Category Archives: Blog

Your blog category

ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ

ಅನುಶ್ರೀ ಅವರು ಆ್ಯಂಕರಿಂಗ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅನುಶ್ರೀ ಅವರ ಮಿಮಿಕ್ರಿಯನ್ನು ‘ಡ್ಯಾನ್ಸ್ ಕರ್ನಾಟಕ Dance-2025 ಮತ್ತು ಕಿಲಾಡಿ ಜೂನಿಯರ್ಸ್ ಮಹಾಸಂಗಮದಲ್ಲಿ ಮಾಡಲಾಗಿದೆ. ಅನುಶ್ರೀ ಅವರನ್ನು ಮಿಮಿಕ್ರಿ ಮಾಡಿದ್ದು ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದು ಫಿಕ್ಸ್ ಎಂದೇ ಹೇಳಬಹುದು. DKD ವೇದಿಕೆಯ ದಿಗ್ಗಜರೆಲ್ಲರನ್ನೂ ಸಖತ್ ಸ್ಪೂಫ್ ಮೂಲಕ ನಗುವಿನ ಸುನಾಮಿಯಲ್ಲಿ ತೇಲಿಸಿದ್ದಾರೆ. ಆ ವಿಡಿಯೋ ಗಮನ ಸೆಳೆದಿದೆ. ಅನುಶ್ರೀ ರೀತಿಯೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಮೈಸೂರಲ್ಲಿ ದಾಳಿ ಬೆನ್ನಲ್ಲೇ ಅಶೋಕ್ ವಾಗ್ದಾಳಿ – Kannada News | BJP and R Ashoka Slams Karnataka Congress Govt Over Drug Racket After Mysuru NCB Raid

ಬೆಂಗಳೂರು, ಜನವರಿ 31: ಮೈಸೂರಿನಲ್ಲಿ ಗುಪ್ತವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಘಟಕವನ್ನು ದೆಹಲಿ ಎನ್​​ಸಿಬಿ ಪತ್ತೆ ಮಾಡಿರುವ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ ಮಾತ್ರ, ಮೈಸೂರಿನಲ್ಲಿ ಪತ್ತೆಯಾಗಿರುವುದು ಫಿನಾಯಿಲ್ ಫ್ಯಾಕ್ಟರಿ. ಅಲ್ಲಿ ಡ್ರಗ್ಸ್ ತಯಾರು ಮಾಡುವ ಯಾವುದೇ ವಸ್ತುಗಳು ಸಿಕ್ಕಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಕ ಮಾಧ್ಯಮ ಎಕ್ಸ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಶೋಕ್, ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ‘ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ’ ಎಂದು ಇದರ ಗಂಭೀರತೆ ಅರಿಯದೆ ಗೃಹ ಸಚಿವ ಪರಮೇಶ್ವರ್ ಉಡಾಫೆ ಉತ್ತರ ಕೊಟ್ಟಿದ್ದರು ಎಂದು ಅಶೋಕ್ ಹೇಳಿದ್ದಾರೆ.

ಅಶೋಕ್ ಎಕ್ಸ್ ಸಂದೇಶ

ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಡ್ರಗ್ಸ್ ಲ್ಯಾಬ್​ ಶಂಕೆ? ಎನ್​ಸಿಬಿ ದಿಢೀರ್​ ದಾಳಿ

ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಸಿಸಿ ಸಾಕ್ಸ್​ ನಿಯಮ: ಬಣ್ಣ ಬದಲಿಸಿದ್ರೆ ಬ್ಯಾನ್ ಆಗ್ಬಹುದು..! – Kannada News | ICC Clothing and White Socks Rules in Test Cricket

ಕ್ರಿಕೆಟ್ ಅನ್ನು ಜಂಟಲ್‌ಮ್ಯಾನ್ಸ್ ಗೇಮ್ ಎಂದು ಕರೆಯಲಾಗುತ್ತದೆ. ಈ ಜಂಟಲ್​ಮ್ಯಾನ್ಸ್ ಗೇಮ್​ನಲ್ಲಿ ಜಂಟಲ್​ಮ್ಯಾನ್​ನಂತೆ ಕಾಣಿಸಿಕೊಳ್ಳುವುದು ಕೂಡ ಕಡ್ಡಾಯ. ಇದಕ್ಕಾಗಿಯೇ ಕೆಲ ಡ್ರೆಸ್ ಕೋಡ್​ಗಳನ್ನು ಸಹ ರೂಪಿಸಲಾಗಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಐಸಿಸಿಯ ಉಡುಪು ಮತ್ತು ಸಲಕರಣೆ ನಿಯಮಗಳ ಅಡಿಯಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ವೈಟ್ ಸಾಕ್ಸ್​ ಧರಿಸಿ ಕಣಕ್ಕಿಳಿಯಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಆಟಗಾರನು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಐಸಿಸಿ ಸಾಕ್ಸ್ ನಿಯಮ:

  • ಐಸಿಸಿ ನಿಯಮಗಳ 19.45 ನೇ ವಿಧಿಯ ಪ್ರಕಾರ, ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಬಣ್ಣದ ಸಾಕ್ಸ್ ಧರಿಸಬೇಕು. ಬಿಳಿ ಬಣ್ಣದ ಸಾಕ್ಸ್ ಇಲ್ಲದಿದ್ದರೆ ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಧರಿಸಬಹುದು.
  • ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣಗಳ ಸಾಕ್ಸ್​ ಅನ್ನು ಹೊರತುಪಡಿಸಿ ಇತರೆ ಯಾವುದೇ ಬಣ್ಣದ ಸಾಕ್ಸ್ ಧರಿಸಲು ಅವಕಾಶವಿಲ್ಲ.
  • ಕಪ್ಪು, ನೀಲಿ ಅಥವಾ ಕೆಂಪು ಸಾಕ್ಸ್‌ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಸಾಕ್ಸ್‌ಗಳ ಮೇಲಿನ ಲೋಗೋಗಳ ಮೇಲೂ ನಿರ್ಬಂಧಗಳಿವೆ. ಈ ಲೋಗೋಗಳು ಗರಿಷ್ಠ 2 ಚದರ ಇಂಚುಗಳಿಗೆ (12.9 ಸೆಂ.ಮೀ²) ಸೀಮಿತವಾಗಿರಬೇಕು.

ನಿಯಮ ಉಲ್ಲಂಘಿಸಿದರೆ?

ಐಸಿಸಿಯ ಈ ನಿಯಮವು ಟೆಸ್ಟ್ ಆಡುವ ಎಲ್ಲಾ ತಂಡಗಳಿಗೂ ಮತ್ತು ಆಟಗಾರರಿಗೂ ಅನ್ವಯಿಸುತ್ತದೆ. ಒಂದು ವೇಳೆ ಆಟಗಾರನು ನಿಯಮ ಮೀರಿ ಬೇರೆ ಬಣ್ಣದ ಸಾಕ್ಸ್ ಧರಿಸಿದರೆ, ಮ್ಯಾಚ್ ರೆಫರಿ ಅಥವಾ ಅಂಪೈರ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಬಹುದು. ಅಷ್ಟೇ ಅಲ್ಲದೆ  ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಯಾಗಿಸಬಹುದು.

ಐಸಿಸಿ ನಿಯಮದ ಪ್ರಕಾರ, ಇತರೆ ಬಣ್ಣದ ಸಾಕ್ಸ್ ಧರಿಸಿ ಕಣಕ್ಕಿಳಿಯುವುದನ್ನು ಲೆವೆಲ್ 1 ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದರಂತೆ ಆಟಗಾರನಿಗೆ ಅವರ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಬಹುದು ಮತ್ತು ಡಿಮೆರಿಟ್ ಅಂಕಗಳನ್ನು ನೀಡಬಹುದು.

ಆದಾಗ್ಯೂ, ಮೊದಲ ಬಾರಿಗೆ ಅಪರಾಧವಾಗಿದ್ದರೆ, ಅಂಪೈರ್ ಎಚ್ಚರಿಕೆ ನೀಡಬಹುದು. ಈ ಎಚ್ಚರಿಕೆಯ ಹೊರತಾಗಿಯೂ, ಉದ್ದೇಶಪೂರ್ವಕ ಅಥವಾ ಪುನರಾವರ್ತಿತ ಅಪರಾಧಗಳಿಗೆ ಪಂದ್ಯ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಇದಾಗ್ಯೂ ಆಟಗಾರನು ಮತ್ತದೇ ತಪ್ಪನ್ನು ಪುನರಾವರ್ತಿಸಿದರೆ ಪಂದ್ಯದಿಂದ ನಿಷೇಧಿಸಬಹುದು.

ಗಿಲ್ ಸಾಕ್ಸ್ ಮತ್ತು ವಿವಾದ:

ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ, ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಸಾಕ್ಸ್ ಬದಲಿಸಿ ವಿವಾದಕ್ಕೀಡಾಗಿದ್ದರು. ಲೀಡ್ಸ್ ಟೆಸ್ಟ್‌ನ ಎರಡನೇ ದಿನದಂದು ಗಿಲ್ ಕಪ್ಪು ಸಾಕ್ಸ್ ಧರಿಸಿ ಬ್ಯಾಟಿಂಗ್ ಮಾಡಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ಅಂಪೈರ್ ಎಚ್ಚರಿಕೆ ನೀಡಿದ್ದರಿಂದ ಮರು ದಿನ ಗಿಲ್ ಬಿಳಿ ಸಾಕ್ಸ್ ಧರಿಸಿ ಬ್ಯಾಟಿಂಗ್​ಗೆ ಆಗಮಿಸಿದ್ದರು.

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡದ ವಿಶ್ವ ದಾಖಲೆಯ ಚೇಸಿಂಗ್

ಇದೀಗ ಐಸಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ ಬಿಳಿ ಅಥವಾ  ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಜಂಟಲ್​​ಮ್ಯಾನ್ಸ್​ ಗೇಮ್​ನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮುಂದಾಗಿದೆ.

Source link

ರಾಯ್ ನಿಧನದಿಂದ ಶಾಕ್ ಆದ ಹರ್ಷಿಕಾ; ಮನೆ ಹೇಗಿತ್ತು ಎಂದು ವಿವರಿಸಿದ ನಟಿ – Kannada News | CJ Roy Death Shocks: Harshika Poonacha Reveals Real Estate Tycoon’s Life and IT Raid Link

ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ (CJ Roy) ಆತ್ಮಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಆಪ್ತರು ಎನಿಸಿಕೊಂಡವರಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ಹರ್ಷಿಕಾ ಅವರು ‘ಕಾನ್ಫಿಡೆಂಟ್ ಗ್ರೂಪ್​’ನ ಪ್ರಚಾರ ರಾಯಭಾರಿ ಆಗಿದ್ದರು. ಸಿಜೆ ರಾಯ್​​​ನ ಅವರು ಹತ್ತಿರದಿಂದ ಕಂಡಿದ್ದರು. ಅವರು ರಾಯ್ ಅವರ ಒಡನಾಟದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ, ಅವರ ಐಷಾರಾಮಿ ಜೀವನದ ಬಗ್ಗೆ ಮಾತನಾಡಿದ್ದಾರೆ.

‘ರಾಯ್ ಅವರು ಈ ರೀತಿಯ ನಿರ್ಧಾರವನ್ನು ಏಕೆ ತೆಗೆದುಕೊಂಡರೋ ಗೊತ್ತಿಲ್ಲ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ನನ್ನ ಸಿನಿಮಾನ ಅವರು ನಿರ್ಮಾಣ ಮಾಡಿದ್ದರು. ಅವರ ಕಾನ್ಫಿಡೆಂಟ್ ಗ್ರೂಪ್​​ಗೆ ನಾನು ಪ್ರಚಾರ ರಾಯಭಾರಿ ಆಗಿದ್ದೆ. ಅವರು ಒಳ್ಳೆಯ ವ್ಯಕ್ತಿ. ನನ್ನ ಮದುವೆಗೆ ಬಂದಿದ್ದರು, ಮಗುವಿನ ಹುಟ್ಟುಹಬ್ಬಕ್ಕೆ ಬಂದಿದ್ದರು. ಅವರು ಕುಟುಂಬದಲ್ಲಿ ಒಬ್ಬರಾಗಿದ್ದರು’ ಎಂದು ಹರ್ಷಿಕಾ ಹೇಳಿದ್ದಾರೆ.

