Headlines

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಜಿಗಿತ: ಒಡಿಶಾದಲ್ಲಿ ದೇಶದ ಮೊದಲ ‘3D ಗ್ಲಾಸ್ ಚಿಪ್’ ಘಟಕಕ್ಕೆ ಚಾಲನೆ – Kannada News | Odisha: India’s 1st Advanced 3D Glass Chip Packaging Unit Launched, Boosts Semiconductor Hub

3ಡಿ ಗ್ಲಾಸ್ ಚಿಪ್ ಘಟಕದ ವಿವರಣೆ ಕೇಳುತ್ತಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್.Image Credit source: PTI ಭುವನೇಶ್ವರ್, ಏಪ್ರಿಲ್ 20: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ಮಾಡುವ ನಿಟ್ಟಿನಲ್ಲಿ ಒಡಿಶಾ ರಾಜ್ಯವು ಇಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೇಶದ ಮೊತ್ತಮೊದಲ ಸುಧಾರಿತ ‘3D ಗ್ಲಾಸ್ ಚಿಪ್ ಪ್ಯಾಕೇಜಿಂಗ್’ (Advanced 3D Glass Chip Packaging) ಘಟಕಕ್ಕೆ ಭುವನೇಶ್ವರದ ಇನ್ಫೋ ವ್ಯಾಲಿಯಲ್ಲಿ ಭಾನುವಾರ (ಏಪ್ರಿಲ್ 19, 2026) ಅದ್ಧೂರಿ ಚಾಲನೆ…

Read More

ಕಾಗೆಯ ವಿಗ್ರಹ ಹಾಗೂ ಮಿಸ್ಟರಿ; ಒಟಿಟಿಯಲ್ಲಿರೋ ಈ ಥ್ರಿಲ್ಲರ್ ಸಿನಿಮಾನ ಮಿಸ್ ಮಾಡಬೇಡಿ – Kannada News | Sambhavam Adhyayam Onnu Review: A Crow Idol Mystery Thriller on OTT

ಅದೊಂದು ದಟ್ಟಾರಣ್ಯ. ಕಾಡಿನ ಮಧ್ಯದಲ್ಲಿ ಒಂದು ದೇವಸ್ಥಾನ. ದೇವಸ್ಥಾನ ಎಂದಾಕ್ಷಣ ಅದು ಶಿವನದ್ದೋ ಅಥವಾ ಗಣೇಶನದ್ದೋ ಅಲ್ಲ. ಅದು ಕಾಗೆಯದ್ದು. ಕಾಗೆಯ ದೊಡ್ಡ ವಿಗ್ರಹ ಅಲ್ಲಿ ಸ್ಥಾಪನೆ ಆಗಿದೆ. ಅದಕ್ಕೊಂದು ಕರಾಳ ಇತಿಹಾಸ ಇದೆ. ಅಷ್ಟೇ ಅಲ್ಲ, ಆ ಕಾಡಿನಲ್ಲೂ ಒಂದು ಮಾಂತ್ರಿಕತೆ ಇದೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇದು ಕೆಲವರಿಗೆ ಇಷ್ಟ ಆಗಬಹುದು, ಇನ್ನೂ ಕೆಲವರು ಇದನ್ನು ಇಷ್ಟಪಡದೇ ಇರಬಹುದು. ಆ ಸಿನಿಮಾ ಹೆಸರು ‘ಸಂಭವಮ್ ಆಧ್ಯಾಯಮ್ ಒನ್ನು’.  ಜಿಯೋ ಹಾಟ್​​ಸ್ಟಾರ್​​ನಲ್ಲಿ…

Read More

ಹೊಸಪೇಟೆ ಸರಣಿ ಅಪಘಾತ: ಕನ್ಯೆ ನೋಡಲು ಹೊರಟಿದ್ದ ಆ ಮೂರು ಜನ ಸೇರಿದ್ದು ಮಸಣಕ್ಕೆ! – Kannada News | 4 death in Serial Accident Near Hosapete in Vijayanagara District

ವಿಜಯನಗರ, ಏಪ್ರಿಲ್​​ 20: ಹೊಸಪೇಟೆ (Vijayanagara) ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಭಾನುವಾರ ನಡೆದಿತ್ತು. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ಆದರೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿನ್ನಪ್ಪಿದ್ದಾರೆಂದು ದೃಢಪಟ್ಟಿದೆ. ಮಗ ಕೊಟ್ರೇಶನ ಮದುವೆಗಾಗಿ ಕನ್ಯೆ ನೋಡಲು ತೆರಳುವಾಗಲೇ ಈ ಅವಘಡ ಸಂಭವಿಸಿದ್ದು, ಹಸೆಮಣೆ ಸೇರಬೇಕಾದವನು ಮಸಣ ಸೇರಿದ್ದಾನೆ….

Read More

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿಗೆ ಗುದ್ದಿ ಚರಂಡಿಗೆ ನುಗ್ಗಿದ ಖಾಸಗಿ ಸ್ಲೀಪರ್ ಬಸ್! – Kannada News | Mandya road accident, Private bus crash, Bangalore Mysore highway, Budanur incident, Car bus collision, Kerala to Bangalore bus accident

ಮಂಡ್ಯ, ಏ.20: ಜಿಲ್ಲೆಯ ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಖಾಸಗಿ ಸ್ಲೀಪರ್ ಬಸ್ ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯು ಭಾನುವಾರ ಬೆಳಿಗ್ಗೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಬೂದನೂರು ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ…

Read More

ಚಾಮರಾಜನಗರ: ಸತತ 17 ಗಂಟೆಗಳ ಕಾರ್ಯಾಚರಣೆ; ಕೆಸರಲ್ಲಿ ಸಿಲುಕಿದ್ದ ಮೂರು ಆನೆಗಳ ರಕ್ಷಣೆ – Kannada News | Forest Officials Rescue 3 Elephants Stuck in Mud After 17 Hour Operation in Chamarajanagar

ಚಾಮರಾಜನಗರ, ಏಪ್ರಿಲ್​​ 20: ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯಕ್ಕೆ ಸೇರಿದ ಉಡುತೊರೆ ಹಳ್ಳ ಜಲಾಶಯದ ಕೆಸರಿನಲ್ಲಿ ಸಿಲುಕಿದ್ದ ಮೂರು ಕಾಡಾನೆಗಳ್ನು ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಅವುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆ ಪೈಕಿ ಎರಡು ಆನೆಗಳು ಕಾಡಿನತ್ತ ಪಯಣ ಬೆಳೆಸಿವೆ. ಮತ್ತೊಂದು ಆನೆಗೆ ಅರಣ್ಯಾಧಿಕಾರಿಗಳಿಂದ ಆರೈಕೆ ಮುಂದುವರಿದಿದೆ. ಸತತ 17 ಗಂಟೆಗಳ ಕಾರ್ಯಾಚರಣೆ ಬಳಿಕ ಮೂರು ಆನೆಗಳನ್ನ ರಕ್ಷಣೆ ಮಾಡಲಾಗಿತ್ತು. ಒಂದು ಆನೆ ತೀವ್ರ ಅಸ್ವಸ್ಥಗೊಂಡಿದ್ದು, ಮೇಲೇಳಲೂ ಆಗದ ಸ್ಥಿತಿಯಲ್ಲಿತ್ತು. ಮತ್ತಷ್ಟು ವಿಡಿಯೋ…

Read More

ಹೊಸ ‘ರಾಜರಥ’ ಸಂಚಾರ ಆರಂಭ: ಕರ್ನಾಟಕದ 6 ಜಿಲ್ಲೆಗಳ ಪ್ರಯಾಣಿಕರಿಗೆ ಗುಡ್ ನ್ಯೂಸ್ – Kannada News | Hubballi Hyderabad AC Sleeper: NWKRTC Launches Rajaratha Luxury Bus Service

ಹುಬ್ಬಳ್ಳಿ, ಏ.20: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ತನ್ನ ಐಷಾರಾಮಿ ಬಸ್‌ಗಳ ಸಾಲಿಗೆ 4 ಹೊಸ ‘ರಾಜರಥ’ (Rajaratha) ಎಸಿ ಸ್ಲೀಪರ್ ಬಸ್‌ಗಳನ್ನು ಸೇರ್ಪಡೆಗೊಳಿಸಿದೆ. ಈ ಬಸ್‌ಗಳು ಪ್ರಮುಖವಾಗಿ ಕರ್ನಾಟಕದ ವಿವಿಧ ನಗರಗಳಿಂದ ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸಲಿವೆ. ಈ ಹೊಸ ಬಸ್‌ಗಳ ಸಂಚಾರದಿಂದ ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಯಾಣಿಕರಿಗೆ ನೇರ ಅನುಕೂಲವಾಗಲಿದೆ. ಪ್ರಮುಖ ಎರಡು ಮಾರ್ಗಗಳು: ಹುಬ್ಬಳ್ಳಿ –…

Read More

ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು – Kannada News | Hassan Drowning Tragedy: Uncle Dies While Trying to Save Nephew

ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆ ಗೆ ಹೋದ ಮಾವನೂ ಸಾವುImage Credit source: Tv9 Kannada ಹಾಸನ/ಮೈಸೂರು, ಏಪ್ರಿಲ್​​ 20: ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆ ಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಮೂಲತಃ ದುದ್ದ ಹೋಬಳಿ ಸೋಮನಹಳ್ಳಿ ಗ್ರಾಮದ ಪ್ರತೀಕ್ ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ…

Read More

Basava Jayanti 2026: ದಯವೇ ಧರ್ಮದ ಮೂಲವಯ್ಯ; ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ವಿಶ್ವಗುರು ಬಸವಣ್ಣ – Kannada News | Basava Jayanti 2026: What is the significance behind celebration of Basava Jayanti?

ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ಸಾರಿದ ಬಸವಣ್ಣನವರ (Basavanna) ಜನ್ಮ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ತಮ್ಮ ವಚನಗಳ ಮೂಲಕವೇ 12 ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇತ್ಯಾದಿ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಿ, ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವ ಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ, ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿನ…

Read More

Video: ಮಹಿಳೆಯ ಹಿಂಬಾಲಿಸಿಕೊಂಡು ಬಂದು ಆಕೆಯ ಮನೆಯೊಳಗೆ ನುಗ್ಗಲು ವ್ಯಕ್ತಿ ಯತ್ನ, ಆಮೇಲೇನಾಯ್ತು ನೋಡಿ – Kannada News | Doorstep Surprise: Husband’s Presence Halts Alleged Stalker

ನಗರದ ಬೀದಿ ದೀಪಗಳು ಮಂದವಾಗಿದ್ದವು. ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಗೆ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಸಂಶಯ ಕಾಡಿತ್ತು. ಅವಳು ಹೆಜ್ಜೆ ಜೋರು ಮಾಡಿದಷ್ಟೂ, ಆ ಅಪರಿಚಿತ ವ್ಯಕ್ತಿಯ ಚಪ್ಪಲಿಯ ಸದ್ದು ಹತ್ತಿರವಾಗುತ್ತಿತ್ತು. ಅಪಾರ್ಟ್​ಮೆಂಟ್ ತಲುಪಿದರೆ ಸಾಕೆಂದು ಓಡಿ ಬಂದರೆ ಆತ ಅಲ್ಲಿಗೂ ಬಂದಿದ್ದ. ಆಕೆ ಮನೆಯ ಬಾಗಿಲು ಇನ್ನೇನು ತೆಗೀಬೇಕು ಅನ್ನುವಷ್ಟರಲ್ಲಿ ಆತ ಕೂಡ ಆಕೆಯ ಹಿಂದೆಯೇ ನಿಂತಿದ್ದ. ಆಕೆ ಬಾಗಿಲು ತೆರೆದು ಒಳಗೆ ಹೋಗಿದ್ದಾಳೆ. ಆತನೂ ಆಕೆಯ ಹಿಂದೆ ಹೋಗಬೇಕು…

Read More

ರವೀಂದ್ರ ಜಡೇಜಾನ ಕಡೆಗಣಿಸಿ ಪಂದ್ಯ ಸೋತ ರಾಜಸ್ಥಾನ್ ರಾಯಲ್ಸ್ – Kannada News | The Jadeja Snub: Riyan Parag’s Strategy Hurting RR

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 28ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ತಂಡ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 155 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ ತಂಡವು ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತ್ತು.  ಅಂದರೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ರಾಜಸ್ಥಾನ್ ರಾಯಲ್ಸ್ ತಂಡದ ಮುಂದಿತ್ತು. ಇದಾಗ್ಯೂ ನಾಯಕ ರಿಯಾನ್ ಪರಾಗ್ ತೆಗೆದುಕೊಂಡು ಒಂದು…

Read More