Headlines

IPL 2026 Final: ಕರ್ನೂಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಅತಿರೇಕ; ಬಸ್ ಮೇಲೆ ಕಲ್ಲು ತೂರಾಟ

2025 ರ ಐಪಿಎಲ್‌ನಲ್ಲಿ ಆರ್​ಸಿಬಿ ಚಾಂಪಿಯನ್‌ ಆದ ಬಳಿಕ ರಾಜ್ಯಾದ್ಯಂತ ಕೋಟ್ಯಾಂತರ ಅಭಿಮಾನಿಗಳು ರಸ್ತೆಗಳಿದು ಸಂಭ್ರಮಾಚರಣೆ ನಡೆಸಿದರು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗಿದ್ದವು. ಹೀಗಾಗಿ ಈ ಬಾರಿ ಆ ರೀತಿಯ ಘಟನೆಗಳು ನಡೆಯುವುದನ್ನು ತಡೆಯುವ ಸಲುವಾಗಿ ರಾಜ್ಯದಲ್ಲಿ ಬಿಗ್ ಬಂದೋಬಸ್ತ್ ಮಾಡಲಾಗಿತ್ತು. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಆ ರೀತಿಯ ಅಹಿತಕರ ಘಟನೆಗಳು ಯಾವು ನಡೆಯಲಿಲ್ಲ. ಆದರೆ ಪಕ್ಕದ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಆರ್​ಸಿಬಿ ಫ್ಯಾನ್ಸ್​ಗಳ ಅತಿರೇಕದಿಂದಾಗಿ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಮಾತ್ರವಲ್ಲದೆ ಅಭಿಮಾನಿಗಳ ಸಂಭ್ರಮಾಚರಣೆ ಹಿಂಸಾತ್ಮಕವಾಗಿ…

Read More

ಜಿಲ್ಲಾ ಕೇಂದ್ರದ ಲೈಬ್ರರಿಗಳಿಗೂ ಟಕ್ಕರ್ ನೀಡುವಂತಿದೆ ಪುಟ್ಟ ಹಳ್ಳಿಯ ಹೈಟೆಕ್ ಗ್ರಂಥಾಲಯ: ಏನೇನಿದೆ ಗೊತ್ತಾ?

ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ತಾಲೂಕಿನ ಶ್ರೀಮಂಡಲ ಎಂಬ ಪುಟ್ಟ ಗ್ರಾಮದಲ್ಲಿ ಈಗೊಂದು ಹೈಟೆಕ್ ಡಿಜಿಟಲ್ ಲೈಬ್ರರಿ ನಿರ್ಮಾಣವಾಗಿದೆ. ಮಕ್ಕಳ ಓದಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಗ್ರಾಮ ಮಟ್ಟದ ಈ ಗ್ರಂಥಾಲಯವು ಜಿಲ್ಲಾ ಕೇಂದ್ರದ ದೊಡ್ಡ ದೊಡ್ಡ ಲೈಬ್ರರಿಗಳನ್ನೇ ಮಿರಿಸುವಂತಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಆಸರೆಯಾಗಿದೆ. ಬೀದರ್​ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಶ್ರೀಮಂಡಲ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಪ್ರತಿದಿನ ತಾಲೂಕು ಕೇಂದ್ರವಾದ ಬೀದರ್…

Read More

Chanakya Niti: ಈ ಐದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡುವುದು ತರವಲ್ಲ

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಕೆಲವು ಸಂಗತಿಗಳನ್ನು ವಿವರಿಸಿದ್ದಾರೆ.  ನಾವು ಕೆಲವೊಮ್ಮೆ ತಾಳ್ಮೆಯನ್ನು ವಹಿಸದೆ  ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದರಿಂದಾಗಿ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಈ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಕೆಲಸಗಳನ್ನು ಮಾಡುವಾಗ ತುಂಬಾನೇ ತಾಳ್ಮೆಯನ್ನು ವಹಿಸಬೇಕು, ಚಿಂತಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಭವಿಷ್ಯವೇ ಹಾಳಾಗುತ್ತದೆ ಎಂದು ಎಂದಿದ್ದಾರೆ. ಹಾಗಿದ್ರೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡಬಾರದು ಎಂಬುದನ್ನು ನೋಡೋಣ ಬನ್ನಿ. ಈ…

Read More

ಜೂನ್​ನಲ್ಲಿ ಪ್ಯಾನ್ ಕಾರ್ಡ್, ಯುಪಿಐ, ಅಡ್ವಾನ್ಸ್ ಟ್ಯಾಕ್ಸ್ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ಗಮನಿಸಿ

ನವದೆಹಲಿ, ಜೂನ್ 1: ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು (Financial and Banking rules) ಬದಲಾಗಿವೆ. ಆದಾಯ ತೆರಿಗೆ ಸಲ್ಲಿಕೆದಾರರಿಂದ ಹಿಡಿದು ಸಾಮಾನ್ಯ ಯುಪಿಐ (UPI) ಬಳಕೆದಾರರವರೆಗೆ ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ 5 ಬದಲಾವಣೆಗಳ ವಿವರ ಇಲ್ಲಿದೆ: ಪ್ಯಾನ್ ಕಾರ್ಡ್ ನಿಯಮ ಸರಳೀಕರಣ ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ (PAN Card) ವಿತರಣಾ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಮತ್ತು…

Read More

ಆರ್​ಸಿಬಿ ಗೆಲುವಿಗಾಗಿ ಶ್ರಮಿಸಿದ ಈ ತೆರೆ ಮರೆಯ ಹೀರೋಗಳನ್ನು ಮರೆಯುವುದುಂಟೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2026 ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಆರ್​ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ತಂಡದ ಈ ಯಶಸ್ಸಿನಲ್ಲಿ ಎಲ್ಲಾ ಆಟಗಾರರ ಶ್ರಮವಿದೆ. ಆಟಗಾರರ ಜೊತೆಗೆ ತಂಡದ ಯಶಸ್ಸಿಗಾಗಿ ದುಡಿದ ತೆರೆಮರೆಯ ಹೀರೋಗಳನ್ನು ನೆನಪಿಸಿಕೊಳ್ಳುವುದು ಅವಶ್ಯಕವಾಗಿದೆ (PC- IPL X). ಆರ್​ಸಿಬಿ ತಂಡದ ಗೆಲುವಿನ ಕೀರ್ತಿಯಲ್ಲಿ ಮುಖ್ಯ ಕೋಚ್ ಆಂಡಿ ಫ್ಲವರ್ ಸಿಂಹ ಪಾಲು ಪಡೆಯುತ್ತಾರೆ. ಫ್ಲವರ್ ಮುಖ್ಯ ಕೋಚ್ ಆದ…

Read More

ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು

‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರ ಬಹುದಿನಗಳ ಹಂಬಲವೊಂದು ಕೊನೆಗೂ ಈಡೇರುತ್ತಿದೆ. ತಮ್ಮ ಬಹುನಿರೀಕ್ಷಿತ ‘ವಾರಣಾಸಿ’ (Varanasi) ಚಿತ್ರದ ಪ್ರಚಾರದ ವೇಳೆ ಹೈದರಾಬಾದ್‌ನಲ್ಲಿ ಐಮ್ಯಾಕ್ಸ್ (IMAX) ಸ್ಕ್ರೀನ್ ಇಲ್ಲದಿರುವ ಬಗ್ಗೆ ರಾಜಮೌಳಿ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ದೊಡ್ಡ ಬಜೆಟ್​ನ ಮತ್ತು ದೃಶ್ಯ ವೈಭವದ ಸಿನಿಮಾಗಳನ್ನು ನೀಡುವ ಟಾಲಿವುಡ್‌ನಲ್ಲೇ ಒಂದು ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಥಿಯೇಟರ್ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ದರು. ಆದರೆ ಆ ಕೊರತೆಯನ್ನು ಮಹೇಶ್ ಬಾಬು ನೀಗಿಸಿದ್ದಾರೆ….

Read More

Weather Forecast: ಕರ್ನಾಟಕದಲ್ಲಿ ಮುಂದಿನ ಕೆಲ ದಿನ ಭಾರೀ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು, ಜೂನ್​ 01: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಜೂನ್ 1 ರಿಂದ 4ರವರೆಗೆ ರಾಜ್ಯದ ಒಳನಾಡು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇದೇ ರೀತಿಯಾಗಿ ಜೂನ್ 3 ರಿಂದ 5ರವರೆಗೆ ಕರಾವಳಿ ಜಿಲ್ಲೆಗಳಲ್ಲೂ ಸಹ ಮಳೆಯಾಗುವ ಸಾಧ್ಯತೆ ಇದೆ. ಮುಖ್ಯಾಂಶಗಳು ಭಾರೀ…

Read More

IPL 2026 Final: ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್; ವಿಡಿಯೋ

ತನ್ನದೇ ಆಟಗಾರರ ಕಾಲೆಳೆದು ನಗೆ ಚಟಾಕಿ ಹಾರಿಸಲೆಂದೇ ಕಲಾವಿದನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿರುವ ಏಕೈಕ ಐಪಿಎಲ್ ಫ್ರಾಂಚೈಸಿಯೇ ಎಂದರೆ ಅದು ಆರ್​ಸಿಬಿ. 2014 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡ ನಿರೂಪಕ ಮತ್ತು ಹಾಸ್ಯಗಾರ ಡ್ಯಾನಿಶ್ ಸೇಠ್ ಕಿತಾಪತಿ ಮಾಡುವುದರಿಂದಲೇ ಫೇಮಸ್. ಆರ್​ಸಿಬಿ ಪಾಳಯದಲ್ಲಿ ಮಿ. ನಾಗ್ಸ್ ಎಂದೇ ಖ್ಯಾತರಾಗಿರುವ ಡ್ಯಾನಿಶ್ ಸೇಠ್ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಕ್ಯಾಂಪ್​​ಗೆ ಭೇಟಿ ನೀಡಿ ತಂಡದ ಆಟಗಾರರ ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಅದರಂತೆ ಈ ಭಾರಿಯ ಐಪಿಎಲ್​ನಲ್ಲೂ ಅದೇ ಕೆಲಸ ಮಾಡಿರುವ ಡ್ಯಾನಿಶ್…

Read More

ಕ್ಷೇತ್ರ ತ್ಯಾಗಕ್ಕೆ ಸುಮಲತಾಗೆ ಸಿಗುತ್ತಾ ಪ್ರತಿಫಲ? ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

ಬೆಂಗಳೂರು, (ಜೂನ್ 01): ಕರ್ನಾಟಕ ರಾಜ್ಯಸಭಾ  ಚುನಾವಣೆ (Karnataka Rajyasabha Election) ತೀವ್ರ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​​ನಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇವಲ ಒಂದೇ ಸ್ಥಾನ ದೊರೆಯಲಿದ್ದು, ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರನ್ನೆ (HD Devegowda) ಮುಂದುವರೆಸಬೇಕೆಂದು ಪಟ್ಟು ಹಿಡಿದಿದೆ. ಆದರೂ  ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ (BJP) ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ. ಮೊನ್ನೆ…

Read More

ಪದೇಪದೇ ತಲೆನೋವು ಬರುತ್ತಾ? ಈ ರೀತಿಯಾಗುವುದಕ್ಕೂ ಹೈ ಬಿಪಿಗೂ ಸಂಬಂಧವಿದೆಯೇ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (High Blood Pressure) ಸಮಸ್ಯೆ ಯುವಕರಲ್ಲಿಯೂ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅನೇಕರಲ್ಲಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಹಲವರು ಸಾಮಾನ್ಯ ದಣಿವು, ಒತ್ತಡ ಅಥವಾ ನಿದ್ರಾಹೀನತೆಯ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ನಿಮಗೆ ತಿಳಿದಿರಲಿ ಈ ರೀತಿ ಪದೇಪದೇ ಕಾಣಿಸಿಕೊಳ್ಳುವ ತಲೆನೋವು ಆರೋಗ್ಯ ಸಮಸ್ಯೆಯ ಎಚ್ಚರಿಕೆಯ ಸಂಕೇತವೂ ಆಗಿರಬಹುದು. ಹೌದು, ಇದು ದೇಹ ನೀಡುವ ಸೂಚನೆಯಾಗಿರಬಹುದು. ಇದು ಬಿಪಿ ಬಂದಿರುವ ಸೂಚನೆಯಾಗಿರಬಹುದು. ಹಾಗಾದರೆ ಹೈ ಬಿಪಿ ಮತ್ತು ತಲೆನೋವಿಗಿರುವ ಸಂಬಂಧವೇನು, ಯಾವ…

Read More