Category Archives: Blog

Your blog category

ಕಾವ್ಯಾ ಕಳ್ಳತನ ಮಾಡಿದ್ದಾಳೆ, ಮನೆಯಿಂದ ಓಡಿಸಲು ಇಷ್ಟೆಲ್ಲಾ ನಾಟಕ; ನಟಿ ಮೇಲೆಯೇ ಕುಟುಂಬದವರ ಆರೋಪ – Kannada News | Kavya Gowda Family Dispute: Prema Counters Allegations, Exposes Property Row and Harassment

ನಂದೀಶ್ ಪ್ರೇಮಾ ದಂಪತಿ-ಸೋಮಶೇಖರ್​-ಕಾವ್ಯಾ ದಂಪತಿ

‘ನಮ್ಮ ಮೇಲೆ ಹಲ್ಲೆ ನಡೆದಿದೆ’ ಎಂದು ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ಆರೋಪಿಸಿದ್ದರು. ಸೋಮಶೇಖರ್ ಅರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಆಗಿತ್ತು. ಸಹೋದರ ಸಂಬಂಧಿ ಕಡೆಯಿಂದಲೇ ಈ ಹಲ್ಲೆ ಆಗಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಸೋಮಶೇಖರ್ ಸಹೋದರ ನಂದೀಶ್ ಪತ್ನಿ ಪ್ರೇಮಾ ತಮ್ಮ ಭಾಗದ ಕಥೆ ತೆರೆದಿಟ್ಟಿದ್ದಾರೆ. ಕಾವ್ಯಾ ಈ ನಾಟಕವಾಡಲು ಕಾರಣ ತಿಳಿಸಿದ್ದಾರೆ.

‘ನಮ್ಮ ಮಾವನ ಮನೆಯಲ್ಲಿ ನಾವೆಲ್ಲರೂ ಇದ್ದೇವೆ. ಕೆಳ ಮಹಡಿಯಲ್ಲಿ ನಮ್ಮ ಮಾವ ವಾಸವಿದ್ದಾರೆ. ಮೊದಲ ಮಹಡಿಯಲ್ಲಿ ನಾವು, ಎರಡನೇ ಮಹಡಿಯಲ್ಲಿ ಕಾವ್ಯ ಕುಟುಂಬ ವಾಸವಿದೆ. ಅವರವರ ಮನೆಯಲ್ಲಿ ಅವರವರು ಇರಿ ಎಂದು ಮಾವ ಎಲ್ಲರಿಗೂ ತಿಳಿಸಿದ್ದಾರೆ. ಈಗ ನಮ್ಮ ಮನೆ ಕಬಳಿಸಲು ಕಾವ್ಯ ಗೌಡ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ ಪ್ರೇಮಾ.

‘ಸದ್ಯ ನಡೆದಿರುವ ವಿಷಯವನ್ನು ಮಾವನ ಗಮನಕ್ಕೆ ತಂದಿದ್ದೆವು. ಅವರು ಬುದ್ಧಿ ಮಾತು ಹೇಳಿ ಕಳಿಸಿದ್ದರು. ಸಂಬಂಧದಲ್ಲೇ ನಾನು ಮದುವೆ ಆಗಿರೋದು. ಹಾಗಾಗಿ ನನ್ನ ಮಾವನ ಮಾತಿಗೆ ತಲೆ ಬಾಗಿದ್ದೇನೆ. ಇಷ್ಟು ದಿನ ತಾಳ್ಮೆಯಿಂದಲೇ ಇದ್ದೆ.ಆದರೆ ಇವತ್ತು ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಪ್ರೇಮಾ ಹೇಳಿದ್ದಾರೆ.

‘ಕಾವ್ಯಾ ಮನೆಯ ಕುಕ್ ನಮ್ಮ ಅಡುಗೆ ಮನೆಗೆ ಬಂದಿದ್ದರು. ಯಾಕಮ್ಮ ಇಲ್ಲಿ ಬಂದಿದ್ದೀಯಾ ಎಂದು ಕೇಳಿದೆ. ಆದರೆ, ಆಕೆ ಏನೂ ಹೇಳದೆ ಹೋದಳು. ನಂತರ ಕಾವ್ಯಾ ಬಂದು ಇದು ನಮ್ಮ ಮನೆ ಹೊರಗೆ ಹೋಗಿ ಎಂದು ಹೇಳಿ ಗಲಾಟೆ ಮಾಡಿದ್ದಾಳೆ’ ಎಂದು ಕಾವ್ಯಾ ಮೇಲೆಯೇ ಪ್ರೇಮಾ ಗಂಭೀರ ಆರೋಪ ಮಾಡಿದ್ದಾರೆ.

‘ಅದು ನಮ್ಮ ಮಾವ ಕಟ್ಟಿರುವ ಮನೆ. ಅವಳಷ್ಟೇ ಹಕ್ಕು ನನಗೂ ಇದೆ. ಭಾವ ಎಂದು ನೋಡದೆ ನಂದೀಶ್ ಅವರನ್ನು ಕಾವ್ಯಾ ಟ್ರಿಗರ್ ಮಾಡಿದ್ದಾರೆ. ಸೋಮಶೇಖರ್ ಕೂಡ ಬಂದು ಗಲಾಟೆ ಮಾಡಿದ್ದಾರೆ. ಆ ಮನೆ ನಮ್ಮದಲ್ಲ ನಿಜ, ಆದರೆ,ನಮ್ಮ ಮಾವನ ಮನೆ. ಪ್ರೀತಿಯಿಂದ ನಮ್ಮ ಮನೆ ಎಂದು ಹೇಳಿಕೊಳ್ಳುತ್ತೇವೆ. ಮನೆ ಗೃಹ ಪ್ರವೇಶವಾಗಿ ಎರಡೂವರೆ ವರ್ಷ ಆಗಿದೆ. ನಮ್ಮನ್ನು ಮನೆಯಿಂದ ಹೊರಹಾಕಲು ಕಾವ್ಯಾ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ತಾಳೆ’ ಎಂಬುದು ಪ್ರೇಮಾ ಆರೋಪ.

ಇದನ್ನೂ ಓದಿ: ಸಂಬಂಧಿಯಿಂದಲೇ ನಟಿ ಕಾವ್ಯಾ ಗೌಡಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ

‘ನಾನು ಇಲ್ಲದಿದ್ದಾಗ ನಮ್ಮ ಮನೆಗೆಲ್ಲ ಬಂದು ಕಾವ್ಯಾ ದಂಪತಿ ಬೀಗ ಕದ್ದಿದ್ದಾರೆ. ಮನೆಗೆ ಬಂದುಫೋಟೊ ಶೂಟ್ ಮಾಡಿದ್ದಾರೆ. ಕೆಲ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಆಕೆ ಕಲಾವಿದೆ. ಏನೇ ಹೇಳಿದರೂ ಜನರು ನಂಬುತ್ತಾರೆ ಎಂದು ಹೀಗೆಲ್ಲ ಹೇಳಿದ್ದಾಳೆ. ಪ್ಯಾಂಟ್ ಎಲ್ಲಾ ತೆಗೆದು ಸೋಮಶೇಖರ್ ಅಸಹ್ಯವಾಗಿ ವರ್ತಿಸಿದ್ದಾರೆ. ಭವ್ಯಾ ಗೌಡ ನನ್ನ ಪತಿ ಮೇಲೆ ಹಲ್ಲೆ ಮಾಡಿದ್ದಾಳೆ. ನನ್ನ ಕತ್ತಿನ ತಾಳಿಸರ ಕಿತ್ತು ಹಾಕಿದ್ದಾರೆ’ ಎಂದು ಕಾವ್ಯಾ ಸಹೋದರಿಯ ಮೇಲೂ ಪ್ರೇಮಾ ಆರೋಪ ಹೊರಿಸಿದ್ದಾರೆ.

‘ಕಾವ್ಯಾ, ಸೋಮಶೇಖರ್, ಭವ್ಯಾ ಮೇಲೆ ದೂರು ನೀಡಿದ್ದೇನೆ. ಸೋಮವಾರ (ಜನವರಿ 26) ರಾತ್ರಿ ಎಫ್ಐಆರ್ ದಾಖಲಿಸಿದ್ದೇವೆ. ನಮ್ಮ ಮಾವನ ಮರ್ಯಾದೆಗಾಗಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಆಕೆ ಆರೋಪ ಮಾಡಿದ್ದರಿಂದ ಮಾತಾಡೋ ಹಾಗೆ ಆಗಿದೆ. ಸೋಮಶೇಖರ್ ನನ್ನ ತಂದೆಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದಾರೆ. ಚಾಕುವಿಂದ ಹಲ್ಲೆ ಅನ್ನೋದು ಸುಳ್ಳು ಆರೋಪ. ತಾಳ್ಮೆ‌ಯಿಂದ ಇದ್ದಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ’ ಎಂದು ಪ್ರೇಮಾ ದೂರುಗಳ ಸರಮಾಲೆಯನ್ನೇ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳ: ಮಗನ ವಿರುದ್ಧ ದೂರು ನೀಡಿದ ಮರುದಿನವೇ ತಂದೆ ಅನುಮಾನಾಸ್ಪದ ಸಾವು, ಆಗಿದ್ದೇನು? – Kannada News | Koppal: Father Dies Under Mysterious Circumstances a Day After Filing Complaint Against Son; Property Dispute Suspected

ಕೊಪ್ಪಳ, ಜನವರಿ 27: ಮಗನ ವಿರುದ್ಧ ದೂರು ಕೊಟ್ಟ ಮರುದಿ‌ನವೇ ಅನುಮಾನಸ್ಪದವಾಗಿ ಜಮೀನಿನಲ್ಲಿ ತಂದೆ (Father) ಸಾವನ್ನಪ್ಪಿರುವಂತಹ (death) ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ವೆಂಕೋಬಾ ಹಂಚಿನಾಳ (50) ಮೃತ ತಂದೆ. ಆಸ್ತಿಗಾಗಿ ತಂದೆಗೆ ಮಗ ವಿಷ ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ವೆಂಕೋಬಾ ಸಾವಿಗೆ ಆತನ ಮಗ ಮತ್ತು ಸೊಸೆ ಕಾರಣ ಎಂದು ಕನಕಗಿರಿ ಪೊಲೀಸ್ ಠಾಣೆಗೆ ವೆಂಕೋಬಾ ತಾಯಿ ಸೂರಮ್ಮ ದೂರು ನೀಡಿದ್ದಾರೆ.

ನಡೆದದ್ದೇನು?

ವೆಂಕೋಬಾ ಹಂಚಿನಾಳ ಅನುಮಾನಸ್ಪದ ಸಾವು ಇದೀಗ ಹಲವು ಅನುಮಾನ ಹುಟ್ಟುಹಾಕಿದೆ. ವಿಷ ಸೇವಿಸಿ ವೆಂಕೋಬಾ ಮೃತ ಪಟ್ಟಿದ್ದಾರೆ, ಆದರೆ ಇದೊಂದು ಕೊಲೆ ಎನ್ನುವುದು ಮೃತ ವೆಂಕೋಬಾ ತಾಯಿಯ ಆರೋಪ. ಮೃತ ವೆಂಕೋಬಾ ಕಳೆದ ಎರಡು ದಿನಗಳ ಹಿಂದೆ ಕಿರುಕುಳ ಹಿನ್ನೆಲೆ ಮೌಖಿಕವಾಗಿ ಮಗ ವಿರೇಶ, ಸೊಸೆ ಕವಿತಾ ಹಾಗೂ ವೆಂಕೋಬಾ ಹೆಂಡತಿ ವಿರುದ್ದ ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡು ದಿನಗಳ ಹಿಂದೆ ದೂರು ನೀಡಿದ ವೆಂಕೋಬಾ, ನಿನ್ನೆ ಸಂಜೆ ಅನುಮಾನಸ್ಪದಾಗಿ ಸಾವನ್ನಪ್ಪಿದ್ದಾರೆ. ಮಗ ಸೇರಿ ಇತರರು ಕೊಲೆ ಮಾಡಿದ್ದಾರೆಂದು ಮೃತನ ತಾಯಿ ಸೂರಮ್ಮ ದೂರು ನೀಡಿದ್ದಾರೆ.

ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್​​

ಇನ್ನು ವೆಂಕೋಬಾ ಹೇಗೆ ಮೃತಪಟ್ಟರು ಎನ್ನುವುದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಮಗನ ವಿರುದ್ದ ದೂರು ಕೊಟ್ಟಾಗ ಪೊಲೀಸ್ ಠಾಣೆಯಲ್ಲಿ ಮಗ ಹಾಗೂ ಹೆಂಡತಿ ವಿರುದ್ದ ಗಲಾಟೆಯಾಗಿತ್ತು. ಸೊಸೆ ಚಪ್ಪಲಿಯಿಂದ ಹೊಡೆದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಆಸ್ತಿ ವಿಚಾರಕ್ಕೆ ಮಗ ವಿರೇಶ ಹಾಗೂ ತಂದೆ ವೆಂಕೋಬಾ ನಡುವೆ ಗಲಾಟೆಯಾಗಿತ್ತಂತೆ. 10 ಎಕರೆ ಜಮೀನಿಗಾಗಿ ಗಲಾಟೆಗಳಾಗಿದ್ದು, ಕೆಲವು ಭಾರಿ ಗಲಾಟೆ ವಿಕೋಪಕ್ಕೆ ಹೋಗಿತ್ತಂತೆ. ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ವೆಂಕೋಬಾ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ತಂದೆ ಸಾವಿಗೆ ನಾನು ಕಾರಣವಲ್ಲ: ಮಗ ವಿರೇಶ

ಇದಾದ ಮರುದಿನ ವೆಂಕೋಬಾ  ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆದರೆ ನಮ್ಮ ತಂದೆ ಸಾವಿಗೆ ನಾನು ಕಾರಣ ಅಲ್ಲ ಎಂದು ವಿರೇಶ ಹೇಳಿದ್ದು, ಆಸ್ತಿಗಾಗಿ ನಮ್ಮ ತಂದೆಯ ಸಹೋದರಿಯರೇ ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳದಿಂದ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಎರಡೇ ವರ್ಷಕ್ಕೆ ಉಸಿರು ನಿಲ್ಲಿಸಿದ ಕೀರ್ತಿ ಶ್ರೀ, ಆಗಿದ್ದೇನು?

ಒಟ್ಟಾರೆ ಮಗನ ವಿರುದ್ಧವೇ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಆಸ್ತಿಗಾಗಿ ನಡೆದ ಕೊಲೆನಾ, ಅವಮಾನಕ್ಕೆ ಮಾಡಿಕೊಂಡ ಆತ್ಮಹತ್ಯೆನಾ ಅನ್ನೋದು ಪೊಲೀಸರ ತನಿಖೆಯ ನಂತರವೇ ಬಯಲಾಗಬೇಕಿದೆ. ಮೃತನ ತಾಯಿ ಹಾಗೂ ಮಗ ಇಬ್ಬರು ದೂರು-ಪ್ರತಿದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷಾ ವರದಿ ನಂತರವೇ ಸತ್ಯಾಸತ್ಯತೆ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕತ್ತರಿಸಿದರೂ ಸಾಯದೆ ಚಡಪಡಿಸುತ್ತಿರುವ ಮೀನು! ಮಲ್ಪೆ ಬಂದರಿನಲ್ಲಿ ಅಚ್ಚರಿ ಮೂಡಿಸಿದ ವಿಚಿತ್ರ ಘಟನೆ – Kannada News | Bangude Fish Still Alive After Being Cut at Malpe Harbour, Udupi, amazing Viral Video

ಉಡುಪಿ, ಜನವರಿ 27: ಗ್ರಾಹಕರಿಗೆ ನೀಡಲೆಂದು ಕತ್ತರಿಸಿದ ಬಂಗುಡೆ ಮೀನೊಂದು ಸಾಯದೆ ಮತ್ತೂ ಚಡಪಡಿಸಿದ ಅಚ್ಚರಿಯ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದ್ದು, ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಮಲ್ಪೆ ಬಂದರಿನಲ್ಲಿ ಮೀನು ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಮೀನನ್ನು ಅಲ್ಲಿಯೇ ಕತ್ತರಿಸಿ ಕೊಡುವಂತೆ ಕೇಳಿಕೊಂಡಾಗ, ಮಹಿಳೆ ಮೀನನ್ನು ಕತ್ತರಿಸಿ ಟಬ್‌ಗೆ ಹಾಕಿದ್ದಾರೆ. ಆದರೆ, ಕತ್ತರಿಸಿದ ಬಳಿಕವೂ ಮೀನು ಜೀವಂತವಾಗಿ ಚಡಪಡಿಸುತ್ತಿರುವುದು ಗಮನಕ್ಕೆ ಬಂದಿದೆ.

ಈ ವಿಚಿತ್ರ ದೃಶ್ಯವನ್ನು ಕಂಡು ಅಲ್ಲಿದ್ದ ಇತರ ಮೀನು ಮಾರಾಟಗಾರರು ಹಾಗೂ ಗ್ರಾಹಕರು ಹೌಹಾರಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಕತ್ತರಿಸಿದ ಬಳಿಕವೂ ಜೀವಂತವಾಗಿರುವ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಮಹಾತ್ಮ ಗಾಂಧಿ ಎಂದು ಹೆಸರು ಇಡುತ್ತೇವೆ: ಡಿಕೆಶಿ ಘೋಷಣೆ – Kannada News | Karnataka Gram Panchayats to be Named After Mahatma Gandhi: DK Shivakumar Announces

ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಮಹಾತ್ಮ ಗಾಂಧಿ ಎಂದು ಹೆಸರು ಇಡುತ್ತೇವೆ: ಡಿಕೆಶಿ ಘೋಷಣೆ

ಬೆಂಗಳೂರು, ಜನವರಿ 27: ಮಹಾತ್ಮ ಗಾಂಧೀಜಿ ಹೆಸರನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಾಮಕರಣ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಮನ್‌ರೇಗಾ (MNREGA) ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು ಇಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳನ್ನು ದುರ್ಬಲಗೊಳಿಸುತ್ತಿದ್ದು, ಪಂಚಾಯಿತಿಗಳ ಅಧಿಕಾರವನ್ನು ಕಸಿದುಕೊಂಡು, ಉದ್ಯೋಗದ ಹಕ್ಕನ್ನು ಬಡವರಿಂದ ಕಿತ್ತುಕೊಳ್ಳುತ್ತಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು. ಮನ್‌ರೇಗಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಈ ವಿಚಾರವಾಗಿ ರಾಜಭವನಕ್ಕೆ ತೆರಳುತ್ತೇವೆ. ಅಗತ್ಯವಿದ್ದರೆ ಬಂಧನಕ್ಕೂ ಸಿದ್ಧವಾಗಿದ್ದೇವೆ ಎಂದು ಹೇಳಿದರು. ರಾಜ್ಯಪಾಲರು ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.

ಸಿದ್ದರಾಮಯ್ಯ ಏನಂದ್ರು?

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಎಂಬ ಯೋಜನೆಯನ್ನು ಜಾರಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಈ ಯೋಜನೆಯಲ್ಲಿ ರಾಮ ಎಂಬುದು ಕೇವಲ ಹೆಸರಿನಷ್ಟೇ, ಬಡವರ ಹಿತದ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದರು. ದಶರಥ ರಾಮ, ಕೌಸಲ್ಯ ರಾಮ ಅಥವಾ ಸೀತಾರಾಮ ಯಾರೂ ಈ ಕಾಯ್ದೆಯಲ್ಲಿ ಇಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರಿಗೆ ದೂರು ಸಲ್ಲಿಕೆ

ಬಡವರು, ದಲಿತರು ಮತ್ತು ರೈತರ ಪರ ನಿಜವಾಗಿ ಹೋರಾಟ ಮಾಡುವ ಪಕ್ಷ ಕಾಂಗ್ರೆಸ್ ಮಾತ್ರ. ಬಡವರ ಕಾರ್ಯಕ್ರಮಗಳನ್ನು ಬಿಜೆಪಿಯವರು ರದ್ದು ಮಾಡಿದ್ದು, ಇದಕ್ಕೆ ಆರ್‌ಎಸ್‌ಎಸ್ ಮಾರ್ಗದರ್ಶನ ನೀಡುತ್ತಿದೆ ಎಂದು ಸಿಎಂ ಆರೋಪಿಸಿದರು. ಮನ್​ರೇಗಾ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ಲೋಕಭವನದಲ್ಲಿ ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಆಟಗಾರ

Source link

ರಾಜೀವ್ ಗೌಡನಿಗೆ ಆಶ್ರಯ ನೀಡಿದ್ದ ಬಹುಕೋಟಿ ಒಡೆಯ ಸಹ ಅರೆಸ್ಟ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ – Kannada News | Threatening shidlaghatta Lady Officer: Mangaluru businessman michael Who sheltering Accused Rajeev Gowda, here Is Chikkaballapur SP Press conference

ಚಿಕ್ಕಬಳ್ಳಾಪುರ, (ಜನವರಿ 27): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ನಿಂದಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ (shidlaghatta threatening case) ಸಂಬಂಧಿಸಿದಂತೆ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ (Rajeev Gowda) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. 14 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನನ್ನು ಕೇರಳ ಗಡಿಯಲ್ಲಿ ಬಂಧಿಸುವಲ್ಲಿ ಶಿಡ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ರಾಜೀವ್​​ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಮೈಕಲ್​​​ ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ಮಾತನಾಡಿರುವ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ,
ಕೇರಳದಲ್ಲಿ ಪ್ರಮುಖ ಆರೋಪಿ ರಾಜೀವ್ ಗೌಡ ಬಂಧಿಸಲಾಗಿದೆ. ರಾಜೀವ್ ಗೌಡ ಜೊತೆಗಿದ್ದ ಮೈಕಲ್​ನನ್ನೂ ಬಂಧಿಸಲಾಗಿದೆ. ಆರೋಪಿ ಬಂಧನಕ್ಕೆ 3 ಪೊಲೀಸರ ತಂಡವನ್ನು ರಚಿಸಲಾಗಿತ್ತು.ವಿವಿಧ ಜಿಲ್ಲೆಗಳ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲಾಗಿತ್ತು. ಮಂಗಳೂರಿನಿಂದ ಕೇರಳಕ್ಕೆ ಹೋಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಕೆಎ 03, ಎಂಎಕ್ಸ್​​ 9108 ಕಾರಿನಲ್ಲಿ ಪರಾರಿಯಾಗಿದ್ದ ರಾಜೀವ್ ಗೌಡ ಕಾರನ್ನು ಫಾಲೋ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರಿಂದ ಯಾವುದೇ ವಿಷಯಗಳು, ಮಾಹಿತಿ ಸೋರಿಕೆ ಆಗಿಲ್ಲ. ನಮ್ಮ ಪೊಲೀಸರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಪೊಲೀಸರಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಸಾರಿಗೆ ಇಲಾಖೆಯಿಂದ ಹೊಸ ನಿಯಮ – Kannada News | Strict New Traffic Rules in Karnataka: Driving Licences to Be Cancelled for Repeat Violations

ಬೆಂಗಳೂರು, ಜನವರಿ 27: ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಪುನರಾವರ್ತಿತ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಸಾರಿಗೆ ಇಲಾಖೆಯ ಹೊಸ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತಂದಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ವಾಹನ ಸವಾರರು ಒಂದು ವರ್ಷದ ಅವಧಿಯಲ್ಲಿ ಐದು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಚಾಲನಾ ಪರವಾನಿಗೆ ರದ್ದಾಗಲಿದೆ. ಮೋಟಾರು ವಾಹನ ಕಾಯ್ದೆಗೆ ಕೇಂದ್ರ ತಂದ ತಿದ್ದುಪಡಿಯ ಅನ್ವಯ ಹೊಸ ನಿಯಮ ಈ ವರ್ಷದ ಜನವರಿ 1ರಿಂದ ಜಾರಿಗೆ ಬಂದಿದೆ. ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಪರವಾನಿಗೆಯನ್ನು ರದ್ದುಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಅತಿಯಾದ ವೇಗ, ಕುಡಿದು ಚಾಲನೆ, ಮೊಬೈಲ್ ಬಳಕೆ, ಸಿಗ್ನಲ್ ಜಂಪ್, ಹೆಲ್ಮೆಟ್ ಅಥವಾ ಸೀಟ್‌ಬೆಲ್ಟ್ ಧರಿಸದಿರುವುದು ಸೇರಿದಂತೆ ಒಟ್ಟು 24 ಅಪರಾಧಗಳಿಗೆ ಈ ನಿಯಮ ಅನ್ವಯವಾಗಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ – Kannada News | India EU sign FTA, described as mother of all deals, win win for both says PM Modi

ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ಮುಖಂಡರು

ನವದೆಹಲಿ, ಜನವರಿ 27: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (India-EU trade deal) ಸಹಿ ಹಾಕಲಾಗಿದೆ. ಭಾರತ ಮತ್ತು ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿರುವುದನ್ನು ಘೋಷಿಸಲಾಗಿದೆ. ಇದರೊಂದಿಗೆ, ಎರಡು ದಶಕಗಳಿಂದ ನಡೆಯುತ್ತಿದ್ದ ಅವಿರತ ಪ್ರಯತ್ನಕ್ಕೆ ಫಲ ಸಿಕ್ಕಿದಂತಾಗಿದೆ. ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳ ಮಾರುಕಟ್ಟೆ ಪ್ರವೇಶ ಒಂದೇ ಒಪ್ಪಂದದಲ್ಲಿ ಭಾರತಕ್ಕೆ ಸಿಗಲಿದೆ. ಯೂರೋಪಿಯನ್ ಕೌನ್ಸಿಲ್ ಮುಖ್ಯಸ್ಥ ಆಂಟೋನಿಯೋ ಕೋಸ್ಟಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೀಲ್​ಗೆ ಸಹಿ ಹಾಕಿದ್ದಾರೆ.

ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮದರ್ ಆಫ್ ಆಲ್ ಡೀಲ್ಸ್’ (ವಿಶ್ವದ ಅತಿದೊಡ್ಡ ಒಪ್ಪಂದ) ಎಂದು ಬಣ್ಣಿಸಿದ್ದಾರೆ. ಭಾರತದ ಜವಳಿ, ಹರಳು, ಆಭರಣ, ಲೆದರ್ ಇತ್ಯಾದಿ ಸೆಕ್ಟರ್​ಗಳಿಗೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಯೂರೋಪ್​ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?

ವರ್ಷಗಳಿಂದ ನಡೆದ ಪ್ರಯತ್ನಗಳಿಗೆ ಫಲ

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಫ್ರೀ ಟ್ರೇಡ್ ಡೀಲ್​ಗಾಗಿ 2007ರಲ್ಲೇ ಮಾತುಕತೆ ಆರಂಭವಾಗಿತ್ತು. ಟ್ಯಾರಿಫ್, ಮಾರುಕಟ್ಟೆ ಪ್ರವೇಶ ಮತ್ತು ನಿಯಮಗಳ ಕಾರಣಗಳಿಂದ 2013ರಲ್ಲಿ ಮಾತುಕತೆಗಳು ಸ್ಥಗಿತಗೊಂಡಿದ್ದವು. 2022ರಲ್ಲಿ ಮತ್ತೆ ಚಾಲನೆಗೊಂಡಿತು. ಜಾಗತಿಕ ವ್ಯಾಪಾರ ಬಿಕ್ಕಟ್ಟು ಉದ್ಭವಗೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಒಪ್ಪಂದ ಸಂಬಂಧ ಮಾತುಕತೆಗೆ ವೇಗ ಸಿಕ್ಕಿತು.

ಮದರ್ ಆಫ್ ಆಲ್ ಡೀಲ್ಸ್ ಎನ್ನೋದು ಯಾಕೆ?

ಭಾರತ ವಿಶ್ವದಲ್ಲೇ ನಾಲ್ಕನೇ ಅಥವಾ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿದೆ. ಐರೋಪ್ಯ ಒಕ್ಕೂಟದಲ್ಲಿ 27 ದೇಶಗಳಿವೆ. ಯೂರೋಪ್ ಖಂಡದ ಅರ್ಧಕ್ಕೂ ಹೆಚ್ಚು ದೇಶಗಳು ಈ ಯೂನಿಯನ್​ನ ಭಾಗವಾಗಿವೆ. ಭಾರತ ಹಾಗೂ ಈ 27 ದೇಶಗಳ ಆರ್ಥಿಕತೆಯನ್ನು ಗಣನೆಗೆ ತೆಗೆದುಕೊಂಡರೆ, ಅದು ವಿಶ್ವದ ಶೇ. 25ರಷ್ಟು ಜಿಡಿಪಿಯಷ್ಟಾಗುತ್ತದೆ.

ಇದನ್ನೂ ಓದಿ: CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ

200 ಕೋಟಿ ಗ್ರಾಹಕರಿರುವ ಬೃಹತ್ ಮಾರುಕಟ್ಟೆ ಸೃಷ್ಟಿಯಾಗುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಈ ಎರಡು ಮಹಾನ್ ಆರ್ಥಿಕ ಶಕ್ತಿಗಳ ನಡುವೆ ನಡೆದ ದ್ವಿಪಕ್ಷೀಯ ವ್ಯಾಪಾರ ಗಣನೀಯವಾಗಿದೆ. ಸರಕುಗಳ ವಹಿವಾಟು 136.5 ಬಿಲಿಯನ್ ಡಾಲರ್ ಇದ್ದರೆ, ಸರ್ವಿಸಸ್ ಟ್ರೇಡ್ 80 ಬಿಲಿಯನ್ ಡಾಲರ್​ನಷ್ಟು ಇತ್ತು. ಒಟ್ಟೂ ಮಾರುಕಟ್ಟೆ ಗಾತ್ರ ಗಮನಿಸಿದಾಗ ಈ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ ಇನ್ನೂ ಬೃಹತ್ ಆಗುವ ಎಲ್ಲಾ ಸಾಧ್ಯತೆ ಇದೆ.

ಇತರ ಐರೋಪ್ಯ ದೇಶಗಳೊಂದಿಗೂ ಭಾರತದ ಸಂಬಂಧ

ಯೂರೋಪ್​ನ ಇತರ ದೇಶಗಳೊಂದಿಗೂ ಭಾರತ ವ್ಯಾಪಾರ ಒಪ್ಪಂದ ಕುದುರಿಸಿದೆ. ಐರೋಪ್ಯ ಒಕ್ಕೂಟದ ಭಾಗವಾಗಿರದ ಬ್ರಿಟನ್ ಜೊತೆ ಭಾರತ ಎಫ್​ಟಿಎ ಮಾಡಿಕೊಂಡಿದೆ. ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ (ಇಎಫ್​ಟಿಎ) ಜೊತೆಗೂ ಒಪ್ಪಂದ ಕುದುರಿದೆ. ಬಹಳ ಮುಂದುವರಿದ ಆರ್ಥಿಕತೆಗಳಾದ ಸ್ವಿಟ್ಜರ್ಲ್ಯಾಂಡ್, ನಾರ್ವೇ, ಲೇಕ್ಟನ್​ಸ್ಟೀನ್ ಮತ್ತು ಐಸ್​ಲ್ಯಾಂಡ್ ದೇಶಗಳು ಇಎಫ್​ಟಿಎನಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು? – Kannada News | Gilli Nata close friend Guru talks about Gilli’s Journey

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ವಿಜೇತ ಆಗಿದ್ದಾರೆ ಗಿಲ್ಲಿ ನಟ. ಅವರ ಜನಪ್ರಿಯತೆ ಎತ್ತರಕ್ಕೇರಿದೆ. ಗಿಲ್ಲಿ ಹೋದರು ಜನ ಮುಗಿ ಬೀಳುತ್ತಿದ್ದಾರೆ. ಗಿಲ್ಲಿ ಅವರ ಆಪ್ತ ಗುರು ಅವರು ಆರಂಭದಲ್ಲಿ ಗಿಲ್ಲಿ ಹೇಗಿದ್ದರು, ಆರಂಭದಲ್ಲಿ ಹೇಗೆಲ್ಲ ಕಷ್ಟಪಟ್ಟರು ಎಂಬುದನ್ನು ಗುರು ಅವರು ಹೇಳಿದ್ದಾರೆ. ಇದೀಗ ಬಿಗ್​​ಬಾಸ್​ ನಿಂದಾಗಿ ಅವರಿಗೆ ಸಿಕ್ಕಿರುವ ಜನಪ್ರಿಯತೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ಗಿಲ್ಲಿ ಹಾಗೂ ಕಾವ್ಯಾ ಅವರು ಒಟ್ಟಿಗೆ ಸಿನಿಮಾ ಮಾಡುತ್ತಾರಾ? ಗುರು ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು? – Kannada News | Gadag: Treasure Rumours Spread to Betageri After Lakkundi Discovery

ಗದಗ, ಜನವರಿ 27: ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬಳಿಕ ರಾಜ್ಯದಾದ್ಯಂತ ನಿಧಿ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಇದೀಗ ಬೆಟಗೇರಿಯಲ್ಲಿರುವ ನಿಗೂಢ ಗವಿಯೊಂದರಲ್ಲಿ ನಿಧಿ ಅಡಗಿದೆ ಎಂಬ ಮಾತುಗಳು ಹೊಸ ಚರ್ಚೆಗೆ ಕಾರಣವಾಗಿದೆ. ಗ್ರಾಮಸ್ಥರ ಪ್ರಕಾರ, ಈ ನಿಧಿಯನ್ನು ಏಳು ಹೆಡೆಯ ಸರ್ಪವೊಂದು ಕಾಯುತ್ತಿದೆಯಂತೆ. ಹಾವು ಹೊರಬಂದಾಗ ಸಾಂಬ್ರಾಣಿ ವಾಸನೆ ಬರುತ್ತದೆ. ತಮ್ಮ ತಂದೆ ಮತ್ತು ಅಜ್ಜಂದಿರು ಕೂಡ ಇಲ್ಲಿ ನಿಧಿ ಇರುವುದನ್ನು ನೋಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೊಡ್ಡ ಗಾತ್ರದ ಹಾವುಗಳು ಇಲ್ಲೇ ಸುತ್ತಾಡಿಕೊಂಡಿರುತ್ತವೆ ಎಂದೂ ತಿಳಿಸಿದ್ದಾರೆ. ಈ ಗವಿಯಿಂದ ಶಿವಾನಂದ ಮಠ ಮತ್ತು ಕೆರಂಬನಕಲ್ಲ ದೇವಸ್ಥಾನಕ್ಕೆ ದಾರಿ ಇದೆ ಎಂಬ ನಂಬಿಕೆಯೂ ಇದೆ. ನಾಗದೇವರ ಕಲ್ಲುಗಳು ಕಾವಲು ಕಾಯುತ್ತಿದ್ದು, ಮೂರು ಹೆಡೆ ಮತ್ತು ಎರಡು ಹೆಡೆಯ ಜೋಡಿ ಹಾವುಗಳು ಇಲ್ಲಿವೆ. ಈ ಹಾವುಗಳು ಇಲ್ಲಿಯವರೆಗೆ ಯಾರಿಗೂ ತೊಂದರೆ ನೀಡಿಲ್ಲ ಎಂಬುದು ಗ್ರಾಮಸ್ಥರ ಮಾತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link