Headlines

nagaraj11081993

ಮಹಾದೇವನ ಆ ಏಕೈಕ ಧಾಮ: ಇಲ್ಲಿ ಶಿವಲಿಂಗವಿಲ್ಲ, ಬದಲಿಗೆ ಮಲಗಿರುವ ಮುದ್ರೆಯಲ್ಲಿದ್ದಾನೆ ಶಿವ; ಕಾರಣ ತಿಳಿದರೆ ಆಶ್ಚರ್ಯ ಪಡುತ್ತೀರಿ! – Kannada News | Surutapalli Shiva Temple: Reclining Neelkanta in Parvati’s Lap – Pallikondeswarar

ಸಾಮಾನ್ಯವಾಗಿ ಯಾವುದೇ ಶಿವನ ದೇವಸ್ಥಾನಕ್ಕೆ ಹೋದರೂ, ಗರ್ಭಗುಡಿಯಲ್ಲಿ ಪವಿತ್ರವಾದ ಶಿವಲಿಂಗ ಅಥವಾ ಶಿವನ ದರ್ಶನವಾಗುತ್ತದೆ. ಆದರೆ ಭಾರತದಲ್ಲಿ ಮಹಾದೇವನಿಗೆ ಸಂಬಂಧಿಸಿದ ಇಂತಹ ಒಂದು ವಿಶಿಷ್ಟ ದೇವಸ್ಥಾನವಿದೆ, ಅಲ್ಲಿ ಶಿವನು ಲಿಂಗದ ರೂಪದಲ್ಲಾಗಲಿ ಅಥವಾ ನಿಂತಿರುವ ಭಂಗಿಯಲ್ಲಾಗಲಿ ಇಲ್ಲ, ಬದಲಿಗೆ ಮಲಗಿರುವ ಮುದ್ರೆಯಲ್ಲಿ (ಶಯನ ಮುದ್ರೆ) ದರ್ಶನ ನೀಡುತ್ತಾನೆ. ಸ್ಥಳೀಯ ಭಾಷೆಗಳಲ್ಲಿ ಈ ರೂಪವನ್ನು ‘ಭೋಗಾನ್’ ಎಂದು ಕರೆಯಲಾಗುತ್ತದೆ. ಇಲ್ಲಿ ಮಹಾದೇವನು ಮಾತಾ ಪಾರ್ವತಿಯ ಮಡಲಿನಲ್ಲಿ ತಲೆಯಿಟ್ಟು ವಿಶ್ರಮಿಸುತ್ತಿದ್ದಾನೆ. ಈ ಅದ್ಭುತ ದೇವಸ್ಥಾನ ಮತ್ತು ಇದರ ಹಿಂದಿರುವ ಪೌರಾಣಿಕ…

Read More

2008ರ ಆರ್ಥಿಕ ಹಿಂಜರಿತದಂತೆ ಕಾಡಲಿದೆಯೇ ಕೃತಕ ಬುದ್ಧಿಮತ್ತೆ?: ಜಾಗತಿಕ ಎಐ ಹೂಡಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಪ್ರೊ. ಅಶ್ವತ್ ದಾಮೋದರನ್ – Kannada News | Prof. Damodaran: AI Market Crash Risk from Debt, Unlike Dot Com Bubble

ನ್ಯೂಯಾರ್ಕ್, ಜೂ.20: 2000ರಲ್ಲಿ ಸಂಭವಿಸಿದ ಜಾಗತಿಕ ಇಂಟರ್ನೆಟ್ ಕ್ರಾಂತಿಯ (Dot-com Bubble) ಕುಸಿತಕ್ಕೂ ಮತ್ತು ಪ್ರಸ್ತುತ ಜಗತ್ತನ್ನು ಆಳುತ್ತಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹೂಡಿಕೆಯ ಅತಿಯಾದ ಉತ್ಸಾಹಕ್ಕೂ ದೊಡ್ಡ ವ್ಯತ್ಯಾಸವಿದೆ. ಇತಿಹಾಸವನ್ನು ಗಮನಿಸಿದರೆ ಎಐ ಮಾರುಕಟ್ಟೆಯೂ ಒಂದು ದಿನ ಕುಸಿತ (Bust) ಕಾಣುವುದು ಖಚಿತ. ಆದರೆ, ಆ ಕುಸಿತದ ತೀವ್ರತೆ ಇಡೀ ಸಮಾಜಕ್ಕೆ ದೊಡ್ಡ ಮಟ್ಟದ ಆರ್ಥಿಕ ಪೆಟ್ಟು ನೀಡಲಿದೆ ಎಂದು ಖ್ಯಾತ ವ್ಯಾಲ್ಯೂಯೇಷನ್ ತಜ್ಞ ಪ್ರೊ. ಅಶ್ವತ್ ದಾಮೋದರನ್ ಎಚ್ಚರಿಸಿದ್ದಾರೆ. ಡಾಟ್-ಕಾಮ್ ಉಲ್ಬಣದ ಸಮಯದಲ್ಲಿ…

Read More

NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ! – Kannada News | NEET Re Exam 2026: NTA Blunder Allots Abu Dhabi Exam Centre To Nagpur Student Without Passport

ಮುಂಬೈ, ಜೂನ್ 20: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG) ಮರುಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆಯ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ನಿವಾಸಿಯಾದ 18 ವರ್ಷದ ನೀಟ್ ಅಭ್ಯರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನಿಗೆ ಎನ್‌ಟಿಎ ಜೂನ್ 14 ರಂದು ಜನರೇಟ್ ಮಾಡಿರುವ ಪ್ರವೇಶ ಪತ್ರದಲ್ಲಿ ಅಬುಧಾಬಿಯ ‘ಅಬುಧಾಬಿ ಇಂಡಿಯನ್ ಸ್ಕೂಲ್’ ಅನ್ನು ಪರೀಕ್ಷಾ ಕೇಂದ್ರವಾಗಿ ನಿಯೋಜಿಸಿದೆ! ತನಗಿಷ್ಟ ಬಂದ ಮೂರು ಸ್ಥಳೀಯ ಜಿಲ್ಲಾ ಕೇಂದ್ರಗಳನ್ನೇ…

Read More

‘ಯಶ್ ಫೆನಾಮಿನಲ್ ಆ್ಯಕ್ಟರ್, ಅವರ ಜೊತೆ ನಟಿಸಿದ್ದು ಅದ್ಭುತ ಅನುಭವ’; ಕಾಜಲ್ – Kannada News | Ramayana: Kajal Aggarwal Hails Yash as ‘Phenomenal Actor’ in Epic Saga

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ (Ramayana Movie) ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದಾರೆ. ರಣಬೀರ್​ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ಅಭಿಮಾನಿ ಬಳಗವೇ ಚಿತ್ರದಲ್ಲಿ ಇದೆ. ಈ ಕಾರಣದಿಂದಲೇ ದಕ್ಷಿಣದವರಿಗೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್, ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಶ್ ಅವರನ್ನು ಒಬ್ಬ ‘ಫೆನಾಮಿನಲ್ ಆ್ಯಕ್ಟರ್’ ಎಂದು ಕರೆದಿರುವ ಕಾಜಲ್, ಅವರ ಜೊತೆ ಕೆಲಸ ಮಾಡಿದ ಅನುಭವವನ್ನು…

Read More

ಯುದ್ಧ-ಸಂಘರ್ಷದಿಂದ ದೂರ, ವ್ಯವಹಾರದಲ್ಲಿ ಚತುರ: ಪ್ರಧಾನಿ ಮೋದಿ ಶ್ರೇಷ್ಠ ನಾಯಕನೆಂದು ಹೊಗಳಿದ ಡೊನಾಲ್ಡ್ ಟ್ರಂಪ್ – Kannada News | US President Donald Trump Admires PM Narendra Modi and Xi Jinping, Calls Modi a Great Leader and Smart Politician

ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್Image Credit source: PTI ನವದೆಹಲಿ, ಜೂನ್ 20: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜಗತ್ತಿನ ಅತ್ಯಂತ ಶ್ರೇಷ್ಠ ನಾಯಕರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ‘ದಿ ಆಕ್ಸಿಯೋಸ್ ಶೋ’ ಕಾರ್ಯಕ್ರಮದಲ್ಲಿ ಪ್ರಪಂಚದ ಶಕ್ತಿಶಾಲಿ ಮತ್ತು ಅತ್ಯುತ್ತಮ ನಾಯಕರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಪ್ರಧಾನಿ ಮೋದಿ ಅವರನ್ನು ವಿಭಿನ್ನ ಹಾಗೂ ಅತ್ಯಂತ ಕಠಿಣ…

Read More

Virat Kohli: ಕಿಂಗ್ ಕೊಹ್ಲಿ ಕಂಬ್ಯಾಕ್ ಯಾವಾಗ? – Kannada News | When will Virat Kohli return to Team India?

ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯ ಸಿಕ್ಕಿರುವ ಉತ್ತರ ಜುಲೈ 14. ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಐಪಿಎಲ್ ಫೈನಲ್ ಪಂದ್ಯದ ವೇಳೆ ಸಂಭವಿಸಿದ ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅವರ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಅಫ್ಘಾನ್ ಸರಣಿಗೆ ಆಯ್ಕೆ…

Read More

Spiritual Growth: ಸರಳ ಆದರೆ ಅತ್ಯಂತ ಪ್ರಭಾವಶಾಲಿ; ‘ಓಂ ನಮಃ ಶಿವಾಯ’ ಮಂತ್ರದ ರಹಸ್ಯ ಇಲ್ಲಿದೆ – Kannada News | Discover Om Namah Shivaya Mantra: Its Significance, Chanting and Benefits

