ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 24, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಈ ಶುಕ್ರವಾರವು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು, ಶಕ್ತಿ, ಧನ ಮತ್ತು ಋಣ ವಿಮುಕ್ತಿಗೆ ಅತ್ಯಂತ ವಿಶೇಷವಾಗಿದೆ. ಆದಿ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಅರ್ಪಿಸುವುದು, ಹೋಮ-ಹವನಗಳು ಶುಭಕರ. ಉಡುಪಿ ಕೃಷ್ಣಮಠದಲ್ಲಿ ಮಹಾಭಿಷೇಕ ಮತ್ತು ವಿಠೋಬ ನವರಾತ್ರಿ ಇಂದಿನಿಂದ ಆರಂಭ. ಇಂದು ರವಿ ಕರ್ಕಾಟಕದಲ್ಲಿ, ಚಂದ್ರ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.