All posts by nagaraj11081993

VHT ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಇಲ್ಲಿದೆ – Kannada News | Indian players will feature in the Vijay Hazare Trophy 2025

ದೇಶೀಯ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿ ಇಂದಿನಿಂದ (ಡಿ.24) ಶುರುವಾಗಲಿದೆ. 32 ತಂಡಗಳ ಈ ನಡುವಣ ಈ ಕದನದಲ್ಲಿ ಈ ಬಾರಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಭಾರತೀಯ ಆಟಗಾರರು ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡದ ಆಟಗಾರರು ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಇಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಒಂದಷ್ಟು ಆಟಗಾರರು ವರ್ಷಗಳ ಬಳಿಕ ದೇಶೀಯ ಏಕದಿನ ಟೂರ್ನಿ ಆಡುತ್ತಿರುವುದು ವಿಶೇಷ. ಈ ಎಲ್ಲಾ ಆಟಗಾರರು ಮೊದಲ ದಿನವೇ ವಿವಿಧ ಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ದೆಹಲಿ ಪರ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಹರ್ಷಿತ್ ರಾಣಾ ಇದೇ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಮುಂಬೈ ಪರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸರ್ಫರಾಝ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ನಿತೀಶ್ ಕುಮಾರ್ ರೆಡ್ಡಿ – ಆಂಧ್ರ
  • ಹಾರ್ದಿಕ್ ಪಾಂಡ್ಯ – ಬರೋಡಾ
  • ಜಿತೇಶ್ ಶರ್ಮಾ – ಬರೋಡಾ
  • ಮೊಹಮ್ಮದ್ ಶಮಿ – ಬಂಗಾಳ
  • ಆಕಾಶ್ ದೀಪ್ – ಬಂಗಾಳ
  • ಶಹಬಾಝ್ ಅಹ್ಮದ್ – ಬಂಗಾಳ
  • ವಿರಾಟ್ ಕೊಹ್ಲಿ – ದೆಹಲಿ
  • ರಿಷಭ್ ಪಂತ್ – ದೆಹಲಿ
  • ಹರ್ಷಿತ್ ರಾಣಾ – ದೆಹಲಿ
  • ಇಶಾನ್ ಕಿಶನ್ – ಜಾರ್ಖಂಡ್
  • ಕೆಎಲ್ ರಾಹುಲ್ – ಕರ್ನಾಟಕ
  • ಪ್ರಸಿದ್ಧ್ ಕೃಷ್ಣ – ಕರ್ನಾಟಕ
  • ಸಂಜು ಸ್ಯಾಮ್ಸನ್ – ಕೇರಳ
  • ರುತುರಾಜ್ ಗಾಯಕ್ವಾಡ್ – ಮಹಾರಾಷ್ಟ್ರ
  • ರೋಹಿತ್ ಶರ್ಮಾ – ಮುಂಬೈ
  • ಯಶಸ್ವಿ ಜೈಸ್ವಾಲ್ – ಮುಂಬೈ
  • ಸೂರ್ಯಕುಮಾರ್ ಯಾದವ್ – ಮುಂಬೈ
  • ಶಿವಂ ದುಬೆ – ಮುಂಬೈ
  • ಸರ್ಫರಾಝ್ ಖಾನ್
  • ಶುಭಮನ್ ಗಿಲ್ – ಪಂಜಾಬ್
  • ಅಭಿಷೇಕ್ ಶರ್ಮಾ – ಪಂಜಾಬ್
  • ಅರ್ಷದೀಪ್ ಸಿಂಗ್ – ಪಂಜಾಬ್
  • ಸಾಯಿ ಸುದರ್ಶನ್ – ತಮಿಳುನಾಡು
  • ಧ್ರುವ್ ಜುರೆಲ್ – ಉತ್ತರ ಪ್ರದೇಶ
  • ರಿಂಕು ಸಿಂಗ್ – ಉತ್ತರ ಪ್ರದೇಶ

ಇದನ್ನೂ ಓದಿ: 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಎಲ್ಲಿ?

