Category Archives: Blog

Your blog category

ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್ – Kannada News | Finn Allen All World Records 

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ (Finn Allen) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಬಾರಿಸಿದ ಈ ಭರ್ಜರಿ ಶತಕದೊಂದಿಗೆ ಹಲವು ವಿಶ್ವ ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಆ ಎಲ್ಲಾ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

Source link

ಭಾರತೀಯ ಪ್ರೇಕ್ಷಕರನ್ನು ‘ಸೈಲೆಂಟ್’ ಮಾಡ್ತೀವಿ..!

T20 World Cup 2026: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂದು (ಮಾ.5) ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್​ರೌಂಡರ್ ಸ್ಯಾಮ್ ಕರನ್ ಟೀಮ್ ಇಂಡಿಯಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅದು ಸಹ 2023ರ ಏಕದಿನ ವಿಶ್ವಕಪ್ ಫೈನಲ್​ಗೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯಂತೆ ಎಂಬುದು ವಿಶೇಷ.

ಸೆಮಿಫೈನಲ್​ಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸ್ಯಾಮ್ ಕರನ್,  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳನ್ನು “ಸ್ತಬ್ಧಗೊಳಿಸುವ” ಇಚ್ಛೆ ವ್ಯಕ್ತಪಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯಂತೆ, ಕರನ್ ಕೂಡ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡುವುದು ತಂಡದ ಯಶಸ್ಸಿನ ಸಂಕೇತ ಎಂದು ಭಾವಿಸಿದ್ದಾರೆ.

ನಾವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿರುವ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ. ನಮ್ಮ ತಂಡವು ಯಾವುದಕ್ಕೂ ಹೆದರಲ್ಲ. ಪಂದ್ಯ ವೀಕ್ಷಿಸಲು ಬಂದಂತಹ ಅಭಿಮಾನಿಗಳು ಸೈಲೆಂಟ್ ಆಗಿದ್ದರೆ ಇಂಗ್ಲೆಂಡ್ ತಂಡವು ಉತ್ತಮವಾಗಿ ಆಡುತ್ತಿದೆ ಎಂದರ್ಥ. ಹೀಗಾಗಿ ನಾವು ಪ್ರೇಕ್ಷಕರನ್ನು ಸ್ಥಬ್ಧಗೊಳಿಸುತ್ತೇವೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ.

ಇದೇ ವೇಳೆ ಭಾರತೀಯ ಪ್ರೇಕ್ಷಕರ ಎದುರು ಆಡುವುದು ಕೂಡ ಸವಾಲು ಎಂದು ಸ್ಯಾಮ್ ಕರನ್ ಅಭಿಪ್ರಾಯಪಟ್ಟಿದ್ದಾರೆ. ಇದಾಗ್ಯೂ ಐಪಿಎಲ್ ಆಡಿದ ಅನುಭವ ಇಂಗ್ಲೆಂಡ್ ಆಟಗಾರರಿಗೆ ಇದ್ದು, ಇದು ಈ ಒತ್ತಡ ನಿಭಾಯಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ 2022ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದಂತೆ, ಈ ಬಾರಿಯೂ ಅಂತಹದ್ದೇ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಸ್ಯಾಮ್ ಕರನ್ ಹೇಳಿದ್ದಾರೆ.

ಒಟ್ಟಿನಲ್ಲಿ ಸ್ಯಾಮ್ ಕರನ್ ನೀಡಿರುವ ಈ ಸೈಲೆಂಟ್ ಹೇಳಿಕೆಯು 2023ರ  ಪ್ಯಾಟ್ ಕಮಿನ್ಸ್ ಅವರ ಸವಾಲನ್ನು ನೆನಪಿಸಿದೆ. ಈ ಸವಾಲಿನ ಮೂಲಕ 2023ರ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ಇದೀಗ ಸ್ಯಾಮ್ ಕರನ್ ಕೂಡ ಅಂತಹದ್ದೇ ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಅಲೆನ್ ಆರ್ಭಟಕ್ಕೆ 11 ವಿಶ್ವ ದಾಖಲೆಗಳು ಉಡೀಸ್

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮಿ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

 

Source link

ಕಾಡಾನೆಗಳ ಉಪಟಳದಿಂದ ಪಾರು ಮಾಡುತ್ತೆ ಟೆಂಟಕಲ್ ಫೆನ್ಸಿಂಗ್: ಹೇಗೆ ಗೊತ್ತೇ? – Kannada News | Tentacle Fencing Emerges as Effective Solution to Curb Wild Elephant Menace in Chikkamagaluru

ಚಿಕ್ಕಮಗಳೂರು ಕಾಡಾನೆ ಹಾವಳಿImage Credit source: tv9

ಚಿಕ್ಕಮಗಳೂರು, ಮಾರ್ಚ್ 5: ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಮಲೆನಾಡು ಭಾಗದಲ್ಲಿ ಕಾಡಾನೆಗಳ (Wild Elephants) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಕಾಫಿ ತೋಟಗಳು, ಭತ್ತದ ಗದ್ದೆಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ಸಂಚಾರ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕಾಡಾನೆ ದಾಳಿಗೆ ಹಲವರು ಮೃತಪಟ್ಟ ಘಟನೆಗಳು ವರದಿಯಾಗಿದ್ದು, ಸ್ಥಳೀಯರು ಭೀತಿಯಲ್ಲಿ ಜೀವನ ನಡೆಸುವಂತಾಗಿದೆ. ಕಾಡಾನೆಗಳ ಶಾಶ್ವತ ನಿಯಂತ್ರಣಕ್ಕಾಗಿ ರೈಲ್ವೆ ಬ್ಯಾರಿಕೇಡ್, ಅಗೆದ ಹೊಂಡಗಳು (ಟ್ರೆಂಚ್), ಸೊಲಾರ್ ಬೇಲಿ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ಹೆಚ್ಚಿನ ವೆಚ್ಚ ಹಾಗೂ ಪ್ರಕ್ರಿಯಾತ್ಮಕ ಅಡೆತಡೆಗಳಿರುವುದು ಗಮನಾರ್ಹ.

ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ವಿಧಾನ ಟೆಂಟಕಲ್ ಫೆನ್ಸಿಂಗ್

ಕಾಡಾನೆ ಹಹಾವಳಿ ನಿಯಂತ್ರಣಕ್ಕೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಪರಿಹಾರವಾಗಿ ‘ಟೆಂಟಕಲ್ ಫೆನ್ಸಿಂಗ್’ ಅಥವಾ ತೂಗು ಬೇಲಿ ವಿಧಾನವನ್ನು ಅಳವಡಿಸುವಂತೆ ಪರಿಸರವಾದಿಗಳು ಸಲಹೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು–ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಮಾದರಿ ಯಶಸ್ವಿಯಾಗಿದೆ ಎಂದು ಅವರು ಉದಾಹರಣೆ ನೀಡಿದ್ದಾರೆ.

ದಶಕದ ಹಿಂದೆ ಸಾರಗೋಡು, ತತ್ಕೋಳ ಹಾಗೂ ಕುಂದೂರು ಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದ ರೈತರು ಪ್ರಾಣ ಕಳೆದುಕೊಂಡಿದ್ದರು. ಕಾಫಿ ತೋಟಗಳು ಮತ್ತು ಕೃಷಿಭೂಮಿಗಳು ಹಾನಿಗೊಳಗಾಗಿದ್ದವು. ನಂತರ ಈ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸಿ, ಅರಣ್ಯ ಇಲಾಖೆ ಸ್ಥಳೀಯರ ಸ್ಥಳಾಂತರ ಮತ್ತು ಪುನರ್ವಸತಿ ಕಾರ್ಯ ಕೈಗೊಂಡಿತು. ಆದರೂ ಕಾಡಾನೆಗಳು ಕಾಡು ಬಿಟ್ಟು ಹೊರಬರುವ ಘಟನೆಗಳು ಮುಂದುವರಿದವು. ಈ ಹಿನ್ನೆಲೆಯಲ್ಲಿ ಟೆಂಟಕಲ್ ಫೆನ್ಸಿಂಗ್ ಅಳವಡಿಸಲಾಯಿತು.

ಹೇಗೆ ಕಾರ್ಯನಿರ್ವಹಿಸುತ್ತೆ ಟೆಂಟಕಲ್ ಫೆನ್ಸಿಂಗ್ / ತೂಗು ಬೇಲಿ?

ಟೆಂಟಕಲ್ ಫೆನ್ಸಿಂಗ್ ಅಥವಾ ಈ ತೂಗು ಬೇಲಿಯಲ್ಲಿ ಹಲವು ಹಂತಗಳಲ್ಲಿ ತಂತಿ ಜಾಲ ಇರುತ್ತದೆ. ಕಾಡಾನೆಗಳು ತಂತಿಯನ್ನು ಮೇಲಕ್ಕೆತ್ತಲು ಅಥವಾ ಕಿತ್ತುಹಾಕಲು ಯತ್ನಿಸಿದರೆ, ಮತ್ತೊಂದು ತಂತಿಯಿಂದ ಲಘು ವಿದ್ಯುತ್ ಶಾಕ್ ಅನುಭವಿಸಿ ಹಿಂದಕ್ಕೆ ಸರಿಯುತ್ತವೆ. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಕಾಡಾನೆಗಳ ಪ್ರವೇಶ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಟೆಂಟಕಲ್ ಫೆನ್ಸಿಂಗ್ ಯಾಕೆ ಉತ್ತಮ?

ಟ್ರೆಂಚ್‌ಗಳನ್ನು ಅಗೆದರೂ ಅವುಗಳನ್ನು ಮಣ್ಣು ತುಂಬಿ ಮುಚ್ಚುವ ಸಾಧ್ಯತೆ ಇದೆ. ಸೊಲಾರ್ ಬೇಲಿಗೆ ಮರದ ತುಂಡು ಹಾಕಿ ಮುರಿಯುವ ಉದಾಹರಣೆಗಳೂ ಕಂಡುಬಂದಿವೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮತ್ತು ರೈಲ್ವೆ ಇಲಾಖೆಯ ಸಹಕಾರ ಅಗತ್ಯವಿದೆ. ಆದರೆ ಟೆಂಟಕಲ್ ಫೆನ್ಸಿಂಗ್ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ವಿಧಾನವಾಗಿದ್ದು, ಇದರ ನಿರ್ವಹಣೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ ಎಂಬುದು ಪರಿಸರವಾದಿಗಳ ಅಭಿಪ್ರಾಯ.

ಇದನ್ನೂ ಓದಿ: ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್​​: ಸ್ಥಳೀಯರಲ್ಲಿ ಆತಂಕ

ಈಗಾಗಲೇ ಯಶಸ್ಸು ಕಂಡಿರುವ ಈ ಮಾದರಿಯನ್ನು ಮಲೆನಾಡಿನ ಇತರೆ ಕಾಡಾನೆ ಸಮಸ್ಯೆ ಪ್ರದೇಶಗಳಲ್ಲೂ ಜಾರಿಗೊಳಿಸುವಂತೆ ಆಗ್ರಹ ಕೇಳಿಬಂದಿದೆ. ಸರ್ಕಾರವು ತಜ್ಞರ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:59 am, Thu, 5 March 26

Source link

ಯಂಗ್ ಲುಕ್ ಅಲ್ಲಿ ಬಂದ ಮಲ್ಲಮ್ಮ; ಎಲ್ಲರೂ ಶಾಕ್ – Kannada News | Bigg Boss Fame Mallamma In Young Look fans Gets Shocked

ಮಲ್ಲಮ್ಮ ಅವರು ಯಾರಿಗೆ ಗೊತ್ತಿಲ್ಲ ನೀವೇ ಹೇಳಿ? ಬಿಗ್ ಬಾಸ್ ನೋಡಿದ ಪ್ರತಿಯೊಬ್ಬರಿಗೂ ಅವರ ಪರಿಚಯ ಇರುತ್ತದೆ ಎಂದರೂ ತಪ್ಪಾಗಲಾರದು. ಅವರಿಗೆ ವಯಸ್ಸಾಗಿದೆ. ಆದರೆ, ಅವರು ಯಂಗ್ ಲುಕ್ ಅಲ್ಲಿ ಬಂದಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಎಂದೇ ಹೇಳಬಹುದು. ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ವೇದಿಕೆ ಮೇಲೆ ಈ ಡ್ರಾಮಾ ನಡೆದಿದೆ ಮತ್ತು ವೀಕೆಂಡ್ ಅಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಳ ಖ್ಯಾತಿ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ – Kannada News | Heated Scene in Lucknow Rail Unit After Staffer Asked to Prove Surgery

ಲಕ್ನೋ, ಮಾರ್ಚ್​ 05: ರೈಲ್ವೆ ಸಿಬ್ಬಂದಿಯೊಬ್ಬರಿಗೆ ಪೈಲ್ಸ್​ ಆಪರೇಷನ್ ಮಾಡಲಾಗಿತ್ತು. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆಗ ಅಧಿಕಾರಿಯೊಬ್ಬರು ನಿನಗೆ ಆಪರೇಷನ್ ಆಗಿದೆ ಎಂಬುದಕ್ಕೆ ಏನು ಸಾಕ್ಷಿ ಇದೆ ಸಅಕ್ಷಿ ತೋರಿಸು ಬಳಿಕ ರಜೆ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಅದಕ್ಕೆ ಬೇಸರಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಯ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್ ರಾಜೇಶ್ ಮೀನಾ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಕ್ನೋದಲ್ಲಿ ನಡೆದ ಶಸ್ತ್ರಚಿಕಿತ್ಸೆಗಾಗಿ ಮೀನಾ ಅವರಿಗೆ ಫೆಬ್ರವರಿ 22 ರಿಂದ 28 ರವರೆಗೆ ರಜೆ ನೀಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಅವರ ಗಾಯ ಮಾಗದ ಕಾರಣ ರಜೆ ವಿಸ್ತರಿಸುವಂತೆ ಮನವಿ ಮಾಡಿದ್ದರು.ಬಳಿಕ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಗಾಯವನ್ನು ತೋರಿಸಿದ್ದಾರೆ. ಇದಾದ ಬಳಿಕ ರೈಲ್ವೆ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ನಂತರ, ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ದೃಢಪಡಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ – Kannada News | Who is Nayanika Reddy? Allu Sirish to Marry Prominent Businesswoman, Allu Family’s New Member

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ (Allu Sirish) ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಭಾವಿ ಅತ್ತಿಗೆ ನಯಾನಿಕಾ ರೆಡ್ಡಿ ಯಾರು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ತುಂಬಾನೇ ದೊಡ್ಡದು. ಹೀಗಾಗಿ, ಇವರ ವಿವಾಹ ಆಗುತ್ತಿರುವ ಹುಡುಗಿ ಕೂಡ ದೊಡ್ಡ ಕುಟುಂಬದವರೇ ಆಗಿರುತ್ತಾರೆ ಎಂಬ ಬಗ್ಗೆ ಅನುಮಾನ ಬೇಡ. ಈ ಮದುವೆಗಾಗಿ ಅಲ್ಲು ಅರ್ಜುನ್ ಕುಟುಂಬ ಸಾಕಷ್ಟು ಹಣವನ್ನು ಖರ್ಚು ಮಾಡಿದೆ.

ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ವಿವಾಹವಾಗುತ್ತಿದ್ದು, ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಮಾರ್ಚ್ 6ರಂದು ವಿವಾಹವಾಗಲಿದ್ದಾರೆ. ಹೈದರಾಬಾದ್​ ಅಲ್ಲಿ ಈ ವಿವಾಹ ಜರುಗಲಿದೆ.

ಅಲ್ಲು ಅರ್ಜುನ್ ಅವರ ಅತ್ತಿಗೆ ನಯಾನಿಕಾ ರೆಡ್ಡಿ ಹೈದರಾಬಾದ್‌ನವರಾಗಿದ್ದು, ಉದ್ಯಮಿಯಾಗಿದ್ದಾರೆ. ನಯಾನಿಕಾ ಅವರ ಕುಟುಂಬವೂ ದೊಡ್ಡ ವ್ಯವಹಾರವನ್ನು ಹೊಂದಿದೆ. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಅದೇ ರೀತಿ, ಅವರು ಹೆಚ್ಚು ಸುದ್ದಿಯಲ್ಲಿರಲು ಇಷ್ಟಪಡುವುದಿಲ್ಲ.

ನಯಾನಿಕಾ ತನ್ನ ಕುಟುಂಬ ವ್ಯವಹಾರವನ್ನು ನಡೆಸುತ್ತಾ ಇದ್ದಾರೆ. ಅಲ್ಲು ಸಿರೀಶ್ ಜೊತೆ ವಿವಾಹವಾಗುವ ಮೊದಲು ಅವರು ಹೆಚ್ಚು ಪರಿಚಿತರಾಗಿರಲಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಹೆಚ್ಚು ಸಕ್ರಿಯರಾಗಿಲ್ಲ. ತೆಲುಗು ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ನಯಾನಿಕಾ ಮತ್ತು ಅಲ್ಲು ಸಿರೀಶ್ ಮೊದಲು ಭೇಟಿಯಾದರು ಎನ್ನಲಾಗಿದೆ.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ವಿವಾಹ ಪೂರ್ವ ಪಾರ್ಟಿಯ ನಂತರ, ನಯಾನಿಕಾ ಮತ್ತು ಅಲ್ಲು ಸಿರೀಶ್ ಕ್ರಮೇಣ ಒಳ್ಳೆಯ ಸ್ನೇಹಿತರಾದರು ಮತ್ತು ಈ ಸ್ನೇಹ ಪ್ರೀತಿಗೆ ತಿರುಗಿತು. 2025ರಲ್ಲಿ, ಅಲ್ಲು ಸಿರೀಶ್ ನಯಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದರು. ಅಂದಿನಿಂದ, ಇವರ ನಿಶ್ಚಿತಾರ್ಥದ ವದಂತಿಗಳು ಹಬ್ಬಿದವು. ಇಬ್ಬರೂ ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡರು. ನಯಾನಿಕಾ ಮತ್ತು ಅಲ್ಲು ಸಿರೀಶ್ ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 5​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 5​, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ಬಿದಿಗೆ, ಉತ್ತರಾ ನಕ್ಷತ್ರ, ಶೂಲ ಯೋಗ, ಗರ್ಜ ಕರಣದ ಈ ದಿನದ ರಾಹುಕಾಲ ಮಧ್ಯಾಹ್ನ 1:59 ರಿಂದ 3:27 ರ ತನಕ ಇರಲಿದೆ. ಶುಭಕಾಲ ಮಧ್ಯಾಹ್ನ 12:31 ರಿಂದ 1:59 ರ ತನಕ ಇರಲಿದೆ.

ಇಂದು ಕೋಲಕುಡಿ ಕಾಳಿಕಾಂಬ ಉತ್ಸವ, ಕೊಳಗದಾಳ ಉತ್ಸವ ಹಾಗೂ ಸಂತ ತುಕಾರಾಮರ ಪುಣ್ಯದಿನದ ಉತ್ಸವ ನಡೆಯಲಿದೆ. ಕಳಲೆಯಲ್ಲಿ ರಥೋತ್ಸವ ಕೂಡ ಇರಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಡಾ. ಗುರೂಜಿ ಅವರು ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿ ಸಂತೃಪ್ತಿ, ಆರೋಗ್ಯ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಯೋಗ, ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ಗುರೂಜಿ ವಿವರಣೆ ನೀಡಿದ್ದಾರೆ.

 

Source link

ಇಷ್ಟೆಲ್ಲ ಆದ್ರೂ ಕೆವಿಎನ್​​ಗೆ ಇಲ್ಲ ಚಿಂತೆ; ಕೈಯಲ್ಲಿವೆ ಇನ್ನೂ ಹಲವು ಬಿಗ್ ಬಜೆಟ್ ಸಿನಿಮಾಗಳು – Kannada News | KVN Productions Unfazed by Film Delays: Mega Budget Projects and Strategic Planning

ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂದರೆ ಅದು ಸುಲಭದ ಮಾತಲ್ಲ. ಸಾಕಷ್ಟು ರಿಸ್ಕ್ ಇರುತ್ತದೆ. ಒಂದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುವಾಗಲೇ ಕೆಲವರು ಸುಸ್ತಾಗಿಬಿಡುತ್ತಾರೆ. ಆದರೆ, ಕನ್ನಡದ ‘ಕೆವಿಎನ್​ ಪ್ರೊಡಕ್ಷನ್ಸ್’ ಒಟ್ಟೊಟ್ಟಿಗೆ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯ ಬತ್ತಳಿಕೆಯಲ್ಲಿ ಇನ್ನೂ ಕೆಲವು ಸಿನಿಮಾಗಳು ಇವೆ. ಹಾಗಾದರೆ ಯಾವುದು ಆ ಚಿತ್ರ? ಸಿನಿಮಾಗಳು ಮುಂದಕ್ಕೆ ಹೋಗಿದ್ದರಿಂದ ಸಂಸ್ಥೆಗೆ ಏನಾದರೂ ತೊಂದರೆ ಆಯಿತೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಾಗ ಅಂದುಕೊಂಡ ದಿನಾಂಕದಂದು ಅದನ್ನು ರಿಲೀಸ್ ಮಾಡೋಕೆ ಸಾಧ್ಯ ಇಲ್ಲ ಎಂಬ ಐಡಿಯಾ ನಿರ್ಮಾಣ ಸಂಸ್ಥೆಗೆ ಇದ್ದೇ ಇರುತ್ತದೆ. ಅದರಲ್ಲೂ ‘ಜನ ನಾಯಗನ್’, ‘ಟಾಕ್ಸಿಕ್’ ರೀತಿಯ ಸಿನಿಮಾಗಳನ್ನು ಮಾಡುವಾಗ ಎದುರಾಗಬಹುದಾದ ಅಡೆತಡೆಗಳ ಬಗ್ಗೆ ನಿರ್ಮಾಣ ಸಂಸ್ಥೆ ಮೊದಲೇ ಆಲೋಚಿಸಿರುತ್ತದೆ. ಅದಕ್ಕೆ ತಕ್ಕಂತೆಯೇ ಉಳಿದೆಲ್ಲ ಸಿದ್ಧತೆಗಳು ನಡೆದಿರುತ್ತವೆ.

ಈಗಾಗಲೇ ಪ್ರೀ ಬಿಸ್ನೆಸ್​​ನಿಂದ ಸಾಕಷ್ಟು ಹಣ ಬಂದಿರುವುದರಿಂದ ನಿರ್ಮಾಣ ಸಂಸ್ಥೆ ಚಿಂತಿಸುತ್ತಿಲ್ಲ ಎನ್ನಲಾಗಿದೆ.
‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರವನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ರಾಜಕೀಯ ಶಕ್ತಿಗಳು ಕೆಲಸ ಮಾಡಿರಬಹುದು ಎಂದು ಊಹಿಸಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಭೀತಿ ಕಾರಣ. ತರಾತುರಿ ಮಾಡುವ ಬದಲು ಸ್ವಲ್ಪ ಕಾದು ರಿಲೀಸ್ ಮಾಡೋಣ ಎಂಬ ತಂತ್ರ ತಂಡದ್ದು. ಸದ್ಯದ ಪ್ಲ್ಯಾನ್ ಪ್ರಕಾರ, ಏಪ್ರಿಲ್ ಅಲ್ಲಿ ‘ಕೆಡಿ’, ಮೇ ತಿಂಗಳಲ್ಲಿ ‘ಜನ ನಾಯಗನ್’ ಹಾಗೂ ಜೂನ್ ಅಲ್ಲಿ, ‘ಟಾಕ್ಸಿಕ್’ ರಿಲೀಸ್ ಮಾಡುವ ಆಲೋಚನೆಯಲ್ಲಿ ನಿರ್ಮಾಣ ಸಂಸ್ಥೆ ಇದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?

ಈ ಮೂರು ಸಿನಿಮಾಗಳ ಹೊರತಾಗಿ ಇನ್ನೂ ಕೆಲವು ಚಿತ್ರಗಳು ನಿರ್ಮಾಣ ಸಂಸ್ಥೆ ಕೈಯಲ್ಲಿದೆ. ಬಾಲಿವುಡ್​​ನಲ್ಲಿ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಲಯಾಳಂನಲ್ಲಿ ‘ಮಂಜುಮೇಲ್​ ಬಾಯ್ಸ್’ ಟೀಂ ಜೊತೆ ಇವರು ಸಿನಿಮಾ ಮಾಡುತ್ತಿದ್ದು, ಕೆಲಸಗಳು ಸಾಗುತ್ತಿವೆ. ಇನ್ನು, ಟಾಲಿವುಡ್​​ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರದ ಕೆಲಸ ಕೂಡ ಇನ್ನಷ್ಟೇ ಆರಂಭ ಆಗಬೇಕಿದ್ದು, ಇದಕ್ಕೆ ಕೆವಿಎನ್ ಬಂಡವಾಳ ಹೂಡತ್ತಿದೆ. ಇನ್ನೂ ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿ ಇವೆಯಂತೆ. ಸಿನಿಮಾಗಳಿಗಾಗಿಯೇ ಸರಿ ಸುಮಾರು 2000 ಕೋಟಿ ರೂಪಾಯಿಯನ್ನು ಈ ಸಂಸ್ಥೆ ಹೂಡಿಕೆ ಮಾಡಿದೆ ಎಂಬುದು ನಿರ್ಮಾಣ ಸಂಸ್ಥೆಯ ಹೆಚ್ಚುಗಾರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Nepal Elections: ಇಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ, ಜೆನ್​ ಝಿ ಚಳವಳಿ ಬಳಿಕ ಮೊದಲ ಬಾರಿಗೆ ಮತದಾನ – Kannada News | Nepal Elections: Nepal Decides, India Watches: Stakes Behind the March 5 Polls

ಕಠ್ಮಂಡು, ಮಾರ್ಚ್​ 05: ನೇಪಾಳ(Nepal)ದಲ್ಲಿ ಇಂದು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳು ದೇಶದ ರಾಜಕೀಯಕ್ಕೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಮತಪೆಟ್ಟಿಗೆಗಳನ್ನು ಸಂಗ್ರಹಿಸಿದ 24 ಗಂಟೆಗಳ ಒಳಗೆ 65 ಫಸ್ಟ್-ಪಾಸ್ಟ್-ದಿ-ಪೋಸ್ಟ್ (ಎಫ್‌ಪಿಪಿ) ಸ್ಥಾನಗಳ ಫಲಿತಾಂಶಗಳನ್ನು ಘೋಷಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ಪಿಆರ್ ಅಡಿಯಲ್ಲಿ ನಿರ್ಧರಿಸಲಾದ 110 ಸ್ಥಾನಗಳ ಎಣಿಕೆಯು ಎರಡರಿಂದ ಮೂರು ದಿನಗಳನ್ನು ತೆಗೆದುಕೊಳ್ಳಬಹುದು.2022ರಲ್ಲಿ ಫಲಿತಾಂಶವನ್ನು ಅಂತಿಮಗೊಳಿಸಲು ಎರಡು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿತ್ತು. ನೇಪಾಳವನ್ನು ಏಳು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ. ಕೋಶಿ, ಮಾಧೇಶ್, ಬಾಗ್ಮತಿ, ಗಂಡಕಿ, ಲುಂಬಿನಿ, ಕರ್ನಾಲಿ ಮತ್ತು ಸುದುರ್​ಪಶ್ಚಿಮ್. ಈ ಎಲ್ಲಾ ಪ್ರದೇಶಗಳಲ್ಲಿ ಇಂದು ಮತದಾನ ನಡೆಯಲಿದೆ. ಹಲವಾರು ಪ್ರಮುಖ ಪಕ್ಷಗಳು ಮತ್ತು ಹೊಸ ರಾಜಕೀಯ ಗುಂಪುಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

ಪ್ರಮುಖ ಪಕ್ಷಗಳಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP), ನೇಪಾಳಿ ಕಾಂಗ್ರೆಸ್, ನೇಪಾಳ ಕಮ್ಯುನಿಸ್ಟ್ ಪಕ್ಷ (UML), ನೇಪಾಳ ಕಮ್ಯುನಿಸ್ಟ್ ಪಕ್ಷ (NCP), ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (RPP), ಜನತಾ ಸಮಾಜವಾದಿ ಪಕ್ಷ-ನೇಪಾಳ (PSP-N), ಜನ್ಮತ್ ಪಕ್ಷ ಮತ್ತು ಏಕೀಕೃತ ರಾಷ್ಟ್ರೀಯ ಪಕ್ಷ (UNP) ಸೇರಿವೆ. ಹಲವಾರು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸಹ ಸ್ಪರ್ಧಿಸುತ್ತಿದ್ದಾರೆ.

ನೇಪಾಳದ ಜನರು ಇಂದು ಮಾರ್ಚ್ 5 ರಂದು ತಮ್ಮ ಹೊಸ ಸರ್ಕಾರವನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣಾ ಆಯೋಗವು ಚುನಾವಣೆಗೆ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ, 300,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹಂಗಾಮಿ ಚುನಾವಣಾ ಆಯುಕ್ತ ರಾಮ್ ಪ್ರಸಾದ್ ಭಂಡಾರಿ ತಿಳಿಸಿದ್ದಾರೆ.
ಮತಪೆಟ್ಟಿಗೆಗಳನ್ನು ಸಂಗ್ರಹಿಸಿದ ತಕ್ಷಣ ಎಣಿಕೆ ಪ್ರಾರಂಭವಾಗುತ್ತದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಿಂಸಾತ್ಮಕ ಯುವ ಪ್ರತಿಭಟನೆಗಳ ನಡುವೆ ಕೆ.ಪಿ. ಶರ್ಮಾ ಓಲಿ ಅವರ ಸರ್ಕಾರದ ಪತನದ ನಂತರ ಈ ಚುನಾವಣೆ ನಡೆಯುತ್ತದೆ.

ಮತ್ತಷ್ಟು ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ಪ್ರಮುಖ ಮುಖಗಳು
ಕೆ.ಪಿ. ಶರ್ಮಾ ಓಲಿ: ನೇಪಾಳದ ಮಾಜಿ ಪ್ರಧಾನಿ ಮತ್ತು ಕಮ್ಯುನಿಸ್ಟ್ ಪಕ್ಷದ (ಯುಎಂಎಲ್) ಪ್ರಮುಖ ನಾಯಕ. ವಿವಾದಗಳ ಹೊರತಾಗಿಯೂ, ಅವರು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ.

ಗಗನ್ ಥಾಪಾ: ನೇಪಾಳಿ ಕಾಂಗ್ರೆಸ್‌ನ ಪ್ರಭಾವಿ ನಾಯಕ. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಉದ್ಯೋಗ ಹೆಚ್ಚಿಸುವತ್ತ ಅವರ ಗಮನ.

ಬಾಲೆನ್ ಶಾ: ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಹೊಸ ಮುಖ. ಹಿಂದೆ ಕಠ್ಮಂಡುವಿನ ಜನಪ್ರಿಯ ಮೇಯರ್ ಆಗಿದ್ದ ಬಾಲೆನ್ ಶಾ, ಮಾಜಿ ರ‍್ಯಾಪರ್ ಮತ್ತು ಸಿವಿಲ್ ಎಂಜಿನಿಯರ್. ಅವರು ಸುಧಾರಣಾವಾದಿ ನಾಯಕರಾಗಿ ಖ್ಯಾತಿಯನ್ನು ಹೊಂದಿದ್ದಾರೆ ಮತ್ತು ವಿಶೇಷವಾಗಿ ಯುವ ಮತ್ತು ನಗರ ಮತದಾರರಲ್ಲಿ ಜನಪ್ರಿಯರಾಗಿದ್ದಾರೆ.

ನೇಪಾಳದ ಚುನಾವಣಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ನೇಪಾಳದ ಸರಿಸುಮಾರು 30 ಮಿಲಿಯನ್ ಜನಸಂಖ್ಯೆಯಲ್ಲಿ, 19 ಮಿಲಿಯನ್ ಮತದಾರರು ಹೊಸ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತಗಳನ್ನು ಚಲಾಯಿಸುತ್ತಾರೆ. 275 ಸದಸ್ಯರ ಪ್ರತಿನಿಧಿ ಸಭೆ ಅಥವಾ ಸಂಸತ್ತಿನಲ್ಲಿ 165 ಸ್ಥಾನಗಳಿಗೆ ಮತ ಚಲಾಯಿಸಲಾಗುವುದು. ಮತದಾರರು ನೇರವಾಗಿ 165 ಸದಸ್ಯರನ್ನು ಆಯ್ಕೆ ಮಾಡುತ್ತಾರೆ, ಉಳಿದ 110 ಸ್ಥಾನಗಳನ್ನು ಪಕ್ಷಗಳಿಗೆ ಅವರ ಮತ ಹಂಚಿಕೆಗೆ ಅನುಗುಣವಾಗಿ ನೀಡಲಾಗುತ್ತದೆ.

ಈ ಚುನಾವಣೆ ಏಕೆ ಮುಖ್ಯ?
ಕಳೆದ ಒಂದು ವರ್ಷದಿಂದ ನೇಪಾಳ ರಾಜಕೀಯ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಿರುವ ಸಮಯದಲ್ಲಿ ಈ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 2025 ರಲ್ಲಿ, ಭ್ರಷ್ಟಾಚಾರ, ನಿರುದ್ಯೋಗ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಬೃಹತ್ Gen-Z ಪ್ರತಿಭಟನೆಗಳು ನಡೆದವು. ವಿಶೇಷವಾಗಿ ಯುವಕರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿದರು.

ಈ ಪ್ರತಿಭಟನೆಗಳು ಹಿಂಸಾಚಾರ ಮತ್ತು ಘರ್ಷಣೆಗಳಿಗೆ ಕಾರಣವಾದವು, ಇದರಿಂದಾಗಿ ಪ್ರಧಾನಿ ರಾಜೀನಾಮೆ ನೀಡಬೇಕಾಯಿತು. ಬಳಿಕ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು, ಅವರು ಆರು ತಿಂಗಳೊಳಗೆ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು. ಮಾರ್ಚ್ 5 ರಂದು ನಿಗದಿಯಾಗಿರುವ ಚುನಾವಣೆ ಆ ಭರವಸೆಯ ಭಾಗವಾಗಿದೆ.

ನೇಪಾಳ ಚುನಾವಣೆ ಭಾರತಕ್ಕೆ ಏಕೆ ಮುಖ್ಯ?

ನೇಪಾಳದಲ್ಲಿನ ರಾಜಕೀಯ ಬದಲಾವಣೆಗಳು ಭಾರತದ ಕಾರ್ಯತಂತ್ರ, ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ನೇಪಾಳದ ಚುನಾವಣೆಗಳ ಫಲಿತಾಂಶವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತದೆ.

ನೇಪಾಳದ ಚುನಾವಣೆಗಳು ಭಾರತಕ್ಕೆ ಮುಖ್ಯ ಏಕೆಂದರೆ ಅವು ಪ್ರಾದೇಶಿಕ ಸ್ಥಿರತೆ, ಭದ್ರತೆ, ಆರ್ಥಿಕ ಸಹಕಾರ ಮತ್ತು ದಕ್ಷಿಣ ಏಷ್ಯಾದಲ್ಲಿನ ವಿಶಾಲ ಭೌಗೋಳಿಕ ರಾಜಕೀಯ ಸಮತೋಲನದ ಮೇಲೆ ಪ್ರಭಾವ ಬೀರುತ್ತವೆ.

ಲಕ್ಷಾಂತರ ನೇಪಾಳಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ, ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳು ಗಡಿಯ ಎರಡೂ ಬದಿಗಳಲ್ಲಿರುವ ಸಮುದಾಯಗಳನ್ನು ಬೆಸೆಯುತ್ತವೆ.
ಭಾರತವು ನೇಪಾಳದಲ್ಲಿ ಹಲವಾರು ಜಲವಿದ್ಯುತ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಮುಂದಿನ ನೇಪಾಳಿ ಸರ್ಕಾರದ ವಿಧಾನವು ಈ ಯೋಜನೆಗಳು ಎಷ್ಟು ಬೇಗನೆ ಮುಂದುವರೆಯುತ್ತವೆ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? – Kannada News | Lunar Eclipse March 05​: How Many Pradakshinas for Which Deity?

ಬೆಂಗಳೂರು, ಮಾರ್ಚ್​​ 05​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದೇವಾಲಯಗಳಲ್ಲಿ ಪ್ರದಕ್ಷಿಣೆ ಹಾಕುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಸಾಮಾನ್ಯವಾಗಿ, ಭಕ್ತರು ದೇವರಿಗೆ ಮೂರು ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೆರಡೂ ಇವೆ. ಮೂರು ಪ್ರದಕ್ಷಿಣೆಗಳು ತ್ರಿಗುಣಗಳಾದ ಸತ್ವ, ರಜಸ್, ತಮಸ್ ಹಾಗೂ ಮತ್ಸ್ಯಲೋಕ, ಸ್ವರ್ಗಲೋಕ, ಪಾತಾಳಲೋಕಗಳ ಸಂಕೇತವಾಗಿವೆ. ಇದು ಭಗವಂತನಿಗೆ ಕಾಯ, ವಾಚ, ಮನಸಗಳಿಂದ ಶರಣಾಗತಿಯನ್ನು ಸೂಚಿಸುತ್ತದೆ.

ಆದರೆ, ಕೆಲವು ನಿರ್ದಿಷ್ಟ ದೇವರುಗಳಿಗೆ ಪ್ರದಕ್ಷಿಣೆಯ ಸಂಖ್ಯೆಯು ಭಿನ್ನವಾಗಿರುತ್ತದೆ. ಉದಾಹರಣೆಗೆ, ಗಣಪತಿಗೆ ಒಂದು ಪೂರ್ಣ ಪ್ರದಕ್ಷಿಣೆ, ಶಿವನಿಗೆ ಅರ್ಧ ಪ್ರದಕ್ಷಿಣೆ ಸಾಕು. ದೇವಿಯ ದೇವಸ್ಥಾನಗಳಲ್ಲಿ ನಾಲ್ಕು ಪ್ರದಕ್ಷಿಣೆಗಳನ್ನು ಮಾಡುವುದು ರೂಢಿ. ಸೂರ್ಯ ಭಗವಾನರಿಗೆ ಆತ್ಮ ನಮಸ್ಕಾರದ ರೂಪದಲ್ಲಿ ಏಳು ಸುತ್ತು ಸುತ್ತುವುದರಿಂದ ಪರಿಪೂರ್ಣ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪ್ರದಕ್ಷಿಣೆಗಳು ಕೇವಲ ಒಂದು ಆಚರಣೆಯಾಗದೆ, ನಮ್ಮ ಭಕ್ತಿ ಮತ್ತು ಸಮರ್ಪಣೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿವೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Source link