ಬೆಂಗಳೂರು, ಫೆಬ್ರವರಿ 24: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅಡಿಗೆ ಮನೆ ಹೇಗಿರಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಶಕ್ತಿ ಕೇಂದ್ರವಾದ ಅಡಿಗೆಮನೆಯು ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದು ಆರೋಗ್ಯ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಪೋಷಿಸುತ್ತದೆ. ಉತ್ತಮ ಆರೋಗ್ಯವಿದ್ದಾಗ ಮಾತ್ರ ನಮ್ಮ ಶ್ರೇಯಸ್ಸು ಹೆಚ್ಚುತ್ತದೆ. ಅಡಿಗೆಮನೆಯ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ವಾಸ್ತು ಪ್ರಕಾರ, ಅಡಿಗೆಮನೆಯಲ್ಲಿ ಕೆಲವು ವಸ್ತುಗಳನ್ನು ತಪ್ಪಿಸಬೇಕು. ಉಳಿದಿರುವ ಮತ್ತು ಹಾಳಾದ ಆಹಾರ, ಮುರಿದ ಪಾತ್ರೆಗಳು, ಸಿಂಕ್ನಲ್ಲಿ ಆಹಾರ ಸಮೇತ ಪಾತ್ರೆಗಳು ಮತ್ತು ಅಡುಗೆಮನೆಯಲ್ಲಿ ಕಸವನ್ನು ಹಾಗೆಯೇ ಬಿಡುವುದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇಂತಹ ಅಶುದ್ಧತೆಯು ಬಡತನ, ಆಲಸ್ಯ, ಅನಾರೋಗ್ಯ ಮತ್ತು ಕುಟುಂಬದಲ್ಲಿ ಕಲಹಗಳಿಗೆ ಕಾರಣವಾಗಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.