ವಿಜಯ ಹಝಾರೆ ಟೂರ್ನಿಗೆ ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್ (ಉಪನಾಯಕ), ದೇವದತ್ ಪಡಿಕ್ಕಲ್, ರವಿಚಂದ್ರಣ್ ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿಜಯಕುಮಾರ್ ವೈಶಾಕ್, ಮನ್ವಂತ್ ಕುಮಾರ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ಬಿಆರ್ ಶರತ್, ಹರ್ಷಿಲ್ ಧರ್ಮನಿ, ಧ್ರುವ  ಪ್ರಭಾಕರ್, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ.

Source link

ರಕ್ಷಿತಾ ತಾಯಿ ಬಳಿ ಮನಸಾರೆ ಕ್ಷಮೆ ಕೇಳಿದ ಧ್ರುವಂತ್ – Kannada News | Dhruvanth ask sorry to Rakshita Shetty Mother Over Old Kirik

ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಮಧ್ಯೆ ಆದ ಕಿರಿಕ್​​ಗಳು ಒಂದೆರಡಲ್ಲ. ರಕ್ಷಿತಾನ ಅಪ್ರಬುದ್ಧೆ ಎಂದೆಲ್ಲ ಧ್ರುವಂತ್ ಬೈದಿದ್ದು ಇದೆ. ಈಗ ರಕ್ಷಿತಾ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಧ್ರುವಂತ್ ಅವರು ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ‘ಬೆತ್ತ ತರಬೇಕಿತ್ತು’ ಎಂದು ಧ್ರುವಂತ್ ಹೇಳಿದರು. ಆಗ ಗಿಲ್ಲಿ, ‘ಆ ಬೆತ್ತದಲ್ಲಿ ನಿನಗೆ ಹೊಡೆಯುತ್ತಿದ್ದರು’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣಕ್ಕೆ: ಹೀಗಿದೆ ಪ್ಲೇಯಿಂಗ್ 11 – Kannada News | Andhra vs Delhi, Mumbai vs Sikkim, Jharkhand vs Karnataka Toss Update

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸ್​ಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ದೆಹಲಿ ಮತ್ತು ಆಂಧ್ರ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಒಳಗೊಂಡಿರುವ ದೆಹಲಿ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ದೆಹಲಿ (ಪ್ಲೇಯಿಂಗ್ XI): ಅರ್ಪಿತ್ ರಾಣಾ, ಪ್ರಿಯಾಂಶ್ ಆರ್ಯ, ವಿರಾಟ್ ಕೊಹ್ಲಿ, ನಿತೀಶ್ ರಾಣಾ, ರಿಷಭ್ ಪಂತ್ (ನಾಯಕ), ಆಯುಷ್ ಬದೋನಿ, ಸಿಮರ್ಜೀತ್ ಸಿಂಗ್, ಹರ್ಷ್ ತ್ಯಾಗಿ, ಇಶಾಂತ್ ಶರ್ಮಾ, ಪ್ರಿನ್ಸ್ ಯಾದವ್, ನವದೀಪ್ ಸೈನಿ.

ಆಂಧ್ರ (ಪ್ಲೇಯಿಂಗ್ XI): ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಶ್ವಿನ್ ಹೆಬ್ಬಾರ್, ಶೇಕ್ ರಶೀದ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ (ನಾಯಕ), ಸೌರಭ್ ಕುಮಾರ್, ಎಂ ಹೇಮಂತ್ ರೆಡ್ಡಿ, ಕೆಎಸ್​ ನರಸಿಂಹರಾಜು, ತ್ರಿಪುರಾಣ ವಿಜಯ್, ಸತ್ಯನಾರಾಯಣ ರಾಜು, ಎಸ್​ ಪ್ರಸಾದ್.

ಇನ್ನು ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಒಳಗೊಂಡಿರುವ ಮುಂಬೈ ಹಾಗೂ ಸಿಕ್ಕಿಂ ತಂಡಗಳು ಕಣಕ್ಕಿಳಿದಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದಿರುವ ಸಿಕ್ಕಿಂ ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ಮುಂಬೈ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಅಂಗ್​ಕ್ರಿಶ್ ರಘುವಂಶಿ, ಸರ್ಫರಾಝ್ ಖಾನ್, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್ (ನಾಯಕ), ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಝ.

