Video: ಬೆಂಗಳೂರಿನ ಜನ್ರು ತುಂಬಾ ಒಳ್ಳೆಯವ್ರು; ಪ್ರಾಮಾಣಿಕ ಅನುಭವ ಹಂಚಿಕೊಂಡ ಮಹಿಳೆ

Video: ಬೆಂಗಳೂರಿನ ಜನ್ರು ತುಂಬಾ ಒಳ್ಳೆಯವ್ರು; ಪ್ರಾಮಾಣಿಕ ಅನುಭವ ಹಂಚಿಕೊಂಡ ಮಹಿಳೆ

ಬೆಂಗಳೂರು, ಮಾರ್ಚ್ 09 : ಬೆಂಗಳೂರು (Bengaluru) ಅಂದ್ರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ಬರುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷ ಕಳೆದ ಬಳಿಕ ತನ್ನ ಪ್ರಯಾಣ ಹಾಗೂ ತನ್ನ ಪ್ರಾಮಾಣಿಕ ಅನುಭವದ ಬಗ್ಗೆ ಮಾತನಾಡಿದ್ದು, ಬೆಂಗಳೂರಿನ ಜನರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

atyacreates ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿನಮ್ಮ ಬೆಂಗಳೂರಿನಲ್ಲಿ ಒಂದು ವರ್ಷ ಕಳೆದಿದ್ದೇನೆ. ಈ ನಗರವು ಒಂದು ದೊಡ್ಡ ವ್ಯಕ್ತಿತ್ವವನ್ನು ಹೊಂದಿದೆ, ಅದನ್ನು ಒಂದೇ ರೀಲ್‌ನಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲು ಸಾಧ್ಯವಿಲ್ಲ. ಈ ನಗರವು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಒಳ್ಳೆಯ ಅಧ್ಯಾಯಗಳು ತೆರೆದುಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ ಮತ್ತು ನಾನು ಇಲ್ಲಿಗೆ ಸೇರಿದವಳು ಎಂದು ನನಗೆ ಅನಿಸುವಂತೆ ಮಾಡಿದ್ದಕ್ಕಾಗಿ ಬೆಂಗಳೂರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

 

View this post on Instagram

 

A post shared by Atya k (@atyakreates)

ಈ ವಿಡಿಯೋದಲ್ಲಿ ಮಹಿಳೆಯೂ, ನಾನು ಈ ತಿಂಗಳು ಬೆಂಗಳೂರಿನಲ್ಲಿ ನನ್ನ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಇಲ್ಲಿನ ಹವಾಮಾನ, ಹೂವುಗಳು ಮತ್ತು ಚಹಾದ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರಿನಲ್ಲಿ ಅದಕ್ಕಿಂತ ಹೆಚ್ಚಿನವುಗಳಿವೆ. ನಾನು ಕನ್ನಡದ ಒಂದೇ ಒಂದು ಪದವನ್ನು ಕಲಿಯದೇ ಇಲ್ಲಿಗೆ ಸ್ಥಳಾಂತರಗೊಂಡಿದ್ದೇನೆ. ನಾನು ಇಲ್ಲಿ ಚೆನ್ನಾಗಿದ್ದೇನೆ. ಬೆಂಗಳೂರಿನ ನಿವಾಸಿಗಳು ಮೊದಲಿಗೆ ಹೆಚ್ಚು ಸ್ನೇಹಪರರಾಗಿ ಕಾಣಿಸದಿದ್ದರೂ, ಅವರು ವೈಯಕ್ತಿಕ ಗಡಿಗಳನ್ನು ಗೌರವಿಸುತ್ತಾರೆ. ಯಾವುದೇ ಸಮಸ್ಯೆ ಮಾಡದ ಜನರು, ಇಲ್ಲಿನವರಲ್ಲಿ ಯಾವುದೇ ನಾಟಕವಿಲ್ಲ ಮತ್ತು ವಾಸ್ತವವಾಗಿ ಇಲ್ಲಿ ತುಂಬಾ ಕಡಿಮೆ ಒತ್ತಡವಿದೆ ಎಂದು ಹೇಳಿದ್ದಾರೆ.

