ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಅಪಘಾತ: ಒಂದೇ ದಿನ 8 ಜನ ಬಲಿ, ಹಲವರಿಗೆ ಗಾಯ – Kannada News | 8 death, several Injured In Road Accident at various districts In Karnataka On February 8th
ಬೀದರ್/ತಮಕೂರು, (ಫೆಬ್ರವರಿ 08): ಬ್ರಿಡ್ಜ್ಗೆ ಬೈಕ್ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೀದರ್ (Bidar) ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಹತ್ತಿರ ನಡೆದಿದೆ. ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್(40) ಹಾಗೂ ಪತ್ನಿ ಶಿಲ್ಪಾ(35), ಪುತ್ರಿ ರಕ್ಷಿತಾ(12) ಸ್ಥಳದಲ್ಲೇ ಸಾವನ್ನಪ್ಪಿದ್ದು,ಮಗ ದಿಗಂಬರ್(15) ಎಂಬುವವನ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರೂ ಒಂದೇ ಬೈಕ್ನಲ್ಲಿ ಬೀದರ್ನಿಂದ ರಾಜೇಶ್ವರ ಗ್ರಾಮಕ್ಕೆ ತೆರಳುತ್ತಿರುವಾಗ ರಸ್ತೆ ಪಕ್ಕದ ಬ್ರಿಡ್ಜ್ಗೆ ಬೈಕ್ ಡಿಕ್ಕಿ ಹೊಡೆದಿದೆ. ತುಮಕೂರಿನಲ್ಲಿ ಸರಣಿ…