Headlines

nagaraj11081993

ಆರೋಗ್ಯಕರ ಜೀವನ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Follow these habits in your morning routine for a healthy life

ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯಕರ ಜೀವನ (healthy life) ನಡೆಸಬೇಕು, ಫಿಟ್‌ ಆಂಡ್‌ ಫೈನ್‌ ಆಗಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಯಾವಾಗಲೂ ಗಡಿಬಿಡಿಯಲ್ಲೇ ಇರುತ್ತಾರೆ. ಇದು ಖಂಡಿತವಾಗಿಯೂ ಒತ್ತಡವನ್ನು ಉಂಟು ಮಾಡುತ್ತದೆ. ಈ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಮುಖ್ಯವಾಗಿ ಬೆಳಗಿನ ದಿನಚರಿಯಲ್ಲಿ…

Read More

ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ, ರಾತ್ರಿಯಿಡೀ ಕಾಯೋ ಸ್ಥಿತಿ – Kannada News | Koppal Water Crisis: Yere Hanchinal Villagers Struggle for Drinking Water

ಕೊಪ್ಪಳ, ಜೂನ್ 20: ಕೊಪ್ಪಳ ಜಿಲ್ಲೆಯ ಯರೇ ಹಂಚಿನಾಳ ಗ್ರಾಮವು ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಗ್ರಾಮಸ್ಥರ ದೈನಂದಿನ ಬದುಕಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕ್ಯಾನ್‌ಗಳನ್ನು ಹಿಡಿದುಕೊಂಡು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರಿನ ಘಟಕವೇ ಗ್ರಾಮಸ್ಥರ ಏಕೈಕ ಆಸರೆಯಾಗಿದೆ. ಹೀಗಾಗಿ, ಬಹುತೇಕ ಗ್ರಾಮಸ್ಥರಿಗೆ ಈ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ದಿನಚರಿಯ ಭಾಗವಾಗಿದೆ. ಗ್ರಾಮದ ಪ್ರಮುಖ ನೀರಿನ ಮೂಲವಾದ ಕೆರೆಯಲ್ಲಿ…

Read More

ಬೌಲಿಂಗ್​ನಲ್ಲಿ ಹೆನ್ರಿ ಮಿಂಚಿಂಗ್: ಬ್ಯಾಟಿಂಗ್​ನಲ್ಲಿ ಹೆನ್ರಿ ಶೈನಿಂಗ್..! – Kannada News | England vs New Zealand, 2nd Test: 3rd Day Highlights

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 391 ರನ್ ಪೇರಿಸಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಬೆನ್ ಡೆಕೆಟ್ 36 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್…

Read More

Shani Dosha Relief: ಶನಿವಾರದಂದು ಯಾವ ಮರವನ್ನು ಪೂಜಿಸುವುದು ಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Saturday Tree Worship: Peepal & Shami for Shani Dosha Relief and Prosperity in Hinduism

ಶನಿವಾರದಂದು ಯಾವ ಮರವನ್ನು ಪೂಜಿಸುವುದು ಶುಭImage Credit source: iStock ಹಿಂದೂ ಸನಾತನ ಧರ್ಮದಲ್ಲಿ ಪ್ರಕೃತಿ ಆರಾಧನೆಗೆ ಅತ್ಯುನ್ನತ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ಗಿಡ-ಮರಗಳು, ನದಿ-ಪರ್ವತಗಳನ್ನು ದೈವಿಕ ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತಿದೆ. ಪ್ರಕೃತಿಯ ಪ್ರತಿಯೊಂದು ಅಂಶದಲ್ಲೂ ದೇವರನ್ನು ಕಾಣುವ ಭಕ್ತರು, ಪವಿತ್ರ ಮರ-ಗಿಡಗಳಲ್ಲಿ ದೈವಿಕ ಶಕ್ತಿ ನೆಲೆಸಿದೆ ಎಂದು ಬಲವಾಗಿ ನಂಬುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ವಾರದ ಏಳು ದಿನಗಳಲ್ಲಿ ಆಯಾ ದಿನಕ್ಕೆ ಸಂಬಂಧಿಸಿದ ನಿರ್ದಿಷ್ಟ ಮರಗಳನ್ನು ಪೂಜಿಸುವುದರಿಂದ ಜಾತಕದ ದೋಷಗಳು ನಿವಾರಣೆಯಾಗಿ, ಜೀವನದಲ್ಲಿ…

Read More

12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ! – Kannada News | Rishabh Pant will be joining Delhi Capitals at 15cr

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಹರಾಜಿಗೂ ಮುನ್ನವೇ ಬಿಗ್ ಟ್ರೇಡ್ ನಡೆದಿರುವುದು ಖಚಿತವಾಗಿದೆ. ಈ ಟ್ರೇಡಿಂಗ್ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳುತ್ತಿದ್ದಾರೆ. ಅಂದರೆ ಐಪಿಎಲ್ 2027 ರಲ್ಲಿ ರಿಷಭ್ ಡಿಸಿ ಪರ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ​​. (PC: IPL) ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಟ್ರೇಡ್ ನಡೆದಿದ್ದು, ಈ ಟ್ರೇಡಿಂಗ್​ನಲ್ಲಿ ರಿಷಭ್ ಪಂತ್ ಅವರನ್ನು…

Read More

ಬ್ರೇಕಪ್​ನಲ್ಲಿ ಕೊನೆ ಆಯ್ತು ಧನುಷ್-ಮೃಣಾಲ್ ಪ್ರೀತಿ? – Kannada News | Dhanush Mrunal Thakur Breakup? Unpacking Their Rumored Relationship and Why It Ended

ಕಾಲಿವುಡ್ ಸೂಪರ್‌ಸ್ಟಾರ್ ಧನುಷ್ (Dhanush) ಹಾಗೂ ಬಾಲಿವುಡ್ ಜೊತೆಗೆ ಸೌತ್‌ನಲ್ಲೂ ಮಿಂಚುತ್ತಿರುವ ನಟಿ ಮೃಣಾಲ್ ಠಾಕೂರ್ ಕಳೆದ ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಗಾಸಿಪ್ ಗಲ್ಲಿ ಗಲ್ಲಿಯಲ್ಲಿ ಹರಿದಾಡಿತ್ತು. ಆದರೆ, ಈಗ ಈ ಜೋಡಿಯ ಅಭಿಮಾನಿಗಳಿಗೆ ನಿರಾಸೆಯಾಗುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಮೃಣಾಲ್ ‘ನಾವು ಪ್ರೀತಿಸುತ್ತಿಲ್ಲ’ ಎಂದೇ ಹೇಳುತ್ತಿದ್ದರು. 2025ರ ಆಗಸ್ಟ್‌ನಲ್ಲಿ ಮೃಣಾಲ್ ಅಭಿನಯದ ‘ಸನ್ ಆಫ್ ಸರ್ದಾರ್ 2’ ಚಿತ್ರದ ಪ್ರೀಮಿಯರ್ ಶೋನಲ್ಲಿ…

Read More

ಏರ್‌ಪೋರ್ಟ್ ಪ್ರಯಾಣಿಕರೇ ಎಚ್ಚರ: ಬೆಂಗಳೂರಿನಲ್ಲಿ ರೈಡರ್‌ಗಳ ವಂಚಿಸಲು ನಕಲಿ ಕ್ಯಾಬ್ ಆ್ಯಪ್ ಬಳಸ್ತಿದ್ದಾರೆ ಚಾಲಕರು! – Kannada News | Bengaluru Airport Cab Scam: Drivers Using Fake Cloned Apps of Uber and Rapido to Inflate Fares Warning Issued

ಬೆಂಗಳೂರು, ಜೂನ್ 20: ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಆವರಣದಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ವಂಚನೆ ಜಾಲವೊಂದು ಸಕ್ರಿಯವಾಗಿರುವುದಾಗಿ ವರದಿಯಾಗಿದೆ. ಓಲಾ, ಉಬರ್ ಮತ್ತು ರ‍್ಯಾಪಿಡೋ ನಂತಹ ಪ್ರಮುಖ ರೈಡ್ ಬುಕಿಂಗ್ ಆ್ಯಪ್‌ಗಳ ರೀತಿಯೇ ಕಾಣುವ ನಕಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೆಲವು ಚಾಲಕರು ಬಳಸುತ್ತಿದ್ದು, ಪ್ರಯಾಣದ ಕೊನೆಯಲ್ಲಿ ಗ್ರಾಹಕರಿಗೆ ದುಪ್ಪಟ್ಟು ದರದ ಬಿಲ್ ತೋರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯಾಂಶಗಳು ನಕಲಿ ಆ್ಯಪ್ ಬಳಸಿ ದುಪ್ಪಟ್ಟು ದರ…

Read More

Daily Devotional: ಸಾಮುದ್ರಿಕ ಶಾಸ್ತ್ರ; ಮೂಗಿನ ಆಕಾರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ – Kannada News | Unlocking Destiny: What Your Nose Shape Reveals About Your Personality and Future

ಪ್ರಾಚೀನ ಜ್ಯೋತಿಷ್ಯ ಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮೂಗಿನ ಆಕಾರವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಅವರ ಗುಣಗಳು, ಸಾಮರ್ಥ್ಯಗಳು ಮತ್ತು ಭವಿಷ್ಯದ ಕುರಿತು ತಿಳಿದುಕೊಳ್ಳಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಮೂಗಿನ ಆಕಾರದ ಮೂಲಕ ವ್ಯಕ್ತಿತ್ವ ವಿಶ್ಲೇಷಣೆಯು ಅದೆಷ್ಟೋ ಶತಮಾನಗಳಿಂದಲೂ ರೂಢಿಯಲ್ಲಿದೆ. ನಮ್ಮ ಹಸ್ತ ರೇಖೆಗಳು ಬದಲಾಗುವಂತೆ, ಮೂಗಿನ ಆಕಾರವು ಬದಲಾಗುವುದಿಲ್ಲ. ಇದು ವ್ಯಕ್ತಿಯ ಮೂಲ…

Read More

ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್ – Kannada News | Star Hotel Luxury on Rails: Vande Bharat Sleeper First AC Interiors Revealed

ಬೆಂಗಳೂರು, ಜೂ.20: ಭಾರತೀಯ ರೈಲ್ವೆಯ ಪ್ರಯಾಣಿಕರಿಗೆ ಇನ್ಮುಂದೆ ರಾತ್ರಿ ಪ್ರಯಾಣದ ವೇಳೆ ಸ್ಟಾರ್ ಹೋಟೆಲ್‌ಗಳ ಅನುಭವ ಸಿಗಲಿದೆ. ಮುಂಬೈ ಮತ್ತು ಬೆಂಗಳೂರು ಐಟಿ ಹಬ್‌ಗಳನ್ನು ಸಂಪರ್ಕಿಸುವ ಮುಂಬರುವ ‘ವಂದೇ ಭಾರತ್ ಸ್ಲೀಪರ್’ ರೈಲಿನ ಮೊದಲ ದರ್ಜೆ ಎಸಿ (First AC) ಕೋಚ್‌ನ ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ (Interiors) ವಿಡಿಯೋ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾಂಪ್ರದಾಯಿಕ ರೈಲುಗಳ ಇಕ್ಕಟ್ಟಾದ ಬರ್ತ್‌ಗಳು ಹಾಗೂ ಸೌಲಭ್ಯ ರಹಿತ ಶೌಚಾಲಯಗಳ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿ, ವಿಶ್ವದರ್ಜೆಯ ವಿನ್ಯಾಸದೊಂದಿಗೆ ಈ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ….

Read More

‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್ – Kannada News | My Lady Fans count increased After Madeva Movie Says Vinod Raj

‘ಬಲರಾಮನ ದಿನಗಳು’ ಸಿನಿಮಾವು ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ. ಇದು ಹಳ್ಳಿಯ ಸೊಗಡು ಅಥವಾ ಕೌಟುಂಬಿಕ ಸಂಬಂಧಗಳ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಕಥೆಯಾಗಿದ್ದು, ನೈಜ ಘಟನೆಗಳು ಹಾಗೂ ಭಾವನಾತ್ಮಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ . ಈ ಸಿನಿಮಾ ಬಗ್ಗೆ ಮಾತನಾಡುವಾಗ ‘ಮಾದೇವ’ ಸಿನಿಮಾ ನೆನಪಿಸಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ ಆದ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ ಎಂದು ಅವರು ಹೇಳಿದ್ದಾರೆ. 2025ರಲ್ಲಿ ‘ಮಾದೇವ’ ಸಿನಿಮಾ ತೆರೆಗೆ ಬಂದಿತ್ತು. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More