ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ – Kannada News | Indus Int’l School Adds Bio Toilets to Buses to Combat Bengaluru Traffic Woes

ಬೆಂಗಳೂರು, ಜ.7: ಬೆಂಗಳೂರಿನ ಟ್ರಾಫಿಕ್​ ಇಲ್ಲಿ (Bengaluru traffic solution) ಜನರಿಗೆ ಶಾಪವಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಹೇಳುವುದು ಟ್ರಾಫಿಕ್​​​​​​​​ ನಿರ್ವಹಣೆ ಬಗ್ಗೆ. ದಿನಕ್ಕೊಂದು ಬೆಂಗಳೂರು ಟ್ರಾಫಿಕ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಮಕ್ಕಳು ಕೂಡ ಒಳಗಾಗುತ್ತಿದ್ದಾರೆ, ಇದೀಗ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರ ಮಾಡಲು, ಹೊಸ ಯೋಜನೆಯನ್ನು ಶಾಲೆಯೊಂದು ಹಾಕಿಕೊಂಡಿದೆ. ಸರ್ಜಾಪುರ ರಸ್ತೆಯಲ್ಲಿರುವ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಒಂದು ಆಸಕ್ತಿದಾಯಕ ಆಲೋಚನೆಯೊಂದನ್ನು ಮಾಡಿದೆ. ಈ ಬಗ್ಗೆ ಟೈಮ್ಸ್​​​​ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ಬೆಂಗಳೂರಿನ ದೂರದ ನಗರಗಳಿಗೆ ಸಂಚಾರಿಸುವ ಎರಡು ಶಾಲಾ ಬಸ್​ಗಳಿಗೆ ಬಯೋಟಾಯ್ಲೆಟ್‌ ಅಳವಡಿಸಿದೆ. ಶಾಲೆ ಮತ್ತು ಮನೆಗೆ ಪ್ರಯಾಣಿಸುವಾಗ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ದೀರ್ಘ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಕಳೆಯುವುದರಿಂದ ಈ ಯೋಜನೆಗಳನ್ನು ತರಲಾಗಿದೆ.

ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ಸ್, ಬೆಂಗಳೂರಿನ ಒಳಗೆ ಇರುವ ದೂರದ ನಗರಗಳಿಗೆ ಅಥವಾ ಊರುಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ.  ಶಾಲೆಯಿಂದ ರಾಜಾಜಿನಗರ ಮತ್ತು ಯಶವಂತಪುರಕ್ಕೆ ಎರಡು ಗಂಟೆಗಳ ಕಾಲ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಈ ಸೌಲಭ್ಯಗಳನ್ನು ಮಾಡಲಾಗಿದೆ. ಇಂಡಸ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ (ಆಡಳಿತ) ವಿನೋತ್ ಕುಮಾರ್, ದೂರದ ಪ್ರಯಾಣ ಮಾಡುವಾಗ ವಿದ್ಯಾರ್ಥಿಗಳಿಗೆ ಇದು ಅಗತ್ಯವಾಗಿದೆ. ಅನೇಕ ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ಬಸ್‌ನಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಶೌಚಾಲಯ ಇಲ್ಲದಿದ್ದರೆ ಅಸ್ವಸ್ಥತೆ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಈ ಸಮಸ್ಯೆ ಹೊಗಲಾಡಿಸಲು ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: 1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ?

ಬಯೋಟಾಯ್ಲೆಟ್ ಬೆಲೆ ಎಷ್ಟು?

ಈ ಶಾಲೆಯೂ ಹೊಸ ಸೌಲಭ್ಯಕ್ಕಾಗಿ ಎರಡು ಬಸ್‌ಗೆ ಸುಮಾರು 5 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಇದಲ್ಲದೆ, ಇದು ಪ್ರಯೋಗ ಯಶಸ್ವಿಯಾದರೆ ಇತರ ಬಸ್‌ಗಳಿಗೂ ಈ ಸೌಲಭ್ಯವನ್ನು ತರುವ ಪ್ಲಾನ್​​ ಇದೆ ಎಂದು ಹೇಳಲಾಗಿದೆ. ಈ ಸೌಲಭ್ಯಗಳು ಭಾರತೀಯ ರೈಲ್ವೆಯಲ್ಲಿ ಮಾತ್ರ ಇದೆ. ಇದೀಗ ಇಂತಹ ಸೌಲಭ್ಯಗಳನ್ನು ಶಾಲೆ ಬಸ್​​​​​​​​ಗಳಲ್ಲಿ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಈ ಪ್ರಯತ್ನಕ್ಕೆ ಮಕ್ಕಳ ಪೋಷಕರು ಕೂಡ ಶ್ಲಾಘಿಸಿದ್ದಾರೆ. ಇದೊಂದು ಒಳ್ಳೆಯ ಚಿಂತನೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral News: ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕೀಟನಾಶಕ ಕಂಪನಿ – Kannada News | Viral News Why a Japanese Firm Has Honoured Insects With Annual Memorials for Decades

ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೋಡಿದ್ದೇವೆ, ಕೆಲವೊಮ್ಮೆ ತಾವು ಇಷ್ಟ ಪಟ್ಟು ಸಾಕಿರುವ ಪ್ರಾಣಿಗಳಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಆದರೆ ಕೀಟಗಳು ಸತ್ತರೆ ಅದಕ್ಯಾರಾದರೂ ಮೌನಾಚರಣೆ, ಶ್ರದ್ಧಾಂಜಲಿ ಸಲ್ಲಿಸುವುದನ್ನು ಕಂಡಿದ್ದೀರಾ. ಆದರೆ ಜಪಾನಿನಲ್ಲಿರುವ ಕೀಟನಶ ಕಂಪನಿಯೊಂದು ಪ್ರತಿ ವರ್ಷವೂ ಹೀಗೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ಕಳೆದ 40 ವರ್ಷಗಳಲ್ಲಿ ತಾವು ಕೊಂದಿರುವ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್ ಜಪಾನ್‌ನಲ್ಲಿ ಅತ್ಯುತ್ತಮ ಗೃಹ ಕೀಟನಾಶಕ ಕಂಪನಿಯಾಗಿದೆ. ಇದು ದಶಕಗಳ ಸಂಶೋಧನೆಯ ಮೂಲಕ ಈ ಖ್ಯಾತಿಯನ್ನು ಗಳಿಸಿದೆ. ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು, ಕಂಪನಿಯು ಅಕೋ ನಗರದ ಸಂಶೋಧನಾ ಸೌಲಭ್ಯದಲ್ಲಿ ವಿವಿಧ ಕೀಟ ಪ್ರಭೇದಗಳನ್ನು ಬಳಸುತ್ತದೆ.

ಮತ್ತು ಕೆಲವು ಕೀಟಗಳು ಸಂಶೋಧನಾ ಪ್ರಕ್ರಿಯೆಯಲ್ಲಿ ಸಾಯುತ್ತವೆ. ಅರ್ಥ್ ಕಾರ್ಪೊರೇಷನ್ ಕೀಟಗಳ ಸಾವುಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಅಕೋ ನಗರದ ಮೈಯೋಡೋಜಿಯಲ್ಲಿ ಈ ಕೀಟಗಳಿಗಾಗಿ ಸ್ಮರಣಾರ್ಥ ಸಮಾರಂಭವನ್ನು ಆಯೋಜಿಸುತ್ತದೆ. ಕಳೆದ ತಿಂಗಳು, 60 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ  ಸತ್ತ ಕೀಟಗಳ ಚಿತ್ರಗಳ ಮುಂದೆ ಪ್ರಾರ್ಥನೆಗಳನ್ನು ಸಲ್ಲಿಸಿರುವುದನ್ನು ಕಾಣಬಹುದು.

ಮತ್ತಷ್ಟು ಓದಿ: Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಅಲ್ಲಿ ಇರಿಸಲಾಗುತ್ತದೆ ಮತ್ತು ಜನರು ಅವುಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್‌ನ ಸಂಶೋಧನಾ ತಂಡ 1 ಮಿಲಿಯನ್ ಜಿರಳೆಗಳ್ನು ಮತ್ತು 100 ಮಿಲಿಯನ್​ಗಿಂತಲೂ ಹೆಚ್ಚು ಕೀಟಗಳನ್ನು ಸಂಶೋಧನೆಗಾಗಿ ಬಳಕೆ ಮಾಡಲಾಗುತ್ತದೆ. ಈ ಕಟಗಳು ಮನುಷ್ಯನಿಗಾಗಿ ತಮ್ಮ ಪ್ರಾಣವ್ನೇ ಬಲಿಕೊಡುತ್ತವೆ.

ಹೀಗಾಗಿ ಪ್ರತಿ ವರ್ಷವೂ ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸಿ ಸತ್ತ ಕೀಟಗಳಿಗೆ ಗೌರವ ಸೂಚಿಸಲಾಗುತ್ತದೆ.ಅರ್ಥ್ ಕಾರ್ಪೊರೇಷನ್ ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ನಡೆಸುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Railway Recruitment 2026: ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ 54 ಜೂನಿಯರ್ ಹುದ್ದೆಗಳಿಗೆ ನೇಮಕಾತಿ – Kannada News | RRC South Eastern Railway Sports Quota Recruitment 2025 26: 54 Vacancies for Athletes

ರೈಲ್ವೆ ನೇಮಕಾತಿ ಕೋಶ (RRC) 2025-26ನೇ ಸಾಲಿಗೆ ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಆಗ್ನೇಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಉದ್ಯೋಗಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯಡಿಯಲ್ಲಿ ಒಟ್ಟು 54 ಜೂನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿಗಳು ಜನವರಿ 10 ರಿಂದ ಪ್ರಾರಂಭವಾಗುತ್ತವೆ.

