Headlines

ICC Awards: ಐಸಿಸಿ ಪ್ರಶಸ್ತಿಗೆ ಬುಮ್ರಾ, ಸ್ಯಾಮ್ಸನ್ ನಡುವೆ ಪೈಪೋಟಿ

ಐಪಿಎಲ್ 2026 ರ ಸಂಭ್ರಮದ ನಡುವೆ , ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದು, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕಾನರ್ ಈಸ್ಟರ್‌ಹ್ಯೂಗೆನ್ ಕೂಡ ಈ ಪ್ರಶಸ್ತಿಗೆ ಮೂರನೇ ನಾಮನಿರ್ದೇಶಿತರಾಗಿದ್ದಾರೆ. ಬುಮ್ರಾ ಮತ್ತು ಸ್ಯಾಮ್ಸನ್, 2026 ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಪ್ರದರ್ಶನದ ಆಧಾರದ ಮೇಲೆ ಮಾರ್ಚ್ ತಿಂಗಳ ಐಸಿಸಿ ತಿಂಗಳ…

Read More

ಹುಬ್ಬಳ್ಳಿ ಜಿಮ್ ಟ್ರೇನರ್ ಲವ್ ಜಿಹಾದ್ ಕೇಸಿಗೆ ನೇಹಾ ಕೊಲೆ ಲಿಂಕ್: ನಿರಂಜನ ಹಿರೇಮಠ ಸ್ಫೋಟಕ ಆರೋಪ

ಹುಬ್ಬಳ್ಳಿ, (ಏಪ್ರಿಲ್ 06): ಹುಬ್ಬಳ್ಳಿಯಲ್ಲಿ ಒಂದೊಂದೇ ಲವ್ ಜಿಹಾದ್ ಪ್ರಕರಣಗಳು (Hubballi Live Jihad Cases) ಬೆಳಕಿಗೆ ಬರುತ್ತಿವೆ. ಅದರಲ್ಲೂ ಜಿಮ್ ಟ್ರೈನರ್​​ಗಳು ಹಿಂದೂ ಯುವತಿಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡುವ ಆರೋಪಗಳು ಕೇಳಿಬರುತ್ತಿವೆ. ಈ ಪೈಕಿ ಸಮೀರ್ ಎನ್ನುವ ಜಿಮ್ ಟ್ರೈನರ್, ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನುವ ಆರೋಪವಿದ್ದು, ಈ ಸಂಬಂಧ ಈಗಾಗಲೇ ಇಬ್ಬರು ಯುವತಿಯರು ಸಮೀರ್ ಮುಲ್ಲಾನ ವಿರುದ್ಧ ದೂರು ದಾಖಲಿಸಿದ್ದಾರೆ….

Read More

ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್

ನವದೆಹಲಿ, ಏಪ್ರಿಲ್ 6: ದೇಶದ ಬೆಳವಣಿಗೆಗೆ ಬೇಕಾದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ರಸ್ತೆ ಸೌಕರ್ಯವೂ ಪ್ರಮುಖವಾದುದು. ಅದರಲ್ಲೂ ದೂರದೂರುಗಳನ್ನು ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಉತ್ತಮವಾಗಿರುವುದು ಮುಖ್ಯ. ಇತ್ತೀಚೆಗೆ ಸರ್ಕಾರ ನಿರ್ಮಿಸುತ್ತಿರುವ ಎಕ್ಸ್​ಪ್ರೆಸ್​ವೇಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಶಕ್ಯಗೊಂಡಿವೆ. ಬೆಂಗಳೂರಿನ ಮೈಸೂರಿಗೆ ಒಂದೆರಡು ಗಂಟೆಯಲ್ಲೇ ಕಾರಿನಲ್ಲಿ ಹೋಗಬಹುದು. ಇದೀಗ ಪುಣೆ ಮತ್ತು ಬೆಂಗಳೂರು ನಡುವೆ ಎಕ್ಸ್​ಪ್ರೆಸ್​ವೇ (Pune-Bengaluru Expressway) ನಿರ್ಮಿಸುವ ಯೋಜನೆ ಹಾಕಲಾಗಿದೆ. 700ರಿಂದ 745 ಕಿಮೀ ಉದ್ದದ ಪುಣೆ-ಬೆಂಗಳೂರು ಗ್ರೀನ್​ಫೀಲ್ಡ್ ಎಕ್ಸ್​ಪ್ರೆಸ್​ವೇ ಅನ್ನು 40,000 ಕೋಟಿ ರೂ…

Read More

ಗೋವಾ, ಗೋಕರ್ಣದಲ್ಲಿ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾಗೆ ಮೊದಲ ಹಂತದ ಶೂಟಿಂಗ್

ಅನೇಕ ಹಿರಿಯ ಕಲಾವಿದರು ಅಭಿನಯಿಸುತ್ತಿರುವ ‘ಕ್ಲಾಸ್ ಆಫ್ ಮೈಸೂರು’ (Class of Mysore) ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಒಂದು ನಿರೀಕ್ಷೆ ಇದೆ. ಈ ಚಿತ್ರದ ಪಾತ್ರವರ್ಗ ಮತ್ತು ಶೀರ್ಷಿಕೆ ಗಮನ ಸೆಳೆದಿದೆ. ರಂಗಾಯಣ ರಘು, ದತ್ತಣ್ಣ (Dattanna), ಶರತ್ ಲೋಹಿತಾಶ್ವ ಮುಂತಾದ ಹಿರಿಯ ನಟರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿವೆ. ಆ ಬಗ್ಗೆ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾ ತಂಡ ಮಾಹಿತಿ…

Read More

ಕಾರಿಗಾಗಿ ದಂಪತಿ ಮಧ್ಯೆ ಗಲಾಟೆ: ಮದ್ವೆಯಾದ ಹತ್ತೇ ತಿಂಗಳಿಗೆ ತಂಗಿ ಗಂಡನನ್ನೇ ಕೊಂದ ಬಾಮೈದ

ಆನೇಕಲ್​, ಏಪ್ರಿಲ್​ 06: ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ (murder) ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ಕೊಲೆ ಮಾಡಲಾಗಿದ್ದು,  ರಾಜು, ವೇಣು, ಶ್ರೇಯಸ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್…

Read More

ಸುಧಾರಾಣಿ-ಶಿವಣ್ಣನ ಸಂಬಂಧದ ಬಗ್ಗೆ ಅಪಪ್ರಚಾರ; ಶ್ವಾನಗಳ ಮೂಲಕ ಉತ್ತರ ಕೊಟ್ಟ ನಟಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾದ ಬಳಕೆ ಮಿತಿಮೀರಿ ಹೆಚ್ಚಿದೆ. ಯಾವುದು ಸುಳ್ಳು-ಯಾವುದು ನಿಜ? ಯಾವುದು ಎಐ-ಯಾವುದು ನಿಜವಾಗಲೂ ನಡೆದ ಘಟನೆ ಎಂಬುದನ್ನು ಪತ್ತೆ ಹಚ್ಚಲು ಅಸಾಧ್ಯ ಎಂಬ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಂಡು ಅನೇಕರು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಇಲ್ಲ, ಸಲ್ಲದ್ದನ್ನು ಹೇಳಲಾಗುತ್ತದೆ. ಈಗ ನಟಿ ಸುಧಾರಾಣಿ (Sudharani) ಕೂಡ ಈ ರೀತಿಯ ಫೇಕ್​ ನ್ಯೂಸ್​​ನ ಸಂತ್ರಸ್ತೆ ಆಗಿದ್ದಾರೆ. ಅವರು ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ…

Read More

2 ಸಾವಿರ ರೂ. ಬರುತ್ತೇ ಎಂದು ಖುಷಿ ಪಡಬೇಡಿ: ಮಹಿಳೆಯರಿಗೆ ದೊಡ್ಡ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಬಾಗಲಕೋಟೆ, ಏ.6: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಸರ್ಕಾರವು 8.17 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರನ್ನು ಟೀಕಿಸಿದ ಕುಮಾರಸ್ವಾಮಿ, ಅವರ ಪುತ್ರನನ್ನು ರಾಜಕೀಯಕ್ಕೆ ತಂದಿರುವುದನ್ನು ಪ್ರಶ್ನಿಸಿದರು….

Read More

ಇರಾನ್ ಮತ್ತು ಅಮೆರಿಕ ನಡುವೆ 45 ದಿನಗಳ ಕದನ ವಿರಾಮಕ್ಕೆ ಪಾಕ್ ಯತ್ನ

ಟೆಹ್ರಾನ್, ಏಪ್ರಿಲ್ 06: ಅಮೆರಿಕ ಮತ್ತು ಇಸ್ರೇಲ್ ಮತ್ತು ಇರಾನ್(Iran) ನಡುವೆ ನಡೆಯುತ್ತಿರುವ ಸಂಘರ್ಷ ಈಗ 37 ನೇ ದಿನವನ್ನು ತಲುಪಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಏತನ್ಮಧ್ಯೆ, ರಾಜತಾಂತ್ರಿಕ ಪರಿಹಾರದ ಭರವಸೆ ಇದೆ ಎಂದು ತೋರುತ್ತದೆ. ವರದಿಗಳ ಪ್ರಕಾರ, 45 ದಿನಗಳ ಕದನ ವಿರಾಮದ ಕುರಿತು ಮೂರು ಕಡೆಯ ನಡುವೆ ಮಾತುಕತೆ ತೀವ್ರಗೊಂಡಿದೆ. ಆಕ್ಸಿಯಾಸ್ ವರದಿಯ ಪ್ರಕಾರ, ಈ ಪ್ರಸ್ತಾಪದ ಕುರಿತು ಅಮೆರಿಕ, ಇರಾನ್ ಮತ್ತು ಪ್ರಾದೇಶಿಕ ಮಧ್ಯಸ್ಥಿಕೆ ವಹಿಸುವ ದೇಶಗಳ ನಡುವೆ ಗಂಭೀರ…

Read More

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಗುಪ್ತಚರ ಮುಖ್ಯಸ್ಥ ಮಜೀದ್ ಸಾವು, ಇರಾನ್​​ಗೆ ದೊಡ್ಡ ಹಿನ್ನಡೆ

ಟೆಹ್ರಾನ್, ಏಪ್ರಿಲ್ 06: ಇರಾನ್‌(Iran)ಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ದೇಶದ ಪ್ರಬಲ ಮಿಲಿಟರಿ ಸಂಘಟನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸೋಮವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ, ಅವರ ಸಾವಿಗೆ ಕಾರಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ನಂತರ, IRGC ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಇಸ್ಲಾಮಿಕ್ ರೆವಲ್ಯೂಷನರಿ…

Read More

ಟಿಮ್ ಡೇವಿಡ್ ತೂಫಾನ್​ಗೆ ಕನ್ನಡಿಗನ ದಾಖಲೆ ಧೂಳೀಪಟ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಡೆತ್ ಓವರ್​ಗಳಲ್ಲಿ ಅತ್ಯಧಿಕ ರನ್ ಚಚ್ಚಿದ ಭರ್ಜರಿ ದಾಖಲೆ ಟಿಮ್ ಡೇವಿಡ್ (Tim David) ಹೆಸರಿಗೆ ಸೇರ್ಪಡೆಯಾಗಿದೆ. ಐದು ವರ್ಷಗಳ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಬರೆದಿಟ್ಟಿದ್ದ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಟಿಮ್ ಡೇವಿಡ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 11ನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 25 ಎಸೆತಗಳನ್ನು ಎದುರಿಸಿದ…

Read More