Headlines

nagaraj11081993

CSK vs GT: 8 ಎಸೆತಗಳಲ್ಲಿ 3 ವಿಕೆಟ್‌; ಪರಿಣಾಮ ಬೀರದ ಇಂಪ್ಯಾಕ್ಟ್ ಪ್ಲೇಯರ್ – Kannada News | IPL 2026: CSK’s Batting Collapse vs GT Triggers Early Impact Player Use in Match 37

ಐಪಿಎಲ್ 2026 (IPL 2026) ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ತವರಿನಲ್ಲಿ ಟಾಸ್ ಸೋತ ಸಿಎಸ್​​ಕೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ತವರು ಮೈದಾನವಾಗಿದ್ದರಿಂದ ಸಿಎಸ್​ಕೆ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇತ್ತು. ಆದರೆ ಗುಜರಾತ್​​ನ ಸಾಂಘಿಕ ದಾಳಿಗೆ ತತ್ತರಿಸಿದ ಸಿಎಸ್​​ಕೆ ಬ್ಯಾಟಿಂಗ್‌ ವಿಭಾಗ ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡಿತು. ಪರಿಣಾಮವಾಗಿ, ತಂಡವು ಪಂದ್ಯದ ಆರಂಭದಲ್ಲಿಯೇ ಅಂದರೆ 4 ಓವರ್​ಗಳ…

Read More

ಚಿಕ್ಕಬಳ್ಳಾಪುರ ಜನಿವಾರ ಜಟಾಪಟಿ: ಪೊಲೀಸರು ಮನವಿ ಮಾಡಿದ್ರೂ ದೂರು ನೀಡಲು ಪರೀಕ್ಷಾರ್ಥಿ ಹಿಂದೇಟು – Kannada News | Chikkaballapur Janivara Row: Examinee Yet to File Complaint

ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್Image Credit source: tv9 kannada ಚಿಕ್ಕಬಳ್ಳಾಪುರ, ಏಪ್ರಿಲ್​ 26: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ (janivara) ಕತ್ತರಿಸಿದ ವಿಚಾರ ಜಿಲ್ಲೆಯಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂಬಂಧ ದೂರು ನೀಡಲು ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್ ಮತ್ತು ಆತನ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದರೂ, ಸುಪ್ರೀತ್ ಮತ್ತು ಆತನ ಪೋಷಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಪರೀಕ್ಷೆ ನಡೆದ ನಾಗಾರ್ಜುನ ಪಿ.ಯು ಕಾಲೇಜಿನ ಆಡಳಿತ…

Read More

ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ – Kannada News | Sa Ra Govindu lashes out on Chetan Ahimsa for his duel personality

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಮಾಡಿದ್ದ ಟೀಕೆಗೆ ಭಾರಿ ಆಕ್ರೋಶ ಎದುರಾಗಿತ್ತು. ನಿನ್ನೆ ಹಲವು ಕನ್ನಡಪರ ಸಂಘಟನೆಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ನಟ ಚೇತನ್ ಅಹಿಂಸ ಅವರು, ಕರವೇ ಅಧ್ಯಕ್ಷ ಶಿವರಾಮೇಗೌಡ ಎದುರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೆ ಇಂದು (ಏಪ್ರಿಲ್ 26) ಮತ್ತೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್​ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ…

Read More

‘ನಿಮ್ಮ ಸಿನಿಮಾನಲ್ಲಿ ಹೀರೋ ಯಾರು?’ ಎಂದವರಿಗೆ ಸಮಂತಾ ಖಡಕ್ ಉತ್ತರ – Kannada News | Samantha Ruth Prabhu says she is hero in her movie Maa Inti Bangaram

ಸಮಂತಾ ಋತ್ ಪ್ರಭು (Samantha Ruth Prabhu), ದಕ್ಷಿಣದ ಸ್ಟಾರ್ ನಟಿ ಆಗಿ ಮೆರೆದವರು. ಕೆಲ ವರ್ಷಗಳ ಹಿಂದಿನ ವರೆಗೂ ಸಮಂತಾ ಕೈಯಲ್ಲಿ ಹಲವು ಸಿನಿಮಾ ಅವಕಾಶಗಳಿದ್ದವು. ಒಂದರ ಹಿಂದೊಂದು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದರು. ಆದರೆ ವಿಚ್ಛೇದನ, ಅದಾದ ಬಳಿಕ ತೀವ್ರ ಅನೋರಾಗ್ಯ, ಅದರ ಬಳಿಕ ಸಮಂತಾರ ವ್ಯಕ್ತಿತ್ವದಲ್ಲಾದ ಭಾರಿ ಬದಲಾವಣೆ ಇವುಗಳೆಲ್ಲದರ ನಂತರ ಹಠಾತ್ತನೆ ಸಮಂತಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ. ಇದೀಗ ಸಮಂತಾಗೆ ಅವರ ಹಾಲಿ ಪತಿ ಮಾತ್ರವೇ ಗತಿ ಎಂಬಂತಾಗಿದೆ. ಇದೀಗ ಸಮಂತಾ…

Read More

ಬೆಂಗಳೂರಲ್ಲಿ ‘ಅಂಬಾರಿ’ ದರ್ಬಾರ್: ಬಿಸಿಲಲ್ಲೂ ಡಬಲ್ ಡೆಕ್ಕರ್ ಬಸ್ ಏರಿ ಸಿಟಿ ಬ್ಯೂಟಿ ನೋಡಲು ಜನವೋ ಜನ! – Kannada News | Ambari Double Decker Bus: Bangalore’s Hottest City Tour Experience by KSTDC

ಸಿಲಿಕಾನ್ ಸಿಟಿಯಲ್ಲಿ ಸೂರ್ಯನ ಪ್ರತಾಪ ಜೋರಾಗಿದ್ದರೂ, ಬೆಂಗಳೂರಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಬಿಸಿಲ ಬೇಗೆಯ ನಡುವೆಯೂ ಪ್ರವಾಸೋದ್ಯಮ ಇಲಾಖೆ ಪರಿಚಯಿಸಿರುವ ‘ಅಂಬಾರಿ’ (Ambari) ಡಬಲ್ ಡೆಕ್ಕರ್ ಬಸ್ ಏರಿ ನಗರದ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. Source link

Read More

ಭಾರತದ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕದ ಶೇ. 123ರಷ್ಟು ಆ್ಯಂಟಿ ಡಂಪಿಂಗ್ ಡ್ಯೂಟಿ; ಯಾಕೆ ಈ ಕ್ರಮ? – Kannada News | India US Solar Trade War: US Anti Dumping Duty Challenges Indian Exporters

ನವದೆಹಲಿ, ಏಪ್ರಿಲ್ 26: ಭಾರತದಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕ ಸರ್ಕಾರವು ಶೇಕಡಾ 123.5 ರಷ್ಟು ‘ಆಂಟಿ-ಡಂಪಿಂಗ್ ಸುಂಕ’ (Anti-Dumping Duty) ವಿಧಿಸಿದೆ. ಈ ನಿರ್ಧಾರವು ಭಾರತೀಯ ಸೌರಶಕ್ತಿ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಮುಂದ್ರಾ ಸೋಲಾರ್ ಪಿವಿ, ಮುಂದ್ರಾ ಸೋಲಾರ್ ಎನರ್ಜಿ, ಕೋವಾ ಕಂಪನಿ ಮತ್ತು ಪ್ರೀಮಿಯರ್ ಎನರ್ಜಿ ಫೋಟೋವೊಲ್ಟಾಯಿಕ್ ಕಂಪನಿಗಳ ಉತ್ಪನ್ನಗಳು ನ್ಯಾಯಯುತ ಬೆಲೆಗಿಂತ ಕಡಿಮೆಗೆ ಅಮೆರಿಕದಲ್ಲಿ ಮಾರಲಾಗುತ್ತಿದ್ದುದು ಅಲ್ಲಿಯ ಸರ್ಕಾರದ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಇದರಿಂದಾಗಿ ಡಂಪಿಂಗ್ ವಿರೋಧಿ ಸುಂಕವನ್ನು ಹೇರಲಾಗಿದೆ. ಭಾರತ…

Read More

ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು – Kannada News | Chikkamagaluru: daughter Ends Life After Scolding From Father About Sambar

ಚಿಕ್ಕಮಗಳೂರು, ಏಪ್ರಿಲ್​ 26: ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಪುತ್ರಿ ನೇಣಿಗೆ ಶರಣಾಗಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೌಜನ್ಯ ತಂದೆ ನಟೇಶ್, ತರಕಾರಿ ತಂದು ಸಾಂಬಾರ್ ಮಾಡಲು ಹೇಳಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಂದಾಗ ಸಾಂಬಾರ್ ಮಾಡಿಲ್ಲವೆಂದು ಬೈದಿದ್ದಾರೆ. ಅತ್ತ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ ಇತ್ತ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ….

