All posts by nagaraj11081993

ಕೊರಗಜ್ಜನಿಗೆ ತಲೆಬಾಗಿ ನಮಿಸಿದ ನಟಿ ರಚಿತಾ ರಾಮ್: ವಿಡಿಯೋ ನೋಡಿ

ನಟಿ ರಚಿತಾ ರಾಮ್ (Rachita Ram) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಅಪ್ಪಟ ದೈವ ಭಕ್ತೆ ಆಗಿದ್ದು, ಇದೀಗ ಕೊರಗಜ್ಜನಿಗೆ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಸುಂದರ ವಿಡಿಯೋ ಒಂದನ್ನು ಸಹ ನಟಿ ರಚಿತಾ ರಾಮ್ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸ್ವೀಡನ್​​​​​ನಲ್ಲಿ ಮೋದಿಗೆ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ – Kannada News | PM Modi receives Sweden’s Royal Order of Polar Star, Commander Grand Cross; 31st global honour so far

ನವದೆಹಲಿ, (ಮೇ 17): ಪ್ರಧಾನಿ ನರೇಂದ್ರ ಮೋದಿ (PM Modi Modi) ಅವರು ಆರು ದಿನಗಳ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಯುಎಇ ಸೇರಿದಂತೆ ಐದು ದೇಶಗಳ ರಾಜತಾಂತ್ರಿಕ ಪ್ರವಾಸ ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಭೀತಿಯ ನಡುವೆ ಇಂಧನ ಭದ್ರತೆ  ಹಾಗೂ ಯುರೋಪ್ ರಾಷ್ಟ್ರಗಳೊಂದಿಗೆ ರಕ್ಷಣೆ ಮತ್ತು ವ್ಯಾಪಾರ ಒಪ್ಪಂದಗಳನ್ನು ಬಲಪಡಿಸುವುದು ಈ ಭೇಟಿಯ ಮುಖ್ಯ ಗುರಿಯಾಗಿದೆ. ಯುಎಇ ಹಾಗೂ ನೆದರ್ಲ್ಯಾಂಡ್ ಭೇಟಿ ಬಳಿಕ ಇಂದು (ಮೇ 17) ಸ್ವೀಡನ್ ಗೆ (Sweden) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಮೋದಿಗೆ ಸ್ವೀಡನ್‌ನ ಅತ್ಯುನ್ನತ ನಾಗರಿಕ ಗೌರವವಾದ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ (Sweden’s Royal Order of Polar Star, Commander Grand Cross) ಪ್ರಶಸ್ತಿ ನೀಡಿ ಗೌರವಿಸಲಾಯ್ತು

ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ

ಎರಡು ದಿನಗಳ ಭೇಟಿಗಾಗಿ ಭಾನುವಾರ ಸ್ವೀಡನ್‌ಗೆ ಆಗಮಿಸಿದ ಮೋದಿ ಅವರನ್ನ ಸ್ವೀಡನ್‌ನ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಗೋಥೆನ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದು, ಬಳಿಕ ಉಭಯ ನಾಯಕರು ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಮತ್ತು ಇತರ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮೋದಿಗೆ ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯ ಪ್ರದಾನ ಮಾಡಲಾಯ್ತು. ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಎಂಬುದು ಸರ್ಕಾರದ ಮುಖ್ಯಸ್ಥರಿಗೆ ನೀಡುವ ಅತ್ಯುನ್ನತ ಮನ್ನಣೆ ಮತ್ತು ಗೌರವವಾಗಿದೆ. ಇನ್ನು ಇದು ಪ್ರಧಾನಿ ಮೋದಿ ಅವರಿಗೆ ದೊರೆತ 31ನೇ ಜಾಗತಿಕ ಗೌರವ ಇದಾಗಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ಭಾರತದ ಆರ್ಥಿಕ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಜಾಗತಿಕ ಪೂರೈಕೆ  ಬಲಪಡಿಸಲು ಮೋದಿಯವರ ಈ ಭೇಟಿ ಮೈಲಿಗಲ್ಲಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಳೆದ 2025 ರಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ 7.75 ಬಿಲಿಯನ್ ಡಾಲರ್ ತಲುಪಿತ್ತು. ಈಗ ಭಾರತದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 280ಕ್ಕೂ ಹೆಚ್ಚು ಸ್ವೀಡಿಷ್ ಕಂಪನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಸ್ವೀಡನ್‌ನ ರಕ್ಷಣಾ ದೈತ್ಯ ಕಂಪನಿ ‘ಸಾಬ್’ (Saab), ಹರಿಯಾಣದ ಝಜ್ಜರ್‌ನಲ್ಲಿ ಕಾರ್ಲ್-ಗಸ್ಟಾಫ್ ಯುದ್ಧೋಪಕರಣ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದೆ. ಇದು ಶೇ. 100 ರಷ್ಟು ನೇರ ವಿದೇಶಿ ಹೂಡಿಕೆ (FDI) ಹೊಂದಿರುವ ಭಾರತದ ಮೊದಲ ರಕ್ಷಣಾ ಉತ್ಪಾದನಾ ಯೋಜನೆಯಾಗಿದೆ. ಇದು ‘ಮೇಕ್ ಇನ್ ಇಂಡಿಯಾ’ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು (Technology Transfer) ಜಗತ್ತಿನಲ್ಲೇ ಅತ್ಯಂತ ಬಲಿಷ್ಠಗೊಳಿಸಲಿದೆ. ಇನ್ನು ತನ್ನ ಜಿಡಿಪಿಯ ಶೇ. 3ಕ್ಕಿಂತ ಹೆಚ್ಚು ಹಣವನ್ನು ರಿಸರ್ಚ್‌ಗೆ ಖರ್ಚು ಮಾಡುವ ಸ್ವೀಡನ್, ಈಗ ಭಾರತದೊಂದಿಗೆ ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್, ಸೆಮಿಕಂಡಕ್ಟರ್ ಮತ್ತು 6G ಕ್ಷೇತ್ರಗಳಲ್ಲಿ ಕೈಜೋಡಿಸುತ್ತಿದೆ.

2025ರಲ್ಲಿ 7.75 ಶತಕೋಟಿ ಅಮೆರಿಕನ್ ಡಾಲರ್‌ ತಲುಪಿದ್ದ ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಸಹಕಾರ ಮಾರ್ಗಗಳ ಬಗ್ಗೆ ಮಾತುಕತೆಗಳಾಗಿದ್ದವು. ಕೃತಕ ಬುದ್ಧಿಮತ್ತೆ (AI), ಉದಯೋನ್ಮುಖ ತಂತ್ರಜ್ಞಾನಗಳು, ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು), ರಕ್ಷಣೆ, ಬಾಹ್ಯಾಕಾಶ, ಹವಾಮಾನ ವೈಪರೀತ್ಯ ನಿಯಂತ್ರಣ ಮತ್ತು ಜನರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಉಭಯ ನಾಯಕರು ಒತ್ತು ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:49 pm, Sun, 17 May 26

Source link

ನದಿಯಲ್ಲಿ ಮುಳುಗಿ ನಿರ್ಮಾಪಕ ಸಾವು, ಆತ್ಮಹತ್ಯೆ ಶಂಕೆ – Kannada News | Tamil Movie producer K Rajan died drowning in river

ಸಿನಿಮಾ ನಿರ್ಮಾಪಕರು (Producer) ಸಂಕಷ್ಟದಲ್ಲಿದ್ದಾರೆ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಿರ್ಮಾಪಕರೊಬ್ಬರು ನಿಧನ ಹೊಂದಿದ್ದು, ಅವರ ಸಾವನ್ನು ಆತ್ಮಹತ್ಯೆ ಎಂದು ಬಲವಾಗಿ ಶಂಕಿಸಲಾಗಿದೆ. ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರು ಇಂದು (ಮೇ 17) ನಿಧನ ಹೊಂದಿದ್ದಾರೆ. ಅವರು ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ತಮಿಳು ಮಾಧ್ಯಮಗಳ ವರದಿಯಂತೆ, ಕೆ ರಾಜನ್ ಚೆನ್ನೈನ ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಬಗ್ಗೆ ಚೆನ್ನೈ ಪೊಲೀಸರು ತನಿಖೆ ನಡೆಸಲಿದ್ದಾರೆ. ತಮಿಳು ಚಿತ್ರರಂಗದ ಪ್ರಮುಖ ವ್ಯಕ್ತಿಯಾಗಿದ್ದ ಕೆ. ರಾಜನ್ ಅವರು ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು. ಖುದ್ದು ತಮ್ಮನ್ನೂ ಸೇರಿದಂತೆ ನಿರ್ಮಾಪಕರು ಸಮಸ್ಯೆಯಲ್ಲಿದ್ದಾರೆ ಎಂದು ಹೇಳುತ್ತಿದ್ದರು.

ಕೆ ರಾಜನ್ ಅವರು 1980ರ ದಶಕದಿಂದಲೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು 1983 ರಲ್ಲಿ ಸುರೇಶ್ ನಟನೆಯ ‘ಬ್ರಹ್ಮಚಾರಿಗಳ್’ ಚಿತ್ರದ ಮೂಲಕ ನಿರ್ಮಾಪಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ತಮ್ಮ ‘ಗಣೇಶ್ ಸಿನೆ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ ಅವರು, ಅಬ್ಬಾಸ್ ಮತ್ತು ಕುನಾಲ್ ನಟನೆಯ ‘ಉನರ್ಚಿಗಳ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದರು. ಜೊತೆಗೆ ಕೆಲವಾರು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಚಲನಚಿತ್ರ ನಿರ್ಮಾಣದ ಹೊರತಾಗಿ, ಅವರು ಚಲನಚಿತ್ರ ವಾಣಿಜ್ಯ ವಲಯದಲ್ಲೂ ಪ್ರಭಾವಶಾಲಿ ಪಾತ್ರ ವಹಿಸಿದ್ದರು. 2000ನೇ ಇಸವಿಯಲ್ಲಿ ಅವರು ಚೆನ್ನೈ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ

ಅವರ ಮಗ ಪ್ರಭುಕಾಂತ್ ಕೂಡ ನಟನಾಗಿ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಕೆ ರಾಜನ್ ಅವರು ವಿಶೇಷವಾಗಿ ಆಡಿಯೋ ಬಿಡುಗಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ನೇರ ಮತ್ತು ನಿರ್ಭೀತ ಭಾಷಣಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮಿಳು ಚಿತ್ರರಂಗ ಎದುರಿಸುತ್ತಿರುವ ಹೋರಾಟಗಳು, ನಿರ್ಮಾಪಕರ ಆರ್ಥಿಕ ನಷ್ಟ, ನಟರ ಗಗನಕ್ಕೇರುತ್ತಿರುವ ಸಂಭಾವನೆ ಮತ್ತು ಚಿತ್ರರಂಗದಲ್ಲಿನ ಅವ್ಯವಸ್ಥೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಅವರ ಮುಕ್ತ ಅಭಿಪ್ರಾಯಗಳು ವೈರಲ್ ಆಗುತ್ತಿರುತ್ತಿದ್ದವು.

85ನೇ ವಯಸ್ಸಿನಲ್ಲಿ ಇಂತಹ ಹಿರಿಯ ವ್ಯಕ್ತಿಯೊಬ್ಬರ ದುರಂತ ಅಂತ್ಯವು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆ ಮತ್ತು ಶೋಕವನ್ನು ಉಂಟುಮಾಡಿದೆ. ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು? – Kannada News | How Economic Crises and Wars Impact Gold Prices, What Benefits if Stop purchase gold

ಬೆಂಗಳೂರು, (ಮೇ 17): ಯುದ್ಧದ (War) ಬಿಕ್ಕಟ್ಟಿನಿಂದ ದೇಶದ ಆರ್ಥಿಕ ದೃಷ್ಠಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಪೆಟ್ರೋಲ್ ಡಿಸೇಲ್ , ಅಡುಗೆ ಎಣ್ಣೆ ಹಾಗೂ ಚಿನ್ನವನ್ನ ಖರೀದಿ ಮಾಡೋದನ್ನ ನಿಲ್ಲಿಸಿ, ಅನಾವಶ್ಯಕವಾಗಿ ಚಿನ್ನ ಖರೀದಿ ಬೇಡ ಎಂದು ಕರೆ ನೀಡಿದ್ದಾರೆ. ಹೌದು.. ಗಲ್ಫ್ ರಾಷ್ಟ್ರಗಳ ಯುದ್ಧದ ಎಫೆಕ್ಟ್ ದೇಶದ ಆರ್ಥಿಕ ಸಂಕಷ್ಟಕ್ಕೆ ಕಾರವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಮುಂದಿನ ವರ್ಷ ಗೋಲ್ಡ್ ಖರೀದಿ ಕಡಿಮೆ ಮಾಡಿ, ಅಡುಗೆ ಎಣ್ಣೆ ಮಿತವಾಗಿ ಬಳಸಿ, ಪೆಟ್ರೋಲ್ ಡಿಸೇಲ್ ಕಡಿಮೆ ಬಳಸಿ ಅವಶ್ಯಕತೆ ಇದ್ರೆ ಮಾತ್ರ ಕಾರು ಬಳಸಿ ಇಲ್ಲದೆ ಇದ್ರೆ ಸಾರ್ವಜನಿಕ ಸಾರಿಗೆ ಬಸ್ ಮೆಟ್ರೋ ಬಳಕೆಗೆ ಕರೆ ನೀಡಿದ್ದು ಪಿಎಂ ಸಂದೇಶವನ್ನು ಕೆಲವರು ಸ್ವಾಗತಿಸಿದ್ರೆ, ಇನ್ನೊಂದೆಡೆ ಟೀಕೆಗಳು ಸಹ ವ್ಯಕ್ತವಾಗುತ್ತಿವೆ. ಹಾಗಾದ್ರೆ, ಚಿನ್ನ ಖರೀದಿ ಯುದ್ಧಕ್ಕೆ ಏನು ಸಂಬಂಧ? ಅಲ್ಲೆಲ್ಲೋ ಯುದ್ಧ ನಡೀತಿದ್ರೆ ಇಲ್ಯಾಕೆ ಚಿನ್ನ ಖರೀದಿ ಮಾಡಬಾರದು? ಬಂಗಾರ ಖರೀದಿ ನಿಲ್ಲಿಸಿದ್ರೆ ದೇಶಕ್ಕಾಗುವ ಲಾಭವೇನು? ಎನ್ನುವ ಡಿಟೇಲ್ಸ್ ಇಲ್ಲಿದೆ ನೋಡಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಾದ್ಯಂತ ವರುಣನ ರೌದ್ರಾವತಾರ: ಸಿಡಿಲಿಗೆ ಇಬ್ಬರು ಬಲಿ; ಮರ-ಕಂಬಗಳು ಬಿದ್ದು ಭಾರೀ ಅವಾಂತರ – Kannada News | Karnataka heavy rain and lightning havoc 3 dead roads flooded trees uprooted

ಬೆಂಗಳೂರು, ಮೇ 17: ರಾಜ್ಯದ ಹಲವೆಡೆ ಮಳೆ ಆರ್ಭಟಿಸುತ್ತಿದೆ. ಮಳೆ (Rain) ಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಸಿಡಿಲು ಬಡಿದು 45 ವರ್ಷದ ಕರಿಯಪ್ಪ ಎಂಬುವವರು ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದಾಗ ಸಿಡಿಲು ಬಡಿದಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಧಾರವಾಡದ ಕವಲಗೇರಿಯಲ್ಲಿ 36 ವರ್ಷದ ಜಯಶ್ರಿ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ (death).

ಸಿಡಿಲು ಬಡಿದು ವ್ಯಕ್ತಿ ಸಾವು: ಮತ್ತೊಬ್ಬರಿಗೆ ಗಂಭೀರ ಗಾಯ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಕೋಮಲಾಪುರ ಗ್ರಾಮದ ಕರಿಯಪ್ಪ ಗೆನ್ನಾಕಿಹಾಳ್ (45) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಬಸವರಾಜ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather Forecast: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ?

ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಗೊಬ್ಬರ ತುಂಬುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಕರಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದ ಬಸವರಾಜ್‌ಗೂ ಸಿಡಿಲು ಬಡಿದು ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆ ಸಾವು

ಇನ್ನು ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರೀ ಸಿಡಿಲು ಸಹಿತ ಮಳೆಗೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕವಲಗೇರಿಯ ಜಯಶ್ರೀ ಶಿರಸಂಗಿ (36) ಎಂದು ಗುರುತಿಸಲಾಗಿದೆ. ಪತಿ ಹನುಮಂತಪ್ಪ ಶಿರಸಂಗಿ ಜೊತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಜಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಹನುಮಂತಪ್ಪ ಅವರಿಗೂ ಗಾಯಗಳಾಗಿದ್ದು, ಅವರನ್ನು ಕೂಡಲೇ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಮೂರು ಹಸುಗಳು ಸಾವು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಜೊತೆಗೆ ಮಂಗಳವಾಡದ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೂ ಹಾನಿಯಾಗಿದೆ. ಮೃತಪಟ್ಟ ಹಸುಗಳು ಗ್ರಾಮದ ರೋಮನ್ ಬಾವಟಿಸ್ ದಾಲ್ಮತ್ ಎಂಬುವವರಿಗೆ ಸೇರಿದ್ದಾಗಿವೆ. ಸಿಡಿಲಿನ ತೀವ್ರತೆಗೆ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಮೇಲ್ಛಾವಣಿಗೂ ಹಾನಿಯಾಗಿದೆ.

ಮಳೆ ಆರ್ಭಟ: ಉರುಳಿದ ಮರ, ರಸ್ತೆ ಜಲಾವೃತ; ಜನಜೀವನ ಅಸ್ತವ್ಯಸ್ತ

ರಾಜ್ಯದ ಹಲವೆಡೆ ಭಾರಿ ಗಾಳಿ-ಮಳೆ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಭಾರಿ ಗಾಳಿ ಮಳೆಗೆ ಹುಬ್ಬಳ್ಳಿಯ ಮಂಜುನಾಥ ನಗರ ಹಾಗೂ ಆನಂದ ನಗರ ರಸ್ತೆಯಲ್ಲಿ ಮರ ಉರುಳಿ ಬಿದ್ದಿದೆ. ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ: ಲಂಗರು ಹಾಕಿದ ನೂರಾರು ಬೋಟ್​​​​​ ಗಳು

ಇನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಕೆಂಚಲಾಪುರ ಓಣಿ, ಬನಶಂಕರಿ ದೇಗುಲದ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿವೆ. ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರಿ ಗಾಳಿಗೆ ನಗರದ ಮಕಾನಗಲ್ಲಿ, ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣ ಬಳಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇಂದು ರವಿವಾರ ಮಾರ್ಕೆಟ್ ಬಂದ್ ಇದ್ದ ಕಾರಣ ಮಕಾನಗಲ್ಲಿಯಲ್ಲಿ ದೊಡ್ಡ ದುರಂತ ತಪ್ಪಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಅತಿ ಹೆಚ್ಚು ಸಿಕ್ಸರ್ಸ್​.. ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ವೈಭವ್ – Kannada News | Vaibhav Sooryavanshi Shatters IPL Sixes Record vs DC: Surpasses Abhishek Sharma

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಓಪನರ್ ವೈಭವ್ ಸೂರ್ಯವಂಶಿ ಬೌಂಡರಿ ಮತ್ತು ಸಿಕ್ಸರ್​ಗಳ ಮಳೆಗರೆದರು. ಈ ಮೂಲಕ ಐಪಿಎಲ್‌ನಲ್ಲಿ ಅಭಿಷೇಕ್ ಶರ್ಮಾ ನಿರ್ಮಿಸಿದ್ದ ದಾಖಲೆಯೊಂದನ್ನು ಸಹ ಮುರಿದಿದ್ದಾರೆ. ವೈಭವ್ ಸೂರ್ಯವಂಶಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಿತ 46 ರನ್‌ ಬಾರಿಸಿದರು.

ಈ ಪಂದ್ಯದಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದು ಆವೃತ್ತಿಯಲ್ಲಿ ಅಧಿಕ ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ವೈಭವ್ ಪಾಲಾಗಿದೆ. ಪ್ರಸ್ತುತ ವೈಭವ್ 43 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಹಿಂದೆ ಒಂದು ಆವೃತ್ತಿಯಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ. 2024 ರ ಆವೃತ್ತಿಯಲ್ಲಿ ಈ ದಾಖಲೆ ನಿರ್ಮಿಸಿದ್ದ ಅಭಿಷೇಕ್, ವಿರಾಟ್ ಕೊಹ್ಲಿ (38) ಅವರ ದಾಖಲೆಯನ್ನು ಮುರಿದಿದ್ದರು. ಇದೀಗ ಈ ಆವೃತ್ತಿಯಲ್ಲೂ ಅಭಿಷೇಕ್ 37 ಸಿಕ್ಸರ್‌ಗಳನ್ನು ಬಾರಿಸಿದ್ದು ವೈಭವ್ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.

Source link

ಬದುಕಿಗೆ ದುಬಾರಿ ಬರೆ: ಶುಗರ್, ಬಿಪಿ, ಕೆಮ್ಮ, ಜ್ವರ ಸೇರಿದಂತೆ ಐನೂರಕ್ಕೂ ಹೆಚ್ಚು ಔಷಧಿಗಳ ದರ ಏರಿಕೆ – Kannada News | Bp sugar Including 600 machines prices rise for War And petrol and diesel Rate Hiked

ಬೆಂಗಳೂರು, (ಮೇ 17): ಮಧ್ಯಪ್ರಾಚ್ಯ ಯುದ್ಧದ ಕಿಚ್ಚು ಮತ್ತು ಪೆಟೋಲ್, ಡೀಸೆಲ್ ದರ ಏರಿಕೆ (petrol and diesel price Hik) ಈಗ ನಿಮ್ಮ ಮನೆಯ ಔಷಧದ (machines) ಡಬ್ಬಿಗೂ ತಟ್ಟಿದ್ದು, ಅಗತ್ಯ ಮಾತ್ರೆಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹೌದು.. ಔಷಧಗಳ ಮಾತ್ರೆಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಲೈ ಚೈನ್ ಮೇಲೆ ಬಿದ್ದ ಕಾರಣ ಔಷಧಗಳ ದರ ಸರಾಸರಿ 15 ರಷ್ಟು ಔಷಧ ದರಗಳು ಹೆಚ್ಚಳವಾಗಿದೆ. ಬಿಪಿ, ಸಕ್ಕರೆ ಕಾಯಿಲೆಯಿಂದ ಹಿಡಿದು ಸಾಮಾನ್ಯ ಜ್ವರದ ಮಾತ್ರೆಗಳ ಬೆಲೆ ಹೆಚ್ಚಳ ಬಡವರ ಬದುಕನ್ನು ಇನ್ನಷ್ಟು ಹೈರಾಣಾಗಿಸಿದೆ.

ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್‌ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಬ್ಯಾಚ್ ಮಾದರಿಯಲ್ಲಿ ಒಂದೊಂದೇ ಮಾತ್ರೆಗಳ ಬೆಲೆ ಏರಿಕೆಯತ್ತ ಸಾಗಿದೆ.

ಯುದ್ಧದ ಎಫೆಕ್ಟ್ ಕಾರಣದಿಂದ ಔಷಧಗಳ ಬೆಲೆ 15 % ರಷ್ಟು ಏರಿಕೆ ಕಾಣುತ್ತಿದೆ. ಕೇವಲ ಔಷಧಗಳ ಬೆಲೆ ಮಾತ್ರವಲ್ಲ ಕಾಸ್ಮೆಟಿಕ್ , ಬೇಬಿ ಪ್ರಾಡಕ್ಟ್ ಗಳ ಬೆಲೆಯೂ ಏರಿಕೆ ಕಾಣುತ್ತಿದೆ. ಹಳೆಯ ಬೆಲೆಯ ಔಷಧ ಹಾಗೂ ಕಾಸ್ಮೆಟಿಕ್ ಸ್ಟಾಕ್ ಖಾಲಿಯಾಗಿ ಹೊಸ ಬ್ಯಾಚ್ ಮಾತ್ರೆಗಳ ಜೊತೆ ಹೊಸ ಏರಿಕೆಯ ದರ ಬರ್ತಿದೆ. ಯುದ್ಧ ಮುಗಿಯುವವರೆಗೂ ಬೆಲೆ ಏರಿಕೆ ಇದ್ದೆ ಇರುತ್ತೆ ಅಂತಿದ್ದಾರೆ ಫಾರ್ಮಾ ಮೆಡಿಕಲ್ ಮಾಲೀಕರು.

ಒಟ್ನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ನಡುವೆ ಈಗ ಜನ ಸಾಮನ್ಯರಿಗೆ ಮಾತ್ರೆ ಔಷಧಗಳ ಬೆಲೆಯೂ ಏರಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಯಾಗಲಿದೆಯೋ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ರಾಜ್ ಸಾವಿಗೆ ಕಾರಣವೇನು: ಹೃದ್ರೋಗ ತಜ್ಞ ಮಂಜುನಾಥ್ ವಿಶ್ಲೇಷಣೆ – Kannada News | Heart specialist Dr Manjunath talks about Dileep Raj’s death

ನಟ ದಿಲೀಪ್ ರಾಜ್ (Dileep Raj) ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ದಿಲೀಪ್ ರಾಜ್ ಇನ್ನಿಲ್ಲವಾದ ದಿನ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಸದಸ್ಯರು ತೀವ್ರ ದುಖಃ ವ್ಯಕ್ತಪಡಿಸಿದ್ದರು. ಆದರೆ ಇದೀಗ ದಿಲೀಪ್ ರಾಜ್ ಅವರ ಸಾವಿನ ಬಗ್ಗೆ ಚರ್ಚೆಗಳು ಶುರುವಾಗಿವೆ. ಅವರ ಬಹುತೇಕ ಗೆಳೆಯರು ಹೇಳಿರುವಂತೆ ದಿಲೀಪ್ ರಾಜ್ ಅವರಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ, ವ್ಯಾಯಾಮ, ಜಿಮ್ ಮಾಡುತ್ತಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು ಎಂದು. ಹಾಗಿದ್ದರೂ ಅವರಿಗೆ ಹೃದಯಾಘಾತ ಆಗಿದ್ದು ಹೇಗೆ? ಇದೀಗ ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞರೂ, ಸಂಸದರೂ ಆಗಿರುವ ಡಾ ಮಂಜುನಾಥ್ ಅವರು ದಿಲೀಪ್ ಅವರ ಹಠಾತ್ ಸಾವಿನ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನನಗೆ ಗೊತ್ತಿರುವ ಪ್ರಕಾರ, ದಿಲೀಪ್ ರಾಜ್‌ಗೆ ಅವರಿಗೆ ಹಿಂದಿನ ದಿನ ಎದೆ ಉರಿ ಕಾಣಿಸಿಕೊಂಡಿತ್ತಂತೆ. ಎದೆಯಲ್ಲಿ ಡಿಸ್ಕಂಫರ್ಟ್ (ಅಸ್ವಸ್ಥತೆ) ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ಉಪೇಕ್ಷಿಸಿದರು. ಗ್ಯಾಸ್ಟ್ರಿಕ್ ಇರಬಹುದು ಎಂದು ಅದರ ಬಗ್ಗೆ ಗಮನ ಹರಿಸಲಿಲ್ಲ. ಈಗ 20 ರಿಂದ 25 ಪರ್ಸೆಂಟ್ ಹಾರ್ಟ್ ಅಟ್ಯಾಕ್, ಗ್ಯಾಸ್ಟ್ರಿಟಿಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಕೆಲವರು ‘ಓ ಖಾರ ತಿಂದ್ಬಿಟ್ಟಿದ್ದೀನಿ’ ಅಥವಾ ‘ಡ್ರಿಂಕ್ಸ್ ಮಾಡ್ಬಿಟ್ಟಿದ್ದೀನಿ’ ಎಂದುಕೊಂಡು ಅದನ್ನ ನಿರ್ಲಕ್ಷ್ಯ ಮಾಡುತ್ತಾರೆ. ಅದು ಸರಿಯಲ್ಲ’ ಎಂದು ಮಂಜುನಾಥ್ ಹೇಳಿದ್ದಾರೆ.

‘ಇನ್ನು ಕೆಲವರಿಗೆ ಹೃದಯಾಘಾತ ಆಗುವ ಮುಂಚೆ ಗಂಟಲು ನೋವು ಬರಬಹುದು, ಅಥವಾ ದವಡೆಯಲ್ಲಿ ನೋವು ಬರಬಹುದು. ಇನ್ನು ಕೆಲವರಿಗೆ ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ಆ ನೋವುಗಳನ್ನು, ಆ ಸೂಚನೆಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು. ನಾವುಗಳು ರಕ್ತದ ಒತ್ತಡ, ಸಕ್ಕರೆ ಅಂಶ, ಕೊಲೆಸ್ಟ್ರಾಲ್ ಇದೆಲ್ಲವನ್ನೂ ನಾವು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು, ಆದರೆ ಅತಿಯಾದ ವ್ಯಾಯಾಮವೂ ಸಹ ಒಳ್ಳೆಯದಲ್ಲ’ ಎಂದು ವೈದ್ಯ ಮಂಜುನಾಥ್ ಹೇಳಿದ್ದಾರೆ.

ಇದನ್ನೂ ಓದಿ:‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

‘ನೈಸರ್ಗಿಕವಾದ ಪ್ರೋಟೀನ್ ಅನ್ನು ಸೇವಿಸುವುದಕ್ಕೆ ನಾವು ಹೆಚ್ಚು ಒತ್ತು ನೀಡಬೇಕು.ಮೊಳಕೆ ಕಾಳುಗಳು ಆಗಬಹುದು, ಬೇಳೆಕಾಳುಗಳು ಆಗಬಹುದು, ಮೊಟ್ಟೆ ಆಗಬಹುದು, ಹಣ್ಣು, ತರಕಾರಿಗಳು ಹೆಚ್ಚು ಸೇವನೆ ಮಾಡಬೇಕು. ಇತ್ತೀಚೆಗೆ ಬೇಗ ಸಾಧನೆ ಮಾಡುವ ಹಪಹಪಿ ಎಲ್ಲರಲ್ಲೂ ಹೆಚ್ಚಾಗಿದೆ, ನಾನು ಬೇಗ ಕರಿಯರ್ ಬಿಲ್ಡ್ ಮಾಡಬೇಕು’ ಅನ್ನೋ ಅತಿಯಾದ ಆಸೆ ಒಂದಿದೆ, ಯಾವುದೇ ಕ್ಷೇತ್ರ ಆಗಬಹುದು ಅದು. ಅದು ವೃತ್ತಿಪರ ಕ್ಷೇತ್ರ ಆಗಬಹುದು, ವೃತ್ತಿ ಬೇರೆ ತರ… ಆಮೇಲೆ ಏನಾಗಿದೆ ಸಂತೋಷ ಇಲ್ಲ, ನೆಮ್ಮದಿ ಇಲ್ಲ, ನಿದ್ದೆ ಇಲ್ಲ ಇವುಗಳಿಂದ ದೇಹದ ಮೇಲೆ ಒತ್ತಡ ಹೆಚ್ಚಾಗಿದೆ’ ಎಂದು ಮಂಜುನಾಥ್ ಅವರು ವಿವರಿಸಿದ್ದಾರೆ.

ದಿಲೀಪ್ ರಾಜ್ ಅವರು ನಟರಾಗಿದ್ದ ಜೊತೆಗೆ ನಿರ್ಮಾಪಕರೂ ಆಗಿದ್ದರು. ದಿಲೀಪ್ ರಾಜ್ ಅಗಲಿಕೆ ಬಳಿಕ ಟಿವಿ ಲೋಕದಲ್ಲಿನ ಒತ್ತಡದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ಒಬ್ಬ ಅದ್ಭುತವಾದ ನಟ, ವ್ಯಕ್ತಿ ಇಹಲೋಕ ತ್ಯಜಿಸಿದ್ದಾರೆ. ಅವರ ಕುಟುಂಬವನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Personality Test: ನಿಮ್ಮ ನೆಚ್ಚಿನ ಹಣ್ಣು ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವದ ಗುಟ್ಟು – Kannada News | Personality Test: Your favorite fruit can reveal the secret of your personality

ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದಕ್ಕಾಗಿ ಪ್ರತಿಯೊಬ್ಬರೂ ಸಹ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಕೆಲವರು ತಮ್ಮಿಷ್ಟದ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಾರೆ. ಕೆಲವರಿಗೆ ಮಾವು ಇಷ್ಟವಾದರೆ, ಇನ್ನೂ ಕೆಲವರಿಗೆ ಬಾಳೆ ಹಣ್ಣು ಎಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗೆ ನೀವು ಇಷ್ಟಪಟ್ಟು ತಿನ್ನುವ  ಹಣ್ಣಿನ ಮೂಲಕವೂ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಬಹುದಂತೆ. ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Personality Test), ಕೈ ಮೂಗು, ಕಿವಿ, ಕೂದಲು ಸೇರಿದಂತೆ ದೇಹಾಕಾರದ ಮೂಲಕ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳುವಂತೆ, ನೀವು ಇಷ್ಟಪಡುವ ಹಣ್ಣಿನ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು:

ಕಿತ್ತಳೆ: ಕಿತ್ತಳೆ ಹಣ್ಣು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ ಮತ್ತು ಅವರು ವಿಶ್ವಾಸಾರ್ಹರು ಹೌದು.  ಅವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಶೀಲರಾಗಿರುತ್ತಾರೆ.

ಬಾಳೆಹಣ್ಣು: ಬಾಳೆಹಣ್ಣು ಸಕಾರಾತ್ಮಕತೆ ಮತ್ತು ಭರವಸೆಯನ್ನು ಸಂಕೇತಿಸುತ್ತವೆ. ಹೀಗಿರುವಾಗ ನೀವು ಬಾಳೆಹಣ್ಣನ್ನು ಇಷ್ಟಪಡುವವರಾಗಿದ್ದರೆ ಅವು ನೀವು ದಯಾಳು ವ್ಯಕ್ತಿ ಎಂದು ಸೂಚಿಸುತ್ತವೆ. ನೀವು ಸ್ನೇಹಪರ ಮತ್ತು ಸಭ್ಯರಾಗಿರುತ್ತೀರಿ. ನಿಮ್ಮ ಒಳ್ಳೆಯ ಸ್ವಭಾವದವರಾದ ನಿಮ್ಮನ್ನು ಕೆಲವೊಮ್ಮೆ ಜನರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಾವು: ಮಾವಿನ ಹಣ್ಣುಗಳನ್ನು ಇಷ್ಟಪಡುವ ಜನರು ಸಾಮಾನ್ಯವಾಗಿ ಹಠಮಾರಿಗಳಾಗಿರುತ್ತಾರೆ. ಅವರು ಎಚ್ಚರಿಕೆಯಿಂದ ಪರಿಗಣಿಸಿದ ನಂತರವೇ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮಾವಿನ ಹಣ್ಣುಗಳನ್ನು ಇಷ್ಟಪಡುವ ಜನರು ಹಠಮಾರಿಗಳಾಗಿರುತ್ತಾರೆ, ಆದರೆ ಇವರು ತರ್ಕಬದ್ಧ ಚಿಂತನೆಯನ್ನು ಹೊಂದಿರುವ ವ್ಯಕ್ತಿಗಳೂ ಹೌದು.

ಸೇಬು: ಸೇಬು ಇಷ್ಟಪಡುವವರು ಫಿಟ್ ಆಗಿರಲು ಇಷ್ಟಪಡುತ್ತಾರೆ. ಶಿಸ್ತು ಅವರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಈ ಜನರು ಬಹಿರ್ಮುಖಿಗಳು ಮತ್ತು ಎಲ್ಲರೊಂದಿಗೂ ಬೆರೆಯಲು ಇಷ್ಟಪಡುತ್ತಾರೆ. ಅವರು ಯಾವುದೇ ಕೆಲಸವನ್ನು ಬಹಳ ಉತ್ಸಾಹದಿಂದ ಮಾಡುತ್ತಾರೆ. ಅವರು ಯಾವಾಗಲೂ ಖುಷಿಯಿಂದ ಇರಲು ಬಯಸುತ್ತಾರೆ.

ಪೇರಳೆ:  ಪೇರಳೆ ಹಣ್ಣುಗಳನ್ನು ಇಷ್ಟಪಡುವ ಜನರು ತುಂಬಾ ಉತ್ಸಾಹಭರಿತರು. ಅವರು ಸುಲಭವಾಗಿ ಚಡಪಡಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಕೋಪಗೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮುಂಗೋಪಿ ಮತ್ತು ಉತ್ಸಾಹಭರಿತರಲ್ಲದೆ, ಅವರು ಹರ್ಷಚಿತ್ತದಿಂದ ಕೂಡಿದ ವ್ಯಕ್ತಿಗಳೂ ಹೌದು.

ಚೆರ್ರಿ: ಚೆರ್ರಿ ಹಣ್ಣನ್ನು ಇಷ್ಟಪಡುವವರು ಸಾಮಾನ್ಯವಾಗಿ ಅಂತರ್ಮುಖಿಗಳಾಗಿರುತ್ತಾರೆ. ಅವರು ತುಂಬಾ ನಾಚಿಕೆ ಸ್ವಭಾವದವರು ಮತ್ತು ತಮ್ಮ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಚೆರ್ರಿ ಪ್ರಿಯರು ಸಾಮಾನ್ಯವಾಗಿ ಸರಳ ಸ್ವಭಾವದವರು, ಸುಲಭವಾಗಿ ಕ್ಷಮಿಸುವವರು ಮತ್ತು ಯಾರನ್ನೂ ಎಂದಿಗೂ ಅನುಮಾನಿಸುವುದಿಲ್ಲ.

ಇದನ್ನೂ ಓದಿ: ಕಾಲ್ಬೆರಳುಗಳಲ್ಲಿ ಕೂದಲಿದ್ದರೆ ಏನರ್ಥ ಗೊತ್ತಾ?

ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಇಷ್ಟಪಡುವ ಜನರು ತುಂಬಾ ಶ್ರಮಶೀಲರು, ಬಲವಾದ ಸೃಜನಶೀಲ ಪ್ರಜ್ಞೆಯನ್ನು ಹೊಂದಿರುತ್ತಾರೆ ಮತ್ತು ಸಾಕಷ್ಟು ಬುದ್ಧಿವಂತರು ಎಂದರ್ಥ.

ದಾಳಿಂಬೆ: ದಾಳಿಂಬೆ ಇಷ್ಟಪಡುವ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬಯಸುತ್ತಾರೆ. ಅಲ್ಲದೆ ಅವರು ಹೆಚ್ಚು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳೂ ಹೌದು. ಇವರಿಗೆ ತಾಳ್ಮೆಯೂ ಹೆಚ್ಚು.

ಅನಾನಸ್: ಅನಾನಸ್ ಇಷ್ಟಪಡುವವರು ಕುತೂಹಲ ಮತ್ತು ಹಠಾತ್ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಸಕಾರಾತ್ಮಕ ಮತ್ತು ಉತ್ಸಾಹಭರಿತರೂ ಹೌದು. ಅಲ್ಲದೆ ಇವರು ಸ್ವಾವಲಂಬಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲೂ ಬತ್ತದ ದಕ್ಷಿಣ ಕಾಶಿಯ ಪುಷ್ಕರಣಿ: ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು – Kannada News | Mystery of Mahakuta Pushkarani: The Sacred Pond in Badami That Never Runs Dry

ಬಾಗಲಕೋಟೆ, ಮೇ 17: ರಾಜ್ಯಾದ್ಯಂತ ಬಿರುಬಿಸಿಲಿನ ಬೇಗೆ (heatwaves) ಜೋರಾಗಿದೆ. ನದಿ, ಕೆರೆ, ಕಟ್ಟೆಗಳು ಸೇರಿದಂತೆ ಬಹುತೇಕ ಜಲಮೂಲಗಳು ಸಂಪೂರ್ಣವಾಗಿ ಒಣಗುತ್ತಿವೆ. ಎಲ್ಲೆಡೆ ಬರದ ಭೀಕರ ಚಿತ್ರಣ ಕಣ್ಣೆದುರು ಬರ್ತಿದೆ. ಆದರೆ, ಇಂತಹ ಕಡು ಬೇಸಿಗೆಯಲ್ಲೂ ಮಹಾಕೂಟ (Mahakuta) ಪುಣ್ಯಕ್ಷೇತ್ರದ ಪವಿತ್ರ ಪುಷ್ಕರಣಿ ಮಾತ್ರ ಇದುವರೆಗೂ ಒಮ್ಮೆಯೂ ಬತ್ತಿಲ್ಲ. ಬಿರುಬಿಸಿಲಿನಲ್ಲೂ ಸದಾ ಕಾಲ ಕಣ್ಣು ತುಂಬಿಕೊಳ್ಳುವಂತೆ ಕಂಗೊಳಿಸುತ್ತಿದ್ದು, ಭಕ್ತರು ಪುಣ್ಯಸ್ನಾನದಲ್ಲಿ ಮಿಂದೇಳುತ್ತಿದ್ದಾರೆ.

ಮುಖ್ಯಾಂಶಗಳು

  • ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು
  • ಚರ್ಮರೋಗ ನೀಗಿಸುವ ಮಹಾಕೂಟದ ಪವಿತ್ರ ತೀರ್ಥ
  • ಪುಣ್ಯಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಭಕ್ತರು ಆಕ್ರೋಶ

ಒಂದೇ ಒಂದು ಬಾರಿಯೂ ಬತ್ತದ ಪುಷ್ಕರಣಿ 

ಚಾಲುಕ್ಯರ ಐತಿಹಾಸಿಕ ತಾಣ, ‘ದಕ್ಷಿಣ ಕಾಶಿ’ ಎಂದೇ ಮಹಾಕೂಟ ಕ್ಷೇತ್ರ ಪ್ರಸಿದ್ಧಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಪುಣ್ಯಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಇಲ್ಲಿಗೆ ಬರುವ ಭಕ್ತರನ್ನು ಪ್ರಮುಖವಾಗಿ ಆಕರ್ಷಿಸುವುದೇ ಈ ಪುಷ್ಕರಣಿ ಹೊಂಡ. ಈಗ ರಾಜ್ಯದ ಎಲ್ಲೆಡೆ ಭೀಕರ ಬರಗಾಲವಿದ್ದರೂ, ಈ ಪವಿತ್ರ ಹೊಂಡದ ನೀರು ಮಾತ್ರ ಇದುವರೆಗೂ ಒಂದೇ ಒಂದು ಬಾರಿಯೂ ಬತ್ತಿದ ಇತಿಹಾಸವಿಲ್ಲ.

ಇದನ್ನೂ ಓದಿ: ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ

ಚಾಲುಕ್ಯರ ಕಾಲದಲ್ಲಿ ಅತ್ಯಂತ ವೈಜ್ಞಾನಿಕವಾಗಿ ಮತ್ತು ಕಲಾತ್ಮಕವಾಗಿ ನಿರ್ಮಾಣವಾಗಿರುವ ಈ ಪುಷ್ಕರಣಿ ಹೊಂಡ ಮಹಾಕೂಟೇಶ್ವರ ದೇವಸ್ಥಾನದ ಪಕ್ಕದಲ್ಲೇ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಮೊದಲು ಈಶ್ವರನ ದರ್ಶನ ಪಡೆದು, ನಂತರ ಈ ಹೊಂಡದಲ್ಲಿ ಮಿಂದೇಳುತ್ತಾರೆ. ಈ ಪುಷ್ಕರಣಿಯ ನೀರಿನ ವಿಶೇಷತೆ ಎಂದರೆ, ಇಲ್ಲಿ ಒಮ್ಮೆ ಇಳಿದರೆ ಸಾಕು ವಾಪಸ್ ಹೊರಗೆ ಬರಲು ಮನಸ್ಸೇ ಒಪ್ಪುವುದಿಲ್ಲ. ಅಷ್ಟೊಂದು ಸುಮಧುರ ಮತ್ತು ತಂಪಾದ ಅನುಭವ ಭಕ್ತರಿಗೆ ಸಿಗುತ್ತದೆ.

ಮೈಕೈ ನೋವು; ಚರ್ಮ ರೋಗಗಳು ದೂರ

ಸಾವಿರಾರು ವರ್ಷಗಳ ಇತಿಹಾಸವಿರುವ ಈ ಹೊಂಡಕ್ಕೆ ಕಾಶಿಯಿಂದಲೇ ಗಂಗಾ ನದಿ ಅಂತರ್ಜಲದ ರೂಪದಲ್ಲಿ ಹರಿದು ಬರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಅಲ್ಲದೇ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಮೈಕೈ ನೋವು ದೂರವಾಗುವುದರ ಜೊತೆಗೆ, ಚರ್ಮ ರೋಗಗಳೂ ವಾಸಿಯಾಗುತ್ತವೆ ಎಂಬುದು ಭಕ್ತರ ಅಪಾರ ವಿಶ್ವಾಸ.

ಮೂಲಭೂತ ಸೌಕರ್ಯಗಳ ಕೊರತೆ

ಇಷ್ಟೆಲ್ಲಾ ಇತಿಹಾಸ ಮತ್ತು ಮಹತ್ವ ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಮಾತ್ರ ಬೇಸರದ ಸಂಗತಿ. ಇಲ್ಲಿಗೆ ಬರುವ ಮಹಿಳಾ ಪ್ರವಾಸಿಗರಿಗೆ ಬಟ್ಟೆ ಬದಲಿಸಲು ಸೂಕ್ತ ಕೊಠಡಿಗಳಿಲ್ಲ ಹಾಗೂ ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ತಕ್ಷಣವೇ ಗಮನಹರಿಸಿ, ಈ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರುಗು ನೀಡಬೇಕೆಂದು ಭಕ್ತರಾದ ವಿನುತಾ ಮತ್ತು ಲೀಲಾ ಅವರು ಆಗ್ರಹಿಸಿದರು.

ಪವಿತ್ರ ಪುಷ್ಕರಣಿ

ಒಟ್ಟಿನಲ್ಲಿ, ಬಿಸಿಲ ನಾಡಿನ ಬರದ ಬೇಗೆಯ ನಡುವೆಯೂ ಮಹಾಕೂಟದ ಈ ಪುಷ್ಕರಣಿ ಹೊಂಡ ಭಕ್ತರ ಮೈಗೆ ತಂಪು ಎರೆೆಯುತ್ತಾ, ಮನಸ್ಸಿಗೆ ನೆಮ್ಮದಿ ನೀಡುವ ದಿವ್ಯ ತಾಣವಾಗಿ ಕಂಗೊಳಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:43 pm, Sun, 17 May 26

Source link