ಸಿಕ್ಕಿಂ (ಪ್ಲೇಯಿಂಗ್ XI): ಲೀ ಯೋಂಗ್ ಲೆಪ್ಚಾ (ನಾಯಕ), ಆಶಿಶ್ ಥಾಪಾ (ವಿಕೆಟ್ ಕೀಪರ್), ಅಮಿತ್ ರಾಜೇರಾ, ರಾಬಿನ್ ಲಿಂಬೂ, ಗುರಿಂದರ್ ಸಿಂಗ್, ಕ್ರಾಂತಿ ಕುಮಾರ್, ಪಲ್ಜೋರ್ ತಮಾಂಗ್, ಅಂಕುರ್ ಮಲಿಕ್, ಕೆ ಸಾಯಿ ಸಾತ್ವಿಕ್, ಎಂಡಿ ಸಪ್ತುಲ್ಲಾ, ಅಭಿಷೇಕ್ ಶಾ.

ಹಾಗೆಯೇ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಕರ್ನಾಟಕ-ಜಾರ್ಖಂಡ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಕರ್ನಾಟಕ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಧ್ರುವ್ ಪ್ರಭಾಕರ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಅಭಿಲಾಷ್ ಶೆಟ್ಟಿ.

ಇದನ್ನೂ ಓದಿ: ಗಿಲ್, ಗಂಭೀರ್ ಆಸೆಗೆ ತಣ್ಣೀರೆರಚಿದ ಮೂವರು ಆಯ್ಕೆಗಾರರು

ಜಾರ್ಖಂಡ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ನಾಯಕ), ಕುಮಾರ್ ಕುಶಾಗ್ರಾ, ಶಿಖರ್ ಮೋಹನ್, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್, ರಾಬಿನ್ ಮಿಂಝ್, ಅನುಕುಲ್ ರಾಯ್, ಶುಭ್ ಶರ್ಮಾ, ಸೌರಭ್ ಶೇಖರ್, ಸುಶಾಂತ್ ಮಿಶ್ರಾ, ವಿಕಾಶ್ ಸಿಂಗ್.

Source link

ಡೆಲಿವರಿ ಏಜೆಂಟ್​ಗಳಿಗಾಗಿಯೇ ಮನೆ ಮುಂದೆ ನೀರಿನ ಬಾಟಲಿಗಳನ್ನಿಟ್ಟು ಜನರ ಹೃದಯ ಗೆದ್ದ ವ್ಯಕ್ತಿ – Kannada News | Kindness Wins: Man Leaves Water Bottles for Delivery Agents in Summer Heat

ಸಾಮಾನ್ಯವಾಗಿ ಬೇಸಿಗೆ(Summer)ಯಲ್ಲಿ ಆಯಾಸ, ಬಾಯಾರಿಕೆ ಎರಡೂ ಹೆಚ್ಚು. ಡೆಲಿವರಿ ಏಜೆಂಟ್​ಗಳು ಇಡೀ ದಿನವೂ ನೂರಾರು ಮನೆಗಳಿಗೆ ಭೇಟಿ ನೀಡಿ ನಾವು ಆರ್ಡರ್ ಮಾಡಿರುವ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಾರೆ. ಆದರೆ ಯಾರೂ ಕೂಡ ಅವರ ಕಡೆಗೆ ಗಮನ ಹರಿಸುವುದಲ್ಲ. ಆದರೆ ವಿನೀತ್ ಎಂಬುವವರು ಮನೆಯ ಹೊರಗಡೆ ಈ ಡೆಲಿವರಿ ಏಜೆಂಟ್​ಗಳಿಗಾಗಿಯೇ ಸುಮಾರು 1,500 ರೂ. ಮೌಲ್ಯದ 300 ನೀರಿನ ಬಾಟಲಿಗಳನ್ನು ಇಟ್ಟಿದ್ದಾರೆ.

