ಅಡುಗೆ ಕೋಣೆ ಮನೆಯ ಹೃದಯ ಭಾಗವಾಗಿದ್ದು, ಇದು ಸದಾ ಚಟುವಟಿಕೆಯಿಂದಿರುತ್ತದೆ. ಇನ್ನೂ ಮಹಿಳೆಯರು ದಿನದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆಯುತ್ತಾರೆ. ಮನೆಯವರಿಗಾಗಿ ಬಗೆ ಬಗೆಯ ಆಹಾರವನ್ನು ಮಾಡುತ್ತಾರೆ. ಹೀಗೆ ಅಡುಗೆ (cooking) ಮಾಡುವಾಗ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಿದರೆ, ಅದು ಕುಟುಂಬದ ಸಂತೋಷ ಮತ್ತು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆಚಾರ್ಯ ಚಾಣಕ್ಯ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಮಾಡುವ ಯಾವ ತಪ್ಪುಗಳು ಕುಟುಂಬದ ಸಂತೋಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.
ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎಂದಿದ್ದಾರೆ ಚಾಣಕ್ಯ:
ಸ್ನಾನ ಮಾಡದೆ ಅಡುಗೆ ಮಾಡುವುದು: ಚಾಣಕ್ಯರ ಪ್ರಕಾರ, ಅಡುಗೆ ಮಾಡುವಾಗ ದೇಹ ಮತ್ತು ಬಟ್ಟೆ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಮಹಿಳೆ ಸ್ನಾನ ಮಾಡದೆ ಅಥವಾ ಕೊಳಕು ಬಟ್ಟೆಯಲ್ಲಿ ಅಡುಗೆ ಮಾಡಿದರೆ, ಆ ಆಹಾರವನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಅಡುಗೆ ಮಾಡಿದರೆ ಬ್ಯಾಕ್ಟೀರಿಯಾಗಳು ಆಹಾರಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಅಭ್ಯಾಸ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸಹ ಹರಡುತ್ತದೆ ಎನ್ನುತ್ತಾರೆ ಚಾಣಕ್ಯ.
ಕೋಪ ಅಥವಾ ದುಃಖದ ಮನಸ್ಸಿನಿಂದ ಅಡುಗೆ ಮಾಡುವುದು: ಮಹಿಳೆ ಕೋಪಗೊಂಡಾಗ, ಅಳುವಾಗ ಅಥವಾ ಖಿನ್ನತೆಗೆ ಒಳಗಾದಾಗ ಅಡುಗೆ ಮಾಡಿದರೆ, ಆ ನಕಾರಾತ್ಮಕ ಆಲೋಚನೆಗಳ ಶಕ್ತಿಯು ನೇರವಾಗಿ ಆಹಾರಕ್ಕೆ ವರ್ಗಾಯಿಸಲ್ಪಡುತ್ತದೆ. ಅಂತಹ ಆಹಾರವನ್ನು ಸೇವಿಸುವುದರಿಂದ ಕುಟುಂಬ ಸದಸ್ಯರಿಗೆ ಕಿರಿಕಿರಿ ಉಂಟುಮಾಡಬಹುದು, ಘರ್ಷಣೆಗಳು ಹೆಚ್ಚಾಗಬಹುದು ಎನ್ನುತ್ತಾರೆ ಚಾಣಕ್ಯ. ಇದಲ್ಲದೆ ಕೋಪದಲ್ಲಿದ್ದಾಗ ಅಥವಾ ದುಃಖದಲ್ಲಿದ್ದಾಗ ನಮ್ಮ ಗಮನ ಬೇರೆಡೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಡುಗೆ ಮಾಡದಾಗ ಆ ಅಡುಗೆಯೂ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಚಾಣಕ್ಯರ ಪ್ರಕಾರ, ಅಡುಗೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಮತ್ತು ಸಕಾರಾತ್ಮಕ ಆಲೋಚನೆಗಳು ಇರಬೇಕು. ಇದರಿಂದ ಮಾಡಿದ ಅಡುಗೆಯೂ ರುಚಿಕರವಾಗಿರುತ್ತದೆ, ಕುಟುಂಬದ ಸದಸ್ಯರೂ ಸಂತೋಷದಿಂದ ಆ ಆಹಾರವನ್ನು ಸೇವಿಸುತ್ತಾರೆ.
ಇದನ್ನೂ ಓದಿ: ಮನೆ ಕ್ಲೀನ್ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್ ಪ್ರಯೋಜನಕಾರಿಯಂತೆ
ಮಾತನಾಡುತ್ತಾ ಅಡುಗೆ ಮಾಡುವುದು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಫೋನ್ನಲ್ಲಿ ಮಾತನಾಡುತ್ತಾ ಅಡುಗೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಹೀಗೆ ಟಿವಿ ನೋಡುತ್ತಾ, ಮೊಬೈಲ್ ನೋಡುತ್ತಾ, ಇತರರೊಂದಿಗೆ ಮಾತನಾಡುತ್ತಾ ಅಡುಗೆ ಮಾಡಿದಾಗ ಗಮನ ಬೇರೆಡೆ ಸೆಳೆಯುತ್ತದೆ. ಇದರಿಂದ ಅಡುಗೆ ಸುಟ್ಟು ಹೋಗುವ, ಸರಿಯಾಗಿ ಬೇಯದೆ ರುಚಿ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಈ ಸಣ್ಣಪುಟ್ಟ ಎಡವಟ್ಟುಗಳು ಕುಟುಂಬ ಸದಸ್ಯರ ಕೋಪಕ್ಕೂ ಗುರಿಯಾಗುವ ಸಾಧ್ಯತೆ ಇರುತ್ತದೆ.
ಕೆಟ್ಟ ಪದಾರ್ಥಗಳನ್ನು ಬಳಸುವುದು: ಬಳಸಿದ ಎಣ್ಣೆ, ಹಾಳಾದ ತರಕಾರಿಗಳು ಅಥವಾ ಕೆಟ್ಟುಹೋದ ಮಸಾಲೆಗಳನ್ನು ಬಳಸಿದರೆ, ಅಂತಹ ಅಡುಗೆಯ ರುಚಿ ಕೆಡುತ್ತದೆ. ಅಲ್ಲದೆ ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು. ಚಾಣಕ್ಯರ ಪ್ರಕಾರ, ಆಹಾರವು ತಾಜಾ, ಸ್ವಚ್ಛ ಮತ್ತು ಶುದ್ಧವಾದಷ್ಟೂ ಅದು ದೇಹ ಮತ್ತು ಮನಸ್ಸನ್ನು ಬಲಪಡಿಸುತ್ತದೆ. ಹಾಳಾದ ಆಹಾರವು ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗಬಹುದು, ಇದರಿಂದಾಗಿ ಮನಸ್ಥಿತಿಯೂ ಕೆಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