Headlines

nagaraj11081993

Video: ಮಕ್ಕಳಿಂದ ಗೊಂಬೆಯ ಶವ ಯಾತ್ರೆ, ಗಾಜಾ ಯುದ್ಧ ಮುಗ್ಧ ಮನಸ್ಸುಗಳ ಮೇಲೆ ಎಂಥಾ ಪರಿಣಾಮ ಬೀರಿದೆ ನೋಡಿ

ಗಾಜಾ, ಏಪ್ರಿಲ್ 03: ಗಾಜಾ ಯುದ್ಧವು ಕೇವಲ ಪ್ರದೇಶದ ಮೇಲೆ ನಡೆದ ದಾಳಿಯಾಗಿರಲಿಲ್ಲ, ಮನಸ್ಸುಗಳ ಮನಸ್ಸುಗಳ ಮೇಲೆ ನಡೆದ ಯುದ್ಧವೂ ಆಗಿತ್ತು. ಯಾವಾಗ ಎಲ್ಲಿ ಏನಾಗುತ್ತೋ, ನಾಳೆ ನಾವು ಇರ್ತೀವೋ ಇಲ್ವೋ ಎನ್ನುವ ಆತಂಕದಲ್ಲೇ ಜನರು ದಿನದೂಡುವಂತಾಗಿತ್ತು. ಎಷ್ಟೋ ಜನ ಮನೆ ಕಳೆದುಕೊಂಡು ಮಕ್ಕಳು ಬೀದಿ ಪಾಲಾಗಿದ್ದರು. ಗಾಜಾದ ಶೆಲ್ಟರ್​ನಲ್ಲಿರುವ ಐವರು ಮಕ್ಕಳ ಆಟ ನೋಡಿದಾಗ ಈ ಯುದ್ಧ ಅವರ ಅಂತರಾಳವನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪುಟ್ಟ ಪುಟ್ಟ ಮಕ್ಕಳು ಗೊಂಬೆಯ ಶವಯಾತ್ರೆ…

Read More

Tech Tips: ಲ್ಯಾಪ್‌ಟಾಪ್ ಚಾರ್ಜರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

ಬೆಂಗಳೂರು (ಏ. 03): ಇತ್ತೀಚಿನ ದಿನಗಳಲ್ಲಿ, ಜನರು ಸ್ಮಾರ್ಟ್‌ಫೋನ್‌ಗಳನ್ನು (Smartphones) ಎಷ್ಟು ಬಳಸುತ್ತಾರೆಂದರೆ, ದಿನಕ್ಕೆ ಒಂದರಿಂದ ಎರಡು ಬಾರಿ ಅವುಗಳನ್ನು ಚಾರ್ಜ್ ಮಾಡಬೇಕಾಗುತ್ತದೆ. ಆದರೆ, ಕೆಲವರು ಫೋನ್ ಚಾರ್ಜರ್ ಅನ್ನು ಹೊರಹೋದಾಗ ತೆಗೆದುಕೊಂಡು ಹೋಗಲು ಮರೆತು ಬಿಡುತ್ತಾರೆ. ಒಂದುವೇಳೆ ಫೋನ್ ಚಾರ್ಜರ್ ಕಳೆದುಹೋದರೆ, ಹಾನಿಗೊಳಗಾದರೆ, ಅವರು ತಮ್ಮ ಲ್ಯಾಪ್‌ಟಾಪ್ ಚಾರ್ಜರ್‌ನಿಂದ ತಮ್ಮ ಫೋನ್ ಅನ್ನು ಚಾರ್ಜ್ ಮಾಡಬಹುದು ಎಂಬುದು ನಿಮಗೆ ಗೊತ್ತೆ. ಆದಾಗ್ಯೂ, ಇದು ಎಲ್ಲಾ ಫೋನ್‌ಗಳಿಗೆ ಸಪೋರ್ಟ್ ಮಾಡುವುದಿಲ್ಲ. ಹೆಚ್ಚಿನ ಫೋನ್‌ಗಳು ಲ್ಯಾಪ್‌ಟಾಪ್ ಚಾರ್ಜರ್‌ನೊಂದಿಗೆ ಸುಲಭವಾಗಿ…

Read More

PSL 2026: ಪಾಕ್ ಸೂಪರ್ ಲೀಗ್​ನಲ್ಲಿ ಆಟಗಾರರ ಮಧ್ಯಯೇ ಗಲಾಟೆ: ವಾರ್ನರ್-ಇನ್ನೋರ್ವ ಪ್ಲೇಯರ್ ಮಧ್ಯೆ ಫೈಟ್

ಬೆಂಗಳೂರು (ಏ. 03): ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಶುರುವಾಗಿದ್ದರೆ ಅತ್ತ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಐಪಿಎಲ್​ನಲ್ಲಿ ಅವಕಾಶ ಸಿಗದ ಕೆಲ ವಿದೇಶಿ ಆಟಗಾರರು ಪಿಎಸ್​ಎಲ್​ನಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಕೂಡ ಪಾಕಿಸ್ತಾನ ಸೂಪರ್ ಲೀಗ್ 2026 ರಲ್ಲಿ ಆಡುತ್ತಿದ್ದಾರೆ. ಏಪ್ರಿಲ್ 2 ರಂದು, ವಾರ್ನರ್ ನಾಯಕತ್ವದ ಕರಾಚಿ ಕಿಂಗ್ಸ್ ತಂಡ ರಾವಲ್​ಪಿಂಡಿಜ್ ವಿರುದ್ಧ ಸೆಣಸಾಡಿತು. ಆದರೆ, ಪಂದ್ಯದ ನಂತರ ಒಂದು ವಿಚಿತ್ರ ಘಟನೆ…

Read More

ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಬೆಂಗಳೂರು, ಏ.3: ಬೆಂಗಳೂರಿನ ಕೆ.ಆರ್​​ ಮಾರುಕಟ್ಟೆಗೆ (K.R. Market) ಬೇರೆ ಬೇರೆ ಕಡೆಯಿಂದ ಜನ ಬರುತ್ತಾರೆ. ಇಲ್ಲಿ ಎಲ್ಲವೂ ಸಿಗುತ್ತದೆ. ಹಾಗೂ ಅತೀ ಕಡಿಮೆ ದರದಲ್ಲಿ ದೊರೆಯುತ್ತದೆ. ಈ ಕಾರಣಕ್ಕೆ ಇಲ್ಲಿ ಜನ ತುಂಬಿರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಬಗ್ಗೆ ಆಗ್ಗಾಗೆ ದೂರುಗಳು ಬರುತ್ತಿರುತ್ತದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಲವು ಬದಲಾವಣೆಗಳನ್ನು ತರಲಿದೆ. ಬೆಂಗಳೂರು ಕೇಂದ್ರ ನಗರ ನಿಗಮದ ವ್ಯಾಪ್ತಿಯಲ್ಲಿರುವ ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ…

Read More

ನೀವು ನಮ್ಮ ಸೇತುವೆ ಕೆಡವಿದ್ರಾ? ನಾವು ಈ 8 ಸೇತುವೆಗಳನ್ನು ಹೇಗೆ ಕೆಡಗ್ತೀವಿ ನೋಡಿ, ಇರಾನ್ ಸವಾಲು

ಟೆಹ್ರಾನ್, ಏಪ್ರಿಲ್ 03: ಇರಾನಿನ ಕರಾಜ್ ಸೇತುವೆ(Bridge)ಯ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವು ಗಲ್ಫ್ ಮಿತ್ರ ರಾಷ್ಟ್ರಗಳ ಮೇಲೆ ಮತ್ತಷ್ಟು ಹೊರೆಯನ್ನು ಹೆಚ್ಚಿಸಿದೆ. ಮಧ್ಯಪ್ರಾಚ್ಯದ ಅತಿ ಎತ್ತರದ ಸೇತುವೆ ಎಂದು ಪರಿಗಣಿಸಲಾದ ಕರಾಜ್ ಸೇತುವೆಯ ಮೇಲಿನ ದಾಳಿಯ ನಂತರ, ದಿಗ್ಭ್ರಮೆಗೊಂಡ ಇರಾನ್ ವಿವಿಧ ಗಲ್ಫ್ ದೇಶಗಳಲ್ಲಿರುವ ಎಂಟು ಹೊಸ ಸೇತುವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇರಾನ್ ಈಗ ಈ ಎಂಟು ಸೇತುವೆಗಳನ್ನು ಗುರಿಯಾಗಿಸುವುದಾಗಿ ಹೇಳಿಕೊಂಡಿದೆ. ಕರಾಜ್ ಬಳಿಯ ಪ್ರಮುಖ ಸೇತುವೆಯ ಮೇಲೆ ಮಾರಕ ವಾಯುದಾಳಿ ನಡೆದ ಕೆಲವೇ…

Read More

‘ಧುರಂಧರ್ 2’ ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಬಳಿಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಿತು. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್​​​ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಈ ಚಿತ್ರಕ್ಕೆ ‘ಧುರಂಧರ್’ ನಟನ ಎಂಟ್ರಿ ಆಗಿದೆ. ಅದೂ ವಿಲನ್ ಆಗಿ ಎನ್ನಲಾಗುತ್ತಿದೆ. ‘ಧುರಂಧರ್’ ಹಾಗೂ ‘ಧುಂಧರ್ 2’ ಚಿತ್ರವನ್ನು ಆದಿತ್ಯ ಧಾರ್…

Read More

ಟ್ರಂಪ್ ಸರ್ಕಾರದಿಂದ ಫಾರ್ಮಾ ಉತ್ಪನ್ನಗಳಿಗೆ ನೂರಕ್ಕೆ ನೂರು ಟ್ಯಾರಿಫ್; ಲೋಹಗಳಿಗೂ ಭರ್ಜರಿ ಸುಂಕ

ವಾಷಿಂಗ್ಟನ್, ಏಪ್ರಿಲ್ 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಟ್ಯಾರಿಫ್ ಗುಮ್ಮ ಹೊರತಂದಿದ್ದಾರೆ. ಕೆಲ ಫಾರ್ಮಾ ಉತ್ಪನ್ನಗಳ (Pharma products) ಮೇಲೆ ಶೇ. 100ರಷ್ಟು ಟ್ಯಾರಿಫ್ ವಿಧಿಸುವ ಕ್ರಮವನ್ನು ಟ್ರಂಪ್ ಕೈಗೊಂಡಿದ್ದಾರೆ. ಫಾರ್ಮಾ ಕ್ಷೇತ್ರದಲ್ಲಿ ಅಮೆರಿಕದ ‘ಮೋಸ್ಟ್ ಫೇವರ್ಡ್ ನೇಶನ್’ ಪ್ರೈಸಿಂಗ್ ಸ್ಕೀಮ್​ಗೆ ಜೋಡಿತವಾಗದ ದೇಶಗಳ ಫಾರ್ಮಾ ಕಂಪನಿಗಳನ್ನು ಗುರಿ ಮಾಡಲಾಗಿದೆ. ಅಮೆರಿಕ ಸರ್ಕಾರದ ಹೊಸ ನೀತಿಗೆ ಬದ್ಧವಾಗಲು ಫಾರ್ಮಾ ಕಂಪನಿಗಳಿಗೆ ಕೆಲ ತಿಂಗಳು ಗಡುವು ಕೊಡಲಾಗಿದೆ. ದೊಡ್ಡ ಕಂಪನಿಗಳಿಗೆ 120 ದಿನದ ಗಡುವು ಇದೆ….

Read More

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರು, ಏಪ್ರಿಲ್ 3: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರು ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಉಷ್ಣಾಂಶ ಹೆಚ್ಚಳದಿಂದಾಗಿ ‘ಶಾಖಾಘಾತ (Heat Stroke)’ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ. ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್​ನಿಂದ 6.4 ಡಿಗ್ರಿ ಸೆಲ್ಶಿಯಸ್​​ನಷ್ಟು ತಾಪಮಾನ ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ…

Read More

Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ

ಪ್ರತಿಯೊಬ್ಬ ಅಪ್ಪನಿಗೆ (father) ಮುದ್ದಿನ ಮಗಳು ಪುಟ್ಟ ರಾಜಕುಮಾರಿಯೇ. ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಅಪ್ಪನಿಗೂ ಮಗಳೆಂದರೆ ಜೀವಕ್ಕಿಂತ ಹೆಚ್ಚು. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮನು ತನ್ನ ಅಮ್ಮನಿಗೆ ಗದರಿದೆ. ತನ್ನ ಅಮ್ಮನು ಅಪ್ಪನಿಗೆ ಮೆಲ್ಲನೆ ಒಂದೇಟು ಹೊಡೆಯುತ್ತಿದ್ದಂತೆ ಈ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದೆ. ಈ ಪುಟಾಣಿಯ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. baby-doll-udhra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ…

Read More

ಆಮೇಲೆ ಶಾಂತಿ ಜಪ ಮಾಡಿ, ಮೊದಲು ನಮ್ಮ ಸಾಲ ವಾಪಸ್ ಕೊಡಿ ಎಂದು ಪಾಕಿಸ್ತಾನವನ್ನು ಕೇಳಿದ ಯುಎಇ

ಇಸ್ಲಾಮಾಬಾದ್, ಏಪ್ರಿಲ್ 03: ಅಮೆರಿಕ, ಇಸ್ರೇಲ್-ಇರಾನ್ ನಡುವೆ ಶಾಂತಿ ಸ್ಥಾಪನೆಗೆ ಮುಂದಾಗಿರುವ ಪಾಕಿಸ್ತಾನ(Pakistan)ಕ್ಕೆ ಯುಎಇ ದೊಡ್ಡ ಶಾಕ್ ಕೊಟ್ಟಿದೆ. ಪಾಕಿಸ್ತಾನಕ್ಕೆ ನೀಡಿದ್ದ ಸಾಲವನ್ನು ಹಿಂದಿರುಗಿಸುವಂತೆ ಯುಎಇ ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಏಪ್ರಿಲ್ 17ರ ಒಳಗೆ ಸಾಲವನ್ನು ವಾಪಸ್ ಕೊಡಿ ಎಂದು ಕೇಳಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಹೆಚ್ಚಿನ ಬಡ್ಡಿ ಕೂಡ ವಿಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇರಾನ್ ಮತ್ತು ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ಪಾಕಿಸ್ತಾನ ಬಯಸುತ್ತದೆ. ಈ ಉದ್ದೇಶಕ್ಕಾಗಿ,…

Read More