Headlines

ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ? – Kannada News | How India’s new FCNR B rates can benefit NRIs

ನವದೆಹಲಿ, ಜೂನ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೈಗೊಂಡಿರುವ ಮಹತ್ವದ ನಿರ್ಧಾರದಿಂದಾಗಿ ಭಾರತದಲ್ಲಿ FCNR (B) ಠೇವಣಿಗಳ ಮೇಲಿನ ಬಡ್ಡಿ ದರಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ಅನಿವಾಸಿ ಭಾರತೀಯರಿಗೆ (NRIs) ಇದು ಸುವರ್ಣಾವಕಾಶವಾಗಿ ಮಾರ್ಪಟ್ಟಿದೆ. ಎಫ್‌ಸಿಎನ್‌ಆರ್(ಬಿ) – Foreign Currency Non-Resident (Bank) Deposit- ಎಂದರೆ ಅನಿವಾಸಿ ಭಾರತೀಯರು ತಾವು ವಿದೇಶದಲ್ಲಿ ಗಳಿಸಿದ ಹಣವನ್ನು ಭಾರತೀಯ ಬ್ಯಾಂಕುಗಳಲ್ಲಿ ವಿದೇಶಿ ಕರೆನ್ಸಿಯ ರೂಪದಲ್ಲೇ (ಉದಾಹರಣೆಗೆ ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯುರೋ ಇತ್ಯಾದಿ) ಇಡಬಹುದಾದ ಒಂದು…

Read More

ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ

ನಟ ಶ್ರೀಮುರುಳಿ ಹಾಗೂ ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಸದಾ ಧೈರ್ಯದಿಂದ ಇರುತ್ತಿದ್ದ ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ಅವರು ಅಮ್ಮನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ತಡೆಯಲಾರದೆ ಕಣ್ಣೀರಿಟ್ಟ ಘಟನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಯಾವಾಗಲೂ ಬೆಳ್ಳಿತೆರೆಯ ಮೇಲೆ ರಗಡ್ ಆಕ್ಷನ್ ಪಾತ್ರಗಳ ಮೂಲಕ ಅಬ್ಬರಿಸುವ ಶ್ರೀಮುರುಳಿ, ವೈಯಕ್ತಿಕ ಜೀವನದಲ್ಲಿ ತಾಯಿಗೆ ಅತಿಯಾಗಿ ಹತ್ತಿರವಾಗಿದ್ದರು. ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಮ್ಮ ಇನ್ನು ನೆನಪು…

Read More

ಹೇಗಿದೆ ನೋಡಿ ನಟ ಅಜಿತ್ ಕುಟುಂಬ; ಇಲ್ಲಿವೆ ಸುಂದರ ಫೋಟೋಸ್

ಕಾಲಿವುಡ್‌ನ ಸ್ಟಾರ್ ನಟ ಅಜಿತ್ ಕುಮಾರ್ ಅವರ ಪತ್ನಿ ಶಾಲಿನಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸುಂದರವಾದ ಕೌಟುಂಬಿಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ. ಮೊದಲ ಚಿತ್ರದಲ್ಲಿ ಅಜಿತ್ ಕುಮಾರ್ ಅವರು ತಮ್ಮ ಮುದ್ದಿನ ಮಗಳಾದ ಅನೌಷ್ಕಾ ಅಜಿತ್ ಅವರಿಗೆ ಪ್ರೀತಿಯಿಂದ ಕೆನ್ನೆಗೆ ಮುತ್ತಿಡುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ಮಗಳು ತಂದೆಗೆ ಅಕ್ಕರೆಯ ಮುತ್ತು ನೀಡುತ್ತಿರುವ ಅಪರೂಪದ ಕ್ಷಣ ಅಡಕವಾಗಿದೆ. ಮಗ ಅದ್ವಿಕ್ ಅಜಿತ್ ಜೊತೆಗಿನ ಎರಡು ಚಿತ್ರಗಳಲ್ಲಿ…

Read More

ಸಲ್ಮಾನ್ ಖಾನ್ ಜೊತೆಗೆ ಸಮಂತಾ ಹಾಲಿ ಪತಿ ಸಿನಿಮಾ – Kannada News | Raj Nidimoru confirms him and DK doing a big budget movie with Bollywood star

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇದೇ 19ನೇ ತಾರೀಖು ಬಿಡುಗಡೆ ಆಗಲಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಸಮಂತಾ, ಗೃಹಿಣಿಯಾಗಿ ಜೊತೆಗೆ ಸಖತ್ ಆಕ್ಷನ್ ಮಾಡುವ ಫೈಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅನ್ನು ಸಿನಿಮಾ ಅನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಮಂತಾರ ಹಾಲಿ ಪತಿ ರಾಜ್ ನಿಧಿಮೋರು. ಅಸಲಿಗೆ ರಾಜ್ ನಿಧಿಮೋರು ಸಹ ಜನಪ್ರಿಯ ಚಿತ್ರಕತೆ ಬರಹಗಾರ ಮತ್ತು ನಿರ್ದೇಶಕ ಆಗಿದ್ದು,…

Read More

ಹೊಸ ಇತಿಹಾಸ… ಒಂದೇ ದಿನ 4 ಪಂದ್ಯಗಳು ಡ್ರಾ..!

FIFA World Cup 2026: ಫಿಫಾ ವಿಶ್ವಕಪ್​ನ ಐದನೇ ದಿನವು ಐತಿಹಾಸಿಕ ಹಾಗೂ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. ಈ ದಾಖಲೆ ನಿರ್ಮಾಣವಾಗಿರುವುದು ಬರೋಬ್ಬರಿ 68 ವರ್ಷಗಳ ಬಳಿಕ. ಅಂದರೆ ಅರವತ್ತೆಂಟು ವರ್ಷಗಳ ಬಳಿಕ ಫಿಫಾ ವಿಶ್ವಕಪ್​ನಲ್ಲಿ ಒಂದೇ ದಿನ ಎಲ್ಲಾ ಪಂದ್ಯಗಳು ಡ್ರಾ ಆಗಿದೆ. (PC: Fifa) ಇದಕ್ಕೂ ಮುನ್ನ, 1958ರ ಜೂನ್ 15 ರಂದು ವಿಶ್ವಕಪ್‌ನಲ್ಲಿ ಒಂದೇ ದಿನ 4 ಪಂದ್ಯಗಳು ಡ್ರಾ ಆಗಿದ್ದವು. ಆದರೆ, ಅಂದು ಒಟ್ಟು 8 ಪಂದ್ಯಗಳು ನಡೆದಿದ್ದವು (ಅಂದರೆ ಶೇ….

Read More

ಭ್ರಷ್ಟಾಚಾರ ನಿರ್ಮೂಲನೆ, ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ – Kannada News | Mohandas Pai Urges CM D.K. Shivakumar to Tackle Corruption, Accelerate Bengaluru’s Development

ಬೆಂಗಳೂರು, ಜೂನ್​​ 16:  ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವಂತೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸಲಹೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಮಾರ್ಗದರ್ಶಕರಾದ ಎಸ್.ಎಂ. ಕೃಷ್ಣ ಅವರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಿ ಬೆಂಗಳೂರಿನ ಹೆಸರನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿಯಬೇಕು ಎಂದವರು ಆಶಿಸಿದ್ದಾರೆ. ಭ್ರಷ್ಟಾಚಾರದಿಂದಾಗಿ ನಗರದ ರಸ್ತೆಗಳು ಹಾಳಾಗಿವೆ, ಫುಟ್‌ಪಾತ್‌ಗಳಿಲ್ಲ, ದುಡ್ಡು ತಿನ್ನುವ ಕೆಲಸ…

Read More

ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ – Kannada News | SpaceX Soars: Elon Musk Becomes First Trillionaire as Market Value Hits $3T

ವಾಷಿಂಗ್ಟನ್, ಜೂನ್ 16: ಇಲಾನ್ ಮಸ್ಕ್ ಅವರ ಸ್ಪೇಸ್-ಎಕ್ಸ್ (SpaceX) ಕಂಪನಿ ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ ಅದು ಟಾಪ್-5 ಲಿಸ್ಟೆಡ್ ಕಂಪನಿಗಳ ಪಟ್ಟಿಗೆ ಜಂಪ್ ಮಾಡಿದೆ. ಐಪಿಒದಲ್ಲಿ ದಾಖಲೆಯ 137 ಡಾಲರ್ ಬೆಲೆಯಲ್ಲಿ ಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಸ್ಪೇಸ್ ಎಕ್ಸ್ ಇದೀಗ 192 ಡಾಲರ್ ಬೆಲೆ ಪಡೆದಿದೆ. ಅದರ ಮಾರುಕಟ್ಟೆ ಸಂಪತ್ತು (Market Capital) 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಮಾರುಕಟ್ಟೆಯ ಬ್ಲಾಕ್​ಬಸ್ಟರ್ ಕಂಪನಿಗಳಾದ ಎನ್​ವಿಡಿಯಾ (Nvidia), ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್…

Read More

Video: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ಜೀವ ತುಂಬಲು ಯತ್ನಿಸುತ್ತಿರುವ ತಾಯಿ ಮಂಗ – Kannada News | Emotional Scene Captured as Mother Monkey Refuses to Leave Her Lifeless Infant

ಔರೈಯಾ, ಜೂನ್ 16: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ತಾಯಿ ಮಂಗ ಜೀವ ತುಂಬಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ. ಮರಿಯನ್ನು ಬಿಗಿಯಾಗಿ ಅಪ್ಪಿಕೊಂಡಿರುವ ಕೋತಿ(Monkey) ಸತ್ತ ಪರಿಯನ್ನು ಬಿಟ್ಟು ಹೋಗುಲು ಸಿದ್ಧಳಿಲ್ಲ. ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಹೆಣ್ಣು ಕೋತಿಯು ತನ್ನ ಸತ್ತ ಮರಿಯ ದೇಹವನ್ನು ಎದೆಯ ಮೇಲೆ ಮಲಗಿಸಿಕೊಂಡಿರುವುದು ಕಂಡುಬಂದಿದೆ. ಆ ಮರಿಗೆ ಮತ್ತೆ ಜೀವ ಬರಬಹುದು ಎಂಬ ಆಶಯದಿಂದ ತಾಯಿ…

Read More

ಸುರ್ಜೇವಾಲ ಸಂಧಾನ ಸಕ್ಸಸ್​​: 13 ದಿನಗಳ ನಂತರ ಖಾತೆ ವಹಿಸಿಕೊಂಡ ಕೃಷ್ಣ ಭೈರೇಗೌಡ – Kannada News | Minister Krishna Byre Gowda Takes Charge of Bengaluru Urban Development, Chairs GBA Meeting.

ಬೆಂಗಳೂರು, ಜೂನ್​​ 16: 13 ದಿನಗಳ ಅಸಮಾಧಾನದ ನಂತರ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು. ಆದರೆ ಸಚಿವರ ಮುನಿಸನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿಯಾಗಿರುವ ಸುರ್ಜೇವಾಲ ತಣಿಸಿದ್ದಾರೆ. ಈ ಬೆನ್ನಲ್ಲೇ ಜಿಬಿಎ ಕೇಂದ್ರ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ಮೊದಲ ಸಭೆಯನ್ನು ಸಚಿವ ಕೃಷ್ಣ ಭೈರೇಗೌಡ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಬಿಎ ಮುಖ್ಯ…

Read More

ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ – Kannada News | Bengaluru Drug Bust: Rs 5.67 Crore Hydro Ganja and Cocaine Seized in Three Separate Raids; Ugandan Woman Arrested

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.77 ಕೋಟಿ ರೂ. ಮೌಲ್ಯದ ಗಾಂಜಾ ಸೀಜ್Image Credit source: tv9 ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ (Bengaluru) ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5.67 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಕೊಕೇನ್ ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ಉಗಾಂಡಾ ಮೂಲದ ಮಹಿಳಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ….

Read More