Category Archives: Blog

Your blog category

Swapna Shastra: ಕನಸಿನಲ್ಲಿ ಕೂದಲು ಉದುರಿದಂತೆ ಕಂಡರೆ ಏನರ್ಥ? ಇದು ಅಶುಭವೇ? – Kannada News | Hair Loss Dream Meaning: Is It Good or Bad According to Swapna Shastra?

ನಿದ್ರೆಯಲ್ಲಿ ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಮಹತ್ವವಿದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸುಗಳು ನಮಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಒಂದು ಮುನ್ಸೂಚನೆಯನ್ನು ನೀಡುತ್ತವೆ. ಒಂದು ವೇಳೆ ನಿಮ್ಮ ಕೂದಲು ಉದುರುತ್ತಿರುವಂತೆ ನೀವು ಕನಸು ಕಂಡರೆ, ಅದು ಕೇವಲ ಕಾಕತಾಳೀಯವಲ್ಲ. ನಿಜ ಜೀವನದಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿರುವಂತೆ, ಕನಸಿನಲ್ಲಿಯೂ ಇದು ಹಲವು ಪ್ರಮುಖ ಸುಳಿವುಗಳನ್ನು ಒಳಗೊಂಡಿರುತ್ತದೆ. ಈ ಲೇಖನದಲ್ಲಿ ಅಂತಹ ಕನಸುಗಳು ಶುಭವೋ ಅಥವಾ ಅಶುಭವೋ ಎಂಬುದನ್ನು ತಿಳಿಯೋಣ.

ಸ್ವಪ್ನ ಶಾಸ್ತ್ರ ಹೇಳುವುದೇನು?

ಸ್ವಪ್ನ ಶಾಸ್ತ್ರದ ಪ್ರಕಾರ, ಕೂದಲನ್ನು ವ್ಯಕ್ತಿಯ ಸೌಂದರ್ಯ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಕೂದಲು ಉದುರುತ್ತಿರುವಂತೆ ಕನಸು ಕಂಡರೆ, ಅವರು ಅಸುರಕ್ಷತೆ, ಮಾನಸಿಕ ಒತ್ತಡ ಅಥವಾ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಈ ಕನಸು ಜೀವನದಲ್ಲಿ ತಮಗೆ ಅತ್ಯಂತ ಮುಖ್ಯವಾದ ಯಾವುದನ್ನೋ ಕಳೆದುಕೊಳ್ಳುವ ಭಯವನ್ನು ಸಹ ಪ್ರತಿಬಿಂಬಿಸುತ್ತದೆ.

ಇನ್ನು ಕನಸಿನಲ್ಲಿ ಹಠಾತ್ ಮತ್ತು ತ್ವರಿತವಾಗಿ ಕೂದಲು ಉದುರುವುದನ್ನು ಕಾಣುವುದು ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳು, ಆರ್ಥಿಕ ನಷ್ಟಗಳು ಅಥವಾ ಕುಟುಂಬದ ಸದಸ್ಯರ ನಡುವಿನ ಸಂಬಂಧದ ಉದ್ವಿಗ್ನತೆಯನ್ನು ಸೂಚಿಸುತ್ತದೆ. ಈ ಕನಸು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದು ಪ್ರಮುಖ ಬದಲಾವಣೆಗೆ ಒಳಗಾಗಲಿದ್ದಾನೆ ಮತ್ತು ಅದು ಅವರ ಮಾನಸಿಕ ನೆಮ್ಮದಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಎಚ್ಚರಿಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಒಂದು ವೇಳೆ ಕೂದಲು ಉದುರುವುದು ಕನಸಿನಲ್ಲಿ ಕ್ರಮೇಣವಾಗಿ ಸಂಭವಿಸುತ್ತಿದ್ದರೆ, ಅದು ದೀರ್ಘಕಾಲದ ಆತಂಕ ಅಥವಾ ಅತಿಯಾದ ಆಯಾಸದ ಸಂಕೇತವಾಗಿರಬಹುದು. ವ್ಯಕ್ತಿಯು ತನ್ನ ದಿನನಿತ್ಯದ ಬದುಕಿನಲ್ಲಿ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವ ಅಗತ್ಯವಿದೆ ಎಂದು ಇದು ಸೂಚಿಸುತ್ತದೆ. ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಇದು ಸಕಾಲ ಎಂಬ ಮುನ್ಸೂಚನೆ ಇದಾಗಿದೆ.

ಆರೋಗ್ಯದ ದೃಷ್ಟಿಕೋನ:

ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದರೆ, ಇಂತಹ ಕನಸುಗಳು ಹೆಚ್ಚಾಗಿ ದೈಹಿಕ ದೌರ್ಬಲ್ಯ ಅಥವಾ ಅಸಮತೋಲಿತ ದಿನಚರಿಯನ್ನು ಸೂಚಿಸುತ್ತವೆ. ನಿಮ್ಮ ಆಹಾರ ಪದ್ಧತಿ, ನಿದ್ರೆ ಮತ್ತು ದಿನನಿತ್ಯದ ಕೆಲಸಗಳಲ್ಲಿ ಶಿಸ್ತು ಇಲ್ಲದಿದ್ದಾಗ ಸುಪ್ತ ಮನಸ್ಸು ಇಂತಹ ಕನಸುಗಳ ಮೂಲಕ ಸಂದೇಶ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವುದು ಮತ್ತು ಸರಿಯಾದ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಆದರೆ, ಪ್ರತಿಯೊಂದು ಕನಸು ನಕಾರಾತ್ಮಕವಾಗಿರಲೇಬೇಕೆಂದಿಲ್ಲ. ಕೆಲವು ಸಂದರ್ಭಗಳಲ್ಲಿ, ಕೂದಲು ಉದುರುವಿಕೆಯ ಕನಸು ಜೀವನದಲ್ಲಿ ಹೊಸ ಬದಲಾವಣೆಗಳು ಮತ್ತು ಹೊಸ ಆರಂಭದ ಸಂಕೇತವೂ ಆಗಿರಬಹುದು. ಇದು ವ್ಯಕ್ತಿಯು ತನ್ನ ಹಳೆಯ ಆಲೋಚನೆಗಳು ಅಥವಾ ದೀರ್ಘಕಾಲದ ಸಮಸ್ಯೆಗಳನ್ನು ಬಿಟ್ಟು ಮುಂದುವರಿಯಲು ಸಿದ್ಧನಾಗಿದ್ದಾನೆ ಎಂದು ಸೂಚಿಸುತ್ತದೆ. ಅಂದರೆ, ಹಳೆಯದನ್ನು ತೊರೆದು ಹೊಸತನಕ್ಕೆ ತೆರೆದುಕೊಳ್ಳುವ ಧನಾತ್ಮಕ ಸೂಚನೆಯೂ ಇದಾಗಿರಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾಲಿ ಧನಂಜಯ್ ಪುತ್ರನಿಗಾಗಿ ತಯಾರಾಗುತ್ತಿದೆ ವಿಶ್ವಪ್ರಸಿದ್ಧ ಕಲಘಟಗಿ ತೊಟ್ಟಿಲು: ಏನಿದರ ವಿಶೇಷತೆ? – Kannada News | Daali Dhananjay orders famous Kalagatagi cradle for his son

ನಟ ಡಾಲಿ ಧನಂಜಯ್ (Daali Dhananjay) ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಅವರ ಪತ್ನಿ ವೈದ್ಯೆ ಧನ್ಯತಾ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿರುವ ನಟ ಡಾಲಿ ಧನಂಜಯ್, ಇದೀಗ ತಮ್ಮ ನವಜಾತ ಶಿಶುವಿಗಾಗಿ ತೊಟ್ಟಿಲು ಖರೀದಿಸುತ್ತಿದ್ದಾರೆ. ಅದೂ ಅಂತಿಥ ಸಾಮಾನ್ಯ ತೊಟ್ಟಿಲಲ್ಲ, ಬದಲಿಗೆ ವಿಶ್ವಪ್ರಸಿದ್ಧವಾಗಿರುವ ಕಲಘಟಗಿಯ ತೊಟ್ಟಿಲು. ಕಲಘಟಗಿ ಪಟ್ಟಣದ ತೊಟ್ಟಿಲಿಗೆ ಸುದೀರ್ಘ ಇತಿಹಾಸವಿದೆ. ಅದಕ್ಕೆ ಅದರದ್ದೇ ಆದ ಪರಂಪರೆ, ಪ್ರಾಮುಖ್ಯತೆ ಇದೆ. ಇಂಥಹಾ ಅಪರೂಪದ ತೊಟ್ಟಿಲನ್ನು ಡಾಲಿ ಖರೀದಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ, ತೊಟ್ಟಿಲು ಪಟ್ಟಣ ಅಂತಲೇ ಸುಪ್ರಸಿದ್ದವಾಗಿದೆ. ಕಳೆದ ನಾಲ್ಕು ತೆಲೆಮಾರುಗಳಿಂದ ಪಟ್ಟಣದ ಸಾವುಕಾರ ಕುಟುಂಬ ವಿಶಿಷ್ಟ ತೊಟ್ಟಿಲುಗಳನ್ನು ಮಾಡುತ್ತಾ ಬಂದಿದೆ. ಇತ್ತೀಚೆಗೆ ಮರದ ತೊಟ್ಟಿಲುಗಳ ಖರೀದಿಸುವವರ ಸಂಖ್ಯೆ ದಯನೀಯವಾಗಿ ಕುಸಿದಿದೆ, ಆದರೂ ಕಲಘಟಗಿ ತೊಟ್ಟಿಲುಗಳು ಮಾತ್ರ ಬೇಡಿಕೆ ಕಳೆದುಕೊಂಡಿಲ್ಲ. ಸಾವುಕಾರ ಕುಟುಂಬದ ಶ್ರೀಧರ್ ಸಾವುಕಾರು ಇದೀಗ ಕಲಘಟಗಿ ಪಟ್ಟಣದ ಚಿತ್ರಗಾರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ತೊಟ್ಟಿಲು ತಯಾರು ಮಾಡುವ ತಮ್ಮ ಹಿಂದಿನ ಪೀಳಿಗೆಯ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇವರೇ ಈಗ ಡಾಲಿ ಧನಂಜಯ್ ಅವರಿಗೂ ತೊಟ್ಟಿಲು ನಿರ್ಮಿಸಿಕೊಡಲಿದ್ದಾರೆ.

ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡಿದ್ದ ವರನಟ ಡಾ ರಾಜಕುಮಾರ್, ತಮ್ಮ ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದರಂತೆ. ಅಂಬರೀಶ್ ಅವರು ನಟ ಯಶ್ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ನಂತರ ಯಶ್ ಅವರು ಅಂಬರೀಶ್ ಪುತ್ರ ಅಭಿಷೇಕ ಪುತ್ರನಿಗೆ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡು, ತಮ್ಮ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?

ಚಿತ್ರರಂಗದವರು ಮಾತ್ರವಲ್ಲಾ, ರಾಮಕೃಷ್ಣ ಹೆಗಡೆ, ಎಮ್ ವೈ ಘೋರ್ಪಡೆ ಸೇರಿದಂತೆ ಅನೇಕ ರಾಜಕಾಣಿಗಳು, ಉದ್ಯಮಿಗಳು, ಅಧಿಕಾರಿಗಳು, ತಮ್ಮ ಕುಟುಂಬದಲ್ಲಿ ಮಗು ಜನನವಾದಾಗ, ಇದೇ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿ, ತೊಟ್ಟಿಲಲ್ಲಿ ಮಕ್ಕಳನ್ನು ಹಾಕಿ ಲಾಲಿ ಹಾಡಿ ಸಂಭ್ರಮಿಸಿದ್ದಾರಂತೆ. ಇದೀಗ ನಟ ಡಾಲಿ ಧನಂಜಯ್, ತಮಗೆ ಮಗುವಾಗುತ್ತಿದ್ದಂತೆ, ಪರಿಚಿತ ನಾರಾಯಣ್ ಕಲಾಲ್ ಎನ್ನುವವರ ಸಹಾಯದಿಂದ ಕಲಘಟಗಿಯಲ್ಲಿ ತೊಟ್ಟಿಲು ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕಲಘಟಗಿ ತೊಟ್ಟಿಲು ಡಾಲಿ ಧನಂಜಯ್ ಮನೆ ತಲುಪಲಿದೆ.

ರಾಜ್ಯದ ಅನೇಕ ಕಡೆ ತೊಟ್ಟಿಲು ತಯಾರು ಮಾಡುವವರು ಇದ್ದಾರೆ. ಆದರೆ ಕಲಘಟಗಿ ಸಾವುಕಾರ್ ಕುಟುಂಬ ತಯಾರಿಸೊ ತೊಟ್ಟಿಲು ವಿಶೇಷ ಮತ್ತು ವಿಭಿನ್ನವಾಗಿರುತ್ತವೆ. ಸಾಗುವಾನಿ ಕಟ್ಟಿಗೆಯನ್ನು ಬಳಸಿ ತೊಟ್ಟಿಲು ತಯಾರು ಮಾಡಲಾಗುತ್ತದೆ. ಅದಕ್ಕೆ ಯಾವುದೇ ರಾಸಾಯಿನಿಕ ಮಿಶ್ರಿತ ಬಣ್ಣವನ್ನು ಬಳಯದೆ, ಸಾವುಕಾರ್ ಕುಟುಂಬ, ತಾವೇ ದೇಶಿಯವಾಗಿ ಸಿಗೋ ಅನೇಕ ವಸ್ತುಗಳನ್ನು ಬಳಿಸಿ ಬಣ್ಣವನ್ನು ತಯಾರು ಮಾಡಿ, ಅದರ ಲೇಪನ ಮಾಡುತ್ತಾರೆ. ಹೀಗೆ ಹಚ್ಚಿದ ಬಣ್ಣ ವರ್ಷಗಳವರಗೆ ಹಾಳಾಗದೇ ಉಳಿಯುತ್ತದೆ. ಜೊತೆಗೆ ಇಡೀ ತೊಟ್ಟಿಲಿಗೆ ರಾಮಾಯಣ, ಮಹಾಭಾರತದ ಅನೇಕ ದೃಶ್ಯಗಳ ಚಿತ್ರಗಳನ್ನು ಬಿಡಿಸಲಾಗುತ್ತದೆ. ಎಷ್ಟೇ ವರ್ಷಗಳ ಕಾಲ ಇಟ್ಟರೂ ಈ ತೊಟ್ಟಿಲು ಹಾಳಾಗದೇ ಉಳಿಯುತ್ತದೆ. ಹೀಗಾಗಿ ಕಲಘಟಗಿ ತೊಟ್ಟಿಲಿಗೆ ಎಲ್ಲಿದ ಬೇಡಿಕೆ. ಕೇವಲ ಕರ್ನಾಟಕ ಮಾತ್ರವಲ್ಲಾ, ದೇಶ ಮತ್ತು ಹೊರದೇಶಗಲ್ಲಿದ್ದವರು ಕೂಡಾ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರಂತೆ. ಪ್ರಧಾನಿ ಮೋದಿ ಅವರಿಗೆ ಕೂಡಾ ಕಲಘಟಗಿ ತೊಟ್ಟಿಲನ್ನು ಸಾವುಕಾರ ಕುಟುಂಬ ಉಡುಗರೆಯಾಗಿ ನೀಡಿತ್ತು. ಒಂದು ತೊಟ್ಟಿಲು ಸಿದ್ದ ಮಾಡಲು ಸರಿಸುಮಾರು ಇಪ್ಪತ್ತು ದಿನದಿಂದ ಒಂದು ತಿಂಗಳ ಸಮಯವನ್ನು ಕುಟುಂಬ ತಗೆದುಕೊಳ್ಳುತ್ತದೆ. ತೊಟ್ಟಿಲು ಆರ್ಡರ್ ಮಾಡಿದವರಿಗೆ ಅಚ್ಚುಕಟ್ಟಾಗಿ ಸುಂದರವಾದ ತೊಟ್ಟಿಲುಗಳನ್ನು ಸಿದ್ದಮಾಡಿ ನೀಡುವ ಕೆಲಸವನ್ನು ಸಾವುಕಾರ್ ಕುಟುಂಬ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ? – Kannada News | Cubbon Park Walkers Association Opposes Mango Mela Inside Park Premises

ಮಾವು ಮೇಳಕ್ಕೆ ವಿರೋಧ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 07: ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ನಾಳೆಯಿಂದ ತೋಟಗಾರಿಕೆ ಇಲಾಖೆಯು ಹಮ್ಮಿಕೊಂಡಿರುವ ‘ಮಾವು ಮೇಳ’ಕ್ಕೆ (Mango Mela) ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ (CPWA) ತೀವ್ರ ವಿರೋಧ ವ್ಯಕ್ತಪಡಿಸಿದೆ. ಉದ್ಯಾನವನದ ಆವರಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಘವು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ.

ಮುಖ್ಯಾಂಶಗಳು

  • ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ತೋಟಗಾರಿಕೆ ಇಲಾಖೆ ಗಾಳಿಗೆ ತೂರಿತಾ?
  • ಬೃಹತ್ ಮೇಳಗಳ ಆಯೋಜನೆಯಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ತೊಂದರೆ
  • ಮಾವು ಮೇಳ ಬೇರೆಡೆಗೆ ಸ್ಥಳಾಂತರಕ್ಕೆ ಒತ್ತಾಯ

ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ: ಎಸ್. ಉಮೇಶ್ ಕಿಡಿ 

ಈ ಹಿಂದೆ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಉದ್ಯಾನವನವನ್ನು ಸಂರಕ್ಷಿಸಲಾಗುವುದು ಮತ್ತು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟ ಭರವಸೆ ನೀಡಿದ್ದರು. ಆದರೆ, ಇದೀಗ ತೋಟಗಾರಿಕೆ ಇಲಾಖೆಯೇ ಮೇಳ ಆಯೋಜಿಸಲು ಮುಂದಾಗಿರುವುದು ಸರ್ಕಾರದ ಭರವಸೆಗೆ ವಿರುದ್ಧವಾಗಿದೆ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಕಿಡಿಕಾರಿದ್ದಾರೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ತೋಟಗಾರಿಕೆ ಇಲಾಖೆಯು ಉದ್ಯಾನವನದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಾವು, ಹಲಸು ಪ್ರಿಯರಿಗೆ ಈ ಬಾರಿ ಡಬ್ಬಲ್ ಧಮಾಕ! ಬೆಂಗಳೂರಿನ ಎರಡು ಕಡೆ ‘ಮಾವು ಮತ್ತು ಹಲಸಿನ ಮೇಳ’

ಕಬ್ಬನ್ ಪಾರ್ಕ್ ನಗರದ ಪ್ರಮುಖ ಮತ್ತು ಪರಿಸರ ಪರಂಪರೆಯ ತಾಣವಾಗಿದೆ. ಇದನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗ ಮಾಡುವುದು ಅದರ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿದಂತಾಗುತ್ತದೆ. ಕಬ್ಬನ್ ಪಾರ್ಕ್‌ನಲ್ಲಿ ಇಂತಹ ಬೃಹತ್ ಮೇಳಗಳನ್ನು ಆಯೋಜಿಸುವುದರಿಂದ ಜನಸಂದಣಿ ಮತ್ತು ವಾಹನ ಸಂಚಾರ ವಿಪರೀತವಾಗಿ ಹೆಚ್ಚಲಿದೆ. ಇದರಿಂದ ಉದ್ಯಾನವನದ ಸೂಕ್ಷ್ಮ ಪರಿಸರ ವ್ಯವಸ್ಥೆ ಹಾಗೂ ವನ್ಯಜೀವಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾವು ಮೇಳದಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವಿಶಾಲವಾದ ಸ್ಥಳಗಳ ಕೊರತೆಯಿಲ್ಲ. ಅರಮನೆ ಮೈದಾನದಂತಹ ಬೃಹತ್ ಸ್ಥಳಗಳು ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚು ಸೂಕ್ತವಾಗಿದೆ. ಆದರೆ ಪರಿಸರಕ್ಕೆ ಹಾನಿ ಮಾಡುವ ಉದ್ಯಾನವನವನ್ನೇ ಆರಿಸಿಕೊಂಡಿರುವುದು ಅವೈಜ್ಞಾನಿಕ ಎಂದು ಸಂಘ ದೂರಿದೆ.

ಇದನ್ನೂ ಓದಿ: ರಣಬಿಸಿಲಲ್ಲೂ ನಳನಳಿಸಿದ ‘ದಿಲ್ ಖುಷ್’: ವಿಶಿಷ್ಟ ತಳಿಯ ದ್ರಾಕ್ಷಿಗೆ ಭಾರೀ ಡಿಮ್ಯಾಂಡ್; ರೈತರು ಖುಷಿಯೋ ಖುಷಿ

ಕಬ್ಬನ್ ಪಾರ್ಕ್ ಪರಿಸರ ಸ್ನೇಹಿ ಉದ್ಯಾನವನವಾಗಿಯೇ ಉಳಿಯಬೇಕೇ ಹೊರತು ವಾಣಿಜ್ಯ ಕೇಂದ್ರವಾಗಬಾರದು. ತೋಟಗಾರಿಕೆ ಇಲಾಖೆ ಡಿಸಿಎಂ ಡಿಕೆ ಶಿವಕುಮಾರ್​​ ಸಾರ್ವಜನಿಕರಿಗೆ ನೀಡಿರುವ ಭರವಸೆಯನ್ನು ಗೌರವಿಸಬೇಕು. ಹೀಗಾಗಿ ಶಾಂತಿ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಎಸ್. ಉಮೇಶ್ ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಧಾನಸಭಾ ಚುನಾವಣೆ ವೇಳೆ 1,400 ಕೋಟಿಗೂ ಹೆಚ್ಚು ಅಕ್ರಮ ಹಣ ವಶಕ್ಕೆ; ಪಶ್ಚಿಮ ಬಂಗಾಳದಲ್ಲೇ ಅಧಿಕ ಮೊತ್ತ ಸೀಜ್ – Kannada News | Assembly Elections Election Commission seizes Over Rs 1,400 crore worth of illicit funds Highest In Bengal

ನವದೆಹಲಿ, ಮೇ 7: 2026ರ ವಿಧಾನಸಭಾ ಚುನಾವಣೆಯ (Assembly Elections) ಸಮಯದಲ್ಲಿ ಚುನಾವಣಾ ಆಯೋಗ ಒಟ್ಟು 1,400 ಕೋಟಿ ರೂ. ಹೆಚ್ಚು ಮೌಲ್ಯದ ಅಕ್ರಮ ಹಣವನ್ನು ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ಡೇಟಾ ಬಿಡುಗಡೆ ಮಾಡಿದೆ. 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ 1,400 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಈ ಅಕ್ರಮ ವಸ್ತುಗಳಲ್ಲಿ 154.89 ಕೋಟಿ ನಗದು, 183.3 ಕೋಟಿ ಮೌಲ್ಯದ 69.8 ಲಕ್ಷ ಲೀಟರ್ ಮದ್ಯ, 337.8 ಕೋಟಿ ಮೌಲ್ಯದ ಮಾದಕ ದ್ರವ್ಯ, 250 ಕೋಟಿ ಮೌಲ್ಯದ ಅಮೂಲ್ಯವಾದ ಲೋಹ ಮತ್ತು 518 ಕೋಟಿ ಮೌಲ್ಯದ ಉಚಿತ ವಸ್ತುಗಳು ಸೇರಿವೆ ಎಂದು ಚುನಾವಣಾ ಆಯೋಗ ಬಹಿರಂಗಪಡಿಸಿದೆ.

2026ರ ಸಾರ್ವತ್ರಿಕ ಚುನಾವಣೆಗಳು, ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು 5 ರಾಜ್ಯಗಳಾದ್ಯಂತ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ರೂ 1,400 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ

ಪ್ರಕಟಣೆಯ ಪ್ರಕಾರ, 2021ರ ಚುನಾವಣೆಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಶೇ. 68.92ರಷ್ಟು ಅತಿ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಚುನಾವಣಾ ಅಧಿಕಾರಿಗಳು (CEOಗಳು), ಪೊಲೀಸ್ ಮಹಾನಿರ್ದೇಶಕರು (DGPಗಳು) ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳ ಹಾಗೂ ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳೊಂದಿಗೆ ಹಲವು ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ – Kannada News | Chanakya Niti: What happens when you have too many expectations?

ನಿರೀಕ್ಷೆ (expectations) ಇಟ್ಟುಕೊಳ್ಳುವುದು, ಒಬ್ಬರಿಂದೊಬ್ಬರು ಏನನ್ನಾದರೂ ಅಪೇಕ್ಷಿಸುವುದು ಮನುಷ್ಯನ ಸಹಜ ಗುಣ. ಕೆಲವೊಂದು ಬಾರಿ ನಾವು  ಒಬ್ಬರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತೇವೆ. ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದಾಗ ಮನಸ್ಸು ಒಡೆದು ಹೋಗುತ್ತದೆ. ಆದ್ದರಿಂದ ಯಾರಿಂದಲೂ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಕ್ರಮೇಣ ನಮ್ಮ ಮನಸ್ಸು, ಆಲೋಚನೆ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಮನಸ್ಸು, ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಅತಿಯಾದ ನಿರೀಕ್ಷೆಯಿಂದ ಏನೆಲ್ಲಾ ತೊಂದರೆಗಳು ಉದ್ಭವಿಸುತ್ತದೆ ಎಂಬುದನ್ನು ನೋಡೋಣ ಬನ್ನಿ.

ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದರಿಂದ ಏನಾಗುತ್ತದೆ?

ಹತಾಶೆ ಹೆಚ್ಚಾಗಬಹುದು: ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಯಾರಿಂದಾದರೂ ಹೆಚ್ಚು ನಿರೀಕ್ಷಿಸಿದಾಗ, ಮತ್ತು ಅವರು ನಮ್ಮ ನಿರೀಕ್ಷೆಗಳನ್ನು ಪೂರೈಸದಿದ್ದರೆ, ನಾವು ತೀವ್ರ ನಿರಾಶೆಗೆ ಒಳಗಾಗುತ್ತೇವೆ. ಇದು ನಮ್ಮ ಮನಸ್ಸನ್ನು ಬೇಗನೆ ದುರ್ಬಲಗೊಳಿಸುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಇತರರ ನಡವಳಿಕೆಯನ್ನು ನಿಯಂತ್ರಿಸುವುದು ನಮ್ಮ ನಿಯಂತ್ರಣಕ್ಕೆ ಮೀರಿದ್ದು. ಇತರರಿಂದ ಅತಿಯಾದ ನಿರೀಕ್ಷೆಗಳನ್ನು ತಪ್ಪಿಸಲು ಇದು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಯಾರಿಂದಲೂ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳಬೇಡಿ.

ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗುತ್ತದೆ: ಚಾಣಕ್ಯ ನೀತಿಯ ಪ್ರಕಾರ, ಇತರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಅಭ್ಯಾಸ  ಸಂಬಂಧಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಸಂಬಂಧದಲ್ಲಿ ನಮ್ಮ ನೆಚ್ಚಿನ ವ್ಯಕ್ತಿಯು ಯಾವಾಗಲೂ ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ವರ್ತಿಸಬೇಕು, ಅವರು ನಮ್ಮ ಇಚ್ಛೆಯಂತೆಯೇ ಇರಬೇಕು ಎಂದು ನಾವು ಯಾವಾಗಲೂ ಆಶಿಸುತ್ತೇವೆ, ಆದರೆ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಆಲೋಚನೆ ಮತ್ತು ಮಿತಿಗಳನ್ನು ಹೊಂದಿರುತ್ತಾನೆ. ಆದ್ದರಿಂದ, ಇತರ ವ್ಯಕ್ತಿಯು ನಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದಾಗ, ಅದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ.  ಮತ್ತು ಇದರಿಂದ ಕೋಪ, ಮನಸ್ತಾಪ ಉಂಟಾಗಿ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ.

ಮಾನಸಿಕ ಒತ್ತಡ ಹೆಚ್ಚಾಗುತ್ತದೆ: ನೀವು ನಿರಂತರವಾಗಿ ಇತರರಿಂದ ನಿರೀಕ್ಷೆಗಳನ್ನು ಇಟ್ಟುಕೊಂಡಾಗ, ಆ ನಿರೀಕ್ಷೆಗಳನ್ನು ಅವರು ಪೂರೈಸದಿದ್ದಾಗ, ನಿಮ್ಮ ಮನಸ್ಸು ಛಿದ್ರವಾಗುತ್ತದೆ. ನಾನು ಬಯಸಿದ್ದು ಏಕೆ ಸಿಗಲಿಲ್ಲ, ಅವರು ನಾನಂದುಕೊಂಡ ರೀತಿಯಲ್ಲಿ ಏಕೆ ಇಲ್ಲ ಹೀಗೆ ಇಂತಹ ಪ್ರಶ್ನೆಗಳು ನಿರಂತರವಾಗಿ ಮನಸ್ಸಿನಲ್ಲಿ ಸುಳಿದಾಡುತ್ತದೆ. ಈ ಆಲೋಚನೆಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ  ಮತ್ತು ನಿಮ್ಮ ಸಂತೋಷವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಯಾರಿಂದಲೂ ಏನನ್ನೂ ಅತಿಯಾಗಿ ನಿರೀಕ್ಷಿಸಬೇಡಿ.

ಇದನ್ನೂ ಓದಿ: ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಆತ್ಮವಿಶ್ವಾಸ ಕಡಿಮೆಯಾಗುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಇತರರ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಾಗ, ನಾವು ನಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ನಮ್ಮೆಲ್ಲಾ ವಿಶ್ವಾಸವನ್ನು ನಾವು ಅತಿಯಾಗಿ ನಿರೀಕ್ಷಿಸುವ ವ್ಯಕ್ತಿಯ ಮೇಲೆ ಇಟ್ಟುಬಿಡುತ್ತೇವೆ. ಈ ಮನಸ್ಥಿತಿಯು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಆತ್ಮವಿಶ್ವಾಸದ ಕೊರತೆಯಿಂದ ಖಂಡಿತವಾಗಿಯೂ ವ್ಯಕ್ತಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇತರರ ಮೇಲೆ ಅತಿಯಾಗಿ ನಿರೀಕ್ಷೆ ಇಟ್ಟುಕೊಳ್ಳುವ ಬದಲು ನಿಮ್ಮನ್ನು ನೀವು ನಂಬಿ, ವಿಶ್ವಾಸವನ್ನು ಇಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟ್ರಾಂಗ್‌ ರೂಮ್‌ ಬೀಗ ಕಳೆದಿರೋದು ನಾವು ಎಂದೂ ಕೇಳಿಲ್ಲ: ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಮಾಜಿ ಎಂಪಿ ಹೇಳಿದ್ದಿಷ್ಟು – Kannada News | Ex MP GM Siddeshwar Reacts on BJP defeated In Davanagere South By Election

ದಾವಣಗೆರೆ, (ಮೇ 07): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere South By Election) ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ಆದ್ರೆ, ಮತ ಎಣಿಕೆ ಆರಂಭದಲ್ಲಿ ಸ್ಟ್ರಾಂಗ್ ರೂಮ್ ಬೀಗಗಳು ಕಾಣೆಯಾಗಿದ್ದವು. ಇದರಿಂದ ಗೊಂದಲ ಉಂಟಾಗಿ, ಅಧಿಕಾರಿಗಳು ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಬೀಗಗಳನ್ನು ಮುರಿದು ಸ್ಟ್ರಾಂಗ್ ರೂಮ್ ತೆರೆದು ಮತ ಎಣಿಕೆ ಮಾಡಿದ್ದು, ಇದೀಗ ಬಿಜೆಪಿಗರ ಅನುಮಾನಕ್ಕೆ ಕಾರಣವಾಗಿದೆ. ಇನ್ನು ತಮ್ಮ ಪಕ್ಷದ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸೋಲಿನ ಬಗ್ಗೆ ಮಾಜಿ ಸಂಸದ ಜಿಎಮ್ ಸಿದ್ದೇಶ್ವರ್ ಪ್ರತಿಕ್ರಿಯಿಸಿದ್ದು, ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ ಅಂತೆಲ್ಲಾ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mother’s Day 2026: ಈ ಬಾರಿಯ ತಾಯಂದಿರ ದಿನವನ್ನು ಹೀಗೆ ವಿಶೇಷವಾಗಿ ಆಚರಿಸಿ – Kannada News | Mother’s Day 2026: What can you do for Mom on Mother’s Day? Here are some ideas

ತಾಯಿಗೆ (Mother) ಆಕೆಯ ಪ್ರೀತಿಗೆ ವಿಶೇಷವಾದ ಸ್ಥಾನವಿದೆ. ಮಕ್ಕಳು, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿಯ ತ್ಯಾಗ, ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷ, ಏಳಿಗೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧಳಿರುವ ತ್ಯಾಗಮಯಿ ತಾಯಿಗೆ ಗೌರವಿಸಲು ಆಕೆಯನ್ನು ಸಂಭ್ರಮಿಸಲು ಪ್ರತಿವರ್ಷ ಮೇ ಎರಡನೇ ಭಾನುವಾರದಂದು ವಿಶ್ವಾದ್ಯಂತ ಮದರ್ಸ್‌ ಡೇ ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಾಯಂದಿರನ್ನು ಸಂಭ್ರಮಿಸುತ್ತಾರೆ. ಗಿಫ್ಟ್‌, ಸರ್‌ಪ್ರೈಸ್‌ ನೀಡುವ ಮೂಲಕ ಅಮ್ಮನಿಗೊಂದು ಥ್ಯಾಂಕ್ಸ್‌ ಹೇಳುತ್ತಾರೆ. ಈ ಬಾರಿ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಖುಷಿಪಡಿಸಲು, ಆಕೆಯನ್ನು ಸಂಭ್ರಮಿಸಲು ಏನು ಮಾಡಬಹುದು, ತಾಯಂದಿರ ದಿನವನ್ನು ವಿಶೇಷವಾಗಿ ಯಾವ ರೀತಿ ಆಚರಿಸಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಾಯಂದಿರ ದಿನದಂದು ಅಮ್ಮನಿಗಾಗಿ ನೀವು ಏನು ಮಾಡಬಹುದು?

ಅಮ್ಮನಿಗೆ ವಿಶ್ರಾಂತಿ ನೀಡಿ: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅಮ್ಮನಿಗೆ ಒಂದಲ್ಲಾ ಒಂದು ಕೆಲಸ ಇದ್ದೇ ಇರುತ್ತದೆ. ಆಕೆಗೆ ವಿಶ್ರಾಂತಿ ಅನ್ನೋದೇ ಇರೋಲ್ಲ. ಹೀಗಿರುವಾಗ ಮದರ್ಸ್‌ ಡೇ ದಿನ ಅಮ್ಮನಿಗೆ ಎಲ್ಲಾ ಕೆಲಸದಿಂದ ಬ್ರೇಕ್‌ ಕೊಟ್ಟು, ಸಂಪೂರ್ಣ ಮನೆಯ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವ ಮೂಲಕ ಆಕೆಗೆ ರೆಸ್ಟ್‌ ನೀಡಬಹುದು, ಆಕೆಯನ್ನು ಸಂತೋಷಪಡಿಸಬಹುದು.

ಸರ್‌ಪ್ರೈಸ್‌ ನೀಡಿ: ಪ್ರತಿಯೊಬ್ಬ ಮಹಿಳೆಯೂ ಸರ್‌ಪ್ರೈಸ್‌ಗಳೆಂದರೆ ತುಂಬಾನೇ ಇಷ್ಟ. ಆದ್ದರಿಂದ ನಿಮ್ಮ ಅಮ್ಮನನ್ನು ಸಂತೋಷಪಡಿಸಲು ಆಕೆಗೆ ಸರ್‌ಪ್ರೈಸ್‌ ಉಡುಗೊರೆಗಳನ್ನು ನೀಡಬಹುದು. ಆಕೆಗಾಗಿ ಸರ್‌ಪ್ರೈಸ್‌ ಟ್ರಿಪ್‌, ಡಿನ್ನರ್‌ ಪಾರ್ಟಿ ಅರೇಂಜ್‌ ಮಾಡಬಹುದು.

ನಿಮ್ಮ ಒಂದು ದಿನವನ್ನು ತಾಯಿಯಾಗಿ ಅರ್ಪಿಸಿ: ಇಂದಿನ ಯುವ ಜನತೆ ಮೊಬೈಲ್‌, ಇಂಟರ್‌ನೆಟ್‌ನಲ್ಲಿ ಸಮಯ ಕಳೆಯುವಷ್ಟು, ತಮ್ಮ ತಾಯಿಯೊಂದಿಗೆ ಸಮಯ ಕಳೆಯುವುದಿಲ್ಲ. ಅಮ್ಮನೊಂದಿಗೆ ಸರಿಯಾಗಿ ಮಾತನಾಡುವುದು ಕೂಡ ಇಲ್ಲ. ಆದ್ದರಿಂದ ಅಮ್ಮಂದಿರ ದಿನದಂದು ತಾಯಿಯನ್ನು ಸಂತೋಷಪಡಿಸಲು ನಿಮ್ಮ ಪೂರ್ಣ ಸಮಯವನ್ನು ತಾಯಿಗಾಗಿ ಮೀಸಲಿಡಲು ಪ್ರಯತ್ನಿಸಿ. ಅವರ ಕೆಲಸಗಳಲ್ಲಿ ಸಹಾಯ ಮಾಡಿ, ಅವರನ್ನು ಎಲ್ಲಾದ್ರೂ ಹೊರಗಡೆ ಕರೆದುಕೊಂಡು ಹೋಗಿ ಅವರಿಷ್ಟದ ತಿಂಡಿ ತಿನಿಸನ್ನು, ನೆಚ್ಚಿನ ಸೀರೆಯನ್ನು ತೆಗೆದಯಕೊಡಿ. ಅವರನ್ನು ರಾಣಿಯಂತೆ ಭಾವಿಸುವಂತೆ ಮಾಡಿ.

ಇದನ್ನೂ ಓದಿ: ಮದುವೆಯ ಬಳಿಕ ನವದಂಪತಿಗಳು ಹನಿಮೂನ್‌ಗೆ ಹೋಗೋ ಹಿಂದಿನ ಕಾರಣ ತಿಳಿಯಿರಿ

ವಿಶೇಷ ಖಾದ್ಯ ತಯಾರಿಸಿ: ಅಮ್ಮಂದಿರ ದಿನದಂದು ನಿಮ್ಮ ತಾಯಿಗಾಗಿ ಅವರಿಷ್ಟದ ಖಾದ್ಯ, ಸ್ಟೀಟ್‌ಗಳನ್ನು ನಿಮ್ಮ ಕೈಯಾರೆ ತಯಾರಿಸಿ, ಉಣಬಡಿಸಿ. ಇದು ಖಂಡಿತವಾಗಿಯೂ ನಿಮ್ಮ ತಾಯಿಗೆ ಖುಷಿ ಕೊಡುತ್ತದೆ.

ಇದಲ್ಲದೆ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಸಂಭ್ರಮಿಸಲು, ಅವರನ್ನು ಖುಷಿಪಡಿಸಲು ಅವರನ್ನು ಲಂಚ್‌, ಡಿನ್ನರ್‌ ಡೇಟ್‌ಗೆ ಕರೆದುಕೊಂಡು ಹೋಗಬಹುದು. ಮನೆಯ ಕೆಲಸದಿಂದ ಬ್ರೇಕ್‌ ಕೊಟ್ಟು ಅವರನ್ನು ಒಂದು ದಿನ ಹೊರಗಡೆ ಸುತ್ತಾಡಿಸಿಕೊಂಡು ಬರಬಹುದು, ಅವರಿಗಾಗಿ ಟ್ರಿಪ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಏನಾದರೂ ಸ್ಪೆಷಲ್‌ ಗಿಫ್ಟ್‌ಗಳನ್ನು ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ವಿಮಾನದಲ್ಲಿ ನಿಷೇಧಿತ ಇ-ಸಿಗರೇಟ್ ಸೇದಿದ ಯುಜ್ವೇಂದ್ರ ಚಾಹಲ್; ವಿಡಿಯೋ ವೈರಲ್ – Kannada News | IPL E Cigarette Scandal: Yuzvendra Chahal Vaping on Flight After Parag’s Fine; Legal Action Looms

ಕೆಲವೇ ದಿನಗಳ ಹಿಂದಷ್ಟೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಐಪಿಎಲ್ ಪಂದ್ಯದ ವೇಳೆ ತಂಡದ ಡ್ರೆಸ್ಸಿಂಗ್ ರೂಮ್ ಒಳಗೆ ಇ-ಸಿಗರೇಟ್ ಸೇದಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯೂ ಚಂಡೀಗಢದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಪರಾಗ್ ನಿಷೇಧಿತ ಇ- ಸಿಗರೇಟ್ ಸೇದಿ ಸಿಕ್ಕಿಬಿದ್ದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಕ್ರಮಕ್ಕೆ ಮುಂದಾಗಿದ್ದ ಬಿಸಿಸಿಐ, ರಿಯಾನ್ ಪರಾಗ್​ಗೆ ಪಂದ್ಯ ಶುಲ್ಕ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಇದೇ ರೀತಿಯ ಕೃತ್ಯ ಎಸಗಿದ್ದು, ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ವಿಮಾನದಲ್ಲಿ ಇ-ಸಿಗರೇಟ್ ಸೇದಿದ ಚಾಹಲ್

ಯುಜ್ವೇಂದ್ರ ಚಾಹಲ್ ವಿಮಾನದಲ್ಲಿ ಇ-ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ಪ್ರವಾಸದ ಸಮಯದಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ತಂಡವು ಸ್ವತಃ ಈ ವಿಡಿಯೋವನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಚಾಹಲ್ ಇ-ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ತಂಡಕ್ಕೆ ಘಟನೆಯ ಅರಿವಾದ ತಕ್ಷಣ, ವೀಡಿಯೊವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಹಾಕಲಾಗಿದೆ. ಆದರೆ ಆ ಹೊತ್ತಿಗೆ, ಅನೇಕ ನೆಟ್ಟಿಗರು ಆ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡಿದ್ದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಮಾನಗಳಲ್ಲಿ ಧೂಮಪಾನ ಮಾಡುವುದು ಅಥವಾ ಇ-ಸಿಗರೇಟ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮಗಳ ಪ್ರಕಾರ, ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ಗಳನ್ನು ಕೊಂಡೊಯ್ಯುವುದು ಅಥವಾ ಬಳಸುವುದು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದು ಬೆಂಕಿಯ ಅಪಾಯವನ್ನುಂಟುಮಾಡುತ್ತದೆ, ಇದು ಇಡೀ ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ ಯಾರಾದರೂ ಈ ಬಗ್ಗೆ ದೂರು ದಾಖಲಿಸಿದರೆ, ಚಾಹಲ್ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಚಾಹಲ್​ಗೆ ವಿಮಾನದಲ್ಲಿ ಪ್ರಯಾಣವನ್ನು ನಿಷೇಧಿಸುವ ಸಾಧ್ಯತೆಗಳು ಇವೆ.

ಈ ಹಿಂದೆಯೂ ವಿವಾದಕ್ಕೀಡಾಗಿದ್ದ ಚಾಹಲ್​

ಐಪಿಎಲ್ ಆರಂಭಕ್ಕೂ ಮುನ್ನ ಚಾಹಲ್ ಇಂತಹದ್ದೇ ವಿವಾದಕ್ಕೆ ಗುರಿಯಾಗಿದ್ದರು. ವೈರಲ್ ಆದ ವೀಡಿಯೊವೊಂದರಲ್ಲಿ, ಚಾಹಲ್ ತನ್ನ BMW ಕಾರನ್ನು ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅರ್ಧ ಸೇದಿದ್ದ ಸಿಗರೇಟನ್ನು ಕಾರಿನಿಂದ ಹೊರಗೆ ಎಸೆದಿದ್ದರು. ಈ ವೀಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅನೇಕ ನೆಟ್ಟಿಗರು, ಬೆಂಕಿ ಇರುವ ಸಿಗರೇಟ್ ಇತರರಿಗೆ ಸಮಸ್ಯೆಯನ್ನುಂಟು ಮಾಡಬಹುದು ಎಂಬ ಸಾಮಾನ್ಯ ಅರಿವು ಚಾಹಲ್​ಗೆ ಇಲ್ಲವಾ ಎಂದು ಪ್ರಶ್ನಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಟಿ ರೂ ಸಂಪಾದನೆ, ಡಿಸೈನ್ ಬಟ್ಟೆ ತೊಡುತ್ತಿದ್ದ ಭಾರತೀಯ ಮಹಿಳೆ, ಮೆಲ್ಬೋರ್ನ್​ನಲ್ಲಿ ಮನೆಗೆಲಸಕ್ಕೆ ಸೇರಿಕೊಂಡಾಗ… – Kannada News | Indian origin Shweta Desai goes from earning Rs 1 crore to cleaning apartments

ಈಕೆಯ ಹೆಸರು ಶ್ವೇತಾ ದೇಸಾಯಿ. ಮುಂಬೈನಲ್ಲಿ ಹುಟ್ಟಿ ಬೆಳೆದವಳು. ವಯಸ್ಸು ಈಗ 37 ವರ್ಷ. ಉನ್ನತ ವ್ಯಾಸಂಗಕ್ಕೆಂದು 2008ರಲ್ಲಿ ಲಂಡನ್​ಗೆ ಹೋದವಳು ಅಲ್ಲಿಯೇ ಬದುಕು ಮತ್ತು ವೃತ್ತಿ ಕಟ್ಟಿಕೊಂಡವಳು. 15 ವರ್ಷ ಲಂಡನ್​ನಲ್ಲಿ ಇದ್ದ ಬಳಿಕ ಆಕೆಯ ಜೀವನಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿತು. ಲಂಡನ್ ತೊರೆಯುವಾಗ ಈಕೆ ಅಲ್ಲಿ ಪಡೆಯುತ್ತಿದ್ದ ಸಂಬಳ ವರ್ಷಕ್ಕೆ ಸುಮಾರು ಒಂದು ಕೋಟಿ ರೂ. ಹಾಗಿದ್ದ ಈಕೆ ಈಗ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಅಪಾರ್ಟ್ಮೆಂಟ್ ಸ್ವಚ್ಛಗೊಳಿಸುವ ಕಾಯಕ ಮಾಡುತ್ತಿದ್ದಾಳೆ. ಹೇಗಿದ್ದವಳು, ಹೀಗೇಕಾದಳು?

ಶ್ವೇತಾ ದೇಸಾಯಿ ಅವರು ವಿವಾಹಿತೆ ಹಾಗೂ ಇಬ್ಬರು ಮಕ್ಕಳ ತಾಯಿ. ಲಂಡನ್​ನಲ್ಲಿ ಇಷ್ಟ ಬಂದಂತೆ ಜೀವಿಸಿದ ಅದೃಷ್ಟವಂತೆ. ಈಕೆಯ ಪತಿಗೆ ಮೆಲ್ಬೋರ್ನ್​ನಲ್ಲಿ ಕೆಲಸ ಸಿಕ್ಕಿ ಅಲ್ಲಿ ನೆಲಸಬೇಕಾದ ಕಾರಣ, ಈಕೆಯೂ ಲಂಡನ್​ನಲ್ಲಿ ತನ್ನ ಕೆಲಸ ಬಿಟ್ಟು ಗಂಡ ಹಾಗು ಇಬ್ಬರು ಮಕ್ಕಳೊಂದಿಗೆ 2023ರಲ್ಲಿ ಮೆಲ್ಬೋರ್ನ್​ಗೆ ಹೋಗುತ್ತಾಳೆ. ಇಲ್ಲಿ ಈಕೆಗೆ ಶುರುವಾಗುವುದು ಐಡೆಂಟಿಟಿ ಕ್ರೈಸಿಸ್.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಲಂಡನ್​ನಲ್ಲಿ ಕೈತುಂಬ ಸಂಬಳ ಕೊಡುವ ಕೆಲಸ ಇತ್ತು. ಮೆಲ್ಬೋರ್ನ್​ನಲ್ಲಿ ಎಷ್ಟು ಹುಡುಕಿದರೂ ಈಕೆಗೆ ಬೇಕಾದ ಕೆಲಸ ಸಿಗುವುದಿಲ್ಲ. ಕೊನೆಗೆ ಏರ್​ಬಿಎನ್​ಬಿಯಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆಯ ಕೆಲಸಕ್ಕೆ ಸೇರಿಕೊಳ್ಳಬೇಕಾಯಿತು.

ಶ್ವೇತಾ ದೇಸಾಯಿ ಇನ್ಸ್​ಟಾ ವಿಡಿಯೋ

ಏರ್​ಬಿಎನ್​ಬಿ ಅಪಾರ್ಟ್ಮೆಂಟ್​ಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆಗಳನ್ನು ವಾಶ್ ಮಾಡಿಸಿ ಇಸ್ತ್ರಿ ಮಾಡಿಸಿಡುವುದು, ಅತಿಥಿಗಳ ಪ್ರಶ್ನೆಗಳಿಗೆ ಸಮಾಧಾನ ಹೇಳುವುದು ಇತ್ಯಾದಿ ಕೆಲಸ ಮಾಡುತ್ತಿದ್ಧಾಳೆ ಶ್ವೇತಾ ದೇಸಾಯಿ.

ಲಂಡನ್​ನಲ್ಲಿ ಡಿಸೈನರ್ ಬಟ್ಟೆ, ಬ್ಯಾಗು, ಫ್ಯಾನ್ಸಿ ಮೇಕಪ್ ಹೊಂದಿದ್ದ ಶ್ವೇತಾ ದೇಸಾಯಿ, ಹಣಕಾಸು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾಳೆ. ಆದರೆ, ಮೆಲ್ಬೊರ್ನ್​ನಲ್ಲಿ ಈಕೆ ಬಲವಂತವಾಗಿ ತನ್ನ ಲೈಫ್​ಸ್ಟೈಲ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ ಇಲ್ಲದೇ ಇದ್ದಾಗ ಏನೆಲ್ಲಾ ಆಗುತ್ತೆ ಎಂಬುದು ಈಕೆಗೆ ಅನುಭವಕ್ಕೆ ಬಂದಿತು. ಈಗ ಸಿಕ್ಕ ಕೆಲಸದಲ್ಲೇ ತೃಪ್ತಿ ಗಳಿಸುತ್ತಿದ್ದಾಳೆ.

ಇದನ್ನೂ ಓದಿ: ಲಾಭದ ಹಳಿಗೆ ಬಂದ ಪೇಟಿಎಂ; 663 ಕೋಟಿ ರೂ ನಷ್ಟದಿಂದ 552 ಕೋಟಿ ರೂ ಲಾಭ ಕಂಡ ಒನ್97 ಕಮ್ಯೂನಿಕೇಶನ್ಸ್

ಶ್ವೇತಾಗೆ ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಲು ಈ ಕೆಲಸ ಸಹಾಯವಾಗಿದೆ. ಅಪಾರ್ಟ್ಮೆಂಟ್​ಗಳ ನಿರ್ವಹಣೆ ಜೊತೆಗೆ ಈಕೆ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡುತ್ತಾಳೆ, ತನ್ನದೇ ಬ್ಯುಸಿನೆಸ್ ಮತ್ತು ಕೋಚಿಂಗ್ ಪ್ರಾಕ್ಟೀಸ್ ನಡೆಸುತ್ತಾಳೆ. ಈಕೆ ರೀಬ್ಯುಲ್ಡ್ ರೂಮ್ ಹೆಸರಿನಲ್ಲಿ ಒಂದು ವಾಟ್ಸಾಪ್ ಕಮ್ಯೂನಿಟಿ ಆರಂಭಿಸಿದ್ದು, ಅದರಲ್ಲಿ ತನ್ನಂತೆ ಜೀವನ ಬದಲಾವಣೆಗೆ ಒಗ್ಗಿಕೊಳ್ಳಬೇಕಿರುವ ಮಹಿಳೆಯರಿಗೆ ಮಾರ್ಗದರ್ಶನ ಕೊಡುತ್ತಾಳೆ. ಹಾಗಂತ, ಶ್ವೇತಾ ದೇಸಾಯಿ ತಮ್ಮ ಇನ್ಸ್​ಟಾಗ್ರಾಮ್ ರೀಲ್ಸ್​ನಲ್ಲಿ ಹೇಳಿಕೊಂಡಿದ್ದಾಳೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುವೇಂದು ಅಧಿಕಾರಿ ಪಿಎ ಚಂದ್ರನಾಥ್ ಹತ್ಯೆ ಪ್ರಕರಣ; ಎಸ್​ಐಟಿ ತನಿಖೆಗೆ ಆದೇಶ – Kannada News | Suvendu Adhikari PA Chandranath Rath murder case SIT formed

ಕೊಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ (Suvendu Adhikari) ಆಪ್ತ ಸಹಾಯಕ ಚಂದ್ರನಾಥ್ ರಥ (Chandranath Rath) ಅವರ ಕೊಲೆ ಪ್ರಕರಣ ರಾಜಕೀಯ ಬಿಸಿಯನ್ನು ಹೆಚ್ಚಿಸಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಎಸ್​ಐಟಿಯನ್ನು ರಚಿಸಲಾಗಿದೆ. ಚಂದ್ರನಾಥ ರಥ್ ಹತ್ಯೆಯ ತನಿಖೆಗಾಗಿ ಮೀಸಲಾದ ಎಸ್‌ಐಟಿಯನ್ನು ರಚಿಸಲಾಗಿದೆ. ಈ ತಂಡಕ್ಕೆ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಮಟ್ಟದ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (ಪಿಎ) ಚಂದ್ರನಾಥ ರಥ್ ಅವರನ್ನು ಬುಧವಾರ ತಡರಾತ್ರಿ ಉತ್ತರ 24 ಪರಗಣದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಕೆಲವೇ ದಿನಗಳ ಮೊದಲು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ತೀವ್ರಗೊಂಡಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಹಂತಕರಿಗಾಗಿ ಪೊಲೀಸರು ದೊಡ್ಡ ಪ್ರಮಾಣದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಇದನ್ನೂ ಓದಿ: ಇದೊಂದು ಪೂರ್ವ ಯೋಜಿತ ಕೊಲೆ, ಆಪ್ತ ಚಂದ್ರನಾಥ್ ರಥ್ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಮಾತು

ಈಗಾಗಲೇ ಚಂದ್ರನಾಥ್ ರಥ ಅವರ ಮೃತದೇಹದ ಶವಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಅವರಿಗೆ ಮೂರು ಗುಂಡೇಟಿನ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. 7.6 ಬೋರ್ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್‌ನಿಂದ ಅವರನ್ನು ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಎಸ್​ಐಟಿ ರಚಿಸಲಾಗಿದ್ದು, ವಿವಿಧ ಜಿಲ್ಲೆಗಳು ಮತ್ತು ವಿಶೇಷ ಘಟಕಗಳ ಪೊಲೀಸ್ ಸಿಬ್ಬಂದಿ ಈ ಎಸ್‌ಐಟಿಯ ಭಾಗವಾಗಿರುತ್ತಾರೆ. ಈ ತಂಡವು ಪ್ರಕರಣದ ಪ್ರತಿಯೊಂದು ಹಂತವನ್ನು ಪರಿಶೀಲಿಸುತ್ತದೆ. ಹಲವಾರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಪ್ರಮುಖ ಶೂಟರ್‌ಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ದೇಶಸೇವೆಯಿಂದ ರಾಜಕೀಯ ವ್ಯೂಹದತ್ತ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುವೇಂದು ಆಪ್ತ ಚಂದ್ರನಾಥ್ ರಥ್ ಯಾರು?

ಪ್ರಾಥಮಿಕ ವಿವರಗಳ ಪ್ರಕಾರ, ನಿನ್ನೆ ರಾತ್ರಿ 10.30ರ ಸುಮಾರಿಗೆ ಉತ್ತರ 24 ಪರಗಣದ ಮಧ್ಯಮಗ್ರಾಮ್ ಪ್ರದೇಶದಲ್ಲಿ ಕೊಲೆ ನಡೆದಿದೆ. ಚಂದ್ರನಾಥ್ ರಥ ಕೊಲ್ಕತ್ತಾದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅವರ ಸ್ಕಾರ್ಪಿಯೋ ಡೊಹ್ರಿಯಾ ಪ್ರದೇಶವನ್ನು ತಲುಪಿದಾಗ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಸ್ಕಾರ್ಪಿಯೋದ ಎಡಭಾಗದಿಂದ ಗುಂಡಿನ ದಾಳಿ ನಡೆಸಿ, ಚಂದ್ರನಾಥ್​​ನನ್ನು ಕೊಂದಿದ್ದಾರೆ.

ಗುಂಡಿನ ದಾಳಿಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಚಂದ್ರನಾಥ್ ಅವರ ಎದೆ, ಹೊಟ್ಟೆ ಮತ್ತು ಮುಖಕ್ಕೆ ಗುಂಡು ತಗುಲಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಬರುವಾಗಲೇ ಅವರು ಮೃತಪಟ್ಟಿದ್ದರು. ಅವರ ಚಾಲಕನಿಗೂ ಗುಂಡೇಟಿನ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link