‘ಸಿಜೆ ರಾಯ್ ಕೊಂಚವೂ ಲೋನ್ ಹೊಂದಿರಲಿಲ್ಲ. ರಾಜನ ರೀತಿ ಬದುಕಿದ್ದರು. ದುಬೈನಲ್ಲಿ ಅವರ ಮನೆ ಮ್ಯಾನ್ಶನ್ ರೀತಿ ಇತ್ತು. ಕಾರಿನ ಕಲೆಕ್ಷನ್ ಬಗ್ಗೆ ಅಂತೂ ಹೇಳೋದೇ ಬೇಡ. ಅವರ ಇಡೀ ಕುಟುಂಬ ತುಂಬಾನೇ ಸ್ವೀಟ್. ಜನರಿಗೆ ಒಳ್ಳೆಯದನ್ನು ಮಾಡುವವರು ಇವರು. ಆದರೆ, ಹೀಗೇಕೆ ಮಾಡಿಕೊಂಡರು ಎಂಬುದೇ ಪ್ರಶ್ನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಹನುಮಂತಗೆ ಲಕ್ಷಲಕ್ಷ ಹಣ, ಪುನೀತ್​​ಗೆ ಪ್ರಾಪರ್ಟಿ ನೀಡಿದ್ದ ಉದ್ಯಮಿ ರಾಯ್

‘ನಾನು ಚಿಕ್ಕಬಳ್ಳಾಪುರದ ಈವೆಂಟ್​​​ಗೆ ಹೋಗಿದ್ದೆ. ಆಗ ಸಾವಿನ ಸುದ್ದಿ ಗೊತ್ತಾಯ್ತು. ನನಗೆ 10-20 ನಿಮಿಷ ಮಾತು ಬರಲೇ ಇಲ್ಲ’ ಎಂದು ದುಃಖ ಹೊರಹಾಕಿದ್ದಾರೆ. ರಾಯ್ ಅವರ ಕಚೇರಿ ಮೇಲೆ ಐಟಿ ದಾಳಿ ಆಗಿತ್ತು. ಅಧಿಕಾರಗಳು ತನಿಖೆ ನಡೆಸುವಾಗಲೇ ರಾಯ್ ಅವರು ಎದೆಗೆ ಗುಂಡು ಹೊಡೆದುಕೊಂಡು ನಿಧನ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿ.ಜೆ ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು; ಏನೆಲ್ಲಾ ಆಯ್ತು ಗೊತ್ತಾ? – Kannada News | Confident Group Chairman C.J. Roy Dies Amidst IT Raid: What happened during the raid?

ಸಿ.ಜೆ ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು; ಏನೆಲ್ಲಾ ಆಯ್ತು ಗೊತ್ತಾ?

ಬೆಂಗಳೂರು, ಜನವರಿ 31: ಸಾವಿರಾರು ಕೋಟಿ ಆಸ್ತಿಯ ಒಡೆಯ, ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ (CJ Roy Death) ಲಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ. 57 ವರ್ಷದ ಈ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ ಪಿಸ್ತೂಲಿನಿಂದ ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹಲವಾರು ಅನುಮಾನಗಳು ಕಾಡುತ್ತಿವೆ. ಅದರಲ್ಲದೆ ಅವರು ಬಳಸಿದ ಪಿಸ್ತೂಲಿಗೆ ಲೈಸೆನ್ಸ್ ಇರಲಿಲ್ಲವೆಂಬ ಶಂಕೆಯೂ ವ್ಯಕ್ತವಾಗಿದೆ.

ಕೇರಳದ ಕೊಚ್ಚಿಯಿಂದ ಬಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ಬೆಂಗಳೂರಿನ ತಮ್ಮ ಸಹೋದ್ಯೋಗಿಗಳೊಂದಿಗೆ ಕಳೆದ ಮೂರು ದಿನಗಳಿಂದ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಕಳೆದ ತಿಂಗಳು ಕಚೇರಿಯಲ್ಲಿ ನಡೆದ ದೊಡ್ಡ ಮಟ್ಟದ ದಾಳಿಯಲ್ಲಿ ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ದಾಳಿ ನಡೆದಿತ್ತು.

ಐಟಿ ದಾಳಿ ವೇಳೆ ನಡೆದಿದ್ದೇನು?

  • ಮಧ್ಯಾಹ್ನ 12 ಗಂಟೆ: ಬೆಂಗಳೂರಿನ ಕಾನ್‌ಫಿಡೆಂಟ್ ಗ್ರೂಪ್ ಕಚೇರಿಗೆ ಐ-ಟಿ ಅಧಿಕಾರಿಗಳ ಆಗಮನ
  • ಮಧ್ಯಾಹ್ನ 2 ಗಂಟೆ: ಕಚೇರಿಗೆ ಸಿ.ಜೆ. ರಾಯ್ ಆಗಮನ
  • ಮಧ್ಯಾಹ್ನ 2–3 ಗಂಟೆ:ಕೆಲವು ದಾಖಲೆಗಳಿಗೆ ಸಹಿ ಹಾಕಲು ಮತ್ತು ಪರಿಶೀಲಿಸಲು ಅಧಿಕಾರಿಗಳ ಸೂಚನೆ
  • ಮಧ್ಯಾಹ್ನ 3 ಗಂಟೆ: ರಾಯ್ ತಮ್ಮ ಖಾಸಗಿ ಕೇಬಿನ್‌ಗೆ ತೆರಳುತ್ತಾರೆ
  • ಮಧ್ಯಾಹ್ನ 3–3:10: ಪಿಸ್ತೂಲ್ ತೆಗೆದು ಎದೆಗೆ ಗುಂಡು ಹಾರಿಸಿಕೊಂಡು ಕುಸಿದು ಬೀಳುತ್ತಾರೆ
  • ಸಂಜೆ 3:10–4 ಗಂಟೆ: ಉದ್ಯೋಗಿಗಳು ಮತ್ತು ಅಧಿಕಾರಿಗಳು ರಾಯ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಎಚ್‌ಎಸ್‌ಆರ್ ಲೇಔಟ್‌ನ ಆಸ್ಪತ್ರೆಗೆ ಕರೆದೊಯ್ಯುತ್ತಾರೆ; ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತದೆ.

ಸುಮಾರು ಮಧ್ಯಾಹ್ನ 3 ಗಂಟೆಗೆ, ತಮ್ಮ ಕೇಬಿನ್‌ನಲ್ಲಿ ಕೆಲವು ದಾಖಲೆಗಳಿವೆ ಎಂದು ಹೇಳಿ ರಾಯ್ ಒಳಗೆ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಗುಂಡಿನ ಶಬ್ದ ಕೇಳಿಬಂದಿತ್ತು. ಕೇಬಿನ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇತ್ತೋ ಇಲ್ಲವೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ.

ಅಧಿಕಾರಿಗಳು ಹೇಳಿದ್ದೇನು?

ಐಟಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ ಪೊಲೀಸರು, ಅಧಿಕಾರಿಗಳು ಕೇವಲ ಅವರ ಸಂಸ್ಥೆಯ ಮೇಲಿದ್ದ ನಿರ್ಬಂಧ ಆದೇಶಗಳನ್ನು ತೆರವುಗೊಳಿಸುವ ಸಲುವಾಗಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ರಾಯ್ ಅವರ ದಿನನಿತ್ಯದ ಕಾರ್ಯಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ. ರಾಯ್​ ಎಷ್ಟು ಸುತ್ತು ಗುಂಡು ಹಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಬ್ಬ ಹಿರಿಯ ತನಿಖಾಧಿಕಾರಿ ಮಾತನಾಡಿ, ಗುಂಡಿನ ಶಬ್ದ ಕೇಳಿದ ತಕ್ಷಣ ಉದ್ಯೋಗಿಗಳು ಮತ್ತು ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ನಂತರ ರಾಯ್ ಅವರನ್ನು ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆಂದರು ಎಂದು ಹೇಳಿದ್ದಾರೆ.

ಇದನ್ನೂ ಓದಿ ಸಿಜೆ ರಾಯ್​ಗೆ ಪ್ರಭಾವಿ ಶಾಸಕರ ಲಿಂಕ್, ಚಿತ್ರರಂಗದ ಗಣ್ಯರ ಜತೆ ನಂಟು: ಡೈರಿಯಲ್ಲಿ ಸಿಕ್ತು ಮಹತ್ವದ ಮಾಹಿತಿ!

ಪಿಸ್ತೂಲ್ ಮತ್ತು ದಾಖಲೆಗಳಿರುವ ಬ್ರೀಫ್‌ಕೇಸ್ ಸದಾ ಜೊತೆಗೇ ಇಟ್ಟುಕೊಳ್ಳುತ್ತಿದ್ದ ರಾಯ್

ರಾಯ್ ಅವರ ಆಪ್ತ ಸಹಾಯಕ ಹೇಳುವಂತೆ, ಪಿಸ್ತೂಲ್ ಇದ್ದ ಕಾರಣ ರಾಯ್ ಸದಾ ತಮ್ಮ ಬ್ರೀಫ್‌ಕೇಸ್ ಅನ್ನು ಜೊತೆಗೇ ಇಟ್ಟುಕೊಳ್ಳುತ್ತಿದ್ದರು. ಅಪರೂಪಕ್ಕೆ ಅವುಗಳನ್ನು ಮರೆತರೂ ಸಹ ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿ ತರಿಸಿಕೊಳ್ಳುತ್ತಿದ್ದರು.

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸಿ.ಜೆ ರಾಯ್ ಆತ್ಮಹತ್ಯೆಗೆ ಬಳಸಿದ ಪಿಸ್ತೂಲಿನ ತಯಾರಿಕೆ ಮತ್ತು ಕ್ಯಾಲಿಬರ್ ಅನ್ನು ಬಾಲಿಸ್ಟಿಕ್ ತಜ್ಞರ ತಂಡ ಪರಿಶೀಲಿಸಿ ದೃಢಪಡಿಸಬೇಕಿದೆ ಎಂದಿದ್ದಾರೆ.

ಕಾನ್‌ಫಿಡೆಂಟ್ ಗ್ರೂಪ್‌ನ ಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಅವರ ಸಹಾಯಕರೊಬ್ಬರು, ಇಷ್ಟು ವರ್ಷಗಳ ಕಾಲ ರಾಯ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರು ದುರ್ಬಲ ಮನಸ್ಸಿನವರಾಗಿ ಎಂದಿಗೂ ಕಾಣಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ ದೇಶ ವಿದೇಶಗಳಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ, ಕಮಿಷನರ್ ಹೇಳಿದ್ದಿಷ್ಟು

ಐ-ಟಿ ಅಧಿಕಾರಿಗಳೇ ಅವರ ಸಾವಿಗೆ ಕಾರಣವೆಂದ ಸಹೋದರ!

ರಾಯ್ ಅವರ ಸಹೋದರ ಮತ್ತು ವೈಟ್‌ಗೋಲ್ಡ್ ಸಂಸ್ಥೆಯ ಮಾಲೀಕ ಸಿ.ಜೆ. ಬಾಬು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಳೆದ ಮೂರು ದಿನಗಳಿಂದ ಕೇರಳದ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದರು ಎಂದು ಹೇಳಿದರು. ಅಧಿಕಾರಿಗಳಿಂದ ಒತ್ತಡದ ಆರೋಪ ಮಾಡಿರುವ ಅವರು, ರಾಯ್ ಅವರು ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಐಟಿ ತಂಡವೇ ಕಾರಣ ಎಂದು ಆರೋಪಿಸಿದ್ದಾರೆ.

ರಾಯ್ ಅವರ ಪತ್ನಿ, ಇಪ್ಪತ್ತರ ವಯಸ್ಸಿನ ಮಗ ಮತ್ತು ಮಗಳು ದುಬೈನಲ್ಲಿ ನೆಲೆಸಿದ್ದು, ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುತ್ತಾರೆಂದು ಹೇಳಲಾಗಿದೆ. ರಾಯ್ ಅವರ ತಾಯಿ ಕೊರಮಂಗಲದ ನೆಕ್ಸಸ್ ಮಾಲ್ ಸಮೀಪ ವಾಸಿಸುತ್ತಿದ್ದು, ಅವರು ಅಲ್ಲಿ ಅಪರೂಪಕ್ಕೆ ಮಾತ್ರ ತಂಗುತ್ತಿದ್ದರು ಎಂದು ಸಹಾಯಕರು ತಿಳಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಸಾಮಾನ್ಯವಾಗಿ ಅವರು ಕೇಂದ್ರ ವ್ಯಾಪಾರ ವಲಯದ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

“ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ? – Kannada News | Maharashtra: NCP Merger Talks and Mahayuti Alliance Future Post Ajit Pawar

ಮಹಾರಾಷ್ಟ್ರ, ಜ.31: ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗಳು ನಡೆದಿದೆ. ಎನ್‌ಸಿಪಿ (NCP) ಎರಡೂ ಬಣಗಳ ವಿಲೀನ ಮತ್ತು ಹೊಸ ನಾಯಕತ್ವದ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಅಜಿತ್ ಪವಾರ್ ಮತ್ತು ಶರದ್ ಪವಾರ್ ನೇತೃತ್ವದ ಎರಡು ಬಣಗಳ ವಿಲೀನ ಪ್ರಕ್ರಿಯೆಯು ಅಜಿತ್ ಪವಾರ್ ಬದುಕಿದ್ದಾಗಲೇ ಅಂತಿಮ ಹಂತಕ್ಕೆ ತಲುಪಿತ್ತು. ಫೆಬ್ರವರಿ 8 ಅಥವಾ ಫೆಬ್ರವರಿ ಮಧ್ಯಭಾಗದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಫೆಬ್ರವರಿ 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಬಹುದು ಎನ್ನಲಾಗಿದೆ. ಎನ್‌ಸಿಪಿ ಪಕ್ಷವನ್ನು ಮುನ್ನಡೆಸಲು ಅಥವಾ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲು ನಾಲ್ಕು ಹೆಸರುಗಳು ಮುಂಚೂಣಿಯಲ್ಲಿವೆ.

ಶರದ್ ಪವಾರ್ ಅವರು ಪಕ್ಷದ ಸ್ಥಾಪಕ ಮತ್ತು ಸರ್ವಸಮ್ಮತ ನಾಯಕ. ವಿಲೀನದ ನಂತರ ಇಡೀ ಪಕ್ಷವನ್ನು ಮತ್ತೆ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಸುನೇತ್ರಾ ಪವಾರ್ ಅಜಿತ್ ಪವಾರ್ ಅವರ ಪತ್ನಿ ಮತ್ತು ರಾಜ್ಯಸಭಾ ಸಂಸದೆ. ಅಜಿತ್ ಪವಾರ್ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಲು ಮತ್ತು ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಇವರನ್ನು ನೇಮಿಸುವ ಬಗ್ಗೆ ಪಕ್ಷದೊಳಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಸುಪ್ರಿಯಾ ಸುಳೆ ಕೂಡ ಈ ಮುಂಚೂಣಿಯಲ್ಲಿ ಇದ್ದರೆ, ಶರದ್ ಪವಾರ್ ಅವರ ಪುತ್ರಿ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಮುಖವಾಗಿ ಗುರುತಿಸಿಕೊಂಡಿರುವ ಇವರು ವಿಲೀನದ ನಂತರ ಪ್ರಮುಖ ಸಾಂಸ್ಥಿಕ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಪ್ರಫುಲ್ ಪಟೇಲ್ ಎನ್‌ಸಿಪಿಯ ಹಿರಿಯ ನಾಯಕ, ಒಂದು ವೇಳೆ ಕುಟುಂಬದ ಸದಸ್ಯರ ನೇಮಕದಲ್ಲಿ ತಾಂತ್ರಿಕ ತೊಂದರೆಗಳಾದಲ್ಲಿ, ಅನುಭವದ ಆಧಾರದ ಮೇಲೆ ಪ್ರಫುಲ್ ಪಟೇಲ್ ಅವರಿಗೆ ಪಕ್ಷದ ಅಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆಯಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರಿಗೆ ‘ಹುಟ್ಟುಹಬ್ಬದ ಉಡುಗೊರೆ’ಯಾಗಿ ಪಕ್ಷವನ್ನು ಮತ್ತೆ ಒಂದು ಮಾಡಲು ಬಯಸಿದ್ದರು ಎಂದು ವರದಿಯಾಗಿದೆ. ಈಗ ಅವರ ಸಾವಿನ ನಂತರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಭಾವನಾತ್ಮಕವಾಗಿ ಒಂದಾಗುತ್ತಿದ್ದಾರೆ.

ಮಹಾರಾಷ್ಟ್ರದ ‘ಮಹಾಯುತಿ’ (ಬಿಜೆಪಿ-ಶಿವಸೇನೆ) ಮೈತ್ರಿಕೂಟದ ಭವಿಷ್ಯ ಏನು?

ಎನ್‌ಸಿಪಿ (NCP) ವಿಲೀನ ಪ್ರಕ್ರಿಯೆಯು ಮಹಾರಾಷ್ಟ್ರದ ‘ಮಹಾಯುತಿ’ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮೈತ್ರಿಕೂಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಬದಲಾವಣೆಯು ಮೈತ್ರಿಕೂಟದ ಸಮತೋಲನವನ್ನು ಬುಡಮೇಲು ಮಾಡಬಹುದು. ಮಹಾಯುತಿ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಒಂದು ರೀತಿಯ ‘ಸಮತೋಲನ’ ಕಾಯ್ದುಕೊಳ್ಳುವ ಶಕ್ತಿಯಾಗಿದ್ದರು. ಅಜಿತ್ ಪವಾರ್ ಅವರ ಅಚಲ ಬೆಂಬಲವು ಶಿಂಧೆ ಅವರ ‘ಹಠಮಾರಿ’ ನಿಲುವುಗಳನ್ನು ನಿಯಂತ್ರಿಸಲು ದೇವೇಂದ್ರ ಫಡ್ನವೀಸ್‌ಗೆ ಸಹಾಯ ಮಾಡುತ್ತಿತ್ತು. ಈಗ ಅಜಿತ್ ಪವಾರ್ ಇಲ್ಲದಿರುವುದರಿಂದ, ಶಿಂಧೆ ಅವರು ಮೈತ್ರಿಕೂಟದಲ್ಲಿ ಹೆಚ್ಚು ಪ್ರಬಲವಾಗಿ ಹೊರಹೊಮ್ಮುವ ಸಾಧ್ಯತೆಯಿದೆ, ಇದು ಬಿಜೆಪಿಗೆ ಸವಾಲಾಗಬಹುದು. ಎರಡೂ ಎನ್‌ಸಿಪಿ ಬಣಗಳು ವಿಲೀನವಾದ ನಂತರ, ಆ ಒಕ್ಕೂಟವು ಮಹಾಯುತಿಯಲ್ಲಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಶರದ್ ಪವಾರ್ ಅವರ ಕೈಯಲ್ಲಿರುತ್ತದೆ.

ಇದನ್ನೂ ಓದಿ: ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ

ಒಂದು ವೇಳೆ ವಿಲೀನಗೊಂಡ ಎನ್‌ಸಿಪಿ ಮಹಾಯುತಿಯಲ್ಲೇ ಉಳಿದರೆ, ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಇದು ಬಿಜೆಪಿಗೆ ದೊಡ್ಡ ಬಲ ನೀಡಬಹುದು. ವಿಲೀನಗೊಂಡ ಎನ್‌ಸಿಪಿ ಮೈತ್ರಿಕೂಟದಿಂದ ಹೊರಬಂದು ಪ್ರತಿಪಕ್ಷಗಳ (MVA) ಜೊತೆ ಸೇರಿದರೆ, ಮಹಾಯುತಿ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆಯಾಗದಿದ್ದರೂ (ಬಿಜೆಪಿ+ಶಿವಸೇನೆಗೆ ಬಹುಮತವಿದೆ), ಮುಂಬರುವ ಚುನಾವಣೆಗಳಲ್ಲಿ ದೊಡ್ಡ ಹೊಡೆತ ಬೀಳಬಹುದು ಎಂದು ಅನೇಕ ರಾಜಕೀಯ ತಜ್ಞರು ಹೇಳಿದ್ದಾರೆ. ಶರದ್ ಪವಾರ್ ಅವರು ಮರಳಿ ಎನ್‌ಸಿಪಿಯ ಸಂಪೂರ್ಣ ಅಧಿಕಾರ ಪಡೆದರೆ, ಅದು ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ (ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಶಿವಸೇನೆ) ಬೂಸ್ಟ್ ನೀಡಲಿದೆ. ಮರಾಠಾ ಮತದಾರರ ಮೇಲೆ ಪವಾರ್ ಹೊಂದಿರುವ ಹಿಡಿತವು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಾಯುತಿಗೆ ಮುಳುವಾಗಬಹುದು. ಸದ್ಯದ ವರದಿಗಳ ಪ್ರಕಾರ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಸಹಮತ ವ್ಯಕ್ತಪಡಿಸಿದೆ. ಇದು ಅಜಿತ್ ಪವಾರ್ ಬಣದ ಶಾಸಕರನ್ನು ಒಟ್ಟಾಗಿ ಇರಿಸಲು ಮತ್ತು ಶರದ್ ಪವಾರ್ ಬಣದೊಂದಿಗೆ ವಿಲೀನವಾದರೂ ಮಹಾಯುತಿ ಸರ್ಕಾರದ ಜೊತೆಗಿನ ಸಂಬಂಧ ಕಡಿದುಕೊಳ್ಳದಂತೆ ನೋಡಿಕೊಳ್ಳಲು ಬಿಜೆಪಿ ಮಾಡುತ್ತಿರುವ ರಾಜತಾಂತ್ರಿಕ ನಡೆ ಎನ್ನಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾನ್ಫಿಡೆಂಟ್ ಗ್ರೂಪ್‌ನ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ಟಿಎ ಜೋಸೆಫ್ ದೂರು: ಕಂಪ್ಲೇಂಟ್​ನಲ್ಲಿದೆ ಅಚ್ಚರಿಯ ಅಂಶ – Kannada News | Twist in Confident Group Chairman CJ Roy Death: MD TA Joseph Files Complaint Seeking Probe

ಬೆಂಗಳೂರು, ಜನವರಿ 31: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಇತ್ತೀಚೆಗೆ ಐಟಿ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಅಶೋಕ್ ನಗರ ಪೊಲೀಸರಿಗೆ ಕಾನ್ಫಿಡೆಂಟ್ ಗ್ರೂಪ್‌ನ ಎಂಡಿ ಟಿಎ ಜೋಸೆಫ್ ದೂರು ದಾಖಲಿಸಿದ್ದಾರೆ. ಜೋಸೆಫ್ ತಮ್ಮ ದೂರಿನಲ್ಲಿ, ರಾಯ್ ಆತ್ಮಹತ್ಯೆಗೆ ಕಾರಣವಾದ ಒತ್ತಡಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಐಟಿ ಅಧಿಕಾರಿಗಳ ಮೇಲೆ ಯಾವುದೇ ನೇರ ಆರೋಪ ಮಾಡಿಲ್ಲ.

ಸಮಗ್ರ ತನಿಖೆ ನಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜೋಸೆಫ್ ಆಗ್ರಹಿಸಿದ್ದಾರೆ. ಆದಾಗ್ಯೂ, ಸಿಜೆ ರಾಯ್ ಅವರ ಸಹೋದರ ಬಾಬು ಅವರು ಮಾತನಾಡಿ, ರಾಯ್ ಕಳೆದ ಕೆಲವು ದಿನಗಳಿಂದ ಐಟಿ ಅಧಿಕಾರಿಗಳಿಂದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಕುಟುಂಬಸ್ಥರು ಪ್ರತ್ಯೇಕ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಬಾಬು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

International Zebra Day 2026: ಜೀಬ್ರಾ ದಿನವನ್ನು ಆಚರಿಸುವುದೇಕೆ? ಇದರ ಹಿಂದಿನ ಕಾರಣವನ್ನು ತಿಳಿಯಿರಿ – Kannada News | International Zebra Day 2026: Know the history and significance of International Zebra Day

ಅಂತಾರಾಷ್ಟ್ರೀಯ ಜೀಬ್ರಾ ದಿನImage Credit source: Unsplash

ಕಪ್ಪು ಬಿಳುಪಿನ ಪಟ್ಟೆಗಳನ್ನು ಹೊಂದಿರುವ ಜೀಬ್ರಾಗಳನ್ನು (Zebra) ಪ್ರಾಣಿ ಸಾಮ್ರಾಜ್ಯದ ಅತ್ಯಂತ ಆಕರ್ಷಕ ಮತ್ತು ಬುದ್ಧಿವಂತ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇವು ಈಕ್ವಿಡೇ ಕುದುರೆ ಕುಟುಂಬಕ್ಕೆ ಸೇರಿದ ಪ್ರಾಣಿಗಳಾಗಿದ್ದು, ಇವು ಹೆಚ್ಚಾಗಿ ಆಫ್ರಿಕನ್ ಖಂಡದಾದ್ಯಂತ, ಕೀನ್ಯಾ ಮತ್ತು ಇಥಿಯೋಪಿಯಾದ ಅರೆ-ಮರುಭೂಮಿ ಪ್ರದೇಶಗಳಲ್ಲಿ ಮತ್ತು ನಮೀಬಿಯಾ, ಅಂಗೋಲಾ ಮತ್ತು ದಕ್ಷಿಣ ಆಫ್ರಿಕಾದ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಗ್ರೆವಿಸ್ ಜೀಬ್ರಾ, ಪ್ಲೈನ್ಸ್ ಜೀಬ್ರಾ ಮತ್ತು ಮೌಂಟೇನ್ ಜೀಬ್ರಾ ಹೀಗೆ ಒಟ್ಟು ಮೂರು ವಿಧದ ಜೀಬ್ರಾಗಳಿದ್ದು, ಇಂದು ಇವು ಕಾಡಿನ ನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆಯ ಕಾರಣದಿಂದ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಈ ಸಾದು ಪ್ರಾಣಿಗಳ ರಕ್ಷಣೆಯ ಉದ್ದೇಶದಿಂದ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಪ್ರತಿವರ್ಷ ಜನವರಿ 31 ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.‌

ಅಂತಾರಾಷ್ಟ್ರೀಯ ಜೀಬ್ರಾ ದಿನದ ಇತಿಹಾಸವೇನು?

ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಹಾಗೂ ಕನ್ಸರ್ವೇಶನ್ ಬಯಾಲಜಿ ಇನ್‌ಸ್ಟಿಟ್ಯೂಟ್‌ ನಂತಹ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟವು ಈ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸಲು ಆರಂಭಿಸಿತು. ಆವಾಸಸ್ಥಾನ ಸ್ಥಾನದ ನಷ್ಟ ಬೇಟೆ ಇವೆಲ್ಲದರ ಕಾರಣದಿಂದ ಕಳೆದ ಮೂರು ದಶಕಗಳಲ್ಲಿ ಜೀಬ್ರಾ ಸಂತತಿಗಳು ದೊಡ್ಡ ಪ್ರಮಾಣದಲ್ಲಿ ಅವನತಿಯತ್ತ ತಲುಪಿದ್ದು, ಹಾಗಾಗಿ ಜೀಬ್ರಾ ಸಂತತಿಯನ್ನು ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಗಳು ಒಟ್ಟುಗೂಡಿ ಅಂತಾರಾಷ್ಟ್ರೀಯ ಜೀಬ್ರಾ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಜಾರಿಗೆ ತಂದಿತು. ಇಂದು ಪ್ರತಿವರ್ಷ ಜನವರಿ 31 ರಂದು ಈ ವಿಶೇಷ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ

ಅಂತಾರಾಷ್ಟ್ರೀಯ ಜೀಬ್ರಾ ದಿನದ ಮಹತ್ವವೇನು?

  • ಜೀಬ್ರಾಗಳ  ಸಂತತಿಯನ್ನು ಸಂರಕ್ಷಿಸುವುದು, ಅವುಗಳ ಬಗ್ಗೆ ಕಾಳಜಿ ವಹಿಸುವುದು ಅಂತಾರಾಷ್ಟ್ರೀಯ ಜೀಬ್ರಾ ದಿನದ ಮುಖ್ಯ ಉದ್ದೇಶವಾಗಿದೆ.
  • ಭೂಮಿಯ ಮೇಲೆ  ಎಲ್ಲಾ ಜೀವಿಗಳಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದ. ಅಂತರರಾಷ್ಟ್ರೀಯ ಜೀಬ್ರಾ ದಿನವು ಎಲ್ಲಾ ಜೀವಿಗಳ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುತ್ತದೆ.
  • ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಪ್ರಾಣಿಗಳನ್ನು ರಕ್ಷಣೆ ಮಾಡುವುದರಿಂದ ಪರಿಸರ ಸಮತೋಲನಕ್ಕೆ ಹೇಗೆ ಸಹಕಾರಿಯಾಗಲಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಹಾಗೆಯೇ ಅನೇಕ ಕಡೆಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ದೇಣಿಗೆ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ? – Kannada News | Daali Dhananjaya on Non Veg Row: My Food, My Choice Clarifies Lingayat controversy

ಡಾಲಿ ಧನಂಜಯ್ ಅವರು (Dhananjay) ಇತ್ತೀಚೆಗೆ ನಾನ್​ ವೆಜ್ ತಿಂದ ವಿಷಯ ಸಾಕಷ್ಟು ಚರ್ಚೆ ಆಯಿತು. ಅವರು ಲಿಂಗಾಯತ ಆಗಿ ನಾನ್​ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಬಹುತೇಕರು ಡಾಲಿ ಅವರನ್ನು ಬೆಂಬಲಿಸಿದ್ದರು. ಆಹಾರ ಅವರ ಆಯ್ಕೆ ಎಂದು ನೇರ ಮಾತುಗಳಲ್ಲಿ ಹೇಳಿದ್ದರು. ಈಗ ಈ ವಿಷಯಕ್ಕೆ ಡಾಲಿ ಧನಂಜಯ್ ಅವರು ಸ್ಪಷ್ಟನೆ ನೀಡಿದ್ದಾರೆ. ಆಹಾರ ಪ್ರತಿಯೊಬ್ಬ ಮನುಷ್ಯನ ಆಯ್ಕೆ ಎಂದಿದ್ದಾರೆ.

ಜನವರಿ 30ರಂದಿ ನಡೆದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತನಾಡಿದ್ದಾರೆ. ‘ನಾನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯ ನೋಡಿದೆ. ಯಾರು ಅದನ್ನು ಎತ್ತಿ ಚರ್ಚೆ ಮಾಡಿದರು ಎಂಬುದು ಗೊತ್ತಿಲ್ಲ. ನನ್ನ ಗೆಳೆಯ ರಾಹುಲ್ ಎಂಬುವವರು ಬಿರಿಯಾನಿ ಶಾಪ್ ಓಪನ್ ಮಾಡಿಕೊಟ್ಟೆ. ಈ ವೇಳೆ ಊಟ ಆಫರ್ ಮಾಡಿದ. ಅದನ್ನು ಮಾಡಿ ಬಂದೆ. ಸುಮಾರು 10-15 ಬಿರಿಯಾನಿ ಶಾಪ್​​​ಗಳನ್ನು ನಾನೇ ಓಪನ್ ಮಾಡಿದ್ದೇನೆ. ಹೆಡ್​ಬುಷ್ ಸಮಯದಲ್ಲಿ ಬಿರಿಯಾನಿ ತಿನ್ನುತ್ತಲೇ ಸಿನಿಮಾ ಪ್ರಚಾರ ಮಾಡಿದ್ದೆ. ಈ ವಿಷಯ ಪಿಕ್ ಆಗಬಹುದು ಎಂಬುದು ಗೊತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಈ ರೀತಿಯ ವಿಷಯಗಳು ಚರ್ಚೆ ಆದಾಗ ಸಮಾಜ ಹೇಗೆ ಯೋಚಿಸುತ್ತಿದೆ ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ ಡಾಲಿ.

‘ಡಾಲಿ ನಾನ್ ವೆಜ್ ತಿನ್ನುತ್ತಾರಾ ಎಂದು ಕೇಳೋದು ಓಕೆ. ಲಿಂಗಾಯತರು ಹಾಗೂ ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಪ್ರಶ್ನಿಸೋದು ತಪ್ಪು. ಅದು ಅಗತ್ಯವಿಲ್ಲ. ಇದರ ಹಿಂದೆ ಒಂದಷ್ಟು ಜನರನ್ನು ಎತ್ತಿಕಟ್ಟೋ ಉದ್ದೇಶ ಇದ್ದಿರಬಹುದು’ ಎಂದು ದುಷ್ಟ ಆಲೋಚನೆ ಹೊಂದಿದ್ದವರ ವಿರುದ್ಧ ಡಾಲಿ ಕಿಡಿಕಾರಿದ್ದಾರೆ. ‘ಇದೆಲ್ಲ ಮೊದಲು ನನಗೆ ತೊಂದರೆ ಕೊಡುತ್ತಿತ್ತು. ಆದರೆ, ಈಗ ಹಾಗೆ ಆಗುತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ

‘ನಾನು ಓಪನ್ ಬುಕ್. ಊಟ, ಚಟ ಎಲ್ಲವೂ ನನ್ನ ಆಯ್ಕೆ. ಅದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದರೆ ಸಮಸ್ಯೆಯೇ ಇಲ್ಲವಲ್ಲ. ನಾನು ಸಿನಿಮಾಗಾಗಿ ಸ್ಮೋಕ್ ಮಾಡುತ್ತಿದ್ದೆ. ನಿಜ ಜೀವನದಲ್ಲೂ ಅದನ್ನು ಮುಂದುವರಿಸಿದೆ. ಈಗ ಅದನ್ನು ನಿಲ್ಲಿಸಿದ್ದೇನೆ. ನಾನು ಬಿಯರ್ ಬಾಯ್ ಎಂದೇ ಫೇಮಸ್. ಈಗ ನಾನು ಅಪರೂಪಕ್ಕೆ ಕುಡಿಯುತ್ತೇನೆ ಅಷ್ಟೇ. ನಾನು ಅದನ್ನು ಮಾಡಿ ಎಂದು ಯಾರಿಗೂ ಹೇಳಲ್ಲ. ಏನೇ ಮಾಡಿದರೂ ಇತಮಿತವಾಗಿ ಮಾಡಿ’ ಎಂದು ಧನಂಜಯ್ ಕಿವಿಮಾತು ಹೇಳಿದ್ದಾರೆ.

‘ನನಗೆ ಸಮುದ್ರ ಆಹಾರ ಎಂದರೆ ಇಷ್ಟ. ಕದ್ದು ಮುಚ್ಚಿ ಮಾಡೋಕೆ ಅದು ಕ್ರೈಮ್ ಅಲ್ಲ.ನನಗೆ ಅದು ಇಷ್ಟ. ಡಾಲಿ ಏನು ತಿಂತೀರಾ ಎಂದು ನನಗೆ ಕೇಳಿದರೆ ನಾನು ಖುಷಿಯಿಂದ ಉತ್ತರ ನೀಡುತ್ತೇನೆ’ ಎಂದು ಡಾಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 31ರ ದಿನಭವಿಷ್ಯ – Kannada News | January 31 Numerology Prediction: Birth Numbers 1 2, 3 – What Awaits You Today?

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 31ರ ದಿನಭವಿಷ್ಯ

ಇದೇ ಫೆಬ್ರವರಿ ಒಂದನೇ ತಾರೀಕು ಮಾಘ ಮಾಸದ ಪೌರ್ಣಮಿ. ತಿರುವಣ್ಣಾಮಲೈನಲ್ಲಿನ ಅರುಣಾಚಲೇಶ್ವರ ದೇವಸ್ಥಾನದ ಗಿರಿ ಪ್ರದಕ್ಷಿಣೆಯನ್ನು ಮಾಡಿದಲ್ಲಿ ಉದ್ಯೋಗ, ಮದುವೆ, ವ್ಯಾಪಾ- ವ್ಯವಹಾರ ಹಾಗೂ ಆರೋಗ್ಯ ವಿಚಾರದಲ್ಲಿನ ಏನೇ ಸಮಸ್ಯೆಗಳು ಇದ್ದರೂ ಅವುಗಳನ್ನು ಬಗೆಹರಿಸಿಕೊಳ್ಳಲು ಮಾರ್ಗೋಪಾಯ ಗೋಚಾರ ಆಗುತ್ತದೆ. ಅಲ್ಲಿಗೆ ತೆರಳಲು ಸಾಧ್ಯವಿಲ್ಲದವರು ಮನೆಯ ಬಳಿ ಶಿವನ ದೇವಾಲಯಕ್ಕೆ ಹೋಗಿ ಯಥಾಶಕ್ತಿ ಪ್ರದಕ್ಷಿಣೆಯನ್ನು ಮಾಡಿ. ಮನಸ್ಸಿನಲ್ಲಿ ತಿರುವಣ್ಣಾಮಲೈನ ಅರುಣಾಚಲೇಶ್ವರನನ್ನು ಸ್ಮರಿಸಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮಲ್ಲಿ ಕೆಲವರು ಹಣ ಹೂಡಿಕೆ ಮಾಡಿ, ಕೆಲವು ಸಲಕರಣೆಗಳನ್ನು ಖರೀದಿಸುವುದಕ್ಕೆ ನಿರ್ಧಾರ ಮಾಡಬಹುದು. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಹಣಕಾಸು- ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ರೀತಿಯಾಗಿ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಅಥವಾ ನಿಮ್ಮದಲ್ಲದ ತಪ್ಪಿಗೆ ವಿಚಾರಣೆ ಎದುರಿಸುತ್ತಿದ್ದಲ್ಲಿ ಆರೋಪದಿಂದ ಮುಕ್ತರಾಗಿ ಹೊರಬರುವಂಥ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಯಾರ ಬಳಿ ಸಹಾಯ ಕೇಳಿದರೆ ಖಂಡಿತಾ ನೆರವು ಸಿಕ್ಕೇ ಸಿಗುತ್ತದೆ ಎಂದು ಭಾವಿಸಿರುತ್ತೀರೋ ಅಂಥವರೇ ಕಷ್ಟದಲ್ಲಿ ಇದ್ದಾರೆ ಎಂಬ ಮಾಹಿತಿ ನಿಮಗೆ ದೊರೆಯಲಿದೆ ಅಥವಾ ಅವರಾಗಿಯೇ ಹೇಳಲಿದ್ದಾರೆ. ಸಂಗೀತಗಾರರು, ಧಾರ್ಮಿಕ ಪ್ರವಚನಕಾರರು, ಪುರೋಹಿತರಿಗೆ ಕೈಯಿಂದ ಹಣ ಕಳೆದುಕೊಳ್ಳುವಂಥ ಯೋಗ ಕಂಡುಬರುತ್ತದೆ. ನೀವಾಗಿಯೇ ಯಾವುದೇ ಜವಾಬ್ದಾರಿಯನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕುಟುಂಬ ಸದಸ್ಯರು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಈ ಹಿಂದೆ ನೀವು ತೆಗೆದುಕೊಂಡಂಥ ನಿರ್ಧಾರ ಹಾಗೂ ತೀರ್ಮಾನಗಳಿಂದಲೇ ಈಗಿನ ಪರಿಸ್ಥಿತಿಗೆ ಕಾರಣ ಎಂದು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಯಾರು ಇಟ್ಟಿಗೆ- ಸಿಮೆಂಟ್, ಉಕ್ಕಿನ ಮಾರಾಟದಲ್ಲಿ ತೊಡಗಿಕೊಂಡಿರುವಿರೋ ಅಂಥವರು ವ್ಯವಹಾರದ ವಿಸ್ತರಣೆ ಮಾಡಬೇಕು ಎಂದು ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link