ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 02, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚೌತಿ, ಪೂರ್ವಾಭಾದ್ರ ನಕ್ಷತ್ರ, ಅತಿಗಂಡ ಯೋಗ, ಭವಕರಣ ಇರ್ತಕ್ಕಂತ ಈ ದಿನವು ಸಂಕಷ್ಟ ಚತುರ್ಥಿಯಾಗಿ ವಿಶೇಷ ಮಹತ್ವವನ್ನು ಪಡೆದಿದೆ. ಸಂಕಷ್ಟ ಚತುರ್ಥಿಯಂದು ಆರೋಗ್ಯ, ಐಶ್ವರ್ಯ ಮತ್ತು ಸಾಲಬಾಧೆಗಳಂತಹ ಕಷ್ಟಗಳನ್ನು ಎದುರಿಸುವ ಶಕ್ತಿಗಾಗಿ ಪ್ರಾರ್ಥಿಸುವುದು ಶುಭವೆಂದು ಗುರೂಜಿ ತಿಳಿಸಿದ್ದಾರೆ.