Headlines

ನರ್ಸ್​​ ನಿರ್ಲಕ್ಷ್ಯಕ್ಕೆ 6 ತಿಂಗಳ ಮಗುವಿನ ಬೆರಳೇ ತುಂಡು!: ಆಸ್ಪತ್ರೆ ವಿರುದ್ಧ ಕೇಸ್​​ ದಾಖಲು – Kannada News | Bangalore Nurse Negligence: 6 Month Old Baby’s Finger Cut at Indiranagar Hospital

ಬೆಂಗಳೂರು, ಫೆಬ್ರವರಿ 25: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್​​ ಕತ್ತರಿಸಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ ಮಗುವನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್​​ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭ ನಿರ್ಲಕ್ಷದ ಕಾರಣದಿಂದ ನರ್ಸ್ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ…

Read More

ಭಜನೆ, ಘಂಟೆ ಶಬ್ದದಿಂದ ಕಿರಿಕಿರಿ ಆರೋಪ: ದೇಗುಲದ ಬಳಿ ಮುಸ್ಲಿಂ ವ್ಯಕ್ತಿ ಹೈಡ್ರಾಮಾ – Kannada News | Chikkamagaluru: Muslim Man Disrupts Temple Bhajans Over Noise Complaint

ಚಿಕ್ಕಮಗಳೂರು, ಫೆಬ್ರವರಿ 25: ಭಜನೆ ಹಾಡು, ಜಾಗಟೆ, ಘಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆಯೆಂದು ಮುಸ್ಲಿಂ ವ್ಯಕ್ತಿಯೊಬ್ಬ ಚಿಕ್ಕಮಗಳೂರು ನಗರದ ಹಳೇ ಉಪ್ಪಳ್ಳಿಯಲ್ಲಿರುವ ಈಶ್ವರ ದೇಗುಲ ಬಳಿ ಹೈಡ್ರಾಮಾ ನಡೆಸಿದ್ದಾನೆ. ಭಜನೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪೊಲೀಸರಿಗೆ ಕರೆ ಮಾಡಿದ್ದು, ದೇವಾಲಯದಿಂದ ಬರುವ ಶಬ್ದದಿಂದ ಕಿರಿಕಿರಿ ಆಗುತ್ತಿದೆ. ಹೀಗಾಗಿ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಫಾರೂಕ್​​ ಎಂಬಾತ ಪಟ್ಟು ಹಿಡಿದಿದ್ದಾನೆ. ದೇಗುಲದ ಅಕ್ಕಪಕ್ಕದ ನಿವಾಸಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದು, ಈತ ದೇವಾಲಯದ ಪಕ್ಕದಲ್ಲೇ ವಾಸವಿದ್ದಾನೆ ಎಂಬುದು…

Read More

Video: ಏರ್​​​ಪೋರ್ಟ್​ ಸಿಬ್ಬಂದಿಯ ಕುತ್ತಿಗೆಗೆ ಚಾಕು ಹಿಡಿದ ದಾಳಿಕೋರ, ಉಪಾಯದಿಂದ ಕಾಪಾಡಿದ ಮಾಜಿ ಬಾಕ್ಸರ್ – Kannada News | Former Boxer Risks Life to Rescue Flight Attendant in Airport Standoff

ಅಲ್ಮಾಟಿ, ಫೆಬ್ರವರಿ 25: ದುಷ್ಕರ್ಮಿಯೊಬ್ಬ ಏರ್ಪೋರ್ಟ್​ ಮಹಿಳಾ ಸಿಬ್ಬಂದಿಯ ಕೂದಲು ಹಿಡಿದು ಕುತ್ತಿಗೆಗೆ ಚಾಕು ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ. ಕಝಾಕಿಸ್ತಾನದ ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಸಿಬ್ಬಂದಿಯನ್ನು ಕಾಪಾಡಲು ಆಕೆಯ ಬದಲಾಗಿ ಆ ಸ್ಥಾನದಲ್ಲಿ ತಾನು ನಿಲ್ಲುವುದಾಗಿ ಹೇಳಿ ಉಪಾಯದಿಂದ ಸಿಬ್ಬಂದಿಯನ್ನು ಪಕ್ಕಕ್ಕೆ ಕಳುಹಿಸಿ ಮಾಜಿ ಬಾಕ್ಸರ್ ಮೂಸಾ ಅಬ್ರೈಮ್ ದಾಳಿಕೋರನ ಪಕ್ಕದಲ್ಲಿ ನಿಂತರು. ಬಳಿಕ ಆತನ ಗಮನ ಬೇರೆಡೆಗೆ ಸೆಳೆದು ಚಾಕುವನ್ನು ಕಸಿದುಕೊಂಡು ಆತನನ್ನು ನೆಲಕ್ಕೆ ನೂಕಿದ್ದಾರೆ. ಆಗ ಪೊಲೀಸರು ದಾಳಿಕೋರನನ್ನು ಹಿಡಿದಿದ್ದಾರೆ….

Read More

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ! – Kannada News | Lunar Eclipse 2026 : Dr. Basavaraj Gurujis Astrological Predictions for Gemini

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣ ಮಿಥುನ ರಾಶಿಯವರ ಮೇಲೆ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಈ ಚಂದ್ರಗ್ರಹಣವು ಮಿಥುನ ರಾಶಿಯವರಿಗೆ “ಡಬಲ್ ಧಮಾಕ” ಫಲಿತಾಂಶಗಳನ್ನು ತರಲಿದೆ. ಮೃಗಶಿರಾ, ಆರಿದ್ರ ಮತ್ತು ಪುನರ್ವಸು ನಕ್ಷತ್ರದವರು ಈ ಪ್ರಭಾವಕ್ಕೆ ಒಳಪಡುತ್ತಾರೆ. ಮಿಥುನ ರಾಶಿಯಿಂದ ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಇದು ಭ್ರಾತೃ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಗುರೂಜಿ ಸೂಚನೆ ನೀಡಿದ್ದಾರೆ. ಈ ಗ್ರಹಣದ ಪ್ರಭಾವದಿಂದ ಮಿಥುನ…

Read More

ಬೆಂಗಳೂರಿನ ಚಿಕ್ಕಪೇಟೆಯ ಹಾರ್ಡ್​ವೇರ್ ಗೋಡೌನ್​ಗೆ ಬೆಂಕಿ! – Kannada News | Chickpet Hardware Warehouse Fire in Bengaluru: 175 Shops Engulfed

ಬೆಂಗಳೂರು, ಫೆಬ್ರವರಿ 25: ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಇರುವ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದವು. ಕೆಳಮಹಡಿಯಲ್ಲಿನ ಹಾರ್ಡ್‌ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೇಲಿನ ಅಂತಸ್ತುಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ಸಾಮಗ್ರಿಗಳು, ಬಟ್ಟೆ ಹಾಗೂ ಸುಡುವಂತಹ ಇತರೆ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ. ಅಗ್ನಿ ಅವಘಡದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದಟ್ಟ ಹೊಗೆ…

Read More

ಭಾರತದ ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕದಿಂದ ಶೇ. 126 ಸುಂಕ; ಕುಸಿತ ಕಂಡ ಸೋಲಾರ್ ಕಂಪನಿಗಳ ಷೇರುಬೆಲೆ – Kannada News | US impose import duty of 126pc on Indian solar products

ನವದೆಹಲಿ, ಫೆಬ್ರುವರಿ 25: ಭಾರತದ ಸೋಲಾರ್ ಉತ್ಪನ್ನಗಳ (Indian solar imports) ಮೇಲೆ ಅಮೆರಿಕ ಶೇ. 126ರಷ್ಟು ಪೂರ್ವಭಾವಿ ಸುಂಕಗಳನ್ನು (Preliminery duties) ವಿಧಿಸಿದೆ. ಇತರ ಕೆಲ ದೇಶಗಳ ಮೇಲೂ ವಿವಿಧ ದರಗಳ ಸುಂಕಗಳನ್ನು ಅಮೆರಿಕ ವಿಧಿಸಿದೆ. ಲಾವೋಸ್, ಇಂಡೋನೇಷ್ಯಾ ದೇಶಗಳಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಶೇ. 81ರಿಂದ 143ರಷ್ಟು ಸುಂಕವನ್ನು ಅಮೆರಿಕ ಹೇರಿದೆ ಎಂದು ಸಿಎನ್​ಬಿಸಿ ಟಿವಿ18ನಲ್ಲಿ ವರದಿಯಾಗಿದೆ. ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೂ ಅದರ ಪ್ರತಿಸುಂಕ ಕ್ರಮಕ್ಕೂ ಸಂಬಂಧ…

Read More

ಮಂಗಳೂರು ನಗರಕ್ಕೇ ಎಂಟ್ರಿಕೊಟ್ಟ ಚಿರತೆ: ಕದ್ರಿ ಬಳಿ ಚಿರತೆ ಓಡಾಟದ ವಿಡಿಯೋ ವೈರಲ್

ಮಂಗಳೂರು, ಫೆಬ್ರವರಿ 25: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಚಿರತೆ ಕಾಣಿಸಿಕೊಂಡ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಮಂಗಳೂರು ನಗರಕ್ಕೇ ಚಿರತೆ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಕದ್ರಿ ಡಾಕ್ಟರ್ಸ್ ಕಾಲೊನಿಯಲ್ಲಿ ಮಧ್ಯರಾತ್ರಿ ಚಿರತೆ ಒಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಡುಕೋಣ ಪತ್ತೆಯಾಗಿತ್ತು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಇಂಗ್ಲೆಂಡ್​ಗೆ ಜಯ… ಭಾರತ vs ಪಾಕಿಸ್ತಾನ್ ‘ಸೆಮಿ’ ಮುಖಾಮಖಿ ಇಲ್ಲ! – Kannada News | No India vs Pakistan Semi Final clash in T20 World Cup 2026

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರುವ ನಾಲ್ಕು ತಂಡಗಳಾವುವು ಎಂಬ ಲೆಕ್ಕಾಚಾರ ಜೋರಾಗಿದೆ. ಈ ಲೆಕ್ಕಾಚಾರದ ಜೊತೆಗೆ ಇದೀಗ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲ್ಲ ಎಂಬುದು ಕೂಡ ಬಹುತೇಕ ಖಚಿತವಾಗಿದೆ. ಏಕೆಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೇರಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಸೋಲುಣಿಸಿದ್ದ ಇಂಗ್ಲೆಂಡ್, ಇದೀಗ ಪಾಕ್ ವಿರುದ್ಧ ಗೆದ್ದು ಒಟ್ಟು 4 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ನ್ಯೂಝಿಲೆಂಡ್ ವಿರುದ್ಧ ಗೆದ್ದರೆ ಒಟ್ಟು 6…

Read More

‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು – Kannada News | Davangere Farmers Oppose Platinum and Manganese Search in Ubrani Taluk

ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು ದಾವಣಗೆರೆ, ಫೆಬ್ರವರಿ 25: ಜಿಲ್ಲೆಯ ಚನ್ನಗಿರಿ (Davanagere) ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿ ಪ್ಲಾಟಿನಮ್ ಹಾಗೂ ಮ್ಯಾಂಗನೀಸ್ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಖನಿಜಾನ್ವೇಷಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಉಬ್ರಾಣಿ ಹೋಬಳಿಯ ಅರಣ್ಯ ಪ್ರದೇಶದ ಗುಡ್ಡಗಳು ಹಾಗೂ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪ್ಲಾಟಿನಮ್ ಮತ್ತು ಮ್ಯಾಂಗನೀಸ್ ಅದಿರು ಲಭ್ಯವಿರಬಹುದು ಎಂಬ ಪ್ರಾಥಮಿಕ…

Read More

ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದೇಕೆ? ಪ್ರತ್ಯೇಕತಾವಾದಕ್ಕೆ ನೀಡಿದ್ರಾ ಕುಮ್ಮಕ್ಕು? ಇಲ್ಲಿದೆ ಅಸಲಿಯತ್ತು – Kannada News | Why Did Protests Erupt Against Azim Premji University? ABVP Alleges Support to Kashmir Separatism, Writes to Amit Shah

ಅಜೀಂ ಪ್ರೇಮ್‌ಜಿ ವಿವಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆImage Credit source: tv9 ಬೆಂಗಳೂರು, ಫೆಬ್ರವರಿ 25: ಸ್ಪಾರ್ಕ್ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಸಂಘಟನೆಗಳು ಬೆಂಗಳೂರಿನ ಸರ್ಜಾಪುರದಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ (Azim Premji University) ದೇಶ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿವೆ ಎಂದು ಎಬಿವಿಪಿ ಗಂಭೀರ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಈ ಸಂಘಟನೆಗಳು ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಭಾರತೀಯ ಸೇನೆಯ ಸೈನಿಕರನ್ನು ಅವಮಾನಿಸುತ್ತಿವೆ ಎಂದು ಆರೋಪಿಸಿದ್ದು, ಪ್ರತಿಭಟನೆಯನ್ನೂ ನಡೆಸಿವೆ….

Read More