ಒಂದು ರೂಪಾಯಿ ತೆರಿಗೆದಾರರ ಹಣವಿಲ್ಲದೆ ದೆಹಲಿಯ 7 ಸರ್ಕಾರಿ ಕಾಲನಿಗಳ ಪುನರ್ನಿರ್ಮಾಣ ಮಾಡಿದ ಕೇಂದ್ರ
ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ. ಇಡೀ ಯೋಜನೆಯನ್ನು ಪೂರೈಸಿದ ನಂತರವೂ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,300 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಲಿದೆ. ಫೆಬ್ರವರಿ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ನಿರ್ಮಿಸಲಾದ 2,722 ಫ್ಲ್ಯಾಟ್ಗಳನ್ನು ಉದ್ಘಾಟಿಸಿದ್ದು, ಹೆಚ್ಚುವರಿ 6,632…