ನವದೆಹಲಿ, (ಜುಲೈ 29): ಡಿಕೆ ಶಿವಕುಮಾರ್ ಸರ್ಕಾರದ ಮಹತ್ವಾಕಾಂಕ್ಷೆಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದೆ. ದೆಹಲಿಯಲ್ಲಿ ರಾಜ್ಯ ನಾಯಕರಾದ ಸಿಎಂ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಇಂದು (ಜುಲೈ 29) ಸಭೆಗೆ ಹೈಕಮಾಂಡ್ ಸಿದ್ಧ ಆಗಿತ್ತು. ಆದ್ರೆ ಲೋಕಸಭೆ ಕಾರ್ಯಕಲಾಪ ಹಿನ್ನಲೆ ರಾಹುಲ್ ಜೊತೆಗಿನ ಇಂದಿನ ಸಭೆ ರದ್ದಾಗಿದ್ದು, ನಾಳೆಗೆ (ಜುಲೈ 30) ಮುಂದೂಡಿಕೆ ಆಗಿದೆ. ಆದ್ರೆ, ನಾಳಿನ ಸಭೆಯ ಸಮಯ ಇನ್ನೂ ನಿಗದಿ ಆಗಿಲ್ಲ.ಈ ಸಭೆಯಲ್ಲಿ ಸಂಪುಟ ಸೇರ್ಪಡೆಯಾಗೋ ಶಾಸಕರ ಬಗ್ಗೆ ವಿವರವಾಗಿ ಚರ್ಚೆ ನಡೆಯಲಿದೆ.