ಅಂಬರ್‌ನಾಥ್‌ನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಕಾಂಗ್ರೆಸ್​ನ 12 ಸದಸ್ಯರ ಅಮಾನತು – Kannada News | Congress suspends 12 in Maharashtra after they supports BJP in Ambernath civic polls

ನವದೆಹಲಿ, ಜನವರಿ 7: ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಕಾಂಗ್ರೆಸ್ ಪಕ್ಷ ಇಂದು ಅಂಬರ್‌ನಾಥ್‌ನಲ್ಲಿ ತನ್ನ ಪಕ್ಷದ ಸ್ಥಳೀಯ ನಾಯಕರನ್ನು ಅಮಾನತುಗೊಳಿಸಿದೆ. ಮಹಾರಾಷ್ಟ್ರದಲ್ಲಿ (Maharashtra)  ಚುನಾವಣೋತ್ತರ ಮೈತ್ರಿಗಳ ಕುರಿತು ವ್ಯಾಪಕ ರಾಜಕೀಯ ವಿವಾದದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಠಿಣ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರ್‌ನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು, ರಾಜ್ಯ ನಾಯಕರ…

Read More

ಇಕ್ಕಟ್ಟಿಗೆ ಸಿಲುಕಿದ ‘ಜನ ನಾಯಗನ್’ ರಿಲೀಸ್: ನ್ಯಾಯಾಲಯ ಹೇಳಿದ್ದೇನು? – Kannada News | Jana Nayagan movie CBFC issue: Movie release may get postponed

ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಜನವರಿ 9 ರಂದು ಬಿಡುಗಡೆ ಆಗಲಿತ್ತು, ಆದರೆ ಕೊನೆಯ ಕ್ಷಣದಲ್ಲಿ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ. ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರವನ್ನು ನೀಡಲಾಗಿಲ್ಲ. ಬದಲಿಗೆ ಸಿನಿಮಾವನ್ನು ಮರುಪರಿಶೀಲನೆಗೆ ಸಮಿತಿಯು ಸೂಚಿಸಿತ್ತು. ಸಿಬಿಎಫ್​​ಸಿ ವಿರುದ್ಧ ಸಿನಿಮಾ ನಿರ್ಮಾಪಕರು ಮದ್ರಾಸ್ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಇಂದು ನಡೆದಿದೆ. ಆದರೆ ಆದೇಶವನ್ನು ಸಿನಿಮಾದ ಬಿಡುಗಡೆ ದಿನಾಂಕದಂದೆ ಅಂದರೆ ಜನವರಿ 09ರಂದೇ ಪ್ರಕಟಿಸುವುದಾಗಿ ಹೈಕೋರ್ಟ್ ಹೇಳಿರುವುದರಿಂದ ಸಿನಿಮಾ…

Read More

ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ – Kannada News | Toxic movie star Yash says he is not meeting his fans on birthday on 2026 Jan 8

ನಟ ರಾಕಿಂಗ್ ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬದ (Yash Birthday) ಸಂಭ್ರಮ. ಆದರೆ ಈ ಬಾರಿ ಕೂಡ ಅವರು ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಲು ಸಾಧ್ಯವಾಗುತ್ತಿಲ್ಲ. ಒಂದು ದಿನ ಮೊದಲೇ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ‘ನನ್ನ ಪ್ರೀತಿಯ ಅಭಿಮಾನಿಗಳೇ, ನಿಜ ಹೇಳಬೇಕೆಂದರೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಎಷ್ಟು ಕಾಯುತ್ತಿದ್ದೀರಿ ಎಂದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆ’ ಎಂದು ಯಶ್ (Yash)…

Read More

ಬೆಂಗಳೂರು ಪಬ್​​ನಲ್ಲಿ ಮಹಿಳೆಯ ಸೊಂಟದ ಕೆಳಗೆ ಹೊಡೆದ ವ್ಯಕ್ತಿ, ಮುಂದೇನಾಯಿತು ನೋಡಿ? – Kannada News | Bengaluru Pub Harassment: Female Technician Assaulted, Justice Denied

ಬೆಂಗಳೂರು, ಜ.7: ಬೆಂಗಳೂರಿನ ಪಬ್​​ನಲ್ಲಿ ಮಹಿಳಾ ಪೈರೋ ಟೆಕ್ನಿಷಿಯನ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ (Bengaluru pub harassment). ಹೊಸ ವರ್ಷದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸುದ್ದಿ ಭಾರೀ ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಪೈರೋ ಟೆಕ್ನಿಷಿಯನ್​​​ ಜತೆಗೆ ಗ್ರಾಹಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಬ್​​ಗೆ ಬಂದಿದ್ದ ಗ್ರಾಹಕ ಮಹಿಳೆಯ ಸೊಂಟದ ಕೆಳಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಪಬ್​​ ಸಿಬ್ಬಂದಿ ಹಾಗೂ ಬೌನ್ಸರ್​​​ಗೆ​​​​​​…

Read More

ಗ್ಯಾರಂಟಿ ಯೋಜನೆಯಿಂದ ಕೈದಿಗಳ ಸಂಬಳಕ್ಕೂ ಕುತ್ತು, 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ – Kannada News | Government Fails to Pay Wages to Hindalga Jail Inmates for Ten Months

ಬೆಳಗಾವಿ, ಜ.7: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ ಕಳೆದ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ. ಸರ್ಕಾರವು ದಿನಗೂಲಿಯಾಗಿ 524 ರೂಪಾಯಿ ನಿಗದಿಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಜೈಲಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇತನವು ಕೈದಿಗಳ ಕುಟುಂಬಗಳಿಗೆ ಆರ್ಥಿಕ ಸಹಾಯವಾಗುತ್ತದೆ ಮತ್ತು ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ಸದ್ಯ ಬೆಳಗಾವಿ ಜೈಲಿನಲ್ಲಿ ಮಾತ್ರ ಮೂರು ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಹಿಂಡಲಗಾ ಜೈಲು ಮಾತ್ರವಲ್ಲದೆ ರಾಜ್ಯದ ಇತರೆ…

Read More

ಪುರುಷರನ್ನು ನಾಯಿಗೆ ಹೋಲಿಸಿದರೇ ರಮ್ಯಾ: ನಟಿ ಹೇಳಿದ್ದೇನು? – Kannada News | Ramya on Stray Dogs and SC Ruling: Did She Compared Men to Dogs Full Details

ರಮ್ಯಾ (Ramya), ಕನ್ನಡ ಚಿತ್ರರಂಗದ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ರಾಜಕೀಯಕ್ಕೆ ಸಿನಿಮಾಗಳಿಗೆ ವಿರಾಮ ಇರಿಸಿದ ರಮ್ಯಾ, ಈಗ ಸಕ್ರಿಯ ರಾಜಕೀಯದಿಂದಲೂ ದೂರಾಗಿದ್ದಾರೆ. ಸಿನಿಮಾಗಳಿಗೆ ಮರು ಪ್ರವೇಶ ಮಾಡುವ ಪ್ರಯತ್ನದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ ಪ್ರಾರಂಭಿಸಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ದೂರಾದರೂ ಸಹ ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಕ್ರಿಯವಾಗಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ರಮ್ಯಾ, ಪ್ರಾಣಿಗಳ ಹಕ್ಕು ರಕ್ಷಣೆ, ವಿಶೇಷವಾಗಿ ಶ್ವಾನಗಳ ವಿಷಯದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಮೂಕಜೀವಿಗಳ ಪರವಾಗಿ ಅಗತ್ಯವಾದಾಗೆಲ್ಲ ದನಿ ಎತ್ತುತ್ತಾ ಬಂದಿದ್ದಾರೆ. ಕಳೆದ ವರ್ಷ…

Read More

ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರ ಸಾವು, 5 ಮಂದಿಗೆ ಗಾಯ – Kannada News | Three Dies Several Injured in boiler explosion at sugar factory in belagavi

ಬೆಳಗಾವಿ, (ಜನವರಿ 07): ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಬಾಯ್ಲರ್ ಸ್ಫೋಟಗೊಂಡ (Boiler Blast) ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ನಡೆದಿದೆ. ಅಕ್ಷಯ ತೋಪಡೆ(45), ದೀಪಕ್ ಮುನವಳ್ಳಿ(31), ಸುದರ್ಶನ ಬನೋಶಿ(25) ಮೃತ ದುರ್ದೈವಿಗಳು. ಗ್ರಾಮದ ಹೊರವಲಯದಲ್ಲಿರುವ ವಿಕ್ರಮ ಇನಾಮದಾರ್‌ ಎನ್ನುವರಿಗೆ ಸೇರಿದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿಈ ದುರಂತ ಸಂಭವಿಸಿದ್ದು, ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ…

Read More

ಸರ್ಕಾರಿ ಬಸ್​ಗಳ ದುಸ್ಥಿತಿಯನ್ನು ಬಯಲು ಮಾಡಿದ ಟಿವಿ9, ತುಕ್ಕು ಹಿಡಿದ ಬಸ್ಸಿನಲ್ಲಿ ಅಪಾಯಕಾರಿ ಪ್ರಯಾಣ – Kannada News | Bagalkotes Dakota Buses: Passengers Endure Daily Hardship in Dilapidated Government Transport

ಬಾಗಲಕೋಟೆ, ಜ.7: ಟಿವಿ9 ರಿಯಾಲಿಟಿ ಚೆಕ್ ಮೂಲಕ ಬಾಗಲಕೋಟೆಯಲ್ಲಿ ಸರ್ಕಾರಿ ಬಸ್​ಗಳ ದುಸ್ಥಿತಿಯು ಬೆಳಕಿಗೆ ಬಂದಿದೆ. ಡಕೋಟಾ ಬಸ್ ಎಂದು ಕರೆಯಲ್ಪಡುವ ಹಳೆಯ ಮತ್ತು ಕಿತ್ತುಹೋದ ಬಸ್​ಗಳಲ್ಲಿ ಪ್ರಯಾಣಿಕರು ಪ್ರತಿದಿನ ಸಂಕಟ ಅನುಭವಿಸುತ್ತಿದ್ದಾರೆ. ಮೆಟ್ಟಿಲುಗಳು ಮುರಿದು, ಬಸ್​ನ ಟಾಪ್ ಹಾರುವ ಸ್ಥಿತಿಯಲ್ಲಿ, ಲೈಟ್​ಗಳು ಕಾರ್ಯನಿರ್ವಹಿಸದೆ, ತುಕ್ಕು ಹಿಡಿದ ಬಸ್‌ಗಳು ಅಪಾಯಕಾರಿ ಪ್ರಯಾಣಕ್ಕೆ ಕಾರಣವಾಗಿವೆ. ಒಂದು ಬಸ್ 14 ವರ್ಷ 10 ತಿಂಗಳು ಹಳೆಯದಾಗಿದ್ದು, ಅದರ ವೈರಿಂಗ್ ಸಹ ಹೊರಬಿದ್ದಿರುವ ದೃಶ್ಯ ಕಂಡುಬಂದಿದೆ. ಸಾರಿಗೆ ಇಲಾಖೆಗೆ ಉತ್ತಮ ಹೆಸರಿದ್ದರೂ,…

Read More

Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ – Kannada News | Cap d’Agde: World’s Most Famous no cloth Village; Checkout more details here

ಈ ಒಂದು ನಗರಕ್ಕೆ ನೀವು ಟ್ರಿಪ್​​ ಹೋಗಲು ಯೋಚಿಸುತ್ತಿದ್ದರೆ, ನೀವು ಬಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಉಟ್ಟ ಬಟ್ಟೆಯಲ್ಲಿ ನೀವಿಲ್ಲಿಗೆ ಹೋಗಿ ದಿನಗಟ್ಟಲೆ ತಂಗಿ ಬರಬಹುದು. ಯಾಕೆಂದ್ರೆ ಈ ನಗರದಲ್ಲಿ ಎಲ್ಲೆಂದರಲ್ಲಿ ನಿಮಗೆ ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯವಿದೆ. ಇಂತಹ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಸ್ಥಳವೇ ಫ್ರಾನ್ಸ್‌ನ ಕ್ಯಾಪ್ ಡಿ’ಅಗ್ಡೆ (Cap d’Agde) ನಗರ. ಇದು ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇದು ಒಂದು ಸುಂದರ ನಗರ. ಈ ನಗರ ವಿಶ್ವದ  ಏಕೈಕ ನಗ್ನ ನಗರವಾಗಿದ್ದು,…

Read More

ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ – Kannada News | New Income Tax law come into effect from 2026 April 1st, here are few highlights

ನವದೆಹಲಿ, ಜನವರಿ 7: ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿರುವ ಮತ್ತು ತರುತ್ತಿರುವ ಸರ್ಕಾರ ಇದೀಗ ಆದಾಯ ತೆರಿಗೆ (Income Tax) ವಿಭಾಗದಲ್ಲಿ ಗುರುತರ ಬದಲಾವಣೆ ತರಲು ಹೊರಟಿದೆ. 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಬದಲು ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ. ಆರು ದಶಕದಲ್ಲೇ ಇದು ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆ ಎನ್ನಲಾಗಿದೆ. ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಜಾರಿಗೆ ತರಲಾಗುವುದನ್ನು ಘೋಷಿಸಲಿದ್ದಾರೆ. ಹೊಸ…

Read More