಿಯೊಂದರಲ್ಲಿ 2 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು. ನಂತರ ಆಕೆಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಲಾಗಿದ್ದು, ಅಲ್ಲಿ ಆಕೆಯಿಂದ ಬಲವಂತವಾಗಿ ಕೆಲಸ ಮಾಡಿಸಿಕೊಂಡು, ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. ಆ ಯುವತಿ ತನ್ನ ಪಾಸ್‌ಪೋರ್ಟ್‌ ಅನ್ನು ಹಿಂತಿರುಗಿಸುವಂತೆ ವಂಚಕರನ್ನು ಕೇಳಿದಾಗ, ಅವರು ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ

ಯುವತಿ ಬಚಾವಾಗಿದ್ದು ಹೇಗೆ?:

ಬಿಯರ್ ಶಾಪ್ ಮಾಲೀಕರ ಬಳಿ ಸುಮಾರು 1 ತಿಂಗಳ ಕಾಲ ತೀವ್ರ ಕಿರುಕುಳ ಅನುಭವಿಸಿದ ನಂತರ, ಆ ಯುವತಿ ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿದ್ದಾರೆ. ಮೊದಲು ಬಸ್ ಮೂಲಕ ಲಿಸ್ಬನ್‌ಗೆ ಓಡಿಹೋದ ಆಕೆ, ನಂತರ ಮ್ಯಾಡ್ರಿಡ್‌ಗೆ ತಲುಪಿದ್ದಾರೆ. ಅಲ್ಲಿಂದ ದೋಹಾ ಮಾರ್ಗವಾಗಿ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅದೇ ವಂಚಕರು ಮತ್ತೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆ ಯುವತಿ ಹಣ ನೀಡಲು ನಿರಾಕರಿಸಿದಾಗ, ಆಕೆಯ ಗಂಡನನ್ನು ಕೊಲೆ ಮಾಡುವುದಾಗಿ ಮತ್ತು ಆಕೆಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಇದರಿಂದ ರೋಸಿಹೋದ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಆರೋಪದಡಿ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ನಾಗಪುರದ ಕಾಲೇಜೊಂದರಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದ್ದು, ಆಯುರ್ವೇದ ಔಷಧ ಮಾರಾಟ ಮಾಡುವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಉತ್ತಮ ಭವಿಷ್ಯ ಮತ್ತು ವಿದೇಶದಲ್ಲಿ ಉದ್ಯೋಗದ ಆಸೆಯಲ್ಲಿದ್ದ ಯುವತಿಗೆ ಪುಣೆ ಮೂಲದ ಜಾಬ್ ಏಜೆನ್ಸಿ ಈ ರೀತಿ ವಂಚನೆ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *