Headlines

nagaraj11081993

ಬ್ಲಿಂಕಿಟ್​​ನ ಸೇವೆಗೆ ಮನಸೋತ ಬೆಂಗಳೂರು ಮೂಲದ ಸಿಇಒ: ಔಷಧಿ ಬರುವ ಮೊದಲೇ ಮಧ್ಯರಾತ್ರಿ ವೈದ್ಯರ ಕರೆ – Kannada News | BG Mahesh Praises Blinkit: India’s Quick Commerce Delivers Meds with Doctor Check in 10 Mins

ಬೆಂಗಳೂರು ಮೂಲದ ಸಿಇಒ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಬಿ.ಜಿ. ಮಹೇಶ್ (BG Mahesh) ಅವರು ಹಂಚಿಕೊಂಡ ಈ ಅನುಭವವು ಭಾರತದ ‘ಕ್ವಿಕ್ ಕಾಮರ್ಸ್’ (Quick Commerce) ಕ್ಷೇತ್ರವು ಎಷ್ಟು ವೇಗವಾಗಿ ಮತ್ತು ಜವಾಬ್ದಾರಿಯುತವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿ.ಜಿ. ಮಹೇಶ್ ಅವರ ಕುಟುಂಬದ ಸದಸ್ಯರೊಬ್ಬರು ಮಧ್ಯರಾತ್ರಿ ಸುಮಾರು 12 ಗಂಟೆಗೆ ಬ್ಲಿಂಕಿಟ್ (Blinkit) ಮೂಲಕ ಸಾಮಾನ್ಯ ಔಷಧಿ (OTC Medicine) ಆರ್ಡರ್ ಮಾಡಿದ್ದರು. ಆದರೆ, ಔಷಧಿ ಕೈ ಸೇರುವ ಮೊದಲೇ ಒಬ್ಬ ವೈದ್ಯರು ಕರೆ ಮಾಡಿ, ರೋಗಿಯ…

Read More

Vastu Tips: ತಪ್ಪಿಯೂ ಕೂಡ ವಾರದ ಈ ದಿನಗಳಲ್ಲಿ ಬಟ್ಟೆ ಒಗೆಯಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Vastu Tips for Washing Clothes to Avoid Financial Loss

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮನೆಯ ದಿನನಿತ್ಯದ ಕೆಲಸಗಳಿಗೂ ಸಹ ನಿರ್ದಿಷ್ಟ ದಿನಗಳು ಮತ್ತು ಸಮಯಗಳು ಮಹತ್ವ ಹೊಂದಿವೆ. ಅದರಲ್ಲೂ ಬಟ್ಟೆ ಒಗೆಯುವಂತಹ ಸಾಮಾನ್ಯ ಕೆಲಸವೂ ವಾರದ ಕೆಲ ದಿನಗಳಲ್ಲಿ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಇಂತಹ ದಿನಗಳಲ್ಲಿ ಬಟ್ಟೆ ಒಗೆಯುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದು ಹಾಗೂ ಆರ್ಥಿಕ ಮತ್ತು ಮಾನಸಿಕ ತೊಂದರೆಗಳು ಎದುರಾಗಬಹುದು ಎಂಬ ನಂಬಿಕೆಯಿದೆ. ಗುರುವಾರ ಬಟ್ಟೆ ಒಗೆಯುವುದು ಶುಭವಲ್ಲ: ಗುರುವಾರವನ್ನು ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ ದಿನ…

Read More

‘ಕಲ್ಟ್ ಹಿಟ್ ಸಿನಿಮಾ’; ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟ ಝೈದ್ ಖಾನ್ – Kannada News | Zaid Khan’s Cult Movie Declared Pure Hit: Box Office Collection Soars Past 3.8 Crores

ಸಚಿವ ಜಮೀರ್ ಅಹ್ಮದ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಟೈಮ್ ಟ್ರಾವೆಲ್ ಕಥೆ ಹೊಂದಿತ್ತು. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಿಟ್ ಆಗಿದೆ ಎಂದು ಅವರು ಘೋಷಣೆ ಮಾಡಿದ್ದಾರೆ. ಅವರು ಸಿನಿಮಾದ ಕಲೆಕ್ಷನ್ ಲೆಕ್ಕಾಚಾರವನ್ನು ನೀಡಿದ್ದಾರೆ. ‘ಕಲ್ಟ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕೋಟಿ…

Read More

ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್! ಹೆಂಡ್ತಿ ಮೊಬೈಲ್​ಲಿ ಮಾಲ್ವೇರ್ ಅಳವಡಿಸಿದ್ದಾತನ ವಿರುದ್ಧ ಪೊಲೀಸರಿಗೆ ದೂರು – Kannada News | Husband Secretly Installed Malware on Wife’s Phone to Track Location in Bengaluru, Police Complaint Filed

ಬೆಂಗಳೂರು, ಜನವರಿ 27: ಗಂಡ-ಹೆಂಡತಿ ಇಬ್ಬರೂ ದೂರವಾಗಿದ್ದರು. ಆದರೆ, ಮಗುವನ್ನು ನೋಡಲು ಪತ್ನಿ ಮನೆಗೆ ಹೋಗಲು ಪತಿಗೆ ನ್ಯಾಯಾಲಯ ಅನುಮತಿ ಕೊಟ್ಟಿತ್ತು. ಹೀಗೆ ಆಕೆಯ ಮನೆಗೆ ತೆರಳುತ್ತಿದ್ದ ಪತಿ ಮಗು ನೋಡುವ ನೆಪದಲ್ಲಿ ಪತ್ನಿಯ ಮೊಬೈಲ್‌ನಲ್ಲಿ ಮಾಲ್ವೇರ್ ಆ್ಯಪ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದ. ಇದೀಗ ಪತಿಯ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪತಿ-ಪತ್ನಿ ದೂರವಾಗಿದ್ದು, ನ್ಯಾಯಾಲಯದ ಆದೇಶದಂತೆ ಪತಿ ಅಮೇಲ್ ವಿ. ನಾಯರ್ ಅವರಿಗೆ ವಾರಕ್ಕೊಮ್ಮೆ ಮಗುವನ್ನು…

Read More

ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್​: ಕೈಗೆ ಸಿಗದ ರಾಜೀವ್​​ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ – Kannada News | Threat to Woman Officer: Inside Story Behind Police Arrest of Absconding Rajeev Gowda

ಬೆದರಿಕೆ ಕೇಸ್​​ನಲ್ಲಿ ರಾಜೀವ್​​ ಗೌಡ ಬಂಧನ ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ಕೊನೆಗೂ ಲಾಕ್​​ ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡು ಊರೂರು ಅಲೆಯತ್ತಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಅಷ್ಟಕ್ಕೂ ರಾಜೀವ್​​ ಗೌಡ ಎಲ್ಲಿದ್ದಾನೆ ಎಂಬ ಬಗ್ಗೆ ಖಾಕಿ ಮಾಹಿತಿ ಕಲೆ ಹಾಕಿರೋದೇ ಬಹಳ ಇಂಟರೆಸ್ಟಿಂಗ್​​ ಆಗಿದೆ. ಆರೋಪಿ ರಾಜೀವ್​​ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ…

Read More

ಭಾರತ-ಯೂರೋಪಿಯನ್ ಯೂನಿಯನ್ ಒಪ್ಪಂದದಿಂದ ಯಾರಿಗೆ ಲಾಭ? – Kannada News | India European Union trade deal, which sectors will benefit from this FTA

ಯುಇ ಕಮಿಷನ್ ಅಧ್ಯಕ್ಷೆ ಉರ್ಸುಲಾ ಜೊತೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿ, ಜನವರಿ 27: ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ಏರ್ಪಟ್ಟಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದಿಂದ (India-EU trade pact) ಎರಡೂ ಪಕ್ಷಗಳಿಗೆ ಲಾಭವಾಗಲಿದೆ. ಈ ಒಪ್ಪಂದವನ್ನು ಮದರ್ ಆಫ್ ಆಲ್ ಡೀಲ್ಸ್ (Mother of all deals) ಎಂದು ಬಣ್ಣಿಸಲಾಗುತ್ತಿದೆ. ಯೂರೋಪ್​ನ ಮುಂದುವರಿದ 27 ದೇಶಗಳ ಗುಂಪಾಗಿರುವ ಐರೋಪ್ಯ ಒಕ್ಕೂಟ ಹಾಗೂ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾದ ಭಾರತದ ನಡುವಿನ ವ್ಯಾಪಾರದ…

