ಬೆಂಗಳೂರು, (ಏಪ್ರಿಲ್ 21): ಚಲಿಸುತ್ತಿದ್ದ ಟಿಪ್ಪರ್ಗೆ ತಲೆಕೊಟ್ಟು ಯುವಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾರ್ಖಂಡ್ (jharkhand ) ಮೂಲದ ರಾಜು ಪಹರಿಯಾ ಆತ್ಮಹತ್ಯೆಗೆ ಶರಣು ಯುವಕ. ರಾಜು ಕೂಲಿ ಕೆಲಸಕ್ಕೆಂದು ಏಪ್ರಿಲ್ 11ರಂದು ಜಾರ್ಖಂಡ್ನಿಂದ ಬೆಂಗಳೂರಿಗೆ ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ರಸ್ತೆ ಪಕ್ಕದಲ್ಲೇ ಕುಳಿತ್ತಿದ್ದ ರಾಜು, ಏಕಾಏಕಿ ಹೋಗಿ ಚಲಿಸುತ್ತಿದ್ದ ಟಿಪ್ಪರ್ ಕೆಳಗೆ ಬೆದ್ದಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.