Headlines

Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ – Kannada News | Father’s Day 2026: Here is a list of gifts you can give to your father on Father’s Day

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ (Father) ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಮಕ್ಕಳ ಪಾಲಿನ ಈ ಸೂಪರ್‌ ಹೀರೋಗಳನ್ನು ಸಂಭ್ರಮಿಸಲು, ಅಪ್ಪಂದಿರ ಪ್ರೀತಿ, ತ್ಯಾಗವನ್ನು ಸ್ಮರಿಸಲು ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯರ ಪಾಲಿಗಂತೂ ತುಂಬಾನೇ ವಿಶೇಷವಾದ ದಿನ. ಅನೇಕ ಜನರು ತಮ್ಮ ತಂದೆಯ ಸಲುವಾಗಿ ಈ ದಿನವನ್ನು…

Read More

ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ – Kannada News | India’s defence production and exports see big increase in 2025 26, says minister Rajnath Singh

ನವದೆಹಲಿ, ಜೂನ್ 18: ಭಾರತದ ರಕ್ಷಣಾ ಕ್ಷೇತ್ರ ಮಿಂಚಿನ ಸಂಚಾರ ನಡೆಸುತ್ತಿದೆ. ಸರ್ಕಾರದ ‘ಸ್ವಾವಲಂಬಿ ಭಾರತ’ (Aatmanirbhar Bharat) ಯೋಜನೆಗೆ ಭಾರಿ ಯಶಸ್ಸು ಸಿಕ್ಕಿದೆ. ದೇಶದ ವಾರ್ಷಿಕ ರಕ್ಷಣಾ ಉತ್ಪಾದನೆಯು 2025-26ರ ಹಣಕಾಸು ವರ್ಷದಲ್ಲಿ (FY26) ಸಾರ್ವಕಾಲಿಕ ದಾಖಲೆಯಾದ ₹1.78 ಲಕ್ಷ ಕೋಟಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದ್ದನ್ನು ತಿಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು, ರಕ್ಷಣಾ ಕ್ಷೇತ್ರದ…

Read More

ವಿಷ ಸೇವಿಸಿ ಶಾಲಾ ಮುಖ್ಯಶಿಕ್ಷಕ ಆತ್ಮಹತ್ಯೆ ಪ್ರಕರಣ: ಐವರು ಶಿಕ್ಷಕರು ಸೇರಿ 10 ಮಂದಿ ವಿರುದ್ಧ ಎಫ್​​ಐಆರ್​ – Kannada News | Davanagere Headmaster Death Case: FIR Registered Against 10 for Alleged Caste Harassment and Mental Torture

ಮೃತ ಮುಖ್ಯ ಶಿಕ್ಷಕ ಜಯಪ್ಪImage Credit source: Tv9 Kannada ದಾವಣಗೆರೆ, ಜೂನ್​​ 18: ವಿಷ ಸೇವಿಸಿ ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಪ್ರಕರಣ ಸಂಬಂಧ ಐವರು ಶಿಕ್ಷಕರು, ಬಿಸಿಯೂಟದ ನಾಲ್ವರು ಅಡುಗೆ ಸಿಬ್ಬಂದಿ, ಸಿಆರ್​​ಪಿ, ಬಿಆರ್​ಪಿ ಸೇರಿದಂತೆ 10 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ,ಮಹಾಂತೇಶ್ ಗೌಳಿ, ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ,…

Read More

ಸಂಪೂರ್ಣ ಬತ್ತಿದ ಕಾವೇರಿ ನದಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರದ ಭೀತಿ – Kannada News | Cauvery River Faces Alarming Drought: June Flow Drastically Reduced in Kodagu

ಮಡಿಕೇರಿ, ಜೂನ್​​ 18: ರಾಜ್ಯದಲ್ಲಿ ಶೇಕಡ 60ರಷ್ಟು ಮಳೆ ಕೊರತೆ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ….

Read More

ಮಾವು ಬೆಲೆಯಲ್ಲಿ ಕುಸಿತ: ರಾಜ್ಯದ ರೈತರ ನೆರವಿಗೆ ಧಾವಿಸುವಂತೆ ಶಿವರಾಜ್ ಸಿಂಗ್ ಚೌಹಾಣ್​ಗೆ ಜೋಶಿ ಪತ್ರ – Kannada News | Karnataka Mango Growers Hit by Price Crash; Pralhad Joshi Writes to Shivraj Singh Chouhan

ಬೆಂಗಳೂರು, ಜೂನ್​​ 18: ಕರ್ನಾಟಕದ ಮಾವು ಬೆಳೆಗಾರರು (Mango growers) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಸೇರಿದಂತೆ ಹಲವು ಭಾಗದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಮಾವು ಬೆಳೆಗಾರರಿಗೆ ಪಿಡಿಪಿಎಸ್​ (PDPS) ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್​ಗೆ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ (Pralhad Joshi) ಪತ್ರ ಬರೆಯುವ…

Read More

‘ಸೈನಿಕ 2’: ಚಿತ್ರರಂಗಕ್ಕೆ ಕಾಲಿಡಲಿರುವ ಸಿಪಿ ಯೋಗೇಶ್ವರ್ ಪುತ್ರ – Kannada News | MLA CP Yogeshwar bringing his son Dhyan to Kannada movie industry

ಸಿಪಿ ಯೋಗೇಶ್ವರ್ (CP Yogeshwar), ನಟನಾಗಿ ಯಶಸ್ಸು ಗಳಿಸಿ, ಬಳಿಕ ರಾಜಕಾರಣಿಯಾಗಿ ಅಲ್ಲಿಯೂ ಯಶಸ್ಸು ಗಳಿಸಿದವರು. ಇದೀಗ ಅವರು ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ತಂದಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರೂ ಸಹ ರಾಜಕಾರಣದತ್ತ ತಿರುಗುತ್ತಾರೆ. ಮಕ್ಕಳನ್ನು ರಾಜಕಾರಣಕ್ಕೆ ತರುವ ಮುನ್ನ ಸಿನಿಮಾ ರಂಗದಲ್ಲಿ ಜನಪ್ರಿಯತೆ ಸಿಗುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯ ಮಾಡೆಲ್ ಆಗಿಬಿಟ್ಟಿದೆ. ಅದರಂತೆ ಈಗ ಸಿಪಿ ಯೋಗೇಶ್ವರ್ ಸಹ ತಮ್ಮ ಮಗನನ್ನು ಸಿನಿಮಾ…

Read More

Viral: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್ – Kannada News | Bengaluru: A man reveals his friend’s experience while looking for a house in Bengaluru

ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ದುಡ್ಡಿನ ಆಸೆಗೆ ಬಿದ್ದು ಮನೆ ಮಾಲೀಕರು ಬೇಕಾಬಿಟ್ಟಿ ಬಾಡಿಗೆ ಹಾಗೂ ಭದ್ರತಾ ಠೇವಣಿ ಕೇಳುತ್ತಿದ್ದಾರೆ. ನೀವೇನಾದ್ರೂ ಸಿಲಿಕಾನ್‌ ಸಿಟಿಯಲ್ಲಿ ಮನೆ ಹುಡುಕುತ್ತಿದ್ರೆ ಕಡಿಮೆ ಬಾಡಿಗೆ ಹಾಗೂ ಠೇವಣಿ ಇರುವ ಮನೆ ಸಿಗುತ್ತೆ ಅನ್ನೋದು ದೂರದ ಮಾತು. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಾಟ ವಿಚಾರದಲ್ಲಿ ತನ್ನ ಸ್ನೇಹಿತನಿಗಾದ ಅನುಭವವನ್ನು ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿಗೆ ಸ್ಥಳಾಂತರಗೊಂಡ ತನ್ನ ಸ್ನೇಹಿತ…

Read More

ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ – Kannada News | Carrybag charge by Red Tape, consumer wins case in Haryana court, footwear company gets huge fine

ನವದೆಹಲಿ, ಜೂನ್ 18: ಖ್ಯಾತ ಶೂ ಬ್ರ್ಯಾಂಡ್ ಆದ ‘ರೆಡ್ ಟೇಪ್’ (Red Tape Ltd) ಗ್ರಾಹಕರೊಬ್ಬರಿಗೆ ಕ್ಯಾರಿ ಬ್ಯಾಗ್ ನೀಡಲು ₹10 ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಕ್ಕಾಗಿ ಹರಿಯಾಣದ ಗ್ರಾಹಕ ನ್ಯಾಯಾಲಯವು ಕಂಪನಿಗೆ ಭಾರಿ ದಂಡ ವಿಧಿಸಿದೆ. ಈ ₹10 ಮೊತ್ತವನ್ನು ಗ್ರಾಹಕನಿಗೆ ವಾಪಸ್ ನೀಡುವಂತೆ ಮತ್ತು ಮಾನಸಿಕ ಕಿರಿಕಿರಿ ಹಾಗೂ ಕಾನೂನು ವೆಚ್ಚಕ್ಕಾಗಿ ಒಟ್ಟು ₹8,000 ಪರಿಹಾರ ನೀಡುವಂತೆ ಆದೇಶಿಸಿದೆ. ಹರಿಯಾಣದ ರೋಹ್ಟಕ್ ನಿವಾಸಿಯಾದ 27 ವರ್ಷದ ಅನಿಲ್ ಕುಮಾರ್ ಎಂಬ ಗ್ರಾಹಕರು ಏಪ್ರಿಲ್…

Read More

ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಹೆಚ್​​. ಡಿ. ರೇವಣ್ಣ – Kannada News | Revanna Bats for Sumalatha Ambareesh, Makes Surprise Political Remark

ಬೆಂಗಳೂರು, ಜೂನ್​​ 18: ಹೆಚ್​.ಡಿ. ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್​​.ಡಿ. ರೇವಣ್ಣ, ದೇವೇಗೌಡರು ಅಧಿಕಾರಕ್ಕಾಗಿ ಎಂದಿಗೂ ಯಾರ ಬಾಗಿಲಿಗೂ ಹೋಗಿಲ್ಲ. ಪ್ರಧಾನಮಂತ್ರಿ ಹುದ್ದೆಯನ್ನೇ ಅವರು ತ್ಯಾಗ ಮಾಡಿದ್ದರು ಎಂಬುದನ್ನು ಅವರು ನೆನಪಿಸಿದ್ದಾರೆ. ರಾಜ್ಯಸಭಾ ಸ್ಥಾನಕ್ಕಾಗಿ ದೇವೇಗೌಡರು ಅಥವಾ ಕುಮಾರಸ್ವಾಮಿಯವರು ಯಾರನ್ನೂ ಕೇಳಿರಲಿಲ್ಲ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಎಂದು ಸುಮಲತಾ ಅಂಬರೀಶ್ ಅವರ ಹೆಸರನ್ನು ಪ್ರಸ್ತಾಪಿಸಿದ ರೇವಣ್ಣ, ಅವರಿಗೂ ಟೋಪಿ ಹಾಕಲಾಯಿತು ಎಂದು…

Read More

30 ವರ್ಷ ದಾಟಿದ ಬಳಿಕ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಈ ಅಭ್ಯಾಸಗಳನ್ನು ಪಾಲಿಸಬೇಕು – Kannada News | Women Over 30 should follow these habits to stay healthy and look young

ಒಬ್ಬ ಮಹಿಳೆ (Women) ತನ್ನ ಜೀವನದುದ್ದಕ್ಕೂ ಹಲವು ಹಂತಗಳನ್ನು ದಾಟುತ್ತಾಳೆ. ಹದಿಹರೆಯದಿಂದ ಹಿಡಿದು  ವೃದ್ಧಾಪ್ಯದವರೆಗೆ ಆಕೆ ಅನೇಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ವಯಸ್ಸಾದಂತೆ, ಅವಳ ದೇಹವು ನಿರಂತರವಾಗಿ ಬದಲಾಗಲು ಪ್ರಾರಂಭಿಸುತ್ತದೆ. ಈ ಬದಲಾವಣೆಗಳು ಬಾಹ್ಯವಾಗಿ ಮಾತ್ರವಲ್ಲದೆ ಆಂತರಿಕವಾಗಿಯೂ ಸಂಭವಿಸುತ್ತವೆ. ವಿಶೇಷವಾಗಿ 30 ವರ್ಷದ ನಂತರ, ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ದೈನಂದಿನ ಜೀವನ ಮತ್ತು ಕುಟುಂಬದ ಜವಾಬ್ದಾರಿಗಳ ದೈನಂದಿನ ಗಡಿಬಿಡಿಯ ನಡುವೆ, ಅನೇಕ ಮಹಿಳೆಯರು ತಮ್ಮ ಬಗ್ಗೆ ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿರ್ಲಕ್ಷಿಸುತ್ತಾರೆ….

Read More