Headlines

20ಕ್ಕೂ ಹೆಚ್ಚು ಕಟ್‌ಗಳ ನಂತರ ‘ದಿ ಇಂಡಿಯಾ ಸ್ಟೋರಿ’ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್ – Kannada News | The India Story Movie CBFC UA 16 Plus Certificate with 20 Cuts Kajal Aggarwal Shreyas Talpade

ಕಾಜಲ್ ಅಗರ್ವಾಲ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ದಿ ಇಂಡಿಯಾ ಸ್ಟೋರಿ’ (The India Story) ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ‘U/A 16+’ ಪ್ರಮಾಣಪತ್ರವನ್ನು ನೀಡಿದೆ. ಬಿಡುಗಡೆಗೂ ಮುನ್ನ ಸೆನ್ಸಾರ್ ಮಂಡಳಿಯು ಸೂಚಿಸಿದ 20ಕ್ಕೂ ಹೆಚ್ಚು ಬದಲಾವಣೆಗಳನ್ನು ಮತ್ತು ಸಂಭಾಷಣೆಯ ತಿದ್ದುಪಡಿಗಳನ್ನು ಚಿತ್ರತಂಡ ಪೂರ್ಣಗೊಳಿಸಿದ ನಂತರ ಈ ಸರ್ಟಿಫಿಕೇಟ್ ಸಿಕ್ಕಿದೆ. ರೈತ ಸಮುದಾಯಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹವೆನಿಸಿದ ಕೆಲವು ಪದಗಳನ್ನು ಮಂಡಳಿ ಬದಲಾಯಿಸಿದೆ. ಕೇರಳದ ‘ಎಂಡೋಸಲ್ಫಾನ್’ ದುರಂತಕ್ಕೆ ಸಂಬಂಧಿಸಿದ ತಪ್ಪಾದ ಉಲ್ಲೇಖವನ್ನೂ ಸರಿಪಡಿಸಲು ನಿರ್ದೇಶಿಸಲಾಗಿತ್ತು.

ಮಂಡಳಿ ಸೂಚಿಸಿದ ಪ್ರಮುಖ ಬದಲಾವಣೆಗಳಲ್ಲಿ, ಸಿನಿಮಾದ ಆರಂಭ ಮತ್ತು ಅಂತ್ಯದಲ್ಲಿ ಸುದೀರ್ಘವಾದ ಡಿಸ್ಕ್ಲೈಮರ್ ಸಂದೇಶವನ್ನು ಸೇರಿಸಲು ತಿಳಿಸಲಾಗಿತ್ತು. ಇದರಿಂದ ಚಿತ್ರದ ಅವಧಿ ಸುಮಾರು 50 ಸೆಕೆಂಡುಗಳಷ್ಟು ಹೆಚ್ಚಾಗಿದೆ. ಜೊತೆಗೆ, ರೈತರ ಶೇಕಡಾವಾರು ಪ್ರಮಾಣವನ್ನು ಉಲ್ಲೇಖಿಸುವ ಸಂಭಾಷಣೆಯಲ್ಲಿ ‘65’ ಬದಲಿಗೆ ‘25’ ಎಂದು ತಿದ್ದುಪಡಿ ಮಾಡಲು ಸೂಚಿಸಲಾಗಿದೆ.

ಅಷ್ಟೇ ಅಲ್ಲದೆ, ಚಿತ್ರದ ದ್ವಿತೀಯಾರ್ಧದಲ್ಲಿದ್ದ ಕೆಲವು ನಿಂದನಾತ್ಮಕ ಪದಗಳನ್ನು ತೆಗೆದುಹಾಕಲಾಗಿದ್ದು, ಕೋರ್ಟ್‌ರೂಮ್ ದೃಶ್ಯಗಳಲ್ಲಿದ್ದ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದ ಬಳಿಕವೇ ಪ್ರಮಾಣಪತ್ರ ನೀಡಲಾಗಿದೆ. ಜುಲೈ 24ರಂದು ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ನೋಡುವಂತೆ ಮನವಿ:

ಈ ಬಗ್ಗೆ ಮಾತನಾಡಿದ ನಟ ಶ್ರೇಯಸ್ ತಲ್ಪಾಡೆ ಮತ್ತು ನಟಿ ಕಾಜಲ್ ಅಗರ್ವಾಲ್, ‘ಕೀಟನಾಶಕಗಳ ಬಳಕೆಯಿಂದ ಕೃಷಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ಈ ಕೋರ್ಟ್‌ರೂಮ್ ಡ್ರಾಮಾ ಸಿನಿಮಾ ಎತ್ತಿಹಿಡಿದಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಕಳಕಳಿ ಇರುವ ಸಿನಿಮಾ:

‘ಝೀ ಸ್ಟುಡಿಯೋಸ್’ (Zee Studios) ಸಂಸ್ಥೆಯು ‘MIG ಪ್ರೊಡಕ್ಷನ್ & ಸ್ಟುಡಿಯೋಸ್’ ಜೊತೆಗೂಡಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಚೇತನ್ ಡಿ.ಕೆ. ನಿರ್ದೇಶನದ ಈ ಚಿತ್ರಕ್ಕೆ ಸಾಗರ್ ಬಿ. ಶಿಂಧೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಅದರ ಭೀಕರ ಪರಿಣಾಮಗಳ ಕಥಾಹಂದರ ಹೊಂದಿರುವ ‘ದಿ ಇಂಡಿಯಾ ಸ್ಟೋರಿ’ ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ.

ಇದನ್ನೂ ಓದಿ: ಆಹಾರ ಕಲಬೆರಕೆ ಕುರಿತ ‘ದಿ ಇಂಡಿಯಾ ಸ್ಟೋರಿ’ ಸಿನಿಮಾಗೆ ಲೀಗಲ್ ನೋಟಿಸ್; ಕಾರಣ ಏನು?

ಸ್ವಾತಿ ವಿನಾಯಕ್ ಸೈಂದಾಣೆ, ಅನಿತಾ ಜಾಧವ್, ವಿನಾಯಕ್ ಸೈಂದಾಣೆ, ಕಲ್ಪೇಶ್ ಶಾ, ದೇವಯಾನಿ ಖೋರಾಟೆ ಮತ್ತು ಪ್ರೇಮ್ ಜೋಶಿ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ನಿಶಾಂತ್ ಭಾಗವತ್ ಛಾಯಾಗ್ರಹಣ, ಮಂಗೇಶ್ ಧಾಕ್ಡೆ ಸಂಗೀತ, ಆಶಿಶ್ ಮಾತ್ರೆ ಸಂಕಲನ, ಶಕೀಲ್ ಅಜಾಮಿ ಸಾಹಿತ್ಯ ಹಾಗೂ ಅನ್ಮೋಲ್ ಭಾವೆ ಶಬ್ದ ಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *