All posts by nagaraj11081993

ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!

ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು, ಮಾರ್ಚ್​ 28: ರವಿಶಂಕರ್ ಗುರೂಜಿ (Shri Shri Ravi Shankar Guruji) ವಿರುದ್ಧದ ಭೂ ಕಬಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ತಿಳಿಸಿ ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಸ್ಪಷ್ಟ ಆರೋಪವಿಲ್ಲ, ಸಾಕ್ಷಿಗಳಿಲ್ಲ!

ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025ರಂದು ಕರ್ನಾಟಕ ಭೂ ಆದಾಯ ಕಾಯ್ದೆ 1964 ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಕಾಗ್ಗಳಿಪುರ ಗ್ರಾಮದ ವಿವಿಧ ಸರ್ವೇ ಸಂಖ್ಯೆಗಳಲ್ಲಿನ ಸರ್ಕಾರಿ ಭೂಮಿ, ಕೆರೆ ಮತ್ತು ರಾಜಕಾಲುವೆ ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪಿಐಎಲ್, ಲ್ಯಾಂಡ್ ಗ್ರಾಬಿಂಗ್ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ತಹಶೀಲ್ದಾರ್ ವರದಿ ಆಧರಿಸಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ 70 ಗಂಟೆ ಕೆಲಸ ಮಾಡುವುದಕ್ಕಿಂತ, ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ: ರವಿಶಂಕರ್ ಗುರೂಜಿ

ಈ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್ ದೂರುದಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲವೆಂದು ಗಮನಿಸಿದೆ. ಹೀಗಾಗಿ ಕೇವಲ ಪ್ರತಿವಾದಿಯಾಗಿ ಹೆಸರು ಸೇರಿಸಿರುವುದನ್ನು ಆಧಾರವನ್ನಾಗಿಟ್ಟುಕೊಂಡು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಾಥಮಿಕ ಸಾಕ್ಷ್ಯಗಳಿಲ್ಲದೆ ಪ್ರಕರಣ ಮುಂದುವರಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ಗುರೂಜಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಈ ನಿಯಮವು ಫೀಲ್ಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಏನಿದು ಬಾಡಿ ಕಂಟ್ರೋಲ್ ನಿಯಮ?

ಬಾಡಿ ಕಂಟ್ರೋಲ್ ಎಂಬುದು ದೇಹದ ಮೇಲಿನ ನಿಯಂತ್ರಣ. ಅಂದರೆ ಇಲ್ಲಿ ಈ ನಿಯಮವನ್ನು ಫೀಲ್ಡರ್​ಗಳಿಗಾಗಿ ಪರಿಚಯಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಚ್ ಹಿಡಿದಾಗ ಈ ನಿಯಮ ಅನ್ವಯವಾಗಲಿದೆ.

ಕ್ಯಾಚ್ ಹಿಡಿಯುವಾಗ ಫೀಲ್ಡರ್ ಚೆಂಡಿನ ಮೇಲೆ ಮತ್ತು ತಮ್ಮ ದೇಹದ ಸಮತೋಲನದ ಮೇಲೆ ಎಷ್ಟು ನಿಯಂತ್ರಣ ಹೊಂದಿರಬೇಕು ಎಂಬುದರ ಕುರಿತು ಈಗಾಗಲೇ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಈ ಬಾರಿಯ ಐಪಿಎಲ್​ನ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ.

ಐಪಿಎಲ್ ಕ್ಯಾಚ್ ನಿಯಮಗಳು:

  • ಸಂಪೂರ್ಣ ನಿಯಂತ್ರಣ: ಐಪಿಎಲ್ ನಿಯಮ 33.3ರ ಪ್ರಕಾರ, ಫೀಲ್ಡರ್ ಚೆಂಡನ್ನು ಹಿಡಿದ ನಂತರ ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವವರೆಗೆ ಕ್ಯಾಚ್ ಪೂರ್ಣಗೊಳ್ಳುವುದಿಲ್ಲ.
  • ಸಂಭ್ರಮಾಚರಣೆ ಮತ್ತು ಸ್ಥಿರತೆ: ಫೀಲ್ಡರ್ ಕ್ಯಾಚ್ ಹಿಡಿದ ತಕ್ಷಣ ಸಂಭ್ರಮಿಸಲು ಶುರುಮಾಡಿ ಆ ಸಂದರ್ಭದಲ್ಲಿ ಚೆಂಡು ಕೈಜಾರಿದರೆ ಅಥವಾ ಅವರು ಸಮತೋಲನ ತಪ್ಪಿ ಬೌಂಡರಿ ಲೈನ್ ಮುಟ್ಟಿದರೆ ಅದನ್ನು ‘ನಾಟ್ ಔಟ್’ ಎಂದು ಪರಿಗಣಿಸಲಾಗುತ್ತದೆ.
  • ದೇಹದ ನಿಯಂತ್ರಣ: ಕ್ಯಾಚ್ ಹಿಡಿದ ಬಳಿಕ ದೇಹದ ಚಲನೆಯು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಸಂಭ್ರಮಿಸಬೇಕು. ಕ್ಯಾಚ್ ಹಿಡಿದ ತಕ್ಷಣವೇ ಚೆಂಡನ್ನು ಎಸೆಯುವಂತಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ಸಂಭ್ರಮದ ವೇಳೆ ಚೆಂಡು ಕೈ ಜಾರಿದರೆ ಅದನ್ನು ಕ್ಯಾಚ್ ಎಂದು ಪರಿಗಣಿಸಲಾಗುವುದಿಲ್ಲ. ಇದನ್ನೇ ಕ್ರಿಕೆಟ್​ನಲ್ಲಿ ಫೀಲ್ಡರ್​ಗಳ ಬಾಡಿ ಕಂಟ್ರೋಲ್ ಎಂದು ಕರೆಯಲಾಗುತ್ತದೆ.
  • ಬೌಂಡರಿ ಲೈನ್ ನಿಯಮ: ಫೀಲ್ಡರ್ ಬೌಂಡರಿ ಲೈನ್ ಒಳಗಿನಿಂದಲೇ ಜಿಗಿದು ಚೆಂಡನ್ನು ಹಿಡಿಯಬೇಕು. ಗಾಳಿಯಲ್ಲಿರುವಾಗ ಚೆಂಡನ್ನು ಒಳಕ್ಕೆ ತಳ್ಳಿ ನಂತರ ಮೈದಾನದ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಬೇಕು.
  • ರಿಲೇ ಕ್ಯಾಚ್: ಒಬ್ಬ ಫೀಲ್ಡರ್ ಬೌಂಡರಿ ಹೊರಗಿನಿಂದ ಪದೇ ಪದೇ ಜಿಗಿಯುತ್ತಾ (Bunny Hop) ಚೆಂಡನ್ನು ಒಳಕ್ಕೆ ತಳ್ಳುವುದು ಈಗ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ.
  • ಒಂದೇ ಅವಕಾಶ: ಫೀಲ್ಡರ್ ಬೌಂಡರಿ ಲೈನ್ ಒಳಗಿಂದ ಜಿಗಿದು ಒಮ್ಮೆ ಚೆಂಡನ್ನು ಒಳಗೆ ತಳ್ಳಲು ಪ್ರಯತ್ನಿಸಿ, ಬೌಂಡರಿ ದಾಟಿದ ಬಳಿಕ ಹೊರಗಿನಿಂದ ಜಿಗಿದು ಮತ್ತೆ ಹೊರ ತಳ್ಳಲು ಅವಕಾಶವಿಲ್ಲ. ಅಂದರೆ ಬೌಂಡರಿ ಲೈನ್​ ಒಳಗೆ ನಿಂತು ಗಾಳಿಯಲ್ಲಿ ಹಾರಿ ಚೆಂಡನ್ನು ಮತ್ತೊಮ್ಮೆ ಹೊರಹಾಕಿದರೆ ಅದನ್ನು ಸಿಕ್ಸ್ ಎಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: IPL 2026: RCB ಪರ ಇಬ್ಬರು ಪಾದಾರ್ಪಣೆ ಸಾಧ್ಯತೆ

ಈ ನಿಯಮಗಳು ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಮೂಲಕವೇ ಜಾರಿಗೆ ಬರಲಿದೆ ಎಂದು ಐಪಿಎಲ್ ಗರ್ವನರ್ ಕೌನ್ಸಿಲ್ ತಿಳಿಸಿದೆ.

 

 

Source link

Vaidurya Gemstone: ಕೇತು ದೋಷದಿಂದ ಮುಕ್ತಿ ಮತ್ತು ಹಠಾತ್ ಸಂಪತ್ತು ಪಡೆಯಲು ಈ ರತ್ನ ಧರಿಸಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತುವನ್ನು ಮೋಕ್ಷ ಕಾರಕ, ಆಧ್ಯಾತ್ಮಿಕತೆಯ ಅಧಿಪತಿ ಮತ್ತು ಹಠಾತ್ ಘಟನೆಗಳ ಪ್ರೇರಕ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಕೇತು ದುರ್ಬಲನಾಗಿದ್ದಾಗ ಅಥವಾ ಕೇತು ಮಹಾದಶೆ ನಡೆಯುತ್ತಿರುವಾಗ ಜೀವನದಲ್ಲಿ ಅನಿರೀಕ್ಷಿತ ಏರಿಳಿತಗಳು ಎದುರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ವೈಡೂರ್ಯ ಅಥವಾ ‘ಬೆಕ್ಕಿನ ಕಣ್ಣಿನ ರತ್ನ’ವು ಕೇವಲ ಒಂದು ಆಭರಣವಾಗಿ ಉಳಿಯದೆ, ಧರಿಸಿದವರ ಪಾಲಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವ್ಯಕ್ತಿಯನ್ನು ದುಷ್ಟ ಶಕ್ತಿಗಳಿಂದ ಕಾಪಾಡುವುದಲ್ಲದೆ, ಆರ್ಥಿಕ ಸ್ಥಿರತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವೈಡೂರ್ಯ ರತ್ನದಿಂದ ಲಭಿಸುವ ಅದ್ಭುತ ಬದಲಾವಣೆಗಳು:

ಈ ವಿಶಿಷ್ಟ ರತ್ನವನ್ನು ಧರಿಸುವುದರಿಂದ ಜೀವನದ ವಿವಿಧ ಹಂತಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ವ್ಯವಹಾರದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಮತ್ತು ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಲು ಇದು ಸಹಕಾರಿ. ವಿಶೇಷವಾಗಿ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಈ ರತ್ನವು ಹೊಸ ಭರವಸೆಯ ಬೆಳಕನ್ನು ನೀಡುತ್ತದೆ. ಕೇವಲ ಹಣಕಾಸು ಮಾತ್ರವಲ್ಲದೆ, ಮಾನಸಿಕ ನೆಮ್ಮದಿಯ ದೃಷ್ಟಿಯಿಂದಲೂ ಇದರ ಪ್ರಭಾವ ಅಪಾರ. ಅಜ್ಞಾತ ಭಯ, ಆತಂಕ ಮತ್ತು ನಕಾರಾತ್ಮಕ ಯೋಚನೆಗಳಿಂದ ಬಳಲುವವರಿಗೆ ಇದು ಧೈರ್ಯವನ್ನು ತುಂಬುತ್ತದೆ.

ಆಧ್ಯಾತ್ಮಿಕ ಹಾದಿಯಲ್ಲಿ ಸಾಗುವವರಿಗೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವವರಿಗೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ವೈಡೂರ್ಯವು ಪೂರಕವಾಗಿದೆ. ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ, ಚರ್ಮದ ಸಮಸ್ಯೆಗಳು, ಕೀಲು ನೋವು ಮತ್ತು ದೀರ್ಘಕಾಲದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಈ ರತ್ನವು ಚಮತ್ಕಾರಿಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಯಾರಿಗೆ ಈ ರತ್ನ ಹೆಚ್ಚು ಸೂಕ್ತ?

ವೈಡೂರ್ಯವು ಎಲ್ಲರಿಗೂ ಒಲಿಯುವುದಿಲ್ಲ; ಇದು ನಿರ್ದಿಷ್ಟ ಗ್ರಹಗತಿಗಳ ಮೇಲೆ ಅವಲಂಬಿತವಾಗಿದೆ. ಯಾರ ಜಾತಕದಲ್ಲಿ ಕೇತುವು 1, 3, 4, 5, 9 ಅಥವಾ 10ನೇ ಮನೆಗಳಲ್ಲಿ ಕುಳಿತು ದುರ್ಬಲನಾಗಿದ್ದಾನೋ, ಅಂತಹವರು ಈ ರತ್ನವನ್ನು ಧರಿಸುವುದು ಶ್ರೇಯಸ್ಕರ. ವಿಶೇಷವಾಗಿ ಯಾವುದೇ ತಿಂಗಳ 7, 17 ಅಥವಾ 25ನೇ ತಾರೀಖಿನಂದು ಜನಿಸಿದವರು, ಅಂದರೆ ಯಾರ ಅದೃಷ್ಟ ಸಂಖ್ಯೆ 7 ಆಗಿದೆಯೋ ಅವರಿಗೆ ಇದು ಅತ್ಯಂತ ಅದೃಷ್ಟದ ರತ್ನವಾಗಿದೆ. ಇದರೊಂದಿಗೆ ಕೇತು ಮಹಾದಶಾ ಅಥವಾ ಅಂತರದಶೆಯ ಕಠಿಣ ಅವಧಿಯನ್ನು ಎದುರಿಸುತ್ತಿರುವವರು ಇದರ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಧರಿಸುವ ಸರಿಯಾದ ಕ್ರಮ ಮತ್ತು ನಿಯಮಗಳು:

ರತ್ನದ ಸಂಪೂರ್ಣ ಫಲಿತಾಂಶ ಸಿಗಬೇಕಾದರೆ ಅದನ್ನು ಶಾಸ್ತ್ರೋಕ್ತವಾಗಿ ಧರಿಸುವುದು ಮುಖ್ಯ. ವೈಡೂರ್ಯವನ್ನು ಮಂಗಳವಾರ ಅಥವಾ ಶನಿವಾರದಂದು ಧರಿಸಲು ಸೂಚಿಸಲಾಗುತ್ತದೆ. ಈ ದಿನಗಳಲ್ಲಿ ರಾಹುಕಾಲವಿಲ್ಲದ ಶುಭ ಮುಹೂರ್ತವನ್ನು ನೋಡಿ, ಬೆಳ್ಳಿ ಅಥವಾ ಪಂಚಲೋಹದ ಉಂಗುರದಲ್ಲಿ ರತ್ನವನ್ನು ಜಡಿಸಬೇಕು. ನಂತರ ವಿಧಿವಿಧಾನದಂತೆ ಪೂಜೆ ಸಲ್ಲಿಸಿ, ಪುರುಷರು ಬಲಗೈಯ ಮತ್ತು ಮಹಿಳೆಯರು ಎಡಗೈಯ ಮಧ್ಯದ ಬೆರಳಿಗೆ ಧರಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

ನೆನಪಿಡಿ, ರತ್ನಗಳು ಗ್ರಹಗಳ ಶಕ್ತಿಯನ್ನು ಪ್ರತಿಫಲಿಸುತ್ತವೆ. ಆದ್ದರಿಂದ ಯಾವುದೇ ರತ್ನವನ್ನು ಧರಿಸುವ ಮೊದಲು ನುರಿತ ಜ್ಯೋತಿಷಿಗಳ ಬಳಿ ಜಾತಕ ವಿಶ್ಲೇಷಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಸರಿಯಾದ ಸಲಹೆಯೊಂದಿಗೆ ಧರಿಸಿದ ರತ್ನವು ನಿಮ್ಮ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ! ಮೂಲಭೂತ ಸೌಕರ್ಯವಿಲ್ಲದೆ ಕಾಡಂಚಿನ ಜನರು ಕಂಗಾಲು

ಚಾಮರಾಜನಗರ, ಮಾರ್ಚ್​ 28: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಕಯಾತನೆ ಅನುಭವಿಸುತ್ತಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಜೀವನ ಸಾಗುತ್ತಿದೆ. ರಸ್ತೆ ಇಲ್ಲದ ಕಾರಣ ಅನಾರೋಗ್ಯ ಸಂದರ್ಭದಲ್ಲಿ ರೋಗಿಗಳನ್ನು ಡೋಲಿಯಲ್ಲಿ 8 ಕಿಮೀ ದೂರ ಸಾಗಿಸಲು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಂಬ್ಯುಲೆನ್ಸ್ ಸೇವೆ ಸಿಗದಿರುವುದು ಗರ್ಭಿಣಿಯರ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಾರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ಸಾಧ್ಯವಾಗದೆ 5ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಸೂಕ್ತ ಸೌಕರ್ಯ ಒದಗಿಸಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೆ ಶಾಕ್ ನೀಡಲಿದೆಯೇ ರಷ್ಯಾ? ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತ!

ನವದೆಹಲಿ, ಮಾರ್ಚ್ 28: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ, ಎಲ್​ಪಿಜಿ ಗ್ಯಾಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ರಷ್ಯಾ (Russia) ಕೈಗೊಂಡಿದೆ. ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತನ್ನು (Crude Oil Export Ban) ಸ್ಥಗಿತಗೊಳಿಸಲು ರಷ್ಯಾ ಮುಂದಾಗಿದ್ದು, ಜುಲೈ 31 ರ ವರೆಗೆ ಇದು ಜಾರಿಯಲ್ಲಿರಲಿದೆ. ರಷ್ಯಾದ ಈ ನಿರ್ಧಾರ ಭಾರತದ (India) ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬ ಚರ್ಚೆ ಈಗ ಶುರುವಾಗಿದೆ.

ಉಕ್ರೇನ್ ಯುದ್ಧದ ನಂತರ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿದ್ದ ರಷ್ಯಾದ ಈ ನಡೆ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ, ಹಾರ್ಮುಜ್ ಜಲಸಂಧಿಯಲ್ಲಿ ಯುದ್ಧ ಭೀತಿಯಿಂದ ಭಾರತಕ್ಕೆ ಕಚ್ಚಾ ತೈಲ ಸಾಗಾಟಕ್ಕೆ ಅಡ್ಡಿಯಾದಾಗಲೂ ರಷ್ಯಾ ಆಪತ್ಬಾಂಧವನಂತೆ ಭಾರತಕ್ಕೆ ತೈಲ ಪೂರೈಕೆ ಮಾಡಿದೆ.

ಕಚ್ಚಾ ತೈಲ ರಫ್ತು ಸ್ಥಗಿತದ ರಷ್ಯಾ ನಿರ್ಧಾರಕ್ಕೆ ಕಾರಣವೇನು?

ಅಂತರರಾಷ್ಟ್ರೀಯ ಒಪ್ಪಂದದ ಭಾಗವಾಗಿ ಮತ್ತು ದೇಶದ ಆಂತರಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ರಷ್ಯಾ ಉತ್ಪಾದನೆಯನ್ನು ಕಡಿತಗೊಳಿಸುತ್ತಿದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆಯನ್ನು ಸ್ಥಿರವಾಗಿರಿಸಲು ರಷ್ಯಾ ಈ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಮೇಲೆ ಆಗುವ ಪರಿಣಾಮಗಳೇನು?

  • ರಿಯಾಯಿತಿ ತೈಲಕ್ಕೆ ಬ್ರೇಕ್: ಉಕ್ರೇನ್ ಯುದ್ಧದ ಬಳಿಕ ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಕಡಿಮೆ ದರದಲ್ಲಿ ಸಿಗುತ್ತಿದ್ದ ತೈಲ ಪೂರೈಕೆ ಈಗ ಇಲ್ಲವಾಗುವ ಆತಂಕ ಎದುರಾಗಿದೆ.
  • ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಪೂರೈಕೆ ಕಡಿಮೆಯಾದರೆ ಬೆಲೆ ಏರಿಕೆಯಾಗುವುದು ಸಹಜ. ಇದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ನೇರ ಪರಿಣಾಮ ಬೀರಬಹುದು.
  • ಬದಲಿ ಮಾರ್ಗಗಳ ಹುಡುಕಾಟ: ರಷ್ಯಾದಿಂದ ಪೂರೈಕೆ ಕಡಿಮೆಯಾದರೆ ಭಾರತ ಮತ್ತೆ ಇರಾಕ್, ಸೌದಿ ಅರೇಬಿಯಾದಂತಹ ಪಶ್ಚಿಮ ಏಷ್ಯಾ ರಾಷ್ಟ್ರಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇದು ಆಮದು ವೆಚ್ಚವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ ಕೋವಿಡ್​ನಂತಹ ಜಾಗತಿಕ ಪರಿಣಾಮ ಬೀರಬಹುದು: ಪುಟಿನ್

ಆದರೆ, ಭಾರತವು ಈಗಾಗಲೇ ರಷ್ಯಾದೊಂದಿಗೆ ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಂಡಿರುವುದರಿಂದ ತಕ್ಷಣಕ್ಕೆ ಯಾವುದೇ ದೊಡ್ಡ ಬಿಕ್ಕಟ್ಟು ಎದುರಾಗಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂತ್ಯಕಂಡ ‘ಲವ್ ಮಾಕ್ಟೇಲ್ 3’ ವಿವಾದ; ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯ

‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥೆ ನಮ್ಮದು ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರು. ಗುರು ದೇಶಪಾಂಡೆ ಆರೋಪ ಸುಳ್ಳು ಎಂದು ಹೇಳಿದ್ದ ಕೃಷ್ಣ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡೋದಾಗಿಯೂ ಎಚ್ಚರಿಸಿದ್ದು. ಅಲ್ಲದೆ ಸುದ್ದಿಗೋಷ್ಠಿ ವೇಳೆ ಗುರು ಅವರ ವೈಯಕ್ತಿಕ ವಿಷಯಗಳನ್ನು ಎಳೆದು ತಂದಿದ್ದರು. ಈಗ ಈ ವಿವಾದ ಸುಖಾಂತ್ಯವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭಯೆಲ್ಲಿ ಪ್ರಕರಣ ಇತ್ಯರ್ಥವಾಗಿದೆ.

‘ಲವ್ ಮಾಕ್ಟೇಲ್ 3’ ಸಿನಿಮಾದ ದ್ವಿತೀಯಾರ್ಧದಲ್ಲಿ ಕೋರ್ಟ್ ರೂಂ ವಿಷಯ ಇದೆ. ಈ ಬಗ್ಗೆ ರಾಘವೇಂದ್ರ ನಾಯ್ಕ್ ಹಾಗೂ ಗುರು ದೇಶಪಾಂಡೆ ಅಪಸ್ವರ ತೆಗೆದಿದ್ದರು. ‘ನಾವು ಕೃಷ್ಣಗೆ ಕಥೆ ಹೇಳಿದ್ದೆವು. ಆದರೆ, ಅವರು ಕಥೆ ಒಪ್ಪಿಕೊಳ್ಳಲಿಲ್ಲ. ‘ಲವ್ ಮಾಕ್ಟೇಲ್ 3’ ಸಿನಿಮಾ ನೋಡಿದ ಬಳಿಕ ಕಥೆ ನಮ್ಮದು ಎಂದು ಅನಿಸಿತು’ ಎಂದು ಕೃಷ್ಣ ಹೇಳಿದ್ದರು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಇಟ್ಟುಕೊಂಡು ಕಿತ್ತಾಡಿಕೊಂಡಿದ್ದರು. ಆರೋಪ ಪ್ರತ್ಯಾರೋಪ ಬಂತು.

ಮಾರ್ಚ್ 27ರಂದು ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಕೃಷ್ಣ, ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಇನ್ನಿತರು ಹಾಜರಿದ್ದರು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ವಾದ ಮುಂದಿಟ್ಟಿದ್ದಾರೆ. ವಾದದ ಬಳಿಕ ಪ್ರಕರಣಕ್ಕೆ ಸುಖಾಂತ್ಯ ನೀಡಲಾಗಿದೆ.

ಸುದ್ದಿಗೋಷ್ಠಿ ವೇಳೆ ಕೃಷ್ಣ ಅವರು ಗುರು ದೇಶಪಾಂಡೆ ಅವರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದಕ್ಕೆ ಕೃಷ್ಣ ಅವರು ಸಭೆಯಲ್ಲಿ ವೈಯಕ್ತಿಕವಾಗಿ ಕ್ಷಮೆ ಕೇಳಿದರು. ಇಬ್ಬರೂ ಕಥೆಯನ್ನು ಒಂದೇ ಘಟನೆಯಿಂದ ಸ್ಫೂರ್ತಿ ಪಡೆದರೂ, ಇಬ್ಬರ ಚಿತ್ರಕಥೆಯೂ ಬೇರೆ ಬೇರೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಮೂಲಕ ಪ್ರಕರಣವನ್ನು ಸುಖಾಂತ್ಯ ಮಾಡಲಾಗಿದೆ.

ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ

ರಾಘವೇಂದ್ರ ನಾಯ್ಕ್ ಅವರು ‘ಕೂಡಲಸಂಗಮ’ ಹೆಸರಿನ ಸಿನಿಮಾ ಮಾಡಲು ನಿರ್ಧರಿಸಿದ್ದರು. ಈ ಚಿತ್ರದ ಕಥೆ ‘ಲವ್ ಮಾಕ್ಟೇಲ್ 3’ಗೆ ಹೋಲಿಕೆ ಆಗುತ್ತದೆ ಎಂಬುದು ಇವರ ಆರೋಪ ಆಗಿತ್ತು. ಈಗ ವಿವಾದ ಬಗೆಹರಿದಿದ್ದು, ತಾವು ರಚಿಸಿದ ಕಥೆ ಇಟ್ಟುಕೊಂಡು ರಾಘವೇಂದ್ರ ನಾಯ್ಕ್ ಸಿನಿಮಾ ಮಾಡುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ

ಮಾರ್ಚ್ 22ರಿಂದ ಏಪ್ರಿಲ್ 04ರವರೆಗಿನ ಪ್ರೇಮ ಅಥವಾ ಪ್ರೀತಿಯ ಭವಿಷ್ಯ ಬಹಳ ಆಸಕ್ತಿದಾಯಕವೂ ರೋಮಾಂಚನಕಾರಿಯೂ ಆಗಿರಲಿದೆ. ನಿಮ್ಮ ಈ ವಾರದ ಕ್ಷಣಗಳು ಅಮೂಲ್ಯವಾದವುಗಳಾಗಿವೆ. ಅವಿಸ್ಮರಣೀಯತೆಯನ್ನು ರಮಣೀಯತೆಯನ್ನೂ ಕೊಡುತ್ತವೆ.

​ಮೇಷ:

ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದಿರಿ. ಹಳೆಯ ನೆನಪುಗಳು ಮರುಕಳಿಸಲಿವೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರುವ ಸಾಧ್ಯತೆಯಿದೆ. ಮಾತುಕತೆಯಲ್ಲಿ ಮೃದುತ್ವವಿರಲಿ.

​ವೃಷಭ:

ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರಲಿದೆ. ಪ್ರಿಯಕರನೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ. ಪರಸ್ಪರ ನಂಬಿಕೆ ವೃದ್ಧಿಯಾಗಲಿದೆ.

​ಮಿಥುನ:

ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಗತ್ಯ ವಾದಗಳಿಂದ ದೂರವಿರುವುದು ಒಳಿತು. ಪ್ರೇಮಿಗಳ ನಡುವೆ ಸಂವಹನ ಕೊರತೆ ಉಂಟಾಗಬಹುದು. ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಸಂಬಂಧ ಗಟ್ಟಿಯಾಗುವುದು.

​ಕರ್ಕಾಟಕ:

ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ವ್ಯಕ್ತಿ ಪರಿಚಯವಾಗುವ ಸಾಧ್ಯತೆಯಿದೆ. ಕುಟುಂಬದ ಬೆಂಬಲ ಪ್ರೇಮಕ್ಕೆ ದೊರೆಯಲಿದೆ.

​ಸಿಂಹ:

ಸಂಬಂಧದಲ್ಲಿ ಈ ವಾರ ಸ್ವಲ್ಪ ಏರಿಳಿತ ಇರಬಹುದು. ಸಂಗಾತಿಯ ಮೇಲೆ ಅನಗತ್ಯ ಸಂಶಯ ಬೇಡ. ಒಂಟಿಯಾಗಿರುವವರಿಗೆ ಹೊಸ ಸ್ನೇಹ ಆರಂಭವಾಗಬಹುದು. ಪ್ರೀತಿಯಲ್ಲಿ ಪಾರದರ್ಶಕತೆ ಇರಲಿ, ಸಂಬಂಧ ಸುಧಾರಿಸುವುದು.

​ಕನ್ಯಾ:

ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳಿಗೆ ಸ್ಪಂದಿಸಲಿದ್ದಾರೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ದೂರದಲ್ಲಿರುವ ಪ್ರಿಯತಮದಿಂದ ಶುಭ ಸುದ್ದಿ ಸಿಗಲಿದೆ. ಪ್ರೇಮ ಸಂಬಂಧವು ವಿವಾಹದ ಹಂತಕ್ಕೆ ತಲುಪಬಹುದು.

​ತುಲಾ:

ಪ್ರೇಮ ವಿಚಾರದಲ್ಲಿ ಈ ವಾರ ಮಿಶ್ರ ಫಲ ನೀಡಲಿದೆ. ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ವಾರಾಂತ್ಯದಲ್ಲಿ ಸುಂದರ ಕ್ಷಣಗಳನ್ನು ಕಳೆಯುವಿರಿ. ಪ್ರೀತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಿ.

​ವೃಶ್ಚಿಕ:

ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಆಪ್ತತೆ ಹೆಚ್ಚಲಿದೆ. ಪ್ರೇಮ ವಿವಾಹಕ್ಕೆ ಮನೆಯವರ ಸಮ್ಮತಿ ಸಿಗುವ ಸಾಧ್ಯತೆಯಿದೆ. ಹೊಸ ಸಂಬಂಧದಲ್ಲಿರುವವರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ, ಸಾವಕಾಶವಾಗಿ ಯೋಚಿಸಿ.

​ಧನು:

ಪ್ರೇಮ ಜೀವನದಲ್ಲಿ ಹೊಸ ಚೈತನ್ಯ ಮೂಡಲಿದೆ. ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಮನಸ್ತಾಪಗಳು ದೂರವಾಗಿ ಪ್ರೀತಿ ಹೆಚ್ಚಲಿದೆ. ನಿಮ್ಮ ಸಂಗಾತಿಯ ಸಲಹೆಗಳು ನಿಮಗೆ ನೆರವಾಗಲಿವೆ.

​ಮಕರ:

ಸಂಬಂಧದಲ್ಲಿ ಪರಸ್ಪರ ಗೌರವ ನೀಡಿದರೆ ಪ್ರೀತಿ ಉಳಿಯುತ್ತದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಪ್ರಯತ್ನಿಸಿ. ಹಳೆಯ ಸಂಬಂಧವೊಂದು ಮತ್ತೆ ಚಿಗುರಬಹುದು. ಅತಿಯಾದ ನಿರೀಕ್ಷೆಗಳು ಬೇಡ, ವಾಸ್ತವದಲ್ಲಿ ಬದುಕಿ.

​ಕುಂಭ:

ಪ್ರೇಮಿಗಳ ನಡುವೆ ನಂಬಿಕೆ ಹೆಚ್ಚಾಗುವ ಸಮಯವಿದು. ಸಂಗಾತಿಯ ಪ್ರಗತಿಯಲ್ಲಿ ನಿಮ್ಮ ಸಹಕಾರವಿರಲಿ. ಅವಿವಾಹಿತರಿಗೆ ವಿದೇಶದಲ್ಲಿರುವವರಿಂದ ವಿವಾಹದ ಸಂಬಂಧ ಬರಬಹುದು. ಪ್ರೀತಿಯಲ್ಲಿ ಪ್ರಾಮಾಣಿಕತೆ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ.

​ಮೀನ:

ನಿಮ್ಮ ಪ್ರೇಮ ಜೀವನವು ಈ ವಾರ ಸುಖಮಯವಾಗಿರಲಿದೆ. ಮನಸ್ಸಿನ ಗೊಂದಲಗಳಿಗೆ ಸಂಗಾತಿಯಿಂದ ಪರಿಹಾರ ಸಿಗಲಿದೆ. ಪ್ರೇಮಿಗಳಿಗೆ ಒಟ್ಟಾಗಿ ಸಮಯ ಕಳೆಯುವ ಅವಕಾಶ ಸಿಗಲಿದೆ. ಸಂಬಂಧದಲ್ಲಿ ಹೊಸ ಭರವಸೆ ಮೂಡಲಿದೆ.
​ಮತ್ತೆ ಯಾವುದಾದರೂ ರಾಶಿಯ ಬಗ್ಗೆ ಅಥವಾ ನಿರ್ದಿಷ್ಟ ಗ್ರಹಗಳ ಪ್ರಭಾವದ ಬಗ್ಗೆ ತಿಳಿಯಬೇಕೆ? ಅಥವಾ ಈ ಅವಧಿಯ ಸಾಮಾನ್ಯ ಭವಿಷ್ಯವನ್ನು ಬರೆದುಕೊಡಲೇ?

– ಲೋಹಿತ ಹೆಬ್ಬಾರ್

Source link

ಉಘೇ ಉಘೇ ಮಾದಪ್ಪ: ಮಾದಪ್ಪನ ಸನ್ನಿಧಿಯಲ್ಲಿ ಕೇವಲ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!

ಚಾಮರಾಜನಗರ, ಮಾರ್ಚ್​ 28: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಕ್ಷೇತ್ರಕ್ಕೆ ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸರಣಿ ರಜಾ ದಿನಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಆರಾಧ್ಯ ದೈವ ಮಾದಪ್ಪನಿಗೆ ಒಟ್ಟು ಕೋಟ್ಯಂತರ ರೂಪಾಯಿ ಕಾಣಿಕೆ ಸಮರ್ಪಣೆಯಾಗಿದೆ. ಕೇವಲ 23 ದಿನಗಳ ಅವಧಿಯಲ್ಲಿ ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.33 ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಈ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಸಂಗ್ರಹವಾದ ಒಟ್ಟು ಕಾಣಿಕೆ ವಿವರ

  • ನಗದು: 2,33,84,201 ರೂ.
  • ಚಿನ್ನ: 21 ಗ್ರಾಂ
  • ಬೆಳ್ಳಿ: 800 ಗ್ರಾಂ
  • ಡಿಜಿಟಲ್ ಪಾವತಿ (PhonePe/G-Pay): 5,78,897 ರೂ.
  • ವಿಶೇಷ: ಚಲಾವಣೆ ರದ್ದಾಗಿರುವ 2000 ರೂ. ಮುಖಬೆಲೆಯ 3 ನೋಟುಗಳು ಹಾಗೂ 4 ವಿದೇಶಿ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ

ಕಲರ್ಸ್ ಕನ್ನಡದಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯ ಸೀರಿಯಲ್ ಸಂತೆ ನಡೆದಿದೆ. ಇದರಲ್ಲಿ ಹರಿಗೆ ಒಂದು ಚಾಲೆಂಜ್ ಇತ್ತು. ಎಲ್ಲರನ್ನೂ ಸಾಲಾಗಿ ಕೂರಿಸಲಾಗಿತ್ತು. ಹರಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಇವರಲ್ಲಿ ಚಂದನಾ ಯಾರು ಅಂತ ಹೇಳಬೇಕಿತ್ತು. ಕೊನೆಗೂ ಹೇಳಿದರು ಹರೀಶ್ ಹೇಳಿಯೇಬಿಟ್ಟರು. ಈ ವಿಡಿಯೋ ಗಮನ ಸೆಳೆದಿದೆ. ಗೌರಿ ಕಲ್ಯಾಣ ಸೀರಿಯಲ್ ಸಂತೆ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರ ಕಾಣಲಿದೆ. ಗಿಲ್ಲಿ ನಟ ಕೂಡ ಇದಕ್ಕೆ ಬರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: RCB ಪರ ಇಬ್ಬರು ಪಾದಾರ್ಪಣೆ ಸಾಧ್ಯತೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಅಭಿಯಾನ ಶುರು ಮಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.8) ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಆರ್​ಸಿಬಿ ಪರ ಇಬ್ಬರು ಆಟಗಾರರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಏಕೆಂದರೆ ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. ಇಲ್ಲಿ ಜೋಶ್ ಹೇಝಲ್​ವುಡ್ ಫಿಟ್​ನೆಸ್ ಕಾರಣದಿಂದಾಗಿ ಹೊರಗುಳಿದರೆ, ಯಶ್ ದಯಾಳ್ ವೈಯುಕ್ತಿಕ ಕಾರಣಗಳಿಂದಾಗಿ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ. ಇನ್ನು ಮತ್ತೋರ್ವ ವೇಗಿ ನುವಾನ್ ತುಷಾರ ಗಾಯದ ಸಮಸ್ಯೆಯ ಕಾರಣ ಇನ್ನೂ ಕೂಡ ಆರ್​ಸಿಬಿ ತಂಡವನ್ನು ಕೂಡಿಕೊಂಡಿಲ್ಲ. ಹೀಗಾಗಿ ಈ ಮೂವರು ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇತ್ತ ಈ ಮೂವರಲ್ಲಿ ಜೋಶ್ ಹೇಝಲ್​ವುಡ್ ಹಾಗೂ ಯಶ್ ದಯಾಳ್ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿದ್ದರು. ಅಂದರೆ ಕಳೆದ ಬಾರಿಯ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಆಟಗಾರರು. ಇದೀಗ ಅವರ ಅನುಪಸ್ಥಿತಿಯಲ್ಲಿ ಆರ್​ಸಿಬಿ ಇಬ್ಬರು ಹೊಸ ಮುಖಗಳಿಗೆ ಚಾನ್ಸ್ ನೀಡುವ ಸಾಧ್ಯತೆ ಹೆಚ್ಚಿದೆ.

ಯಾರಿಗೆ ಸಿಗಲಿದೆ ಅವಕಾಶ?

ಜೇಕಬ್ ಡಫಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ಮೊದಲ ಪಂದ್ಯದ ಮೂಲಕ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಜೋಶ್ ಹೇಝಲ್​ವುಡ್ ಬದಲಿಯಾಗಿ ಡಫಿ ಅಲ್ಲದೆ ಮತ್ತೋರ್ವ ವಿದೇಶಿ ವೇಗಿ ತಂಡದಲ್ಲಿಲ್ಲ. ಹೀಗಾಗಿ ಡಫಿಗೆ ಇಂದು ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು.

ಮಂಗೇಶ್ ಯಾದವ್: ಯಶ್ ದಯಾಳ್ ಟೂರ್ನಿಯಿಂದ ಹೊರಗುಳಿದಿರುವ ಆಟಗಾರ ಆರ್​ಸಿಬಿ ಮಂಗೇಶ್ ಯಾದವ್​ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಏಕೆಂದರೆ ಮಂಗೇಶ್ ಇತ್ತೀಚಿನ ಅಭ್ಯಾಸ ಪಂದ್ಯಗಳಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಮಂಗೇಶ್ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್ 11?

  • ವಿರಾಟ್ ಕೊಹ್ಲಿ
  • ಫಿಲ್ ಸಾಲ್ಟ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ರೊಮಾರಿಯೊ ಶೆಫರ್ಡ್
  • ಕೃನಾಲ್ ಪಾಂಡ್ಯ
  • ಭುವನೇಶ್ವರ್ ಕುಮಾರ್
  • ಜೇಕಬ್ ಡಫಿ
  • ಮಂಗೇಶ್ ಯಾದವ್
  • ಸುಯಶ್ ಶರ್ಮಾ

ಇದನ್ನೂ ಓದಿ: IPL ನಿಂದ ಇಬ್ಬರು ಆಟಗಾರರಿಗೆ ನಿಷೇಧ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

Source link