ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಇನ್ನೂ ಆರಂಭವಾಗಿಲ್ಲ, ಆದರೆ ಭಾರತ ತಂಡ ಈಗಾಗಲೇ ಎರಡು ಆಘಾತಗಳನ್ನು ಎದುರಿಸಿದೆ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬಳಿಕ ಯುವ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಕೂಡ ಈ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಸುದರ್ಶನ್ ಇನ್ನೂ ಫಿಟ್ ಆಗದ ಕಾರಣ ಅವರನ್ನು ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ(PC-PTI).
ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದಿರವ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದಾಗ್ಯೂ ಸುದರ್ಶನ್ ಈ ಸರಣಿಯಿಂದ ಹೊರಬಿದ್ದಿರುವುದು ಖಚಿತವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಸುದರ್ಶನ್ ಬದಲಿಗೆ ಟೆಸ್ಟ್ ತಂಡದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಬದಲಿ ಆಟಗಾರನ ಸ್ಥಾನಕ್ಕೆ ಇಬ್ಬರು ಆಟಗಾರರ ನಡುವೆ ಫೈಪೋಟಿ ಇದೆ(PC-PTI).
ಸುದರ್ಶನ್ ಬದಲಿಗೆ ತಂಡದ ಪ್ಲೇಯಿಂಗ್ 11ನಲ್ಲಿ 3 ನೇ ಕ್ರಮಾಂಕ್ಕೆ ದೇವದತ್ ಪಡಿಕ್ಕಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದಾಗ್ಯೂ, ತಂಡದಲ್ಲಿ ಸುದರ್ಶನ್ ಅವರ ಸ್ಥಾನವನ್ನು ಸಹ ಭರ್ತಿ ಮಾಡಬೇಕಾಗಿದೆ. ಹೀಗಾಗಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್, ಶೇಖ್ ರಶೀದ್ ನಡುವೆ ಸ್ಪರ್ಧೆ ಏರ್ಪಟ್ಟಿದೆ(PC-PTI).
ಆದಾಗ್ಯೂ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಶೇಖ್ ರಶೀದ್ ಮತ್ತು ಸರ್ಫರಾಜ್ ಖಾನ್ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಸರ್ಫರಾಜ್ ಪ್ರಸ್ತುತ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿದ್ದಾರೆ. ಸರ್ಫರಾಜ್ ಈಗಾಗಲೇ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದು, ಆರು ಟೆಸ್ಟ್ ಪಂದ್ಯಗಳಲ್ಲಿ 371 ರನ್ ಗಳಿಸಿದ್ದಾರೆ. ಆದಾಗ್ಯೂ, ಕಳೆದ ಒಂದೂವರೆ ವರ್ಷದಿಂದ ಪ್ರತಿ ಟೆಸ್ಟ್ ಸರಣಿಯಲ್ಲೂ ಅವರನ್ನು ಕಡೆಗಣಿಸಲಾಗಿದೆ(PC-PTI).
ಮತ್ತೊಂದೆಡೆ, ಶೇಖ್ ರಶೀದ್ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ ಸುಮಾರು 47 ಸರಾಸರಿಯಲ್ಲಿ 1959 ರನ್ ಗಳಿಸಿದ್ದಾರೆ. ಕಳೆದ ತಿಂಗಳು, ಭಾರತ ಎ ತಂಡದ ಪರ ಶ್ರೀಲಂಕಾ ಪ್ರವಾಸದ ಸಮಯದಲ್ಲಿ, ಅವರು ಮೂರು ಇನ್ನಿಂಗ್ಸ್ಗಳಲ್ಲಿ 63, 20 ಮತ್ತು 45 ರನ್ ಗಳಿಸಿದ್ದರು. ಆದ್ದರಿಂದ, ಅವರಿಗೆ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಿದರೆ ಆಶ್ಚರ್ಯವೇನಿಲ್ಲ(PC-PTI).




