
ಬೆಂಗಳೂರು, (ಮೇ 24): ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಸಾಕು ಟ್ರಾಫಿಕ್ ಹಾಗೂ ಇಲ್ಲಿನ ರಸ್ತೆ ಗುಂಡಿಗಳು ನೆನಪಿಗೆ ಬರುತ್ತಿವೆ. ಹೌದು….ಬೆಂಗಳೂರಿನ ರಸ್ತೆಗಳು ಮತ್ತೆ ಸುದ್ದಿಯಲ್ಲಿದ್ದು, ಕಿತ್ತುಹೋದ ರೋಡ್ಗಳಿಂದ ಆರು ವಿದ್ಯಾರ್ಥಿಗಳು UPSC ಪರೀಕ್ಷೆಯಿಂದ ವಂಚಿತನಾಗಿರುವ ಆರೋಪ ಕೇಳಿಬಂದಿದೆ. ವೈಟ್ಫೀಲ್ಡ್, ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಿದ್ಯಾರ್ಥಿ ಚಾಲುಕ್ಯ ಸರ್ಕಲ್ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಪರೀಕ್ಷಾ ಕೇಂದ್ರದ ಗೇಟ್ ಕ್ಲೋಸ್ ಆಗಿದೆ. ಹೀಗಾಗಿ ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗೆ ನಿರಾಸೆಯಾಗಿದೆ.