ಅದಕ್ಕೆ ಪ್ರಣವ್ ಎಂಬುವವರು ಕಮೆಂಟ್ ಮಾಡಿದ್ದು, 2022ರಿಂದ ಪ್ರತಿ ಬೇಸಿಗೆಯಲ್ಲೂ ತಮ್ಮ ತಾಯಿ ಕೂಡ ಮಡಿಕೆಯಲ್ಲಿ ನೀರನ್ನು ಮನೆಯ ಹೊರಗಡೆ ಇಡಲು ಶುರು ಮಾಡಿದ್ದಾರೆ. ಬೇಸಿಗೆಯಲ್ಲಿ ಡೆಲಿವರಿ ಏಜೆಂಟ್​ಗಳಿಗೆ ಡಿ ಹೈಡ್ರೇಷನ್ ಆಗುವ ಸಾಧ್ಯತೆ ಹೆಚ್ಚಿರುವ ಕಾರಣ ಅವರ ಬಗ್ಗೆ ಸ್ವಲ್ಪ ಕಾಳಜಿ ತೋರುವುದು ಉದ್ದೇಶವಾಗಿದೆ.

ಪ್ರತಿ ವರ್ಷ, ವಿನೀತ್ ಸುಮಾರು 300 ನೀರಿನ ಬಾಟಲಿಗಳನ್ನು ಖರೀದಿಸಲು ಸುಮಾರು 1,500 ರೂ. ಖರ್ಚು ಮಾಡುತ್ತಾರೆ. ಅವುಗಳನ್ನು ಅವರ ಮನೆಯ ಪ್ರವೇಶದ್ವಾರದಲ್ಲಿ ಇರಿಸಲಾಗುತ್ತದೆ, ಹಾದುಹೋಗುವ ಯಾರಿಗಾದರೂ ತೆಗೆದುಕೊಂಡು ಹೋಗಬಹುದು.

ಪೋಸ್ಟ್​

ವಿನೀತ್ ಅವರ ಪೋಸ್ಟ್‌ಗೆ ನೆಟ್ಟಿಗರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ. ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ದಯವಿಟ್ಟು ನೀರಿನ ಬಾಟಲಿಗಳನ್ನು ನೆರಳಿನಲ್ಲಿರಿಸಿ ಸೂರ್ಯನ ಕಿರಣಗಳು ಬಾಟಲಿಗಳನ್ನು ಸ್ಪರ್ಶಿಸಬಾರದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಡಿಸೆಂಬರ್ 23, 2025 ರಂದು ಹಂಚಿಕೊಳ್ಳಲಾಯಿತು ಮತ್ತು ಅಂದಿನಿಂದ, ಇದು 28,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿರುಗುಪ್ಪ ಬಳಿ ಕಾರು ಪಲ್ಟಿಯಾಗಿ ಭೀಕರ ಅಪಘಾತ: ತಮಿಳುನಾಡಿನ ದೇಗುಲಕ್ಕೆ ಹೋಗಿ ಬರುತ್ತಿದ್ದ ಒಂದೇ ಕುಟುಂಬದ ಮೂವರು ಸಾವು – Kannada News | Fatal Car Crash Near Siruguppa: Three Family Members Killed While Returning From Tamil Nadu Temple Visit

ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದು

ಬಳ್ಳಾರಿ, ಡಿಸೆಂಬರ್ 24: ಬಳ್ಳಾರಿ (Ballari) ಜಿಲ್ಲೆ ಸಿರುಗುಪ್ಪ ತಾಲೂಕಿನ ದೇವಿನಗರ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ–ಸಿರುಗುಪ್ಪ ರಾಜ್ಯ ಹೆದ್ದಾರಿ (ಎನ್‌ಎಚ್-150)ಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಸೇರಿದಂತೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ತಕ್ಷಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ. ಅತಿವೇಗ ಅಥವಾ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ರಸ್ತೆ ಬದಿಯ ಕಟ್ಟೆಗೆ ಡಿಕ್ಕಿಯಾಗಿ ಪಲ್ಟಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದ ಮಾಹಿತಿ ತಿಳಿದ ಕೂಡಲೇ ಸಿರುಗುಪ್ಪ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಮಿಷನ್ ಸರ್ಟಿಫಿಕೇಟ್‌ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ – Kannada News | Karnataka VAHAN 4 Crisis: Emission Certificate Delays Hit Vehicle Owners Hard

ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ

ಬೆಂಗಳೂರು, ಡಿಸೆಂಬರ್ 24: ಕೇಂದ್ರ ಸರ್ಕಾರದ ವಾಹನ್–4 (Parivahan Portal) ಪೋರ್ಟಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ರಾಜ್ಯದ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ಅಪ್ಡೇಟ್ ಆಗುತ್ತಿಲ್ಲ. ಈ ಸಮಸ್ಯೆಯಿಂದ ವೈಟ್ ಬೋರ್ಡ್ (ಖಾಸಗಿ) ಹಾಗೂ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಬಾಡಿಗೆಗೆ ಹೋಗುವವರ ಪರದಾಟ

ವಾಹನ್–4 ನಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗದ ಕಾರಣ ಸಾವಿರಾರು ಟೂರ್ಸ್ ಅಂಡ್ ಟ್ರಾವೆಲ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಶಬರಿಮಲೆ ಯಾತ್ರೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಬಾಡಿಗೆ ಹೋಗಲು ಸಾಧ್ಯವಾಗದೆ ವಾಹನ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಹೊರ ರಾಜ್ಯಗಳಿಗೆ ತೆರಳಲು ಅಗತ್ಯವಿರುವ ಸ್ಪೆಷಲ್ ಪರ್ಮಿಟ್ ಕೂಡ ದೊರೆಯುತ್ತಿಲ್ಲ. ಅಲ್ಲದೆ, ಅಪಘಾತ ಸಂಭವಿಸಿದರೆ ಇನ್ಶುರೆನ್ಸ್ ಕ್ಲೈಮ್ ಕೂಡ ಆಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.

ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ?

ಅಕ್ಕಪಕ್ಕದ ರಾಜ್ಯಗಳಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗುತ್ತಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಈ ಸಮಸ್ಯೆ ಮುಂದುವರಿದಿದೆ. ಈ ಕುರಿತು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಅಸೋಸಿಯೇಷನ್ ಸಾರಿಗೆ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ವಾಹನ ಮಾಲೀಕರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಡೆವಿಲ್​​’ಗೆ ಅಸಲಿ ಚಾಲೆಂಜ್ ಈಗ ಶುರು; ಬಜೆಟ್ ಎಷ್ಟು? ಗಳಿಕೆ ಎಷ್ಟು? – Kannada News | Darshan’s ‘Devil’ Box Office: Faces Stiff Challenge from ‘Mark’ and ’45’ Movies

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಈ ವಾರ ಎರಡು ದೊಡ್ಡ ಚಾಲೆಂಜ್​​ಗಳು ಎದುರಾಗುತ್ತಾ ಇವೆ. ಅದುವೇ ಮಾರ್ಕ್ ಹಾಗೂ ‘45’ ಸಿನಿಮಾಗಳು. ಎರಡೂ ಭಿನ್ನ ಜಾನರ್​ ಚಿತ್ರಗಳು. ಎರಡೂ ಚಿತ್ರಕ್ಕೆ ಅದರದ್ದೇ ಆದ ಆಡಿಯನ್ಸ್ ಇದ್ದಾರೆ. ಈ ಎರಡೂ ಸಿನಿಮಾಗಳು ಡೆವಿಲ್ ಕಲೆಕ್ಷನ್​​ಗೆ ಸಾಕಷ್ಟು ಹೊಡೆತ ಕೊಡೋ ಎಲ್ಲಾ ಸಾಧ್ಯತೆ ಇದೆ. ಈಗೇ ತಗ್ಗಿರೋ ಕಲೆಕ್ಷನ್, ನಂತರ ಪಾತಾಳ ಕಾಣಲಿದೆ.

‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆ ತಕ್ಕ ಮಟ್ಟಿಗೆ ರೀಚ್ ಆಗಲು ಸಿನಿಮಾ ಬಳಿ ಸಾಧ್ಯವಾಗಿದೆ. ಈ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆ ಬಳಿಕ ನಿಧಾನವಾಗಿ ಸಿನಿಮಾ ಗಳಿಕೆಯಲ್ಲಿ ಕುಸಿತ ಕಂಡಿತು. ಈಗ ಸಿನಿಮಾದ ಒಟ್ಟಾರೆ ಕಲೆಕ್ಷನ್ 33.26 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಆಗಿದೆ.

ಚಿತ್ರದ ಬಜೆಟ್ ಸರಿ ಸುಮಾರು 45 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಟಿವಿ ಹಕ್ಕು, ಒಟಿಟಿ ಹಕ್ಕು ಮಾರಾಟ ಸೇರಿದರೂ ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಲಾಭ ಆಗೋದು ಅನುಮಾನವೇ. ಮುಂದಿನ ದಿನಗಳಲ್ಲಿ ಚಿತ್ರದ ಲೈಪ್​ಟೈಮ್ ಕಲೆಕ್ಷನ್ ಇನ್ನು ತೀವ್ರವಾಗಿ ಏರಿಕೆ ಕಾಣೊದು ಅನುಮಾನವೇ.

ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಹೀಗಿರುವಾಗಲೇ ಅವರ ಚಿತ್ರ ತೆರೆಗೆ ಬಂದಿದೆ. ಈ ಸಿನಿಮಾ ಪ್ರಚಾರ ಜವಾಬ್ದಾರಿಯನ್ನು ಅಭಿಮಾನಿಗಳು ವಹಿಸಿಕೊಂಡಿದ್ದರು. ಅವರು ಒಂದು ಹಂತಕ್ಕೆ ಸಿನಿಮಾನ ಮೇಲಕ್ಕೆ ತೆಗೆದುಕೊಂಡು ಹೋದರು. ಈಗ ‘ಮಾರ್ಕ್’ ಹಾಗೂ ‘45’ ಚಿತ್ರದಿಂದ ಸಿನಿಮಾ ಸಾಕಷ್ಟು ಸ್ಪರ್ಧೆ ಎದುರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಉದ್ಘಾಟನೆಗೆ ತಡವಾಯ್ತೆಂದು ಓಡೋಡಿ ಬಂದ ಮೇಯರ್, ಕಾಯದೆ ಹೊರಟೇ ಬಿಡ್ತು ರೈಲು – Kannada News | Train Leaves on Time as Mexican Mayor Misses Inaugural Ride

ಮೆಕ್ಸಿಕೋ, ಡಿಸೆಂಬರ್ 24: ಮೇಯರ್ ಉದ್ಘಾಟನೆಗೆ ತಡವಾಗಿ ಬಂದಿದ್ದಕ್ಕೆ ರೈಲು ನಿಲ್ಲಲೇ ಇಲ್ಲ, ಮೇಯರ್​ಗೆ ಕಾಯದೆ ಹೊರಟೇ ಬಿಟ್ಟಿತ್ತು. ಈ ಘಟನೆ ನಡೆದಿದ್ದು ಮೆಕ್ಸಿಕೋದಲ್ಲಿ. ಹೊಸ ರೈಲು ಉದ್ಘಾಟನೆ ಕಾರ್ಯಕ್ರಮ ಅಂದು ನಡೆಯಬೇಕಿತ್ತು. ಸಮಯಕ್ಕೆ ಸರಿಯಾಗಿ ಬರಲಾಗದೆ ಮೇಯರ್ ತಡವಾಗಿ ಓಡುತ್ತಾ ಬಂದಿದ್ದಾರೆ. ಅವರು ಬರುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಅವರಿಗಾಗಿ ಒಂದು ನಿಮಿಷವೂ ಕಾಯಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Bengaluru Air Quality: ಬೆಂಗಳೂರಿನಲ್ಲಿ ಉಸಿರಾಟಕ್ಕೆ ಕುತ್ತು ಗಾಳಿಯಲ್ಲಿರುವ ಈ ಅಗೋಚರ ಕಣಗಳು! – Kannada News | Bangalore Air Pollution Crisis: Bengaluru is reminding Delhi in terms of Air quality, hazardous PM level

ಬೆಂಗಳೂರಿನಲ್ಲಿ ಉಸಿರಾಟಕ್ಕೆ ಕುತ್ತು ಗಾಳಿಯಲ್ಲಿರುವ ಈ ಅಗೋಚರ ಕಣಗಳು!

ಬೆಂಗಳೂರು, ಡಿಸೆಂಬರ್ 23: ಕಳೆದ 5 ವರ್ಷಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality) ಹದಗೆಡುತ್ತಲೇ ಇದ್ದು, ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದಿನ ಬೆಂಗಳೂರಿನಲ್ಲಿ ಗಾರ್ಡನ್ ಸಿಟಿಯ ತಂಪಾದ ಗಾಳಿಗಿಂತ ಹೆಚ್ಚಾಗಿ ‘ಧೂಳಿನ ಕಣಗಳೇ’ ನಮ್ಮನ್ನು ಆವರಿಸಿವೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 170 ಇದ್ದು, ನಗರದ ಹಲವು ಭಾಗಗಳಲ್ಲಿ ಗಾಳಿಯು ‘ಅಪಾಯಕಾರಿ’ ಮಟ್ಟದಲ್ಲಿದೆ. ಮುಖ್ಯವಾಗಿ ಗಾಳಿಯಲ್ಲಿರುವ PM2.5 ಮತ್ತು PM10 ಪ್ರಮಾಣ ಹೆಚ್ಚಿದ್ದು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳನ್ನೂ ಹೆಚ್ಚಿಸಿದೆ.

ಏರ್ ಕ್ವಾಲಿಟಿ ಹದಗೆಡಿಸುತ್ತಿದೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ

ಬೆಂಗಳೂರಿನ ಇಂದಿನ ಗಾಳಿಯಲ್ಲಿ PM2.5, 82 µg/m³ ಇದ್ದು, PM10 119 µg/m³ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಸುರಕ್ಷಿತ ಮಿತಿಗಿಂತ (15 µg/m³) ಸುಮಾರು 4.2 ಪಟ್ಟು ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಎಂದರೆ ವಾಯುವಿನಲ್ಲಿರುವ ಸಣ್ಣ ಗಾತ್ರದ ಕಣಗಳಾದರೆ, PM10 ಎಂದರೆ ಸ್ವಲ್ಪ ದೊಡ್ಡ ಗಾತ್ರದ ಕಣಗಳಾಗಿವೆ.

ಬೆಂಗಳೂರಿನಲ್ಲಿ ಈಗ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದ್ದು, ನಗರದ ಮಾಲಿನ್ಯಕ್ಕೆ 42% ರಷ್ಟು ಕೊಡುಗೆ ನೀಡುತ್ತಿರುವುದು ಈ ವಾಹನಗಳ ಹೊಗೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಹೀಗಿರುವಾಗ ಬಳ್ಳಾರಿಯ ಜನ ಮುಂಜಾಗೃತಾ ಕ್ರಮ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

ಯಾಕೀ ಕಣಗಳು ಅಪಾಯಕಾರಿ

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –170
  • ಮಂಗಳೂರು – 138
  • ಮೈಸೂರು – 123
  • ಬೆಳಗಾವಿ – 168
  • ಕಲಬುರ್ಗಿ – 119
  • ಶಿವಮೊಗ್ಗ – 79
  • ಬಳ್ಳಾರಿ –198,
  • ಹುಬ್ಬಳ್ಳಿ- 108,
  • ಉಡುಪಿ –123
  • ವಿಜಯಪುರ –97

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:28 am, Wed, 24 December 25

Source link

ವಿಷ್ಣುವರ್ಧನ್ ಕೊನೆಯ ವರ್ಷಗಳಲ್ಲಿ ಹಾಗೆ ನಡೆದುಕೊಂಡಿದ್ದೇಕೆ? ವಿವರಿಸಿದ ಕಿಚ್ಚ ಸುದೀಪ್ – Kannada News | Kichcha Sudeep’s Life Lesson: Praised Vishnuvardhan’s Wisdom

ಸುದೀಪ್ (Sudeep) ಅವರು ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಸುದೀಪ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ‘ಮಾರ್ಕ್’ ಪ್ರೀರಿಲೀಸ್ ಈವೆಂಟ್​​ನಲ್ಲಿ ಮಾತನಾಡುವಾಗ ಅವರು ಆಡಿದ ಮಾತು ಚರ್ಚೆಗೆ ಕಾರಣ ಆಗಿತ್ತು. ಈ ವಿವಾದ ಮಧ್ಯೆ ಸುದೀಪ್ ಅವರು ಒಂದು ಜೀವನದ ಪಾಠ ಹೇಳಿದ್ದಾರೆ. ‘ನಮ್ಮ ಜೊತೆ ನಿಂತುಕೊಳ್ಳುತ್ತಾರೆ ಎಂಬುದು ಗೊತ್ತಿದ್ದರೆ ಮಾತ್ರ ಯುದ್ಧಕ್ಕೆ ಹೋಗಿ’ ಎಂದು ಕಿವಿ ಮಾತು ಹೇಳಿದ್ದಾರೆ ಸುದೀಪ್.