Read More

‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್ – Kannada News | Ranbir Kapoor talks about Animal Park movie shooting

ರಣ್​​ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಯಶಸ್ವಿ ಆದ ಜೊತೆಗೆ ಪರ ವಿರೋಧ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು. ‘ಅನಿಮಲ್’ ಸಿನಿಮಾವನ್ನು ‘ಹಿಂಸಾತ್ಮಕ’, ‘ಪುರುಷ ಅಹಂಕಾರ’ ತುಂಬಿದ ಸಿನಿಮಾ, ‘ಮಹಿಳಾ ಪೀಡಕ’ತನದ ವೈಭವೀಕರಣ ಎಂದೆಲ್ಲ ವಿಮರ್ಶಕರು ಟೀಕೆ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ‘ಅನಿಮಲ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ…

Read More

400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ? – Kannada News | 400 Cr Robbery: Karnataka Goa Border Container Drivers Arrested, New Twist

400ಕೋಟಿ ದರೋಡೆ ಪ್ರಕರಣ:ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ? ಬೆಳಗಾವಿ, ಜನವರಿ 27: ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ  (Rs 400 Crore Robbery Case) ಮತ್ತೊಂದು ತಿರುವು ಪಡೆದಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಎಸ್ಐಟಿ ತಂಡ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ಅವರಿಬ್ಬರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇಂದು ಸಂಜೆ ಬಂಧನದ ಅಧಿಕೃತ ಘೋಷಣೆ? ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ…

Read More

Bengaluru 1 day Tour: 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು – Kannada News | Bengaluru’s Best: History, Nature and Modern Attractions – Your Ultimate Travel Guide

ಬೆಂಗಳೂರು, ಜ.27: ಬೆಂಗಳೂರು (Bengaluru Tourist Attractions) ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ತನ್ನ ಅದ್ಭುತ ಉದ್ಯಾನವನಗಳು, ಐತಿಹಾಸಿಕ ಕಟ್ಟಡಗಳು ಮತ್ತು ವರ್ಣರಂಜಿತ ನೈಟ್‌ಲೈಫ್‌ಗೆ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧದಂತಹ ಸ್ಥಳಗಳು ನವ-ದ್ರಾವಿಡ ಶಾಸಕಾಂಗ ಕಟ್ಟಡವಾಗಿದೆ. ಹಿಂದಿನ ರಾಜಮನೆತನದ ನಿವಾಸಗಳಲ್ಲಿ ಇಂಗ್ಲೆಂಡ್‌ನ ವಿಂಡ್ಸರ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾದ 19 ನೇ ಶತಮಾನದ ಬೆಂಗಳೂರು ಅರಮನೆ ಮತ್ತು 18 ನೇ ಶತಮಾನದ ತೇಗದ ರಚನೆಯಾದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಸೇರಿವೆ. ಸಾರಿಗೆ : ಡಿಲಕ್ಸ್ ಕೋಚ್ ಮೂಲಕ…

Read More

ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು – Kannada News | Another Congress Leader’s High Handedness After Rajeev Gowda Row: Threats and Assault in CM Siddaramaiah’s Name

ಹಲ್ಲೆಗೊಳಗಾದ ದಂಪತಿ (ಎಡಚಿತ್ರ) ಮತ್ತು ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜು ಸಿಎಂ ಪುತರ ಯತೀಂದ್ರ ಜತೆ ಮೈಸೂರು, ಜನವರಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ (Varuna) ನಡೆದ ಕಾಂಗ್ರೆಸ್ (Congress) ಮುಖಂಡನ ಗಲಾಟೆ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ತಲುಪಿದೆ. ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ನಿರಂತರ ಬೆದರಿಕೆಗಳ ವಿರುದ್ಧ ನ್ಯಾಯ ಕೋರಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ದಂಪತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ…

Read More