ಬೆಂಗಳೂರು ದಕ್ಷಿಣ, (ಆಗಸ್ಟ್ 08): ಸಚಿವ ಸ್ಥಾನ ಸಿಕ್ಕ ಬಳಿಕ ಎಚ್ಸಿ ಬಾಲಕೃಷ್ಣ ಅವರು ಮೊದಲ ಬಾರಿಗೆ ಸ್ವಕ್ಷೇತ್ರ ಮಾಗಡಿಗೆ ಆಗಮಿಸಿದ್ದು, ಈ ವೇಳೆ ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಕೋರಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು H.M.ರೇವಣ್ಣ ಅನ್ನೋ ಬದಲು H.D.ರೇವಣ್ಣ ಎಂದು ಕರೆದಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಹೆಚ್ಎಂ ರೇವಣ್ಣ, ಅವನ ಹೆಸರು ಯಾಕೆ ಹೇಳುತ್ತೀಯಾ? ನಾನು ಮಾಗಡಿಯ ರೇವಣ್ಣ, ಹಾಗೆ ಇರುತ್ತೇನೆ ಎಂದಿದ್ದಾರೆ. ರೇವಣ್ಣನವರ ಮಾತಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ನಗೆಗಡಲಲ್ಲಿ ತೇಲಾಡಿದರು.