Category Archives: Blog

Your blog category

Viral Video: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು – Kannada News | Viral Video Shows Family Dispute Turning Violent, Police Take Note

ತನ್ನೆಲ್ಲಾ ಕಷ್ಟ-ಸುಖಗಳೆರಡನ್ನೂ ಬದಿಗಿಟ್ಟು, ಮಗಳೇ ಸರ್ವಸ್ವವೆಂದು ಬದುಕಿದ ತಂದೆ(Father)ಗೆ ಇದೆಂಥಾ ಪರಿಸ್ಥಿತಿ ತಂದಿಟ್ಟಿದ್ದಾಳೆ ಈ ಪ್ರೀತಿಯ ಮಗಳು. ಸಂಸಾರದಲ್ಲಿ ಕೋಪ-ತಾಪ, ಪ್ರೀತಿ, ಜಗಳ ಎಲ್ಲವೂ ಸಾಮಾನ್ಯ ಆದರೆ ತಾನು ಮಾಡಿದ ತಪ್ಪಿಗೆ ತಂದೆಗೆ ಮನಸೋ ಇಚ್ಛೆ ಥಳಿಸುವುದೆಂದರೆ ಸಾಮಾನ್ಯನಾ, ಇಷ್ಟು ವರ್ಷ ಪ್ರೀತಿಯಿಂದ ಸಾಕಿದ ಮಗಳ ವರ್ತನೆ ನೋಡಿ ತಂದೆ ಹತಾಶರಾಗಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಮಗಳೊಬ್ಬಳು ತಂದೆಯೊಂದಿಗೆ ಜಗಳವಾಡುತ್ತಿದ್ದಾಳೆ, ಅಷ್ಟೇ ಅಲ್ಲದೆ ಮಗಳು ಆವಾಚ್ಯ ಶಬ್ದಗಳಿಂದ ತಂದೆಯನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಮಾಡುತ್ತಿರುವ ಆಘಾತಕಾರಿ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

ತಂದೆ ಕಷ್ಟಪಟ್ಟು ದುಡಿದ 18 ಲಕ್ಷ ಹಣವನ್ನು ತನ್ನ ದರಭ್ಯಾಸಗಳಿಗೆ ಖರ್ಚು ಮಾಡಿದ್ದೂ ಅಲ್ಲದೆ, ತಂದೆಯನ್ನೇ ನಪುಂಸಕನೆಂದು ನಿಂದಿಸಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಂದೆ ಹತಾಶರಾಗಿ ಕೂತಲ್ಲೇ ಕುಳಿತಿರುವುದು ಕಣ್ಣಂಚಲ್ಲಿ ನೀರು ತರಿಸದೇ ಇರದು.

ಮತ್ತಷ್ಟು ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ

ಆಕೆಯ ನಿರ್ದಯ ಮಾತು, ಆಕ್ರೋಶ, ಕೋಪ, ಹಲ್ಲೆ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿದೆ.ಹಣದ ವಿವಾದದಿಂದ ಆರಂಭವಾದ ಜಗಳ ಅವಮಾನವಾಗಿ ಬದಲಾಯಿತು. ಈ ವಿಡಿಯೋ ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಹಲವರು ಈ ವಿಡಿಯೋ ಕುರಿತು ಕಮೆಂಟ್ ಮಾಡಿದ್ದಾರೆ.

ವಿಡಿಯೋ

ಮಹಿಳಾ ಸಬಲೀಕರಣ ಎಂದರೆ ಇದೇನಾ ಎಂದು ಒಬ್ಬರು ಮಾತನಾಡಿದರೆ, ಇನ್ನೊಬ್ಬರು ಇದನ್ನು ನೋಡಲಾಗುತ್ತಿಲ್ಲ ಎಂದಿದ್ದಾರೆ, ಮತ್ತೊಬ್ಬರು ಭವಿಷ್ಯದಲ್ಲಿ ಆಕೆಯ ಗಂಡನ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಬ್ಬರು ಆಕೆ ಮದುವೆಯಾಗುವುದಕ್ಕಿಂತ ಒಂಟಿಯಾಗಿರುವುದೇ ಒಳಿತು ಎಂದಿದ್ದಾರೆ. ಆಕೆ ಕುಟುಂಬದವರ ಜತೆ ಬದುಕಲು ಅರ್ಹಳಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: 2026ರ ವರ್ಷ ಪೂರ್ತಿ ಈ 4 ರಾಶಿಯ ಮಹಿಳೆಯರಿಗೆ ಅದೃಷ್ಟದ ಸುರಿಮಳೆ – Kannada News | Astrological Forecast 2026: Unveiling Luck for Women of Specific Zodiac Signs

2026ರ ಹೊಸ ವರ್ಷ ಪ್ರಾರಂಭವಾಗಿದೆ. ಈ ವರ್ಷ 12ರಾಶಿಗಳಲ್ಲಿ ಪ್ರಮುಖವಾಗಿ ಈ 4 ರಾಶಿಯ ಮಹಿಳೆಯರಿಗೆ ಭಾರೀ ಅದೃಷ್ಟದ ವರ್ಷವಾಗಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಗ್ರಹಗಳ ಯಾವುದೇ ಸಂಚಾರವಿದ್ದರೂ, ಈ ವರ್ಷವು ಮೂರು ನಿರ್ದಿಷ್ಟ ರಾಶಿಗಳ ಮಹಿಳೆಯರಿಗೆ ವರ್ಷಪೂರ್ತಿ ಅದೃಷ್ಟವನ್ನು ತರಲಿದೆ. ಇದರ ಜೊತೆಗೆ, ಇನ್ನೊಂದು ರಾಶಿಗೂ ಸಹ ಒಂದಷ್ಟು ಅದೃಷ್ಟ ಕೂಡಿಬರಲಿದೆ. ಹೀಗೆ ಒಟ್ಟಾರೆ ಮೂರು ಪ್ರಮುಖ ರಾಶಿಗಳು ಮತ್ತು ಒಂದು ಅತೀ ಕಡಿಮೆ ಲಾಭ ಪಡೆಯುವ ರಾಶಿ, ಅಂದರೆ ಒಟ್ಟು ನಾಲ್ಕು ರಾಶಿಗಳ ಮಹಿಳೆಯರಿಗೆ 2026 ಅತ್ಯಂತ ಶುಭ ವರ್ಷವಾಗಲಿದೆ.

ಈ ವರ್ಷ ಗ್ರಹಗಳ ಸ್ಥಿತಿಗತಿಗಳು ಮಹಿಳೆಯರ ಜೀವನದ ಮೇಲೆ ವಿಶೇಷ ಪ್ರಭಾವ ಬೀರಲಿವೆ. ಜೂನ್ 2ರಂದು ಗುರು ಗ್ರಹ ಬದಲಾವಣೆಯಾಗುತ್ತದೆ. ಶನಿ ಗ್ರಹವು ವರ್ಷಪೂರ್ತಿ ಮೀನ ರಾಶಿಯಲ್ಲಿಯೇ ನೆಲೆಸಿರುತ್ತದೆ. ಡಿಸೆಂಬರ್ 5ರಂದು ರಾಹು-ಕೇತು ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಿಸುತ್ತವೆ. ಇವುಗಳ ಪ್ರಭಾವದ ಜೊತೆಗೆ, ಬುಧ, ಮಂಗಳ, ಶುಕ್ರ, ಗುರು ಗ್ರಹಗಳ ಧನಾತ್ಮಕ ಪ್ರಭಾವವು ಈ ಅದೃಷ್ಟವಂತ ರಾಶಿಗಳ ಮಹಿಳೆಯರಿಗೆ ಅಭೂತಪೂರ್ವ ಯಶಸ್ಸನ್ನು ತರಲಿದೆ. 2025 ಈಗಾಗಲೇ ಮುಗಿದ ಅಧ್ಯಾಯ. 2026ರ ಈ ವರ್ಷ ಹೊಸದಾದ, ಶುಭ ಸುದ್ದಿಗಳ ವರ್ಷವಾಗಿದೆ.

ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯರನ್ನು ಪ್ರಕೃತಿ, ತಾಯಿ, ದೇವಿಗೆ ಹೋಲಿಸಲಾಗುತ್ತದೆ. ನೀರನ್ನು ಗಂಗೆ ಎಂದೂ, ಆಹಾರವನ್ನು ಅನ್ನಪೂರ್ಣೇಶ್ವರಿ ಎಂದೂ ಪೂಜಿಸುತ್ತೇವೆ. ಅದೇ ರೀತಿ, ಈ ವರ್ಷ ಕೆಲವು ರಾಶಿಗಳ ಮಹಿಳೆಯರಿಗೆ ಅದೃಷ್ಟದ ಯೋಗವಿದೆ. ನೀವು ಸಾಡೇಸಾತಿ ಅಥವಾ ಇನ್ನಾವುದೇ ಗ್ರಹದೋಷದ ಬಗ್ಗೆ ಚಿಂತಿಸಬೇಕಾಗಿಲ್ಲ. ತಾಳ್ಮೆ, ಸಹನೆ, ಯೋಚನಾ ಲಹರಿ, ಮತ್ತು ಆತುರದ ನಿರ್ಧಾರಗಳನ್ನು ತ್ಯಜಿಸಿ, ಸರಿಯಾದ ಯೋಜನೆಗಳೊಂದಿಗೆ ಮುನ್ನಡೆದರೆ ಈ ವರ್ಷವು ನಿಮಗೆ ಪವಾಡ ಸದೃಶ ಫಲಗಳನ್ನು ನೀಡಲಿದೆ. ಕಷ್ಟ ಪಡುವುದರ ಜೊತೆಗೆ ಅದೃಷ್ಟವೂ ಇರಬೇಕು. ಆ ಅದೃಷ್ಟ 2026ರಲ್ಲಿ ಈ ಕೆಳಗಿನ ರಾಶಿಗಳಿಗೆ ಇರಲಿದೆ.

ಕರ್ಕಾಟಕ ರಾಶಿ (Cancer):

ಚಂದ್ರನು ಅಧಿಪತಿಯಾಗಿರುವ ಕರ್ಕಾಟಕ ರಾಶಿಯ ಮಹಿಳೆಯರಿಗೆ ಈ ವರ್ಷದಲ್ಲಿ ಅವರ ಅನಿಸಿಕೆಗಳಿಗೆ ಮತ್ತು ಯೋಜನೆಗಳಿಗೆ ವಿಶೇಷ ಮನ್ನಣೆ ಸಿಗಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಯೋಗ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳು, ಗಂಡ, ಕುಟುಂಬದ ವಿಚಾರಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ವಿವಾಹದ ವಿಷಯದಲ್ಲಿಯೂ ಯಶಸ್ಸು ದೊರೆಯುವ ಸಾಧ್ಯತೆಗಳಿವೆ.

ಸಿಂಹ ರಾಶಿ (Leo):

ರವಿಯ ಅನುಗ್ರಹವನ್ನು ಹೊಂದಿರುವ ಸಿಂಹ ರಾಶಿಯ ಮಹಿಳೆಯರಿಗೆ ಉದ್ಯೋಗ ಪ್ರಾಪ್ತಿ, ರಾಜಕೀಯವಾಗಿ ಪ್ರಗತಿ, ಮತ್ತು ಸ್ಥಾನಮಾನ ಲಭಿಸುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಬಡ್ತಿ ದೊರೆಯಬಹುದು. ಬಹುದಿನಗಳಿಂದ ಕಾಡುತ್ತಿದ್ದ ನೋವುಗಳಿಗೆ ಪರಿಹಾರ ಸಿಗಲಿದೆ. ಇದು ಸಿಂಹ ರಾಶಿಯ ಮಹಿಳೆಯರಿಗೆ ಬಹಳ ಶುಭ ವರ್ಷವಾಗಿದೆ.

ಕುಂಭ ರಾಶಿ (Aquarius):

ಶನಿ ಅಧಿಪತಿಯಾಗಿರುವ ಕುಂಭ ರಾಶಿಯ ಮಹಿಳೆಯರಿಗೆ ಈ ವರ್ಷ ಸಾಹಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಲು ಅನುಕೂಲಕರ ವಾತಾವರಣವಿದೆ. ಬಂಗಾರದ ಯೋಗ, ಭೂಮಿ ಯೋಗಗಳು ಕೂಡಿಬರಲಿವೆ. ಆಸ್ತಿ ಕಲಹಗಳು ಇತ್ಯರ್ಥವಾಗುತ್ತವೆ. ತವರು ಮನೆಯಿಂದ ಉಡುಗೊರೆಗಳು ಸಿಗಬಹುದು. ಗಂಡನ ಜೊತೆ ಅನ್ಯೋನ್ಯತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೀನ ರಾಶಿ (Pisces):

ಗುರು ರಾಶ್ಯಾಧಿಪತಿಯಾಗಿದ್ದರೂ, ಶನಿ ಗ್ರಹವು ಅಲ್ಲೇ ಇದ್ದರೂ ಸಹ ಮೀನ ರಾಶಿಯ ಮಹಿಳೆಯರಿಗೆ ಈ ವರ್ಷ ನಿಧಾನವಾದರೂ ಪ್ರಧಾನವಾದ ಪ್ರಗತಿ ಇರಲಿದೆ. ತಡವಾದರೂ ಒಳ್ಳೆಯ ಫಲಿತಾಂಶಗಳು ದೊರೆಯಲಿವೆ. ಸಾಕಷ್ಟು ಅದೃಷ್ಟಗಳು ಈ ವರ್ಷ ಮೀನ ರಾಶಿಯವರ ಪಾಲಿಗೆ ಬರಲಿವೆ.

ಹೀಗೆ ಕರ್ಕಾಟಕ, ಸಿಂಹ, ಕುಂಭ, ಮೀನ ರಾಶಿಯ ಮಹಿಳೆಯರಿಗೆ, ಕನ್ಯೆಯರಿಗೆ, ಹೆಣ್ಣುಮಕ್ಕಳಿಗೆ 2026 ಅತ್ಯಂತ ಅದೃಷ್ಟದ ವರ್ಷವಾಗಿದೆ. ಯಾವುದೇ ಸಣ್ಣ ದುರಂತ ನಡೀತು ಎಂದು ತಲೆ ಮೇಲೆ ಕೈಯಿಟ್ಟುಕೊಂಡು ಕೂರಬಾರದು. ವಿದ್ಯಾರ್ಥಿಗಳು ಸರಿಯಾಗಿ ಪ್ರಯತ್ನ ಪಟ್ಟರೆ ಒಳ್ಳೆಯ ವಿದ್ಯಾ ಯೋಗವಿದೆ. ಕುಟುಂಬದಲ್ಲಿ ಗಂಡ-ಹೆಂಡತಿಯರ ಕಲಹಗಳು ಇತ್ಯರ್ಥವಾಗುತ್ತವೆ. ಕಾನೂನು ವಿಷಯಗಳಲ್ಲಿ ಜಯ ಸಿಗಲಿದೆ. ಭೂಮಿ ಯೋಗ ಮತ್ತು ಉದ್ಯೋಗ ಯೋಗಗಳು ಈ ರಾಶಿಗಳ ಮಹಿಳೆಯರಿಗೆ ಶುಭವನ್ನು ತರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ದಾಂಡಿಗನ ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ ವೈಭವ್ – Kannada News | Vaibhav Suryavanshi Breaks Pakistan Batter’s World Record

ಯೂತ್ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ (Vaibhav suryavanshi) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನದ ದಾಂಡಿಗ ಅಹಮದ್ ಶೆಹಝಾದ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Source link

ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ – Kannada News | Vasuki Koushik Creates World Record in List A Cicket

ಕರ್ನಾಟಕದ ವೇಗಿ ವಾಸುಕಿ‌ ಕೌಶಿಕ್ ಲಿಸ್ಟ್ ಎ (ಏಕದಿನ) ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ತನ್ನ ಕರಾರುವಾಕ್ ದಾಳಿ ಮೂಲಕ. ಈ ದಾಳಿಯೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

Source link

ಮಹಿಳೆಯರ ಉದ್ಯೋಗ, ವಾಸಕ್ಕೆ ಬೆಂಗಳೂರೇ ಬೆಸ್ಟ್! ಸಿಲಿಕಾನ್ ಸಿಟಿ ದೇಶದಲ್ಲೇ ನಂ.1 ಎಂದ ಸಮೀಕ್ಷೆ – Kannada News | Bengaluru Ranked No 1 City in India for Working Women and Living, Says Survey

ಬೆಂಗಳೂರು, ಜನವರಿ 8: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಉತ್ತಮ ಹವಾಮಾನದಿಂದ ದೇಶದ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿದ್ದ ಬೆಂಗಳೂರು (Bangalore) ಇದೀಗ ಮಹಿಳಾ ಸ್ನೇಹಿ ಉದ್ಯೋಗದ ವಾತಾವರಣದಲ್ಲಿಯೂ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅವತಾರ್ ಗ್ರೂಪ್ (Avtar Group) ಎಂಬ ವರ್ಕ್​​ಪ್ಲೇಸ್ ಕಲ್ಚರ್ ಕನ್ಸಲ್ಟಿಂಗ್ ಫರ್ಮ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ವರದಿಯಲ್ಲಿ, ಮಹಿಳೆಯರು ಕೆಲಸ ಮಾಡಲು ಹೆಚ್ಚು ಇಚ್ಛಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ್, ಕೊಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಹಾಗೂ ಕೊಯಮತ್ತೂರು ಕೂಡ ಸ್ಥಾನ ಪಡೆದಿವೆ.

125 ನಗರಗಳ ಪೈಕಿ ಬೆಂಗಳೂರೇ ಟಾಪ್!

ದೇಶದಾದ್ಯಂತ 125 ನಗರಗಳನ್ನು ಅಧ್ಯಯನ ಮಾಡಿ, ಹಿಂದಿನ ವರ್ಷಗಳ ಮಾಹಿತಿಯೊಂದಿಗೆ ಹೋಲಿಕೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ನಗರಗಳಲ್ಲಿ ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ, ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧರಿಸಿ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ.

ಸೋಷಿಯಲ್ ಇನ್​ಕ್ಲೂಶನ್ (ಸಾಮಾಜಿಕ ಒಳಗೊಳ್ಳುವಿಕೆ) ಅಂಕಗಳಲ್ಲಿ ನಗರಗಳ ವಾಸಯೋಗ್ಯತೆ, ಸುರಕ್ಷತೆ, ಮಹಿಳೆಯರ ಉದ್ಯೋಗ ಪ್ರತಿನಿಧಿತ್ವ ಮತ್ತು ಸಬಲೀಕರಣವನ್ನು ಪರಿಗಣಿಸಲಾಗಿದೆ. ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಮಹಿಳಾ ಸ್ನೇಹಿ ಉದ್ಯಮಗಳು, ವೃತ್ತಿ ಸಹಾಯಕ ವ್ಯವಸ್ಥೆಗಳು ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಂಸ್ಥೆಗಳ ಉಪಸ್ಥಿತಿಯನ್ನು ಗಮನಿಸಲಾಗಿದೆ.

ಬೆಂಗಳೂರಿಗೆ ಪ್ಲಸ್ ಪಾಯಿಂಟ್ ಆಗಿದ್ದೇನು?

2025ರ ವರದಿಯಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಮಹಿಳೆಯರಿಗೆ ಅನುಕೂಲಕರ ಉದ್ಯೋಗ ಪರಿಸರ, ತಂತ್ರಜ್ಞಾನ ಹಾಗೂ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಾದ ಅವಕಾಶಗಳು ಬೆಂಗಳೂರಿಗೆ ಸಂಬಂಧಿಸಿದ ಮುಖ್ಯ ಅಂಶಗಳಾಗಿವೆ. ಚೆನ್ನೈ 49.86 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪುಣೆ (46.27), ಹೈದರಾಬಾದ್ (46.04) ಹಾಗೂ ಮುಂಬೈ (44.49) ಮುಂದಿನ ಸ್ಥಾನಗಳಲ್ಲಿವೆ.

ಗುರುಗ್ರಾಮ್, ನೋಯ್ಡಾ ಹಾಗೂ ದೆಹಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರೂ, ಸುರಕ್ಷತೆ, ಸಾರಿಗೆ ಹಾಗೂ ಜೀವನ ವೆಚ್ಚದಂತಹ ಸಾಮಾಜಿಕ ಅಂಶಗಳಲ್ಲಿ ಹಿನ್ನಡೆಯಲ್ಲಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಇದರಿಂದ, ಕೇವಲ ಕೈಗಾರಿಕಾ ಅಭಿವೃದ್ಧಿ ಮಾತ್ರ ಮಹಿಳಾ ಸ್ನೇಹಿ ನಗರ ನಿರ್ಮಾಣಕ್ಕೆ ಸಾಕಾಗುವುದಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಸಮೀಕ್ಷಾ ವರದಿಯ ಪ್ರಕಾರ ತಿರುವನಂತಪುರಂ, ಶಿಮ್ಲಾ ಹಾಗೂ ತಿರುಚಿರಾಪಳ್ಳಿ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಉತ್ತಮ ಸಾಧನೆ ತೋರಿದ್ದರೂ, ದೊಡ್ಡ ಮಟ್ಟದ ಉದ್ಯೋಗಾವಕಾಶಗಳ ಕೊರತೆಯನ್ನು ಎದುರಿಸುತ್ತಿವೆ. ಹೈದರಾಬಾದ್, ಕೊಲ್ಕತ್ತಾ ಮತ್ತು ಪುಣೆಗಳು ಸಾಮಾಜಿಕ ಹಾಗೂ ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಸಮತೋಲನ ಸಾಧಿಸಿರುವ ನಗರಗಳಾಗಿ ಗುರುತಿಸಿಕೊಂಡಿವೆ.

ಇದನ್ನೂ ಓದಿ: ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!

ಒಟ್ಟಿನಲ್ಲಿ, ಮಹಿಳೆಯರ ವೃತ್ತಿ ಬೆಳವಣಿಗೆ ಮತ್ತು ಸುರಕ್ಷಿತ ಜೀವನಕ್ಕೆ ಬೆಂಗಳೂರು ದೇಶದಲ್ಲೇ ಮಾದರಿ ನಗರವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾ ಸ್ನೇಹಿ ನೀತಿಗಳು ಹಾಗೂ ಮೂಲಸೌಕರ್ಯಗಳು ರೂಪುಗೊಳ್ಳಬಹುದೆಂಬ ನಿರೀಕ್ಷೆಯನ್ನು ಈ ವರದಿ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಝ್​ ಬಾಲ್​ ಬೌಲ್ಡ್​… ಆ್ಯಶಸ್ ಗೆದ್ದ ಆಸ್ಟ್ರೇಲಿಯಾ – Kannada News | Australia retain the Ashes 4 1

ಬಾಝ್ ಬಾಲ್ ತಂತ್ರದೊಂದಿಗೆ 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಆ್ಯಶಸ್ ಸರಣಿ ಗೆಲ್ಲುವ ಧ್ಯೇಯದೊಂದಿಗೆ ಬಂದಿದ್ದ ಇಂಗ್ಲೆಂಡ್ ತಂಡವು 4 ಸೋಲುಗಳೊಂದಿಗೆ ಮತ್ತೊಮ್ಮೆ ಮಂಡಿಯೂರಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಪಂದ್ಯದಲ್ಲಿ 82 ರನ್​ಗಳ ಜಯ ಸಾಧಿಸಿತ್ತು. ಈ ಮೂಲಕ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದ್ದರು.

ಇದಾಗ್ಯೂ ನಾಲ್ಕನೇ ಮ್ಯಾಚ್​ನಲ್ಲಿ ಕಂಬ್ಯಾಕ್ ಮಾಡಿದ್ದ ಇಂಗ್ಲೆಂಡ್ ತಂಡವು ಆತಿಥೇಯರಿಗೆ 4 ವಿಕೆಟ್​ಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐದನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಆಂಗ್ಲ ಪಡೆಗೆ ಸೋಲಿನ ರುಚಿ ತೋರಿಸುವಲ್ಲಿ ಆಸ್ಟ್ರೇಲಿಯನ್ನರು ಯಶಸ್ವಿಯಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 384 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡ ಪೇರಿಸಿದ್ದು ಬರೋಬ್ಬರಿ 567 ರನ್​ಗಳು.

183 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 154 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 342 ರನ್​ಗಳಿಸಿ ಆಲೌಟ್ ಆಗಿದೆ.

ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 160 ರನ್​ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಂಗ್ಲ ಬೌಲರ್​ಗಳು ಯಶಸ್ವಿಯಾಗಿದ್ದರು. ಇದಾಗ್ಯೂ ಆಸ್ಟ್ರೇಲಿಯಾ ತಂಡ 31.2 ಓವರ್​ಗಳಲ್ಲಿ 161 ರನ್​ಗಳಿಸಿ 5 ವಿಕೆಟ್​ಗಳ ವಿಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಐದು ಪಂದ್ಯಗಳ ಆ್ಯಶಸ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಅತ್ತ ಆಕ್ರಮಣಕಾರಿ ಆಟದೊಂದಿಗೆ (ಬಾಝ್ ಬಾಲ್ ಕ್ರಿಕೆಟ್) ಆ್ಯಶಸ್ ಸರಣಿ ಗೆಲ್ಲುವ ತಂತ್ರದೊಂದಿಗೆ ಆಗಮಿಸಿದ್ದ ಇಂಗ್ಲೆಂಡ್ ತಂಡವು ಈ ಬಾರಿ ಒಂದು ಗೆಲುವಿನೊಂದಿಗೆ ಮರಳಿರುವುದು ಸಮಾಧಾನಕರ.

ಏಕೆಂದರೆ ಇದು ಆಸ್ಟ್ರೇಲಿಯಾದಲ್ಲಿ 14 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಸಾಧಿಸಿದ ಮೊದಲ ಗೆಲುವಾಗಿದೆ. ಅಂದರೆ 2011 ರಲ್ಲಿ ನಡೆದ ಆ್ಯಶಸ್ ಸರಣಿಯ  ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿದ ಬಳಿಕಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಆದರೆ ಈ ಬಾರಿ ಒಂದು ಗೆಲುವಿನೋಂದಿಗೆ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್​, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: IPL 2026: ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.

Source link

ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್ – Kannada News | Gilli Bigg Boss: Fans Fulfill Actor’s 1M Instagram Follower Wish

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ರೇಸ್​​ನಲ್ಲಿ ಗಿಲ್ಲಿ ನಟ ಕಠಿಣ ಸ್ಪರ್ಧೆಯನ್ನೇ ನೀಡುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬ ಪ್ರಾರ್ಥನೆಯನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಗಿಲ್ಲಿ ನಟ ಇಟ್ಟ ಒಂದು ಬೇಡಿಕೆಯನ್ನು ಫ್ಯಾನ್ಸ್ ಹೊರಗೆ ಈಡೇರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗಿಲ್ಲಿ ಆಸೆ ಪೂರ್ಣಗೊಳ್ಳಲಿದೆ. ಹಾಗಾದರೆ, ಗಿಲ್ಲಿ ಇಟ್ಟ ಕೋರಿಕೆ ಏನು? ಆ ಬಗ್ಗೆ ಇಲ್ಲಿದೆ ವಿವರ.

ಜನಪ್ರಿಯತೆ ಹೆಚ್ಚಾದಂತೆಲ್ಲ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಇದು ಕೆಲವರಿಗೆ ಪ್ರತಿಷ್ಠೆ ಕೂಡ ಹೌದು. ಈ ಕಾರಣದಿಂದಲೇ ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್​​ಗಳನ್ನು ಹಂಚಿಕೊಂಡು ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ಗಿಲ್ಲಿ ನಟ ಅವರ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಒಂದು ಮಿಲಿಯನ್ (10 ಲಕ್ಷ) ಗಡಿ ತಲುಪುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ಆರಂಭಿಸಿದ ಆಂದೋಲನವೇ ಕಾರಣ.

ಗಿಲ್ಲಿ ನಟ ಅವರು ಇತ್ತೀಚೆಗೆ ಕಾವ್ಯಾ ಬಳಿ ಮಾತನಾಡುತ್ತಾ, ‘ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರಬೇಕಿತ್ತು’ ಎಂದು ಹೇಳಿಕೊಂಡರು. ಇದನ್ನು ಅವರ ಅಭಿಮಾನಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸದ್ಯ (ಜನವರಿ 8 ಬೆಳಿಗ್ಗೆ 9 ಗಂಟೆ) ಅವರ ಫಾಲೋವರ್ಸ್ ಸಂಖ್ಯೆ 9.36 ಲಕ್ಷ ಇದೆ. ಅನಾಯಾಸವಾಗಿ ಅವರ ಹಿಂಬಾಲಕರ ಸಂಖ್ಯೆ ಮಿಲಿಯನ್ ತಲುಪಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ

ಗಿಲ್ಲಿ ಅವರು ಬಿಗ್ ಬಾಸ್​​ಗೆ ಬಂದಾಗ ಅವರ ಇನ್​ಸ್ಟಾ ಹಿಂಬಾಲಕರ ಸಂಖ್ಯೆ 1.69 ಲಕ್ಷ ಮಂದಿ ಇದ್ದರು. ಈಗ ಅದು ಮಿಲಿಯನ್ ತಲುಪುತ್ತಿದೆ. ಮತ್ತೊಂದು ವಿಶೇಷ ಎಂದರೆ ಕೆಲವೇ ದಿನಗಳ ಹಿಂದೆ ಅವರ ಇನ್​​ಸ್ಟಾ ಫಾಲೋವರ್ಸ್​ ಸಂಖ್ಯೆ 6 ಲಕ್ಷ ಇತ್ತು. ಈಗ ಅಭಿಮಾನಿಗಳ ಕ್ಯಾಂಪೇನ್ ಬಳಿಕ ಆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಫಿನಾಲೆ ಪೂರ್ಣಗೊಳ್ಳುವ ವೇಳೆಗೆ ಅವರ ಹಿಂಬಾಲಕರ ಸಂಖ್ಯೆ ಎಷ್ಟಾಗಿರುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ಮರಿ ವೀರಪ್ಪನ್ ಕೊನೆಗೂ ಬಂಧನ – Kannada News | Male Mahadeshwara Tiger Poacher Govinda Caught: Forest Officials End 5 Month Hunt

ಚಾಮರಾಜನಗರ, ಜ.8: ಬರೋಬ್ಬರಿ 5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ನಟೋರಿಯಸ್ ಗೋವಿಂದ (Govinda) ಅಲಿಯಾಸ್​​ ಮರಿ ವೀರಪ್ಪನ್ ಇದೀಗ ಕೊನೆಗೂ ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಮರಿ ವೀರಪ್ಪನ್ ಬಂಧನ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಇದೀಗ ನಿರಂತರ ಕಾರ್ಯಚರಣೆಯ ನಂತರ ಗೋವಿಂದನ್ನು ಬಂಧಿಸಲಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟೋರಿಯಸ್ ಗೋವಿಂದ ಹುಡುಕಾಟ ನಡೆದಿತ್ತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಕಾಡಂಚಿನ ಗ್ರಾಮದಲ್ಲಿ ಈ ನಟೋರಿಯಸ್ ಗೋವಿಂದ ತಿರುಗಾಡುತ್ತಿದ್ದ ಎಂದು ಹೇಳಲಾಗಿತ್ತು.

ಇದೀಗ ಅರಣ್ಯಾಧಿಕಾರಿಗಳು ಮೈಸೂರಿನ ರೈಲ್ವೆ ನಿಲ್ಧಾಣದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಗೋವಿಂದ ಹುಲಿಗಳಿಗೆ ಕಾರ್ಬೊಫ್ಯೂರಾನ್ ವಿಷ ಹಾಕಿ ಸತ್ತ ಬಳಿಕ ದೇಹವನ್ನು ಮೂರು ತುಂಡಗಳಾಗಿ ಕತ್ತರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣ ಅರಣ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಚ್ಚಮಲ್ಲ, ಸಿದ್ದ, ಸಂಪು, ಚಂದು ಹಾಗೂ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಇತ್ತೀಚೆಗಷ್ಟೆ ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಆದ್ರೆ 5 ತಿಂಗಳಿಂದ ಅರಣ್ಯ ಅಧಿಕಾರಿಗಳ ಕೈಗೆ ಸಿಗದೆ ಆಟವಾಡಿಸುತ್ತಿದ್ದ ಗೋವಿಂದನ ಖಚಿತ ಮಾಹಿತಿ ಸಿಕ್ಕ ತಕ್ಷಣ ಅರಣ್ಯಾಧಿಕಾರಿಗಳು ಅವನನ್ನು ಬಂಧಿಸಿದ್ದಾರೆ. ಬರೋಬ್ಬರಿ 30 ಮಂದಿ ಅರಣ್ಯ ಸಿಬ್ಬಂದಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’, ಸಂಕಷ್ಟದಲ್ಲಿ ರೈತರು

ಯಾರು ಈ ‘ಮರಿ ವೀರಪ್ಪನ್’?

ಕಾಡುಗಳ್ಳ ವೀರಪ್ಪನ್ ಸತ್ತು ಹಲವು ವರ್ಷಗಳಾಗಿದ್ದರೂ, ಅವನಷ್ಟೇ ಅರಣ್ಯ ಪ್ರದೇಶದಲ್ಲಿ ಕ್ರೌರ್ಯ ಮೆರೆವ ಈ ಗೋವಿಂದನ್ನು ಮರಿ ವೀರಪ್ಪನ್​​ ಎಂದು ಕರೆಯಾಲಾಗಿತ್ತು. ಇತ್ತೀಚೆಗೆ (ನವೆಂಬರ್ 2025 ರಲ್ಲಿ) ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಭೀಕರ ಹುಲಿ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನಲ್ಲಿ ಚಿರತೆ ಅಥವಾ ಹುಲಿಗಳನ್ನು ಗುರಿಯಾಗಿಸಿ ಇರಿಸಿದ್ದ ವಿಷವನ್ನು ಸೇವಿಸಿ ದೊಡ್ಡ ಹುಲಿಯೊಂದು ಸಾವನ್ನಪ್ಪಿತ್ತು. ಅದನ್ನು ಮೂರು ತುಂಡುಗಳಾಗಿ ಕತ್ತರಿಸಿ ಕಾಡಿನೊಳಗೆ ಬಿಸಾಡಿದ್ದರು. ಈ ಭೀಕರ ಕೃತ್ಯ ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಇದು ಕೇವಲ ಬೇಟೆಯಲ್ಲ, ಅರಣ್ಯ ಅಧಿಕಾರಿಗಳ ಮೇಲಿನ ಆಕ್ರೋಶ ಎಂದು ಹೇಳಲಾಗಿತ್ತು. ಇದೀಗ ಆತನ ಬಂಧನ ಮಾಡಲಾಗಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್ – Kannada News | Late Night Rescue in Pune as Delivery Agent Helps Men Trapped on Balcony

ಪುಣೆ, ಜನವರಿ 08: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್​ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್​ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು. ಡೆಲಿವರಿ ಮಾಡಲು ಬಂದವರ ಬಳಿ ಸಹಾಯ ಕೇಳುವುದು ಅವರ ಪ್ಲ್ಯಾನ್ ಆಗಿತ್ತು. ಮಲಗಿದ್ದ ಪೋಷಕರಿಗೆ ಡಿಸ್ಟರ್ಬ್ ಆಗದಂತೆ ಮುಖ್ಯ ಬಾಗಿಲನ್ನು ತೆರೆಯುವುದು ಹೇಗೆ ಎಂಬುದನ್ನು ಸೂಚಿಸಿದರು. ಈ ಘಟನೆಯನ್ನು ಪುಣೆ ನಿವಾಸಿ ಮಿಹಿರ್ ಗಹುಕರ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Census 2027: ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿಯ ಮೊದಲ ಹಂತ ಶುರು – Kannada News | Census of India 2027: First Enumeration Stage of Census 2027 Set Between April and September

ಜನಗಣತಿ-ಸಾಂದರ್ಭಿಕ ಚಿತ್ರImage Credit source: Indian Express

ನವದೆಹಲಿ, ಜನವರಿ 08: ಇದೇ ಏಪ್ರಿಲ್ 1ರಿಂದ 2027ರ ಭಾರತದ ಜನಗಣತಿ(Census)ಯ ಮೊದಲ ಹಂತವು ಆರಂಭಗೊಳ್ಳಲಿದ್ದು ಸೆಪ್ಟೆಂಬರ್ 30ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆ ಪಟ್ಟಿ ಅಭಿಯಾನದೊಂದಿಗೆ ನಡೆಯಲಿದೆ. ಬುಧವಾರ ಹೊರಡಿಸಲಾಗಿರುವ ಸರ್ಕಾರಿ ಅಧಿಸೂಚನೆಯಲ್ಲಿ ಈ ಉದ್ದೇಶಕ್ಕಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು 30 ದಿನಗಳ ಅವಧಿಯನ್ನು ನಿರ್ದಿಷ್ಟಪಡಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) ಸರ್ಕಾರಗಳು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2026 ರವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ನಡೆಸುತ್ತವೆ. ಇದು ಜನಗಣತಿಯ ಮೊದಲ ಹಂತವಾಗಿದ್ದು, ಮನೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ದಾಖಲಿಸಲಾಗುತ್ತದೆ. ಆದರೆ ಇದು ಜನಸಂಖ್ಯೆಯ ಬಗ್ಗೆ ಅಲ್ಲ ಎನ್ನಲಾಗಿದೆ.

30ದಿನಗಳ ಮನೆ ಪಟ್ಟಿ ಅಭಿಯಾನ ಪ್ರಾರಂಭವಾಗುವ ಮೊದಲು 15 ದಿನಗಳ ಅವಧಿಯಲ್ಲಿ ಸ್ವಯಂ ಗಣತಿಗೆ ಅವಕಾಶವಿರುತ್ತದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುತ್ತಿದ್ದ ಜನಗಣತಿಯನ್ನು COVID-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇದನ್ನು 2021 ರಲ್ಲಿ ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು.

ಎರಡು ಹಂತಗಳಲ್ಲಿ ಡಿಜಿಟಲ್ ಜನಗಣತಿ
ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026 ರವರೆಗೆ ಮನೆ ಪಟ್ಟಿ ಮತ್ತು ವಸತಿ ಜನಗಣತಿ ಮತ್ತು ಫೆಬ್ರವರಿ 2027 ರಲ್ಲಿ ಜನಸಂಖ್ಯಾ ಜನಗಣತಿ. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಭಾರತದ ಜನಗಣತಿ 2027 ರ ಭಾಗವಾಗಿ ಮನೆ ಪಟ್ಟಿ ಕಾರ್ಯವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 1, 2026 ಮತ್ತು ಸೆಪ್ಟೆಂಬರ್ 30, 2026 ರ ನಡುವೆ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮತ್ತಷ್ಟು ಓದಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ, 11,718 ಕೋಟಿ ರೂ.ಮೀಸಲು

ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುವುದು ಎಂಬುದು ಗಮನಿಸಬೇಕಾದ ಸಂಗತಿ. ಈ ಕಾರ್ಯದ ಮೊದಲ ಹಂತದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವುದರಿಂದ, COVID-19 ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿಯವರೆಗೆ ವಿಳಂಬವಾಗಿದ್ದ ಹತ್ತು ವರ್ಷಗಳ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಕಳೆದ ವರ್ಷ ಡಿಸೆಂಬರ್ 12 ರಂದು, ಪ್ರಧಾನಿ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು 11,718.2 ಕೋಟಿ ರೂ. ವೆಚ್ಚದಲ್ಲಿ 2027 ರ ಭಾರತದ ಜನಗಣತಿಯನ್ನು ನಡೆಸುವ ಪ್ರಸ್ತಾಪವನ್ನು ಅನುಮೋದಿಸಿತು.

ದೇಶದ ಮೊದಲ ಡಿಜಿಟಲ್ ಜನಗಣತಿಯಲ್ಲಿ ಸುಮಾರು 3 ಮಿಲಿಯನ್ ಗಣತಿದಾರರು ಭಾಗವಹಿಸಲಿದ್ದಾರೆ. ಉತ್ತಮ ಗುಣಮಟ್ಟದ ಡೇಟಾವನ್ನು ಖಚಿತಪಡಿಸಿಕೊಳ್ಳಲು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ಡೇಟಾವನ್ನು ಸಂಗ್ರಹಿಸಲಾಗುತ್ತದೆ.

ಸಾಮಾನ್ಯವಾಗಿ ಸರ್ಕಾರಿ ಶಿಕ್ಷಕರಾಗಿರುವ ಜನಗಣತಿ ಗಣತಿದಾರರು ಎಲ್ಲಾ ಮಾಹಿತಿಯನ್ನು ತಮ್ಮ ಟ್ಯಾಬ್ಲೆಟ್‌ಗಳು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಮನೆ-ಮನೆಗೆ ಹೋಗಿ ನಮೂದಿಸುತ್ತಾರೆ. ಪ್ರತಿಯೊಂದು ಮನೆಯ ಸ್ಥಳ, ಸೌಕರ್ಯಗಳು, ಕುಟುಂಬ ಸದಸ್ಯರ ಶಿಕ್ಷಣ, ಭಾಷೆ, ಧರ್ಮ, ಉದ್ಯೋಗ, ಅಂಗವೈಕಲ್ಯ, ವಲಸೆ ಮತ್ತು ಇತರ ಪ್ರಮುಖ ವಿವರಗಳನ್ನು ದಾಖಲಿಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿ ನಮೂದಿಸಲಾದ ಡೇಟಾವನ್ನು ರಕ್ಷಿಸಲು ವಿಶೇಷ ತಾಂತ್ರಿಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಯಾವುದೇ ಡೇಟಾ ಸೋರಿಕೆ ಅಥವಾ ಟ್ಯಾಂಪರಿಂಗ್ ಆಗದಂತೆ ನೋಡಿಕೊಳ್ಳುತ್ತದೆ.

ಸ್ವಯಂ ಗಣತಿಯ ಆಯ್ಕೆ

ಈ ಬಾರಿ, ಸರ್ಕಾರವು ಜನರಿಗೆ ಸ್ವಯಂ-ಗಣತಿಯ ಆಯ್ಕೆಯನ್ನು ಸಹ ನೀಡುತ್ತದೆ. ಜನರು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ನಮೂದಿಸಲು ಸಾಧ್ಯವಾಗುತ್ತದೆ. ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಸಿಸ್ಟಮ್ ಲೋಡ್ ಅನ್ನು ಕಡಿಮೆ ಮಾಡುತ್ತದೆ. ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಲಭ್ಯವಿಲ್ಲದವರಿಗೆ ಕಾರ್ಯಕರ್ತರು ಡೇಟಾವನ್ನು ನಮೂದಿಸಲು ಮನೆ-ಮನೆಗೆ ಹೋಗುತ್ತಾರೆ. ಡಿಜಿಟಲ್ ಜನಗಣತಿಯು ಅತ್ಯಂತ ವೇಗವಾಗಿ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಡೇಟಾವನ್ನು ಒದಗಿಸುತ್ತದೆ ಎಂದು ಸರ್ಕಾರ ಹೇಳಿದೆ.

ದೇಶದ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿ ಪ್ರಮುಖ ಆಧಾರ

ದೇಶದ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿಯು ಅತ್ಯಂತ ಪ್ರಮುಖ ಆಧಾರವಾಗಿದೆ ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಎಷ್ಟು ಜನರು ವಾಸಿಸುತ್ತಿದ್ದಾರೆ, ಎಲ್ಲಿ, ಯಾವ ಪರಿಸ್ಥಿತಿಗಳಲ್ಲಿ ಮತ್ತು ಯಾವ ಸೌಕರ್ಯಗಳೊಂದಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ಇದು ಬಹಿರಂಗಪಡಿಸುತ್ತದೆ. ನೀರು, ವಿದ್ಯುತ್, ರಸ್ತೆಗಳು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಯೋಜನೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಲೋಕಸಭೆ, ವಿಧಾನಸಭೆ, ಪುರಸಭೆ ಮತ್ತು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಮತ್ತು ಗಡಿ ನಿರ್ಣಯಕ್ಕೂ ಈ ದತ್ತಾಂಶವು ಅತ್ಯಗತ್ಯ.

ಇದಕ್ಕೂ ಮೊದಲು ಜನಗಣತಿಯನ್ನು ಯಾವಾಗ ನಡೆಸಲಾಗಿತ್ತು?
ಭಾರತದಲ್ಲಿ ಕೊನೆಯ ಜನಗಣತಿಯನ್ನು 2011 ರಲ್ಲಿ ನಡೆಸಲಾಯಿತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿಯನ್ನು ಮುಂದೂಡಬೇಕಾಯಿತು. ಈಗ, ಈ ಪ್ರಕ್ರಿಯೆಯು 2027 ರಲ್ಲಿ ಪ್ರಾರಂಭವಾಗಲಿದೆ. ಜನಗಣತಿ ಕಾಯ್ದೆ 1948 ಮತ್ತು ಜನಗಣತಿ ನಿಯಮಗಳು 1990 ಈ ಕೆಲಸದ ಕಾನೂನು ಅಡಿಪಾಯಗಳಾಗಿವೆ. ಜನಗಣತಿಯು ಭಾರತದ ಅತ್ಯಂತ ಹಳೆಯ, ಅತ್ಯಂತ ವಿಶ್ವಾಸಾರ್ಹ ಮತ್ತು ಸಮಗ್ರ ದತ್ತಾಂಶ ಮೂಲವಾಗಿದ್ದು, ಎಲ್ಲಾ ಪ್ರಮುಖ ಸರ್ಕಾರಿ ಯೋಜನೆಗಳು ಮತ್ತು ನೀತಿಗಳನ್ನು ಆಧರಿಸಿದೆ.

Source link