Category Archives: Blog

Your blog category

Video: ತನ್ನ ಹೆಸರಿನ ಜತೆಗೆ ಬೆಂಗಳೂರು ಸರ್‌ನೇಮ್‌ ಆಗಿ ಬರಲು ಇದೇ ಕಾರಣ ಎಂದು ವಿವರಿಸಿದ ಮಹಿಳೆ – Kannada News | Bengaluru: A woman explains how she came to have Bengaluru as a surname alongside her name

ಬೆಂಗಳೂರು, ಜನವರಿ 27: ಕೆಲಸಕ್ಕೆಂದು ಬೆಂಗಳೂರಿಗೆ (Bengaluru) ಹೋಗುವ ಯುವಕ ಯುವತಿಯರಿಗೆ ಪ್ರಾರಂಭದಲ್ಲಿ ಈ ನಗರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ದಿನ ಕಳೆಯುತ್ತ ಹೋದಂತೆ ತಮ್ಮ ಊರಿನಷ್ಟೇ ಹತ್ತಿರವಾಗಿ ಬಿಟ್ಟಿರುತ್ತದೆ. ಕೆಲವರು ಬೆಂಗಳೂರಿನಲ್ಲಿ ಸೆಟಲ್‌ ಆಗಿ ಬಿಡುತ್ತಾರೆ. ಆದರೆ ಮಹಿಳೆಯೊಬ್ಬರು ನನ್ನ ಸರ್‌ನೇಮ್‌ ಬೇರೆಯದ್ದೇ ಆಗಿತ್ತು. ತನ್ನ ಹೆಸರಿನ ಜತೆಗೆ ಬೆಂಗಳೂರು ಸರ್‌ನೇಮ್‌ ಆಗಿ ಬಂದದ್ದು ಹೇಗೆ ಎಂದು ಹೇಳಿದ್ದಾರೆ. ಉಪನಾಮ ಬದಲಾದ ಬಗ್ಗೆ ಹಂಚಿಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ವಿಪ್ರಾ ಬೆಂಗಳೂರು (Vipra Bengaluru) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತನ್ನ ಹೆಸರು ವಿಪ್ರಾ ಬೆಂಗಳೂರು ಎಂದು ಹೇಳಿಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ, ನನ್ನ ಸರ್‌ನೇಮ್‌ ಬೇರೆಯದ್ದೇ ಆಗಿತ್ತು. ನನ್ನ ಅಜ್ಜ ತಮ್ಮ ಮಕ್ಕಳಿಗೆ (ನನ್ನ ತಂದೆಗೆ) ಸರ್ ನೇಮ್ ನೀಡಿರಲಿಲ್ಲ. ಆ ಸಮಯದಲ್ಲಿ ಜನರು ತಮ್ಮಸರ್‌ನೇಮ್‌, ಸ್ಥಾನಮಾನಗಳ ಆಧಾರದ ಮೇಲೆ ಅವರನ್ನು ನಿರ್ಣಯಿಸುತ್ತಾರೆ ಎಂದು ನಂಬಿದ್ದರು. ಹೀಗಾಗಿ ತಮ್ಮ ಮಕ್ಕಳು ಸರ್‌ನೇಮ್‌ ನೀಡಿರಲಿಲ್ಲ. ಆದರೆ ನಾನು ಹುಟ್ಟಿದಾಗ, ಸರ್‌ನೇಮ್‌ ಇಡುವುದು ಕಡ್ಡಾಯವಾಯಿತು. ನಾನು ಇಲ್ಲಿ ಜನಿಸಿದ ಕಾರಣ, ಬೆಂಗಳೂರು ನನ್ನ ಸರ್‌ನೇಮ್‌ ಆಯಿತು ಎಂದು ಹೇಳಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ನಮ್ಮ ತಂದೆಯವರಿಗೆ ಒಂದು ಆದರ್ಶವಿತ್ತು. ತಮ್ಮ ಸರ್‌ನೇಮ್‌ ಇಲ್ಲದೇ ತಮ್ಮ ಮಕ್ಕಳು ಸ್ವತಂತ್ರವಾಗಿ ಬದುಕಬೇಕೆಂಬ ಆಸೆಯಿತ್ತು. ಹಾಗಾಗಿ, ಮದುವೆಗೂ ಮುನ್ನವೇ ತಮಗೆ ಹುಟ್ಟುವ ಮಕ್ಕಳಿಗೆ ತಮ್ಮ ಸರ್ ನೇಮ್ ಇಡಬಾರದೆಂದು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಅವರ ಮದುವೆಯಾದ ನಂತರ ನಾನು ಹುಟ್ಟಿದೆ. ಆಗ ತಮ್ಮ ರೂಢಿಗತ ಸರ್ ನೇಮ್ ಬಿಟ್ಟು ಬೇರೆ ಏನನ್ನು ಇಡಬೇಕೆಂದು ಆಲೋಚನೆ ಮಾಡಿದ್ದರು. ಹೀಗಾಗಿ ಬದುಕು ಕೊಟ್ಟ ಬೆಂಗಳೂರಿನ ಹೆಸರನ್ನೇ ಇಡೋಣ ಎಂದು ತೀರ್ಮಾನಿಸಿ ಬೆಂಗಳೂರು ಎಂದು ನನ್ನ ಹೆಸರಿನ ಜೊತೆಗೆ ಸರ್ ನೇಮ್ ಆಗಿ ಇಟ್ಟರು ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: ಜೀವನವನ್ನು ಆನಂದಿಸಲು ಬೆಂಗಳೂರನ್ನು ಹೀಗೆ ಬಳಸಿಕೊಳ್ಳಿ ಎಂದ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ತಂದೆಯ ಆಲೋಚನೆ ನಿಜಕ್ಕೂ ಚೆನ್ನಾಗಿತ್ತು ಎಂದಿದ್ದಾರೆ. ಮತ್ತೊಬ್ಬರು, ಬೆಂಗಳೂರಿನ ಹುಡುಗಿ ಎಂದು ಕರೆದರೆ, ಮತ್ತೊಬ್ಬರು, ನಿಮ್ಮ ತಂದೆ ಆಗಿನ ಕಾಲದಲ್ಲಿ ಬಹಳ ಮುಂದಿದ್ದರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:36 pm, Tue, 27 January 26

Source link

ಬ್ಲಿಂಕಿಟ್​​ನ ಸೇವೆಗೆ ಮನಸೋತ ಬೆಂಗಳೂರು ಮೂಲದ ಸಿಇಒ: ಔಷಧಿ ಬರುವ ಮೊದಲೇ ಮಧ್ಯರಾತ್ರಿ ವೈದ್ಯರ ಕರೆ – Kannada News | BG Mahesh Praises Blinkit: India’s Quick Commerce Delivers Meds with Doctor Check in 10 Mins

ಬೆಂಗಳೂರು ಮೂಲದ ಸಿಇಒ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಬಿ.ಜಿ. ಮಹೇಶ್ (BG Mahesh) ಅವರು ಹಂಚಿಕೊಂಡ ಈ ಅನುಭವವು ಭಾರತದ ‘ಕ್ವಿಕ್ ಕಾಮರ್ಸ್’ (Quick Commerce) ಕ್ಷೇತ್ರವು ಎಷ್ಟು ವೇಗವಾಗಿ ಮತ್ತು ಜವಾಬ್ದಾರಿಯುತವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿ.ಜಿ. ಮಹೇಶ್ ಅವರ ಕುಟುಂಬದ ಸದಸ್ಯರೊಬ್ಬರು ಮಧ್ಯರಾತ್ರಿ ಸುಮಾರು 12 ಗಂಟೆಗೆ ಬ್ಲಿಂಕಿಟ್ (Blinkit) ಮೂಲಕ ಸಾಮಾನ್ಯ ಔಷಧಿ (OTC Medicine) ಆರ್ಡರ್ ಮಾಡಿದ್ದರು. ಆದರೆ, ಔಷಧಿ ಕೈ ಸೇರುವ ಮೊದಲೇ ಒಬ್ಬ ವೈದ್ಯರು ಕರೆ ಮಾಡಿ, ರೋಗಿಯ ವಯಸ್ಸು ಮತ್ತು ರೋಗಲಕ್ಷಣಗಳ ಬಗ್ಗೆ ವಿಚಾರಿಸಿದರು. “ವಿಶ್ವದ ಬೇರೆಲ್ಲೂ ಇಂತಹ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಮಹೇಶ್ ಬ್ಲಿಂಕಿಟ್ ಅನ್ನು ಶ್ಲಾಘಿಸಿದ್ದಾರೆ.

ನಟ್ಟಿಗರೊಬ್ಬರು ತಮ್ಮ ಜೀವನದಲ್ಲಾದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ರಾತ್ರಿ 2 ಗಂಟೆಗೆ ಜ್ವರದ ಮಾತ್ರೆ ಆರ್ಡರ್ ಮಾಡಿದಾಗ ವೈದ್ಯರು ಕರೆ ಮಾಡಿ ಅಲರ್ಜಿಗಳ ಬಗ್ಗೆ ವಿಚಾರಿಸಿದ್ದು ಅವರಿಗೆ ಭರವಸೆ ಮೂಡಿಸಿತ್ತು. ಭಾರತದ ಈ ವ್ಯವಸ್ಥೆಯನ್ನು ಅಮೆರಿಕಾದಲ್ಲಿನ ಪರಿಸ್ಥಿತಿಗೆ ಹೋಲಿಸಿದ ವ್ಯಕ್ತಿಯೊಬ್ಬರು, ಡೆಲಿವರಿ ಮಾಡುವವರು ಔಷಧಿ ಬೆಲೆಗಿಂತ 10 ಪಟ್ಟು ಹೆಚ್ಚು ಟಿಪ್ಸ್ ಕೇಳುತ್ತಾರೆ ಮತ್ತು ಅಲ್ಲಿನ ಸೇವೆ ಇಷ್ಟು ವೇಗವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಬ್ಲಿಂಕಿಟ್ ಕೇವಲ ವಸ್ತುಗಳನ್ನು ಮಾತ್ರ ತಲುಪಿಸುತ್ತಿಲ್ಲ. ತುರ್ತು ದಾಖಲೆಗಳು, ಆಂಬುಲೆನ್ಸ್ ಮತ್ತು ವೈದ್ಯಕೀಯ ನೆರವಿನ ಮೂಲಕ ಜನರ ಜೀವನವನ್ನೇ ಬದಲಿಸಿದೆ ಎಂಬುದು ಅನೇಕರ ಅಭಿಪ್ರಾಯ.

ಇಲ್ಲಿದೆ ನೋಡಿ ಪೋಸ್ಟ್​​:

ಬೆಂಗಳೂರಿನ ಆಯ್ದ ಭಾಗಗಳಲ್ಲಿ ಪ್ರಿಸ್ಕ್ರಿಪ್ಷನ್ ಮತ್ತು ಓಟಿಸಿ ಔಷಧಿಗಳನ್ನು 10 ನಿಮಿಷದಲ್ಲಿ ವಿತರಣೆ ಮಾಡುತ್ತದೆ. ಔಷಧಿ ಕಳುಹಿಸುವ ಮೊದಲು ಅರ್ಹ ವೈದ್ಯರಿಂದ ತಕ್ಷಣದ ಸಮಾಲೋಚನೆ ಅಥವಾ ಪ್ರಿಸ್ಕ್ರಿಪ್ಷನ್ ಪರಿಶೀಲನೆ ಮಾಡುತ್ತದೆ. ಗುರುಗ್ರಾಮದಂತಹ ನಗರಗಳಲ್ಲಿ ಬ್ಲಿಂಕಿಟ್ 10 ನಿಮಿಷಗಳಲ್ಲಿ ಆಂಬುಲೆನ್ಸ್ ತಲುಪಿಸುವ ಸೇವೆಯನ್ನು ಆರಂಭಿಸಿದೆ. 2026 ರಲ್ಲಿ ಆರೋಗ್ಯ ತಂತ್ರಜ್ಞಾನ ವಲಯದಲ್ಲಿ ಬ್ಲಿಂಕಿಟ್‌ನ ವಿಸ್ತರಣೆ ಮಾಡಿಕೊಂಡಿದೆ. ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಬ್ಲಿಂಕಿಟ್ ಪ್ರಿಸ್ಕ್ರಿಪ್ಷನ್ ಮತ್ತು OTC ಔಷಧಿಗಳೆರಡಕ್ಕೂ 10 ನಿಮಿಷಗಳ ವಿತರಣೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ.

ಇದನ್ನೂ ಓದಿ: ಕೆಫೆಯಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ: ಪ್ರತಿ ಹೆಚ್ಚುವರಿ ಗಂಟೆಗೆ 1,000 ರೂ. ದಂಡ

ಬ್ಲಿಂಕಿಟ್ 2026ರಲ್ಲಿ ಹೆಲ್ತ್‌ಟೆಕ್ ಕ್ಷೇತ್ರದಲ್ಲಿ ಹೇಗೆ ಕ್ರಾಂತಿಕಾರಿ ಬದಲಾವಣೆ ತಂದಿದೆ:

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬ್ಲಿಂಕಿಟ್ ಈಗ ಪ್ರಿಸ್ಕ್ರಿಪ್ಷನ್ ಬೇಕಾದ ಔಷಧಿಗಳು ಮತ್ತು ಸಾಮಾನ್ಯ (OTC) ಔಷಧಿಗಳನ್ನು ಕೇವಲ 10 ನಿಮಿಷಗಳಲ್ಲಿ ಮನೆಗೆ ತಲುಪಿಸುತ್ತಿದೆ. ಇದು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವರದಾನವಾಗಿದೆ. ಬಿ.ಜಿ. ಮಹೇಶ್ ಅವರು ಹಂಚಿಕೊಂಡ ಅನುಭವದಂತೆ, ನೀವು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ಆರ್ಡರ್ ಮಾಡಿದರೆ ಅಥವಾ ಪ್ರಿಸ್ಕ್ರಿಪ್ಷನ್ ಹಳೆಯದಾಗಿದ್ದರೆ, ಅದಕ್ಕೂ ಕೂಡ ವೈದ್ಯ ಬಳಿ ಚರ್ಚಿಸಿ ಔಷಧಿ ನೀಡುತ್ತದೆ. ಈಗ ಬ್ಲಿಂಕಿಟ್‌ನಲ್ಲಿ ರಕ್ತದೊತ್ತಡ ಮಾಪಕ (BP Monitor), ಗ್ಲುಕೋಮೀಟರ್ ಮಾತ್ರವಲ್ಲದೆ, ತಕ್ಷಣವೇ ಫಲಿತಾಂಶ ನೀಡುವ ರಕ್ತ ಪರೀಕ್ಷೆಯ ಕಿಟ್‌ಗಳು ಕೂಡ ಲಭ್ಯವಿವೆ. ಅಲ್ಲದೆ, ಮನೆಗೇ ಬಂದು ರಕ್ತದ ಮಾದರಿ ಸಂಗ್ರಹಿಸುವ ಸೇವೆಯನ್ನೂ ಬ್ಲಿಂಕಿಟ್ ಮಾಡುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ತಪ್ಪಿಯೂ ಕೂಡ ವಾರದ ಈ ದಿನಗಳಲ್ಲಿ ಬಟ್ಟೆ ಒಗೆಯಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Vastu Tips for Washing Clothes to Avoid Financial Loss

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮನೆಯ ದಿನನಿತ್ಯದ ಕೆಲಸಗಳಿಗೂ ಸಹ ನಿರ್ದಿಷ್ಟ ದಿನಗಳು ಮತ್ತು ಸಮಯಗಳು ಮಹತ್ವ ಹೊಂದಿವೆ. ಅದರಲ್ಲೂ ಬಟ್ಟೆ ಒಗೆಯುವಂತಹ ಸಾಮಾನ್ಯ ಕೆಲಸವೂ ವಾರದ ಕೆಲ ದಿನಗಳಲ್ಲಿ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಇಂತಹ ದಿನಗಳಲ್ಲಿ ಬಟ್ಟೆ ಒಗೆಯುವುದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದು ಹಾಗೂ ಆರ್ಥಿಕ ಮತ್ತು ಮಾನಸಿಕ ತೊಂದರೆಗಳು ಎದುರಾಗಬಹುದು ಎಂಬ ನಂಬಿಕೆಯಿದೆ.

ಗುರುವಾರ ಬಟ್ಟೆ ಒಗೆಯುವುದು ಶುಭವಲ್ಲ:

ಗುರುವಾರವನ್ನು ವಿಷ್ಣು ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ ದಿನ ಎಂದು ಪರಿಗಣಿಸಲಾಗುತ್ತದೆ. ಗುರು ಗ್ರಹವು ಸಂತೋಷ, ಸಂಪತ್ತು, ಜ್ಞಾನ ಮತ್ತು ಮಕ್ಕಳ ಯೋಗದ ಸಂಕೇತವಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ದಿನ ಬಟ್ಟೆ ಒಗೆಯುವುದು ಅಥವಾ ಸೋಪು–ರಸಾಯನಿಕಗಳನ್ನು ಬಳಸುವುದರಿಂದ ಜಾತಕದಲ್ಲಿನ ಗುರು ಗ್ರಹ ದುರ್ಬಲಗೊಳ್ಳಬಹುದು. ಇದರಿಂದ ಆರ್ಥಿಕ ಪ್ರಗತಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ ಎಂದು ನಂಬಲಾಗುತ್ತದೆ.

ಮಂಗಳವಾರ ಬಟ್ಟೆ ಒಗೆಯುವುದು ಶುಭವಲ್ಲ:

ಮಂಗಳವಾರವು ಶಕ್ತಿ, ಧೈರ್ಯ ಮತ್ತು ಉತ್ಸಾಹದ ದಿನ. ಈ ದಿನ ಬಟ್ಟೆ ಒಗೆಯುವುದರಿಂದ ಅನಗತ್ಯ ಸಂಘರ್ಷಗಳು ಉಂಟಾಗಬಹುದು ಹಾಗೂ ಮನೆಯವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತವೆ. ವಿಶೇಷವಾಗಿ ಕುಟುಂಬದಲ್ಲಿ ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆಲವರು ನಂಬುತ್ತಾರೆ.

ಶನಿವಾರ ಬಟ್ಟೆ ಒಗೆಯುವುದು ಶುಭವಲ್ಲ:

ಶನಿವಾರವನ್ನು ಶನಿ ದೇವರ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಎಣ್ಣೆ ಸಂಬಂಧಿತ ಕೆಲಸಗಳು, ಹಳೆಯ ವಸ್ತುಗಳ ಬಳಕೆ ಅಥವಾ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಶನಿವಾರ ಹಳೆಯ ಬಟ್ಟೆಗಳನ್ನು ಒಗೆಯುವುದು ಅಥವಾ ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುವುದು ಶನಿ ದೋಷಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ರಾತ್ರಿಯಲ್ಲಿ ಬಟ್ಟೆ ಒಣಗಿಸುವುದನ್ನು ತಪ್ಪಿಸಿ:

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ನಂತರ ಬಟ್ಟೆಗಳನ್ನು ಹೊರಗೆ ಒಗೆಯುವುದು ಅಥವಾ ಒಣಗಿಸುವುದು ಅಶುಭ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ವಾತಾವರಣವು ನಕಾರಾತ್ಮಕ ಶಕ್ತಿಗೆ ಹೆಚ್ಚು ಒಳಗಾಗಿರುತ್ತದೆ ಎಂದು ನಂಬಲಾಗುತ್ತದೆ, ಮತ್ತು ಆ ಶಕ್ತಿ ಬಟ್ಟೆಗಳ ಮೂಲಕ ದೇಹಕ್ಕೆ ತಲುಪಬಹುದು ಎಂದು ಹೇಳುತ್ತಾರೆ. ಇದರ ಜೊತೆಗೆ, ವೈಜ್ಞಾನಿಕ ದೃಷ್ಟಿಯಿಂದಲೂ ಸೂರ್ಯನ ಬೆಳಕಿನ (UV ಕಿರಣಗಳ) ಕೊರತೆಯಿಂದ ಬಟ್ಟೆಗಳ ಮೇಲೆ ಸೂಕ್ಷ್ಮಜೀವಿಗಳು ಉಳಿಯುವ ಸಾಧ್ಯತೆ ಇರುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:36 pm, Tue, 27 January 26

Source link

‘ಕಲ್ಟ್ ಹಿಟ್ ಸಿನಿಮಾ’; ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟ ಝೈದ್ ಖಾನ್ – Kannada News | Zaid Khan’s Cult Movie Declared Pure Hit: Box Office Collection Soars Past 3.8 Crores

ಸಚಿವ ಜಮೀರ್ ಅಹ್ಮದ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಟೈಮ್ ಟ್ರಾವೆಲ್ ಕಥೆ ಹೊಂದಿತ್ತು. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಿಟ್ ಆಗಿದೆ ಎಂದು ಅವರು ಘೋಷಣೆ ಮಾಡಿದ್ದಾರೆ. ಅವರು ಸಿನಿಮಾದ ಕಲೆಕ್ಷನ್ ಲೆಕ್ಕಾಚಾರವನ್ನು ನೀಡಿದ್ದಾರೆ.

‘ಕಲ್ಟ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ಝೈದ್ ಖಾನ್ ಅವರು ಕಲೆಕ್ಷನ್ ವಿವರ ನೀಡಿದ್ದಾರೆ. ಈ ಚಿತ್ರ ಮೂರು ದಿನಗಳಲ್ಲಿ 3.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಚಿತ್ರದ ಬಜೆಟ್ ಕಡಿಮೆ ಇರುವುದರಿಂದ ಸಿನಿಮಾ ತಂಡ ಲಾಭ ಕಾಣೋ ಸಾಧ್ಯತೆ ಅಧಿಕವಾಗಿದೆ.

ನಾಲ್ಕನೇ ದಿನವಾದ ಸೋಮವಾರ (ಜನವರಿ 26) ಸರ್ಕಾರಿ ರಜೆ ಇತ್ತು. ಇದು ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ. ಈ ದಿನದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿರೋ ಸಾಧ್ಯತೆ ಇದೆ. ಹೀಗಾಗಿ, ಚಿತ್ರದ ಗಳಿಕೆ 5 ಕೋಟಿ ರೂಪಾಯಿ ಸಮೀಪಿಸಿರಬಹುದು ಎಂಬುದು ಬಾಕ್ಸ್ ಆಫೀಸ್ ಪಂಡಿತರ ಊಹೆ.

ದೊಡ್ಡ ಬಜೆಟ್ ಸಿನಿಮಾ ಇರಲಿ, ಸಣ್ಣ ಬಜೆಟ್ ಇರಲಿ, ತಂಡದವರು ಕಲೆಕ್ಷನ್ ಲೆಕ್ಕ ಕೊಡೋದು ತುಂಬಾನೇ ಕಡಿಮೆ. ಆದರೆ, ಝೈದ್ ಖಾನ್ ಆ ರೀತಿ ಅಲ್ಲ. ಅವರು ಸಿನಿಮಾ ಕಲೆಕ್ಷನ್ ವಿವರ ನೀಡಿದ್ದಾರೆ. ಈ ಚಿತ್ರವನ್ನು ‘ಪ್ಯೂರ್ ಕಲ್ಟ್ ಹಿಟ್’ ಎಂದು ಅವರು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ

‘ಕಲ್ಟ್’ ಸಿನಿಮಾದಲ್ಲಿ ಲವ್ ಸ್ಟೋರಿ ಇದೆ. ಬ್ರೇಕಪ್ ಕಥೆ ಇದೆ. ನೊಂದ ಹೃದಯಗಳ ಕಥೆ ಇದೆ. ಈ ಚಿತ್ರದಲ್ಲಿ ಝೈದ್ ಖಾನ್ ಜೊತೆ ಮಲೈಕಾ ವಾಸುಪಾಲ್, ರಚಿತಾ ರಾಮ್ ಮೊದಲಾದವರು ನಟಿಸಿದ್ದಾರೆ. ಜನರಿಗೆ ಚಿತ್ರ ಕೆಲವರಿಗೆ ಇಷ್ಟ ಆಗಿದೆ. ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್! ಹೆಂಡ್ತಿ ಮೊಬೈಲ್​ಲಿ ಮಾಲ್ವೇರ್ ಅಳವಡಿಸಿದ್ದಾತನ ವಿರುದ್ಧ ಪೊಲೀಸರಿಗೆ ದೂರು – Kannada News | Husband Secretly Installed Malware on Wife’s Phone to Track Location in Bengaluru, Police Complaint Filed

ಬೆಂಗಳೂರು, ಜನವರಿ 27: ಗಂಡ-ಹೆಂಡತಿ ಇಬ್ಬರೂ ದೂರವಾಗಿದ್ದರು. ಆದರೆ, ಮಗುವನ್ನು ನೋಡಲು ಪತ್ನಿ ಮನೆಗೆ ಹೋಗಲು ಪತಿಗೆ ನ್ಯಾಯಾಲಯ ಅನುಮತಿ ಕೊಟ್ಟಿತ್ತು. ಹೀಗೆ ಆಕೆಯ ಮನೆಗೆ ತೆರಳುತ್ತಿದ್ದ ಪತಿ ಮಗು ನೋಡುವ ನೆಪದಲ್ಲಿ ಪತ್ನಿಯ ಮೊಬೈಲ್‌ನಲ್ಲಿ ಮಾಲ್ವೇರ್ ಆ್ಯಪ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದ. ಇದೀಗ ಪತಿಯ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪತಿ-ಪತ್ನಿ ದೂರವಾಗಿದ್ದು, ನ್ಯಾಯಾಲಯದ ಆದೇಶದಂತೆ ಪತಿ ಅಮೇಲ್ ವಿ. ನಾಯರ್ ಅವರಿಗೆ ವಾರಕ್ಕೊಮ್ಮೆ ಮಗುವನ್ನು ನೋಡಲು ಅವಕಾಶವಿತ್ತು. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಪತಿ, ಮಗುವನ್ನು ನೋಡಲು ಬಂದಾಗ ಪತ್ನಿಯ ಮೊಬೈಲ್‌ಗೆ ಗುಪ್ತವಾಗಿ ಒಂದು ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿದ್ದಾರೆ. ಈ ಮಾಲ್ವೇರ್ ಆ್ಯಪ್ ಮೂಲಕ ಪತ್ನಿ ಎಲ್ಲೇ ಹೋದರೂ, ಆಕೆಯ ಸ್ಥಳದ ಮಾಹಿತಿ ಪತಿಯ ಮೊಬೈಲ್‌ಗೆ ಸಂದೇಶದ ರೂಪದಲ್ಲಿ ತಲುಪುತ್ತಿತ್ತು.

ಪತ್ನಿ ಹೋಗುವ ಸ್ಥಳಗಳು ಮತ್ತು ಚಟುವಟಿಕೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದರು. ಒಂದು ದಿನ, ಮೊಬೈಲ್ ಆ್ಯಪ್‌ನ ಅಪ್‌ಡೇಟ್ ಸಂದೇಶ ಬಂದಾಗ, ಪತಿಯ ಈ ಕೃತ್ಯ ಪತ್ನಿಗೆ ಗೊತ್ತಾಗಿದೆ. ತಮ್ಮ ಖಾಸಗಿತನದ ಉಲ್ಲಂಘನೆ ಎಂದು ಅರಿತ ಪತ್ನಿ ತಕ್ಷಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್​: ಕೈಗೆ ಸಿಗದ ರಾಜೀವ್​​ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ – Kannada News | Threat to Woman Officer: Inside Story Behind Police Arrest of Absconding Rajeev Gowda

ಬೆದರಿಕೆ ಕೇಸ್​​ನಲ್ಲಿ ರಾಜೀವ್​​ ಗೌಡ ಬಂಧನ

ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ಕೊನೆಗೂ ಲಾಕ್​​ ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡು ಊರೂರು ಅಲೆಯತ್ತಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಅಷ್ಟಕ್ಕೂ ರಾಜೀವ್​​ ಗೌಡ ಎಲ್ಲಿದ್ದಾನೆ ಎಂಬ ಬಗ್ಗೆ ಖಾಕಿ ಮಾಹಿತಿ ಕಲೆ ಹಾಕಿರೋದೇ ಬಹಳ ಇಂಟರೆಸ್ಟಿಂಗ್​​ ಆಗಿದೆ.

ಆರೋಪಿ ರಾಜೀವ್​​ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ ವಿಚಾರ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಮಂಗಳೂರಲ್ಲಿ ಇದ್ದ ರಾಜೀವ್​​ ಗೌಡ ಬೇರೆ ರಾಜ್ಯಕ್ಕೆ ಎಸ್ಕೇಪ್​​ ಆಗಿದ್ದಾನೆ ಎಂಬ ಬಗ್ಗೆ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು. ಆ ವೇಳೆ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಜೊತೆ ಆರೋಪಿ ಇರೋದು ಕನ್ಫರ್ಮ್​​ ಆಗಿದೆ. ಆದರೆ ಮೈಕಲ್ ಜೋಸೇಫ್ ರೇಗೊ ಫೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಎಷ್ಟು ಹುಡುಕಾಡಿದ್ರು ಫೋನ್ ನಂಬರ್ ಸಿಗದ ಕಾರಣ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಪೊಲೀಸರು ಮಾಡಿದ್ದ ಮಾಸ್ಟರ್​​ ಪ್ಲ್ಯಾನ್​​ ಸಕ್ಸಸ್​​ ಆಗಿದೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್!

ರಾಜೀವ್​​ಗೆ ಆಶ್ರಯ ಕೊಟ್ಟ ಉದ್ಯಮಿಯೂ ಅರೆಸ್ಟ್​​


ಮೈಕಲ್​​ ನಂಬರ್​​ ಸಿಗದ ಕಾರಣ ಉದ್ಯಮಿಯ ಹಿನ್ನೆಲೆಯನ್ನು ಪೊಲೀಸರು ಕೆದಕಿದ್ದಾರೆ. ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ USAನಿಂದ ಬೆಂಗಳೂರು ಏರ್ಪೋರ್ಟ್​​ಗೆ ಬಂದಿದ್ದ ಮೈಕಲ್ ಮಗ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಂಗಳೂರಿನ ಪಬ್ ಒಂದರ ಮಾಲಕರಾಗಿರುವ ಮೈಕಲ್ ಸೋದರ ಸಂಬಂಧಿಯೊಬ್ಬರಿಗೆ ತಾವು ಚಿಕ್ಕಜಾಲ ಪೊಲೀಸರು ಅಂತಾ ದೂರವಾಣಿ ಕರೆ ಮಾಡಲಾಗಿದೆ. ಮೈಕಲ್ ಮಗನ ಸಾವಿನ ವಿಚಾರದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿ ಪೊಲೀಸರು ನಂಬರ್​​ ಪಡೆದಿದ್ದಾರೆ. ಬಳಿಕ ಆ ನಂಬರ್​ ಟ್ರೇಸ್​​ ಮಾಡಿ ಮೈಕಲ್ ಹಾಗೂ ಜೊತೆ ಇದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಯೂರೋಪಿಯನ್ ಯೂನಿಯನ್ ಒಪ್ಪಂದದಿಂದ ಯಾರಿಗೆ ಲಾಭ? – Kannada News | India European Union trade deal, which sectors will benefit from this FTA

ಯುಇ ಕಮಿಷನ್ ಅಧ್ಯಕ್ಷೆ ಉರ್ಸುಲಾ ಜೊತೆ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜನವರಿ 27: ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ಏರ್ಪಟ್ಟಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದಿಂದ (India-EU trade pact) ಎರಡೂ ಪಕ್ಷಗಳಿಗೆ ಲಾಭವಾಗಲಿದೆ. ಈ ಒಪ್ಪಂದವನ್ನು ಮದರ್ ಆಫ್ ಆಲ್ ಡೀಲ್ಸ್ (Mother of all deals) ಎಂದು ಬಣ್ಣಿಸಲಾಗುತ್ತಿದೆ. ಯೂರೋಪ್​ನ ಮುಂದುವರಿದ 27 ದೇಶಗಳ ಗುಂಪಾಗಿರುವ ಐರೋಪ್ಯ ಒಕ್ಕೂಟ ಹಾಗೂ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾದ ಭಾರತದ ನಡುವಿನ ವ್ಯಾಪಾರದ ಗಾತ್ರ ಬಹಳ ದೊಡ್ಡದು.

ಯೂರೋಪಿಯನ್ ದೇಶಗಳು ವಾಹನ ಕ್ಷೇತ್ರದಲ್ಲಿ ಬಹಳ ಪರಿಣಿತಿ ಹೊಂದಿವೆ. ವಿಶ್ವದ ಶ್ರೇಷ್ಠ ಆಟೊಮೊಬೈಲ್ ಕಂಪನಿಗಳು ಬಹುತೇಕ ಈ ಭಾಗದ್ದೇ ಆಗಿವೆ. ವೈನ್, ವಿಸ್ಕಿ ಇತ್ಯಾದಿ ಆಲ್ಕೋಹಾಲ್ ಪಾನೀಯಗಳಿಗೆ ಇಯು ಬಹಳ ಖ್ಯಾತಿ ಪಡೆದಿದೆ.

ಇದನ್ನೂ ಓದಿ: CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ

ಇಯು ಜೊತೆಗಿನ ಒಪ್ಪಂದದಿಂದ ಭಾರತಕ್ಕೇನು ಲಾಭ?

  • ಭಾರತದ ಫಾರ್ಮಾ, ಜವಳಿ, ಐಟಿ ಸರ್ವಿಸ್, ರಾಸಾಯನಿಕ ಮತ್ತು ಎಂಜಿನಿಯರಿಂಗ್ ಸರಕುಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗುತ್ತದೆ.
  • ಉತ್ಪಾದನೆ, ಇನ್​ಫ್ರಾಸ್ಟ್ರಕ್ಚರ್, ಸ್ವಚ್ಛ ಇಂಧನ ಮತ್ತು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂರೋಪಿಯನ್ ಯೂನಿಯನ್​ನಿಂದ ಭಾರತದಲ್ಲಿ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
  • ಜಾಗತಿಕ ಮ್ಯಾನುಫ್ಯಾಕ್ಚರಿಂಗ್​ನ ಸಪ್ಲೈ ಚೈನ್ ಅಥವಾ ಸರಬರಾಜು ವ್ಯವಸ್ಥೆಯಲ್ಲಿ ಭಾರತದ ಪಾತ್ರ ಹೆಚ್ಚಲಿದೆ. ಹೆಚ್ಚು ಮೌಲ್ಯದ ಉತ್ಪಾದನೆಗೆ ಪುಷ್ಟಿ ಸಿಗಲಿದೆ.
  • ಯೂರೋಪ್ ಜೊತೆ ವ್ಯಾಪಾರ ಹೆಚ್ಚಾದಂತೆ ಭಾರತಕ್ಕೆ ಅಮೆರಿಕದ ಮೇಲಿನ ಅವಲಂಬನೆ ಮತ್ತಷ್ಟು ಕಡಿಮೆ ಆಗಬಹುದು.

ಯಾವ್ಯಾವ ಸೆಕ್ಟರ್​ಗಳಿಗೆ ಲಾಭ?

  • ಐಟಿ ಮತ್ತು ಡಿಜಿಟಲ್ ಸರ್ವಿಸ್
  • ಫಾರ್ಮಾ ಮತ್ತು ಹೆಲ್ತ್​ಕೇರ್
  • ಜವಳಿ
  • ಆಟೊಮೊಬೈಲ್, ಇವಿ
  • ನವೀಕರಣ ಇಂಧನ ಮತ್ತು ಹಸಿರು ತಂತ್ರಜ್ಞಾನ
  • ಮ್ಯಾನುಫ್ಯಾಕ್ಚರಿಂಗ್ ಮತ್ತು ಎಂಜಿನಿಯರಿಂಗ್ ಸರಕುಗಳು

ಇದನ್ನೂ ಓದಿ: ಯೂರೋಪ್​ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?

ಯೂರೋಪಿಯನ್ ಯೂನಿಯನ್​ಗೆ ಏನು ಲಾಭ?

ಭಾರತದ 140 ಕೋಟಿ ಜನಸಂಖ್ಯೆಯ ಬೃಹತ್ ಮಾರುಕಟ್ಟೆಯಲ್ಲಿ ಇಯುಗೆ ಹೆಚ್ಚು ಮುಕ್ತ ಪ್ರವೇಶ ಸಿಗುತ್ತದೆ. ಭಾರತವು ಅತಿವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿರುವುದರಿಂದ ಮತ್ತು ಮಾರುಕಟ್ಟೆ ನಿರ್ದೇಶಿತ ಆರ್ಥಿಕತೆಯಾದ್ದರಿಂದ ಇಯು ಸರಕುಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ.

ಯೂರೋಪ್​ನ ಪ್ರಮುಖ ಶಕ್ತಿ ಎನಿಸಿರುವ ವಾಹನ ತಯಾರಿಕೆ, ಐಷಾರಾಮಿ ಸರಕುಗಳು, ಮದ್ಯ, ಯಂತ್ರೋಪಕರಣಗಳಿಗೆ ಭಾರತ ಉತ್ತಮ ಮಾರುಕಟ್ಟೆ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:56 pm, Tue, 27 January 26

Source link

‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್ – Kannada News | Ranbir Kapoor talks about Animal Park movie shooting

ರಣ್​​ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಯಶಸ್ವಿ ಆದ ಜೊತೆಗೆ ಪರ ವಿರೋಧ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು. ‘ಅನಿಮಲ್’ ಸಿನಿಮಾವನ್ನು ‘ಹಿಂಸಾತ್ಮಕ’, ‘ಪುರುಷ ಅಹಂಕಾರ’ ತುಂಬಿದ ಸಿನಿಮಾ, ‘ಮಹಿಳಾ ಪೀಡಕ’ತನದ ವೈಭವೀಕರಣ ಎಂದೆಲ್ಲ ವಿಮರ್ಶಕರು ಟೀಕೆ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ‘ಅನಿಮಲ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ ರಣ್​​ಬೀರ್ ಕಪೂರ್ ‘ಅನಿಮಲ್’ ಸೀಕ್ವೆಲ್​​ನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟ ರಣ್​​ಬೀರ್ ಕಪೂರ್, ‘ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಬೇರೊಂದು ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದು ಆ ಸಿನಿಮಾ ಮುಗಿದ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಆಗಲಿದೆ. ಸಿನಿಮಾದ ಚಿತ್ರೀಕರಣ ಬಹುಷಃ 2027ರಲ್ಲಿ ಪ್ರಾರಂಭ ಆಗಬಹುದು’ ಎಂದಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ರಣ್​ಬೀರ್ ಕಪೂರ್ ಜೊತೆಗೆ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ‘ಅನಿಮಲ್’ ಸಿನಿಮಾದ ಅಂತ್ಯದಲ್ಲಿಯೇ ‘ಅನಿಮಲ್ ಪಾರ್ಕ್’ ಸಿನಿಮಾದ ಸುಳಿವು ನೀಡಿರುವ ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾಕ್ಕಿಂತಲೂ ‘ಅನಿಮಲ್ ಪಾರ್ಕ್’ ಹೆಚ್ಚು ವೈಯಲೆಂಟ್ ಆಗಿರಲಿದೆ ಎಂದು ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್ ಮನೆಯಲ್ಲಿ ‘ಸಿತಾರೆ’ಗಳು, ರಣ್​ಬೀರ್ ಕಪೂರ್ ಸಹ

ರಣ್​​ಬೀರ್ ಕಪೂರ್ ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ ನವೆಂಬರ್ 06ಕ್ಕೆ ಬಿಡುಗಡೆ ಆಗಲಿದೆ. ಅದಾದ ಬಳಿಕ 2027ರ ಫೆಬ್ರವರಿ ತಿಂಗಳಲ್ಲಿ ‘ಲವ್ ಆಂಡ್ ವಾರ್’ ಸಿನಿಮಾ ಬಿಡುಗಡೆ ಆಗಲಿದೆ. 2027ರಲ್ಲಿ ರಣ್​​ಬೀರ್ ಕಪೂರ್, ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ? – Kannada News | 400 Cr Robbery: Karnataka Goa Border Container Drivers Arrested, New Twist

400ಕೋಟಿ ದರೋಡೆ ಪ್ರಕರಣ:ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ?

ಬೆಳಗಾವಿ, ಜನವರಿ 27: ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ  (Rs 400 Crore Robbery Case) ಮತ್ತೊಂದು ತಿರುವು ಪಡೆದಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಎಸ್ಐಟಿ ತಂಡ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ಅವರಿಬ್ಬರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇಂದು ಸಂಜೆ ಬಂಧನದ ಅಧಿಕೃತ ಘೋಷಣೆ?

ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಲಾಗಿತ್ತು. ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್​​ದಿಂದ ನಾಪತ್ತೆ ಆಗಿತ್ತು. ಇದೀಗ ಅದೇ ಕಂಟೇನರ್ ಚಾಲಕರಿಬ್ಬರನ್ನು ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳ ತಂಡ ಬಂಧಿಸಿದೆ ಎಂದು ನಾಸಿಕ್ ಪೊಲೀಸರಿಂದ ಮಾಹಿತಿ ದೊರಕಿದೆ.ಚಾಲಕರ ಬಂಧನದ ಬಳಿಕ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದ್ದು, ಇಂದು ಸಂಜೆ ವರೆಗೆ ಇಬ್ಬರ ಬಂಧನದ ಅಧಿಕೃತ ಘೋಷಣೆಯ ನಿರೀಕ್ಷಣೆಯಿದೆ.

ಇದನ್ನೂ ಓದಿ 400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!

ನಡೆದಿದ್ದೇನು?

2 ಸಾವಿರ ರೂ. ಮುಖಬೆಲೆಯ ನೂರಾರು ಕೋಟಿ ದರೋಡೆ ಪ್ರಕರಣವನ್ನು ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬಾತ ಬಯಲು ಮಾಡಿದ್ದ. ಹಣ ಕಿಶೋರ್ ಸೇಠ್ ಎನ್ನುವವರಿಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ.ಅಕ್ಟೋಬರ್ 22ರಂದು ಸಂದೀಪ್​ನನ್ನು ಉದ್ಯಮಿ ಕಿಶೋರ್ ಸೇಠ್ ಮತ್ತವನ ಕಡೆಯವರು ಅಪಹರಿಸಿದ್ದರು. ಹೀಗೆ ಹೊತ್ತೊಯ್ದವನಿಗೆ ಚಿತ್ರಹಿಂಸೆ ಕೊಟ್ಟು ದರೋಡೆ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ದರೋಡೆಯಲ್ಲಿ ನೀನೂ ಶಾಮೀಲಾಗಿದ್ದೀಯಾ, ಹಣ ಎಲ್ಲಿದೆ ಎಂದು ಕೇಳಿದ್ದರು.

ಈ ನಡುವೆ ಉದ್ಯಮಿ ಕಿಶೋರ್ ಹಾಗೂ ಮತ್ತಿವನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆಯೊಂದು ವೈರಲ್ ಆಗಿತ್ತು. ಅದರ ಪ್ರಕರಾರ ಹಣ ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದ್ದೆಂಬ ಸ್ಫೋಟಕ ಮಾಹಿತಿ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಹಣ ಸಾಗಿಸಲು ಬಳಸಿದ ಕಂಟೇನರ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:40 pm, Tue, 27 January 26

Source link

Bengaluru 1 day Tour: 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು – Kannada News | Bengaluru’s Best: History, Nature and Modern Attractions – Your Ultimate Travel Guide

ಬೆಂಗಳೂರು, ಜ.27: ಬೆಂಗಳೂರು (Bengaluru Tourist Attractions) ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ತನ್ನ ಅದ್ಭುತ ಉದ್ಯಾನವನಗಳು, ಐತಿಹಾಸಿಕ ಕಟ್ಟಡಗಳು ಮತ್ತು ವರ್ಣರಂಜಿತ ನೈಟ್‌ಲೈಫ್‌ಗೆ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧದಂತಹ ಸ್ಥಳಗಳು ನವ-ದ್ರಾವಿಡ ಶಾಸಕಾಂಗ ಕಟ್ಟಡವಾಗಿದೆ. ಹಿಂದಿನ ರಾಜಮನೆತನದ ನಿವಾಸಗಳಲ್ಲಿ ಇಂಗ್ಲೆಂಡ್‌ನ ವಿಂಡ್ಸರ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾದ 19 ನೇ ಶತಮಾನದ ಬೆಂಗಳೂರು ಅರಮನೆ ಮತ್ತು 18 ನೇ ಶತಮಾನದ ತೇಗದ ರಚನೆಯಾದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಸೇರಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಭೇಟಿ ನೀಡುವ ಸ್ಥಳಗಳು : ಇಸ್ಕಾನ್, ರಾಜರಾಜೇಶ್ವರಿ ದೇವಸ್ಥಾನ, ಬನ್ನೇರುಘಟ್ಟ ಪ್ರಾಣಿಶಾಸ್ತ್ರೀಯ ಉದ್ಯಾನವನ, ವಿಜ್ಞಾನ ವಸ್ತು ಸಂಗ್ರಹಾಲಯ ಮತ್ತು ತಾರಾಲಯ.

ಕಬ್ಬನ್ ಪಾರ್ಕ್ : ನಗರದ ಹಸಿರು ಶ್ವಾಸಕೋಶ ಬೆಂಗಳೂರಿನ ಹೃದಯಭಾಗದಲ್ಲಿರುವ ಇದು ಕೇವಲ ಉದ್ಯಾನವನವಲ್ಲ, ಒಂದು ಜೀವವೈವಿಧ್ಯದ ಕೇಂದ್ರ. ಇಲ್ಲಿನ ಬಿದಿರಿನ ಮೆದೆಗಳು, ಬೃಹತ್ ಮರಗಳು ಮತ್ತು ಪ್ರತಿಮೆಯು ನಗರದ ಗದ್ದಲದಿಂದ ಮುಕ್ತಿ ನೀಡುತ್ತವೆ. ಇಲ್ಲಿ ವಾಹನ ಸಂಚಾರದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ವಾರಾಂತ್ಯದಲ್ಲಿ ಸಂಪೂರ್ಣ ‘ನೋ ಟ್ರಾಫಿಕ್’ ವಲಯವಾಗಿ ಪ್ರವಾಸಿಗರಿಗೆ ಮುಕ್ತವಾಗಿದೆ.

ವಿಧಾನಸೌಧ: ದಕ್ಷಿಣ ಭಾರತದ ತಾಜ್‌ಮಹಲ್ ಎಂದು ಕರೆಯುತ್ತಾರೆ. ಗ್ರಾನೈಟ್‌ನಿಂದ ನಿರ್ಮಿತವಾದ ಈ ಕಟ್ಟಡವು ದ್ರಾವಿಡ ಮತ್ತು ಇಂಡೋ-ಸಾರ್ಸೆನಿಕ್ ಶೈಲಿಗಳ ಸುಂದರ ಮಿಶ್ರಣವಾಗಿದೆ. ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಂಜೆ ಹೊತ್ತು ಈ ಕಟ್ಟಡವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. 2026ರಲ್ಲಿ ಬಿಡುಗಡೆಯಾದ ಹೊಸ ‘ಡಬಲ್ ಡೆಕ್ಕರ್ ಅಂಬಾರಿ’ ಬಸ್ ಮೂಲಕ ಪ್ರವಾಸಿಗರು ಇದರ ಸೌಂದರ್ಯವನ್ನು ಸವಿಯಬಹುದು.

ಬೆಂಗಳೂರು ಅರಮನೆ: 19ನೇ ಶತಮಾನದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿದೆ. ಅರಮನೆಯ ಒಳಗಿರುವ ಸುಂದರವಾದ ಕೆತ್ತನೆಗಳು, ಸುರುಳಿಯಾಕಾರದ ಮೆಟ್ಟಿಲುಗಳು ಮತ್ತು ಹಳೆಯ ಕಾಲದ ಫೋಟೋಗಳು ನಿಮ್ಮನ್ನು ರಾಜಮನೆತನದ ಕಾಲಕ್ಕೆ ಕರೆದೊಯ್ಯುತ್ತವೆ.

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ: ಇದು 18ನೇ ಶತಮಾನದ ಈ ಕಟ್ಟಡವು ಸಂಪೂರ್ಣವಾಗಿ ತೇಗದ ಮರದಿಂದ ನಿರ್ಮಿತವಾಗಿದೆ.ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಈ ಅರಮನೆಯನ್ನು ‘ಸುಖದ ನಿವಾಸ’ ಎಂದು ಕರೆಯಲಾಗುತ್ತಿತ್ತು.ಇಲ್ಲಿನ ಕೆತ್ತಿದ ಕಮಾನುಗಳು ಮತ್ತು ಕಂಬಗಳು ಇಂದಿಗೂ ಸುಸ್ಥಿತಿಯಲ್ಲಿವೆ.

ನೈಟ್‌ಲೈಫ್ : ಇದು ಭಾರತದ ಪಬ್ ಕ್ಯಾಪಿಟಲ್, ಬೆಂಗಳೂರಿನ ನೈಟ್‌ಲೈಫ್ ಈಗಲೂ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ.ಎಂ.ಜಿ. ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ವಿಶ್ವದರ್ಜೆಯ ಮೈಕ್ರೋಬ್ರೆವರಿಗಳು ಇವೆ.

2026ರಲ್ಲಿ ಸೈಬರ್-ಪಂಕ್ ಶೈಲಿಯ ಪಬ್‌ಗಳು ಮತ್ತು ಲೈವ್ ಮ್ಯೂಸಿಕ್ ಬ್ಯಾಂಡ್‌ಗಳ ಪ್ರದರ್ಶನಗಳು ನಗರದ ರಾತ್ರಿಯನ್ನು ಮತ್ತಷ್ಟು ರಂಗೇರಿಸಿವೆ.

ಇದನ್ನೂ ಓದಿ: ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್

ಪ್ರಯಾಣದ ವಿವರ:

ಬೆಳಿಗ್ಗೆ 07.30 ಕ್ಕೆ ಇಲಾಖೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರ

ಬೆಳಿಗ್ಗೆ 07.45 ಕ್ಕೆ ಇಸ್ಕಾನ್ ದೇವಾಲಯ

ಬೆಳಿಗ್ಗೆ 07.45 ರಿಂದ 08.45 ರವರೆಗೆ ಇಸ್ಕಾನ್ ಭಗವಾನ್ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.45 ರಿಂದ 9.15 ರವರೆಗೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 9.15 ಇಲಾಖೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 10.30 ಕ್ಕೆ ಬನ್ನೇರುಘಟ್ಟ

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ರವರೆಗೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿ ನೀಡಿ

ಮಧ್ಯಾಹ್ನ 1.00 ರಿಂದ 1.30 ರವರೆಗೆ ಬನ್ನೇರುಘಟ್ಟದ ​​ಹೋಟೆಲ್ ಮಯೂರ ವನಶ್ರೀಯಲ್ಲಿ ಊಟ

ಮಧ್ಯಾಹ್ನ 1.30 ಕ್ಕೆ ಇಲಾಖೆ ಬನ್ನೇರುಘಟ್ಟ

ಸಂಜೆ 4.30 ರಿಂದ 5.15 ರವರೆಗೆ ತಾರಾಲಯ

ಸಂಜೆ 6.30 ಪ್ರವಾಸವು ಕೆಎಸ್‌ಟಿಡಿಸಿ ಪ್ರಧಾನ ಕಚೇರಿ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link