ಶಾಸಕ ಚಂದ್ರು ಲಮಾಣಿ ಎರಡು-ಮೂರು ಲಕ್ಷ ರೂ.ಗೆ ಕೈ ಒಡ್ಡುವ ಮನುಷ್ಯ ಅಲ್ಲ: ಯತ್ನಾಳ್ – Kannada News | Chandru Lamani Lokayukta: Yatnal Claims Political Trap Against Banjara Leader
ವಿಜಯಪುರ, ಫೆ.21: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣವು ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೊಂದು ವ್ಯವಸ್ಥಿತವಾದ ಸಂಚು ಎಂದು ಕಿಡಿಕಾರಿದ್ದಾರೆ. ಚಂದ್ರು ಲಮಾಣಿ ಅವರು ಒಬ್ಬ ಒಳ್ಳೆಯ ವೈದ್ಯರು ಹಾಗೂ ಉತ್ತಮ ಮನುಷ್ಯ. ಅವರು ಕೇವಲ ಎರಡು-ಮೂರು ಲಕ್ಷ ರೂಪಾಯಿಗಾಗಿ ಕೈವೊಡ್ಡುವಂತಹ ಸಣ್ಣ ವ್ಯಕ್ತಿತ್ವದ ಮನುಷ್ಯ ಅಲ್ಲವೇ ಅಲ್ಲ,” ಎಂದು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಬಂಜಾರ ಸಮಾಜದ ಉದಯೋನ್ಮುಖ ನಾಯಕನನ್ನು…