Category Archives: Blog

Your blog category

ನಿರ್ದೇಶಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು; ಸಿಕ್ತು ಗೌರವ ಡಾಕ್ಟರೇಟ್ – Kannada News | Manipur International University to confer honorary doctorate on Director R. Chandru

R. Chandru

‘ತಾಜ್ ಮಹಲ್’, ‘ಚಾರ್ಮಿನಾರ್’, ‘ಕಬ್ಜ’ ಸಿನಿಮಾಗಳ ನಿರ್ದೇಶಕ ಆರ್. ಚಂದ್ರು ಅವರಿಗೆ ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು (MIU) ಗೌರವ ಡಾಕ್ಟರೇಟ್ (Honorary Doctorate) ನೀಡಿ ಗೌರವಿಸುವುದಾಗಿ ಘೋಷಿಸಿದೆ. ಸಿನಿಮಾ, ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ಸಮಾಜ ಸೇವೆಯಲ್ಲಿ ಆರ್. ಚಂದ್ರು ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆರ್. ಚಂದ್ರು (R. Chandru) ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೇಶವವಾರ ಎಂಬ ಪುಟ್ಟ ಹಳ್ಳಿಯಿಂದ ಕೇವಲ ನೂರು ರೂಪಾಯಿ ಹಿಡಿದು ಬೆಂಗಳೂರಿಗೆ ಬಂದ ಒಬ್ಬ ಸಾಮಾನ್ಯ ರೈತನ ಮಗ, ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ನಿರ್ದೇಶಕ, ನಿರ್ಮಾಪಕನಾಗಿ ಬೆಳೆದಿದ್ದಾರೆ. ಆ ಮೂಲಕ ಯುವಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ಮಣಿಪುರ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯವು ಶ್ಲಾಘಿಸಿದೆ.

ಆರ್. ಚಂದ್ರು ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ನಿರ್ದೇಶಕರಾಗಿ ಮಾತ್ರವಲ್ಲದೆ ‘ಆರ್‌ಸಿ ಸ್ಟುಡಿಯೋಸ್’ ಮೂಲಕ ನಿರ್ಮಾಪಕನಾಗಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಪರಿಸರ ಮತ್ತು ಕೃಷಿ ಸೇವೆಯಲ್ಲೂ ತೊಡಗಿಕೊಂದ್ದಾರೆ. ಶಿಡ್ಲಘಟ್ಟದಲ್ಲಿ ಮಳೆನೀರು ಕೊಯ್ಲು ಮತ್ತು ಆಧುನಿಕ ಕೃಷಿ ಪದ್ಧತಿಯ ಮೂಲಕ ಒಣ ಭೂಮಿಯನ್ನು ಹಸಿರಾಗಿಸಿರುವುದು, ಒಂದು ಲಕ್ಷ ಗಿಡಗಳನ್ನು ನೆಟ್ಟಿರುವುದು ಹಾಗೂ ಕೋವಿಡ್ ಸಮಯದಲ್ಲಿ ಅವರು ಮಾಡಿದ ಜನಪರ ಕಾರ್ಯಗಳನ್ನು ವಿಶ್ವವಿದ್ಯಾಲಯವು ವಿಶೇಷವಾಗಿ ಗುರುತಿಸಿದೆ.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಹರಿಕುಮಾರ್ ಪಲ್ಲತಡ್ಕ ಅವರು, ‘ದಕ್ಷಿಣ ಭಾರತದ ಹೆಮ್ಮೆ ಮತ್ತು ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಈ ಗೌರವವನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಮುಂದಿನ ಘಟಿಕೋತ್ಸವ ಅಥವಾ ವಿಶೇಷ ಸಮಾರಂಭದಲ್ಲಿ ಆರ್. ಚಂದ್ರು ಅವರಿಗೆ ಈ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: ತಂದೆಯಿಂದಲೇ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ ಆರ್. ಚಂದ್ರು

ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಇದು ಮಣಿಪುರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಶಾಸನಬದ್ಧ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದೆ. ಯುಜಿಸಿ (UGC) ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಈಶಾನ್ಯ ಭಾರತದ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾತ ದೋಷದಿಂದ ಏನು ಆರೋಗ್ಯ ಸಮಸ್ಯೆ, ನಿವಾರಣೆ ಹೇಗೆ? ಬಾಬಾ ರಾಮದೇವ್ ಸಲಹೆ ಕೇಳಿ – Kannada News | Baba Ramdev suggests foods to control health problems generated by Vata dosha

ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಆಯುರ್ವೇದ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡುತ್ತಾರೆ. ವೃದ್ಧಾಪ್ಯದಲ್ಲೂ ನೈಸರ್ಗಿಕವಾಗಿ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು, ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಹೇಳುತ್ತಾರೆ. ಯೋಗ ಗುರು ಎಂದೇ ಖ್ಯಾತರಾಗಿರುವ ಅವರು ಭಾರತದಲ್ಲಿ ಯೋಗಕ್ಕೆ ವಿಶಿಷ್ಟ ಗುರುತನ್ನು ನೀಡಿದ್ದಾರೆ. ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ. ಮನೆಮದ್ದು, ಯೋಗ, ಪ್ರಾಣಾಯಾಮ, ಜೀವನಶೈಲಿ ಮೂಲಕ ವಿವಿಧ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳನ್ನು ಈ ವಿಡಿಯೋಗಳಲ್ಲಿ ವಿವರಿಸುತ್ತಾರೆ. ವಾತಾ ರೋಗ ಉಲ್ಬಣದ ಸಮಸ್ಯೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ವಿಧಾನಗಳನ್ನು ಒಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಅವರ ಪ್ರಕಾರ, ವಾತ ತೀವ್ರಗೊಂಡರೆ, ಕೀಲು ನೋವು, ಅಜೀರ್ಣ, ದೇಹದ ನಡುಕ, ಬೆರಳುಗಳಲ್ಲಿ ಜುಮ್ಮೆನಿಸುವಿಕೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲಿಯೇ ಬರಬಹುದು. ವಾತ ದೋಷ ಕಡಿಮೆ ಮಾಡಲು ಬಾಬಾ ರಾಮದೇವ್ ಕೆಲ ಮನೆಮದ್ದುಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶೀತ ಕಡಿಮೆ ಮಾಡಿ ಆರೋಗ್ಯ ಕಾಪಾಡಬಲ್ಲ 10 ಸುಲಭ ಪರಿಹಾರಗಳನ್ನು ತಿಳಿಸಿದ ಬಾಬಾ ರಾಮದೇವ್

ವಾತ ದೋಷ ಎಂದರೇನು?

ವಾತ ದೋಷವು ದೇಹದಲ್ಲಿ ಗಾಳಿ ಮತ್ತು ಆಕಾಶದಿಂದ ಕೂಡಿದ ಒಂದು ಶಕ್ತಿಯಾಗಿದೆ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಚಲನೆ, ಸಂವಹನ, ಉಸಿರಾಟ ಮತ್ತು ನರಮಂಡಲವನ್ನು ನಿಯಂತ್ರಿಸುತ್ತದೆ. ಈ ದೋಷವು ದುರ್ಬಲಗೊಂಡರೆ, ಅದು ಮನಸ್ಸು ಮತ್ತು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾತ ದೋಷದ ಅಸಮತೋಲನಕ್ಕೆ ದೊಡ್ಡ ಕಾರಣವೆಂದರೆ ಕಳಪೆ ಆಹಾರ ಪದ್ಧತಿ. ತೀರಾ ತಣ್ಣಗಾದ ಆಹಾರ, ಹಸಿ ತರಕಾರಿ, ಚಹಾ ಕಾಫಿ ಸೇವನೆ, ಅನಿಯಮಿತವಾದ ಆಹಾರ ಸೇವನೆ ಇತ್ಯಾದಿ ಕಾರಣದಿಂದ ವಾತ ದೋಷ ಅಸಮತೋಲನಗೊಳ್ಳುತ್ತದೆ. ಇದಲ್ಲದೆ, ಅಸಮರ್ಪಕವಾದ ಜೀವನಶೈಲಿಯು ನಮ್ಮನ್ನು ಹಲವು ವಿಧಗಳಲ್ಲಿ ಅಸ್ವಸ್ಥಗೊಳಿಸುತ್ತದೆ. ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು, ಮತ್ತು ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಮುಂತಾದ ಅಭ್ಯಾಸಗಳು ವಾತ ರೋಗವನ್ನು ಉಲ್ಬಣಗೊಳಿಸುತ್ತವೆ. ಚಿಂತೆ, ಭಯ, ಒತ್ತಡ, ಚಡಪಡಿಕೆ ಮತ್ತು ಅತಿಯಾಗಿ ಯೋಚಿಸುವಂತಹ ಮಾನಸಿಕ ಅಂಶಗಳು ಸಹ ಇದಕ್ಕೆ ಕಾರಣವಾಗಿವೆ.

ವಾತ ದೋಷ ಅಸಮತೋಲನ ತಗ್ಗಿಸಲು ಬಾಬಾ ರಾಮದೇವ್ ಸಲಹೆ

ದೇಹದಲ್ಲಿ ವಾತ ದೋಷ ಹೆಚ್ಚಾದರೆ, ಅದನ್ನು ಸಮತೋಲನಗೊಳಿಸಲು ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ವಾತ ದೋಷ ಹದಗೆಟ್ಟರೆ, ಅಲೋವೆರಾ, ಗಿಲೋಯ್, ಪಾರಿಜಾತ ಅಥವಾ ಮೊರಿಂಗಾದ ತಾಜಾ ರಸವನ್ನು ಕುಡಿಯಿರಿ. ಅರಿಶಿನ, ಮೆಂತ್ಯ, ಒಣ ಶುಂಠಿ ಮತ್ತು ಸೆಲರಿಗಳನ್ನು ಒಳಗೊಂಡಿರುವ ಮನೆಮದ್ದುಗಳನ್ನು ಸಹ ನೀವು ಪ್ರಯತ್ನಿಸಬಹುದು. ಅಲೋವೆರಾ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಸೆಲರಿ, ಅರಿಶಿನ ಮತ್ತು ಮೆಂತ್ಯ ಬೀಜಗಳಲ್ಲಿ ಆಯುರ್ವೇದ ಗುಣಗಳು ಇದ್ದು, ಅವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆ್ಯಂಟಿ ಆಕ್ಸಿಡೆಂಟ್ಸ್ ಅನ್ನು ಹೊಂದಿರುತ್ತವೆ.

ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ

ವಾತ ದೋಷ ಹೆಚ್ಚಾದ ಜನರು ತಮ್ಮ ಆಹಾರದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಹೇಳುವ ಬಾಬಾ ರಾಮದೇವ್ ಅವರ ಪ್ರಕಾರ, ಹುಳಿ ಮತ್ತು ತಣ್ಣನೆಯ ಆಹಾರಗಳು ವಾತ ದೋಷವನ್ನು ಉಲ್ಬಣಗೊಳಿಸುತ್ತವೆ. ಹೂಕೋಸು, ಸೋರೆಕಾಯಿ ರಸ, ಮೊಸರು, ಆಮ್ಲಾ ಮತ್ತು ಸೌತೆಕಾಯಿಯಂತಹ ಆಹಾರಗಳು ವಾತವನ್ನು ಉಲ್ಬಣಗೊಳಿಸುತ್ತವೆ. ನೀವು ಇವುಗಳನ್ನು ಸೇವಿಸುವುದೇ ಆದಲ್ಲಿ ಮಿತವಾಗಿ ಸೇವಿಸಿ.

ಅಡುಗೆಮನೆಯಲ್ಲಿರುವ ಈ ವಸ್ತುಗಳು ಉಪಯುಕ್ತವೆನಿಸಬಹುದು

ಆರೋಗ್ಯಕ್ಕೆ ಪುಷ್ಟಿ ನೀಡಬಲ್ಲ ಹಲವಾರು ಪದಾರ್ಥಗಳು ಭಾರತೀಯ ಅಡುಗೆಮನೆಗಳಲ್ಲೇ ಇರುತ್ತವೆ. ಅಡುಗೆಗೆ ಬಳಸುವ ವಸ್ತುಗಳೇ ಮನೆಮದ್ದಾಗಬಹುದು. ವಾತ ಚಿಕಿತ್ಸೆಗಾಗಿ ಅರಿಶಿನ, ಶುಂಠಿ, ತುಳಸಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಮುಂತಾದ ಪದಾರ್ಥಗಳನ್ನು ಸೇವಿಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಒಣ ಶುಂಠಿ, ಕರಿಮೆಣಸು ಮತ್ತು ತ್ರಿಕೂಟವು ಸಹ ಉಪಯುಕ್ತವೆಂದು ಸಾಬೀತುಪಡಿಸಬಹುದು. ಅರಿಶಿನ ಮತ್ತು ಜೇನುತುಪ್ಪದೊಂದಿಗೆ ಬೆರೆಸಿದ ಶುಂಠಿ ಮತ್ತು ತುಳಸಿ ರಸವನ್ನು ಕುಡಿಯಬಹುದು. ಇದು ಶೀತ ಮತ್ತು ಜ್ವರಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ಹಾಗೆಯೇ, ವೀಳ್ಯದ ಎಲೆಯಲ್ಲಿ ಸುಣ್ಣ ಅಥವಾ ತಂಬಾಕು ಬಳಸುವುದನ್ನು ತಪ್ಪಿಸುವಂತೆ ಬಾಬಾ ರಾಮದೇವ್ ಸಲಹೆ ನೀಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ – Kannada News | Siddapur murder Case: Not Only Kamalakar Bhat Guruji, Suchitra Contact With Some Youths

ಕಾರವಾರ, (ಫೆಬ್ರವರಿ 06): ಕಲರ್​​ಫುಲ್​ ರೀಲ್ಸ್​ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್​ ಸುಚಿತ್ರಾ (Suchitra) ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್​ನೇ (Kamalakar bhat guruji) ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್​ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ವಸಂತ್​ ನಾಯ್ಕ್​​ ಕೊಲೆ ಕೇಸ್​​ನಲ್ಲಿ ಜೈಲುಪಾಲಾಗಿರುವ ರೀಲ್ಸ್​ ರಾಣಿ ಸುಚಿತ್ರಾ ಕರಾಳ ಕಥೆಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಐನಾತಿಯ ಮೊಬೈಲ್​ ಪರಿಶೀಲನೆ ಮಾಡಿದ್ದು, ಪತಿ ಮಹೇಶ್​​ ನಾಯಕ್​ ಮಾಹಿತಿಯಿಂದ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗಿವೆ. ಸುಚಿತ್ರಾಗೆ ಹಲವು ಯುವಕರ ಸಂಪರ್ಕ ಇರುವುದು ಮೊಬೈಲ್​ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ ಭಾಗದ ಯುವಕರ ಈಕೆ ಜತೆ ಚಾಟ್​​ನಲ್ಲಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.

ಸಂಪರ್ಕದಲ್ಲಿದ್ದ ಹುಡುಗರು ಆತಂಕ

ರಾಣಿ ಸುಚಿತ್ರಾಳ ಮತ್ತಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಮಾತ್ರವಲ್ಲ ಬೇರೆ ಬೇರೆ ಯುವಕರೊಂದಿಗೆ ಸಂಪರ್ಕದಲ್ಲಿದ್ದಾಳೆ ಎನ್ನುವ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಸುಚಿತ್ರಾಳ ಮೊಬೈಲ್ ಪರಿಶೀಲನೆ ವೇಳೆ ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲ ಹುಡುಗರ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸುಚಿತ್ರಾಳ ಪತಿ,ಮಗಳು ಬಾಯಿ ಬಿಡುತ್ತಿದ್ದಂತೆ ಯುವಕರು ದಂಗಾಗಿದ್ದಾರೆ. ಕೆಲವರು ಇನ್ಸ್ಟಾ ಅಕೌಂಟ್ ಡಿಲಿಟ್ ಮಾಡಿದ್ರೆ ಇನ್ನೂ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕ ದಲ್ಲಿ ಇದ್ದಳು ಎಂದು, ಸುಚಿತ್ರಾಳ ಪತಿ ಹತ್ತಾರು ಆರೋಪಗಳನ್ನ ಮಾಡಿದ್ದ. ಈ ಬೆನ್ನಲ್ಲೇ ತಮ್ಮ ಬಂಡವಾಳ ಬಯಲಾಗುತ್ತಾ ಎಂಬ ಆತಂಕದಲ್ಲಿ, ಸಂಪರ್ಕದಲ್ಲಿದ್ದ ಹುಡುಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು

ಇನ್ನು ಈ ಬಗ್ಗೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಮಾತನಾಡಿದ್ದು, ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯ್ಕ್ ಹತ್ಯೆ ಪ್ರಕರಣದ ಆರೋಪಿ ಸುಚಿತ್ರಾ ಜಾಲತಾಣ ಬೇರೆ ಹುಡುಗರ ಜೊತೆಗೆ ಸಂಪರ್ಕ ಇದ್ದಳೆಂದು ಪತಿ ಹೇಳಿದ್ದಾರೆ. ಹೀಗಾಗಿ ಸುಚಿತ್ರಾಳ ಸಾಮಾಜಿಕ ಜಾಲತಾಣಗಳ ಖಾತೆ, ಮೊಬೈಲ್​ ಪರಿಶೀಲನೆ ಮಾಡುತ್ತಿದ್ದೇವೆ. . ಸುಚಿತ್ರಾ ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು. ದೂರು ಕೊಟ್ಟವರಿಗೆ ಯಾವುದೇ ಸಮಸ್ಯೆ ಆಗಲ್ಲ. ದೂರು ಆಧರಿಸಿ ಸುಚಿತ್ರಾ ವಿರುದ್ಧ ತನಿಖೆಗೆ ಆದೇಶಿಸಲಾಗುವುದು. ಆದ್ರೆ. ಈವರೆಗೂ ಮೋಸ ಹೋದವರು ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದರು.

ಇಬ್ಬರು ಪೊಲೀಸ್ ಸಿಬ್ಬಂದಿ ವರ್ಗಾವಣೆ

ವಸಂತ್ ನಾಯ್ಕ್ ಹತ್ಯೆಗೆ ಪೊಲೀಸರ ವೈಫಲ್ಯವೆ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್​ಪಿ ದೀಪನ್​, ವೈಫಲ್ಯ ಮಾಹಿತಿ ಮೇರೆಗೆ ಸಿದ್ದಾಪುರ ಠಾಣೆಯ ಇಬ್ಬರನ್ನ ವರ್ಗಾವಣೆ ಮಾಡಿದ್ದಾರೆ. ಎಎಸ್​ಐ ಗಣಪತಿ ಭಟ್ ಹಾಗೂ ಹೆಡ್​​ಕಾನ್ಸ್​ಟೇಬಲ್ ಚಂದ್ರಶೇಖರ್​ನನ್ನ ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ

ಸುಚಿತ್ರಾ- ಮಹೇಶ್ ಲವ್ ಮ್ಯಾರೇಜ್

ಸುಚಿತ್ರಾ ಹಾಗೂ ಮಹೇಶ್ ಅವರದ್ದು ಲವ್ ಮ್ಯಾರೇಜ್. ಮಹೇಶ್​ ಅವರೇ ಸುಚಿತ್ರಾಳನ್ನು ಪ್ರೀತಿಸಿ ಮದ್ವೆಯಾಗಿದ್ದರು. ಆದ್ರೆ, ಇದೀಗ ಮಹೇಶನನ್ನು ಬಿಟ್ಟು ಕಮಲಾಕರ್ ಭಟ್ ನ ಹಿಂದೆ ಹೋಗಿದ್ದಾಳೆ. ಈ ಸಂಬಂಧ ಪತಿ ಮಹೇಶ್ ಮಾತನಾಡಿ, ಸುಚಿತ್ರಾಳನ್ನು ನಾನು ಪ್ರೀತಿಸಿ ಮದುವೆಯಾಗಿದ್ದೆ ಆರಂಭದಲ್ಲಿ ಇಬ್ಬರು ಚೆನ್ನಾಗಿ ಇದ್ದೇವು. ಬಳಿಕ ಒಂದು ಹೆಣ್ಣು ಮಗು ಆಯ್ತು. ಮಗಳು ದೊಡ್ಡವಳು ಆದ ಬಳಿಕ ಅವಳಿಗೆ ತಿಳಿವಳಿಕೆ ಬರಲು ಶುರು ಆಯ್ತು. ನಾನು ಬೆಂಗಳೂರಿನಲ್ಲಿ ಹೊಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಪ್ರತಿ ತಿಂಗಳು 20 ಸಾವಿರ ರೂ. ಅವಳಿಗೆ ಕಳುಹಿಸುತ್ತಿದ್ದೆ. ಈ ನಡುವೆ ಊರಿನಲ್ಲಿ ಇಬ್ಬರ ಯುವಕರ ಜೊತೆ ಸುಚಿತ್ರಾ ಸಂಬಂಧವಿತ್ತು. ಈ ವಿಷಯವನ್ನು ನನ್ನ ಮಗಳು ನನ್ನ ಗಮನಕ್ಕೆ ತಂದಿದ್ದಳು. ನಾನು ಪತ್ನಿಗೆ ಕೇಳಿದಾಗ ಯಾವುದು ಇಲ್ಲ ಎಂದು ಅಲ್ಲಗೆಳೆದಿದ್ದಳು. ಬಳಿಕ ಮತ್ತೊಂದು ಮಗುವಾಯ್ತು. ಎರಡು ಹೆಣ್ಣು ಮಕ್ಕಳಾದ ಮೇಲೆ ಅವಳು ದಾರಿ ತಪ್ಪಿದಳು ಎಂದು ತಿಳಿಸಿದ್ದಾರೆ.

ಸುಚಿತ್ರಾ ಹೇಳಿದಂತೆ ಜ್ಯೋತಿಷಿಯು ಕುಣಿದ

ಬರು ಬರುತ್ತಾ ಅವಳಿಗೆ ಮೊಬೈಲ್ ನಲ್ಲಿ ರೀಲ್ಸ್ ಹುಚ್ಚು ಜಾಸ್ತಿ ಆಗುತ್ತಾ ಹೋಯ್ತು. ಪೇಸ್ ಬುಕ್ ಇನಸ್ಟಾಗ್ರಾಂ ನಲ್ಲಿ ರೀಲ್ಸ್ ನೋಡಿ ನನಗೆ ಬೇಸರ ಆಗಿತ್ತು. ಸುಚಿತ್ರಾ ಸ್ನೇಹಿತೆ ಸುಮಾ ಮೂಲಕ ಕಮಲಾಕರ್ ಭಟ್ ಪರಿಚಯವಾಗಿದ್ದು, ಬಳಿಕ ಇಬ್ಬರು ಹತ್ತಿರವಾಗಿದ್ದರು.ಹೀಗೆ ಇಬ್ಬರು ಒಟ್ಟಿಗೆ ಇರುವುದನ್ನು ಪತ್ನಿ ಸುಚಿತ್ರಾ ವಿಡಿಯೋ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಮೂಲಕ ಜ್ಯೋತಿಷಿಯು ಅವಳ ಹೇಳಿದಂತೆ ಕುಣಿಯುತ್ತಿದ್ದಾನೆ. ಅವಳಿಗೆ ಕಾರು, ಬುಲೇಟ್ ಬೈಕ್ ,ಸೈಟ್ ಜಮೀನು ಕೊಡಿಸಿದ್ದಾನೆ. ಪತ್ನಿಗೆ ಗಂಡ ಮಕ್ಕಳಿಗಿಂತ ಅವಳಿಗೆ ಐಷಾರಾಮಿ ಜೀವನ ಬೇಕಾಗಿತ್ತು. ಈ ಹಿನ್ನಲೆಯಲ್ಲಿ ಅವಳು ಸ್ವಾಮೀಜಿ ಜೊತೆ ಹೋಗಿ ಸಂಸಾರ ಮಾಡುತ್ತಿದ್ದಳು. ಅವಳಿಗೆ ಕಾರ್ ಮತ್ತು ಬುಲೆಟ್ ಡ್ರೈವಿಂಗ್ ಬರುತ್ತಿರಲಿಲ್ಲ. ಅದನ್ನು ಸ್ವಾಮೀಜಿನೇ ಕಲಿಸಿಕೊಟ್ಟಿದ್ದಾನೆ.

ಸದ್ಯ ಎಸ್ ಸಿದ್ದಾಪುರ ಮೂಲದ ಜ್ಯೋತಿಷಿ ಕಮಲಾಕರ ಭಟ್ ಎರಡು ಮಕ್ಕಳ ತಾಯಿಯ ಸಂಗ ಮಾಡಿ ಕಾರವಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆದ್ರೆ ಇತ್ತಿಚ್ಚಿಗೆ ಹಣ, ಆಸ್ತಿ ಮತ್ತು ಹೆಚ್ಚು ಪ್ರಚಾರ ಪಡೆದಿದ್ದ ಜ್ಯೋತಿಷಿ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ. ಪ್ರಾರಂಭದಲ್ಲಿ ಸತ್ಯನಾ ಎಂಬ ಪ್ರಶ್ನೆ ಮೂಡಿತ್ತು. ಒಂದೊಂದು ಫೋಟೋ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಆರೋಪ ಸತ್ಯ ಇರಬಹುದು ಎನ್ನಲಾಯ್ತು… ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೊಗಿದ್ದು, ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ರಾಸಲೀಲೇಯ ಆಡಿಯೋದ ಒಂದೋಂದು ಪದ ಪುಂಜವು ಕೇಳುವವರಿಗೆ ಅಸಹ್ಯ ಮೂಡಿಸುವಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:11 pm, Fri, 6 February 26

Source link

15 ಸಿಕ್ಸರ್, 175 ರನ್; ಹರಾರೆಯಲ್ಲಿ ವೈಭವ್ ಆರ್ಭಟಕ್ಕೆ ಇಂಗ್ಲೆಂಡ್ ಹೈರಾಣ

Source link

ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಸ್ಫೋಟ ನಡೆದಿದ್ದು ಹೇಗೆ? – Kannada News | Suicide Bomb Blast Near Mosque In Pakistans Capital Islamabad

ಇಸ್ಲಮಾಬಾದ್, ಫೆಬ್ರವರಿ 6: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ (Bomb Blast) 24ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್​ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಶೆಹಜಾದ್ ಟೌನ್ ಪ್ರದೇಶದಲ್ಲಿರುವ ಶಿಯಾ ಮಸೀದಿ ತರ್ಲೈ ಇಮಾಮ್‌ಬರ್ಗಾದಲ್ಲಿ ಈ ಸ್ಫೋಟ ಸಂಭವಿಸಿದೆ. ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರ ಎರಡು ದಿನಗಳ ಅಧಿಕೃತ ಭೇಟಿಯ ಸಮಯದಲ್ಲಿಯೇ ಈ ದಾಳಿ ನಡೆದಿದೆ.

ತಕ್ಷಣ ಪೊಲೀಸ್ ತಂಡಗಳು ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ಸ್ಫೋಟದಲ್ಲಿ ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಪತ್ರಿಕೆ ಡಾನ್ ವರದಿ ಮಾಡಿದೆ. ಸ್ಫೋಟದ ನಂತರ ಇಸ್ಲಮಾಬಾದ್​​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: Pakistan Mosque Blast: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹಲವಾರು ವೀಡಿಯೊಗಳು ಸ್ಥಳದಲ್ಲಿ ಅವ್ಯವಸ್ಥೆಯ ದೃಶ್ಯಗಳನ್ನು ತೋರಿಸುತ್ತವೆ. ಜನರು ಭಯಭೀತರಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಥಳದಲ್ಲಿದ್ದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಾರ್ಥನೆಗಾಗಿ ಜನರು ಮಸೀದಿಯಲ್ಲಿ ಸೇರಲು ಪ್ರಾರಂಭಿಸಿದರು. ಆತ್ಮಹತ್ಯಾ ಬಾಂಬರ್ ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದನು, ಆದರೆ ಗೇಟ್ ಬಳಿ ಅವನನ್ನು ನಿಲ್ಲಿಸಲಾಯಿತು. ಅವನನ್ನು ಪರಿಶೀಲಿಸುತ್ತಿರುವಾಗ, ಅವನು ತನ್ನ ಸ್ಫೋಟಕಗಳನ್ನು ಸ್ಫೋಟಿಸಿದನು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ

ಸ್ಫೋಟದ ಫೋಟೋಗಳಲ್ಲಿ ದೇಹದ ಭಾಗಗಳು ಹರಡಿಕೊಂಡಿರುವುದು ಕಂಡುಬಂದಿದೆ. ಆರಂಭದಲ್ಲಿ ಇದನ್ನು ಆತ್ಮಹತ್ಯಾ ದಾಳಿ ಎಂದು ವರದಿ ಮಾಡಲಾಗುತ್ತಿದೆ. ಪೊಲೀಸರು ಮತ್ತು ಸೇನಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಸೇನೆಯು ಇಡೀ ಪ್ರದೇಶವನ್ನು ಸುತ್ತುವರೆದಿದೆ.

ಇನ್ನೂ ಯಾವುದೇ ಗುಂಪು ಬಾಂಬ್ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲವಾದರೂ, ದೇಶದ ಅಲ್ಪಸಂಖ್ಯಾತರಾದ ಶಿಯಾ ಆರಾಧಕರ ಮೇಲೆ ಈ ಹಿಂದೆ ನಡೆದ ದಾಳಿಗಳಿಗೆ ಕಾರಣವಾಗಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಥವಾ ಇಸ್ಲಾಮಿಕ್ ಸ್ಟೇಟ್ ಗುಂಪುಗಳ ಮೇಲೆ ಅನುಮಾನ ಹೆಚ್ಚಾಗಿದೆ. ಬಲೂಚ್ ಪ್ರತ್ಯೇಕತಾವಾದಿಗಳೊಂದಿಗೆ ಭದ್ರತಾ ಪಡೆಗಳು ಘರ್ಷಣೆ ನಡೆಸಿ ಸುಮಾರು 216 ಉಗ್ರರನ್ನು ಕೊಂದ ಸುಮಾರು 1 ವಾರದ ನಂತರ ಈ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:34 pm, Fri, 6 February 26

Source link

ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ? – Kannada News | Tumakuru Siddaganga Jatre: Grand 15 Day Festival and Cattle Fair Begins

ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವImage Credit source: tv9 kannada

ತುಮಕೂರು, ಫೆಬ್ರವರಿ 06: ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ (siddaganga jatre) ಇಂದು ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ಜಾತ್ರೆಯ ಅಂಗವಾಗಿ ನಡೆಯುವ ದನದ ವ್ಯಾಪಾರ ಜನರ ಗಮನ ಸೆಳೆಯುತ್ತಿದೆ.

ಜಾತ್ರೆ ಪ್ರಯುಕ್ತ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾತ್ರೆ ಪ್ರಯುಕ್ತ ಇಂದಿನಿಂದ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕಳೆದ 60 ವರ್ಷಗಳಿಗೂ ಅಧಿಕ ಕಾಲದಿಂದ ಈ ವಸ್ತು ಪ್ರದರ್ಶನ ನಡೆದುಕೊಂಡು ಬರುತ್ತಿದ್ದು, ಜನರ ಗಮನ ಸೆಳೆಯುವ ಅಪಾರ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ

ಇನ್ನು ಸಿದ್ದಗಂಗಾ ಜಾತ್ರೆ ಅಂದರೆ ಒಂದು ಸಂಭ್ರಮ. ಅದರಲ್ಲೂ ಭಕ್ತರು ಮತ್ತು ಜನರು ಕಾಯುವುದು ಒಂದೇ ಒಂದು ವಿಶೇಷಕ್ಕೆ, ಅದುವೇ ದನಗಳ ಜಾತ್ರೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ತಳಿಯ ಸಾವಿರಾರು ದನಗಳು ಜಾತ್ರೆಗೆ ಆಗಮಿಸಿವೆ. 60 ಸಾವಿರದಿಂದ 16 ಲಕ್ಷ ರೂ ಬೆಲೆ ಬಾಳುವ ವಿವಿಧ ತಳಿಯ ದನಗಳು ಇಲ್ಲಿ ವ್ಯಾಪಾರಕ್ಕೆ ಕರೆತರಲಾಗಿದ್ದು, ಈ 15 ದಿನಗಳ ಜಾತ್ರೆಯಲ್ಲಿ ದನಗಳ ಜಾತ್ರೆಗೆ ಹೆಚ್ಚಿನ ವ್ಯಾಪಾರ ನಡೆಯುವ ನಿರೀಕ್ಷೆ ಇದೆ.

13 ನಾಟಕಗಳ ಪ್ರದರ್ಶನ

ಸಿದ್ದಗಂಗಾ ಮಠದಲ್ಲಿ ದನದ ಜಾತ್ರೆ ಹೊರತು ಪಡಿಸಿ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಮಠದ ಆವರಣದಲ್ಲಿ 1964ರಿಂದ ನಡೆದುಕೊಂಡು ಬಂದಿರುವ ವಸ್ತು ಪ್ರದರ್ಶನಕ್ಕೆ ತನ್ನದೇ ಆದ ಇತಿಹಾಸವಿದೆ. ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಫೆಬ್ರವರಿ 16ರಂದು ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು ಇಂದಿನಿಂದ 15 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇದರ ಜೊತೆಗೆ 13 ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ

ಒಟ್ಟಾರೆ ಕೃಷಿ, ಕೈಗಾರಿಕಾ ವಸ್ತು ಪ್ರದರ್ಶನ ಜೊತೆಗೆ ಕಣ್ಮನ ಸೆಳೆಯುವ ದನಗಳ ಜಾತ್ರೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಇಂದಿನಿಂದ 15 ದಿನಗಳ ಕಾಲ ನಡೆಯಲಿದ್ದು, ಲಕ್ಷಾಂತರ ಜನ ಸಿದ್ದಂಗಾಗ ಮಠಕ್ಕೆ ಹರಿದು ಬರುವ ನಿರೀಕ್ಷೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು ಇನ್ನೂ ಶಾಕ್​​ನಲ್ಲಿದ್ದೇನೆ’: ಬೆಳಿಗ್ಗೆ 4 ಗಂಟೆಗೆ ಸೇವೆ ನೀಡಿ ಚಿಕ್ಕಮ್ಮ ಜೀವನ ಕಾಪಾಡಿದ ಬ್ಲಿಂಕಿಟ್ ಆಂಬ್ಯುಲೆನ್ಸ್ – Kannada News | Blinkit’s New Free Ambulance Saves Lives: A Delhi Emergency Story

ಮುಂಬೈ, ಫೆ.6: ಬ್ಲಿಂಕಿಟ್‌ ಆಹಾರ ಧ್ಯಾನಗಳನ್ನು ಮಾತ್ರವಲ್ಲದೆ, ಇದೀಗ ಆಂಬ್ಯುಲೆನ್ಸ್ ಸೇವೆಯನ್ನು ಕೂಡ ಆರಂಭಿಸಿದೆ. ಇದರಿಂದ ಅನೇಕರಿಗೆ ತುಂಬಾ ಸಹಾಯ ಕೂಡ ಆಗಿದೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಆಗ್ಗಾಗೆ ಕೆಲವೊಂದು ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ವಿಚಾರವಾಗಿ ಬ್ಲಿಂಕಿಟ್‌ ಆಂಬ್ಯುಲೆನ್ಸ್ ಸೇವೆ ಸದ್ದು ಮಾಡಿದೆ. ಈ ಬಗ್ಗೆ ಮುಂಬೈನ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಮೂಲದ ಪ್ರಾಚಿ (Prachi) ಎಂಬ ಮಹಿಳೆ ದೆಹಲಿಯಲ್ಲಿದ್ದ ತನ್ನ ಕುಟುಂಬಕ್ಕೆ ಬ್ಲಿಂಕಿಟ್‌ ಆಂಬ್ಯುಲೆನ್ಸ್ ಹೇಗೆ ಸಹಾಯವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಮುಂಬೈನಲ್ಲಿದ್ದ ಪ್ರಾಚಿಗೆ ದೆಹಲಿಯಿಂದ ಪೋಷಕರು ಕರೆ ಮಾಡುತ್ತಾರೆ.

ಚಿಕ್ಕಮ್ಮನಿಗೆ ಹಠಾತ್ತಾಗಿ ಫಿಟ್ಸ್ ಬಂದಿದೆ ಎಂದು ಗಾಬರಿಯಲ್ಲಿ ಫೋನ್​ ಮಾಡಿದ್ದಾರೆ. ಆ ಸಮಯದಲ್ಲಿ ಯಾವುದೇ ಕ್ಯಾಬ್‌ಗಳು ಸಿಕ್ಕಿಲ್ಲ. ಕೊನೆಗೂ ಒಂದು ಕ್ಯಾಬ್ ಬುಕ್ ಆಯಿತು. ಆದರೆ ಅದು ಮಧ್ಯೆದಲ್ಲಿ ಕೈಕೊಟ್ಟಿದೆ. ಗಾಮ್ಯ ಸ್ಥಾನ ತುಂಬಾ ದೂರು ಇದೆ ಎಂದು ಕ್ಯಾನಲ್ಸ್​​ ಮಾಡಿದ್ದಾನೆ. ಇದರಿಂದ ಕುಟುಂಬದವರು ತೀವ್ರ ಆತಂಕಗೊಂಡಿದರು. ಪ್ರಾಚಿ ತನ್ನ ಪತಿಯ ಸಲಹೆಯಂತೆ ಬ್ಲಿಂಕಿಟ್ ಆಪ್ ತೆರೆದಾಗ ಅದರಲ್ಲಿ ‘ಆಂಬುಲೆನ್ಸ್’ ಬುಕಿಂಗ್ ಆಯ್ಕೆ ಮಾಡಿದ್ದಾರೆ. ಮುಂಬೈನಲ್ಲಿ ಕುಳಿತು ದೆಹಲಿಗೆ ಆಂಬುಲೆನ್ಸ್ ಬುಕ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಇಲ್ಲಿದೆ ನೋಡಿ ವಿಡಿಯೋ:

ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬ್ಲಿಂಕಿಟ್‌ನಿಂದ ಕರೆ ಬರುತ್ತದೆ. ತಕ್ಷಣ ಮನೆಗೆ ತಲುಪಿ ಚಿಕ್ಕಮ್ಮನನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಪ್ರಾಚಿ ಇಷ್ಟೆಲ್ಲಾ ತುರ್ತು ಸಂದರ್ಭದಲ್ಲಿ ಸಹಾಯ ಮಾಡಿದಕ್ಕೆ, ಹಣ ನೀಡಿದ್ದಾರೆ. ಆದರೆ ಬ್ಲಿಂಕಿಟ್ ಈ ಸೇವೆಯನ್ನು ಸಂಪೂರ್ಣ ಉಚಿತ ಎಂದು ಹೇಳಿದೆ. ಇದರಿಂದ ಪ್ರಾಚಿ ತುಂಬಾ ಆಶ್ಚರ್ಯ ಪಟ್ಟಿದ್ದಾರೆ. ಪ್ರಾಚಿ ಅವರು ಮುಂಬೈನಲ್ಲಿದ್ದರೂ ಆ್ಯಪ್​ ಮೂಲಕ ದೆಹಲಿಯಲ್ಲಿದ್ದ ತನ್ನ ಕುಟುಂಬಕ್ಕೆ ಆ ಸಂಕಷ್ಟದ ಸಮಯದಲ್ಲಿ ನೆರವಾಗಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದಾರೆ. ಬ್ಲಿಂಕಿಟ್ ಕಳೆದ ವರ್ಷದ ಜನವರಿಯಲ್ಲಿ ಗುರಗಾಂವ್‌ನಲ್ಲಿ ಈ ಸೇವೆಯನ್ನು ಪ್ರಾರಂಭಿಸಿತ್ತು. ಈಗ ಅದು ದೆಹಲಿ ಸೇರಿದಂತೆ ಇತರ ನಗರಗಳಿಗೂ ವ್ಯಾಪಿಸಿದೆ. ಕೇವಲ 10 ನಿಮಿಷಗಳಲ್ಲಿ ಆಂಬುಲೆನ್ಸ್ ಒದಗಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಕೇವಲ ದಿನಸಿ ವಸ್ತುಗಳನ್ನು (Groceries) ತಲುಪಿಸುವ ಆಪ್ ಎಂದು ನಾವು ಅಂದುಕೊಂಡಿದ್ದ ಬ್ಲಿಂಕಿಟ್, ಇಂತಹ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವ ಕೆಲಸ ಮಾಡುತ್ತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಗೆ ಇಷ್ಟವಿಲ್ಲದಿದ್ದರೆ 30ನೇ ವಾರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – Kannada News | Cannot force a woman to become Mother Supreme Court allows minor to terminate 30 week pregnancy

ನವದೆಹಲಿ, ಫೆಬ್ರವರಿ 6: ಒಂದುವೇಳೆ ಗರ್ಭಿಣಿಗೆ ಏಳೂವರೆ ತಿಂಗಳು (30 ವಾರ) ತುಂಬಿದ ಬಳಿಕವೂ ಆ ಮಗು ಬೇಡವೆನಿಸಿದರೆ ಗರ್ಭಪಾತ (Abortion) ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ಆದರೆ, ಇದೀಗ ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಹುಟ್ಟದೇ ಇರುವ ಮಗುವಿನ ಹಕ್ಕಿಗಿಂತಲೂ ತಾಯಿಯ ಹಕ್ಕು ಬಹಳ ಮುಖ್ಯ ಎಂದು ಹೇಳಿರುವ ನ್ಯಾಯಪೀಠ ಮಹಿಳೆಯನ್ನು ತಾಯಿಯಾಗಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮದುವೆಯಾದ ಮಹಿಳೆಯಾಗಲಿ, ಮದುವೆಯಾಗದ ಯುವತಿಯಾಗಲಿ ಅಥವಾ ಅಪ್ರಾಪ್ತೆಯೇ ಆಗಲಿ ಅನಗತ್ಯ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಕಾನೂನಿಗೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪ್ರಾಪ್ತ ವಯಸ್ಕಳಾಗಿದ್ದಾಗ ಗರ್ಭ ಧರಿಸಿದ ಹುಡುಗಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು ಗರ್ಭಿಣಿ ಹುಡುಗಿಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಒತ್ತಿ ಹೇಳಿದೆ. ವಿಶೇಷವಾಗಿ ಅವಳಿಗೆ ಮಗುವನ್ನು ಹೆರಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿರುವಾಗ ಆ ಮಗುವನ್ನು ಹೆರಲೇಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ?

ಅರ್ಜಿ ಸಲ್ಲಿಸಿರುವ ಅಪ್ರಾಪ್ತ ಯುವತಿಯ ವಯಸ್ಸು ಮತ್ತು ಆಕೆಯ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ ಆ ಯುವತಿಯದ್ದು ಉದ್ದೇಶಪೂರ್ವಕವಾದ ಗರ್ಭಧಾರಣೆ ಅಲ್ಲದ ಕಾರಣದಿಂದ ಮತ್ತು ಆ ಹುಡುಗಿ ಮಗುವನ್ನು ಹೆರಲು ಬಯಸದ ಕಾರಣದಿಂದ ಆಕೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು

ಆ ಹುಡುಗಿ 17ನೇ ವಯಸ್ಸಿನಲ್ಲಿ ಗರ್ಭ ಧರಿಸಿದ್ದಳು. ಆಕೆಗೆ ಈಗ 18 ವರ್ಷ. ಈಗ ಆಕೆಯ ಗರ್ಭಧಾರಣೆಯು 30 ವಾರಗಳನ್ನು ತಲುಪಿತ್ತು. ಸ್ನೇಹಿತನೊಂದಿಗಿನ ಸಂಬಂಧದಿಂದ ಆಕೆ ಗರ್ಭಿಣಿಯಾಗಿದ್ದು, ಮದುವೆಯಾಗದೆ ಗರ್ಭಧಾರಣೆಯನ್ನು ಮುಂದುವರಿಸುವುದು ಆ ಹುಡುಗಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಘಾತಕಾರಿಯಾಗಿದೆ ಎಂದು ವಾದಿಸಲಾಗಿತ್ತು. ಹೀಗಾಗಿ, ವೈದ್ಯಕೀಯ ಮಂಡಳಿಯ ವರದಿಯನ್ನು ಪರಿಶೀಲಿಸಿದ ನಂತರ, ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸಿದರೆ ಆ ಹುಡುಗಿಗೆ ಯಾವುದೇ ಗಂಭೀರ ಅಪಾಯ ಆಗುವುದಿಲ್ಲ ಎಂದು ಪೀಠ ಗಮನಿಸಿತು. ಹೀಗಾಗಿ, ಆಕೆ ಬಯಸಿದರೆ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Fri, 6 February 26

Source link

Rose Day 2026 Date: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು? – Kannada News | Valentine’s Week 2026 Rose Day Date, History, Significance, Importance, Celebration ideas in Kannada

ಪ್ರೇಮಿಗಳ ದಿನಕ್ಕೆ (Valentine’s Day) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಆದರೆ ಫೆಬ್ರವರಿ 7 ರಿಂದ 14 ರವರೆಗೆ ಪ್ರೇಮಿಗಳ ವಾರವನ್ನು ಸಹ ಆಚರಿಸಲಾಗುತ್ತದೆ. ಇದು ಪ್ರೇಮಿಗಳಿಗಾಗಿಯೇ ಮೀಸಲಿಟ್ಟ ವಾರ. ಈ ವ್ಯಾಲೆಂಟೈನ್‌ ವೀಕ್‌ನಲ್ಲಿ ಮೊದಲ ದಿನದ ಆಚರಣೆಯೇ ರೋಸ್‌ ಡೇ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅಥವಾ ನಿಮ್ಮ ಜೀವನದಲ್ಲಿ ಯಾರಾದರೂ ವಿಶೇಷ ವ್ಯಕ್ತಿ ಇದ್ದರೆ, ರೋಸ್ ಡೇಯಂದು (Rose Day) ಕೆಂಪು ಬಣ್ಣದ ಗುಲಾಬಿ ಹೂವು ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ದಿನದ ಆಚರಣೆಗೂ ಮುನ್ನ ಇದರ ಇತಿಹಾಸ, ಮಹತ್ವ ತಿಳಿದುಕೊಳ್ಳಿ.

ರೋಸ್‌ ಡೇಯ ಇತಿಹಾಸ, ಮಹತ್ವವೇನು?

ವ್ಯಾಲೆಂಟೈನ್ಸ್ ವೀಕ್‌ನ ಮೊದಲ ದಿನವೇ ರೋಸ್ ಡೇ. ಪ್ರೇಮಿಗಳ ವಾರ ಆರಂಭವಾಗುವುದೇ ಈ ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ. ಆದರೆ ಈ ರೋಜ್ ಡೇ ಇತಿಹಾಸದ ಬಗ್ಗೆ ಹೇಳುವುದಾದರೆ ರೋಸ್ ಡೇಗೂ ರೋಮನ್ ಪುರಾಣಗಳಿಗೂ ಸಂಬಂಧವಿದೆ. ಈ ಗುಲಾಬಿ ಹೂವುಗಳು ಪ್ರೀತಿ  ಪ್ರೇಮದ ಸಂಕೇತ.

ಇದನ್ನೂ ಓದಿ: Valentine’s Week 2026: ರೋಸ್‌ ಡೇಯಂದು ನಿಮ್ಮ ಲೈಫ್‌ ಪಾರ್ಟ್ನರ್‌ಗಾಗಿ ತಯಾರಿಸಿ ಈ ಸ್ವಾದಿಷ್ಟ ಗುಲಾಬಿ ತಿನಿಸು; ಇಲ್ಲಿದೆ ರೆಸಿಪಿ

ಅದಲ್ಲದೇ, ಸೌಂದರ್ಯ ಹಾಗೂ ಪ್ರೀತಿಗೆ ಸಂಬಂಧಿಸಿದ ದೇವತೆಯಾದ ಶುಕ್ರಕ್ಕೆ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿತ್ತು. ಈ ಗುಲಾಬಿ ಹೂವುಗಳು ಏಷ್ಯನ್ ಹಾಗೂ ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಯಲ್ಲೂ ಪ್ರೀತಿಯೊಂದಿಗೆ ಸಂಬಂಧ ಹೊಂದಿದೆ.  ಇನ್ನು, ವಿಕ್ಟೋರಿಯನ್ನರು ಗುಲಾಬಿ ಹೂವುಗಳನ್ನು ನೀಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 7ರಂದು ರೋಸ್ ಡೇ ಯನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರು ಹಾಗೂ ತಮ್ಮ ಜೀವನದ ವಿಶೇಷ ವ್ಯಕ್ತಿಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಈ ದಿನವನ್ನು ಆಚರಿಸುತ್ತಾರೆ.

ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್​​ಸ್ಟಾರ್: ಒಟಿಟಿ ಮಾಡಿದ ಮನವಿಯೇನು? – Kannada News | Prabhas The Raja Saab OTT release Jio Hotstar craze details

ಪ್ರಭಾಸ್ (Prabhas), ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಪ್ರಭಾಸ್ ಅವರಿಗಿದ್ದಾರೆ. ಅದ್ಯಾವ ಮಟ್ಟಿಗೆ ಪ್ರಭಾಸ್ ಕ್ರೇಜ್ ಇದೆಯೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ಸುಲಭವಾಗಿ 200-300 ಕೋಟಿ ಹಣ ಗಳಿಕೆ ಮಾಡಿಬಿಡುತ್ತವೆ ಅದೂ ಮೊದಲ ಒಂದು ವಾರದ ಒಳಗೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದ್ದು, ಇಲ್ಲಿಯೂ ಸಹ ಬಿಡುಗಡೆಗೆ ಮುಂಚೆಯೇ ಅಬ್ಬರ ಸೃಷ್ಟಿಸಿದೆ.

ಪ್ರಭಾಸ್ ನಟನೆಯ ಹಾರರ್ ಕಾಮಿಡಿ ಚಿತ್ರ ‘ದಿ ರಾಜಾ ಸಾಬ್’ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಈಗ ಕೇವಲ ಒಂದು ತಿಂಗಳ ಅಂತರದಲ್ಲಿ ಒಟಿಟಿ ಪ್ರಿಯರ ಮುಂದೆ ಬರುತ್ತಿದೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಅದ್ಯಾವ ಮಟ್ಟಿಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆಂದರೆ, ಸ್ವತಃ ಒಟಿಟಿಯ ಆಡಳಿತ ಮಂಡಳಿಯೇ ಶಾಕ್ ಆಗಿದೆ.

ಇದನ್ನೂ ಓದಿ:‘ಸಲಾರ್ 2’ ಸಿನಿಮಾ ನಿಂತೇ ಹೋಯ್ತೆ? ಪ್ರಭಾಸ್-ನೀಲ್ ಮಾಡಿರುವ ಚರ್ಚೆ ಏನು?

ಜಿಯೋ ಹಾಟ್‌ಸ್ಟಾರ್ ತನ್ನ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದೆ. ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಸಿನಿಮಾಕ್ಕಾಗಿ ಒಟಿಟಿ ಇತಿಹಾಸದಲ್ಲೇ ಕಾಣದಂತಹ ಕ್ರೇಜ್ ಸೃಷ್ಟಿಯಾಗಿದ್ದು, ಲಕ್ಷಾಂತರ ಮಂದಿ ‘Remind Me’ (ರಿಮೈಂಡ್ ಮೀ) ಬಟನ್ ಕ್ಲಿಕ್ ಮಾಡಿದ್ದಾರೆ. ಈ ಭಾರಿ ಪ್ರಮಾಣದ ಟ್ರಾಫಿಕ್ ಅನ್ನು ನಿಭಾಯಿಸಲು ಮತ್ತು ಪ್ರೇಕ್ಷಕರಿಗೆ ಯಾವುದೇ ಅಡಚಣೆಯಿಲ್ಲದೆ ಸಿನಿಮಾ ತೋರಿಸಲು ಜಿಯೋ ಹಾಟ್‌ಸ್ಟಾರ್ ತನ್ನ ಸರ್ವರ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದು ಭಾರತೀಯ ಒಟಿಟಿ ಇತಿಹಾಸದಲ್ಲೇ ಅತ್ಯಂತ ಅಪರೂಪದ ವಿದ್ಯಮಾನವಾಗಿದೆ ಎಂದು ಸ್ವತಃ ಜಿಯೋ ಹಾಟ್​​ಸ್ಟಾರ್ ಹೇಳಿದೆ.

ಇದು ಪ್ರಭಾಸ್ ಅವರಿಗೆ ಇರುವ ಕ್ರೇಜ್​​ಗೆ ಉದಾಹರಣೆಯಾಗಿದೆ. ‘ದಿ ರಾಜಾ ಸಾಬ್’ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ಸಿನಿಮಾ. ಹಲವಾರು ಮಂದಿ ವಿಮರ್ಶಕರು ಸಿನಿಮಾದ ಕತೆ, ಚಿತ್ರಕತೆ, ವಿಎಫ್​​ಎಕ್ಸ್ ಚೆನ್ನಾಗಿಲ್ಲವೆಂದು ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ಸಹ ಜನ ಒಟಿಟಿಯಲ್ಲಿ ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿದ್ದಾರೆ.

ಅಂದಹಾಗೆ ಒಟಿಟಿಯಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ನೋಡುವವರಿಗೆ ಒಂದು ವಿಶೇಷ ಉಡುಗೊರೆ ಕಾದಿದೆ. ತಾಂತ್ರಿಕ ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಕೈಬಿಡಲಾಗಿದ್ದ ಸುಮಾರು 4 ರಿಂದ 8 ನಿಮಿಷಗಳ ದೃಶ್ಯಗಳನ್ನು ಒಟಿಟಿ ಆವೃತ್ತಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಪ್ರಭಾಸ್ ಅವರ ‘ಓಲ್ಡ್ ಗೆಟಪ್’ ದೃಶ್ಯಗಳು ಮತ್ತು ಒಂದು ಸಾಹಸ ಸನ್ನಿವೇಶ ಪ್ರಮುಖ ಆಕರ್ಷಣೆಯಾಗಲಿದೆ. ಈ ದೃಶ್ಯಗಳನ್ನು ಸಿನಿಮಾದ ಅವಧಿ ಹೆಚ್ಚಳ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದಾಗ ಕೈಬಿಡಲಾಗಿತ್ತು. ಇದೀಗ ಅದನ್ನು ಸೇರಿಸಲಾಗಿದೆ.

‘ದಿ ರಾಜಾ ಸಾಬ್’ ಸಿನಿಮಾವು ಜಿಯೋ ಹಾಟ್​​ಸ್ಟಾರ್​​​ನಲ್ಲಿ ಇಂದಿನಿಂದ (ಫೆಬ್ರವರಿ 06) ಪ್ರಸಾರ ಆಗಲಿದೆ. ಸಿನಿಮಾವನ್ನು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಮಾರುತಿ ನಿರ್ದೇಶನದ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ನಿರ್ಮಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link