Headlines

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO: ಎಗ್ಗಿಲ್ಲದೆ ಬಸ್​​ಗಳಲ್ಲಿ ಗೂಡ್ಸ್ ಸಾಗಾಟ – Kannada News | Chitradruga Bus Incident: private buses continued Transports goods material to various places From Bengaluru

ಬೆಂಗಳೂರು, (ಡಿಸೆಂಬರ್ 27): ಚಿತ್ರದುರ್ಗದ ಗೊರ್ಲುತ್ತು ಕ್ರಾಸ್ ಬಳಿ ಸೀ ಬರ್ಡ್ ಬಸ್ ದುರಂತ ಪ್ರಕರಣ (Chitradruga Bus Incident) ಪ್ರಯಾಣಿಕರನ್ನೇ ಬೆಚ್ಚಿ ಬೀಳಿಸಿದೆ. ಆದ್ರೆ ಇಷ್ಟೆಲ್ಲ ಅವಾಂತರವಾದ್ರೂ ಇನ್ನೂ ಕೂಡ ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಬೆಂಗಳೂರಿನಿಂದ ಬೇರೆ ಬೇರೆ ಸ್ಥಳಗಳಿಗೆ ಹೋಗುವಂತಹ ಖಾಸಗಿ ಬಸ್ ಗಳಲ್ಲಿ (private buses) ಪರ್ಮಿಷನ್ ಇಲ್ಲದೆ ಗೂಡ್ಸ್ ಮೆಟಿರಿಯಲ್ ಸಾಗಾಟ ಮಾಡಲಾಗ್ತಿದೆ. ಬಸ್ ಗಳ ಟಾಪ್ ಹಾಗೂ ಲಗೇಜ್ ಬಾಕ್ಸ್ ಗಳಲ್ಲಿ ಎಲ್ಲಿ ನೋಡಿದ್ರೂ ಕೂಡ ಗೂಡ್ಸ್ ಮೆಟಿರಿಯಲ್ ತುಂಬಿಕೊಂಡು ಹೋಗ್ತಾರೆ, ಪ್ರಯಾಣಿಕರ ಲಗೇಜ್ ಇಡೋದಕ್ಕೂ ಜಾಗ ಇಲ್ಲದಂತದ ಪರಿಸ್ಥಿತಿ ಎದುರಾಗಿದೆ ಅಂತ ಪ್ರಯಾಣಿಕರು ಆರೋಪ ಮಾಡ್ತಿದ್ದಾರೆ. ರಾಜಾರೋಷವಾಗಿ ಎಷ್ಟೇ ಗೂಡ್ಸ್ ಮೆಟಿರಿಯಲ್ ತುಂಬಿದ್ರೂ ಆರ್ ಟಿ ಓ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೇರ್ ಲೆಸ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *