ದಾವಣಗೆರೆ: ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ – Kannada News | CM Siddaramaiah and DCM D.K. Shivakumar Fly Together to Davangere Amidst Political Buzz

ದಾವಣಗೆರೆ. ಡಿಸೆಂಬರ್​​ 27: ಸಿಎಂ ಕುರ್ಚಿ ವಿಚಾರವಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಬಣ ಬಡಿದಾಟದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ದಾವಣಗೆರೆಗೆ ಒಂದೇ ಹೆಲಿಕಾಪ್ಟರ್​ನಲ್ಲಿ ಜಂಟಿಯಾಗಿ ಪ್ರಯಾಣಿಸಿದ್ದಾರೆ. ನಾಯಕರ ಈ ಜಂಟಿ ಪ್ರಯಾಣ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್​​ ಮಟ್ಟದಲ್ಲೂ ವಿಷಯ ಚರ್ಚೆ ನಡೆಯುತ್ತಿರುವ ಹೊತ್ತಲ್ಲಿ ಸಿಎಂ ಮತ್ತು ಡಿಸಿಎಂ ನಡೆ ನಾನಾ ರಾಜಕೀಯ ವಿಶ್ಲೇಷಣೆಗೆ ಒಳಗಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ? ಯಾರು ಏನು ಬೇಕಾದ್ರೂ ಮಾರಾಟ ಮಾಟಬಹುದಾ? ಸಚಿವರು ಹೇಳಿದ್ದಿಷ್ಟು – Kannada News | Are Vendors Being Monitored Near Mysuru Palace? Minister Mahadevappa Clarifies Rules, Helium Cylinder Blast

ಮೈಸೂರು, ಡಿಸೆಂಬರ್ 28: ಅರಮನೆ ಬಳಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಸಚಿವ ಡಾ. ಹೆಚ್​.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ಸೀಸನಲ್ ವ್ಯಾಪಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ವ್ಯವಸ್ಥೆ ರೂಪಿಸಲಾಗಿದ್ದು, ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಬಲೂನ್ ತಯಾರಿಸುವುದನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸಿ ತಾಣಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವರು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಿ ಮತ್ತು ಮಂಜುಳಾ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೊಟ್ರೇಶ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿಸಿದರು. ಎಲ್ಲಾ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪ್ರಧಾನಿ ಮೋದಿ ಕಾರ್ಯಕ್ರದ ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ – Kannada News | Flower Pots Installed for City Beautification Go Missing After PM’s Lucknow Visit

ಲಕ್ನೋ, ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡಿದ್ದರು. ಆದರೆ ಅವರ ಕಾರ್ಯಕ್ರಮದ ಬಳಿಕ ವೈರಲ್ ಆದ ವಿಡಿಯೋ ತೀವ್ರ ಮುಜುಗರವನ್ನುಂಟು ಮಾಡಿದೆ. ಪ್ರಧಾನಿಯವರ ಕಾರ್ಯಕ್ರಮಕ್ಕೂ ಮುನ್ನ ಇಡೀ ನಗರವನ್ನು ಹಸಿರು ಗಿಡಗಳು, ಹೂವಿನ ಕುಂಡಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನರು ಹೂವಿನ ಪಾಟ್​ಗಳನ್ನು ಕದ್ದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಹಸಿರನ್ನು ಹೆಚ್ಚಿಸಲು ಮತ್ತು ಲಕ್ನೋದ ಸ್ವಚ್ಛ, ದೃಶ್ಯ ಆಕರ್ಷಕ ಚಿತ್ರಣವನ್ನು ಪ್ರಸ್ತುತಪಡಿಸಲು ನೂರಾರು ಅಲಂಕಾರಿಕ ಹೂವಿನ ಕುಂಡಗಳನ್ನು ಇರಿಸಲಾಗಿತ್ತು. ಧಾನಿ ನಿರ್ಗಮಿಸಿದ ಕೂಡಲೇ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಡಿಲಿಸಿದ ನಂತರ, ಹಲವಾರು ವ್ಯಕ್ತಿಗಳು ಹೂವಿನ ಕುಂಡಗಳನ್ನು ವೈಯಕ್ತಿಕ ಆಸ್ತಿಯಂತೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ಜನರು ಹಗಲಿನಲ್ಲೇ ಜನರು ಇವುಗಳನ್ನು ಹೊತ್ತೊಯ್ದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು? – Kannada News | Indian billionaires, Bloomberg list 2025, Mukesh Ambani leads, while Lakshmi Mittal see highest percentage increase

