Headlines

16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ; ರಾಜ್ಯಕ್ಕೆ 63,050 ಕೋಟಿ ರೂ. ತೆರಿಗೆ ಪಾಲು – Kannada News | Karnataka is biggest gaine in tax devolution share under 16th Finance Commission formula

ನವದೆಹಲಿ, ಫೆಬ್ರವರಿ 1: ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕ (Karnataka) ರಾಜ್ಯಕ್ಕೆ 63,050 ಕೋಟಿ ರೂ. ತೆರಿಗೆ ಪಾಲು ಘೋಷಿಸಿದೆ. ಈ ಮೂಲಕ ತೆರಿಗೆ ಪಾಲಿನಲ್ಲಿ ಈ ವರ್ಷ ಅತಿದೊಡ್ಡ ಫಲಾನುಭವಿಯಾಗಿ ಕರ್ನಾಟಕ ಹೊರಹೊಮ್ಮಿದೆ. ಮಧ್ಯಪ್ರದೇಶವು ಅತಿ ಕಡಿಮೆ ತೆರಿಗೆ ಪಾಲನ್ನು ಹೊಂದುವ ಸಾಧ್ಯತೆಯಿದೆ. ಏಕೆಂದರೆ, ಈ ಸಮಿತಿಯು ಈಕ್ವಿಟಿ ಜೊತೆಗೆ ಆರ್ಥಿಕ ದಕ್ಷತೆಯ ಮೇಲೆ ತನ್ನ ಗಮನವನ್ನು ನೆಟ್ಟಿದೆ.

ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026-27ನೇ ಸಾಲಿನಲ್ಲಿ 63,050 ಕೋಟಿ ರೂ. ತೆರಿಗೆ ಪಾಲು ದೊರೆಯಲಿದೆ.

ಹೊಸ ಸೂತ್ರದಡಿ ಕೇಂದ್ರ ಸರ್ಕಾರದ ತೆರಿಗೆ ವಿಕೇಂದ್ರೀಕರಣದಲ್ಲಿ ಕರ್ನಾಟಕದ ಪಾಲನ್ನು 2026ರಲ್ಲಿ ಶೇ. 4.13ಕ್ಕೆ ಹೆಚ್ಚಿಸಲಾಗಿದೆ. ಇದು 15ನೇ ಹಣಕಾಸು ಆಯೋಗದ ಅಡಿಯಲ್ಲಿ ಶೇ. 3.65 ರಷ್ಟಿತ್ತು. ಕಳೆದ ಬಾರಿಗಿಂತ ಈ ಬಾರಿ 7,387 ಕೋಟಿ ರೂ. ಹೆಚ್ಚುವರಿಯಾಗಿ ಸಿಕ್ಕಿದೆ. ಈ ಮೂಲಕ ಕರ್ನಾಟಕದ ತೆರಿಗೆ ಹಂಚಿಕೆಯನ್ನು 63,050 ಕೋಟಿ ರೂ.ಗೆ ಏರಿದೆ.

ಇದನ್ನೂ ಓದಿ: ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ

ಕರ್ನಾಟಕದ ಬಳಿಕ ತೆರಿಗೆ ಹಂಚಿಕೆಯಲ್ಲಿ ಕೇರಳ ಎರಡನೇ ಅತಿ ಹೆಚ್ಚು ಲಾಭ ಗಳಿಸುತ್ತಿರುವ ರಾಜ್ಯವಾಗಿದೆ. ಇದರ ಹಂಚಿಕೆ 6,975 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಗುಜರಾತ್ (4,228 ಕೋಟಿ ರೂ.ಗಳು) ಮತ್ತು ಹರಿಯಾಣ (4,090 ಕೋಟಿ ರೂ.ಗಳು) ಸಹ ಲಾಭವನ್ನು ಕಂಡಿವೆ. ಇದು ಅವರ ಹೆಚ್ಚಿನ ತಲಾ ಆದಾಯ ಮತ್ತು GDP ಗೆ ಬಲವಾದ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ಅತಿದೊಡ್ಡ ರಾಜ್ಯ ಆರ್ಥಿಕತೆಯಾದ ಮಹಾರಾಷ್ಟ್ರವು ಹೆಚ್ಚುವರಿಯಾಗಿ 1,893 ಕೋಟಿ ರೂ. ಗಳಿಸುತ್ತಿದೆ.

ಆದರೆ, ಮಧ್ಯಪ್ರದೇಶವು ಅತಿದೊಡ್ಡ ನಷ್ಟವನ್ನು ಅನುಭವಿಸುತ್ತಿದೆ. ಇದರ ಹಂಚಿಕೆ 7,677 ಕೋಟಿ ರೂ.ಗಳಷ್ಟು ಕುಸಿದು 1.12 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ. ಉತ್ತರ ಪ್ರದೇಶವು 4,884 ಕೋಟಿ ರೂ.ಗಳನ್ನು ಕಳೆದುಕೊಂಡರೆ, ಪಶ್ಚಿಮ ಬಂಗಾಳವು 4,701 ಕೋಟಿ ರೂ.ಗಳನ್ನು ಕಡಿತಗೊಳಿಸಿದೆ.

ಇದನ್ನೂ ಓದಿ: Budget 2026 Announcements LIVE: ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ, ತೆರಿಗೆ ವಿಳಂಬಕ್ಕೆ ದಂಡ ಮಾತ್ರ, ಶಿಕ್ಷೆ ಇಲ್ಲ

ಇದರ ಜೊತೆಗೆ ಈ ಬಾರಿಯ ಬಜೆಟ್​​ನಲ್ಲಿ ಕರ್ನಾಟಕಕ್ಕೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಸ್ಮಾರ್ಟ್ ನಗರಗಳು, ತಂತ್ರಜ್ಞಾನ ನೇತೃತ್ವದ ಬೆಳವಣಿಗೆ ಮತ್ತು ಸುಸ್ಥಿರ ಕರಾವಳಿ ಅಭಿವೃದ್ಧಿಯ ಮೂಲಕ ಕರ್ನಾಟಕ ರಾಜ್ಯವನ್ನು ಭಾರತದ ಭವಿಷ್ಯಕ್ಕೆ ಸಂಪರ್ಕಿಸಿದೆ. ಬಜೆಟ್‌ನಲ್ಲಿ ಘೋಷಿಸಲಾದ 3 ಹೈಸ್ಪೀಡ್ ರೈಲು ಕಾರಿಡಾರ್‌ಗಳು ಕರ್ನಾಟಕದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಅದರಲ್ಲಿ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮತ್ತು ಕಲಬುರಗಿ ಮೂಲಕ ಹೈದರಾಬಾದ್-ಪುಣೆಗೆ ರೈಲು ಪ್ರಯಾಣಿಸುತ್ತದೆ. ಅವು ಬೆಂಗಳೂರನ್ನು ಭಾರತದ ಅತಿದೊಡ್ಡ ತಂತ್ರಜ್ಞಾನ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳಿಗೆ ಸಂಪರ್ಕಿಸುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *