Headlines

nagaraj11081993

ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ – Kannada News | Boy Friend Kills lover Who Came after quit Husband at Chikkaballapur

ಚಿಕ್ಕಬಳ್ಳಾಪುರ, (ಫೆಬ್ರವರಿ 27): ಮಹಿಳೆಯೋರ್ವಳು (Woman)  ಗಂಡನನ್ನು ತೊರೆದು ಪ್ರಿಯಕರನ (Lover) ಜೊತೆ ಹೋಗಿ ನೆಲೆಸಿದ್ದ ಮಹಿಳೆ ಹತ್ಯೆಯಾಗಿದ್ದಾಳೆ. ಹೌದು…ಪತಿಯನ್ನ ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ತೇಜಸ್ವಿನಿ(32) ಕೊಲೆಯಾದ ಮಹಿಳೆ.ತೇಜಸ್ವಿನಿ ಗಂಡನಿಂದ ದೂರವಾಗಿ ತನ್ನ ಎರಡು ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಆದ್ರೆ, ಒಂದು ತಿಂಗಳ ಹಿಂದಷ್ಟೇ ಪ್ರಿಯಕರ ಸಂದೀಪ್ ಜೊತೆ ನೆಲೆಸಿದ್ದಳು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಸಂದೀಪ್, 3 ದಿನದ…

Read More

ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ: ಇದು ಯೋಗದಿಂದ ಬದುಕೇ ಬದಲಾದ ಕಥೆ – Kannada News | Yoga Transformed Life: Dharwad Youth Becomes Vietnam’s Top Yoga Instructor

ರಾಘವೇಂದ್ರ ಕ್ಷತ್ರೀಯImage Credit source: tv9 kannada ಧಾರವಾಡ, ಫೆಬ್ರವರಿ 27: ಆತ 25 ವರ್ಷದ ಯುವಕ. ತಾನು ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ವೈದ್ಯರ ಸಲಹೆ ಮೇರೆಗೆ ಕಲಿತ ವಿದ್ಯೆಯೊಂದು ಇದೀಗ ಆತನನ್ನು ದೊಡ್ಡಮಟ್ಟಕ್ಕೆ ಬೆಳೆಸಿದೆ. ಇಡೀ ವಿಶ್ವವೇ ಇದೀಗ ಯೋಗದತ್ತ (Yoga) ಒಲವು ತೋರಿಸುತ್ತಿರೋವಾಗ ತಾನು ಅನಾರೋಗ್ಯದಿಂದ ಮುಕ್ತವಾಗುವುದರ ಜೊತೆಗೆ ನೂರಾರು ಜನರಿಗೆ ವಿದೇಶದಲ್ಲಿ ಯೋಗವನ್ನೂ ಕಲಿಸುತ್ತಿದ್ದಾರೆ. ಇಂದು ಯೋಗವೇ ಆತನಿಗೆ ಉದ್ಯೋಗವಾಗಿ ಪರಿವರ್ತನೆಯಾಗಿದೆ. ಕಾಯಿಲೆಗೆ ಯೋಗವೇ ಮದ್ದು ಧಾರವಾಡ ನಗರದ ಬೂಸಪ್ಪ ವೃತ್ತದ ಬಳಿಯ…

Read More

3 ನಗರಗಳ ಹೆಸರು ಬದಲಾವಣೆ ಮಾಡಿದ ರಾಜಸ್ಥಾನದ ಮುಖ್ಯಮಂತ್ರಿ – Kannada News | Rajasthan CM Bhajanlal Sharma announces name change for 3 cities including Mount Abu

ಜೈಪುರ, ಫೆಬ್ರವರಿ 27: ರಾಜಸ್ಥಾನದಲ್ಲಿ ಏಕಕಾಲದಲ್ಲಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಸ್ಥಳಗಳು, ಜಿಲ್ಲೆಗಳು ಮತ್ತು ರಾಜ್ಯಗಳ ಹೆಸರುಗಳನ್ನು ಬದಲಾಯಿಸಲಾಗುತ್ತಿದೆ. ಇತ್ತೀಚೆಗೆ, ಕೇರಳವನ್ನು ಕೇರಳಂ (Keralam) ಎಂದು ಮರುನಾಮಕರಣ ಮಾಡಲಾಗಿದೆ. ಈಗ, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ರಾಜಸ್ಥಾನದ ಹಲವಾರು ಸ್ಥಳಗಳ ಮರುನಾಮಕರಣಗಳನ್ನು ಘೋಷಿಸಿದ್ದಾರೆ. ಈ ಪ್ರಕಟಣೆಗಳು ಆಡಳಿತ ಮತ್ತು ಸಾಮಾಜಿಕ ವಲಯಗಳಲ್ಲಿ ಬಿಸಿ ಚರ್ಚೆಗೆ ನಾಂದಿ ಹಾಡಿವೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವುಳ್ಳ ಕೆಲವು ನಗರಗಳ ಮರುನಾಮಕರಣದ ಘೋಷಣೆ ಅತ್ಯಂತ ಗಮನಾರ್ಹವಾದುದು. ಹೆಚ್ಚುವರಿಯಾಗಿ, ಮಧ್ಯಾಹ್ನದ ಬಿಸಿಯೂಟ…

Read More

IND vs WI: ಭಾರತ- ವಿಂಡೀಸ್ ಮಾಡು ಇಲ್ಲವೇ ಮಡಿ ಪಂದ್ಯ ಯಾವಾಗ ಎಲ್ಲಿ ನಡೆಯಲಿದೆ? – Kannada News | Ind vs WI Live Streaming When and Where to Watch India vs West Indies T20 World Cup Today Cricket Match Score in Kannada

2026 ರ ಟಿ20 ವಿಶ್ವಕಪ್ (T20 World Cup 2026) ಗೆಲ್ಲಲು ಟೀಮ ಇಂಡಿಯಾ ಮೂರು ಹೆಜ್ಜೆ ದೂರದಲ್ಲಿದೆ. ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಬೇಕೆಂದರೆ ಮುಂಬರುವ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಅದರಲ್ಲಿ ಒಂದು ಪಂದ್ಯವನ್ನು ಸೂಪರ್ 8 ಸುತ್ತಿನಲ್ಲಿ ಆಡಿರುವ ಭಾರತ ತಂಡ, ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (India vs West Indies) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಏಕೆಂದರೆ ಈ ಪಂದ್ಯದ…

Read More

ಟಾಕ್ಸಿಕ್ ಅಲರ್ಟ್​: ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾನ್ಸ್ – Kannada News | Yash Kiara Advani starrer Toxic movie first song Tabaahi to be released on 2 March

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದಿಂದ ಒಂದೊಂದು ಅಪ್​ಡೇಟ್ ಹೊರಬಂದಾಗಲೂ ಅಭಿಮಾನಿಗಳು ಥ್ರಿಲ್ ಆಗುತ್ತಿದ್ದಾರೆ. ಈಗಾಗಲೇ ಎರಡು ಟೀಸರ್​ಗಳು ಧೂಳೆಬ್ಬಿಸಿವೆ. ಈಗ ಮೊದಲ ಹಾಡು ಬಿಡುಗಡೆ ಮಾಡುವ ಸಮಯ ಹತ್ತಿರ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ. ‘ಟಾಕ್ಸಿಕ್’ ಸಿನಿಮಾದ ಮೊದಲ ಸಾಂಗ್ ಮಾರ್ಚ್ 2ರಂದು ರಿಲೀಸ್ ಆಗಲಿದೆ. ಈ ಹಾಡಿನಲ್ಲಿ ಯಶ್ (Yash) ಮತ್ತು ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡು ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿರಲಿದೆ ಎಂಬುದನ್ನು ಪೋಸ್ಟರ್ ಮೂಲಕ ಸೂಚಿಸಲಾಗಿದೆ….

Read More

Ranji Trophy Final: W,W,W,W,W.. ಆಕಿಬ್ ನಬಿ ದಾಳಿಗೆ ತತ್ತರಿಸಿದ ಕರ್ನಾಟಕ – Kannada News | Ranji Trophy 2025 26 Final: J&K Dominates Karnataka; Aqib Nabi’s Fiver Creates History

2025-26ರ ರಣಜಿ ಟ್ರೋಫಿಯ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಇಲ್ಲಿಯವರೆಗೆ ಪ್ರಾಬಲ್ಯ ಸಾಧಿಸಿದೆ. ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರ ಬೌಲರ್ ಆಕಿಬ್ ನಬಿ ಮತ್ತೊಮ್ಮೆ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಐದು…

Read More

ಬಿಪಿ ಕಡಿಮೆಯಾದ್ರೂ ಹೃದಯಾಘಾತವಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ? – Kannada News | Low Blood Pressure and Coronary Heart Disease: What You Should Know

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಬುದು ತಿಳಿದ ವಿಚಾರ, ಆದರೆ ಹೊಸ ಸಂಶೋಧನೆಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ, ಕಡಿಮೆ ರಕ್ತದೊತ್ತಡ (Low Blood Pressure) ಕೂಡ ಹೃದಯಾಘಾತದ (Heart Attack) ಅಪಾಯವನ್ನು ಹೆಚ್ಚಿಸುತ್ತದೆ. ಹೌದು, ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳ ತಂಡ ಈ ಅಧ್ಯಯನ ನಡೆಸಿದ್ದು, ರಕ್ತದೊತ್ತಡ 100/80 ಎಂಎಂಎಚ್‌ಜಿ (mmHg) ಗಿಂತ ಕಡಿಮೆಯಿದ್ದವರಲ್ಲಿ, ಹೃದಯಾಘಾತದ ಅಪಾಯ ಹೆಚ್ಚಾಗಿ ಕಂಡುಬಂದಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದು, ಹೃದಯ ಸಂಬಂಧಿತ…

Read More

ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ – Kannada News | 6 dead several injured in bus accident in Balotra

ಜೈಪುರ, ಫೆಬ್ರವರಿ 27: ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಸರ್ವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-25ರಲ್ಲಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) 6 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಸ್ಲೀಪರ್ ಬಸ್ ಓವರ್‌ಟೇಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರೇಲರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಬಸ್ ಜೋಧ್‌ಪುರದಿಂದ ಸಂಚೋರ್‌ಗೆ ಪ್ರಯಾಣಿಸುತ್ತಿದ್ದಾಗ, ಟ್ರೇಲರ್ ಜೋಧ್‌ಪುರದ ಕಡೆಗೆ ಹೋಗುತ್ತಿತ್ತು. ಬಸ್​ನ ಕೆಲವು ಭಾಗಗಳಲ್ಲಿ ರಕ್ತ…

Read More

ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ, ಹೇಳಿದ್ದೇನು? – Kannada News | Ranji Trophy Final: Jammu and Kashmir CM Omar Abdullah arrives in Hubballi for cheer up the team

ಹುಬ್ಬಳ್ಳಿ, (ಫೆಬ್ರವರಿ 27): ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ (Jammu Kashmir )ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯವನ್ನು ವೀಕ್ಷಿಸಲು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ  (Jammu Kashmir CM Omar Abdullah) ಹುಬ್ಬಳ್ಳಿಗೆ (Hubballi) ಆಗಮಿಸಿದ್ದಾರೆ. ಜೆಕೆ ತಂಡ ಬೃಹತ್ ಮುನ್ನಡೆ ಸಾಧಿಸಿ ಚೊಚ್ಚಲ ರಣಜಿ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ. ಹೀಗಾಗಿ ತಂಡಕ್ಕೆ ಚಿಯರ್ ಅಪ್ ಮಾಡಲು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದಿಳಿದ್ದು, ನಾಳೆ…

Read More

ಸಿಎಂ ಉದ್ಘಾಟಿಸಿದ್ರೂ ಬಳಕೆಯಾಗದ ಐದಂತಸ್ತಿನ ಭವನ: ಮಾದಪ್ಪನ ಭಕ್ತರ ಪಾಡು ಕೇಳೋರ್‍ಯಾರು? – Kannada News | Male Mahadeshwara: Vajramale Building Ready, But Devotees Still Await Accommodation

ಚಾಮರಾಜನಗರ, ಫೆಬ್ರವರಿ 27: ಮಾದಪ್ಪನ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಹಬ್ಬ, ಹರಿದಿನ ಸೇರಿದಂತೆ ಅಮವಾಸ್ಯೆ ಬಂದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಕಾಲಿಡಲು ಸ್ಥಳ ಇರುವುದಿಲ್ಲ. ತಂಗುವುದಕ್ಕೂ ಸ್ಥಳವಿರಲ್ಲ. ಈ ಸಮಸ್ಯೆ ಬಗೆ ಹರಿಸುವುದಕ್ಕೆ ಪ್ರಾಧಿಕಾರ ಮುಂದಾಗಿದೆ. 376 ಕೊಠಡಿಯ ವಜ್ರ ಮಲೆ ಕಟ್ಟಡ ಉದ್ಘಾಟಿಸಲಾಗಿದೆ. ಆದರೂ ಪ್ರಯೋಜನಕ್ಕೆ ಬಾರದ ರೀತಿಯಂತಾಗಿದೆ. ಪ್ರಾಧಿಕಾರದ ವಿಳಂಬ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಳು ಎಪ್ಪತ್ತೇಳು ಮಲೆಯ ಒಡೆಯ ಮಲೆ ಮಾದಪ್ಪನಿಗೆ ಭಕ್ತ ವೃಂದ ಅಪಾರ. ರಾಜ್ಯ…

Read More