ಭಾರತೀಯ ಸಂಸ್ಕೃತಿಯಲ್ಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಮಂತ್ರಗಳಿಗೆ ಅತ್ಯುನ್ನತ ಸ್ಥಾನವಿದೆ. ಮಂತ್ರೋಚ್ಚಾರಣೆಯಿಂದ ಹೊರಹೊಮ್ಮುವ ಶಬ್ದ ತರಂಗಗಳು ದೇಹದಲ್ಲಿ ಮತ್ತು ಸುಪ್ತ ಮನಸ್ಸಿನಲ್ಲಿ ಅದ್ಭುತವಾದ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ ಎಂದು ಶಾಸ್ತ್ರಗಳು ಸಾರುತ್ತವೆ. ಶಿವನ ಆರಾಧಕರು ಮತ್ತು ಗೃಹಸ್ಥರು ನಿತ್ಯವೂ ಜಪಿಸುವ ಪರಮ ಪವಿತ್ರವಾದ ಮಹಾಮಂತ್ರವೇ ‘ಓಂ ನಮಃ ಶಿವಾಯ’. ಸಾಮಾನ್ಯವಾಗಿ ಕಠಿಣವಾದ ಮಂತ್ರ ಸಾಧನೆಗಳಿಗೆ ನಿರ್ದಿಷ್ಟ ತಿಥಿ, ನಕ್ಷತ್ರ, ಶುಭ ಮುಹೂರ್ತ ಅಥವಾ ಕಠೋರವಾದ ನಿಯಮಗಳ ಅಗತ್ಯವಿರುತ್ತದೆ. ಆದರೆ ಈ ಶಿವ ಮಂತ್ರಕ್ಕೆ ಅಂತಹ ಯಾವುದೇ ಸಂಕೀರ್ಣ ನಿಯಮಗಳಿಲ್ಲದಿರುವುದೇ…

Read More

World Refugee Day 2026: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ – Kannada News | World Refugee Day 2026: Know the history and significance of World Refugee Day

ವಿಶ್ವ ನಿರಾಶ್ರಿತರ ದಿನImage Credit source: Pinterest ಯುದ್ಧ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಗಲಭೆ, ಪ್ರಾಕೃತಿಕ ವಿಕೋಪ ಹಾಗೂ ಹಿಂಸಾಚಾರ ಹೀಗೆ ನಾನಾ ಕಾರಣಗಳಿಂದ ಊರು, ದೇಶ ಬಿಟ್ಟು ಹೋಗುವವರೇ ಹೆಚ್ಚು. ಹೀಗೆ ಊರು ಬಿಟ್ಟು ಬೇರೆ ಕಡೆಗೆ ಹೋದವರು ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರ ಬದುಕು ದಿನನಿತ್ಯ ಹೋರಾಟವಾಗಿದೆ. ಹೀಗಾಗಿ ಅಂತಹವರಿಗೆ ಮೂಲಸೌಕರ್ಯ ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಲು, ಪುನರ್‌ವಸತಿಯ ಬಗ್ಗೆ ಜಾಗೃತಿ ಮೂಡಿಸಲು ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು (World Refugee…

Read More

ಮೈಸೂರು ಮೃಗಾಲಯಕ್ಕೆ ಕಳಿಸಿದ್ದೇವೆ ಎಂದಿದ್ದ ನರಭಕ್ಷಕ ಚಿರತೆ ಹನೂರು ಕಾಡಿನಲ್ಲಿ ಪತ್ತೆ; ಅಧಿಕಾರಿಗಳ ವಿರುದ್ಧ ಸೋಲಿಗರು ಗರಂ – Kannada News | Chamarajanagar: Forest Dept’s Man Eater Leopard Release Angers Soliga Tribals

ಚಾಮರಾಜನಗರ, ಜೂ.20: ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಯ ನಡೆಗೆ ಆದಿವಾಸಿ ಸೋಲಿಗರು ಹಾಗೂ ಸ್ಥಳೀಯ ಗ್ರಾಮೀಣ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬೇರೆಡೆ ಸೆರೆ ಹಿಡಿದಿದ್ದ ನರಭಕ್ಷಕ ಚಿರತೆಯೊಂದನ್ನು ತಂದು ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿರುವುದು ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇಟ್ಟಿತ್ತು….

Read More

ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ – Kannada News | Kumar Sangakkara wore Team India’s helmet

ಕ್ರಿಕೆಟ್​ನಲ್ಲಿ ‘ಕ್ಲಾಸ್ ಈಸ್ ಪರ್ಮನೆಂಟ್’ ಎಂಬ ಮಾತಿದೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ನ ಲೆಜೆಂಡ್ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ ಸ್ಥಳೀಯ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿದ್ದ 48 ವರ್ಷದ ಸಂಗಕ್ಕಾರ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಈ ಶತಕಕ್ಕಿಂತ ಹೆಚ್ಚು ಸದ್ದು ಟೀಮ್ ಇಂಡಿಯಾದ ಹೆಲ್ಮೆಟ್. ಅಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಕುಮಾರ್ ಸಂಗಕ್ಕಾರ ಬಿಸಿಸಿಐ ಲೋಗೋ ಮತ್ತು ಭಾರತದ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿದ್ದರು. ಇದೀಗ ಈ ಫೋಟೋಗಳು ಸೋಷಿಯಲ್…

Read More