ಖಾಲಿ ಹುದ್ದೆಗಳ ವಿವರ:

  • ಗ್ರೂಪ್-ಸಿ ಹುದ್ದೆಗಳ ಸಂಖ್ಯೆ (ಹಂತ-4, ಹಂತ-5): 5
  • ಗ್ರೂಪ್-ಸಿ (ಮಟ್ಟ-2/3) ಹುದ್ದೆಗಳ ಸಂಖ್ಯೆ: 16
  • ಗ್ರೂಪ್-ಡಿ (ಲೆವೆಲ್-1) ಹುದ್ದೆಗಳ ಸಂಖ್ಯೆ: 33

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಹುದ್ದೆಯ ಪ್ರಕಾರ 10 ನೇ ತರಗತಿ, ಐಟಿಐ, ಇಂಟರ್, ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಧಿಸೂಚನೆಯ ಪ್ರಕಾರ ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಹಾಕಿ, ಈಜು, ವಾಟರ್ ಪೋಲೊ, ಟೇಬಲ್ ಟೆನಿಸ್, ಗಾಲ್ಫ್, ಚೆಸ್ ಮುಂತಾದ ಯಾವುದೇ ಕ್ರೀಡೆಗಳಲ್ಲಿ ವಿವಿಧ ಹಂತಗಳಲ್ಲಿ ಪದಕಗಳನ್ನು ಗೆದ್ದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 1, 2026 ರಂತೆ 18 ರಿಂದ 25 ವರ್ಷಗಳ ನಡುವೆ ಇರಬೇಕು.

ಇದನ್ನೂ ಓದಿ: ರೈಲ್ವೆಯಲ್ಲಿ 22 ಸಾವಿರ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ; ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಈ ಅರ್ಹತೆಗಳನ್ನು ಪೂರೈಸುವವರು ಫೆಬ್ರವರಿ 9, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆಗಳು, ಕ್ರೀಡಾ ಸಾಧನೆಗಳು, ಆಟದ ಕೌಶಲ್ಯಗಳು, ದೈಹಿಕ ಸಾಮರ್ಥ್ಯ ಮತ್ತು ತರಬೇತುದಾರರ ವೀಕ್ಷಣೆಯ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಮತ್ತು ಎಸ್‌ಸಿ, ಎಸ್‌ಟಿ, ಇಎಸ್‌ಎಂ, ದಿವ್ಯಾಂಗ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಇಬಿಸಿ ಅಭ್ಯರ್ಥಿಗಳಿಗೆ 250 ರೂ.

ಆಗ್ನೇಯ ರೈಲ್ವೆಯಲ್ಲಿನ ಉದ್ಯೋಗ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ – Kannada News | Ballari Banner Clash: DIG Vertika Katiyar Transferred, New SP Appointed

ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ

ಬೆಂಗಳೂರು, ಜನವರಿ 07: ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್​ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ವರ್ತಿಕಾರನ್ನು ಟ್ರಾನ್ಸ್​​ಫರ್​​ ಮಾಡಲಾಗಿದ್ದು, ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್ ಅವರನ್ನು ನೇಮಿಸಿಯೂ ಆದೇಶಿಸಲಾಗಿದೆ.

ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಆ ಬೆನ್ನಲ್ಲೇ ಸರ್ಕಾರ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ: ರೆಡ್ಡಿಗಳ ಸಂಘರ್ಷಕ್ಕೆ ಗಣಿ ನಾಡು ಉದ್ವಿಗ್ನ, ಕಾಂಗ್ರೆಸ್ ಕಾರ್ಯಕರ್ತ ಸಾವು; ಅಸಲಿಗೆ ಬಳ್ಳಾರಿಯಲ್ಲಿ ಆಗಿದ್ದೇನು?

ಅಮಾನತು ಬೆನ್ನಲ್ಲೇ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಎಸ್​ಪಿ ಪವನ್ ನೆಜ್ಜೂರ್ ಅವರ ತಂದೆ ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ವಿಪಕ್ಷ ಬಿಜೆಪಿ ರಾಜ್ಯ ಸಕರ್ಕರದ ವಿರುದ್ಧ ಮುಗಿಬಿದ್ದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳು ಸರಿಗಮಪ ಬಳಿಕ ಹೇಗಿದೆ ಶಿವಾನಿ ನವೀನ್ ಲೈಫ್? – Kannada News | Shivani Naveen Life Changed After Tamil Saregamapa Here are her Cute photos

ಶಿವಾನಿ ನವೀನ್ ಅವರು ಕಳೆದ ವರ್ಷ ತಮಿಳುನಾಡಿನಲ್ಲಿ ಮಿಂಚು ಹರಿಸಿದ್ದರು, ಇದಕ್ಕೆ ಕಾರಣ ಆಗಿದ್ದು ತಮಿಳಿನ ಸರಿಗಮಪ ಶೋ. ಅಲ್ಲಿ ಅವರು ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ಈಗ ಶಿವಾನಿ ಅವರು ವಿವಿಧ ಶೋಗಳನ್ನು ನೀಡುತ್ತಿದ್ದಾರೆ.

ಶಿವಾನಿ ಅವರು ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರಿಗೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದೆ. ಪ್ರತಿ ಹಂತದಲ್ಲೂ ಕಲಿಕೆ ಮಾಡುತ್ತಾ ಸಾಗುತ್ತಿದ್ದಾರೆ.

ತಮಿಳಿನ ಸರಿಗಮಪ ಸೀನಿಯರ್ಸ್ ಸೀಸನ್ 5’ರಲ್ಲಿ ಶಿವಾನಿ ಫಿನಾಲೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ ತಮ್ಮ ಗಾಯನದ ಮೂಲಕ ಕನ್ನಡ ಹಾಗೂ ತಮಿಳು ವೀಕ್ಷಕರ ಮನಗೆದ್ದಿದ್ದಾರೆ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ.

ಶಿವಾನಿ ನವೀನ್ ಅವರು ವಿವಿಧ ಕಡೆಗಳಲ್ಲಿ ಶೋಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಪಾಂಡಿಚೇರಿಗೆ ತೆರಳಿ ಶೋ ಕೊಟ್ಟಿದ್ದಾರೆ. ಈ ಮೂಲಕ ಬೇರೆ ಭಾಷೆ, ರಾಜ್ಯಗಿಂದಲೂ ಅವರಿಗೆ ಆಫರ್​​ಗಳು ಬರುತ್ತಿರುವುದು ಸ್ಪಷ್ಟವಾಗಿದೆ.

ಶಿವಾನಿ ನವೀನ್ ಮೂಲತಃ ಚಿಕ್ಕಮಗಳೂರಿನವರು. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅವರು ವಿವಿಧ ಆಲ್ಬಂಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿ ಎಂಬುದು ಅಭಿಮಾನಿಗಳ ಕೋರಿಕೆ,

Published On – 12:33 pm, Wed, 7 January 26

Source link

ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ – Kannada News | Srujan Lokesh Shruthi And Sadhu Kokila In Gicchi Gili Gili Junior Show

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಹಾಗೂ 18ರಂದು ಪ್ರಸಾರ ಕಾಣಲಿದೆ. ಈ ಶೋ ಮುಗಿದ ಬಳಿಕ ವೀಕೆಂಡ್​​ನಲ್ಲಿ ಪ್ರಸಾರ ಮಾಡೋಕೆ ಒಂದು ರಿಯಾಲಿಟಿ ಶೋ ಬೇಕಲ್ಲ. ಅದಕ್ಕೆ ಶೋ ಸಿದ್ಧವಾಗಿದೆ. ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಅದುವೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’. ಸೃಜನ್ ಲೋಕೇಶ್, ಸಾಧು ಕೋಕಿಲ ಹಾಗೂ ಶ್ರುತಿ ಶೋನ ನೇತೃತ್ವ ವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧ್ವಂಸಗೊಂಡಿದ್ದ ಸೋಮನಾಥ ದೇವಾಲಯವನ್ನು ಮತ್ತೆ ಕಟ್ಟುವುದು ನೆಹರುಗೆ ಇಷ್ಟವಿರಲಿಲ್ಲ: ಸುಧಾಂಶು ತ್ರಿವೇದಿ – Kannada News | Nehru Opposed Somnath Temple Reconstruction: Sudhanshu Trivedi Claims

ನವದೆಹಲಿ, ಜನವರಿ 07: ಸಾವಿರ ವರ್ಷಗಳ ಹಿಂದೆ ಮೊಹಮ್ಮದ್ ಘಜ್ನಿ ಗುಜರಾತ್​ನ ಸೋಮನಾಥ ದೇವಾಲಯ(Somnath Temple)ವನ್ನು ನೆಲಸಮಗೊಳಿಸಿದ್ದ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವೆಂದು ಪರಿಗಣಿಸಲಾಗಿರುವ ಸೋಮನಾಥ ದೇವಾಲಯವು ಭಾರತೀಯ ಸನಾತನ ಪರಂಪರೆಯ ಸಂಕೇತವಾಗಿದೆ. ಘಜ್ನಿಯಿಂದ ದೇವಾಲಯ ಧ್ವಂಸಗೊಂಡಿದ್ದ ಈ ಸೋಮನಾಥ ದೇವಾಲಯದ ಮರು ನಿರ್ಮಾಣ ಮಾಡುವುದು ಜವಾಹರ್​ಲಾಲ್ ನೆಹರು ಅವರಿಗೆ ಇಷ್ಟವಿರಲಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಸುಧಾಂಶು ತ್ರಿವೇದಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನವರಿ 11ರಂದು ಈ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಗತ್ಯವನ್ನು ಪ್ರಶ್ನಿಸಿ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಡಿ ಎಂದು ಪಂಡಿತ್ ನೆಹರು ಅವರು ಸಂಪುಟ ಸಚಿವರಿಗೆ ಮಾತ್ರವಲ್ಲದೆ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಉಪಾಧ್ಯಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೂ ಪತ್ರ ಬರೆದಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ದ್ವಿವೇದಿ ಬರೆದಿದ್ದಾರೆ.

ಆದರೆ ಸೋಮನಾಥ ದೇವಾಲಯದ ನಿರ್ಮಾಣದ ಬಗ್ಗೆ ದೂರು ನೀಡಿ, ಇದು ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದೆ ಎಂದು ಪಂಡಿತ್ ನೆಹರು ಎಲ್ಲಾ ಭಾರತೀಯ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದರು ಎಂಬುದು ಸತ್ಯ.ರಾಷ್ಟ್ರಪತಿ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಅವರು ಅತೃಪ್ತರಾಗಿದ್ದಾರೆ ಎಂದು ಅವರು ಬರೆದಿದ್ದಾರೆ.

ಸೋಮನಾಥ ಟ್ರಸ್ಟ್‌ಗೆ ಯಾವುದೇ ಸಹಾಯವನ್ನು ನೀಡಲು ಪಂಡಿತ್ ನೆಹರು ಸ್ಪಷ್ಟವಾಗಿ ನಿರಾಕರಿಸಿದ್ದರು, ಪವಿತ್ರೀಕರಣ ಸಮಾರಂಭಕ್ಕೆ ನದಿ ನೀರಿನ ವಿನಂತಿಗಳನ್ನು ಒಳಗೊಂಡಂತೆ ಭಾರತೀಯ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದರು.

ಮತ್ತಷ್ಟು ಓದಿ:ಏಷ್ಯಾದ ಅತಿದೊಡ್ಡ ಗಣಪತಿ ದೇವಾಲಯವಿದು; 56 ಅಡಿ ಎತ್ತರದ ಗಣೇಶನಿಗೆ ಇಲ್ಲಿ ವಿಶೇಷ ಪೂಜೆ

ಪಂಡಿತ್ ನೆಹರು ಅವರು ವಿದೇಶಾಂಗ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದರು, ಸೋಮನಾಥ ಟ್ರಸ್ಟ್‌ನಿಂದ ಪವಿತ್ರ ನದಿ ನೀರಿನ ಯಾವುದೇ ವಿನಂತಿಗಳನ್ನು ನಿರ್ಲಕ್ಷಿಸುವಂತೆ ರಾಯಭಾರ ಕಚೇರಿಗಳಿಗೆ ಸೂಚಿಸಿದರು.

ನೆಹರು ಆಗಿನ ಗೃಹ ಸಚಿವ ಸಿ. ರಾಜಗೋಪಾಲಾಚಾರಿಗೆ ಎರಡು ಪತ್ರಗಳನ್ನು ಬರೆದರು, ಸೋಮನಾಥ ದೇವಾಲಯದ ಉದ್ಘಾಟನೆಯಲ್ಲಿ ರಾಷ್ಟ್ರಪತಿ ಭಾಗವಹಿಸುವುದನ್ನು ವಿರೋಧಿಸಿದ್ದರು.
ಹಿಂದೆ, ಸೋಮನಾಥವನ್ನು ಮೊಹಮ್ಮದ್ ಘಜ್ನಿ ಮತ್ತು ಖಿಲ್ಜಿ ಲೂಟಿ ಮಾಡಿದ್ದರು, ಆದರೆ ಸ್ವತಂತ್ರ ಭಾರತದಲ್ಲಿ, ಪಂಡಿತ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು.

ಏಪ್ರಿಲ್ 21, 1951 ರಂದು, ಪಂಡಿತ್ ನೆಹರು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರನ್ನು ಪ್ರಿಯ ನವಾಬ್ಜಾದಾ ಎಂದು ಸಂಬೋಧಿಸಿ, ಸೋಮನಾಥ ದ್ವಾರಗಳ ಕಥೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆದರು ಎಂದು ತ್ರಿವೇದಿ ಬರೆದಿದ್ದಾರೆ.

ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ಸಮಾರಂಭದ ಬಗ್ಗೆ ಉತ್ಸಾಹ ತೋರಲಿಲ್ಲ. ಇದು ಭಾರತದ ಪ್ರತಿಷ್ಠೆಗೆ ಹಾನಿಕಾರಕ ಎಂದು ಕರೆದರೂ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೃಢವಾಗಿ ನಿಂತು ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದೂ ಅವರು ಉಲ್ಲೇಖಿಸಿದ್ದಾರೆ.

ಸೋಮನಾಥ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ
ಸೋಮನಾಥ ದೇವಾಲಯದಲ್ಲಿ ಜನವರಿ 8ರಿಂದ 11ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಪ್ರಧಾನಿ ಮೋದಿ ಜನವರಿ 11ರಂದು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯು ದೇಶದಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಲಪಡಿಸುತ್ತದೆ. ಸೋಮನಾಥ ದೇವಾಲಯದ ನಿರ್ಮಾಣ ಮತ್ತು ಅಭಿವೃದ್ಧಿ ಕೇವಲ ದೇವಾಲಯವನ್ನು ನಿರ್ಮಿಸುವ ವಿಷಯವಲ್ಲ, ಬದಲಾಗಿ ಲಕ್ಷಾಂತರ ಭಾರತೀಯರ ಭಾವನೆಗಳನ್ನು ಒಳಗೊಂಡ ವಿಷಯವಾಗಿದೆ.

ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ, ಐದು ರಾಜ್ಯಗಳು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಹತ್ವದ ಭೇಟಿ ಎಂದು ಪರಿಗಣಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಥಿಯೇಟರ್​​ನಲ್ಲಿ ಫ್ಲಾಪ್; ಒಟಿಟಿಯಲ್ಲಿ? ನೆಟ್​​ಫ್ಲಿಕ್​ಗೆ ಬರ್ತಿದೆ ‘ಅಖಂಡ 2’ – Kannada News | Akhanda 2 Netflix Release: Can Balayya’s Flop Film Find OTT Success

ಥಿಯೇಟರ್​​ನಲ್ಲಿ ಸಿನಿಮಾ ಹಿಟ್ ಆಗಿ, ಅದೇ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಇಷ್ಟ ಪಡದೇ ಇದ್ದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ ಥಿಯೇಟರ್​​​ನಲ್ಲಿ ನಿರ್ಮಾಪಕರಿಗೆ ನಷ್ಟ ಮಾಡಿದ ಕೆಲ ಚಿತ್ರಗಳು ಒಟಿಟಿಯಲ್ಲಿ ಜನರಿಂದ ಮೆಚ್ಚುಗೆ ಪಡೆದಿದ್ದೂ ಇದೆ. ಈಗ ತೆಲುಗಿನ ‘ಅಖಂಡ 2’ (Akhanda 2) ಒಟಿಟಿಗೆ ಕಾಲಿಡುತ್ತಿದೆ. ಇದರ ಭವಿಷ್ಯವನ್ನು ಒಟಿಟಿ ವೀಕ್ಷಕರು ನಿರ್ಧರಿಸಲಿದ್ದಾರೆ.

‘ಅಖಂಡ’ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರದಲ್ಲಿ ಬಾಲಯ್ಯ ನಟಿಸಿದ್ದರು. ಅದೇ ರೀತಿ 2025ರಲ್ಲಿ ‘ಅಖಂಡ 2’ ಚಿತ್ರವನ್ನು ತರಲಾಯಿತು. ಈ ಸಿನಮಾಗೆ ಬೋಯಪಾಟಿ ಶ್ರೀನು ನಿರ್ದೇಶನ ಇದೆ. ಈ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿಲ್ಲ. ಈ ಸಿನಿಮಾದಲ್ಲಿ ಬಾಲಯ್ಯ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಹೇಳಲಾಗಿದೆ. ಈ ಚಿತ್ರ ನಿರ್ಮಾಪಕರಿಗೆ ನಷ್ಟವನ್ನುಂಟು ಮಾಡಿದೆ ಎನ್ನಲಾಗಿದೆ.

ಈಗ ಸಿನಿಮಾ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಜನವರಿ 9ರಂದು ಸಿನಿಮಾ ಪ್ರಸಾರ ಆರಂಭಿಸಲಿದೆ. ಈ ಚಿತ್ರ ನೋಡಲು ಕೆಲವರು ಕಾದಿದ್ದಾರೆ. ಥಿಯೇಟರ್​​ನಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿ ಜನರು ಚಿತ್ರವನ್ನು ಕೈ ಹಿಡಿಯುತ್ತಾರಾ ಎಂಬ ಕುತೂಹಲ ಮೂಡಿದೆ. ಕನ್ನಡದಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ‘ಅಖಂಡ 2’ ಸಿನಿಮಾ ವೀಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದ ನಿರ್ದೇಶಕ ಬೋಯಪಾಟಿ ಶ್ರೀನು

ಬಾಲಯ್ಯ ಸಿನಿಮಾಗಳಲ್ಲಿ ಆ್ಯಕ್ಷನ್ ಭರ್ಜರಿಯಾಗೇ ಇರುತ್ತವೆ. ಅದರಲ್ಲೂ ಅವರ ಸಿನಿಮಾಗಳಲ್ಲಿ ಲಾಜಿಕ್​​​ಗಳನ್ನು ಮೂಟೆ ಕಟ್ಟಿ ಅಟ್ಟದ ಮೇಲೆ ಇಡಲಾಗುತ್ತದೆ. ‘ಅಖಂಡ 2’ ಚಿತ್ರದಲ್ಲೂ ಇದೇ ತಂತ್ರ ಮಾಡಲಾಗಿತ್ತು. ಈ ಕಾರಣದಿಂದಲೇ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಗ್ರಾಫಿಕ್ಸ್ ಕೂಡ ಕೆಲವು ಕಡೆಗಳಲ್ಲಿ ಕೈ ಕೊಟ್ಟಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಪಾನ್​​ನಿಂದ ಬಂದು ರಾಮ್ ಚರಣ್​​ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು? – Kannada News | Celebrity Chef Takamasa Osawa visited Ram Charan house cook Biriyani

ರಾಮ್ ಚರಣ್​ಗೂ (Ram Charan) ಜಪಾನಿಗೂ ಆತ್ಮೀಯ ಬಂಧವಿದೆ. ಅವರ ಸಿನಿಮಾಗಳಿಗೆ ಜಪಾನ್​​ನಲ್ಲಿ ಭಾರಿ ಬೇಡಿಕೆ ಇದೆ. ಜಪಾನಿನಲ್ಲಿ ರಾಮ್ ಚರಣ್​​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮೊದಲ ಮಗುವಾದಾಗಲೂ ಸಹ, ‘ಎಲ್ಲ ಮ್ಯಾಜಿಕ್​​ ಜಪಾನಿನಲ್ಲೇ ನಡೆಯಿತು’ ಎಂದು ತಮಾಷೆ ಸಹ ಮಾಡಿದ್ದರು ರಾಮ್ ಚರಣ್. ಇದೀಗ ರಾಮ್ ಚರಣ್ ಮನೆಗೆ ಬಿರಿಯಾನಿ ಮಾಡಲು ಜಪಾನಿನಿಂದ ಶೆಫ್ ಒಬ್ಬರು ಬಂದಿದ್ದಾರೆ.

ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು ಎಂಬ ಬಗ್ಗೆ ಇತಿಹಾಸಕಾರರಿಗೆ ಖಾತ್ರಿ ಇಲ್ಲ. ಆದರೆ ಬಿರಿಯಾನಿ ಪ್ರಚಲಿತದಲ್ಲಿರುವುದು ಭಾರತ ಮತ್ತು ಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹೆಚ್ಚು. ಆದರೆ ರಾಮ್ ಚರಣ್ ಯಾಕೆ ಜಪಾನಿನಿಂದ ಶೆಫ್ ಕರೆಸಿ ಬಿರಿಯಾನಿ ಮಾಡಿಸಿದ್ದಾರೆ?

ರಾಮ್ ಚರಣ್ ಮನೆಯಲ್ಲಿ ಜಪಾನಿನ ಶೆಫ್ ಬಿರಿಯಾನಿ ಮಾಡಿ ಮನೆಯವರಿಗೆ ಉಣಬಡಿಸುತ್ತಿರುವ ಫೋಟೊ, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಮ್ ಚರಣ್ ಮನೆಯಲ್ಲಿ ಬಿರಿಯಾನಿ ಮಾಡಿರುವ ಶೆಫ್​​ನ ಹೆಸರು ಟಕಮಾಸ ಓಸವಾ. ಇವರು ಜಪಾನಿನ ಸೆಲೆಬ್ರಿಟಿ ಶೆಫ್. ಇವರು ಬಿರಿಯಾನಿ ಮಾಡುವುದರಲ್ಲಿ ಅದರಲ್ಲೂ ಪಾಟ್ ಬಿರಿಯಾನಿ ಮಾಡುವುದರಲ್ಲಿ ನಿಷ್ಣಾತರು. ಟಕಮಾಸಾ ಒಸಾವಾ ಅವರನ್ನು ಬಿರಿಯಾನಿ ಒಸಾವ ಎಂದೇ ಕರೆಯುತ್ತಾರೆ ಅಭಿಮಾನಿಗಳು. ಮಿಷಲಿನ್ ಗೈಡ್ ಪ್ರಶಸ್ತಿಯನ್ನು ಸಹ ಒಸಾವಾ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?

ಒಸಾವ ಅವರು ಸೆಲೆಬ್ರಿಟಿ ಶೆಫ್. ಅವರು ಒಂದು ಬಾರಿಗೆ ಕೇವಲ 10 ಜನರಿಗೆ ಮಾತ್ರವೇ ಬಿರಿಯಾನಿ ಮಾಡುತ್ತಾರೆ. ಅದಕ್ಕೂ ಪ್ರೀ ಬುಕಿಂಗ್ ಮಾಡಿಕೊಳ್ಳಬೇಕು. ಅವರ ಕೈರುಚಿ ಸವಿಯಲು ಜನ ಸಾಲು ಗಟ್ಟಿರುತ್ತಾರೆ. ತಿಂಗಳುಗಟ್ಟಲೆ ಮುಂಗಡ ಬುಕಿಂಗ್ ಆಗಿರುತ್ತದೆಯಂತೆ. ಜಪಾನಿನಲ್ಲಿ ರಾಮ್ ಚರಣ್ ದೊಡ್ಡ ಸ್ಟಾರ್ ಆಗಿರುವ ಕಾರಣ ಒಸಾವಾ ಅವರು ಹೈದರಾಬಾದ್​​ನ ರಾಮ್ ಚರಣ್ ನಿವಾಸಕ್ಕೆ ಬಂದು ಬಿರಿಯಾನಿ ಮಾಡಿಕೊಟ್ಟಿದ್ದಾರೆ.

ಬಿರಿಯಾನಿ ಸವಿದ ರಾಮ್ ಚರಣ್, ಒಸಾವಾ ಕೈರುಚಿಯನ್ನು ಕೊಂಡಾಡಿದ್ದಾರೆ. ರಾಮ್ ಚರಣ್ ಮಾತ್ರವಲ್ಲದೆ ಪತ್ನಿ ಉಪಾಸನಾ, ತಾಯಿ ಸುರೇಖಾ ಇನ್ನೂ ಕೆಲವು ಕುಟುಂಬ ಸದಸ್ಯರು ಒಸಾವಾ ಮಾಡಿದ ಬಿರಿಯಾನಿ ಸವಿದು ಖುಷಿ ಪಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | SBI SCO Recruitment 2026: 1146 Specialist Officer Posts, Apply by Jan 10!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ತನ್ನ ಶಾಖೆಗಳ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 1146 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು ಹುದ್ದೆಗಳಲ್ಲಿ, 582 VP ವೆಲ್ತ್ (SRM) ಹುದ್ದೆಗಳು, 237 AVP ವೆಲ್ತ್ (RM) ಹುದ್ದೆಗಳು ಮತ್ತು 327 ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಾಗಿವೆ. ಅರ್ಹ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಸಂಬಂಧಿತ ಹುದ್ದೆಗಳ ಪ್ರಕಾರ ಸಂಬಂಧಿತ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಧಿಸೂಚನೆಯ ಪ್ರಕಾರ ಅವರು ಕೆಲಸದ ಅನುಭವವನ್ನು ಸಹ ಹೊಂದಿರಬೇಕು. ವಿವಿಧ ವಿಭಾಗಗಳಲ್ಲಿನ ಹುದ್ದೆಗಳ ಪ್ರಕಾರ ಅಭ್ಯರ್ಥಿಗಳ ವಯಸ್ಸಿನ ಮಿತಿ ಮೇ 1, 2025 ರಂತೆ 20 ರಿಂದ 42 ವರ್ಷಗಳ ನಡುವೆ ಇರಬೇಕು. ಒಬಿಸಿಗೆ ಮೂರು ವರ್ಷಗಳು, ಎಸ್‌ಸಿ, ಎಸ್‌ಟಿಗೆ ಐದು ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಹತ್ತು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಆಸಕ್ತ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ತಲಾ 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಕೆಳಗಿನ ಅಧಿಸೂಚನೆಯಲ್ಲಿ ಇನ್ನಷ್ಟು ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಿ.

SBIನ  ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version