Category Archives: Blog

Your blog category

ರಾಹುವಿನ ನಕ್ಷತ್ರದಲ್ಲೇ ಇರುವ ರಾಹುವು ಯಾವ ರಾಶಿಗೆ ಯಾವ ಫಲವನ್ನು ಕೊಡಬಹುದು? – Kannada News | Shatabhisha Rahu Transit: Impact on Zodiac Signs and Solutions for Doshas

ಶತಭಿಷ ನಕ್ಷತ್ರವು ರಾಹುವಿನ ಸ್ವಂತ ನಕ್ಷತ್ರವಾದ್ದರಿಂದ, ಇಲ್ಲಿ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟ, ಇನ್ನು ಕೆಲವು ರಾಶಿಗಳಿಗೆ ಸವಾಲುಗಳನ್ನು ನೀಡುತ್ತದೆ. ಶುಭ ಮತ್ತು ಅಶುಭ ಫಲಗಳನ್ನು ಇಲ್ಲಿ ನೋಡಬಹುದು.

ಅತ್ಯಂತ ಶುಭ ಫಲ ಪಡೆಯುವ ರಾಶಿಗಳು

ಈ ರಾಶಿಯವರಿಗೆ ರಾಹು ಯಶಸ್ಸು ಮತ್ತು ಆರ್ಥಿಕ ಲಾಭವನ್ನು ತಂದುಕೊಡುತ್ತಾನೆ.

​ಮೇಷ ರಾಶಿ:

ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನಿರೀಕ್ಷಿತ ಧನಲಾಭ ಮತ್ತು ವಿದೇಶಿ ವ್ಯವಹಾರಗಳಿಂದ ಲಾಭವಾಗಲಿದೆ.

​ಮಿಥುನ ರಾಶಿ:

ಅದೃಷ್ಟ ನಿಮ್ಮ ಪರ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನಾರಂಭವಾಗುತ್ತವೆ. ತೀರ್ಥಯಾತ್ರೆ ಅಥವಾ ದೂರದ ಪ್ರಯಾಣದ ಯೋಗವಿದೆ.

​ಕನ್ಯಾ ರಾಶಿ:

ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ ಇರಲಿದೆ. ಶತ್ರುಗಳ ಮೇಲೆ ಜಯ ಸಿಗುತ್ತದೆ ಮತ್ತು ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.

​ಧನು ರಾಶಿ:

ನಿಮ್ಮ ಸಾಹಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಅಶುಭ ಫಲ

​ಈ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳಿತು.

​ಕುಂಭ ರಾಶಿ:

ರಾಹು ನಿಮ್ಮದೇ ರಾಶಿಯಲ್ಲಿ ಸಂಚರಿಸುವುದರಿಂದ ಮಾನಸಿಕ ಗೊಂದಲಗಳು ಉಂಟಾಗಬಹುದು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ

​ಮೀನ ರಾಶಿ:
ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವಿಶೇಷವಾಗಿ ನಿದ್ರೆಯ ಸಮಸ್ಯೆ ಕಾಡಬಹುದು.

​ಕರ್ಕಾಟಕ ರಾಶಿ:

ಅಷ್ಟಮ ರಾಹುವಿನ ಪ್ರಭಾವವಿರುವುದರಿಂದ ಹಠಾತ್ ಸಂಕಷ್ಟಗಳು ಬರಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣ ಹೂಡಿಕೆ ಮಾಡುವಾಗ ಜಾಗ್ರತೆ ವಹಿಸಿ.

​ಸಿಂಹ ರಾಶಿ:

ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.

ಅಶುಭವು ನ್ಯೂನವಾಗಲು ಪರಿಹಾರಗಳಿವು. ​ಒಂದು ವೇಳೆ ನಿಮಗೆ ಅಶುಭ ಫಲಗಳಿದ್ದರೆ, ಈ ಸರಳ ಕ್ರಮಗಳನ್ನು ಅನುಸರಿಸಬಹುದು. ​ದುರ್ಗಾ ದೇವಿಯ ಆರಾಧನೆ, ಪ್ರತಿದಿನ ಅಥವಾ ಶುಕ್ರವಾರ ದುರ್ಗಾ ಚಾಲೀಸಾ ಪಠಿಸುವುದು ಶ್ರೇಯಸ್ಕರ. ರಾಹುವಿನ ದೋಷ ನಿವಾರಣೆಗೆ ನಾಗರಿಗೆ ಅಭಿಷೇಕ ಮಾಡಿ.

​- ಲೋಹಿತ ಹೆಬ್ಬಾರ್

Source link

ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ? – Kannada News | Chakravarthy Chandrachud talks about CJ Roy and Telugu actress

ಸಿಜೆ ರಾಯ್ (CJ Roy) ಅವರು ನಿನ್ನೆ ನಿಧನರಾಗಿದ್ದು, ರಾಯ್ ಅವರು ಉದ್ಯಮಿ ಆಗಿರುವ ಜೊತೆಗೆ ಸಿನಿಮಾ ಮತ್ತು ಟಿವಿ ಲೋಕದೊಟ್ಟಿಗೆ ಆಪ್ತ ಸಂಬಂಧ ಹೊಂದಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದ ರಾಯ್ ಅವರು ನಟ, ನಟಿಯರೊಟ್ಟಿಗೆ ಗೆಳೆತನ ಹೊಂದಿದ್ದರು. ರಾಯ್ ಅವರ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್​​ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ರಾಯ್ ಅವರ ಖಾಸಗಿ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಯ್ ಅವರನ್ನು ಹನಿ ಟ್ರ್ಯಾಪ್​​ಗೆ ಬೀಳಿಸುವ ಪ್ರಯತ್ನವನ್ನು ಇಬ್ಬರು ತೆಲುಗು ನಟಿಯರು ಹಿಂದೊಮ್ಮೆ ಮಾಡಿದ್ದರು ಎಂದು ಘಟನೆಯ ವಿವರವನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Career Horoscope 2026: ಈ ರಾಶಿಯವರು ಉದ್ಯೋಗದಲ್ಲಿ ಹೆಚ್ಚು ಶ್ರಮವಹಿಸಬೇಕು

01-02-2026ರಿಂದ 07-02-2026 ರವರೆಗೆ ಉದ್ಯೋಗದಲ್ಲಿ ಶ್ರಮ ಹಾಕಬೇಕಾದ ಅನಿವಾರ್ಯತೆ ಇರಲಿದೆ. ಆಯ್ಕೆಗಳನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ರಕ್ಷಣೆಯನ್ನು ನೀವು ಎಲ್ಲ ಕಡೆಯಿಂದ ಎಲ್ಲ ತರದಲ್ಲಿಯೂ ಮಾಡಕೊಳ್ಳಬೇಕಾಗುವುದು. ಕಲಾತ್ಮಕತೆಗೆ ಹೆಚ್ಚು ಮಹತ್ತ್ವ ಸಿಗಲಿದೆ. ಈ ವಾರ ಶುಭವಾಗಲಿ.

ಮೇಷ :

ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಮೇಲಧಿಕಾರಿಗಳ ಬೆಂಬಲದಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ಲಾಭದೊಂದಿಗೆ ವೃತ್ತಿಜೀವನದಲ್ಲಿ ಬಡ್ತಿಯ ಯೋಗವಿದೆ. ನಿಮ್ಮ ಶ್ರಮಕ್ಕೆ ತಕ್ಕ ಗೌರವ ಸಿಗುವ ಸಮಯವಿದು.

​ವೃಷಭ :

ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಕಾರ್ಯಕ್ಷಮತೆ ಕುಂದುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರವಹಿಸಿ. ವ್ಯವಹಾರದಲ್ಲಿ ಹೊಸ ಹೂಡಿಕೆಗೆ ಈ ವಾರ ಪೂರಕವಾಗಿದೆ. ತಾಳ್ಮೆ ನಿಮ್ಮ ಯಶಸ್ಸಿನ ಸೂತ್ರ.

​ಮಿಥುನ :

ನಿರುದ್ಯೋಗಿಗಳಿಗೆ ಹೊಸ ಕೆಲಸದ ಆಫರ್ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿರುವವರಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ವಿದೇಶಿ ಕಂಪನಿಗಳೊಂದಿಗೆ ವ್ಯವಹರಿಸಲು ಇದು ಸಕಾಲ. ನಿಮ್ಮ ಸಂವಹನ ಕಲೆ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

​ಕರ್ಕಾಟಕ :

ಉದ್ಯೋಗ ಸ್ಥಳದಲ್ಲಿ ಶತ್ರುಗಳ ಬಗ್ಗೆ ಎಚ್ಚರವಿರಲಿ. ಅನಗತ್ಯ ವಾದಗಳಿಂದ ದೂರವಿರುವುದು ಒಳಿತು. ಕೆಲಸದ ಬದಲಾವಣೆಗಾಗಿ ಮಾಡುವ ಪ್ರಯತ್ನಗಳು ಸದ್ಯಕ್ಕೆ ಬೇಡ. ಶಿಸ್ತು ಮತ್ತು ಕಠಿಣ ಪರಿಶ್ರಮ ಮಾತ್ರ ನಿಮಗೆ ರಕ್ಷಣೆ ನೀಡಬಲ್ಲದು.

​ಸಿಂಹ :

ಸರ್ಕಾರಿ ಕೆಲಸದಲ್ಲಿರುವವರಿಗೆ ಶುಭ ಕಾಲ. ಹೊಸ ಯೋಜನೆಗಳನ್ನು ಜಾರಿಗೆ ತರಲು ಅನುಕೂಲಕರ ವಾರವಿದು. ಆದರೆ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ಕಚೇರಿ ರಾಜಕೀಯದಿಂದ ದೂರವಿದ್ದು ನಿಮ್ಮ ಕೆಲಸದ ಮೇಲೆ ಗಮನಹರಿಸಿ.

​ಕನ್ಯಾ :

ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ಫಲ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ಆರಂಭಿಸಲು ಇದು ಉತ್ತಮ ಸಮಯ.

ತುಲಾ :

ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಕಲಾತ್ಮಕ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಕೆಲಸದ ನಿಮಿತ್ತ ಸಣ್ಣ ಪ್ರಯಾಣ ಮಾಡಬೇಕಾಗಬಹುದು. ಆರ್ಥಿಕ ವಿಷಯಗಳಲ್ಲಿ ಜಾಗರೂಕರಾಗಿರಿ ಮತ್ತು ಹಿರಿಯರ ಸಲಹೆಯನ್ನು ಪಡೆಯಲು ಹಿಂಜರಿಯಬೇಡಿ.

ವೃಶ್ಚಿಕ :

ವೃತ್ತಿ ಬದಲಾವಣೆಯ ಯೋಚನೆ ಇದ್ದರೆ ಎಚ್ಚರಿಕೆಯಿಂದ ನಿರ್ಧರಿಸಿ. ವರ್ಗಾವಣೆ ಬಯಸುವವರಿಗೆ ಅನುಕೂಲಕರ ಫಲಿತಾಂಶ ಸಿಗಬಹುದು. ಉದ್ಯೋಗದಲ್ಲಿ ಅನಿಶ್ಚಿತತೆ ಕಾಡದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಬಗ್ಗೆ ಮೇಲಧಿಕಾರಿಗಳಿಗೆ ಪಾರದರ್ಶಕವಾಗಿ ಮಾಹಿತಿ ನೀಡುವುದು ಉತ್ತಮ.

ಧನು :

ಉದ್ಯೋಗದಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ಹೊಸ ತಂತ್ರಜ್ಞಾನ ಕಲಿಕೆಗೆ ಆಸಕ್ತಿ ತೋರುವಿರಿ. ವ್ಯಾಪಾರಸ್ಥರಿಗೆ ದೊಡ್ಡ ಮೊತ್ತದ ಲಾಭದ ನಿರೀಕ್ಷೆಯಿದೆ. ನಿಮ್ಮ ನಾಯಕತ್ವ ಗುಣಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃತ್ತಿ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣುವಿರಿ.

ಮಕರ :

ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲು ವಿಳಂಬವಾಗಬಹುದು. ದೃತಿಗೆಡಬೇಡಿ, ವಾರದ ಅಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ. ತಾಂತ್ರಿಕ ವಲಯದವರಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ನಿಮ್ಮ ಕೆಲಸವನ್ನು ಸುಲಭಗೊಳಿಸಲಿದೆ.

ಕುಂಭ :

ರಾಹುವಿನ ಪ್ರಭಾವದಿಂದ ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು. ಗೊಂದಲಗಳಿಗೆ ಕಿವಿಗೊಡದೆ ಗುರಿಯತ್ತ ಗಮನಹರಿಸಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ಮಿಶ್ರ ಫಲ ಸಿಗಲಿದೆ. ನಿಮ್ಮ ಬುದ್ಧಿವಂತಿಕೆಯೇ ಸವಾಲುಗಳನ್ನು ಎದುರಿಸಲು ಪ್ರಮುಖ ಅಸ್ತ್ರವಾಗಲಿದೆ.

ಮೀನ :

ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ವಾರ. ಆದರೆ ಸ್ಥಳೀಯ ಉದ್ಯೋಗದಲ್ಲಿ ಅತೃಪ್ತಿ ಕಾಡಬಹುದು. ಕೆಲಸದ ನಿಮಿತ್ತ ಅತಿಯಾದ ಓಡಾಟದಿಂದ ದಣಿವಾಗಬಹುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಶಾಂತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಡಿ ಇಡಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಜೆರ್ಸಿ ಲಾಂಚ್ ಕಾರ್ಯಕ್ರಮ ರದ್ದು; ಹೊಸ ನಾಟಕ ಶುರು ಮಾಡಿದ ಪಾಕಿಸ್ತಾನ – Kannada News | Pakistan Cricket’s T20 World Cup Saga: Boycott Threats and Jersey Launch Drama

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭವಾಗಲು ಕೇವಲ ಒಂದು ವಾರ ಬಾಕಿ ಉಳಿದಿದೆ. ಆದರೆ ಹುಟ್ಟಿಕೊಂಡಿರುವ ವಿವಾದಗಳಿಗೆ ತೆರೆ ಬಿದ್ದಿಲ್ಲ. ಬಾಂಗ್ಲಾದೇಶ ತಂಡವನ್ನು ವಿಶ್ವಕಪ್​ನಿಂದ ಹೊರಹಾಕಿರುವುದಕ್ಕೆ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಿನಕ್ಕೊಂದು ನಾಟಕ ಶುರು ಮಾಡಿದೆ. ಈ ಮೊದಲು ಟಿ20 ವಿಶ್ವಕಪ್​ಗೆ ತಂಡವನ್ನು ಕಳುಹಿಸುವುದು ಇನ್ನು ನಿರ್ಧಾರವಾಗಿಲ್ಲ ಎಂದಿದ್ದ ಪಾಕ್ ಮಂಡಳಿ, ಆ ಬಳಿಕ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿತ್ತು. ತಂಡವನ್ನು ಪ್ರಕಟಿಸಿದ ಬಳಿಕ ಪಾಕ್ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದು ಖಚಿತ ಎಂದಾಗಿತ್ತು. ಆದರೀಗ ಹೊಸ ವರಸೆ ಶುರು ಮಾಡಿರುವ ಪಾಕ್ ಮಂಡಳಿ, ಶನಿವಾರ ನಡೆಯಬೇಕಿದ್ದ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ.

ಜೆರ್ಸಿ ಅನಾವರಣ ಕಾರ್ಯಕ್ರಮ ರದ್ದು

ವಾಸ್ತವವಾಗಿ ಟಿ20 ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡನೇ ಟಿ20 ಪಂದ್ಯದ ಟಾಸ್ ನಂತರ ಜೆರ್ಸಿಯನ್ನು ಅನಾವರಣಗೊಳಿಸಬೇಕಿತ್ತು. ಆದಾಗ್ಯೂ, ಸರ್ಕಾರದ ವಿದೇಶಾಂಗ ಸಚಿವಾಲಯದ ಅನುಮತಿ ಸಿಕ್ಕಿಲ್ಲದ ಕಾರಣ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ, ಪಾಕಿಸ್ತಾನ ನಿಜವಾಗಿಯೂ ವಿಶ್ವಕಪ್ ಆಡುತ್ತದೆಯೇ ಅಥವಾ ಇಲ್ಲವೇ ಎಂಬ ಸಸ್ಪೆನ್ಸ್ ಉತ್ತುಂಗಕ್ಕೇರಿದೆ.

ಐಸಿಸಿಯಿಂದ ಭಾರಿ ದಂಡ

ಭಾರತ ಮತ್ತು ಶ್ರೀಲಂಕಾ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ, ಪಾಕಿಸ್ತಾನವು ಪ್ರತಿ ಹಂತದಲ್ಲೂ ಹೊಸ ಹೊಸ ಕ್ಯಾತೆ ತೆಗೆಯುತ್ತಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗಾಗಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಐಸಿಸಿ ಟೂರ್ನಮೆಂಟ್‌ನಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿ ಸ್ಕಾಟ್ಲೆಂಡ್ ಅನ್ನು ಸೇರಿಸಿದ್ದನ್ನು ಪಾಕಿಸ್ತಾನ ತೀವ್ರವಾಗಿ ಪ್ರತಿಭಟಿಸುತ್ತಿದೆ. ಪಾಕಿಸ್ತಾನ ಸರ್ಕಾರ ಆರಂಭದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಪಂದ್ಯಾವಳಿಯನ್ನು ಬಹಿಷ್ಕರಿಸಲು ಯೋಚಿಸಿದ್ದರೂ, ಐಸಿಸಿಯಿಂದ ಭಾರಿ ದಂಡ ಮತ್ತು ನಿರ್ಬಂಧಗಳ ಭಯದಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತೋರುತ್ತದೆ. ಆದಾಗ್ಯೂ, ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿರುವ ಹಿಂದೆ ಕೆಲವು ಬಲವಾದ ರಾಜಕೀಯ ತಂತ್ರವಿದೆ ಎಂಬ ಮಾತು ಕೇಳಿಬರುತ್ತಿದೆ.

ಐಸಿಸಿ ಆದಾಯಕ್ಕೆ ಹೊಡೆತ

ಇತ್ತೀಚಿನ ಮಾಹಿತಿಯ ಪ್ರಕಾರ, ಪಾಕಿಸ್ತಾನ ತಂಡವು ಫೆಬ್ರವರಿ 2 (ಸೋಮವಾರ) ರಂದು ಕೊಲಂಬೊಗೆ ಪ್ರಯಾಣಿಸಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಅದೇ ದಿನ ಪಾಕಿಸ್ತಾನ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ತಂಡವು ನೇರವಾಗಿ ಶ್ರೀಲಂಕಾವನ್ನು ತಲುಪುತ್ತದೆ. ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ತನ್ನ ಗುಂಪು ಪಂದ್ಯಗಳನ್ನು ಶ್ರೀಲಂಕಾದಲ್ಲಿಯೇ ಆಡಲಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಪಾಕ್ ತಂಡ ಈ ಪಂದ್ಯವನ್ನು ಬಹಿಷ್ಕರಿಸುವ ಮಾತುಗಳನ್ನಾಡುತ್ತಿದೆ. ಒಂದು ವೇಳೆ ಪಾಕ್ ತಂಡ ಈ ನಿರ್ಧಾರ ತೆಗೆದುಕೊಂಡರೆ ಅದು ಐಸಿಸಿ ಆದಾಯಕ್ಕೆ ಹೊಡೆತ ನೀಡಲಿದೆ.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

ನಾನು ರೆಡಿ ಎಂದ ಉಗಾಂಡ

ಮತ್ತೊಂದೆಡೆ ಉಗಾಂಡಾದಂತಹ ಸಣ್ಣ ದೇಶದ ಕ್ರಿಕೆಟ್ ಮಂಡಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ನಿಲುವನ್ನು ಗೇಲಿ ಮಾಡುತ್ತಿವೆ. “ನೀವು ಬರದಿದ್ದರೆ, ನಾವು ಬರಲು ಸಿದ್ಧರಿದ್ದೇವೆ, ನಮ್ಮ ಪಾಸ್‌ಪೋರ್ಟ್‌ಗಳು ಸಿದ್ಧವಾಗಿವೆ” ಎಂದು ಉಗಾಂಡಾ ಕ್ರಿಕೆಟ್ ಪೋಸ್ಟ್ ಮಾಡಿರುವ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಐಸಿಸಿ ನಿಯಮಗಳ ಪ್ರಕಾರ, ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರೆ, ಅದರ ಮೇಲೆ ಶಾಶ್ವತ ನಿಷೇಧ ಹೇರುವ ಸಾಧ್ಯತೆಯಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ವಾರ್ಷಿಕ $34.5 ಮಿಲಿಯನ್ ಆದಾಯಕ್ಕೆ ಕತ್ತರಿ ಬೀಳಲಿದೆ.

Published On – 4:50 pm, Sat, 31 January 26

Source link

Chanakya Niti: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ – Kannada News | Chanakya Niti: To avoid trouble in life, do not share these personal secrets of yours with anyone

ಬಹುತೇಕ ಹೆಚ್ಚಿನವರು ತಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಗಳು, ರಹಸ್ಯಗಳ (secrets) ಬಗ್ಗೆ ಯಾರೊಂದಿಗಾದರೂ ಶೇರ್‌ ಮಾಡುತ್ತಲೇ ಇರುತ್ತಾರೆ. ಈ ಅಭ್ಯಾಸ ಖಂಡಿತವಾಗಿಯೂ ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಯಶಸ್ಸಿಗೆ ಅಡ್ಡಿಯುಂಟಾಗುವುದು ಮಾತ್ರವಲ್ಲದೆ, ಸಾಕಷ್ಟು ಸಂಕಷ್ಟಗಳು ಸಹ ಎದುರಾಗಬಹುದು. ಹಾಗಾಗಿ ಯಶಸ್ವಿ, ಒತ್ತಡರಹಿತ ಜೀವನವನ್ನು ನಡೆಸಲು, ಆರ್ಥಿಕವಾಗಿ ಮುಂದುವರೆಯಲು  ಬಯಸಿದರೆ ನೀವು ಈ ಕೆಲವೊಂದು ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ:

ನಿಮ್ಮ ಭವಿಷ್ಯದ ಯೋಜನೆಗಳು: ಚಾಣಕ್ಯರ ಪ್ರಕಾರ ಯಾರೊಬ್ಬರೂ  ಸಹತಮ್ಮ ಭವಿಷ್ಯದ ಯೋಜನೆಗಳನ್ನು ಯಾರೊಂದಿಗೂ ಬಹಿರಂಗಪಡಿಸಬಾರದು. ಹಾಗೆ ಮಾಡುವುದರಿಂದ ನೀವು ಆ ಯೋಜನೆಗಳನ್ನು ಪ್ರಾರಂಭಿಸುವ ಮೊದಲೇ ಅಡೆತಡೆಗಳು ಉಂಟಾಗಬಹುದು.ಹೌದು ಕೆಲವರು ತಮ್ಮ ಅಸೂಯೆಯ ಕಾರಣದಿಂದ ನಿಮ್ಮ ಯೋಜನೆಗಳಿಗೆ ಕಲ್ಲು ಹಾಕುವ ಸಾಧ್ಯತೆ ಇರುತ್ತದೆ. ಆದ್ದರಿಂದ  ನಿಮ್ಮ ಗುರಿಗಳು ಮತ್ತು ತಂತ್ರಗಳನ್ನು ಯಾವಾಗಲೂ ಗೌಪ್ಯವಾಗಿಡಿ.

ನಿಮ್ಮ ಆರ್ಥಿಕ ಸ್ಥಿತಿ: ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಎಂದಿಗೂ ಯಾರ ಬಳಿಯೂ ಹೇಳಿಕೊಳ್ಳಬಾರದು. ನೀವು ಶ್ರೀಮಂತರಾಗಿದ್ದರೆ, ನಿಮ್ಮ ಆದಾಯವನ್ನು ಬಹಿರಂಗಪಡಿಸುವುದರಿಂದ ಇತರರಲ್ಲಿ ಅಸೂಯೆ ಅಥವಾ ಅಸಮಾಧಾನ ಉಂಟಾಗಬಹುದು. ಇದೇ ಕಾರಣ ಇಟ್ಟುಕೊಂಡು ನಿಮಗೆ ತೊಂದರೆಯನ್ನೂ ಉಂಟು ಮಾಡಬಹುದು. ಮತ್ತೊಂದೆಡೆ, ನೀವು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ, ಜನರು ನಿಮ್ಮನ್ನು ಕೀಳಾಗಿ ಕಾಣಲು ಪ್ರಾರಂಭಿಸಬಹುದು.

ಇತರರೊಂದಿಗಿನ ಖಾಸಗಿ ಸಂಭಾಷಣೆಗಳು: ಇಬ್ಬರು ವ್ಯಕ್ತಿಗಳ ನಡುವೆ ಚರ್ಚಿಸಲ್ಪಟ್ಟ ವಿಷಯಗಳು ಅವರಿಬ್ಬರ ನಡುವೆಯೇ ಇರಬೇಕು, ಆ ಗುಟ್ಟಿನ ವಿಚಾರವನ್ನು ಮೂರನೇ ವ್ಯಕ್ತಿಯ ಬಳಿ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಯಾರಾದರೂ ನಿಮ್ಮನ್ನು ಖಾಸಗಿಯಾಗಿ ಹೊಗಳಿದರೆ, ಗೌಪ್ಯವಾಗಿ ಸಹಾಯ ಕೇಳಿದರೆ ಅಥವಾ ನಿಮ್ಮ ಮೇಲೆ ನಂಬಿಕೆ ಇಟ್ಟು ಇನ್ಯಾವುದೇ ವಿಚಾರಗಳ ಬಗ್ಗೆ ಶೇರ್‌ ಮಾಡಿಕೊಂಡರೆ  ನೀವು ಆ ಸಂಭಾಷಣೆಯನ್ನು ಇತರರಿಗೆ ಎಂದಿಗೂ ಬಹಿರಂಗಪಡಿಸಬಾರದು. ಈ ರೀತಿ ಮಾಡುವುದರಿಂದ ನಂಬಿಕೆ ಹಾಳಾಗುವುದಲ್ಲದೆ, ಸಂಬಂಧದಲ್ಲಿಯೂ ಬಿರುಕು ಮೂಡಬಹುದು.

ಇದನ್ನೂ ಓದಿ: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ತತ್ವಗಳನ್ನು ಅನುಸರಿಸಿ

ನಿಮ್ಮ ವೈಯಕ್ತಿಕ ಜೀವನ: ಚಾಣಕ್ಯರ ಪ್ರಕಾರ, ಹಿಂದಿನ ಸಂಬಂಧಗಳು, ಕೌಟುಂಬಿಕ ವಿವಾದಗಳು ಅಥವಾ ಇತರ ಖಾಸಗಿ ಸಮಸ್ಯೆಗಳಂತಹ ವೈಯಕ್ತಿಕ ವಿಷಯಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ನಿಮ್ಮ ಈ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ನಿಮಗೆಯೇ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಮನಸ್ಸಿನ ಶಾಂತಿಯನ್ನೇ ಕದಡುತ್ತದೆ.

ನಿಮ್ಮ ಅನಾರೋಗ್ಯ, ದೌರ್ಬಲ್ಯ: ನಿಮ್ಮ ಅನಾರೋಗ್ಯ, ನಿಮ್ಮ ದೌರ್ಬಲ್ಯವನ್ನು ಇತರರೊಂದಿಗೆ ಯಾವತ್ತಿಗೂ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ನಿಮ್ಮ ದೌರ್ಬಲ್ಯಗಳ ಬಗ್ಗೆ ಹಂಚಿಕೊಂಡರೆ ಜನರು ನಿಮ್ಮ ಸ್ಥಿತಿಯ ಲಾಭ ಪಡೆಯಬಹುದು ಮತ್ತು ಇದು ಭವಿಷ್ಯದಲ್ಲಿ ನಿಮಗೆ ತುಂಬಾ ಹಾನಿಯನ್ನು ಮಾಡಬಹುದು. ಆದ್ದರಿಂದ ಇಂತಹ ಸೂಕ್ಷ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡದಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ – Kannada News | Capex on Infrastructure should double for economy to grow faster, says experts

ನವದೆಹಲಿ, ಜನವರಿ 31: ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ (Union Budget) ಮಂಡಿಸುತ್ತಿದ್ದು ಉದ್ಯಮ ವಲಯದಲ್ಲಿ ಅಪಾರ ನಿರೀಕ್ಷೆಗಳಿವೆ. ಜಾಗತಿಕ ಸಂಕಷ್ಟಗಳ ನಡುವೆ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಕಳೆದ ವರ್ಷದ ಬಜೆಟ್​ನಲ್ಲಿ (2025) ಹಲವಾರು ಸೆಕ್ಟರ್​ಗಳ ಮೂಲಸೌಕರ್ಯಕ್ಕಾಗಿ ಸರ್ಕಾರ ಬಹಳಷ್ಟು ಹಣ ವ್ಯಯಿಸಿತ್ತು. ಈ ಬಾರಿಯ ಬಜೆಟ್​ನಲ್ಲೂ ಇದೇ ನಿಲುವು ಮುಂದುವರಿಯಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.

ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ 3 ಲಕ್ಷ ಕೋಟಿ ರೂ ಬರಲಿ

ಭಾರತವು ಜಾಗತಿಕ ಆರ್ಥಿಕ ಪ್ರಬಲ ಶಕ್ತಿಯಾಗಬೇಕಾದರೆ ಈ ಬಜೆಟ್​ನಲ್ಲಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆದ್ದಾರಿ, ನಗರ ಸಾರಿಗೆ, ಸ್ಮಾರ್ಟ್​ಸಿಟಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು, ಹಾಗೂ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡಲು ಕಳೆದ ವರ್ಷದ ಬಜೆಟ್​ನಲ್ಲಿ 1.5 ಲಕ್ಷ ಕೋಟಿ ರೂ ಹಣ ನೀಡಲಾಗಿತ್ತು. ಈ ಬಾರಿಯ ಬಜೆಟ್​ನಲ್ಲಿ ಅದು 3 ಲಕ್ಷ ಕೋಟಿ ರೂಗೆ ಏರಿಸಬೇಕು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.

‘ಉತ್ಪನ್ನತೆಗೆ ಪುಷ್ಟಿ ಕೊಡಲು, ಲಾಜಿಸ್ಟಿಕ್ಸ್​ನ ಕ್ಷಮತೆ ಸುಧಾರಿಸಲು, ನಮ್ಮ ಜನಸಂಖ್ಯಾ ಬಲವನ್ನು ಆರ್ಥಿಕ ಪ್ರಗತಿಗೆ ಅನುಕೂಲಕರವಾಗಿ ಮಾಡಿಕೊಳ್ಳಲು ಇನ್​ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರುವುದು ಬಹಳ ಮುಖ್ಯ. ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಮಾಡುವ ವೆಚ್ಚ ಒಂದೆರಡು ವರ್ಷಕ್ಕೆ ಸೀಮಿತವಾಗದೆ ಹಲವು ವರ್ಷಗಳು ನಿರಂತರವಾಗಿ ಹೂಡಿಕೆ ಆಗಬೇಕು’ ಎಂದು ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿಯ ಜಂಟಿ ಎಂಡಿಯಾದ ಶಶಾಂಕ್ ಅಗರ್ವಾಲ್ ಹೇಳುತ್ತಾರೆ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್​ನಲ್ಲಿ ಟೆಕ್ ಸೆಕ್ಟರ್​ಗೆ ಏನು ಸಿಗುತ್ತೆ?

ಸಾಂಪ್ರದಾಯಿಕ ಮೂಲಸೌಕರ್ಯಗಳ ಜೊತೆಗೆ ಎಐ ಶಕ್ತ ಡಾಟಾ ಸೆಂಟರ್, ರೋಬೋಟಿಕ್ಸ್, ಎಡ್ಜ್ ಇಂಟೆಲಿಜೆನ್ಸ್, ಎಐ ಅಳವಡಿಕೆ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್​ಗೆ ಪುಷ್ಟಿ ನೀಡುವ ನೀತಿ ಬರಬೇಕು. ಆಗ ದೇಶದಲ್ಲಿ ಉತ್ಪನ್ನಶೀಲತೆ, ಆರ್ಥಿಕ ಕ್ಷಮತೆ, ಜಾಗತಕ ಸ್ಪರ್ಧಾತ್ಮಕತೆ ಗಣನೀಯವಾಗಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಗ್ಲೋಬಲ್​ಲಾಜಿಕ್​ನ ಪಿಯೂಶ್ ಝಾ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿವೃತ್ತ ವಾಯುಪಡೆ ಅಧಿಕಾರಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು – Kannada News | Sushant Golf City Shaken: Ex Air Force Officer Shot; Business Rivalry Suspected

ಉತ್ತರ ಪ್ರದೇಶ, ಜ.31: ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ (Sushant Golf City) ಪ್ರದೇಶದಲ್ಲಿ ನಿನ್ನೆ ರಾತ್ರಿ (ಜನವರಿ 30, 2026) ನಡೆದ ಘಟನೆಯು ಉತ್ತರ ಪ್ರದೇಶದಾದ್ಯಂತ ಆತಂಕ ಮೂಡಿಸಿದೆ. ನಿವೃತ್ತ ವಾಯುಪಡೆ ಅಧಿಕಾರಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅವಧೇಶ್ ಕುಮಾರ್ ಪಾಠಕ್ (60) ಎಂಬುವವರ ಮೇಲೆ ದಾಳಿಯನ್ನು ನಡೆಸಿದ್ದಾರೆ. ಇವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದು, ಪ್ರಸ್ತುತ ಲಕ್ನೋದ ಸೆಕ್ಟರ್-D ಶಾಪಿಂಗ್ ಸ್ಕ್ವೇರ್ ಬಳಿ ‘ಕ್ಲೌಡ್ ಕಿಚನ್’ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ತಮ್ಮ ರೆಸ್ಟೋರೆಂಟ್ ಕೆಲಸ ಮುಗಿಸಿ ಪತ್ನಿಯೊಂದಿಗೆ ಕಾರಿನ ಕಡೆಗೆ ನಡೆಯುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಪಾಠಕ್ ಅವರ ಭುಜಕ್ಕೆ ಮತ್ತು ಇನ್ನೊಂದು ಬಲಗೈ ಮೇಲ್ಭಾಗಕ್ಕೆ ತಗುಲಿದೆ ಎನ್ನಲಾಗಿದೆ. ಘಟನೆಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಮತ್ತು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪಾಠಕ್ ಅವರ ಪತ್ನಿ ಮಿಥ್ಲೇಶ್ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡಿಸಿಪಿ ದಕ್ಷಿಣ ನಿಪುಣ್ ಅಗರ್ವಾಲ್ ನೇತೃತ್ವದಲ್ಲಿ ಒಂದು ತಂಡವನ್ನು ರಚನೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ವೈಯಕ್ತಿಕ ದ್ವೇಷ ಅಥವಾ ವ್ಯವಹಾರದ ಪೈಪೋಟಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲಕ್ನೋದ ಅತಿ ಶ್ರೀಮಂತ ಮತ್ತು ಸುರಕ್ಷಿತ ಎನ್ನಲಾಗುವ ಸುಶಾಂತ್ ಗಾಲ್ಫ್ ಸಿಟಿ ಏರಿಯಾದಲ್ಲೇ ಈ ಹತ್ಯೆಯತ್ನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಉಂಟುಮಾಡಿದೆ.

ಪಾಠಕ್ ಅವರು ಸುಶಾಂತ್ ಗಾಲ್ಫ್ ಸಿಟಿಯ ಪ್ರಮುಖ ಸ್ಥಳದಲ್ಲಿ ‘ಕ್ಲೌಡ್ ಕಿಚನ್’ ಮತ್ತು ರೆಸ್ಟೋರೆಂಟ್ ನಡೆಸುತ್ತಿದ್ದರು. ಈ ಭಾಗದಲ್ಲಿ ರೆಸ್ಟೋರೆಂಟ್ ವ್ಯವಹಾರಕ್ಕೆ ಭಾರೀ ಬೇಡಿಕೆ ಇದೆ. ಈ ಕಾರಣಕ್ಕಾಗಿ ಕಿರಿಕ್​​​​​​​ ನಡೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಜತೆಗೆ ಅಧಿಕಾರಿಗಳು ಕುಟುಂಬಕ್ಕೆ ಸಂಬಂಧಿಸಿದ ದ್ವೇಷದ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ದಾಳಿಕೋರರು ನೇರವಾಗಿ ಅವರನ್ನು ಗುರಿಯಾಗಿಸಿಕೊಂಡು ಬಂದಿರುವುದರಿಂದ, ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಇಂತಹ ಕೆಲವು ಪ್ರಕರಣಗಳಲ್ಲಿ ಆಸ್ತಿ ವಿವಾದವು ಪ್ರಮುಖ ಕಾರಣವಾಗಿರುವುದು ಕಂಡುಬಂದಿದೆ. ಆದ್ದರಿಂದ, ಪಾಠಕ್ ಅವರ ಮೂಲ ಊರು (ಸಂತ ಕಬೀರ್ ನಗರ) ಲಕ್ನೋದಲ್ಲಿನ ಆಸ್ತಿಗಳ ಬಗ್ಗೆ ಯಾವುದೇ ವಿವಾದಗಳಿವೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಆರಂಭದಲ್ಲಿ ಇದೊಂದು ಸುಲಿಗೆ ಪ್ರಯತ್ನವಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ದಾಳಿಕೋರರು ಯಾವುದೇ ಹಣ ಅಥವಾ ವಸ್ತುಗಳನ್ನು ದೋಚದೆ ಕೇವಲ ಗುಂಡು ಹಾರಿಸಿ ಪರಾರಿಯಾಗಿರುವುದು ಇದು ಕೇವಲ ಹತ್ಯೆ ಯತ್ನ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ, ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಪತಿ

ರೆಸ್ಟೋರೆಂಟ್‌ನ ಒಳಗೆ ಮತ್ತು ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಳಿಕೋರರ ಚಲನವಲನಗಳು ಸೆರೆಯಾಗಿವೆ. ಲಕ್ನೋ ಪೊಲೀಸರ ಐದು ವಿಶೇಷ ತಂಡಗಳು (SIT) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದೆ. ಸ್ಥಳದಲ್ಲಿ ಸಿಕ್ಕಿರುವ ಗುಂಡಿನ ಶೆಲ್‌ಗಳು ಮತ್ತು ಇತರ ಪುರಾವೆಗಳನ್ನು ಫೋರೆನ್ಸಿಕ್ ತಂಡವು ಪರಿಶೀಲಿಸುತ್ತಿದೆ.ಪೊಲೀಸ್ ಕಮಿಷನರ್ ಅವರ ಪ್ರಕಾರ, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಮತ್ತು ದಾಳಿಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂವರ ಕೊಂದು ಬೆಂಗಳೂರಿಗೆ ಬಂದು ಫುಲ್​​ ಡ್ರಾಮಾ: ತನಿಖೆ ವೇಳೆ ಬಯಲಾಗಿದ್ದೇಗೆ ಕೊಲೆ ಸತ್ಯ? – Kannada News | Vijayanagara Murder Case: Chilling Mystery Behind the Killing of Three

ಬೆಂಗಳೂರು, ಜನವರಿ 31: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ಸಂಬಂಧ ಒಂದೊಂದೇ ಶಾಕಿಂಗ್​​ ಮಾಹಿತಿಗಳು ಹೊರಬರುತ್ತಿವೆ. ತಂದೆ-ತಾಯಿ ಮತ್ತು ಸಹೋದರಿಯನ್ನ ತಾನೇ ಕೊಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಅಕ್ಷಯ್​​ ಪೊಲೀಸರೇ ನಂಬುವ ರೀತಿ ಕತೆ ಕಟ್ಟಿದ್ದ. ಜ. 29ರ ರಾತ್ರಿ 11 ಗಂಟೆಗೆ ತಿಲಕನಗರ ಠಾಣೆಗೆ ಬಂದಿದ್ದ ಅಕ್ಷಯ್, ಬೆಂಗಳೂರಿಗೆ ಆಸ್ಪತ್ರೆಗೆಂದು ಬಂದಿದ್ದ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ಅಲವತ್ತುಕೊಂಡಿದ್ದ ಎಂಬುದು ಗೊತ್ತಾಗಿದೆ.

ತನ್ನ ತಂದೆ ಭೀಮರಾಜ್​​ ಗೆ ಆರೋಗ್ಯ ಸಮಸ್ಯೆ ಇದ್ದು, ಹೀಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬರಬೇಕಿತ್ತು. ಜ.27ರ ಬೆಳಗ್ಗೆ 5 ಗಂಟೆಗೆ ಕೊಟ್ಟೂರಿನಿಂದ ಬೆಂಗಳೂರಿಗೆ ಮನೆಯವರೆಲ್ಲ ಹೊರಟಿದ್ದರು. ತಾಯಿ ಜಯಲಕ್ಷ್ಮೀ, ತಂಗಿ ಅಮೃತಾ ತಂದೆ ಜತೆ ಬೆಂಗಳೂರಿಗೆ ಬಂದಿದ್ದರು. ಸಂಬಂಧಿಗೆ ಕೊಡಲು 4 ಲಕ್ಷ ರೂ. ನಗದು ಕೂಡ ಜೊತೆಯಲ್ಲಿ ತಂದಿದ್ದರು. ಮಧ್ಯಾಹ್ನ ಸುಮಾರು 12:41ಕ್ಕೆ ನನಗೆ ವಾಟ್ಸ್ಯಾಪ್​​ ಮಾಡಿದ್ದು, ಜಯದೇವ ಆಸ್ಪತ್ರೆಗೆ ಬಂದಿದ್ದೀವಿ ಎಂದು ತಿಳಿಸಿದ್ದರು. ಜಯದೇವ ಆಸ್ಪತ್ರೆಯ ಹಾಗೂ ಮೇಟ್ರೋ ಪಿಲ್ಲರ್ ಫೋಟೋ ಕೂಡ ಕಳುಹಿಸಿದ್ದರು. ಆದರೆ ಸಂಜೆ 6 ಗಂಟೆಗೆ ಫೋನ್ ಮಾಡಿದಾಗ ತಂದೆ ಮತ್ತು ತಾಯಿ ಇಬ್ಬರ ಪೋನ್ ಕೂಡ ಸ್ವಿಚ್ ಆಫ್ ಆಗಿತ್ತು. ತಂಗಿಯ ಪೋನ್ ರಿಂಗ್ ಆದರೂ ರೀಸಿವ್ ಮಾಡಿಲ್ಲ ಎಂದು ಆರೋಪಿ ತಿಳಿಸಿದ್ದ.

ಇದನ್ನೂ ಓದಿ: ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್​​; ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್​​ ಮ್ಯಾಟರ್​ ಹತ್ಯೆಗೆ ಕಾರಣವಾಯ್ತಾ?

ಬಳಿಕ ಜ.28ರ ಮಧ್ಯಾಹ್ನ ಅಪರಿಚಿತ ನಂಬರ್​​ನಿಂದ ತನ್ನ ತಂಗಿ ಕರೆ ಮಾಡಿದ್ದು, ತನ್ನ ಫೋನನ್ನು ಜಯದೇವ ಆಸ್ಪತ್ರೆಯ ವಾರ್ಡನಲ್ಲಿ ಸಿಬ್ಬಂದಿ ತೆಗೆದುಕೊಂಡಿದ್ದಾರೆ. ನೀನು ಬೇಗ ಬಾ ಎಂದು ಹೇಳಿದ್ದಳು. ಆದರೆ ಮತ್ತೆ ಕಾಲ್ ಮಾಡಿದಾಗ ರೆಸ್ಪಾನ್ಸ್ ಇರಲಿಲ್ಲ ಎಂದಿದ್ದ. ಅಲ್ಲದೆ ಜ. 29ರ ಮಧ್ಯಾಹ್ನ 1:30ಕ್ಕೆ ತಾನು ಹಾಗೂ ಮಾವ ಜಯದೇವ ಆಸ್ಪತ್ರೆಗೆ ಬಂದು ಹುಡುಕಾಡಿದ್ದೇವೆ. ಆದರೆ ಆಸ್ಪತ್ರೆಯ ಯಾವ ವಿಭಾಗದಲ್ಲೂ ತಂದೆ ಇರಲಿಲ್ಲ. ಸಿಸಿಟಿವಿ ಕ್ಯಾಮರಾಗಳನ್ನು ಪರೀಶಿಲಿಸಿದರೂ ಯಾರೂ ಕಾಣಲಿಲ್ಲ. ಹೀಗಾಗಿ ಕಾಣೆಯಾದ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಪತ್ತೆ ಮಾಡಿಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದ.

ಅಕ್ಷಯ್ ಮಾತು ನಂಬಿದ ತಿಲಕನಗರ ಪೊಲೀಸರು ಈ ಬಗ್ಗೆ ಕೇಸ್​​ ದಾಖಲಿಸಿಕೊಂಡು, ಜ.29ರ ರಾತ್ರಿ ಅನೇಕ ಆಸ್ಪತ್ರೆಗಳನ್ನ ಹುಡುಕಾಡಿದ್ದಾರೆ. ಆದರೆ ಯಾವ ಆಸ್ಪತ್ರೆಯಲ್ಲೂ ಅಕ್ಷಯ್ ಕುಟುಂಬಸ್ಥರು ಕಂಡಿಲ್ಲ. ಹೀಗಾಗಿ ಪೊಲೀಸರು ಅಕ್ಷಯ್​​ನ ಠಾಣೆಯಲ್ಲೇ ಕೂರಿಸಿಕೊಂಡಿದ್ದು, ಜ.30ರ ಬೆಳಗ್ಗೆ ಎಸಿಪಿ ವಾಸುದೇವ್ ನೇತೃತ್ವದಲ್ಲಿ ಆತನ ವಿಚಾರಣೆ ನಡೆಸಿದಾಗ ಮೂವರ ಕೊಲೆ ಸತ್ಯ ಬಯಲಾಗಿದೆ. ಅಕ್ಷಯ್ ಮಾತು ಕೇಳಿ ಅಕ್ಷರಶಃ ಪೊಲೀಸರೇ ಒಂದು ಕ್ಷಣ ಶಾಕ್​​ ಆಗಿದ್ದಾರೆ.

ಆರೋಪಿ ಅಕ್ಷಯ್​​, ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಲೆಗೈದಿದ್ದ. ಮೊದಲು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಪಾಪಿ ಪುತ್ರ, ಬಳಿಕ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿರುವೆ ಅಂತಾ ಮನೆಗೆ ಕರೆದು ಆಕೆಯನ್ನೂ ಸಾಯಿಸಿದ್ದ. ಇಬ್ಬರ ಮೃತದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದ. ಮನೆಗೆ ಬಂದ ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ಅವರ ಕತೆಯನ್ನೂ ಮುಗಿಸಿ, ಮನೆಯ ಹಾಲ್​ನಲ್ಲೇ ಮೂರು ಮೃತದೇಹಗಳನ್ನು ಹೂತಿದ್ದ ಎಂಬ ವಿಷಯ ತನಿಖೆ ವೇಳೆ ಬಯಲಾಗಿದೆ.

ವರದಿ- ಪ್ರದೀಪ್​​ ಚಿಕ್ಕಾಟೆ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:30 pm, Sat, 31 January 26

Source link

ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್ – Kannada News | Thalapathy Vijay Express Sadness over Jana Nayagan Producer

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್ ವಿಳಂಬ ಆಗುತ್ತಲೇ ಇದೆ. ಸೆನ್ಸಾರ್ ಮಂಡಳಿಯವರು ಸಿನಿಮಾಗೆ ಪ್ರಮಾಣಪತ್ರ ನೀಡದೇ ಇರುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಕೆಳ ಹಂತದ ನ್ಯಾಯಾಯಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ಆಗಿದೆ. ಆದರೆ, ಎಲ್ಲಿಯೂ ಸಿನಿಮಾ ತಂಡಕ್ಕೆ ಲಾಭ ಆಗುವ ಬೆಳವಣಿಗೆ ನಡೆದಿಲ್ಲ. ಈ ಚಿತ್ರವ್ನು ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿದೆ. ನಿರ್ಮಾಪಕರ ಸ್ಥಿತಿ ಕಂಡು ವಿಜಯ್ ಮರುಗಿದ್ದಾರೆ.

ಜನವರಿ 9ರಂದು ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ತಿಂಗಳು ಕಳೆಯುತ್ತಾ ಬಂದರೂ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಥಿಯೇಟರ್ ಸೆಟಪ್​​ ಮಾಡಿಕೊಳ್ಳಲು ಹಾಕಿದ ಶ್ರಮ ವ್ಯರ್ಥವಾಗಿದೆ. ಈ ಎಲ್ಲ ವಿಷಯದಲ್ಲಿ ವಿಜಯ್ ಮೌನ ಕಾಯ್ದುಕೊಂಡಿದ್ದರು. ಈಗ ಆ ಬಗ್ಗೆ ಮಾತನಾಡಿದ್ದಾರೆ.

‘ನನ್ನ ರಾಜಕೀಯ ಪ್ರವೇಶದ ಕಾರಣದಿಂದ ಜನ ನಾಯಗನ್ ಚಿತ್ರಕ್ಕೆ ತೊಂದರೆ ಆಗುತ್ತಿದೆ. ನನ್ನ ನಿರ್ಮಾಪಕರ ಬಗ್ಗೆ ನನಗೆ ಬೇಸರವಾಗುತ್ತಿದೆ. ನನ್ನ ರಾಜಕೀಯ ಪ್ರವೇಶದಿಂದಾಗಿ ನನ್ನ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ನನಗೆ ತಿಳಿದಿತ್ತು. ನಾನು ಇದಕ್ಕೆ ಮಾನಸಿಕವಾಗಿ ಸಿದ್ಧನಾಗಿದ್ದೆ’ ಎಂದು ಅವರು ಹೇಳಿದ್ದಾರೆ.

‘ಜನ ನಾಯಗನ್’ ಚಿತ್ರದ ಬಜೆಟ್ 500 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಸಿನಿಮಾದಲ್ಲಿ ಮಮಿತಾ ಬೈಜು, ಪೂಜಾ ಹೆಗ್ಡೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್​​ನ ಬಾಬಿ ಡಿಯೋಲ್ ವಿಲನ್. ಈ ಸಿನಿಮಾಗೆ ವಿನೋದ್ ನಿರ್ದೇಶನ ಇದೆ.

ಇದನ್ನೂ ಓದಿ: ಸಿಬಿಎಫ್​​ಸಿ ಸಮಸ್ಯೆ, ಸಿಬಿಐ ವಿಚಾರಣೆ: ಅಭಿಮಾನಿಗಳಿಗೆ ವಿಜಯ್ ಹೇಳಿದ್ದೇನು?

ದಳಪತಿ ವಿಜಯ್ ಅವರು ರಾಜಕೀಯ ಪಕ್ಷ ಆರಂಭಿಸಿದ್ದಾರೆ. ಈ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಎಲ್ಲಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ಸಿನಿಮಾಗೆ ರಾಜಕೀಯ ಶಕ್ತಿಯಿಂದ ಅಡಚಣೆ ಉಂಟಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಯ್ ಮಾಡಿದ್ದ ಸಹಾಯ ನೆನೆದ ಹನುಮಂತ: ವ್ಯಕ್ತಿತ್ವದ ಬಗ್ಗೆ ಹೇಳಿದ್ದೇನು? – Kannada News | Bigg Boss Kannada 11 winner Hanumanthu talks about CJ Roy

ಖ್ಯಾತ ಉದ್ಯಮಿ ಸಿಜೆ ರಾಯ್ (CJ Roy) ನಿನ್ನೆ (ಜನವರಿ 30) ನಿಧನ ಹೊಂದಿದ್ದಾರೆ. ಟಿವಿ ಲೋಕದೊಂದಿಗೆ ನಿಕಟ ಸಂಪರ್ಕವನ್ನು ಜೆಸಿ ರಾಯ್ ಹೊಂದಿದ್ದರು. ಹಲವು ರಿಯಾಲಿಟಿ ಶೋಗಳಿಗೆ ಪ್ರಯೋಜಕತ್ವ ನೀಡುತ್ತಿದ್ದ ಜೆಸಿ ರಾಯ್ ಅವರು, ನಿಜವಾಗಿಯೂ ಪ್ರತಿಭೆ ಹೊಂದಿದವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಕರ್ನಾಟಕದ ಜನಪದ ಗಾಯಕ ಎನಿಸಿಕೊಂಡಿರುವ ಹನುಮಂತನಿಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದ ಜೆಸಿ ರಾಯ್ ಅವರು, ಹನುಮಂತನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಹನುಮಂತ ಜೆಸಿ ರಾಯ್ ಅವರ ವಿಶಾಲ ಹೃದಯದ ಬಗ್ಗೆ ಮಾತನಾಡಿದ್ದಾರೆ.

ರಾಯ್ ಅವರು ಹನುಮಂತನಿಗೆ ಮೊದಲು ಸಹಾಯ ಮಾಡಿದ್ದ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ. ಗಾಯನ ರಿಯಾಲಿಟಿ ಶೋನಲ್ಲಿ ಹನುಮಂತ ದ್ವಿತೀಯ ಸ್ಥಾನ ಪಡೆದಿದ್ದಾಗ ರಾಯ್ ಅವರು ನಗದು ಬಹುಮಾನವನ್ನು ಹನುಮಂತನಿಗೆ ನೀಡಿದ್ದರು. ‘ದ್ವಿತೀಯ ಸ್ಥಾನ ಪಡೆದಿದ್ದರೂ ಸಹ ನಾನು ಬಡವ ಎಂಬ ಕಾರಣಕ್ಕೆ ನನಗೆ ಹೆಚ್ಚು ಹಣವನ್ನು ನನಗೆ ನೀಡಿದ್ದರು’ ಎಂದು ಹನುಮಂತ ನೆನಪು ಮಾಡಿಕೊಂಡಿದ್ದಾರೆ.

‘ನಾನು ಸಿಂಗಿಂಗ್ ಶೋನಲ್ಲಿ ದ್ವಿತೀಯ ಸ್ಥಾನ ಪಡೆದ ಬಳಿಕ ಅದೇ ಸಮಯದಲ್ಲಿ ಕೋವಿಡ್ ಸಹ ಬಂತು. ಆಗ ರಾಯ್ ಅವರು ಸೈಟು ಬೇಕಾ ಹಣ ಬೇಕಾ ಎಂದು ಕೇಳುತ್ತಿದ್ದಾರೆ ಎಂದು ಚಾನೆಲ್​​ನವರು ಹೇಳಿದ್ದರು. ನಾನು ಬೆಂಗಳೂರಿನಲ್ಲಿ ಇರುವವನಲ್ಲ, ಅಲ್ಲದೆ ಮೊದಲ ಸ್ಥಾನ ಪಡೆದಿದ್ದ ಹೊಳ್ಳ ಅವರು ಹಣ ತೆಗೆದುಕೊಳ್ಳೋಣ ಎಂದು ಸಲಹೆ ಕೊಟ್ಟರು. ಅದರಂತೆ ಹಣ ತೆಗೆದುಕೊಂಡೆವು. ನಾನು ಬಡವ ಎಂದು ನಿಗದಿತ ಹಣಕ್ಕಿಂತಲೂ ಸ್ವಲ್ಪ ಹೆಚ್ಚು ಹಣವನ್ನೇ ಆಗ ನನಗೆ ಅವರು ನೀಡಿದ್ದರು’ ಎಂದಿದ್ದಾರೆ ಹನುಮಂತ.

ಇದನ್ನೂ ಓದಿ:ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ

ಅದರ ಬಳಿಕ ಮತ್ತೊಮ್ಮೆ ಹನುಮಂತನ ತಂಗಿಯ ಓದಿಗೆ ಸಹ ಸಹಾಯ ಮಾಡಿದ್ದರು. ತಂಗಿಯ ಓದಿಗೆ 50 ಸಾವಿರ ರೂಪಾಯಿ ನಗದು ಹಣ ನೀಡಿದ್ದರು. ಅಲ್ಲದೆ, ತಂಗಿ ಪದವಿ ಓದಿದ ಬಳಿಕ ಕರೆದುಕೊಂಡು ಬಾ ನಾನೇ ಕೆಲಸ ಕೊಡುತ್ತೇನೆ ಎಂದಿದ್ದರು. ಹಣ ಪಡೆದುಕೊಂಡು ಬರಲು ಹೋದಾಗಲೂ ಸಹ ಬಹಳ ಚೆನ್ನಾಗಿ ಮಾತನಾಡಿಸಿದ್ದರು. ಅವರ ಕಚೇರಿಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಹಳ ಹೊತ್ತು ಮಾತನಾಡಿದ್ದರು. ತಮಾಷೆ ಮಾಡಿದ್ದರು. ಮದುವೆ ಆಗುತ್ತೀಯ, ಹೆಣ್ಣು ಹುಡುಕಬೇಕ, ನಮ್ಮ ಕಚೇರಿಯಲ್ಲೇ ಸಾಕಷ್ಟು ಹಣ ಯುವತಿಯರು ಇದ್ದಾರೆ ಯಾರಾದರೂ ಒಬ್ಬರನ್ನು ಆಗಿಬಿಡು ಎಂದೆಲ್ಲ ತಮಾಷೆ ಮಾಡಿದ್ದರು’ ಎಂದಿದ್ದಾರೆ ಹನುಮಂತು.

‘ರಾಯ್ ಅವರದ್ದು ಬಹಳ ವಿಶಾಲವಾದ ಮನಸ್ಸು, ನಾನು ಮನೆ ಕಟ್ಟಿಸುತ್ತಿರುವದನ್ನು ಅವರ ಬಳಿ ಹೇಳಿಕೊಂಡಿದ್ದೆ. ಮನೆ ಗೃಹಪ್ರವೇಶಕ್ಕೆ ಕರಿ ಬರುತ್ತೇನೆ ಎಂದಿದ್ದರು. ತಂಗಿಯ ಓದಿನ ಬಗ್ಗೆಯೂ ವಿಚಾರಿಸಿದ್ದರು, ಅವರು ಅಗಲಿದ್ದನ್ನು ನಂಬಲೇ ಸಾಧ್ಯವಾಗಲಿಲ್ಲ. ನನಗೆ ವೈಯಕ್ತಿಕವಾಗಿ ಸಾಕಷ್ಟು ಸಹಾಯ ಮಾಡಿದ್ದರು’ ಎಂದಿದ್ದಾರೆ ಹನುಮಂತ. ಸಿಂಗರ್ ಹನುಮಂತ ಬಿಗ್​​ಬಾಸ್ ಗೆದ್ದಾಗಲೂ ಸಹ ರಾಯ್ ಅವರೇ ಮೊದಲ ಬಹುಮಾನದ ಸ್ಪಾನ್ಸರ್ ಮಾಡಿದ್ದರು. ಹನುಮಂತನಿಗೆ 50 ಲಕ್ಷ ರೂಪಾಯಿ ನಗದು ಕೊಟ್ಟಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Sat, 31 January 26

Source link