Category Archives: Blog

Your blog category

ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ, ಟಿವಿಕೆಗೆ ಷಣ್ಮುಗಂ ನೇತೃತ್ವದ 30 ಶಾಸಕರ ಬೆಂಬಲ – Kannada News | AIADMK Faces Split as Shanmugam Faction Backs CM Vijays TVK

ಚೆನ್ನೈ, ಮೇ 12: ತಮಿಳುನಾಡು ರಾಜಕಾರಣದಲ್ಲಿ ಅಣ್ಣಾ ಡಿಎಂಕೆ ಪಕ್ಷವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಭಾಗವಾಗಿದೆ. ಸಿ.ವಿ. ಷಣ್ಮುಗಂ ನೇತೃತ್ವದ 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್​ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ಅಣ್ಣಾ ಡಿಎಂಕೆ ಸ್ಥಾಪನಾ ತತ್ವಗಳಿಗೆ ವಿರುದ್ಧವಾಗಿ, ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವೇ ಈ ಬಂಡಾಯಕ್ಕೆ ಮುಖ್ಯ ಕಾರಣ. ಡಿಎಂಕೆಯನ್ನು ಸೈದ್ಧಾಂತಿಕ ವಿರೋಧಿ ಎಂದು ಪರಿಗಣಿಸುವ ಷಣ್ಮುಗಂ ಬಣ, ಜನಾಭಿಪ್ರಾಯವು ಸಿಎಂ ವಿಜಯ್​ ಅವರ ಪರವಾಗಿದೆ ಎಂದು ಹೇಳಿದೆ. ಈ ಬೆಂಬಲದಿಂದ ವಿಜಯ್​ ಸರ್ಕಾರದ ಬಲವು 150 ಶಾಸಕರಿಗಿಂತ ಹೆಚ್ಚಾಗಲಿದೆ. ಈ ನಡುವೆ ಪಳನಿಸ್ವಾಮಿ ನೇತೃತ್ವದಲ್ಲಿ ಕೇವಲ 17 ಶಾಸಕರು ಮಾತ್ರ ಉಳಿದಿದ್ದಾರೆ. ಅಣ್ಣಾ ಡಿಎಂಕೆ ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಷಣ್ಮುಗಂ ಬಣ ಸ್ಪಷ್ಟಪಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Assam CM Himanth Biswa Sharma Oath Taking Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ – Kannada News | Assam CM Oath Ceremony Live: Himanta Biswa Sarma Sworn In as CM for Second Term in Guwahati

ಅಸ್ಸಾಂ, ಮೇ 12: ಇಂದು ಅಸ್ಸಾಂನ ಖಾನಪಾರ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಹಿಮಂತ ಬಿಸ್ವ ಶರ್ಮಾ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅಂತಹ ಗಣ್ಯರು ಉಪಸ್ಥಿತರಿದ್ದು, ಖಾನಾಪಾರ ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದ ನೇರಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆರೋಪ: ಎಫ್​ಎಸ್​ಎಲ್​ನಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದ ಪರಮೇಶ್ವರ್ – Kannada News | Sringeri Vote Tampering Allegations: G Parameshwara Says FSL Report Will Reveal the Truth; Investigation Underway

ಬೆಂಗಳೂರು, ಮೇ 12: ಶೃಂಗೇರಿ ಎಂಎಲ್ಎ ಸ್ಥಾನದ ಗೊಂದಲದ ಬಗ್ಗೆ ಹಾಗೂ ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ವೋಟ್ ಟ್ಯಾಂಪರಿಂಗ್ ಆರೋಪ ಸಂಬಂಧ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಟ್ಯಾಂಪರಿಂಗ್ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ದೂರು ದಾಖಲಿಸಿಕೊಂಡು ಎಫ್ಐಆರ್ ನೊಂದಾಯಿಸಲಾಗಿದೆ. ರಾಜ್ಯ ಪೊಲೀಸರು ಈ ಟ್ಯಾಂಪರಿಂಗ್ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಎಫ್ಎಸ್ಎಲ್ (Forensic Science Laboratory) ಸಹಾಯ ಪಡೆಯಲಾಗುತ್ತಿದ್ದು, ಇದು ಕೌಂಟಿಂಗ್ ಪ್ರಕ್ರಿಯೆಯ ಒಂದು ಭಾಗವಾಗಿಯೂ ಪರಿಶೀಲನೆಗೆ ಒಳಪಡಲಿದೆ. ಕಾನೂನು ಪ್ರಕಾರ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳ ಬುರುಡೆ ಕೇಸ್​​: ಉತ್ಖನನ ನಡೆದು 10 ತಿಂಗಳಾದರೂ ಕೆಲಸಗಾರರ ಕೈ ಸೇರದ ಕೂಲಿ ಹಣ, ವಾಹನಗಳ ಬಾಡಿಗೆ – Kannada News | 10 Months After Dharmasthala Excavation, Labourers Still Await Pending Payments

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ

ಮಂಗಳೂರು, ಮೇ 12: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂಬ ಚಿನ್ನಯ್ಯ ಆರೋಪ ಹಿನ್ನೆಲೆ ಒಟ್ಟು 17 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ದುರ್ದೈವ ಅಂದರೆ ಇದು ನಡೆದು 10 ತಿಂಗಳಾದರೂ ಉತ್ಖನನ ಕೆಲಸ ಮಾಡಿದ್ದ ಕಾರ್ಮಿಕರಿಗೆ ಕೂಲಿ ಮತ್ತು ಯಂತ್ರೋಪಕರಣಗಳ ಬಾಡಿಗೆ ಹಣ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ (SIT) ಸೂಚನೆಯಂತೆ ಅಹೋರಾತ್ರಿ ದುಡಿದರೂ ಬಿಲ್ ಪಾವತಿಗೆ ಮೀನಾಮೇಷ ಎಣಿಸಲಾಗುತ್ತಿದ್ದು, ಎರಡು ಲಕ್ಷಕ್ಕೂ ಅಧಿಕ ಮೊತ್ತ ಬಾಕಿ ಇದೆ ಎನ್ನಲಾಗಿದೆ.

2025ರ ಜುಲೈ 29ರಿಂದ ಆಗಸ್ಟ್ 13ರವರೆಗೆ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆದಿದ್ದು, ಈ ವೇಳೆ ಕೂಲಿಯಾಳುಗಳು ಮಳೆ-ಬಿಸಿಲಿಗೆ ಮೈಯೊಡ್ಡಿ ದುಡಿದಿದ್ದರು. ಹೀಗಿದ್ದರೂ ಜೆಸಿಬಿ ಬಾಡಿಗೆಯ 71,500 ರೂ. ಮತ್ತು ಕಾರ್ಮಿಕರ ಕೂಲಿ ಮೊತ್ತ 80,000 ಸೇರಿದಂತೆ ಒಟ್ಟು 2 ಲಕ್ಷಕ್ಕೂ ಅಧಿಕ ಬಿಲ್ ಬಾಕಿ ಇದೆ. ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ಹಾಗೂ ವಾಹನಗಳ ಬಾಡಿಗೆ ಹಣಕ್ಕಾಗಿ ಮಾಲೀಕರು ಅಲೆದಾಡಬೇಕಾದ ಪ್ರಸಂಗ ಎದುರಾಗಿದೆ.

ಇದನ್ನೂ ಓದಿ:  ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಹಣ ಪಾವತಿ ವಿಚಾರವಾಗಿ ಗೊಂದಲ

ಇನ್ನು ಬಿಲ್​​ ಪಾವತಿ ವಿಚಾರವಾಗಿ ಪಂಚಾಯತ್​​ ಮತ್ತು ಎಸ್​​ಐಟಿ ನಡುವೆಯೇ ಗೊಂದಲ ಇದೆ ಎನ್ನಲಾಗಿದೆ. ಬಾಕಿ ಹಣದ ಬಗ್ಗೆ ವಿಚಾರಿಸಿದರೆ ಧರ್ಮಸ್ಥಳ ಗ್ರಾಮ ಪಂಚಾಯತ್ ಎಸ್​​ಐಟಿಯತ್ತ ಬೆರಳು ತೋರಿಸಿ ನುಣುಚಿ ಕೊಳ್ಳುತ್ತಿದೆ. ಇತ್ತ SIT ಅಧಿಕಾರಿಗಳನ್ನು ವಿಚಾರಿಸಿದರೆ, ನವೆಂಬರ್​​ನಲ್ಲಿಯೇ ಬಿಲ್​​ ಪಾವತಿಯಾಗಿದೆ ಎಂಬ ಉಡಾಫೆ ಉತ್ತರ ಬರುತ್ತಿದೆ. ನಮ್ಮ ಬಳಿ ಯಂತ್ರಗಳನ್ನು ಬಾಡಿಗೆಗೆ ಕೇಳಿದ್ದು ಗ್ರಾಮ ಪಂಚಾಯತ್​​. ಹೀಗಾಗಿ ಎಸ್​ಐಟಿ ಬಳಿ ಬಾಡಿಗೆ ಕೇಳುವ ಹಕ್ಕು ನಮಗಿಲ್ಲ ಎಂದು ಮಾಲಕರು ಅಲವತ್ತುಕೊಂಡಿದ್ದಾರೆ.

ಜುಲೈ 29, 2025ರಿಂದ ನಿರಂತರವಾಗಿ ಉತ್ಖನನ ಕಾರ್ಯಾಚರಣೆಯಲ್ಲಿ ಸುನೀಲ್ ಕನ್ಯಾಡಿ ಎಂಬವರ ಹಿಟಾಚಿಯನ್ನು ಉತ್ಖನನ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಕೇವಲ 10 ದಿನ ಮಾತ್ರ ಹಿಟಾಚಿ ಮೂಲಕ ಉತ್ಖನನ ನಡೆಸಿದ್ದು, 15 ದಿನ ಹಾಗೆ ನಿಂತಿದ್ದ ಕಾರಣ ಕೆಲಸಕ್ಕೆ ಬಳಸಿಕೊಂಡಿದ್ದಷ್ಟೇ ದಿನಗಳ ಬಿಲ್​ ನೀಡುವಂತೆ ಮಾಲಕರು ಕೇಳಿದ್ದರು. ಹೀಗಿದ್ದರೂ ಕಳೆದ 9 ತಿಂಗಳಿನಿಂದ ಬಾಕಿ ಬಿಲ್​​ಗಾಗಿ ಅಲೆದಾಟ ನಡೆಸುತ್ತಿದ್ದಾರೆ. ಉತ್ಖನನ ಕಾರ್ಯದ ವೇಳೆ ಇದ್ದ ಧರ್ಮಸ್ಥಳ ಪಂಚಾಯತ್​​ ಪಿಡಿಒ ಕೂಡ ಈಗ ನಿವೃತ್ತರಾಗಿದ್ದು, ಬಾಕಿ ಹಣವನ್ನು ಸಂಬಂಧಪಟ್ಟವರು ಆದಷ್ಟು ಬೇಗ ನೀಡಿ ಎಂಬ ಆಗ್ರಹ ಕೂಲಿ ಕಾರ್ಮಿಕರು, ಯಂತ್ರೋಪಕರಣ ಮತ್ತು ವಾಹನಗಳ ಮಾಲಕರಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:40 am, Tue, 12 May 26

Source link

Video: ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಕಂದಮ್ಮ ನಡೆಯುತ್ತಿದ್ದಂತೆ ಭಾವುಕಳಾದ ತಾಯಿ – Kannada News | Mother reacts cutely as little girl takes tiny steps

ತಾಯಿಯ (mother love) ಪ್ರೀತಿಯೇ ಹಾಗೇ, ಮಕ್ಕಳ ಆರೈಕೆಯಲ್ಲೇ ಖುಷಿ ಕಾಣುವ ಜೀವವದು. ಮಗುವಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದು, ಆಹಾರ ನೀಡುವುದು ಆಕೆಯ ದಿನನಿತ್ಯ ರೂಟೀನ್ ಆಗಿರುತ್ತದೆ. ಮಗುವಿನ ತೊದಲು ನುಡಿ ಕೇಳುತ್ತ ತನ್ನೆಲ್ಲಾ ನೋವುಗಳನ್ನು ಮರೆಯುತ್ತಾಳೆ. ಇದೀಗ ಪುಟಾಣಿಯೊಂದು  ಮೊದಲ ಬಾರಿಗೆ ಹೆಜ್ಜೆ ಇಟ್ಟು ನಡೆಯುತ್ತಿದ್ದರೆ, ತಾಯಿ ತನ್ನ ಮಗಳ ಮೊದಲ ನಡಿಗೆಯನ್ನು ಕಣ್ತುಂಬಿಸಿಕೊಂಡು ಭಾವುಕಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

fun_factorss ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಕ್ಲಿಪಿಂಗ್‌ನಲ್ಲಿ ತಾಯಿಯೊಬ್ಬಳು ಕುರ್ಚಿ ಮೇಲೆ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾಳೆ. ಅಲ್ಲೇ ಇದ್ದ ಪುಟಾಣಿಯೊಂದು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಶುರು ಮಾಡಿದೆ. ತನ್ನ ಕಂದಮ್ಮನು ಮೊದಲ  ಬಾರಿಗ ನಡೆಯುವುದನ್ನು ನೋಡಿ ತಾಯಿ ಭಾವುಕಳಾಗಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮುದ್ದಾದ ವಿಡಿಯೋ ಎಂದರೆ, ಇನ್ನೊಬ್ಬರು, ಮೊಬೈಲ್ ನಲ್ಲಿ ಈ ತರಹ ದೃಶ್ಯವನ್ನು ಯಾಕೆ ಸೆರೆ ಹಿಡಿಯಬೇಕು ಎಂದು ಕೇಳಿದ್ದಾರೆ. ಮತ್ತೊಬ್ಬರು, ಹೆತ್ತ ತಾಯಿಗೆ ಇದಕ್ಕಿಂತ ಖುಷಿ ಏನಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:31 am, Tue, 12 May 26

Source link

ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ – Kannada News | IPL’s ’49 Curse’: Is Karma Hitting Teams Who Trolled RCB’s Lowest Score?

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಯಾರೂ ಮರೆತಿಲ್ಲ. ಈ ಬಾರಿ ಆರ್​​ಸಿಬಿ ಉತ್ತಮ ಪ್ರದರ್ಶನ ನೀಡಿ, ಟಾಪ್​​ನಲ್ಲಿದೆ. ಬೆಂಗಳೂರು ಕಪ್ ಗೆದ್ದ ಹೊರತಾಗಿಯೂ ಟ್ರೋಲ್ ಮಾಡಲು ಸಿಗುವುದು ಇದೊಂದೇ ವಿಷಯ. ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿಯನ್ನು ಕೆಣಕಲು ವಿರೋಧಿ ತಂಡದವರು ಮತ್ತು ಕೆಲವು ಫ್ರಾಂಚೈಸಿಗಳು ಇದೇ ‘49’ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನು ಟ್ರೋಲ್ ಮಾಡಿದವರಿಗೆ ಶನಿದೆಸೆ ಹಿಡಿಯುತ್ತಿದೆ.

1. ಶಾಪದ ನಂಬರ್ ಆಯ್ತಾ 49?

2. ಟ್ರೋಲ್ ಮಾಡಿದವರಿಗೆ ಶನಿದೆಸೆ

3. ಸತತ ಸೋಲು ಕಂಡ ಪಂಜಾಬ್ ಕಿಂಗ್ಸ್ 

ಪಂಜಾಬ್ ಕಿಂಗ್ಸ್‌ಗೆ ತಟ್ಟಿದ ಶಾಪ?

ಏಪ್ರಿಲ್ 28ರಂದು ನಡೆದ ಆರ್​​ಆರ್​ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ’49-1′ ಎಂದು ಸ್ಕೋರ್ ಕಾರ್ಡ್ ಹಾಕಿತ್ತು. ಆರ್‌ಸಿಬಿಯನ್ನು ಪರೋಕ್ಷವಾಗಿ ಅಣಕಿಸಲು ಮಾಡಿದ ಈ ಪೋಸ್ಟ್ ಪಂಜಾಬ್ ಪಾಲಿಗೆ ದುಬಾರಿಯಾದಂತಿದೆ. ಅಲ್ಲಿಂದ ಆರಂಭವಾದ ಪಂಜಾಬ್‌ನ ಸೋಲಿನ ಸರಣಿ ಇನ್ನೂ ನಿಂತಿಲ್ಲ. ಧರ್ಮಶಾಲಾದಲ್ಲಿ ಡೆಲ್ಲಿ ವಿರುದ್ಧ ಸೋಲುವ ಮೂಲಕ ಪಂಜಾಬ್ ಈಗ ಸತತ ನಾಲ್ಕನೇ ಸೋಲು ಅನುಭವಿಸಿದೆ. ‘ಆರ್‌ಸಿಬಿಯ 49 ಅನ್ನು ಹೀಯಾಳಿಸಿದ ಮೇಲೆ ಪಂಜಾಬ್‌ಗೆ ಶನಿ ದೆಸೆ ಶುರುವಾಗಿದೆ’ ಎಂದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಕೆಕೆಆರ್ ಕಥೆಯೂ ಅಷ್ಟೇ!

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಕೂಡ ಇದೇ ತಪ್ಪು ಮಾಡಿತ್ತು. ಸೀಸನ್ ಆರಂಭಕ್ಕೂ ಮುನ್ನವೇ ಅವರು ‘49’ ಸ್ಕೋರ್‌ಗೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಿದ್ದರು. ಕೆಕೆಆರ್ ಸದ್ಯ ಅಂಕಪಟ್ಟಿಯ ತಳಭಾಗದಲ್ಲಿ ಹೋರಾಡುತ್ತಿದೆ. ಇನ್ನು, ಆರ್​​ಸಿಬಿಯನ್ನು ಸದಾ ಕೆಣಕುತ್ತಿದ್ದ ಮುಂಬೈ ಸೀಸನ್​​ನಿಂದ ಎಲಿಮಿನೇಟ್ ಆಗಿದೆ. ಬದ್ಧವೈರಿಯಾಗಿರೋ ಚೆನ್ನೈ ಸದ್ಯ ಕ್ಯಾಲ್ಯುಕುಲೇಟರ್ ಹಿಡಿದು ಕುಳಿತಿದೆ.

ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಆರ್‌ಸಿಬಿ ಅಭಿಮಾನಿಗಳು ಈಗ ‘ಪಾಪದ ಕೊಡ ತುಂಬಿದೆ’ ಎಂಬಂತೆ ಚರ್ಚೆ ನಡೆಸುತ್ತಿದ್ದಾರೆ. ‘ನಮ್ಮ ತಂಡದ ಕೆಟ್ಟ ದಿನವನ್ನು ನೋಡಿ ನಕ್ಕವರಿಗೆಲ್ಲ ಈಗ ಸರಿಯಾದ ಉತ್ತರ ಸಿಗುತ್ತಿದೆ’. 49 ರನ್ ಎನ್ನುವುದು ಆರ್‌ಸಿಬಿಯ ಶಾಪದ ನಂಬರ್ ಆಗಿ ಬದಲಾಗಿದೆ’ ಎಂಬ ಪೋಸ್ಟ್‌ಗಳು ವೈರಲ್ ಆಗುತ್ತಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:27 am, Tue, 12 May 26

Source link

‘ದ್ರಾವಿಡ’ ರಾಜಕಾರಣದ ‘ಯೂನಿಫಾರ್ಮ್’ ಬದಲಿಸಿದ ವಿಜಯ್ – Kannada News | Why Vijay wore back suit on his oath taking ceremony

ತಮಿಳುನಾಡಿನಲ್ಲಿ ಕಳೆದ 60 ವರ್ಷಗಳಿಂದಲೂ ‘ದ್ರಾವಿಡ’ ರಾಜಕೀಯದ್ದೆ (Politics) ಕಾರುಬಾರು. ಕಳೆದ ಆರು ದಶಕಗಳಲ್ಲಿ ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಮತ್ತು ಎಐಎಡಿಎಂಕೆ (ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ) ಬಿಟ್ಟರೆ ಇನ್ಯಾವ ಪಕ್ಷವೂ ಸಹ ತಮಿಳುನಾಡಿನಲ್ಲಿ ಗೆದ್ದಿರಲಿಲ್ಲ. ಈ 60 ವರ್ಷಗಳ ‘ದ್ರಾವಿಡ’ ರಾಜಕೀಯ ಪ್ರಾಬಲ್ಯವನ್ನು ಮುರಿದಿರುವ ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಿಜಯ್, ‘ದ್ರಾವಿಡ’ ರಾಜಕೀಯಕ್ಕೆ ಬ್ರೇಕ್ ಹಾಕಿದ್ದು ಮಾತ್ರವೇ ಅಲ್ಲದೆ, ದಶಕಗಳಿಂದಲೂ ಪಾಲಿಸಿಕೊಂಡು ಬಂದಿದ್ದ ‘ರಾಜಕೀಯ ಸಂಪ್ರದಾಯ’ಗಳನ್ನು ಮುರಿದು, ಬದಲಾವಣೆಗೆ ಮುನ್ನುಡಿ ಹಾಕಿದ್ದಾರೆ.

ಮೊದಲ ಹೆಜ್ಜೆಯಾಗಿ ವಿಜಯ್ ಅವರು ತಮಿಳುನಾಡು ರಾಜಕೀಯದ ‘ಯೂನಿಫಾರ್ಮ್’ ಬದಲಾಯಿಸಿದ್ದಾರೆ. ತಮಿಳುನಾಡಿನ ಬಹುತೇಕ ಎಲ್ಲ ರಾಜಕಾರಣಿಗಳ ಕಾಮನ್ ಉಡುಪು ಬಿಳಿ ಶರ್ಟು, ಬಿಳಿ ಪಂಚೆ. ಈ ಬಿಳಿ ಶರ್ಟು ಮತ್ತು ಪಂಚೆ ತಮಿಳುನಾಡು ರಾಜಕೀಯದ ಯೂನಿಫಾರ್ಮ್ ಆಗಿಬಿಟ್ಟಿತ್ತು. ಆದರೆ ವಿಜಯ್ ಅದನ್ನು ಬದಲಾಯಿಸಿದ್ದಾರೆ. ಅವರು ಸೂಟು-ಬೂಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ಮಾತ್ರವೇ ಅಲ್ಲದೆ, ಆ ನಂತರದ ದಿನಗಳಲ್ಲಿಯೂ ಸಹ ಅವರು ಪಂಚೆ, ಬಿಳಿ ಶರ್ಟಿನಿಂದ ದೂರವೇ ಉಳಿದಿದ್ದಾರೆ. ಆ ಮೂಲಕ ತಾವು ತಥಾಕಥಿತ ರಾಜಕಾರಣಿ ಅಲ್ಲವೆಂದೂ, ಸಿದ್ಧ ಹಾದಿಯಲ್ಲಿ ತಾವು ನಡೆಯುವುದಿಲ್ಲವೆಂದು ಸೂಚ್ಯವಾಗಿ ಹೇಳಿದ್ದಾರೆ.

ಇನ್ನು ವಿಜಯ್ ಅವರು ಕಪ್ಪು ಬಣ್ಣದ ಕೋಟನ್ನೇ ಧರಿಸಿದ್ದು ಏಕೆ ಎಂಬುದಕ್ಕೆ ಸ್ಪಷ್ಟ ಕಾರಣವೂ ಇದೆ. ಕಪ್ಪು ಅಶುಭ ಎಂಬುದು ಭಾರತದಾದ್ಯಂತ ಬಹುತೇಕರ ರೂಢಿಗತ ನಂಬಿಕೆ. ವಿಜಯ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ರೈಸ್ತರಲ್ಲಿ ಸಹ ಕಪ್ಪು ಅಶುಭ ಎಂಬ ನಂಬಿಕೆ ಇದೆ. ಆದರೆ ವಿಜಯ್ ಮಾತ್ರ, ತಮ್ಮ ಜೀವಮಾನದ ಪ್ರಮುಖ ಸಂದರ್ಭದಲ್ಲಿ ಕಪ್ಪು ಬಣ್ಣದ ಕೋಟನ್ನೇ ಧರಿಸಿ ಬಂದಿದ್ದರು. ಅದಕ್ಕೆ ಬಹಳ ಮುಖ್ಯವಾದ ಕಾರಣ ಇದೆ.

ಇದನ್ನೂ ಓದಿ:400 ಜನರಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ್ದರು ದಳಪತಿ ವಿಜಯ್

ವಿಜಯ್ ಅವರು ತಮಿಳುನಾಡಿನ ಸಾಮಾಜಿಕ ಸುಧಾರಕ ಪೆರಿಯಾರ್ ಅವರ ಅನುಯಾಯಿ. ಪೆರಿಯಾರ್ ಆದರ್ಶಗಳನ್ನು ತಮ್ಮ ರಾಜಕೀಯ ಪಕ್ಷದ ಸಿದ್ಧಾಂತಗಳನ್ನಾಗಿ ಮಾಡಿಕೊಂಡಿದ್ದಾರೆ. ವಿಜಯ್ ಅವರ ರಾಜಕೀಯ ಸಭೆಗಳಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಚಿತ್ರಗಳು ಎದ್ದು ಕಾಣುತ್ತಿದ್ದವು. ಪೆರಿಯಾರ್ ಅವರ ಆದರ್ಶಗಳ ಪಾಲಕನಾಗಿ ಅವರು ಪ್ರಮಾಣ ವಚನಕ್ಕೆ ಕಪ್ಪು ಉಡುಗೆ ಧರಿಸಿ ಬಂದಿದ್ದರು. ಅಸಮಾನತೆ, ಮೌಢ್ಯದ ವಿರುದ್ಧ ಪ್ರತಿಭಟನೆಗೆ ಕಪ್ಪು ಬಣ್ಣದ ಧಿರಿಸು ತೊಡುವಂತೆ ಪೆರಿಯಾರ್ ಬಹಳ ಹಿಂದೆ ಕರೆ ನೀಡಿದ್ದರು. ಪೆರಿಯಾರ್ ಅನುಯಾಯಿಗಳು ಕಪ್ಪು ಬಣ್ಣದ ಉಡುಪು ಧರಿಸುವುದು ಒಂದು ಚಳುವಳಿಯೇ ಆಗಿತ್ತು. ಹಾಗಾಗಿ ವಿಜಯ್ ಅವರು ತಾವು ಪೆರಿಯಾರ್ ವಾದದ ಪ್ರತಿಪಾದಕ ಎಂದು ಸೂಚಿಸಲು ಕಪ್ಪು ಬಣ್ಣದ ಸೂಟು ಧರಿಸಿ ಬಂದಿದ್ದರು.

ವಿಜಯ್ ಅವರ ‘ಸೂಟು ರಾಜಕಾರಣ’ ಸಾಕಷ್ಟು ಚರ್ಚೆಯನ್ನು ತಮಿಳುನಾಡಿನಲ್ಲಿ ಹುಟ್ಟುಹಾಕಿದೆ. ಉಳ್ಳವರ ಧಿರಿಸಾದ ಸೂಟು ಧರಿಸುವ ಮೂಲಕ ವಿಜಯ್ ತಮಿಳುನಾಡಿನ ಬಡವರು, ಮಧ್ಯಮವರ್ಗದವರೊಂದಿಗೆ ಭಾವನಾತ್ಮಕ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಸೂಟು, ಕಾರ್ಪೊರೇಟ್ ಸಂಸ್ಕೃತಿಯನ್ನು ಸೂಚಿಸುತ್ತದೆ, ವಿಜಯ್ ರಾಜ್ಯವನ್ನು ಕಾರ್ಪೊರೇಟ್ ಮಾದರಿಯಲ್ಲಿ ನಡೆಸುವ ಗುರಿ ಹೊಂದಿರಬಹುದು ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಒಟ್ಟಾರೆ ವಿಜಯ್ ಅವರ ಸೂಟು ತಮಿಳುನಾಡಿನ ಪರಂಪರಾಗತ ರಾಜಕೀಯ ಸಂಸ್ಕೃತಿಯನ್ನು ಮುರಿದಿರುವ ಜೊತೆಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಹುಟ್ಟುಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳ ಬಳಿ ಇದ್ದ 717 ಮದ್ಯದಂಗಡಿ ಮುಚ್ಚಲು ವಿಜಯ್‌ ಆದೇಶ: ಸಿಎಂ ಆದ ಬೆನ್ನಲ್ಲೇ ಮಹತ್ವದ ಕ್ರಮ – Kannada News | CM Vijay Orders Closure of 717 TASMAC Liquor Shops in Tamil Nadu; First Major Move as Chief Minister

ತಮಿಳುನಾಡು ಸಿಎಂ ದಳಪತಿ ವಿಜಯ್Image Credit source: tv9

ಚೆನ್ನೈ, ಮೇ 12: ತಮಿಳುನಾಡಿನ (Tamil Nadu) ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಳಪತಿ ವಿಜಯ್ (Joseph Vijay) ಮೊದಲ ಭಾಷಣದಲ್ಲೇ ರಾಜ್ಯದ ಸಾಲದ ಬಗ್ಗೆ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • ಶಾಲೆ, ದೇವಸ್ಥಾನ ಮತ್ತು ಬಸ್ ನಿಲ್ದಾಣದ ಬಳಿಯಿರುವ 717 ಮದ್ಯದ ಅಂಗಡಿಗಳು ಎರಡು ವಾರದಲ್ಲಿ ಬಂದ್.
  • ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಟಿ (VCK) ಬೆಂಬಲದೊಂದಿಗೆ ಸರ್ಕಾರ ರಚಿಸಿದ ಬಳಿಕ ವಿಜಯ್ ಮೊದಲ ನಿರ್ಧಾರ.
  • ‘ವ್ಯಸನ ಮುಕ್ತ ತಮಿಳುನಾಡು’ ನಿರ್ಮಾಣದತ್ತ ಸಿಎಂ ವಿಜಯ್ ಅವರ ಮೊದಲ ಹೆಜ್ಜೆ.

ರಾಜಕೀಯ ಹೈಡ್ರಾಮಾ ಮತ್ತು ಅಧಿಕಾರ ಸ್ವೀಕಾರ

ತಮಿಳುನಾಡಿನ 234 ಸ್ಥಾನಗಳ ಪೈಕಿ 108 ಸೀಟುಗಳನ್ನು ಗೆದ್ದ ವಿಜಯ್ ಟಿವಿಕೆ ಪಕ್ಷವು ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಎದುರಿಸಿತ್ತು. ಒಂದು ವಾರ ನಡೆದ ರಾಜಕೀಯ ಹಗ್ಗಜಗ್ಗಾಟದ ನಂತರ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷದ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದರು. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.

TASMAC ಸದ್ಯ ರಾಜ್ಯಾದ್ಯಂತ 4,765 ಅಂಗಡಿಗಳನ್ನು ನಡೆಸುತ್ತಿದ್ದು, ಅದರಲ್ಲಿ ಮಂದಿರಗಳ ಸಮೀಪವಿರುವ 276, ಶಿಕ್ಷಣ ಸಂಸ್ಥೆಗಳ ಬಳಿಯಿರುವ 186 ಮತ್ತು ಬಸ್ ನಿಲ್ದಾಣಗಳ ಸಮೀಪವಿರುವ 255 ಅಂಗಡಿಗಳನ್ನು ಮುಚ್ಚಲು 2 ವಾರಗಳ ಗಡುವು ನೀಡಲಾಗಿದೆ.

ತಮಿಳುನಾಡು ಸರ್ಕಾರಕ್ಕೆ TASMAC ಸಾರಾಯಿ ಮಾರಾಟದಿಂದ ದೊಡ್ಡ ಪ್ರಮಾಣದ ಆದಾಯ ಹರಿದುಬರುತ್ತಿದೆ. 2025ರಲ್ಲಿ ರಾಜ್ಯದ ಒಟ್ಟು ಆದಾಯ 48,000 ಕೋಟಿ ರೂಪಾಯಿ ದಾಟಿತ್ತು. ಇಷ್ಟೊಂದು ದೊಡ್ಡ ಮಟ್ಟದ ಆದಾಯವಿದ್ದರೂ ವಿಜಯ್ ಅವರು ಸಾರ್ವಜನಿಕ ಹಿತಾಸಕ್ತಿಗೆ ಮಣೆ ಹಾಕಿದ್ದಾರೆ. ಕಳೆದ ವರ್ಷ ಟಾಸ್ಮಾಕ್ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಮಾರು 1,000 ಕೋಟಿ ರೂಪಾಯಿಯಷ್ಟು ಅಕ್ರಮ ಹಣದ ವಹಿವಾಟು ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಹಳೆಯ ಅಕ್ರಮಗಳಿಗೆ ಬ್ರೇಕ್

ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ TASMAC ಮದ್ಯದ ಬಾಟಲಿಗಳ ಮೇಲೆ ಅನಧಿಕೃತವಾಗಿ 10 ರಿಂದ 30 ರೂಪಾಯಿಗಳ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಇಡಿ ಮಾಡಿತ್ತು. ಟೆಂಡರ್ ಪ್ರಕ್ರಿಯೆಯಲ್ಲೂ ದೊಡ್ಡ ಮಟ್ಟದ ಮೋಸ ನಡೆದಿದೆ ಎಂದು ತನಿಖಾ ಸಂಸ್ಥೆ ಹೇಳಿತ್ತು. ಈ ಎಲ್ಲ ವಿವಾದಗಳ ನಡುವೆ ಸಿಎಂ ವಿಜಯ್ ಅವರು ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ‘ವ್ಯಸನ ಮುಕ್ತ ತಮಿಳುನಾಡು’ ಎಂಬ ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿ ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ: ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್ – Kannada News | Supreme Court Stays Recounting Process in Sringeri Assembly Constituency Case, Jeevraj Reaction

ಬೆಂಗಳೂರು, ಮೇ 12: ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಿಜೆಪಿಯ ಜೀವರಾಜ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಟಿ.ಡಿ. ರಾಜೇಗೌಡರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್, ಮರುಮತ ಎಣಿಕೆಯ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೀವರಾಜ್, ನ್ಯಾಯಾಲಯದ ಆದೇಶವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕರಣದ ಬಗ್ಗೆ ಅವಲೋಕಿಸಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ ಮತ್ತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ನಿಗದಿಪಡಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದು ಕೇವಲ ಮಧ್ಯಂತರ ಆದೇಶವಾಗಿದ್ದು, ಅಂತಿಮ ತೀರ್ಪಲ್ಲ. ತಡೆಯಾಜ್ಞೆ ನೀಡಿದ ಕಾರಣ, ಹಾಲಿ ಶಾಸಕರೇ ಮುಂದುವರಿಯಲಿದ್ದಾರೆ. ರಾಜಕೀಯದಲ್ಲಿ ಗೆಲುವು-ಸೋಲು ಸಾಮಾನ್ಯ. ಕೋರ್ಟ್ ಆದೇಶವನ್ನು ಎದುರು ನೋಡುತ್ತಿದ್ದೇನೆ ಮತ್ತು ಅಕ್ಟೋಬರ್ 21ರ ನಂತರ ಒಳ್ಳೆಯದಾಗುವ ವಿಶ್ವಾಸವಿದೆ ಎಂದು ಜೀವರಾಜ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಹೊಸ ಮನೆಗೆ ಶಿಫ್ಟ್ ಆಗ್ತಾ ಇದ್ದೀರಾ? ಹಾಗಿದ್ರೆ ತಪ್ಪಿಯೂ ಈ ವಸ್ತು ಕೊಂಡೊಯ್ಯಬೇಡಿ – Kannada News | Vastu Tips: Don’t Carry These 7 Old Items to Your New Home for Prosperity and Peace

ಹೊಸ ಮನೆಗೆ ಹೋಗುವುದು ಹೊಸ ಭರವಸೆ ಮತ್ತು ಸಂತೋಷದ ಸಂಕೇತ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಹಳೆಯ ಮನೆಯ ಕೆಲವು ವಸ್ತುಗಳನ್ನು ಹೊಸ ಮನೆಗೆ ಕೊಂಡೊಯ್ಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಅಂತಹ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಳೆಯ ಪೊರಕೆ (Old Broom):

ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ಮನೆಗೆ ಹಳೆಯ ಪೊರಕೆಯನ್ನು ಕೊಂಡೊಯ್ಯಬಾರದು. ಹಳೆಯ ಪೊರಕೆಯು ಹಳೆಯ ಮನೆಯ ನಕಾರಾತ್ಮಕತೆ ಮತ್ತು ದಾರಿದ್ರ್ಯವನ್ನು ಹೊಂದಿರುತ್ತದೆ ಎಂದು ನಂಬಲಾಗಿದೆ. ಹೊಸ ಮನೆಗೆ ಯಾವಾಗಲೂ ಹೊಸ ಪೊರಕೆಯನ್ನೇ ಬಳಸಬೇಕು.

ಒಡೆದ ಪಾತ್ರೆ ಮತ್ತು ಗಾಜು (Broken Utensils and Glass):

ಸ್ವಲ್ಪವೇ ಬಿರುಕು ಬಿಟ್ಟ ಪಾತ್ರೆ ಅಥವಾ ಕನ್ನಡಿಗಳನ್ನು ಹೊಸ ಮನೆಗೆ ಕೊಂಡೊಯ್ಯಬೇಡಿ. ಒಡೆದ ಗಾಜು ಮತ್ತು ಪಾತ್ರೆಗಳು ರಾಹು ದೋಷಕ್ಕೆ ಕಾರಣವಾಗುತ್ತವೆ, ಇದು ಮಾನಸಿಕ ಒತ್ತಡ ಮತ್ತು ಆರ್ಥಿಕ ಸಂಕಷ್ಟವನ್ನು ತರುತ್ತದೆ.

ನಿಂತಿರುವ ಗಡಿಯಾರ (Stopped Clocks):

ನಿಂತುಹೋದ ಗಡಿಯಾರಗಳು ವಾಸ್ತು ಪ್ರಕಾರ ಅತ್ಯಂತ ಅಶುಭ. ಇವು ಕುಟುಂಬದ ಸದಸ್ಯರ ಪ್ರಗತಿಗೆ ಅಡ್ಡಿಪಡಿಸುತ್ತವೆ. ರಿಪೇರಿ ಮಾಡಲಾಗದ ಗಡಿಯಾರಗಳನ್ನು ಹೊಸ ಮನೆಗೆ ಒಯ್ಯುವ ಬದಲು ವಿಲೇವಾರಿ ಮಾಡುವುದು ಉತ್ತಮ.

ಮುಳ್ಳಿನ ಗಿಡಗಳು (Thorny Plants):

ಕ್ಯಾಕ್ಟಸ್ ಅಥವಾ ಮುಳ್ಳಿನ ಗಿಡಗಳನ್ನು ಅಲಂಕಾರಕ್ಕಾಗಿ ಹೊಸ ಮನೆಗೆ ಕೊಂಡೊಯ್ಯಬೇಡಿ. ಇವು ಸಂಬಂಧಗಳಲ್ಲಿ ಕಹಿ ಮತ್ತು ಮನೆಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ. ಇವುಗಳ ಬದಲಿಗೆ ತುಳಸಿ, ಮನಿ ಪ್ಲಾಂಟ್ ಅಥವಾ ಅಪರಾಜಿತಾ ಗಿಡಗಳನ್ನು ಬೆಳೆಸಬಹುದು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ತುಕ್ಕು ಹಿಡಿದ ಕಬ್ಬಿಣ ಮತ್ತು ಹಳೆಯ ಕಬಾಡ್ (Rusted Iron and Scrap):

ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು ಅಥವಾ ಹಳೆಯ ಕಸದಂತಹ ವಸ್ತುಗಳು ಶನಿ ಮತ್ತು ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತವೆ. ಹೊಸ ಮನೆಗೆ ಹೋಗುವ ಮುನ್ನ ಇಂತಹ ಅನಗತ್ಯ ವಸ್ತುಗಳನ್ನು ಹೊರಹಾಕುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ.

ಶುಭ ಆರಂಭಕ್ಕಾಗಿ ಏನು ಮಾಡಬೇಕು?

ಹೊಸ ಮನೆಗೆ ಪ್ರವೇಶಿಸುವಾಗ ಮೊದಲು ಗಣೇಶನ ಮೂರ್ತಿ, ಗಂಗಾಜಲ, ತುಳಸಿ ಗಿಡ ಮತ್ತು ಪೂರ್ಣ ಕುಂಭದೊಂದಿಗೆ (ಕಲಶ) ಪ್ರವೇಶಿಸಿ. ಮನೆಯ ಹೊಸ್ತಿಲ ಮೇಲೆ ಹಳದಿ ಮತ್ತು ಕುಂಕುಮದಿಂದ ‘ಸ್ವಸ್ತಿಕ’ ಚಿಹ್ನೆಯನ್ನು ಬರೆಯಲು ಮರೆಯಬೇಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link