ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್​​ಗೆ ‘ಧುರಂಧರ್’ ಸರಣಿ ದೊಡ್ಡ ಗೆಲುವು ನೀಡಿದೆ, ಮಾತ್ರವಲ್ಲದೆ ತಾವೊಬ್ಬ ಸ್ಟಾರ್ ನಟ ಎಂಬುದನ್ನು ರಣ್ವೀರ್ ಮತ್ತೆ ಬಾಲಿವುಡ್​​ಗೆ ಸಾರಿ ಹೇಳಿದ್ದಾರೆ. ಸಿನಿಮಾನಲ್ಲಿ ರಣ್ವೀರ್ ನಟನೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ‘ಧುರಂಧರ್ 2’ ಕ್ಲೈಮ್ಯಾಕ್ಸ್ ವೇಳೆ ಸಾಕಷ್ಟು ದೈಹಿಕ ನೋವು ಅನುಭವಿಸಿ ನಟಿಸಿದ ರೀತಿಯ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದು ರಣ್ವೀರ್ ಸಿಂಗ್​​ಗೆ ಹೊಸದೇನೂ ಅಲ್ಲ. ನಟನೆ ಆರಂಭಿಸಿದಾಗಿನಿಂದಲೂ ಆ ಡೆಡಿಕೇಷನ್, ಪಾತ್ರದ ಬಗೆಗಿನ ನಿಷ್ಠೆ ಹಾಗೆಯೇ ಇದೆ. ಇದನ್ನು ಉದಾಹರಣೆ ಸಹಿತವಾಗಿ ನಿರ್ದೇಶಕ ಅನುರಾಗ್ ಕಶ್ಯಪ್ ವಿವರಿಸಿದ್ದಾರೆ.

ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿದ ಎರಡನೇ ಸಿನಿಮಾ ‘ಲುಟೇರ’ 2013 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ನಿರ್ದೇಶಿಸಿದ್ದು ವಿಕ್ರಮಾದಿತ್ಯ ಮೋಟ್ವಾನಿ, ನಿರ್ಮಾಣ ಮಾಡಿದ್ದು ಅನುರಾಗ್ ಕಶ್ಯಪ್. ಇದೀಗ ಅನುರಾಗ್ ಕಶ್ಯಪ್ ಅವರು ತೆಲುಗಿನ ‘ಡಕೈತ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರದ ವೇಳೆ ‘ಧುರಂಧರ್’ ಬಗ್ಗೆ ಮಾತನಾಡುತ್ತಾ, ರಣ್ವೀರ್ ಸಿಂಗ್ ಅವರ ಡೆಡಿಕೇಶನ್ ಎಂಥಹದ್ದು ಎಂದು ಹೇಳಿದ್ದಾರೆ.

‘ಲುಟೇರಾ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಣವೀರ್ ಅವರ ಪಾತ್ರಕ್ಕೆ ಗುಂಡು ತಗಲುತ್ತದೆ. ಆ ಗುಂಡೇಟಿನ ನೈಜ ನೋವನ್ನು ಅನುಭವಿಸಲು ಮತ್ತು ಅದನ್ನು ತೆರೆಯ ಮೇಲೆ ಸರಿಯಾಗಿ ಬಿಂಬಿಸಲು ರಣವೀರ್ ಯಾರಿಗೂ ಹೇಳದಂತೆ ತಮ್ಮ ಹೊಟ್ಟೆಗೆ ಒಂದು ಕ್ಲಿಪ್ ಅನ್ನು ಜೋರಾಗಿ ಚುಚ್ಚಿಕೊಂಡಿದ್ದರಂತೆ. ‘ಅವರು ನಟನೆಯಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಆ ಕ್ಲಿಪ್‌ನಿಂದಾದ ಗಾಯದ ತೀವ್ರತೆಯಿಂದಾಗಿ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ತಮಗೆ ನೋವಾಗುತ್ತಿದ್ದರೂ ಅವರು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಅವರಿಗೆ ಅಲ್ಲಿಂದ ಕದಲಲು ಸಾಧ್ಯವಾಗದಿದ್ದಾಗ ಮಾತ್ರ ನಮಗೆ ವಿಷಯ ತಿಳಿಯಿತು ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಇದನ್ನೂ ಓದಿ;ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

‘ಧುರಂಧರ್’ ದೊಡ್ಡ ಸಿನಿಮಾ ‘ಲುಟೇರ’, ‘ಧುರಂಧರ್’ ಅಷ್ಟು ದೊಡ್ಡ ಸಿನಿಮಾ ಅಲ್ಲ, ಅಷ್ಟು ಕಲೆಕ್ಷನ್ ಸಹ ಮಾಡಲಿಲ್ಲ ಆದರೆ ರಣ್ವೀರ್ ಸಿಂಗ್ ಅವರ ಪಾತ್ರದ ನಿಷ್ಠೆ ಬದಲಾಗುವುದಿಲ್ಲ. ಅವರು ಆಗಲೂ ಹಾಗೆಯೇ ಇದ್ದರು. ಅವರು ತಮ್ಮ ಪಾತ್ರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿಬಿಡುತ್ತಾರೆ’ ಎಂದಿದ್ದಾರೆ ಅನುರಾಗ್ ಕಶ್ಯಪ್.

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಕಳೆದ ವರ್ಷ ಬಿಡುಗಡೆ ಆಗಿ 1300 ಕೋಟಿ ಮೊತ್ತ ಕಲೆ ಹಾಕಿತ್ತು. ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ (ಮಾರ್ಚ್ 19 ರಂದು ಬಿಡುಗಡೆ) ಈಗಾಗಲೇ 1600 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿವೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್ ಮಾಧವನ್ ಕೂಡ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *