
ನಟ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕ ಸೋಲು ಹಾಗೂ ಗೆಲುವನ್ನು ಕಂಡಿದ್ದಾರೆ. ಅವರು ಸೋಲಿನ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಸೋತಾಗ ಯಾರಿಗೂ ಬೇಸರ ಆಗೋದಿಲ್ಲ. ಸೋಲು ಕಂಡಾಗ ಸುತ್ತಲೂ ಇರುವ ಜನರು ಆಡುವ ಮಾತು ಬೇಸರ ಮೂಡಿಸುತ್ತದೆ. ಆ ರೀತಿ ಆಗಬಾರದು’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಹೆಸರಿನ ಸಿನಿಮಾ ಮಾಡಿದ್ದಾರೆ. ಎಐ ನಿರ್ಮಿತ ಸಿನಿಮಾ ಇದಾಗಿದೆ. ಇದರಲ್ಲಿ 30-35 ಹಾಡುಗಳು ಇರಲಿವೆ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.