Headlines

IND vs SL: ಮೂರನೇ ದಿನ 3 ಸೆಷನ್​ನಲ್ಲೂ ಮಳೆ ಭೀತಿ! – Kannada News | IND vs SL Test: Rain Threat Looms Large on Day 3

ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಕ್ಕೂ ಮಳೆಯ ಭೀತಿ ಎದುರಾಗಿದೆ. ಈಗಾಗಲೇ ಎರಡನೇ ದಿನದ ಆಟವು ಮಳೆಯಿಂದಾಗಿ ಕಡಿತಗೊಂಡಿದ್ದು, ಇಂದು (3ನೇ ದಿನ) ಕೂಡ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿವೆ.

ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಇಂದು ಗಾಲೆ ನಗರದಲ್ಲಿ ಮಳೆಯಾಗುವ ಒಟ್ಟಾರೆ ಸಂಭವನೀಯತೆ ಶೇಕಡಾ 83 ರಷ್ಟಿದೆ. ಎರಡನೇ ದಿನದಲ್ಲಿ ಒಂದೂವರೆ ಸೆಷನ್‌ಗಿಂತಲೂ ಹೆಚ್ಚು ಆಟವು ಮಳೆಗೆ ಆಹುತಿಯಾಗಿತ್ತು. ಇಂದು ಕೂಡ ಪಂದ್ಯವು ನಿರಂತರವಾಗಿ ಸ್ಥಗಿತಗೊಳ್ಳುತ್ತಾ, ಸ್ಟಾರ್ಟ್-ಸ್ಟಾಪ್ ರೂಪದಲ್ಲಿ ಸಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಹವಾಮಾನ ಮುನ್ಸೂಚನೆ:

ಬೆಳಗಿನ ಸೆಷನ್ (ಬೆಳಗ್ಗೆ 10:00 – ಮಧ್ಯಾಹ್ನ 12:00): ಪಂದ್ಯ ಆರಂಭವಾಗುವ ವೇಳೆಗೆ ಶೇಕಡಾ 51 ರಷ್ಟು ಮಳೆಯಾಗುವ ಸಾಧ್ಯತೆ ಇದೆ. 11:00 ಗಂಟೆಯ ಸುಮಾರಿಗೆ ಇದು ಶೇಕಡಾ 47 ಕ್ಕೆ ಇಳಿಯಬಹುದು.

ಮಧ್ಯಾಹ್ನದ ಸೆಷನ್ (ಮಧ್ಯಾಹ್ನ 12:40 – 2:40): ಈ ಅವಧಿಯಲ್ಲಿ ಮಳೆಯ ಭೀತಿ ಶೇಕಡಾ 44 ರಿಂದ 48 ರಷ್ಟಿರುತ್ತದೆ. ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಮಳೆಯ ಸಾಧ್ಯತೆ ಶೇಕಡಾ 52 ಕ್ಕೆ ಏರಲಿದೆ.

ಸಂಜೆಯ ಸೆಷನ್ (ಮಧ್ಯಾಹ್ನ 3:00 – ಸಂಜೆ 5:00): ಸಂಜೆಯ ವೇಳೆಗೆ ವಾತಾವರಣ ಸ್ವಲ್ಪ ಸುಧಾರಿಸಬಹುದು. ಮಧ್ಯಾಹ್ನ 3:00 ಗೆ ಶೇಕಡಾ 45 ರಷ್ಟಿದ್ದರೆ, ಸಂಜೆ 5:00 ರ ವೇಳೆಗೆ ಮಳೆಯ ಸಂಭವನೀಯತೆ ಶೇಕಡಾ 34 ಕ್ಕೆ ಇಳಿಯುವ ನಿರೀಕ್ಷೆಯಿದೆ.

ಅಂದರೆ ಮೂರು ಸೆಷನ್​ನಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿ ಇಂದಿನ ದಿನದಾಟಕ್ಕೂ ಮಳೆಯ ಕಾಟ ತಪ್ಪಿದ್ದಲ್ಲ.

ಬೃಹತ್ ಮೊತ್ತ ಪೇರಿಸಿದ ಭಾರತ:

ಗಾಲೆಯ ವಾತಾವರಣ ಕೈಕೊಡುತ್ತಿದ್ದರೂ, ತನ್ನ 600ನೇ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಭಾರತ ತಂಡ ಸದ್ಯ ಪಂದ್ಯದ ಮೇಲೆ ಬಲಿಷ್ಠ ಹಿಡಿತ ಸಾಧಿಸಿದೆ. ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕ (167 ರನ್) ಮತ್ತು ಕೆಎಲ್ ರಾಹುಲ್ ಅವರ ಜವಾಬ್ದಾರಿಯುತ ಆಟದ (82 ರನ್) ನೆರವಿನಿಂದ ಭಾರತ ತಂಡ 2ನೇ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿದೆ.

ಭಾರತ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!

ಶ್ರೀಲಂಕಾ ಪ್ಲೇಯಿಂಗ್ XI: ಲಹಿರು ಉದಾರ, ನಿಶಾನ್ ಮಧುಶಂಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶಾ ಡಿಕ್ವೆಲ್ಲಾ, ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.

Source link

Leave a Reply

Your email address will not be published. Required fields are marked *