ನವದೆಹಲಿ, ಡಿಸೆಂಬರ್ 26: ಈ ವರ್ಷ ಭಾರತದ ಬಿಲಿಯನೇರ್​ಗಳಿಗೆ (Indian billionaires) ಮಿಶ್ರಾನುಭವ ಮತ್ತು ಮಿಶ್ರಫಲ ಸಿಕ್ಕಿದೆ. ಕೆಲ ಬಿಲಿಯನೇರ್​ಗಳ ಶ್ರೀಮಂತಿಕೆ 2025ರಲ್ಲಿ ಗಣನೀಯವಾಗಿ ಏರಿದೆ. ಕೆಲವರಿಗೆ ಇಳಿಮುಖವಾಗಿದೆ. ಕೆಲವರ ಬ್ಯುಸಿನೆಸ್ ಹೆಚ್ಚಿದೆ, ಕೆಲವರ ಷೇರುಗಳ ಮೌಲ್ಯ ಕುಸಿದಿದೆ. ಮಾರುಕಟ್ಟೆಯ ಸಂಚಲನ, ಜಾಗತಿಕ ಪರಿಸ್ಥಿತಿಯ ಏರಿಳಿತಗಳು ಶ್ರೀಮಂತಿಕೆ ಮೇಲೆ ಪ್ರಭಾವ ಬೀರಿವೆ.

ಶ್ರೀಮಂತಿಕೆಯಲ್ಲಿ ಅತಿ ಏರಿಕೆ ಕಂಡಿದ್ದು ಲಕ್ಷ್ಮೀ ಮಿಟ್ಟಲ್

2025ರಲ್ಲಿ ಭಾರತೀಯ ಬಿಲಿಯನೇರ್​ಗಳ ಪೈಕಿ ಸಿರಿತನ ಅತಿ ಹೆಚ್ಚು ಏರಿದ್ದು ಉಕ್ಕು ಉದ್ಯಮಿ ಲಕ್ಷ್ಮೀ ಮಿಟ್ಟಲ್ ಅವರದ್ದು. ಈ ಒಂದೇ ವರ್ಷದಲ್ಲಿ ಅವರ ಆಸ್ತಿಮೌಲ್ಯ ಶೇ. 59ರಷ್ಟು ಏರಿದೆ. ಆರ್ಸೆಲರ್​ಮಿಟ್ಟಲ್ ಕಂಪನಿಯ ಛೇರ್ಮನ್ ಆಗಿರುವ ಲಕ್ಷ್ಮೀ ಮಿಟ್ಟಲ್ ಅವರ ಒಟ್ಟು ನಿವ್ವಳ ಆಸ್ತಿಮೌಲ್ಯ 31.2 ಬಿಲಿಯನ್ ಡಾಲರ್​ಗೆ ಏರಿದೆ. ಇವರ ಕಂಪನಿಯ ಷೇರುಗಳು ಈ ವರ್ಷ ಶೇ. 70ರಷ್ಟು ಏರಿದ ಪರಿಣಾಮವಾಗಿ ಲಕ್ಷ್ಮೀ ಮಿಟ್ಟಲ್ ಸಿರಿತನ ಕೂಡ ಏರಿದೆ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಭರ್ಜರಿ ಸಂಬಳ; ಎಂಟ್ರಿ ಲೆವೆಲ್​ನಲ್ಲೇ 21 ಲಕ್ಷ ರೂ ಸ್ಯಾಲರಿ ಆಫರ್

ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕ್​ಗಳನ್ನು ತಯಾರಿಸುವ ಏಚರ್ ಮೋಟರ್ಸ್ ಕಂಪನಿಯ ಸಂಸ್ಥಾಪಕ ವಿಕ್ರಮ್ ಲಾಲ್ ಅವರ ಶ್ರೀಮಂತಿಕೆ ಶೇ. 42ರಷ್ಟು ಏರಿದೆ. ಇವರ ಮೋಟರ್​ಸೈಕಲ್​ಗಳು ಈ ವರ್ಷ ಉತ್ತಮ ಸೇಲ್ ಆಗಿವೆ. ಅಲ್ಟ್ರಾ ಪ್ರೀಮಿಯಮ್ ಸೆಗ್ಮೆಂಟ್​ನಲ್ಲಿ ರಾಯಲ್ ಎನ್​ಫೀಲ್ಡ್ ಶೇ. 81ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿದೆ. ಹಾಗೆಯೇ, ಕಮರ್ಷಿಯಲ್ ವಾಹನಗಳ ಮಾರಾಟದಲ್ಲೂ ಕಂಪನಿ ಉತ್ತಮ ಪ್ರಗತಿ ಕಂಡಿದೆ. ಪರಿಣಾಮವಾಗಿ ಏಚರ್ ಮೋಟರ್ಸ್​ನ ಷೇರುಬೆಲೆ ಈ ವರ್ಷ ಉತ್ತಮವಾಗಿ ಏರಿದೆ.

ಮುಕೇಶ್ ಅಂಬಾನಿಯೇ ನಂಬರ್ ಒನ್

ಮುಕೇಶ್ ಅಂಬಾನಿ ಅವರ ಆಸ್ತಿಮೌಲ್ಯ ಈ ವರ್ಷ ಏರಿಕೆ ಆಗಿದ್ದು ಶೇ. 7.5 ಮಾತ್ರವೇ. ಆದರೂ ಕೂಡ ಅಂಬಾನಿ ಅವರೇ ಭಾರತದ ಅತಿದೊಡ್ಡ ಶ್ರೀಮಂತರಾಗಿ ಮುಂದುವರಿದಿದ್ದಾರೆ. ಗೌತಮ್ ಅದಾನಿ ಅವರ ಆಸ್ತಿಮೌಲ್ಯ ಇಳಿಮುಖವಾದರೂ ಅವರು ಎರಡನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ. ಇಲ್ಲಿ ಕೆಳಗೆ ಭಾರತದ ಬಿಲಿಯನೇರ್​ಗಳ ಪಟ್ಟಿ ಇದೆ:

ಇದನ್ನೂ ಓದಿ: ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣ ಎಷ್ಟು ಗೊತ್ತಾ? ಅನ್​ಕ್ಲೇಮ್ಡ್ ಡೆಪಾಸಿಟ್ ಮರಳಿಪಡೆಯುವುದು ಹೇಗೆ?

ಭಾರತದ ಬಿಲಿಯನೇರ್​ಗಳ ಪಟ್ಟಿ (2025 ಬ್ಲೂಮ್​ಬರ್ಗ್ ಇಂಡೆಕ್ಸ್)

  1. ಮುಕೇಶ್ ಅಂಬಾನಿ: 107 ಬಿಲಿಯನ್ ಡಾಲರ್
  2. ಗೌತಮ್ ಅದಾನಿ: 84.5 ಬಿಲಿಯನ್ ಡಾಲರ್
  3. ಶಿವ ನಾದರ್: 38.5 ಬಿಲಿಯನ್ ಡಾಲರ್
  4. ಶಾಪೂರ್ ಮಿಸ್ತ್ರಿ: 35.7 ಬಿಲಿಯನ್ ಡಾಲರ್
  5. ಸಾವಿತ್ರಿ ಜಿಂದಾಲ್: 31.3 ಬಿಲಿಯನ್ ಡಾಲರ್
  6. ಲಕ್ಷ್ಮೀ ಮಿಟ್ಟಲ್: 31.2 ಬಿಲಿಯನ್ ಡಾಲರ್
  7. ಸುನೀಲ್ ಮಿಟ್ಟಲ್: 30 ಬಿಲಿಯನ್ ಡಾಲರ್
  8. ಅಜೀಮ್ ಪ್ರೇಮ್​ಜಿ: 27.8 ಬಿಲಿಯನ್ ಡಾಲರ್
  9. ದಿಲೀಪ್ ಶಾಂಘವಿ: 25.7 ಬಿಲಿಯನ್ ಡಾಲರ್
  10. ಕುಮಾರಮಂಗಲಂ ಬಿರ್ಲಾ: 22.9 ಬಿಲಿಯನ್ ಡಾಲರ್
  11. ರಾಧಾಕೃಷ್ಣ ದಮಾನಿ: 16.6 ಬಿಲಿಯನ್ ಡಾಲರ್
  12. ಉದಯ್ ಕೋಟಕ್: 16.1 ಬಿಲಿಯನ್ ಡಾಲರ್
  13. ಸೈರಸ್ ಪೂನವಾಲ: 14.8 ಬಿಲಿಯನ್ ಡಾಲರ್
  14. ಕೆ.ಪಿ. ಸಿಂಗ್: 14.4 ಬಿಲಿಯನ್ ಡಾಲರ್
  15. ರವಿ ಜೈಪುರಿಯಾ: 12.6 ಬಿಲಿಯನ್ ಡಾಲರ್
  16. ವಿಕ್ರಮ್ ಲಾಲ್: 12.4 ಬಿಲಿಯನ್ ಡಾಲರ್
  17. ನುಸ್ಲಿ ವಾಡಿಯಾ: 10.8 ಬಿಲಿಯನ್ ಡಾಲರ್
  18. ಮುರಳಿ ದಿವಿ: 10.5 ಬಿಲಿಯನ್ ಡಾಲರ್
  19. ಮಂಗಲ್ ಪ್ರಭಾತ್ ಲೋಧಾ: 9.33 ಬಿಲಿಯನ್ ಡಾಲರ್
  20. ರಾಹುಲ್ ಭಾಟಿಯಾ: 9.28 ಬಿಲಿಯನ್ ಡಾಲರ್
  21. ಪಂಕಜ್ ಪಟೇಲ್: 8.44 ಬಿಲಿಯನ್ ಡಾಲರ್
  22. ಇಂದರ್ ಜೈಸಿಂಘಾನಿ: 8.12 ಬಿಲಿಯನ್ ಡಾಲರ್
  23. ಸುಧೀರ್ ಮೆಹತಾ: 7.82 ಬಿಲಿಯನ್ ಡಾಲರ್
  24. ಸಮೀರ್ ಮೆಹತಾ: 7.82 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ – Kannada News | Oscar official entry of India Homebound is in legal trouble

ಭಾರತದಿಂದ ಈ ಬಾರಿ ಆಸ್ಕರ್​​ಗೆ (Oscar) ಅಧಿಕೃತ ಆಯ್ಕೆಯಾಗಿ ಹಿಂದಿ ಸಿನಿಮಾ ‘ಹೋಮ್​​ಬೌಂಡ್’ ಅನ್ನು ಕಳಿಸಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ‘ಹೋಮ್​​ಬೌಂಡ್’ ಸಿನಿಮಾ ಸ್ಪರ್ಧೆಯಲ್ಲಿದ್ದು, ಈಗಾಗಲೇ ಎರಡು ಹಂತ ದಾಟಿ 15 ಸಿನಿಮಾಗಳ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಸಹ ಆಗಿದೆ. ಸಿನಿಮಾ ಆಸ್ಕರ್ ​​ರೇಸಿನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಿರುವಾಗಲೇ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ವಿರುದ್ಧ ಕೃತಿಚೌರ್ಯ ಆರೋಪವನ್ನು ಲೇಖಕಿಯೊಬ್ಬರು ಮಾಡಿದ್ದಾರೆ.

ಪತ್ರಕರ್ತೆ, ಲೇಖಕಿಯೂ ಆಗಿರುವ ಪೂಜಾ ಚಂಗೋಯ್ವಾಲ ಅವರು ‘ಹೋಮ್​​ಬೌಂಡ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ ಮತ್ತು ನೆಟ್​ಫ್ಲಿಕ್ಸ್​ ವಿರುದ್ಧ ದಾವೆ ಹೂಡಿದ್ದಾರೆ. ತಮ್ಮ ಕತೆಯೊಂದನ್ನು ಕದ್ದು ಸಿನಿಮಾ ಮಾಡಲಾಗಿದೆ ಎಂದು ಪೂಜಾ ಅವರು ಆರೋಪ ಮಾಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಪೂಜಾ ಅವರು 2021 ರಲ್ಲಿ ‘ಹೋಮ್​​ಬೌಂಡ್’ ಹೆಸರಿನ ಕತೆಯೊಂದನ್ನು ಬರೆದಿದ್ದರು. ಇದೀಗ ಆಸ್ಕರ್ ರೇಸಿನಲ್ಲಿರುವ ‘ಹೋಮ್​​ಬೌಂಡ್’ ಸಿನಿಮಾವು ತಮ್ಮದೇ ಬರೆದಿರುವ ಕತೆಯನ್ನು ಒಳಗೊಂಡಿದ್ದು, ಕತೆ ಬಳಸುವುದಕ್ಕೆ ನಿರ್ದೇಶಕ ನೀರಜ್ ಗಯ್​​ವಾನ್ ಆಗಲಿ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ಸ್ ಆಗಲಿ ಅನುಮತಿ ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಿರ್ಮಾಣ ಸಂಸ್ಥೆಗೆ ಈಗಾಗಲೇ ನೊಟೀಸ್ ಅನ್ನು ಸಹ ಕಳಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್​​ಗೆ ಶಾರ್ಟ್​​ಲಿಸ್ಟ್ ಆದ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’: ಮುಂದೇನು?

‘ನನ್ನ ಕತೆ ಹಾಗೂ ‘ಹೋಮ್​​ಬೌಂಡ್’ ಸಿನಿಮಾದ ಕತೆ ಎರಡರಲ್ಲೂ ಸಾಕಷ್ಟು ಸಾಮ್ಯತೆ ಇದೆ. ಎರಡೂ ಸಹ ಕೋವಿಡ್ ಪರಿಣಾಮಗಳ ಕುರಿತಾದ ಕತೆಯನ್ನು ಒಳಗೊಂಡಿವೆ. ತಮ್ಮ ಕತೆಯ ಹೆಸರನ್ನೇ ಅನಾಮತ್ತಾಗಿ ಎತ್ತಿಕೊಂಡಿರುವ ಜೊತೆಗೆ, ಸಿನಿಮಾದ ಎರಡನೇ ಭಾಗದಲ್ಲಿ ನನ್ನ ಕತೆಯಲ್ಲಿರುವ ಹಲವು ಸನ್ನಿವೇಶಗಳು, ಪಾತ್ರಗಳು, ಘಟನಾವಳಿಗಳು ಮತ್ತು ಸಂಭಾಷಣೆಗಳನ್ನು ಸಹ ಬಳಸಿಕೊಳ್ಳಲಾಗಿದೆ’ ಎಂದು ಲೇಖಕಿ ಪೂಜಾ ಆರೋಪಿಸಿದ್ದಾರೆ.

ಲೇಖಕಿಯ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಧರ್ಮಾ ಪ್ರೊಡಕ್ಷನ್ಸ್, ‘ಲೇಖಕಿ ಪೂಜಾ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ನಮ್ಮ ನಿರ್ಮಾಣದ ‘ಹೋಮ್​​ಬೌಂಡ್’ ಸಿನಿಮಾ ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಬಷರತ್ ಪೀರ್ ಎಂಬುವರು ಬರೆದಿದ್ದ ಆರ್ಟಿಕಲ್​​ ಒಂದನ್ನು ಆಧರಿಸಿದ್ದು, ಆ ಆರ್ಟಿಕಲ್​​ನ ಮಾಹಿತಿಯನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ನಾವು ಅವಶ್ಯಕ ಅನುಮತಿಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸಿನಿಮಾನಲ್ಲಿ ಮೂಲ ಲೇಖಕರಿಗೆ ನಾವು ಗೌರವ ಸಹ ಸಲ್ಲಿಸಿದ್ದೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ – Kannada News | A man says he is not happy even though he earns 4 lakhs per month

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇಲ್ಲೊಬ್ಬ ಉದ್ಯಮಿಗೂ (Entrepreneur) ಅದೇ ರೀತಿಯಾಗಿದೆ. ತಿಂಗಳಿಗೆ 4 ಲಕ್ಷ ರೂ ಸಂಪಾದಿಸುವ ಉದ್ಯಮಿ ಅತೃಪ್ತರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಸಲಹೆಯನ್ನು ನೀಡಿದ್ದಾರೆ.

r/Indian_ flex ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ನನಗೀಗ 32 ವರ್ಷ ವಯಸ್ಸು. ತಿಂಗಳಿಗೆ 4.1 ಲಕ್ಷ ಸಂಪಾದಿಸಲು ಕಷ್ಟಪಟ್ಟಿದ್ದೇನೆ ಆದರೆ ಸಂತೋಷವಾಗಿಲ್ಲ. ಎಲ್ಲವೂ ಯಶಸ್ವಿಯಾಗಿರುವಂತೆ ಕಾಣುತ್ತದೆ. ನನಗೆ ಏನು ಸಂತೋಷವಾಗುತ್ತದೆ ಎಂಬುದೇ ತಿಳಿದಿಲ್ಲ. ಯಾವ ಕೆಲಸವು ನನಗೆ ಸಂತೋಷ ಅಥವಾ ತೃಪ್ತಿ ನೀಡುತ್ತಿಲ್ಲ . ಹಣ ಸಂತೋಷ ತರುತ್ತದೆ ಎಂದು ಭಾವಿಸಿದ್ದ ನಾನು ಆ ಉತ್ಸಾಹ ಇಂದು ಕಾಣಿಸುತ್ತಿಲ್ಲ; ಬದಲಾಗಿ, ಬದುಕಿನಲ್ಲಿ ಏನೋ ಕಾಣೆಯಾಗಿದೆ ಎನ್ನುವ ಭಾವನೆ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ:ಯುವಕನ ಕೈ ಹಿಡಿದ ವಾಕಿಂಗ್ ಕಾಫಿ ಶಾಪ್, ವೈರಲ್ ಆಯ್ತು ದೃಶ್ಯ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೇರೆ ಹವ್ಯಾಸ ಬೆಳೆಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಬೇರೆ ವ್ಯವಹಾರ ಪ್ರಾರಂಭಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದೇವೆ. ನನಗೂ ಆ ಭಾವನೆಯೇ ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಸ್ತಿಯನ್ನು ತಾಯಿ ಹೆಸರಿಗೆ ವರ್ಗಾಯಿಸಿದ್ದಕ್ಕಾಗಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ – Kannada News | Viral Video: Dispute Over Assets Turns Physical After Alimony Claim Rejected

ಆಸ್ತಿಯನ್ನು ತಾಯಿಗೆ ವರ್ಗಾಯಿಸಿದ್ದಕ್ಕಾಗಿ ಕೋಪಗೊಂಡ ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲೇ ವಿಚ್ಛೇದಿತ ಪತಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರಿಗೂ ವಿಚ್ಛೇದನವಾಗಿತ್ತು. ಮಹಿಳೆ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ತಿರಸ್ಕರಿಸಿತ್ತು. ಪತಿ ಅಷ್ಟೂ ಆಸ್ತಿಯನ್ನು ತನ್ನ ತಾಯಿಗೆ ವರ್ಗಾಯಿಸಿದ್ದ, ಅದಕ್ಕೆ ಕೋಪಗೊಂಡ ಮಹಿಳೆ ನ್ಯಾಯಾಲಯದಲ್ಲೇ ಪತಿಗೆ ಹೊಡೆದಿದ್ದಾಳೆ. ಅದರೆ ಪತಿ ಆಕೆಯನ್ನು ನೋಡಿ ನಗುತ್ತಲೇ ಇದ್ದ. ಇದು ವೈರಲ್ ವಿಡಿಯೋ ಆಗಿದ್ದು, ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ಬಗ್ಗೆ ಇದ್ದ ದೊಡ್ಡ ಅನುಮಾನ ಕ್ಲಿಯರ್ ಮಾಡಿದ ತಂದೆ-ತಾಯಿ – Kannada News | Bigg Boss Kannada 12: Gilli’s Mom Confirms Natural Behavior in Family Week

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದು ಸ್ಪರ್ಧಿಗಳಿಗೆ ಹೊಸ ಹುರುಪು ನೀಡುತ್ತಿದ್ದಾರೆ. ಗಿಲ್ಲಿ ತಂದೆ ಕುಳ್ಳಯ್ಯ ಹಾಗೂ ತಾಯಿ ಸವಿತಾ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಗಿಲ್ಲಿ ಅಷ್ಟೇ ಎಲ್ಲರನ್ನೂ ನಗಿಸಿದ್ದಾರೆ. ಗಿಲ್ಲಿ ರೀತಿಯೇ ಅವರು ನ್ಯಾಚುರಲ್ ಆಗಿ ಇದ್ದರು. ಗಿಲ್ಲಿ ಕೂಡ ಹೆಚ್ಚು ಎಮೋಷನ್ ತೋರಿಸಿಕೊಳ್ಳದೆ ಅವರನ್ನು ಸ್ವಾಗತಿಸಿಕೊಂಡರು. ಈ ವೇಳೆ ಗಿಲ್ಲಿ ಬಗ್ಗೆ ಒಂದು ಅಚ್ಚರಿಯ ಮಾಹಿತಿಯನ್ನು ಸವಿತಾ ನೀಡಿದ್ದಾರೆ.