ವಿಷ್ಣುವರ್ಧನ್ ಅವರಿಗೆ ಸುದೀಪ್ ತುಂಬಾನೇ ಆಪ್ತರಾಗಿದ್ದರು. ವಿಷ್ಣು ಅವರನ್ನು ಸುದೀಪ್ ಯಾವಾಗಲೂ ಪ್ರೀತಿಯಿಂದ ದಾದಾ ಎನ್ನುತ್ತಿದ್ದರು. ಕಿಚ್ಚ ಅವರು ವಿಷ್ಣುವರ್ಧನ್ ಕಂಡ ರೀತಿಯ ಬಗ್ಗೆ ಹೇಳಿದ್ದರು. ಅವರು ತಮ್ಮ ಕೊನೆಯ ವರ್ಷಗಳಲ್ಲಿ ತುಂಬಾನೇ ಸೈಲೆಂಟ್ ಆಗಿಯೇ ಇದ್ದರಂತೆ. ಹೀಗೇಕೆ ಎಂಬ ಪ್ರಶ್ನೆಗೆ ಸುದೀಪ್ ಉತ್ತರಿಸಿದರು.

‘ವಿಷ್ಣುವರ್ಧನ್ ದೊಡ್ಡ ವ್ಯಕ್ತಿ. ಅವರು ಬರ್ತಾ ಬರ್ತಾ ಮನೆಯಲ್ಲಿ ದೇವರು ರೀತಿ ಕೂತಿರುತ್ತಿದ್ದರು. ಅವರಿಗೆ ಇರೋ ತಾಕತ್ತಿಗೆ ಎಲ್ಲವನ್ನೂ ಬಗೆಹರಿಸಬಹುದಿತ್ತು. ಆದರೆ, ನೋಡಿ ನೋಡಿ ಸಾಕಾಗಿತ್ತು. ಅಪ್ಪಾಜಿ ಹೀಗಾಗ್ತಾ ಇದೆ ಎಂದು ಹೇಳಿದರೆ ಕಾಫಿ ಕುಡಿಯಿರಿ ಆರಾಮಾಗಿ ಇರಿ ಎನ್ನುತ್ತಿದ್ದರು. ನೀವು ಗಲಾಟೆಗೆ ಹೋದರೆ ನಿಮ್ಮ ಜೊತೆ ಇದ್ದವರು ಇರುತ್ತಲೇ ಇರಲಿಲ್ಲ’ ಎನ್ನುತ್ತಿದ್ದರು ಸುದೀಪ್.

ಇದನ್ನೂ ಓದಿ: ‘ಈ ಹಿಂದೆ ದರ್ಶನ್ ಬಗ್ಗೆ ಕೆಟ್ಟದ್ದು ಮಾತನಾಡಿದ್ರೆ ತೋರಿಸಲಿ’; ಕಿಚ್ಚ ಸುದೀಪ್ ಸವಾಲು

‘ಅದು ಅವರ ಅನುಭವ. ನಾವು ಹೇಗೆ ಇರಬೇಕು ಎಂಬುದನ್ನು ನೋಡಿಕೊಂಡರೆ ಸೊಸೈಟಿ ಇನ್ನೂ ಚೆನ್ನಾಗಿ ಆಗುತ್ತದೆ. ನಮ್ಮನೆ ಸ್ವಚ್ಛವಾಗಿಟ್ಟುಕೊಂಡರೆ ಅದರಿಂದ ಸ್ಫೂರ್ತಿ ಪಡೆದು ಪಕ್ಕದ ಮನೆಯವರು ಕ್ಲೀನ್ ಆಗಿ ಇಟ್ಟುಕೊಳ್ಳಬಹುದು. ಹೀಗೆ ಮುಂದುವರಿದು ಇಡೀ ದೇಶ ಕ್ಲೀನ್ ಆಗುತ್ತದೆ’ ಎನ್ನುತ್ತಾರೆ ಸುದೀಪ್.
‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಜಯ್ ಕಾರ್ತಿಕೇಯನ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:34 am, Wed, 24 December 25

Source link