Read More

ಬೆಳಗಾವಿಯಲ್ಲಿ ಮಧ್ಯರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ; ರೂಮ್​​​​ನಲ್ಲಿ ಓದುತ್ತಿದ್ದ ಪುತ್ರಿ ಕೂದಲೆಳೆ ಅಂತರದಲ್ಲಿ ಪಾರು! – Kannada News | Belagavi Advocate Pooja Kakatkar’s Home Shot At; Daughter Narrowly Escapes Firing

ಮಧ್ಯರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ ಬೆಳಗಾವಿ, ಏ.26: ಕುಂದಾನಗರಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಘಟನೆಯೊಂದು ನಡೆದಿದೆ. ನಗರದ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಡೀ ನಗರದಲ್ಲಿ ಆತಂಕ ಮನೆ ಮಾಡಿದೆ. ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಸುಮಾರಿನಲ್ಲಿ ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಪೂಜಾ ಅವರ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿದ್ದಾರೆ….

Read More

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ – Kannada News | Do you know what a husband and wife should be like for a happy married life

ಸಂಸಾರ ಹಾಲು ಜೇನಿನಂತೆ ಇರಲು, ದಾಂಪತ್ಯ ಜೀವನ (married life) ದೀರ್ಘಕಾಲ ಮುಂದುವರೆಯಲು ಸಂಗಾತಿಗಳಿಬ್ಬರಲ್ಲೂ ಹೊಂದಾಣಿಕೆ ಇರಬೇಕು. ಆದರೆ ಇಂದಿನ ಈ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಹೊಂದಾಣಿಕೆ ಎಂಬುದೇ ಇಲ್ಲ. ಈ ಹೊಂದಾಣಿಕೆಯ ಕೊರತೆಯ ಕಾರಣದಿಂದಾಗಿ ಗಂಡ ಹೆಂಡತಿಯ ಮಧ್ಯೆ ಜಗಳಗಳು ನಡೆಯುವುದು, ಡಿವೋರ್ಸ್‌ ಆಗುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು, ಗಂಡ ಹೆಂಡತಿ ಹೊಂದಾಣಿಕೆಯಿಂದ ಖುಷಿ ಖುಷಿಯಾಗಿ ಸಂಸಾರ ನಡೆಸಲು ಈ ಕೆಲವೊಂದು ಸೂತ್ರಗಳನ್ನು ಪಾಲಿಸಬೇಕು….

Read More

Mangaluru Job Fair: ನಿರುದ್ಯೋಗಿಗಳಿಗೆ ಸುವರ್ಣಾವಕಾಶ; ವೆಬ್ ಡೆವಲಪರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Mangaluru Job Fair April 28: VRN Infotech Hiring Web Devs, Support, Telecallers!

ನಿರುದ್ಯೋಗಿಗಳಿಗೆ ಸುವರ್ಣಾವಕಾಶImage Credit source: Pinterest ಮಂಗಳೂರಿನ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಸುವರ್ಣಾವಕಾಶವೊಂದನ್ನು ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಏಪ್ರಿಲ್ 28ರಂದು ‘ನೇರ ಸಂದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಖ್ಯಾತ ವಿಆರ್‌ಎನ್ ಇನ್ಫೋಟೆಕ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮೂರು ವಿಭಾಗಗಳಲ್ಲಿ ನೇಮಕಾತಿ: ಈ ನೇರ ಸಂದರ್ಶನದ ಮೂಲಕ ಪ್ರಮುಖವಾಗಿ ಮೂರು ವಿಭಾಗಗಳಲ್ಲಿ…

Read More