
ಸುಬ್ರಹ್ಮಣ್ಯ ಸ್ವಾಮಿಯ ಪೂಜೆ, ಆರಾಧನೆ ಮಾಡಿಕೊಳ್ಳಿ. ಇದನ್ನು ಮಾಡುವುದರಿಂದ ಚರ್ಮ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ, ಸಾಲ ಬಾಧೆ ಇರುವವರಿಗೆ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರ ಆಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಸಂಭ್ರಮದ ಮಧ್ಯೆ ಯಾವುದೋ ಕೆಲಸ ಬಂತು ಅಥವಾ ಕರೆ ಬಂತು ಎಂಬ ಕಾರಣಕ್ಕೆ ಹೊರಡುವಂತೆ ಆಗಲಿದೆ. ಮನಸ್ಸಿಲ್ಲದ ಮನಸ್ಸಿನಿಂದ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಈ ದಿನ ಖರ್ಚು ಹೆಚ್ಚಿಗೆ ಆದ ನಂತರವೂ ಒಂದು ಬಗೆಯ ಸಮಾಧಾನ- ತೃಪ್ತಿ ನಿಮಗೆ ಇರಲಿದೆ. ಇಲ್ಲದ್ದು ಇದ್ದದ್ದು ಸೇರಿಸಿ, ಮಾತನಾಡುವಂಥ ವ್ಯಕ್ತಿಗೆ ನೇರಾ ನೇರ ಎಚ್ಚರಿಕೆ ನೀಡಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮಲ್ಲಿ ಯಾರು ಔಷಧ- ಪಥ್ಯದಲ್ಲಿ ಇದ್ದೀರಿ ಅಂಥವರು ಅವುಗಳಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದಿರುವುದು ಕ್ಷೇಮ. ಇದನ್ನು ಮೀರಿ ಏನಾದರೂ ಬದಲಾದಲ್ಲಿ ಅಲರ್ಜಿ ಕಾಡಬಹುದು. ನಿಮಗೆ ಎಷ್ಟೇ ಪರಿಚಿತರು, ಆಪ್ತರೇ ಆದರೂ ಅವರೆದುರು ಕೆಲವು ರಹಸ್ಯ ವಿಚಾರಗಳನ್ನು ಚರ್ಚೆ ಮಾಡಲು ಹೋಗಬೇಡಿ. ಇದರಿಂದ ಸಮಸ್ಯೆ ಆದೀತು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಜತೆ ಇದ್ದು, ಕೆಲಸ ಮಾಡಿದಂಥವರು, ನೆರೆ ಮನೆಯಲ್ಲಿ ಇದ್ದವರು ಅಥವಾ ಸ್ನೇಹಿತರೇ ಇರಬಹುದು, ಭೇಟಿ ಆಗಲಿದ್ದಾರೆ. ನಿಮಗೆ ಇದರಿಂದ ಕೆಲವು ಹೊಸ ಸಂಗತಿಗಳು, ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಇನ್ನು ಸಾಕು, ನಿಲ್ಲಿಸೋಣ ಎಂದುಕೊಂಡಿದ್ದ ಕೆಲವು ಸೇವೆ ಅಥವಾ ಕೆಲಸಗಳನ್ನು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಯೋಗ ಕಂಡುಬರುತ್ತಿದೆ.
ಲೇಖನ- ಸ್ವಾತಿ ಎನ್.ಕೆ.