Headlines

ಜನ ಉದಾರವಾಗಿ ಶಾಲೆಗೆ ನೀಡಿದ್ದ ಜಾಗದಲ್ಲಿ ಶಾದಿ ಮಹಲ್: ಊರಿನಲ್ಲಿ ನೆಮ್ಮದಿ ಕೆಡಿಸಿದ ಕಟ್ಟಡ – Kannada News | Kodagu Shadi Mahal Dispute: Napoklu School Land Encroachment Allegations Spark Row

ಕೊಡಗು, ಜನವರಿ 30: ಊರಿನ ಜನರು ಶಾಲೆಗೆ ಉದಾರವಾಗಿ ನೀಡಿದ್ದ ಜಾಗದಲ್ಲಿ ಇದೀಗ ಅಕ್ರಮವಾಗಿ ಶಾದಿ ಮಹಲ್ (Shadi Mahal) ನಿರ್ಮಿಸುತ್ತಿರುವ ಆರೋಪ ಮಡಿಕೇರಿಯಲ್ಲಿ (Madikeri) ಕೇಳಿಬಂದಿದೆ. ಈ ವಿಚಾರ ಸದ್ಯ ಊರಿನ ಜನರ ನೆಮ್ಮದಿ ಕೆಡಿಸಿದೆ. ಶಾದಿ ಮಹಲ್ ಪರ-ವಿರೋಧ ಹೋರಾಟ ಜೋರಾಗಿದ್ದು, ಜಿಲ್ಲಾಧಿಕಾರಿ ಶಾದಿ ಮಹಲ್ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಏನಿದು ವಿವಾದ? ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯ ಪರಂಬು ಎಂಬ ಗ್ರಾಮ ಇದೀಗ ವಿವಾದದ ಕೇಂದ್ರವಾಗಿದೆ. ಊರಿನಲ್ಲಿ…

Read More

ಹೊಸತೊಡಕು ಸಡಗರ: ಮಟನ್ ಬೆಲೆ 1500 ರೂ. ತಲುಪಿದ್ರೂ ಕಮ್ಮಿ ಆಗಿಲ್ಲ ಜನಜಂಗುಳಿ

ಬೆಂಗಳೂರು, ಮಾ.20: ನೆನ್ನೆಯಷ್ಟೇ (ಮಾ.19) ಯುಗಾದಿ ಹಬ್ಬವನ್ನು ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅದರ ಮರುದಿನವಾದ ಇಂದು, ಹೊಸತೊಡಕು ಆಚರಣೆಗೆ ಜನರು ಭರ್ಜರಿ ಮಾಂಸ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ. ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ…

Read More

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ಸಿಎಂ ವಿಜಯ್ – Kannada News | Tamil Nadu CM Vijay meets rebel AIADMK leaders who are Supporting TVK ahead of floor test

ಚೆನ್ನೈ, ಮೇ 12: ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ನಿರ್ಣಾಯಕವಾದ ಬಹುಮತ ಸಾಬೀತಿಗೂ ಮುನ್ನ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (CM Vijay) ಇಂದು ಎಐಎಡಿಎಂಕೆ ಬಂಡಾಯ ನಾಯಕರಾದ ಸಿ.ವಿ ಷಣ್ಮುಗಂ ಮತ್ತು ಎಸ್‌.ಪಿ ವೇಲುಮಣಿ ಅವರನ್ನು ಭೇಟಿ ಮಾಡಿದ್ದಾರೆ. ಈ ಬಣವು 30 ಶಾಸಕರ ಬೆಂಬಲವನ್ನು ಹೊಂದಿದ್ದು, ಇವರು ನಾಳೆಯ ವಿಶ್ವಾಸಮತಯಾಚನೆ ವೇಳೆ ಟಿವಿಕೆಗೆ ತನ್ನ ಬೆಂಬಲವನ್ನು ನೀಡುವುದಾಗಿ ಘೋಷಿಸಿರುವುದರಿಂದ ಈ ಭೇಟಿ ಹೆಚ್ಚಿನ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಇಂದು ಮೊದಲ ಬಾರಿಗೆ…

Read More

ಪಟ್ಟದ ಪಗಡೆಯಾಟಕ್ಕೆ ಹೊಸ ಟ್ವಿಸ್ಟ್​​: ರಾಹುಲ್​​ ಬಳಿ ಪರಮೇಶ್ವರ್​​ರನ್ನ ಸಿಎಂ ಮಾಡಿ ಎಂದರಾ ಸಿದ್ದರಾಮಯ್ಯ? – Kannada News | Siddaramaiahs Impending Resignation: Dr. G. Parameshwara Recommended for Karnataka Chief Minister.

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ತೀವ್ರ ರಾಜಕೀಯ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮೇ 28) ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದು, ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಗಳ ನಂತರ ಈ ಬೆಳವಣಿಗೆಗಳು ನಡೆದಿವೆ. ಈ ಸಂದರ್ಭದಲ್ಲಿ, ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಂದೆ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಡಾ. ಜಿ. ಪರಮೇಶ್ವರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರಂತೆ. ಪಕ್ಷ ಸಂಘಟನೆಯಲ್ಲಿನ…

Read More

ಹೊಸ ವರ್ಷದ ಪಾರ್ಟಿ ರೂಲ್ಸ್ ಬಗ್ಗೆ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್ – Kannada News | Bengaluru Police Commissioner Seemant Kumar Singh Talks about New Year Celebration In the City

ಬೆಂಗಳೂರು, (ಡಿಸೆಂಬರ್ 26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಹೊಸ ವರ್ಷ (New Year 2026) ಸ್ವಾಗತಿಸಲು ಜನತೆ ಸಜ್ಜಾಗುತ್ತಿದ್ದಂತೆ, ಇತ್ತ ಪೊಲೀಸ್ ಇಲಾಖೆಯೂ (Police Department)  ಹೈ ಅಲರ್ಟ್‌ ಆಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ನಗರದಾದ್ಯಂತ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಎಲ್ಲಾ ಠಾಣೆಗಳ ಪೊಲೀಸರು ರೌಂಡ್​ಸ್​ ಹಾಕುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ:…

Read More

Ali Khamenei Death: ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ – Kannada News | Trump Claims Khamenei Is Dead, Calls It Turning Point for Iran

ವಾಷಿಂಗ್ಟನ್, ಮಾರ್ಚ್​ 1:ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ali Khamenei ) ಇಸ್ರೇಲ್ ಮತ್ತು ಅಮೆರಿಕದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ, ಅಧ್ಯಕ್ಷ ಟ್ರಂಪ್ ಖಮೇನಿ ಸಾವನ್ನಪ್ಪಿದ್ದಾರೆಂದು ಹೇಳಿಕೊಂಡಿದ್ದಾರೆ. ಖಮೇನಿ ಅವರ ಮರಣದ ನಂತರ, ಇರಾನ್ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಿದೆ. ಪಶ್ಚಿಮ ಏಷ್ಯಾ, ವಿಶೇಷವಾಗಿ ಗಲ್ಫ್ ಪ್ರದೇಶವು ದಶಕಗಳಲ್ಲಿಯೇ ಅತ್ಯಂತ ಅಪಾಯಕಾರಿ ಹಂತದಲ್ಲಿದೆ. ಇರಾನ್ ಮೇಲೆ ನಡೆಯುತ್ತಿರುವ…

Read More

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,750 ರೂ ಇಳಿಕೆ; ಬೆಳ್ಳಿಯೂ ಅಗ್ಗ – Kannada News

ನವದೆಹಲಿ, ಜೂನ್ 7: ಈ ವಾರಾಂತ್ಯದಲ್ಲಿ ಭಾರತವೂ ಒಳಗೊಂಡಂತೆ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ (Gold Price) ಭರ್ಜರಿ ಇಳಿಕೆ ಆಗಿದೆ. ಭಾರತದಲ್ಲಿ ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆ 2,750 ರೂನಷ್ಟು ಕಡಿಮೆಗೊಂಡಿದೆ. ಇದರ ಬೆಲೆ ಗ್ರಾಮ್​ಗೆ 14,000 ರೂ ಮಟ್ಟಕ್ಕೆ ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,000 ರುಪಾಯಿ ಇದೆ….

Read More

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ನಟಿ ಹರ್ಷಿ ರಸಂಗ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ರಾಜಪಕ್ಸೆ ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಒಂದು ಚಿನ್ನದ ಸರ ಎಂಬುದು ವಿಶೇಷ. ಏನಿದು ಪ್ರಕರಣ? ಭಾನುಕ ರಾಜಪಕ್ಸೆ ಹಾಗೂ ನಟಿ ಹರ್ಷಿ ರಸಂಗ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ಸಮಯದಲ್ಲಿ ರಾಜಪಕ್ಸೆ ಅವರು ಚಿನ್ನದ ಸರ ಮತ್ತು…

Read More

Daily Devotional: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? – Kannada News | Is Anger the Root Cause of Human Misfortune

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ? ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಾನವನ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ದಾರಿದ್ರ್ಯ ಎಂಬ ಪದವನ್ನು ಬಳಸುತ್ತೇವೆ. ಎಷ್ಟೇ ಕಷ್ಟಪಟ್ಟರೂ ಪ್ರಯೋಜನವಿಲ್ಲದೆ ಇರುವುದು, ಉದ್ಯೋಗ ಸಿಗದಿರುವುದು, ಅಥವಾ ಶಿಕ್ಷಣದಲ್ಲಿ ಯಶಸ್ಸು ಕಾಣದಿರುವುದು ದಾರಿದ್ರ್ಯದ ಲಕ್ಷಣಗಳು. ಈ ದಾರಿದ್ರ್ಯಕ್ಕೆ ಅನೇಕ ಕಾರಣಗಳಲ್ಲಿ ಕೋಪವೂ ಒಂದು ಪ್ರಮುಖ ಕಾರಣವಾಗಿದೆ. ಗ್ರಹದೋಷ, ಪೂರ್ವ ಜನ್ಮದ ದೋಷಗಳು ಅಥವಾ ಪಿತೃ ದೋಷಗಳಷ್ಟೇ ಅಲ್ಲದೆ, ಕೋಪವು ವ್ಯಕ್ತಿಯನ್ನು ಅದೋಗತಿಗೆ ಕೊಂಡೊಯ್ಯುತ್ತದೆ. ಒಬ್ಬ ಕಂಪನಿಯ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 2ರ ದಿನಭವಿಷ್ಯ

ಈ ದಿನ ಮುಖ್ಯವಾದ ಕೆಲಸ ಕೈಗೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಇಷ್ಟದೈವ ಅಥವಾ ಕುಲದೈವವನ್ನು ಸ್ಮರಿಸುವುದರಿಂದ ದಿನವಿಡೀ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಸಾಫಲ್ಯ ಕಾಣುತ್ತೀರಿ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಸಂಗಾತಿಯ ಹಠಮಾರಿತನದ ಕಾರಣಕ್ಕೆ ನಾಲ್ಕು ಜನರ ಮಧ್ಯೆ ನಿಮಗೆ ಅವಮಾನ ಆಗುವ ಸಾಧ್ಯತೆಗಳು ಇವೆ. ಈಚೆಗಷ್ಟೇ ಮನೆ ಕಟ್ಟಿದ್ದೀರಿ ಅಥವಾ ರಿನೊವೇಷನ್ ಮಾಡಿಸಿದ್ದೀರಿ, ಆ ಕಾರಣದಿಂದಾಗಿಯೇ ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇದ್ದೀರಿ ಅಂತಾದಲ್ಲಿ…

Read More