ಕುಳ್ಳಯ್ಯ ಅವರು ಒಂದು ದೊಣ್ಣೆ ಹಿಡಿದು ಬಿಗ್ ಬಾಸ್ ಮನೆ ಒಳಗೆ ಬಂದರು. ಅವರು ಗಿಲ್ಲಿಗೆ ಏಟು ಹೊಡೆದಂತೆ ನಟಿಸಿದರು. ಈ ದೊಣ್ಣೆಯನ್ನು ತೆಗೆದುಕೊಂಡು ರಘು ಹಾಗೂ ಕಾವ್ಯಾ ಅವರು ಗಿಲ್ಲಿಗೆ ಹೊಡೆಯುವಾಗ ಅವರ ಮನಸ್ಸಿಗೆ ನೋವಾಯಿತು. ಈ ವೇಳೆ ರಘು ಅವರು, ‘ನಾನು ಗಟ್ಟಿಯಾಗಿ ಹೊಡೆದಿಲ್ಲ’ ಎಂದು ಸ್ಪಷ್ಟನೆ ಕೊಟ್ಟರು.

ಗಿಲ್ಲಿಗೆ ತೆಂಗಿನ ಎಣ್ಣೆಯನ್ನು ತಲೆಗೆ ಹಾಕಿ, ಆ ಬಳಿಕ ಸ್ನಾನ ಮಾಡಿಸಿಕೊಟ್ಟರು ತಾಯಿ ಸವಿತಾ. ಗಿಲ್ಲಿ ತಲೆಗೆ ಎಣ್ಣೆ ಹಚ್ಚುವಾಗ, ‘ನೀನು ಹೊರಗೆ ಹೇಗೆ ಇರ್ತಿದ್ಯೋ ಇಲ್ಲಿಯೂ ಹಾಗೆ ಇರ್ತೀಯಾ. ನನಗೆ ಅದು ಖುಷಿ ಕೊಟ್ಟಿದೆ. ನಿಮ್ಮ ಅಪ್ಪ ತುಂಬಾನೇ ಖುಷಿಯಾದರು’ ಎಂದರು ಸವಿತಾ. ‘ಹೊರಗೆ ಯಾವ ರೀತಿ ಇದೀನೋ ಇಲ್ಲಿಯೂ ಅದೇ ರೀತಿ ಇರಬೇಕು. ಆಗಲೇ ಉತ್ತಮವಾಗಿರುತ್ತದೆ’ ಎಂದರು ಗಿಲ್ಲಿ.

ಈ ಮತುಗಳನ್ನು ಅಶ್ವಿನಿ ಕೇಳಿಸಿಕೊಳ್ಳುತ್ತಿದ್ದರು. ‘ಹೊರಗೂ ಹೀಗೆಯೇ ಇರ್ತಾನಾ? ನಾನೆಲ್ಲೋ ಇಲ್ಲಿ ಮಾತ್ರ ಅವನು ಹಾಗೆ ಆಡೋದು ಎಂದುಕೊಂಡಿದ್ದೆ’ ಎಂದಿದ್ದಾರೆ. ಆಗ ಸವಿತಾ ಅವರು, ‘ಇಲ್ಲ, ಅವನು ಎಲ್ಲ ಕಡೆಗಳಲ್ಲೂ ಹೀಗೆಯೇ ಇರೋದು’ ಎಂದು ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಅನೇಕರು ಭಾವಿಸಿದ್ದು ಇದೆ. ಈಗ ಅವರೆಲ್ಲರಿಗೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಗಿಲ್ಲಿ ಅವರು ನ್ಯಾಚುರಲ್ ಆಗಿದ್ದಾರೆ. ಇದು ಕೆಲವರಿಗೆ ನಾಟಕದ ರೀತಿ ಅನಿಸುತ್ತಿದೆ. ಗಿಲ್ಲಿ ಏನೇ ಮಾಡಿದರೂ ಅದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆಲಮಂಗಲ: ತಿರುವಿನಲ್ಲಿ ನಿಯಂತ್ರಣ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು – Kannada News | Bengaluru Family Car Crash: Software Engineer, Father Dead; 4 Injured

ನೆಲಮಂಗಲ, ಡಿಸೆಂಬರ್ 26: ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದ ಒಂದೇ ಕುಟುಂಬದವರು ತೋಟಗೆರೆ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕ್ರಿಸ್‌ಮಸ್ ಹಬ್ಬದ ನಂತರ ಸಂಜೆ 7:30 ಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತಿದ್ದ ವೇಳೆ ತೋಟಗೆರೆ ಟರ್ನಿಂಗ್ ನಲ್ಲಿ ಕಂಟ್ರೋಲ್ ಸಿಗದೆ  ಕಾರು ಮರಕ್ಕೆ ಡಿಕ್ಕಿಯಾಗಿದ್ದು ಸಾಪ್ಟ್ ವೇರ್ ಇಂಜಿನೀಯರ್ ಹರೀಶ್ (39) ಮತ್ತು ಅವರ ತಂದೆ ವೀರಭದ್ರ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಗೌರಮ್ಮ (62), ಹರೀಶ್ ಪತ್ನಿ ಮೈತ್ರಿ (32), ಮಗಳು ಸಿರಿ (10), ಚಿಕ್ಕಮ್ಮನ ಮಗಳು ವಂದನ (8) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತಪಟ್ಟವರನ್ನು ನೆಲಮಂಗಲ ಸರ್ಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿ, ಅದೇ ಬೆಂಕಿಗೆ ಮಗಳ ತಳ್ಳಿದ ಪಾಪಿ ತಂದೆ – Kannada News | Man Arrested After Woman Dies in Suspected Domestic Violence Case in Hyderabad

ಹೈದರಾಬಾದ್, ಡಿಸೆಂಬರ್ 26: ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ(Fire) ಹಚ್ಚಿದ್ದಲ್ಲದೆ ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಪತಿ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದಾರೆ. ಮಗಳನ್ನು ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ. ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ನಗರದ ನಲ್ಲಕುಂಟಾ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ.
ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 24 ರಂದು, ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅವರ ಮಗಳು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಅವರ ಕಿರುಚಾಟ ಕೇಳಿ ನೆರೆಹೊರೆಯವರು ಅವರ ಮನೆಗೆ ಓಡೋಡಿ ಬಂದಿದ್ದರು . ಆ ಹೊತ್ತಿಗೆ, ತೀವ್ರವಾದ ಸುಟ್ಟ ಗಾಯಗಳಿಂದ ತ್ರಿವೇಣಿ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಲ್ಲಿ ಪಾರಾದ ಅವರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೆಂಕಟೇಶ್ ಮತ್ತು ತ್ರಿವೇಣಿ ಅವರದು ಪ್ರೇಮ ವಿವಾಹ.

ಮತ್ತಷ್ಟು ಓದಿ: ಕೊಲೆ ಆರೋಪ ಕೋರ್ಟ್​ನಲ್ಲಿ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರಲ್ಲೊಂದು ಅಚ್ಚರಿಯ ತೀರ್ಪು

ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬಳು ಮಗಳು ಮತ್ತು ಒಬ್ಬ ಮಗ. ವೆಂಕಟೇಶ್ ತನ್ನ ಹೆಂಡತಿಯ ಬಗ್ಗೆ ಅನುಮಾನ ಬೆಳೆಸಿಕೊಂಡು ಆಗಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿರಂತರ ಕಿರುಕುಳ ಸಹಿಸಲಾಗದೆ ತ್ರಿವೇಣಿ ಇತ್ತೀಚೆಗೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು.

ತ್ರಿವೇಣಿ ತನ್ನ ಬಳಿಗೆ ಹಿಂತಿರುಗಿದ ನಂತರ, ವೆಂಕಟೇಶ್ ತಾನು ಬದಲಾಗುತ್ತೇನೆ ಎಂದು ಅವಳನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದ ನಂತರ ಈ ಅಪರಾಧ ನಡೆದಿದೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವೆಂಕಟೇಶ್ ನನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಘಟನೆಯು ಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕೌಟುಂಬಿಕ ಹಿಂಸಾಚಾರ ಮತ್ತು ಪತಿ ಅಥವಾ ಪತ್ನಿ ನಡುವಿನ ಮನಸ್ತಾಪಗಳು, ಅಪನಂಬಿಕೆಯಿಂದ ನಡೆಯುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:20 pm, Fri, 26 December 25

Source link

Exit mobile version