ಇಲ್ಲಿನ ಜನರು ಹೆಚ್ಚಾಗಿ ಆರೋಗ್ಯದ ಬಗ್ಗೆ ಪ್ರಜ್ಞೆ ಹೊಂದಿರುತ್ತಾರೆ. ಮಹತ್ವಾಕಾಂಕ್ಷೆ ಮತ್ತು ಸ್ವಯಂ ಅಭಿವ್ಯಕ್ತಿ ಇರುವ ಏಕೈಕ ನಗರ ಇದಾಗಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲದಕ್ಕೂ ಒಂದು ಸಮುದಾಯವಿದೆ. ನೀವು ಒಮ್ಮೆ ಇಲ್ಲಿ ಕಾಣಿಸಿಕೊಂಡರೆ ನೀವು ನೂರು ಹವ್ಯಾಸಗಳು ಮತ್ತು ಉತ್ಸಾಹಗಳನ್ನು ಹೊಂದಿರುವ ವ್ಯಕ್ತಿಯಾಗುತ್ತೀರಿ. ಮಸಾಲಾ ದೋಸೆಯಿಂದ ಪೂರಿ ಇಡ್ಲಿಯವರೆಗೆ, ಬೀದಿ ಆಹಾರವು ಆರೋಗ್ಯಕರ ಹಾಗೂ ಅಗ್ಗವಾಗಿದೆ. ಇಲ್ಲಿ ಅತ್ಯುತ್ತಮವಾದ ತುಪ್ಪದಲ್ಲಿ ಬೇಯಿಸಿದ ಆಹಾರವನ್ನು ಪಡೆಯುತ್ತೀರಿ ಎಂದು ಹೇಳಿರುವುದನ್ನು ಕಾಣಬಹುದು.

ಇಲ್ಲಿ ಯಾರೂ ನಿಮ್ಮನ್ನು ನಿರ್ಣಯಿಸುವುದಿಲ್ಲ ಅಥವಾ ವಿಚಿತ್ರವಾದ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದಿಲ್ಲ. ನೀವು ಅಭಿಪ್ರಾಯಗಳಿಗೆ ಹೆದರದಿದ್ದಾಗ, ನೀವು ನಿಮ್ಮ ನಿಜವಾದ ಸ್ವಭಾವವನ್ನು ಹೊರಹಾಕುತ್ತೀರಿ. ನೀವು ಮುಕ್ತವಾಗಿ ಮಾತನಾಡುತ್ತೀರಿ. ಹೀಗಿದ್ದಾಗ ನಿಮ್ಮನ್ನು ನೀವು  ಮುಕ್ತವಾಗಿ ಕಂಡುಕೊಳ್ಳಲು ಸಾಧ್ಯ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ನೆಲೆಸುವ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕೆನಡಿಯನ್ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದನ್ನು ತುಂಬಾ ಸುಂದರವಾಗಿ ಸಂಕ್ಷೇಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನನಗೆ ನನ್ನ ಸ್ವಂತ ನಗರ ಪುಣೆಗಿಂತ ಇದು ಹೆಚ್ಚು ಇಷ್ಟ. ಎಷ್ಟರ ಮಟ್ಟಿಗೆ ಎಂದರೆ ಕೆಲಸ ಬದಲಾಯಿಸಿದ ನಂತರವೂ ನಾನು ಈ ನಗರವನ್ನು ಬಿಡಲಿಲ್ಲ. ನಾನು ಎರಡು ನಗರಗಳ ನಡುವೆ ಬದಲಾಯಿಸುತ್ತೇನೆ. ಬೆಂಗಳೂರು ತುಂಬಾ ಇಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *