Headlines

ಸೆಟ್ಟೇರಿತೆ ಅಲ್ಲು ಅರ್ಜುನ್-ಬಾಸಿಲ್ ಜೋಸೆಫ್ ಸಿನಿಮಾ? ‘ಐಕಾನ್’ ಸೂಚನೆ ಏನು? – Kannada News | Allu Arjun and Basil Joseph movie begains shooting

ಅಲ್ಲು ಅರ್ಜುನ್ (Allu Arjun) ಜೊತೆ ಸಿನಿಮಾ ಮಾಡಲು ಬರೋಬ್ಬರಿ ಐವರು ಸ್ಟಾರ್ ನಿರ್ದೇಶಕರು ಕಾದು ಕೂತಿದ್ದಾರೆ. ಪ್ರಸ್ತುತ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲೂ ಸಹ ಅಲ್ಲು ಅರ್ಜುನ್ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋ ಮತ್ತು ನಿರ್ದೇಶಕರೂ ಆಗಿರುವ ಬಾಸಿಲ್ ಜೋಸೆಫ್ ನಿರ್ದೇಶನದ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳಿನಿಂದಲೂ ಹರಿದಾಡುತ್ತಿದ್ದು, ಇದೀಗ ಆ ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದೆ.

ಬಾಸಿಲ್ ಜೋಸೆಫ್ ಅವರು ಫೋಟೊ ಒಂದನ್ನು ಶೇರ್ ಮಾಡಿದ್ದು, ಫೋಟೊ ನೋಡಿದ ಅಭಿಮಾನಿಗಳು ಸಿನಿಮಾದ ಚಿತ್ರೀಕರಣ ಶುರುವಾಗಿದೆ ಎನ್ನುತ್ತಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, ಬಾಸಿಲ್ ಜೋಸೆಫ್ ಅವರು “ಐಕಾನ್” (Icon) ಎಂಬ ಪದವನ್ನು ಬರೆದಿರುವ ಟೋಪಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಕ್ಯಾಪ್ಷನ್‌ನಲ್ಲಿ ನಕ್ಷತ್ರದ ಇಮೋಜಿಯನ್ನು ಬಳಸಿದ್ದಾರೆ, ಇದು ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳು ಕೊಟ್ಟ ಹೆಸರು (ಐಕಾನ್ ಸ್ಟಾರ್) ಸೂಚಿಸುವಂತಿದೆ. ಈ ಚಿತ್ರದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ನೆರಳು ಕೂಡ ಕಾಣುತ್ತಿದೆ.

ಗಮನಿಸಬೇಕಾದ ವಿಷಯವೆಂದರೆ, ಬಾಸಿಲ್ ಜೋಸೆಫ್ ಅವರು ಅಲ್ಲು ಅರ್ಜುನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂಬ ಊಹಾಪೋಹಗಳು ಬಹಳ ದಿನಗಳಿಂದ ಇವೆ. ಈ ಯೋಜನೆ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲವಾದರೂ, ಅಲ್ಲು ಅರ್ಜುನ್ ಅವರು ನಿರ್ದೇಶಕ ಅಟ್ಲಿ ಅವರ ‘ರಾಕಾ’ (Raaka) ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ‘AA23’ (LK07) ಚಿತ್ರಗಳನ್ನು ಪೂರ್ಣಗೊಳಿಸಿದ ನಂತರ ಈ ಸಿನಿಮಾ ಸೆಟ್ಟೇರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ವಿಡಿಯೋ ಕಾಲ್ ಮಾಡಿ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಅಲ್ಲು ಅರ್ಜುನ್

ಈ ಹಿಂದೆ, ಬಾಸಿಲ್ ಮತ್ತು ಅಲ್ಲು ಅರ್ಜುನ್ ಅವರ ಯೋಜನೆ ‘ಶಕ್ತಿಮಾನ್’ ಆಗಿರಬಹುದು ಎಂದು ವರದಿಗಳಿದ್ದವು. ಆದರೆ, ‘ಮಿನ್ನಲ್ ಮುರಳಿ’ಯ ಸಹ-ಲೇಖಕ ಅರುಣ್ ಅನಿರುದ್ಧನ್ ಅವರು, ‘ಶಕ್ತಿಮಾನ್’ ಚಿತ್ರವನ್ನು ಅಲ್ಲು ಅರ್ಜುನ್ ಅವರಿಗೆ ಎಂದಿಗೂ ಆಫರ್ ಮಾಡಿರಲಿಲ್ಲ ಈ ಸಿನಿಮಾ ಸಂಪೂರ್ಣವಾಗಿ ಭಿನ್ನವಾದ ಯೋಜನೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲು ಅರ್ಜುನ್ ಅವರು ಮುಂದೆ ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಿಜಿಐ (CGI) ಮತ್ತು ವಿಎಫ್‌ಎಕ್ಸ್ (VFX) ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗಿದ್ದು, ಹಾಲಿವುಡ್​​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಬಾಸಿಲ್ ಜೋಸೆಫ್ ಸಿನಿಮಾಣಲ್ಲಿ ಅಲ್ಲು ನಟಿಸಲಿದ್ದಾರೆ, ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್​​ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಅದರ ಬಳಿಕ ‘ಪುಷ್ಪ 3’ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *